Sri Siddheshwara Appaji Bhaktaru

Sri Siddheshwara Appaji Bhaktaru Sri Siddheshwar Appaji Bhaktaru page,
Created and maintained by Bhakts
To promote spirituality! OM

ಸತ್ಯಾಚರಣೆಋಷಿಗಳ ಹೃದಯ ಕರುಣಾಪೂರ್ಣ, ಪುರಾತನ ಮಕ್ಕಳು ವಿದ್ಯಾರ್ಜನೆಗಾಗಿ ಋಷಿಗಳ ಹತ್ತಿರ ಹೋದರು. ಅರಣ್ಯದ ಮಧ್ಯದ ಪ್ರಶಾಂತ ಪರಿಸರ, ಕುಟೀರವಾಸ. ...
26/05/2026

ಸತ್ಯಾಚರಣೆ

ಋಷಿಗಳ ಹೃದಯ ಕರುಣಾಪೂರ್ಣ, ಪುರಾತನ ಮಕ್ಕಳು ವಿದ್ಯಾರ್ಜನೆಗಾಗಿ ಋಷಿಗಳ ಹತ್ತಿರ ಹೋದರು. ಅರಣ್ಯದ ಮಧ್ಯದ ಪ್ರಶಾಂತ ಪರಿಸರ, ಕುಟೀರವಾಸ. ಹನ್ನೆರಡು ವರುಷ ಅವರು ಆ ಮಕ್ಕಳಿಗೆ ಆಶ್ರಮದಲ್ಲಿ ಒಲವಿನ ಆಶ್ರಯವನ್ನಿತ್ತರು. ಪ್ರಾಪಂಚಿಕ ಜೀವನಕ್ಕೆ ಬೇಕಾಗುವ ಎಲ್ಲ ವಿದ್ಯೆಗಳನ್ನು ಅವರಿಗೆ ನೀಡಿದರು. ಅವರ ವಿದ್ಯಾರ್ಜನೆ ಪೂರ್ಣವಾದ ನಂತರ ಅವರವರ ಗ್ರಾಮಗಳಿಗೆ ಅವರನ್ನು ವಿದ್ಯಾಧರರನ್ನಾಗಿ, ಜ್ಞಾನದ ಮಾಡಿ ಕಳುಹಿಸಿಕೊಟ್ಟರು. ಕಳುಹಿಸಿಕೊಡುವಾಗ ಮೂರ್ತಿಗಳಾದ ಋಷಿಗಳು ಸುಂದರ ನೀಡಿದರು! ಅದು ಅವರ ಬದುಕಿಗೆ ಬುನಾದಿ ಆಯಿತು. ಹೆಚ್ಚೇನು ಅದರಿಂದ ಅವರ ಬದುಕೇ ಸಂತಸದ ಹೊನಲಾಯಿತು. ಆ ಮಹರ್ಷಿಗಳು ನೀಡಿದ ಆ ಅಮರ ಸೊಗಸಾಗಿದೆ ನೋಡಿ.

ಸತ್ಯಂ ವದ| ಧರ್ಮಂ ಚರ| ಏಷ ಆದೇಶ।
ಏಷ ಉಪದೇಶಃ| ಏತದನುಶಾಸನಮ್| (ತೈ.ಆ.೧೧)

ಸತ್ಯವನ್ನೇ ನುಡಿಯಿರಿ. ಧರ್ಮದಂತೆಯೇ ನಡೆಯಿರಿ. ಇದುವೆ ಆದೇಶ (ಆಜ್ಞೆ) ಇದುವೆ ಉಪದೇಶ (ಬೊಧನೆ). ಇದುವೆ ಅನುಶಾಸನ (ಕಾಯ್ದೆ) ಸುಂದರ ಶಿಕ್ಷಣ!! ಇದಕ್ಕಿಂತ ಮಿಗಿಲಾದ ಶುಭಸಂದೇಶ ಇನ್ನಾವುದಿರಲು ಸಾಧ್ಯ? ಇವೆರಡು ನುಡಿಗಳನ್ನು ಪಾಲಿಸಿದರೆ ಸಾಕು, ನಮ್ಮ ಬದುಕು ಭವ್ಯ ದಿವ್ಯವಾಗುವುದರಲ್ಲಿ ಸಂದೇಹವಿಲ್ಲ. ಸತ್ಯದ ನುಡಿ, ಧರ್ಮದ ನಡೆ ಇಲ್ಲದ ಬದುಕು, ಅದೇತರ ಬದುಕು? ಎಷ್ಟು ಕಲಿತರೇನು, ಓದಿದರೇನು ಇವೆರಡನ್ನು ಕಲಿತರೆ ಸಾಕು, ಎಲ್ಲವನ್ನೂ ಕಲಿತಂತೆಯೇ ಅಲ್ಲವೆ?

“ಸತ್ಯಂ ಏಕಪದಂ ಬ್ರಹ್ಮ” ಸತ್ಯವು ಒಂದೇ ಆಗಿದೆ. ಅದುವೆ ಬ್ರಹ್ಮಪದವಾಗಿದೆ. ಈ ಜಗತ್ತಿನಲ್ಲಿ ಇರುವುದು ಸತ್ಯ ಒಂದೇ! ಅಸತ್ಯವು ಇಲ್ಲವೇ ಇಲ್ಲ. ಅದು ಇರುವಂತೆ ತೋರಿದೆ ಅಷ್ಟೇ! ಸತ್ಯದ ಎರಡು ಪ್ರಮುಖ ಲಕ್ಷಣಗಳೆಂದರೆ- ೧) ಅದ್ವಿತೀಯ ೨) ಅವಿನಾಶಿ! ಸಮಸ್ತ ಪ್ರಪಂಚದಲ್ಲಿರುವ ಪರಮಸತ್ಯ ಪರಮಾತ್ಮ ಒಂದೇ ಆಗಿದೆ. ಮರದಲ್ಲಿ ಅರಳಿದ ಹೂವು ಅದೆಷ್ಟು ಸುಂದರ, ಸುಭಗ! ಆದರೆ ಒಂದೆರಡು ದಿನಗಳಲ್ಲಿ ಅದು ಬಾಡಿ, ಮಣ್ಣಲ್ಲಿ ಕೂಡಿ ಮರೆಯಾಗಿ ಹೋಗುತ್ತದೆ. ಈ ಪ್ರಪಂಚವು ಒಂದು ದಿವ್ಯ ಪುಷ್ಪ. ಏನದರ ಸೊಬಗು, ಸೌಂದರ್ಯ! ಆದರೆ ಇದು ಕೂಡಾ ಹೂವಿನಂತೆ ಒಂದು ದಿನ ಮರೆಯಾಗಿ ಹೋಗುತ್ತದೆ. ಈ ಪ್ರಪಂಚವು ಒಂದು ತಾತ್ಕಾಲಿಕ ಸತ್ಯವೇ ವಿನಾ ಶಾಶ್ವತ ಸತ್ಯವಲ್ಲ.

