24/07/2020
" ನಾಗರ ಪಂಚಮಿ ಹಬ್ಬದ ಶುಭಾಶಯಗಳು "
ತುಳು ನಾಡ ಜನರ ಪಾಲಿನ ಮೊದಲ ಹಬ್ಬ ನಾಗರ ಪಂಚಮಿ. ತನು ಮೈಪಾವೊಡು, ತಂಬಿಲ ಕಟ್ಟಾವೊಡು’ ಎಂಬ ಪೂರ್ವ ವಾಡಿಕೆಯಂತೆ ಮೂಲಸ್ಥಾನಗಳಲ್ಲಿ ನಾಗದೇವರಿಗೆ ನಾಗರಪಂಚಮಿ ಪರ್ವಕಾಲದಲ್ಲಿ ತಂಪೆರೆಯಿಸಿ, ತನಿ ಹರಕೆಗೊಂಡು ತನಿಯನ್ನು ಬಯಸುತ್ತಾ ಮೂಲನಾಗನ ದರ್ಶನದಿಂದ ಧನ್ಯರಾಗುವ ಆಸ್ತಿಕರು ’ನಗುತ್ತಾ ಬರುವ ನಾಗರಪಂಚಮಿ’ಯನ್ನು ಪ್ರಥಮ ಹಬ್ಬವೆಂದು ಸ್ವೀಕರಿಸುತ್ತಾರೆ.
ಸಂತಾನ, ಸಂಪತ್ತುಗಳನ್ನು ಅನುಗ್ರಹಿಸುವ ನಾಗದೇವರು ಚರ್ಮವ್ಯಾಧ , ದೃಷ್ಟಿ ದೋಷಗಳನ್ನು ಪರಿಹರಿಸಿ ಕೃಷಿ ಭಾಗ್ಯವನ್ನು, ಸರ್ವಸಮೃದ್ಧಿಯನ್ನು ನೀಡುವ ದೇವರೆಂಬುದು ಸನಾತನ ನಂಬಿಕೆ. ಮಾನವ ಬೇಟೆ ಸಂಸ್ಕೃತಿಯಿಂದ ಕೃಷಿ ಸಂಸ್ಕೃತಿಗೆ ತನ್ನ ಜೀವನ ವಿಧಾನವನ್ನು ಬದಲಾಯಿಸಿ ಕೊಂಡಾಗ ಒಂದೆಡೆ ನೆಲೆವೂರುವುದು ಅನಿವಾರ್ಯವಾಯಿತು. ಈ ಸಂದರ್ಭವೇ ಹರಿದಾಡುವ ಉರಗಜಾತಿಯ ಭಯದಿಂದ ರಕ್ಷಣೆ ಪಡೆಯಲು ’ಎಡ್ಡೆಂದಿನವು’ ಎಂದು ಹೆಸರಿಸುವ ’ನಾಗ’ನ ಆರಾಧನೆ ನಮ್ಮಲ್ಲಿ ಆರಂಭ ವಾಯಿತೆನ್ನಲಡ್ಡಿಯಿಲ್ಲ.
ನಾಗ - ವೃಕ್ಷ ಅವಳಿ ಚೇತನಗಳೆಂಬದು ಒಂದು ಅನುಸಂಧಾನ. ಆದುದರಿಂದಲೇ ನಮ್ಮ ಆರಾಧನಾ ಶಕ್ತಿಗಳ ಪ್ರತೀಕಗಳನ್ನು ಮಾನವ ಮರಗಳ ಬುಡದಲ್ಲೇ ನೆಲೆಗೊಳಿಸಿ ಸಾಂದರ್ಭಿಕ ವಾಗಿ ಪೂಜಿಸುತ್ತಾ ಬಂದ. ಸರಳ, ಮುಗ್ಧ ಹಾಗೂ ವಿಮರ್ಶೆಗೆ ಒಳಗಾಗದ ಶ್ರದ್ಧೆ - ಭಕ್ತಿಯೇ ಪ್ರಧಾನವಾಗಿ ಈ ಆರಾಧನೆಗಳು ಸಂಪನ್ನಗೊಳ್ಳುತ್ತಿದ್ದುವು. ಮರದ ಬುಡವೇ ಬಳ್ಳಿಗಳಿಂದ ಆವೃತವಾಯಿತು. ಕಡಿಯದೆ ಉಳಿಸಲಾಯಿತು. ಕಾಲ ಉರುಳುತ್ತಾ ಸುಂದರ ವನವೇ ನಿರ್ಮಾಣವಾಯಿತು. ಇವೆ ನಾಗಬನಗಳಾದುವು. (ಬೇರೆ ಬೇರೆ ಹೆಸರಿನ ಬನಗಳೂ ಇವೆ - ಆದರೆ ವನಮಾತ್ರ ಪ್ರದಾನ).