ಪರಮಸತ್ಯವು ಹೆಣ್ಣಲ್ಲ, ಗಂಡಲ್ಲ, ಅದು ಸ್ವಾವಲಂಬಿ. ಅದು ಯಾರ ಮೇಲೆಯೂ ಅವಲಂಬಿಸಿಲ್ಲ. ಪ್ರಪಂಚದ ಜನರೆಲ್ಲ ಸೇರಿ ಸತ್ಯವೇ ಇಲ್ಲವೆಂದು ಕೂಗಾಡಿದರೂ ಅದು ಇಲ್ಲದಂತಾಗುವುದಿಲ್ಲ. ಹಾಗೆ ಕೂಗಾಡಿದವರೇ ಒಂದು ದಿನ ಇಲ್ಲದಂತಾಗಿ ಹೋಗುತ್ತಾರಷ್ಟೇ! ಆಕಾಶದಲ್ಲಿ ತೋರಿದ ಮೇಘಗಳೆಲ್ಲವೂ ಮರೆಯಾಗಿ ಹೋಗುತ್ತವೆ. ಆಕಾಶ ಮಾತ್ರ ಎಲ್ಲಿಯೂ ಹೋಗುವುದಿಲ್ಲ. ಅದು ಸ್ಥಿರವಾಗಿರುತ್ತದೆ. ಆಕಾಶದಂತೆ ಅವಿನಾಶಿಯಾದುದೇ ಪರಮಸತ್ಯ ಪರಮಾತ್ಮ ಮೇಘದಂತೆ ಅಸ್ಥಿರವಾದುದುದೇ ಈ ಪ್ರಪಂಚ! ಆ ಪರಮಸತ್ಯವನ್ನು ಪ್ರೀತಿಸಿ, ಅರಿತು, ಆಚರಿಸುವುದೇ ಧರ್ಮವಾಗಿದೆ.

ನಮ್ಮ ಅನುಕೂಲಕ್ಕಾಗಿ ವೈಶ್ವಕಸತ್ಯ, ವಾಚಿಕಸತ್ಯ ಎಂದು ಎರಡು ರೀತಿಯಲ್ಲಿ ಹೇಳಬಹುದು. ವೈಶ್ವಿಕಸತ್ಯ ಶಿವನನ್ನು ಅರಿತು ಅನುಭವಿಸಿ ಆನಂದಿಸುವುದು. ವಾಚಿಕ ಸತ್ಯ ಅಥವಾ ವ್ಯಾವಹಾರಿಕ ಸತ್ಯವನ್ನು ದೈನಂದಿನ ಜೀವನದಲ್ಲಿ ನುಡಿದು, ನಡೆಯುವುದು. ನಮ್ಮ ಪ್ರಪಂಚ ಅಥವಾ ಬದುಕು ಸತ್ಯದ ಮೇಲೆ ನಿಂತಿದೆ ವಿನಾ ಅಸತ್ಯದ ಮೇಲೆ ಸುಳ್ಳಿನ ಮೇಲೆ ನಿಂತಿಲ್ಲ. ನಾಳೆ ಬರುತ್ತೇನೆ ಎಂದು ಹೇಳಿ ಹೋದ ಸೂರ್ಯನು ಬರದಿದ್ದರೆ, ಗಾಳಿ ಬೀಸದಿದ್ದರೆ ಮಳೆಯಾಗದಿದ್ದರೆ ಜಗತ್ತು ನಡೆಯುವುದಾದರೂ ಹೇಗೆ? ನೀರು ಹನಿಸಿದರೆ ಮಾತ್ರ ಮರವು ಹೂವು, ಕಾಯಿ, ಹಣ್ಣು ಕೊಡುತ್ತದೆ. ಹಸುವಿಗೆ ಅಥವಾ ಎಮ್ಮೆಗೆ ನೀರು, ಮೇವು ಸರಿಯಾಗಿ ಕೊಟ್ಟರೆ ಮಾತ್ರ ಅವು ಹಾಲನ್ನು ಕೊಡುತ್ತವೆ. ಅಲ್ಪ-ಸ್ವಲ್ಪ ನೀರು, ಮೇವು ಕೊಟ್ಟು ಬಹಳಷ್ಟು ಕೊಟ್ಟೆ ಎಂದು ಹೇಳಿ ನಾವು ಜನರಿಗೆ ಮೋಸ ಮಾಡಬಹುದು. ಆದರೆ ಆ ಪ್ರಾಣಿಗಳು ಮಾತ್ರ ನಾವು ಕೊಟ್ಟ ಆಹಾರಕ್ಕೆ ತಕ್ಕಂತೆ ಹಾಲು ಕೊಡುತ್ತವೆ ವಿನಾ ಅದರಲ್ಲಿ ಹೆಚ್ಚು ಕಡಿಮೆ ಎಂದೂ ಮಾಡುವುದಿಲ್ಲ. ಆ ಮೂಕ ಮುಗ್ಧ ಪಶುಗಳಲ್ಲಿರುವ ಪ್ರಾಮಾಣಿಕತೆ ಸತ್ಯಾಚರಣೆ ಮನುಷ್ಯನಲ್ಲಿ ಇಲ್ಲದಿದ್ದರೆ ಹೇಗೆ? ಈ ನೆಲ, ಜಲ, ಗಾಳಿ ಬೆಳಕು, ಪಶು ಪಕ್ಷಿ ಗಿಡ-ಮರ ಸಮಸ್ತ ಸೃಷ್ಟಿಯು ಸನ್ಮಾರ್ಗದಲ್ಲಿ ನಡೆದಿದೆ ಎಂದೇ ನಾವು ಬದುಕಿದ್ದೇವೆ, ಇಲ್ಲದಿದ್ದರೆ ಆ ದೇವರೇ ಗತಿ!!

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್|
ಸತ್ಯಮಪಿ ಅಪ್ರಿಯಂ ನ ಬ್ರೂಯಾತ್||

ನಾವೆಲ್ಲರೂ ಸತ್ಯವನ್ನೇ ಹೇಳಬೇಕು. ಆದರೆ ಅದನ್ನು ಸವಿಯಾಗಿ ಹೇಳಬೇಕು. ಸತ್ಯವೇ ಆಗಿದ್ದರೂ ಸವಿಯಾಗಿರದಿದ್ದರೆ, ಕಹಿಯಾಗಿದ್ದರೆ ಹೇಳಬಾರದು. ಸತ್ಯವನ್ನೇ ಹೇಳುತ್ತೇವೆಂದು ನಮಗೆ ಗೊತ್ತಿರುವುದನ್ನೆಲ್ಲ ಹೇಳುತ್ತ ಹೋಗುವುದು ಸಮಂಜಸವಾಗಲಾರದು. 'ಸತ್ಯಾನ್ನಾಸ್ತಿ ಪರೋಧರ್ಮಃ' ಸತ್ಯಕ್ಕಿಂತ ಶ್ರೇಷ್ಠವಾದ ಧರ್ಮವೇ ಇನ್ನೊಂದಿಲ್ಲ. 'ಸತ್ತೇ ಸರ್ವಂ ಪ್ರತಿಷ್ಠಿತಂ' ಸತ್ಯದ ಮೇಲೆಯೇ ಎಲ್ಲವೂ ನಿಂತಿದೆ. ಆದುದರಿಂದ ನಾವು ಸತ್ಯವನ್ನೇ ಗೌರವಿಸಬೇಕು, ಆರಾಧಿಸಬೇಕು, ನುಡಿಯಬೇಕು, ನಡೆಯಬೇಕು. ನಮ್ಮ ತನು, ಮನ, ಬುದ್ಧಿ, ಭಾವ ಸರ್ವಾಂಗಗಳಲ್ಲಿ ಸತ್ಯವೇ ತುಂಬಿಕೊಳ್ಳಬೇಕು. ಅದು ಸತ್ಯಾಚರಣೆ. ಈ ಜಗತ್ತನ್ನು ಶರಣರು ಸಂತರು ಸತ್ಯವನ್ನು ಹೃದಯಾರೆ ಪ್ರೀತಿಸುತ್ತಾರೆ. ಪ್ರಾಪಂಚಿಕ ವಿಷಯ ವಸ್ತುಗಳ ಮೋಹ ಹೆಚ್ಚಾದಂತೆ, ಪರಮಸತ್ಯ ಪರಮಾತ್ಮನ ಮೇಲಿನ ಪ್ರೀತಿಯು ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಮೋಹಕ ಪ್ರಪಂಚದ ಆಕರ್ಷಣೆಗೆ ಒಳಗಾಗಿ ಅನೇಕರು ಅಸತ್ಯದ ಆರಾಧಕರೇ ಆಗಿದ್ದಾರೆ. ಸತ್ಯವನ್ನು ಮನಸಾರೆ ಪ್ರೀತಿಸುವ ಸತ್ಯಾರಾಧಕರು ದೊರೆಯುವುದು ತೀರಾ ಕಡಿಮೆ ಅಥವಾ ದೊರೆಯುವುದಿಲ್ಲವೆಂದು ಹೇಳಿದರೂ ನಡೆದೀತು.

ಒಂದು ಊರಿನಲ್ಲಿ ಓರ್ವ ಯುವಕನು ಸತ್ಯದೇವತೆಯನ್ನು ಹುಡುಕುತ್ತಾ ಹೊರಟ. ಪ್ರಪಂಚದ ತುಂಬಾ ಹುಡುಕಿದರೂ ಎಲ್ಲಿಯೂ ಸತ್ಯದೇವತೆಯು ಕಾಣಲಿಲ್ಲ. ಅರಣ್ಯದಲ್ಲಿದ್ದರೂ ಇರಬಹುದೆಂದು ಅಲ್ಲಿಗೆ ಹೋದ. ಅಲ್ಲಿ ಒಂದು ಶುಭ್ರವಾದ ಹಾಲುಗಲ್ಲಿನ ಮೂರ್ತಿ ಕಂಡಿತು. ಆಗ ಅವರಿಬ್ಬರ ಮಧ್ಯದಲ್ಲಿ ಸಂಭಾಷಣೆ ನಡೆಯಿತು.

ಯುವಕ - ಯಾರು ನೀನು?

ಮೂರ್ತಿ - ನಾನು ಸತ್ಯದೇವತೆ.

ಯುವಕ - ಊರಿನಲ್ಲಿರುವುದನ್ನು ಬಿಟ್ಟು ಅರಣ್ಯದಲ್ಲಿ ಏಕೆ ಇರುವಿ?

ಮೂರ್ತಿ - ಊರಿನಲ್ಲಿರಲು ಯಾರೂ ನನಗೆ ಅವಕಾಶ ಮಾಡಿಕೊಡಲಿಲ್ಲ ಅದಕ್ಕೆ.

ಯುವಕ - ಹಾಗೇನಿಲ್ಲ 'ಸತ್ಯಕ್ಕೆ ಸಾವಿಲ್ಲ, ಸತ್ಯವೇ ಶ್ರೇಷ್ಠ' ಎಂದು ಹೇಳಿ ಎಲ್ಲರೂ ನಿನ್ನನ್ನೇ ನಿತ್ಯ ಸ್ತುತಿಸುತ್ತಾರೆ, ಸ್ಮರಿಸುತ್ತಾರೆ.

ಮೂರ್ತಿ - ಅದೆಲ್ಲ ಬರೀ ಬಾಯಿಮಾತು. ವಾಸ್ತವದಲ್ಲಿ ಯಾರೂ ನನ್ನನ್ನು ಪ್ರೀತಿಸುವುದಿಲ್ಲ.

ಯುವಕ - ಹಾಗೇನಿಲ್ಲ, ನೀನು ಊರಿಗೆ ಬರಲು ಒಪ್ಪಿದರೆ ನಾನು ಈಗಲೇ ಜನರಿಗೆ ತಿಳಿಸಿ ಬರುತ್ತೇನೆ.

ಮೂರ್ತಿ - ಅವಶ್ಯವಾಗಿ ತಿಳಿಸಿ ಬಾ. ನಾನು ಈಗಲೇ ಬರುತ್ತೇನೆ.

ಊರಲ್ಲಿ ಹೋಗಿ ಯುವಕನು ಜನರಿಗೆ ಕೇಳಿದರೆ “ನಿಜವಾಗಿಯೂ ಸತ್ಯವೇ ಸರ್ವಶ್ರೇಷ್ಠವಾದುದು, ಆದರೆ ಸತ್ಯವನ್ನು ಹೇಳುವುದರಿಂದ ನಮಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ಸತ್ಯದೇವತೆ ಬರಲಿ ಆದರೆ ನಮ್ಮೂರಲ್ಲಿರುವುದು ಬೇಡ, ಬೇರೆಯವರ ಊರಲ್ಲಿರುವುದಾದರೆ ಇರಲಿ!” ಎಂದು ಎಲ್ಲರೂ ಹೇಳಿದರು. ನಿರುಪಾಯನಾದ ಯುವಕನು ಮತ್ತೆ ಅರಣ್ಯಕ್ಕೆ ಹೋಗಿ ನಡೆದುದನೆಲ್ಲ ಸತ್ಯದೇವತೆಗೆ ಹೇಳಿದ. “ಈಗಲಾದರೂ ತಿಳಿಯಿತೆ ಈ ಜಗತ್ತು ಹೇಗಿದೆ ಎಂದು? ಪುಣ್ಯಕ್ಕೆ ನೀನೊಬ್ಬನಾದರೂ ನನ್ನ ಹುಡುಕಿಕೊಂಡು ಬಂದಿರುವೆಯಲ್ಲಾ ಸಾಕು ನನ್ನ ಜನ್ಮ ಸಾರ್ಥಕವಾಯಿತು!!” ಎಂದು ಸತ್ಯದೇವತೆ ಹೇಳಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!

ಅಮರ, ಅವಿನಾಶಿ, ಅದ್ವಿತೀಯ ಆಗಿರುವ ಈ ಪರಮಸತ್ಯ ಪರಮಾತ್ಮನನ್ನು ನಾವು ಹೃದಯಾರೆ ಪ್ರೀತಿಸಬೇಕು. ಆಗ ನಮ್ಮ ಜೀವನದಲ್ಲಿ ಪರಮಶಾಂತಿ ಪರಮಾನಂದವು ತುಂಬಿಕೊಳ್ಳುತ್ತದೆ! ಜೀವನವು ಸಾರ್ಥಕವೆನಿಸುತ್ತದೆ, ಇದುವೇ ಸತ್ಯಾಚರಣೆ!

ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು

ಪುಸ್ತಕ: ಸದಾಚಾರ

ಸಂಪಾದನೆ: ಡಾ. ಶ್ರದ್ಧಾನಂದ ಸ್ವಾಮಿಗಳು

©ಜ್ಞಾನಯೋಗ ಫೌಂಡೇಶನ್‌, ವಿಜಯಪುರ

To Donate: http://jnanayogashrama.org/mdsmall/donate.php

To buy book: http://jnanayogashrama.org/mdsmall/viewbooks.php?param=33

೧೦. ಧರ್ಮಜೀವನಈ ಜಗತ್ತು ಬಿಟ್ಟು ನಮ್ಮ ಜೀವನವಿಲ್ಲ. ಜಗತ್ತು ಬೆಳೆದರೆ ನಾವು ಬೆಳೆಯುತ್ತೇವೆ, ನಾವು ಬೆಳೆದರೆ ಜಗತ್ತು ಬೆಳೆಯುತ್ತದೆ. ಈ ಜಗತ್ತಿನ...
18/05/2026

೧೦. ಧರ್ಮಜೀವನ

ಈ ಜಗತ್ತು ಬಿಟ್ಟು ನಮ್ಮ ಜೀವನವಿಲ್ಲ. ಜಗತ್ತು ಬೆಳೆದರೆ ನಾವು ಬೆಳೆಯುತ್ತೇವೆ, ನಾವು ಬೆಳೆದರೆ ಜಗತ್ತು ಬೆಳೆಯುತ್ತದೆ. ಈ ಜಗತ್ತಿನೊಂದಿಗೆಯೇ ನಾವು ಬಾಳಿ-ಬೆಳೆಯಬೇಕು. ಈ ಜಗತ್ತಿನಲ್ಲಿರುವ ಪಶು-ಪಕ್ಷಿ ಜನ-ಮನ, ಸಕಲ ಜೀವರಾಶಿಯ ಕಲ್ಯಾಣ ನಾವು ಬಯಸಬೇಕು. ಅದು ನಮ್ಮ ಕಲ್ಯಾಣ ಬಯಸಬೇಕು. ಇದುವೆ ಧರ್ಮಜೀವನ ಆ ಕುರಿತು ಗೀತೆಯಲ್ಲಿ ಒಂದು ಸುಂದರ ಶ್ಲೋಕ

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ | ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪೃಥ
- ಗೀತಾ ೩(೧೧)

ದೇವತೆಗಳನ್ನು ನೀವು ಸಂತೋಷಪಡಿಸಿರಿ. ದೇವತೆಗಳು ನಿಮ್ಮನ್ನು ಸಂತೋಷ ಪಡಿಸಲಿ. ಪರಸ್ಪರರನ್ನು ತೃಪ್ತಿಪಡಿಸಿ ಪರಮಶ್ರೇಯಸ್ಸನ್ನು ಪಡೆಯಿರಿ. ನಾವು ಇತರರಿಗೆ ಒಳ್ಳೆಯದನ್ನು ಬಯಸಬೇಕು. ಇತರರು ನಮಗೆ ಒಳ್ಳೆಯದನ್ನು ಬಯಸಬೇಕು. ಹೀಗೆ ಪರಸ್ಪರರು ಪ್ರೀತಿಯಿಂದಿರುವುದು, ಒಬ್ಬರಿಗೊಬ್ಬರು ಒಳ್ಳೆಯದನ್ನು ಮಾಡುವುದೇ ನಿಜ ಧರ್ಮ.

ಫ್ರಾನ್ಸ್ ದೇಶದಲ್ಲಿ ಒಬ್ಬ ದನಗಾಯುವ ಮನುಷ್ಯ, ಪರಿಸರಪ್ರೇಮಿ. ಅರಣ್ಯಕ್ಕೆ ಹೋಗುವಾಗ ಕೈಯಲ್ಲಿ ಗುದ್ದಲಿ, ಸಲಿಕೆ ಕೆಲವು ಸಸಿಗಳನ್ನು ಒಯ್ಯುತ್ತಿದ್ದ. ದನಗಳ ಕಾಯುತ್ತಲೇ ಪ್ರತಿ ದಿನವೂ ಸಸಿಗಳನ್ನು ನೆಡುತ್ತಿದ್ದ. ಹತ್ತಾರು ವರುಷಗಳಲ್ಲಿ ಅರಣ್ಯಕ್ಕೆ ಅರಣ್ಯವೇ ನಂದನವನವಾಗಿತ್ತು. ಇದು ಸರಕಾರಿ ಜಮೀನು ನೀನೇಕೆ ಮರಗಳನ್ನು ಬೆಳೆಸಿದೆ ?' ಎಂದು ಫ್ರಾನ್ಸ್ ದೇಶದ ಸರಕಾರ ಕೇಳಿತು. ಆ ದನಗಾಯಿ ಹೇಳಿದ 'ಈ ಮರಗಳನ್ನು ನಾನು ಬೆಳೆಸಿದ್ದು ದೇಶಕ್ಕಾಗಿಯೇ, ವಿನಾ, ನನಗಾಗಿ ಅಲ್ಲ' ಈ ಮಾತನ್ನು ಕೇಳಿದ ಫ್ರಾನ್ಸ್ ದೇಶದ ಸರಕಾರಕ್ಕೆ ಆಶ್ಚರ್ಯವೇ ಆಶ್ಚರ್ಯ ! ಇಂದಿಗೂ ಫ್ರಾನ್ಸ್ ದೇಶವು ಆ ದನಗಾಯಿಯನ್ನು 'ಮರದ ಮಿತ್ರ' ಎಂದು ಕೃತಜ್ಞತೆಯಿಂದ ನೆನೆಯುತ್ತದೆ.

ಸತ್ಕಾರ್ಯಗಳನ್ನು ಮಾಡುವ ಮೂಲಕ ನಾವು ಈ ಜಗತ್ತಿಗೆ ದೈವೀಶಕ್ತಿಯನ್ನು ಇಳಿಸಬೇಕು' ಅದರಿಂದ ನಮ್ಮ ಜೀವನವು ದಿವ್ಯ ಜೀವನ ವಾಗುತ್ತದೆ ಎಂದು ಮಹರ್ಷಿ ಅರವಿಂದರು ಎನ್ನುತ್ತಾರೆ. ಅವರು ನಾವು ಬದುಕಿರುವ ಈ ಜಗತ್ತೆಲ್ಲವೂ ದೈವೀಮಯವಾಗಿದೆ ಎಂದರು. ಅಕ್ಕಮಹಾದೇವಿ ಯವರು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ. 'ವನವೆಲ್ಲ ನೀವೆ, ವನದೊಳಗಣ ದೇವತರುವೆಲ್ಲ ನೀವೆ ತರುವಿನೊಳಗಾಡುವ ಖಗಮೃಗವೆಲ್ಲ ನೀವೆ ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರಾ', ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ, ಆಚಾರ್ಯದೇವೋ ಭವ ಎಂದು ನಮ್ಮ ಋಷಿಮುನಿಗಳು ತಾಯಿ-ತಂದೆ, ಗುರು-ಹಿರಿಯರು, ಅತಿಥಿ ಅಭ್ಯಾಗತರು ಎಲ್ಲರಲ್ಲಿ ದೇವರನ್ನು ಕಂಡರು, ಕಂಡರಸಿದರು.