ನಮ್ಮ ಜಿಲ್ಲೆಗಳಲ್ಲಿ (ಕರಾವಳಿಯಲ್ಲಿ) ಬನಗಳು ಸಹಜವಾಗಿ ಬೆಳೆದುವು. ಇವು ಪ್ರಕೃತಿ ನಿರ್ಮಿಸಿದ ವೃಕ್ಷ ವೈವಿಧ್ಯ ಕಾಣಸಿಗುವ ಔಷದೀಯ ಮರ-ಗಿಡಗಳಿಗೆ ನೆಲೆಯಾಗುವ ಪ್ರಾಣಿ. ಪಕ್ಷಿ ಸಂಕುಲ ಗಳಿಗೆ ಆಶ್ರಯಸ್ಥಾನವಾಗುವ ಬನಗಳು.
ಆದರೆ ಇಂತಹ ಪ್ರಕೃತಿಯ ಮಡಿಲಲ್ಲಿ ಪ್ರಕೃತಿ ಜನ್ಯ ಶಕ್ತಿಗಳನ್ನು ಪ್ರಕೃತಿಯನ್ನು ನಂಬಿ ಬದುಕುವ ಮಾನವ ಪೂಜಿಸತೊಡಗಿದ. ತಂಪಾಗಿರಲಿ ಎಂಬುದು ಆಶಯ, ಭಯ ಮತ್ತು ಭಕ್ತಿಯೇ ಕಾರಣ ವಾಗಿ ಕಡಿಯದೆ ಉಳಿಸಿದ. ಇದೇ ನಮ್ಮಲ್ಲಿ ಮೂಲವನ್ನು ಹೊಂದಿರುವ ಎಲ್ಲಾ ಪೂಜಾ ವಿಧಾನಗಳಿಗೆ ಆಶ್ರಯ. ಇಂತಹ ಆಶಯವನ್ನು ಆಧರಿಸಿಯೇ ಪ್ರಕೃತಿ ನಿರ್ಮಿಸಿದ ಬನಗಳು ಜೀರ್ಣವಾಗುವುದಿಲ್ಲ ಎಂಬುದು ಒಂದು ಒಡಂಬಡಿಕೆ. ಈಗ ಬಹುತೇಕ ಬನಗಳು ಜೀಣೋìದ್ಧಾರವಾಗಿವೆ. (ಜೀರ್ಣವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಜೀರ್ಣವಾಗುವುದೆಂದರೇ ನೆಂಬುದಕ್ಕೆ ನಿಖರತೆ ಇಲ್ಲ) ಒಟ್ಟಿನಲ್ಲಿ ವೈಭವೀಕರಣ, ಸುಂದರವಾಗಿಸುವ ಹುಚ್ಚು ಸಾಹಸ. ಆ ಮೂಲಕ ಮೂಲ ಆಶಯ - ಆರಾಧನಾ ವಿಧಾನ ವಿರೂಪಗೊಳ್ಳುತ್ತಿವೆ.
ಮೂಲ ನಾಗ ದರ್ಶನ :
ನಾಗರ ಪಂಚಮಿಯ ಶುಭ ಅವಸರದಲ್ಲಿ ವೈಭವದ ಅಲಂಕರಣಗಳಿಂದ ಅಲಂಕೃತನಾದ ನಾಗದೇವರ ಅಥವಾ ನಾಗಬನಗಳ ಆಡಂಬರದ ಅಲಂಕಾರಗಳನ್ನು ಸ್ವಲ್ಪ ಸರಿಸಿ ನಾಗದೇವ ರನ್ನು ಗಮನಿಸಿದರೆ ಅಲ್ಲಿ ನಮಗೆ ಮೂಲನಾಗನ ದರ್ಶನವಾಗುವುದು, ಸರಳ ಸುಂದರ ಪೂಜಾವಿಧಾನವೊಂದು ತೆರೆದುಕೊಳ್ಳುವುದು, ಒಟ್ಟಿನಲ್ಲಿ ನಾಗಾರಾಧನೆಯ ಮೂಲ ಸ್ವರೂಪದ ದರ್ಶನವಾಗುವುದು.
ಸರಿಪಡಿಸಲಾಗದಷ್ಟು ನಮ್ಮ ಉಪಾಸನಾ ವಿಧಾನಗಳು ರೂಪುಗೆಟ್ಟಿವೆ. ಯಾವುದು ಹೇಗಿರ ಬೇಕೆಂಬ ಪ್ರಾಥಮಿಕ ಜ್ಞಾನದ ಕೊರತೆ, ಭವ್ಯವಾಗಿಸುವ ಮಹತ್ವಾಕಾಂಕ್ಷೆ, ’ಬನ’ಗಳ ನಾಶಕ್ಕೆ ಕಾರಣ. ವೇದಿಕೆ, ಕಟ್ಟೆ, ಗುಡಿ, ಮಂದಿರ, ದೇವಸ್ಥಾನ ಹೀಗೆ ನಾಗಾರಾಧನಾ ನೆಲೆಗಳು ಬದ ಲಾದುವು. ಬನ - ನಾಗ ಈ ಪವಿತ್ರ ಕಲ್ಪನೆಯು ನೇಪಥ್ಯಕ್ಕೆ ಸರಿಯಿತು.