ಅಶುತೋಷ ಮುಖರ್ಜಿಯವರು ಉಚ್ಚನ್ಯಾಯಲಯದ ನ್ಯಾಯಾಧೀಶ ರಾಗಿದ್ದರು. ಅದು, ಬ್ರಿಟಿಷರು ಈ ದೇಶವನ್ನು ಆಳುತ್ತಿದ್ದ ಕಾಲ. ಮುಖರ್ಜಿ ಯವರ ವಿದ್ವತ್ತನ್ನು ಮೆಚ್ಚಿಕೊಂಡಿದ್ದ ಬ್ರಿಟಿಷ್ ಗವರ್ನರ್ ಜನರಲ್ ಅವರು ಮುಖರ್ಜಿಯವರನ್ನು ಇಂಗ್ಲೆಂಡ ದೇಶಕ್ಕೆ ಬರಬೇಕೆಂದು ಆಮಂತ್ರಿಸಿದರು. ಆಗ ಮುಖರ್ಜಿಯವರು “ನಮ್ಮ ತಾಯಿಗೆ ಕೇಳಿ ಹೇಳುತ್ತೇನೆ'', ಎಂದರು. ಗವರ್ನರ ಹೇಳಿದರು ಇದು ನಮ್ಮ ಸರಕಾರದ ಆಜ್ಞೆ' ಮುಖರ್ಜಿ ಹೇಳಿದರು “ನಮ್ಮ ತಾಯಿಯ ಆಜ್ಞೆಗಿಂತ ದೊಡ್ಡ ಆಜ್ಞೆ ಇನ್ನೊಂದಿಲ್ಲ! ನನಗೆ ಹಣಕ್ಕಿಂತಲೂ ತಾಯಿಯ ಹರಕೆ ಮುಖ್ಯ !' ಮುಖರ್ಜಿಯವರ ಮಾತೃಭಕ್ತಿಯನ್ನು ಕಂಡು ಬ್ರಿಟಿಷ್ ಅಧಿಕಾರಿಗೆ ಆಶ್ಚರ್ಯವೂ ಆಗಿತ್ತು, ಆನಂದವೂ ಆಗಿತ್ತು!!

ಬಸವಣ್ಣನವರು ಕೂಡ 'ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ! ಎಂದು ಎಲ್ಲರನ್ನೂ ಗೌರವಿಸಿದರು. ಒಂದು ಮನೆಯನ್ನು ಕಟ್ಟಲು ದೊಡ್ಡ ಕಲ್ಲುಗಳೂ ಬೇಕು ಸಣ್ಣ ಚೀಪುಗಳೂ ಬೇಕು. ಹಾಗೆ ನೋಡಿದರೆ ದೊಡ್ಡ ಕಲ್ಲುಗಳು ತಮ್ಮ ಸ್ಥಾನದಲ್ಲಿ ತಾವಿರಬೇಕಾದರೆ ಸಣ್ಣ ಕಲ್ಲುಗಳೇ ಕಾರಣ. ಈ ದೇಶವನ್ನು ಬೆಳೆಸುವುದಕ್ಕೆ ಅಥವಾ ನಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ದೊಡ್ಡವರು, ಸಣ್ಣವರು ಎಲ್ಲರೂ ಬೇಕು. ನಮ್ಮ ಬದುಕಿನ ಅಂಗಳದಲ್ಲಿ ಬರುವವರನ್ನೆಲ್ಲ ಗೌರವಾದರದಿಂದ ಕಾಣುವುದು ನಮ್ಮ ಕರ್ತವ್ಯ.

ಒಬ್ಬ ದಾರಿಕಾರ ತನ್ನ ಊರಿಗೆ ನಡೆದು ಹೊರಟಿದ್ದ. ಎಪ್ಪತ್ತರ ವಯಸ್ಸು. ಹೊತ್ತು ಮುಳುಗಿ ಕತ್ತಲಾಯಿತು. ಇನ್ನು ಊರುತಲುಪುವುದಾಗುವುದಿಲ್ಲ, ಪಕ್ಕದ ಹಳ್ಳಿಯಲ್ಲಿದ್ದು ಬೆಳಿಗ್ಗೆ ಹೋಗುವದೆಂದು ಅಲ್ಲಿಗೆ ಹೋದ. ಎಲ್ಲ ಮನೆಗಳ ಬಾಗಿಲು ಮುಚ್ಚಿದ್ದವು. ಒಂದು ಮನೆಯಲ್ಲಿ ದೀಪ ಉರಿಯುತ್ತಿತ್ತು. ಈತ ಬಾಗಿಲು ತಟ್ಟಿದ. ಒಳಗಿದ್ದ ಧರ್ಮವಂತ ಹಿರಿಯನು ಬಾಗಿಲು ತೆರೆದು ಈತನನ್ನು ಬರಮಾಡಿಕೊಂಡ. ಕೈ ಕಾಲಿಗೆ ನೀರು ಕೊಟ್ಟು ಊಟಕ್ಕೆ ನೀಡಿದ. ಈತ ತಟ್ಟೆಗೆ ಕೈ ಹಾಕಿದ. ಅಷ್ಟರಲ್ಲಿ ಆ ಮನೆಯ ಹಿರಿಯ ಹೇಳಿದ ''ನಮ್ಮದು ಧಾರ್ಮಿಕ ಮನೆತನ, ದೇವರ ಹೆಸರು ತೆಗೆದುಕೊಂಡು ಊಟ ಮಾಡಿರಿ” ದಾರಿಕಾರ ಹೇಳಿದ. ಒಂದು ತುತ್ತು ಅನ್ನಕ್ಕಾಗಿ ದೆವರನ್ನು ನಾನು ನೆನೆಯಲಾರೆ'' ಹಾಗಾದರೆ ಈ ಮನೆಯಲ್ಲಿ ನಿನಗೆ ಊಟವಿಲ್ಲ'' ಎಂದು ಆ ಮನೆಯವನು ಈತನನ್ನು ಹೊರಗೆ ಹಾಕಿದ. ಆ ದಿನ ರಾತ್ರಿ ಆ ಮನೆಯವನ ಕನಸಿನಲ್ಲಿ ದೇವರು ಬಂದು ಹೇಳಿದ “ನಾನು ಎಪ್ಪತ್ತು ವರ್ಷಗಳಿಂದ ಅವನಿಗೆ ಅನ್ನ ಆಶ್ರಯ ನೀಡಿದ್ದೇನೆ. ಒಂದು ದಿನ ಅವನಿಗೆ ಅನ್ನ ಆಶ್ರಯ ಕೊಡಲು ನಿನ್ನಿಂದಾಗಲಿಲ್ಲವೇ ? ಆ ಮನೆಯವನು ತನ್ನ ತಪ್ಪಿನ ಕೇಳಿದ. ಅರಿವಾಗಿ ದೇವರಲ್ಲಿ ಕ್ಷಮೆ

ದೇವನ ಸ್ಮರಣೆ, ನಿಗರ್ಸದ ಪೋಷಣೆ, ತಾಯಿತಂದೆಯರ ಸೇವೆ, ಅತಿಥಿಸತ್ಕಾರ, ಮೂಕ ಮುಗ್ಧ ಪಶು ಪಕ್ಷಿಗಳಲ್ಲಿ ದಯೆ ಹೀಗೆ ನಾನಾ ರೀತಿಯಲ್ಲಿ ನಾವು ನಿತ್ಯವೂ ಸತ್ಕಾರ್ಯಗಳನ್ನು ಮಾಡಬಹುದು. ಬಡಮಕ್ಕಳಿಗೆ ಅನ್ನ ಅರಿವೆಯನಿತ್ತಾಗ ನಾವು ಅವರ ಮುಖ ಕಮಲದಲ್ಲಿ ದೈವೀ ಬೆಳಗನ್ನೇ ಕಾಣಬಹುದು! ಹೀಗೆ ಆಯುಷ್ಯದ ಉದ್ದಕ್ಕೂ ನಾವು ಸತ್ಕಾರ್ಯಗಳನ್ನು ಮಾಡುತ್ತಿರಬೇಕು ಇದುವೇ ಧರ್ಮ ಜೀವನ.

ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು

ಪುಸ್ತಕ: ಬದುಕು ಹೂದೋಟ

ಸಂಪಾದನೆ: ಡಾ. ಶ್ರದ್ಧಾನಂದ ಸ್ವಾಮಿಗಳು

ಜ್ಞಾನಯೋಗ ಫೌಂಡೇಶನ್‌, ವಿಜಯಪುರ

Online ಖರೀದಿಸಲು: Sri Siddheshwar Swamiji Kannada Pravachan Set - 1 https://www.amazon.in/dp/B08RSFW643/ref=cm_sw_r_apan_i_G7VD6PENWDP2DHY7PR4A

೧೦. ಧರ್ಮಜೀವನಈ ಜಗತ್ತು ಬಿಟ್ಟು ನಮ್ಮ ಜೀವನವಿಲ್ಲ. ಜಗತ್ತು ಬೆಳೆದರೆ ನಾವು ಬೆಳೆಯುತ್ತೇವೆ, ನಾವು ಬೆಳೆದರೆ ಜಗತ್ತು ಬೆಳೆಯುತ್ತದೆ. ಈ ಜಗತ್ತಿನ...
18/05/2026

೧೦. ಧರ್ಮಜೀವನ

ಈ ಜಗತ್ತು ಬಿಟ್ಟು ನಮ್ಮ ಜೀವನವಿಲ್ಲ. ಜಗತ್ತು ಬೆಳೆದರೆ ನಾವು ಬೆಳೆಯುತ್ತೇವೆ, ನಾವು ಬೆಳೆದರೆ ಜಗತ್ತು ಬೆಳೆಯುತ್ತದೆ. ಈ ಜಗತ್ತಿನೊಂದಿಗೆಯೇ ನಾವು ಬಾಳಿ-ಬೆಳೆಯಬೇಕು. ಈ ಜಗತ್ತಿನಲ್ಲಿರುವ ಪಶು-ಪಕ್ಷಿ ಜನ-ಮನ, ಸಕಲ ಜೀವರಾಶಿಯ ಕಲ್ಯಾಣ ನಾವು ಬಯಸಬೇಕು. ಅದು ನಮ್ಮ ಕಲ್ಯಾಣ ಬಯಸಬೇಕು. ಇದುವೆ ಧರ್ಮಜೀವನ ಆ ಕುರಿತು ಗೀತೆಯಲ್ಲಿ ಒಂದು ಸುಂದರ ಶ್ಲೋಕ

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ | ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪೃಥ
- ಗೀತಾ ೩(೧೧)

ದೇವತೆಗಳನ್ನು ನೀವು ಸಂತೋಷಪಡಿಸಿರಿ. ದೇವತೆಗಳು ನಿಮ್ಮನ್ನು ಸಂತೋಷ ಪಡಿಸಲಿ. ಪರಸ್ಪರರನ್ನು ತೃಪ್ತಿಪಡಿಸಿ ಪರಮಶ್ರೇಯಸ್ಸನ್ನು ಪಡೆಯಿರಿ. ನಾವು ಇತರರಿಗೆ ಒಳ್ಳೆಯದನ್ನು ಬಯಸಬೇಕು. ಇತರರು ನಮಗೆ ಒಳ್ಳೆಯದನ್ನು ಬಯಸಬೇಕು. ಹೀಗೆ ಪರಸ್ಪರರು ಪ್ರೀತಿಯಿಂದಿರುವುದು, ಒಬ್ಬರಿಗೊಬ್ಬರು ಒಳ್ಳೆಯದನ್ನು ಮಾಡುವುದೇ ನಿಜ ಧರ್ಮ.

ಫ್ರಾನ್ಸ್ ದೇಶದಲ್ಲಿ ಒಬ್ಬ ದನಗಾಯುವ ಮನುಷ್ಯ, ಪರಿಸರಪ್ರೇಮಿ. ಅರಣ್ಯಕ್ಕೆ ಹೋಗುವಾಗ ಕೈಯಲ್ಲಿ ಗುದ್ದಲಿ, ಸಲಿಕೆ ಕೆಲವು ಸಸಿಗಳನ್ನು ಒಯ್ಯುತ್ತಿದ್ದ. ದನಗಳ ಕಾಯುತ್ತಲೇ ಪ್ರತಿ ದಿನವೂ ಸಸಿಗಳನ್ನು ನೆಡುತ್ತಿದ್ದ. ಹತ್ತಾರು ವರುಷಗಳಲ್ಲಿ ಅರಣ್ಯಕ್ಕೆ ಅರಣ್ಯವೇ ನಂದನವನವಾಗಿತ್ತು. ಇದು ಸರಕಾರಿ ಜಮೀನು ನೀನೇಕೆ ಮರಗಳನ್ನು ಬೆಳೆಸಿದೆ ?' ಎಂದು ಫ್ರಾನ್ಸ್ ದೇಶದ ಸರಕಾರ ಕೇಳಿತು. ಆ ದನಗಾಯಿ ಹೇಳಿದ 'ಈ ಮರಗಳನ್ನು ನಾನು ಬೆಳೆಸಿದ್ದು ದೇಶಕ್ಕಾಗಿಯೇ, ವಿನಾ, ನನಗಾಗಿ ಅಲ್ಲ' ಈ ಮಾತನ್ನು ಕೇಳಿದ ಫ್ರಾನ್ಸ್ ದೇಶದ ಸರಕಾರಕ್ಕೆ ಆಶ್ಚರ್ಯವೇ ಆಶ್ಚರ್ಯ ! ಇಂದಿಗೂ ಫ್ರಾನ್ಸ್ ದೇಶವು ಆ ದನಗಾಯಿಯನ್ನು 'ಮರದ ಮಿತ್ರ' ಎಂದು ಕೃತಜ್ಞತೆಯಿಂದ ನೆನೆಯುತ್ತದೆ.

ಸತ್ಕಾರ್ಯಗಳನ್ನು ಮಾಡುವ ಮೂಲಕ ನಾವು ಈ ಜಗತ್ತಿಗೆ ದೈವೀಶಕ್ತಿಯನ್ನು ಇಳಿಸಬೇಕು' ಅದರಿಂದ ನಮ್ಮ ಜೀವನವು ದಿವ್ಯ ಜೀವನ ವಾಗುತ್ತದೆ ಎಂದು ಮಹರ್ಷಿ ಅರವಿಂದರು ಎನ್ನುತ್ತಾರೆ. ಅವರು ನಾವು ಬದುಕಿರುವ ಈ ಜಗತ್ತೆಲ್ಲವೂ ದೈವೀಮಯವಾಗಿದೆ ಎಂದರು. ಅಕ್ಕಮಹಾದೇವಿ ಯವರು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ. 'ವನವೆಲ್ಲ ನೀವೆ, ವನದೊಳಗಣ ದೇವತರುವೆಲ್ಲ ನೀವೆ ತರುವಿನೊಳಗಾಡುವ ಖಗಮೃಗವೆಲ್ಲ ನೀವೆ ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರಾ', ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ, ಆಚಾರ್ಯದೇವೋ ಭವ ಎಂದು ನಮ್ಮ ಋಷಿಮುನಿಗಳು ತಾಯಿ-ತಂದೆ, ಗುರು-ಹಿರಿಯರು, ಅತಿಥಿ ಅಭ್ಯಾಗತರು ಎಲ್ಲರಲ್ಲಿ ದೇವರನ್ನು ಕಂಡರು, ಕಂಡರಸಿದರು.

ಅಶುತೋಷ ಮುಖರ್ಜಿಯವರು ಉಚ್ಚನ್ಯಾಯಲಯದ ನ್ಯಾಯಾಧೀಶ ರಾಗಿದ್ದರು. ಅದು, ಬ್ರಿಟಿಷರು ಈ ದೇಶವನ್ನು ಆಳುತ್ತಿದ್ದ ಕಾಲ. ಮುಖರ್ಜಿ ಯವರ ವಿದ್ವತ್ತನ್ನು ಮೆಚ್ಚಿಕೊಂಡಿದ್ದ ಬ್ರಿಟಿಷ್ ಗವರ್ನರ್ ಜನರಲ್ ಅವರು ಮುಖರ್ಜಿಯವರನ್ನು ಇಂಗ್ಲೆಂಡ ದೇಶಕ್ಕೆ ಬರಬೇಕೆಂದು ಆಮಂತ್ರಿಸಿದರು. ಆಗ ಮುಖರ್ಜಿಯವರು “ನಮ್ಮ ತಾಯಿಗೆ ಕೇಳಿ ಹೇಳುತ್ತೇನೆ'', ಎಂದರು. ಗವರ್ನರ ಹೇಳಿದರು ಇದು ನಮ್ಮ ಸರಕಾರದ ಆಜ್ಞೆ' ಮುಖರ್ಜಿ ಹೇಳಿದರು “ನಮ್ಮ ತಾಯಿಯ ಆಜ್ಞೆಗಿಂತ ದೊಡ್ಡ ಆಜ್ಞೆ ಇನ್ನೊಂದಿಲ್ಲ! ನನಗೆ ಹಣಕ್ಕಿಂತಲೂ ತಾಯಿಯ ಹರಕೆ ಮುಖ್ಯ !' ಮುಖರ್ಜಿಯವರ ಮಾತೃಭಕ್ತಿಯನ್ನು ಕಂಡು ಬ್ರಿಟಿಷ್ ಅಧಿಕಾರಿಗೆ ಆಶ್ಚರ್ಯವೂ ಆಗಿತ್ತು, ಆನಂದವೂ ಆಗಿತ್ತು!!

ಬಸವಣ್ಣನವರು ಕೂಡ 'ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ! ಎಂದು ಎಲ್ಲರನ್ನೂ ಗೌರವಿಸಿದರು. ಒಂದು ಮನೆಯನ್ನು ಕಟ್ಟಲು ದೊಡ್ಡ ಕಲ್ಲುಗಳೂ ಬೇಕು ಸಣ್ಣ ಚೀಪುಗಳೂ ಬೇಕು. ಹಾಗೆ ನೋಡಿದರೆ ದೊಡ್ಡ ಕಲ್ಲುಗಳು ತಮ್ಮ ಸ್ಥಾನದಲ್ಲಿ ತಾವಿರಬೇಕಾದರೆ ಸಣ್ಣ ಕಲ್ಲುಗಳೇ ಕಾರಣ. ಈ ದೇಶವನ್ನು ಬೆಳೆಸುವುದಕ್ಕೆ ಅಥವಾ ನಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ದೊಡ್ಡವರು, ಸಣ್ಣವರು ಎಲ್ಲರೂ ಬೇಕು. ನಮ್ಮ ಬದುಕಿನ ಅಂಗಳದಲ್ಲಿ ಬರುವವರನ್ನೆಲ್ಲ ಗೌರವಾದರದಿಂದ ಕಾಣುವುದು ನಮ್ಮ ಕರ್ತವ್ಯ.

ಒಬ್ಬ ದಾರಿಕಾರ ತನ್ನ ಊರಿಗೆ ನಡೆದು ಹೊರಟಿದ್ದ. ಎಪ್ಪತ್ತರ ವಯಸ್ಸು. ಹೊತ್ತು ಮುಳುಗಿ ಕತ್ತಲಾಯಿತು. ಇನ್ನು ಊರುತಲುಪುವುದಾಗುವುದಿಲ್ಲ, ಪಕ್ಕದ ಹಳ್ಳಿಯಲ್ಲಿದ್ದು ಬೆಳಿಗ್ಗೆ ಹೋಗುವದೆಂದು ಅಲ್ಲಿಗೆ ಹೋದ. ಎಲ್ಲ ಮನೆಗಳ ಬಾಗಿಲು ಮುಚ್ಚಿದ್ದವು. ಒಂದು ಮನೆಯಲ್ಲಿ ದೀಪ ಉರಿಯುತ್ತಿತ್ತು. ಈತ ಬಾಗಿಲು ತಟ್ಟಿದ. ಒಳಗಿದ್ದ ಧರ್ಮವಂತ ಹಿರಿಯನು ಬಾಗಿಲು ತೆರೆದು ಈತನನ್ನು ಬರಮಾಡಿಕೊಂಡ. ಕೈ ಕಾಲಿಗೆ ನೀರು ಕೊಟ್ಟು ಊಟಕ್ಕೆ ನೀಡಿದ. ಈತ ತಟ್ಟೆಗೆ ಕೈ ಹಾಕಿದ. ಅಷ್ಟರಲ್ಲಿ ಆ ಮನೆಯ ಹಿರಿಯ ಹೇಳಿದ ''ನಮ್ಮದು ಧಾರ್ಮಿಕ ಮನೆತನ, ದೇವರ ಹೆಸರು ತೆಗೆದುಕೊಂಡು ಊಟ ಮಾಡಿರಿ” ದಾರಿಕಾರ ಹೇಳಿದ. ಒಂದು ತುತ್ತು ಅನ್ನಕ್ಕಾಗಿ ದೆವರನ್ನು ನಾನು ನೆನೆಯಲಾರೆ'' ಹಾಗಾದರೆ ಈ ಮನೆಯಲ್ಲಿ ನಿನಗೆ ಊಟವಿಲ್ಲ'' ಎಂದು ಆ ಮನೆಯವನು ಈತನನ್ನು ಹೊರಗೆ ಹಾಕಿದ. ಆ ದಿನ ರಾತ್ರಿ ಆ ಮನೆಯವನ ಕನಸಿನಲ್ಲಿ ದೇವರು ಬಂದು ಹೇಳಿದ “ನಾನು ಎಪ್ಪತ್ತು ವರ್ಷಗಳಿಂದ ಅವನಿಗೆ ಅನ್ನ ಆಶ್ರಯ ನೀಡಿದ್ದೇನೆ. ಒಂದು ದಿನ ಅವನಿಗೆ ಅನ್ನ ಆಶ್ರಯ ಕೊಡಲು ನಿನ್ನಿಂದಾಗಲಿಲ್ಲವೇ ? ಆ ಮನೆಯವನು ತನ್ನ ತಪ್ಪಿನ ಕೇಳಿದ. ಅರಿವಾಗಿ ದೇವರಲ್ಲಿ ಕ್ಷಮೆ