ನಾಗದೇವರಿಗೂ ಮನುಕುಲಕ್ಕೂ ಅವಿನಾಭಾವ ಸಂಬಂಧ. ವಿಶ್ವದೆಲ್ಲೆಡೆ ಬೇರೆ ರೀತಿಯ ಸ್ವಿಕಾರ ಮತ್ತು ನಂಬಿಕೆಗಳ ಆರಾಧನೆ ಇದೆ. ಆದರೆ ಭಾರತದಲ್ಲಿ ಭಿನ್ನ ಆಶಯದ, ಚಿಂತನೆಯ ದೇವ ರೆಂಬ ಸ್ಥಾನಮಾನವಿದೆ. ಜಾನಪದ - ಪುರಾಣ ಕಥೆಗಳು ಪುಷ್ಟಿ ನೀಡುತ್ತಾ ಈ ಪ್ರಾಚೀನ ಆರಾಧ ನೆಗೆ ಆಧಾರವಾಗುತ್ತವೆ. ವೇದೋಕ್ತ ಕ್ರಮವೂ ರೂಢಿಗೆ ಬಂತು. ಆದರೆ ಕರಾವಳಿಯ ಉಡುಪಿ - ದಕ್ಷಿಣ ಕನ್ನಡ ಕಾಸರಗೋಡು - ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಗ ಸಂಬಂಧ ಶ್ರದ್ಧೆ ಭಿನ್ನವಾದುದು. ಅದು ಯಾವುದೆಂದರೆ ನಾವು ಕಳೆದುಕೊಳ್ಳುತ್ತಿರುವ ಅಮೂಲ್ಯವೂ ಅಪೂರ್ವವೂ ಆದ ಬನಗಳು ಸಾಗೂ ಆರಾಧನಾ ವೈಶಿಷ್ಟ್ಯಗಳು.
ಮ್ ಆನವನಿಂದ ಮೂತ್ತಮೂದಲು ದೈವೀಕರಿಸಲ್ಪಟ್ಟ ಪ್ರಾಣಿ ’ನಾಗ’, ದನವನ್ನು ನಮ್ಮ ಸಂಸ್ಕೃತಿಯ ಸಂಕೇತವಾಗಿ ಪೂಜೆಗೊಳ್ಳುವ ಪ್ರಾಣಿ. ಆದರೆ ನಾಗನ ಸಂದರ್ಭ ಬಂದಾಗ ನಾವು ನಾಗನಿಗೆ ’ಸರ್ಪಸಂಸ್ಕಾರ’ದಂತಹ ನಮ್ಮ ಹಿರಿಯರಿಗೆ ನೆರವೇರಿಸುವ ವಿಧಾನದ ಕರ್ಮಾಂಗ ಗಳನ್ನು ಹಾಗಾದರೆ ನಮ್ಮ - ನಾಗನ ಸಂಬಂಧ ಹೇಗೆ ನೇರ್ಪುಗೊಂಡಿತು, ಗಾಢವಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಪ್ರಶ್ನೆಗಳಿಗೆ ವೈಭವದ ಭವ್ಯ ಅಲಂಕರಣಗಳ ಆಳದಲ್ಲಿ ಉತ್ತರವಿದೆ ಎಂಬುದು ’ನಾಗರಪಂಚಮಿ’ಯಂದು ತಿಳಿಯಬೇಕಿದೆ.
ತನುಕು ಅನುಕೊರ್ಲೆ :
ಪ್ರಾಚೀನ, ಮೂಲವನ್ನು ಅನಾವರಣ ಗೊಳಿಸುವ ಬೇಸಗೆಯಲ್ಲಿ ಮಾತ್ರ ತಂಪೆರೆಸಿಕೊಳ್ಳುವ ನಾಗಬನಗಳು ನಮ್ಮಲ್ಲಿವೆ. ಈ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ವೈಭವೀಕರಣದ ಗಾಳಿ ಅತ್ತಲೂ ಬೀಸುತ್ತಿದೆ. ’ಅಡಿಪೋಯಿನಾಗೆ, ಕೊಡಿಪೋಯಿ ಬೆಮ್ಮೆರ್’ ಎಂದು ಸ್ತುತಿಸುತ್ತಾ ’ಕಾಲಾದಿದ ತನುಕು ಅನುಕೊಲೆì' ಎನ್ನುತ್ತಾ ತಂಪೆರೆಯುವವರು ಇದ್ದಾರೆ, ಬನಗಳೂ ಇವೆ. ಇಲ್ಲಿ ಕರಾವಳಿಯ ನಾಗಾರಾಧನೆಯ ಮೂಲ ಇದೆ. ಅಳಿಯುವ ಅಥವಾ ಸ್ಥಿತ್ಯಂತರಕ್ಕೆ ಮೂದಲು ಅತ್ತ ಗಮನಿಸೋಣ. ಮೂಲನಾಗನ ಕೃಪೆಗೆ ಪಾತ್ರರಾಗೋಣ.
Courtesy : ಲೇಕನ : ಚೇತನ್ ಮಾವೆ ©
http://kmahendranath.blogspot.in/