ದೇವನ ಸ್ಮರಣೆ, ನಿಗರ್ಸದ ಪೋಷಣೆ, ತಾಯಿತಂದೆಯರ ಸೇವೆ, ಅತಿಥಿಸತ್ಕಾರ, ಮೂಕ ಮುಗ್ಧ ಪಶು ಪಕ್ಷಿಗಳಲ್ಲಿ ದಯೆ ಹೀಗೆ ನಾನಾ ರೀತಿಯಲ್ಲಿ ನಾವು ನಿತ್ಯವೂ ಸತ್ಕಾರ್ಯಗಳನ್ನು ಮಾಡಬಹುದು. ಬಡಮಕ್ಕಳಿಗೆ ಅನ್ನ ಅರಿವೆಯನಿತ್ತಾಗ ನಾವು ಅವರ ಮುಖ ಕಮಲದಲ್ಲಿ ದೈವೀ ಬೆಳಗನ್ನೇ ಕಾಣಬಹುದು! ಹೀಗೆ ಆಯುಷ್ಯದ ಉದ್ದಕ್ಕೂ ನಾವು ಸತ್ಕಾರ್ಯಗಳನ್ನು ಮಾಡುತ್ತಿರಬೇಕು ಇದುವೇ ಧರ್ಮ ಜೀವನ.

ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು

ಪುಸ್ತಕ: ಬದುಕು ಹೂದೋಟ

ಸಂಪಾದನೆ: ಡಾ. ಶ್ರದ್ಧಾನಂದ ಸ್ವಾಮಿಗಳು

ಜ್ಞಾನಯೋಗ ಫೌಂಡೇಶನ್‌, ವಿಜಯಪುರ

Online ಖರೀದಿಸಲು: Sri Siddheshwar Swamiji Kannada Pravachan Set - 1

Sri Siddheshwar Swamiji Kannada Pravachan Set - 1

Jai Guru Dev 🙏🙏🙏
16/05/2026

Jai Guru Dev 🙏🙏🙏

09/05/2026

🌹ಶ್ರೀವಾಣಿ 09-05-2026🌹

ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಹಲವಾರು ಶ್ಲೋಕಗಳಲ್ಲಿ ಪರಮಸತ್ಯ, ಪರಮ ಆತ್ಮತತ್ತ್ವದ ಸೊಗಸಾದ ವರ್ಣನೆ ಬರುತ್ತದೆ.ಅದರಲ್ಲಿ ಒಂದು ಶ್ಲೋಕ ಹೀಗಿದೆ -

ಅಚ್ಛೇದ್ಯೋಽಯಮದಾಹೋಽಕ್ಲೇದ್ಯೋಽಶೋಷ್ಯಏವಚ |
ನಿತ್ಯಸ್ಸರ್ವಗತಃ ಸ್ಥಾಣುರಚಲೋಽಯಂ ಸನಾತನಃ ||

ಈ ಆತ್ಮನನ್ನು ಶಸ್ತ್ರ ಕತ್ತರಿಸಲಾರದು, ಅಗ್ನಿ ದಹಿಸಲಾರದು, ನೀರು ತೋಯಿಸಲಾರದು, ಗಾಳಿ ಒಣಗಿಸಲಾರದು. ಈತನು ನಿತ್ಯನೂ ಸರ್ವಗತನು ಸ್ಥಿರನು, ಅಚಲನು, ಸನಾತನು ! ಈ ಜಗತ್ತಿನ ಎಲ್ಲ ವಸ್ತುಗಳೂ ವಿಭಜನೆಗೆ
ವಿನಾಶಕ್ಕೆ ಒಳಪಡುತ್ತವೆ. ಪರಮಸತ್ಯ ಮಾತ್ರ ಅವಿಭಾಜ್ಯ, ಅವಿನಾಶ. ಗಣಿತದಲ್ಲಿ ಬರುವ ಯಾವುದೇ ಅಂಕಿಯನ್ನೂ ನಾವು ವಿಭಜಿಸಬಹುದು. ಆದರೆ ಶೂನ್ಯ ಅಥವಾ ಅಸಂಖ್ಯೆಯನ್ನು ನಾವು ಯಾವ ಸಂಖ್ಯೆಯಿಂದಲೂ ವಿಭಜಿಸಲಾಗದು. ಈ ಶೂನ್ಯದಂತೆ ಅವಿಭಾಜ್ಯವಾಗಿ, ಅವಿನಾಶಿಯಾಗಿ ಉಳಿಯುವುದೇ ಪರಮಸತ್ಯ. ಅದು ನಿತ್ಯ !

ಈ ಜಗತ್ತು ಸತ್ಯ-ಅಸತ್ಯ, ನಿತ್ಯ-ಅನಿತ್ಯ, ಹಿತ- ಅಹಿತ ಮೊದಲಾದ ದ್ವಂದ್ವಗಳ ಸಮ್ಮಿಶ್ರಣ. ಅದನ್ನು ವಿಮರ್ಶಿಸಿ, ವಿಶ್ಲೇಷಿಸಿ, ವಿಂಗಡಿಸಿ ನೋಡುವ ಸಾಧನವೇ ವಿವೇಕ. ಅದೊಂದು ಅಂತರಂಗದ ಜ್ಯೋತಿ. ಅದರ ಬೆಳಕಿನಲ್ಲಿ
ನಾವು ಮುನ್ನಡೆಯಬೇಕು. ಆಗ ನಮಗೆ ನಿತ್ಯ-ಸತ್ಯದ ದರ್ಶನ !ಶಾಂತಿ-ಸಮಾಧಾನಗಳ ಅನುಭವ. ಅದು ಜೀವನಯೋಗ !

ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಮಾಲಿಕೆಯಿಂದ

Send a message to learn more

03/05/2026
Jai Guru Dev 🌺🌹💐🙏🕉️🪷Buddhiji bless you all 🌼🌷💐🌸🌺🌻
24/04/2026

Jai Guru Dev 🌺🌹💐🙏🕉️🪷Buddhiji bless you all 🌼🌷💐🌸🌺🌻

🙏🙏🙏
18/04/2026

🙏🙏🙏

Address

Ashram Road, Sector 76B, Adarsh Nagar
Vijayapura
586103

Alerts

Be the first to know and let us send you an email when Sri Siddheshwara Appaji Bhaktaru posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Siddheshwara Appaji Bhaktaru:

Share