ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ, ತೋನ್ಸೆ.

  • Home
  • India
  • Udupi
  • ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ, ತೋನ್ಸೆ.

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ, ತೋನ್ಸೆ. KOTI CHENNAYA GARODI

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿ ಸೇವಾ ಟ್ರಷ್ಟ್, ಮುಂಬಯಿ; ಎ. 5 ರಂದು ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ..ಮುಂಬಯಿ ...
30/03/2026

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿ ಸೇವಾ ಟ್ರಷ್ಟ್, ಮುಂಬಯಿ; ಎ. 5 ರಂದು ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ..

ಮುಂಬಯಿ : ಅನಾದಿಕಾಲದಿಂದ ಭಕ್ತಿ ಶ್ರದ್ಧೆಯ ಬೀಡಾದ ಜನಪದ ಪ್ರತೀತಿಯ 66 ಪ್ರಾಚೀನ ಗರಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿಯು ಒಂದು. ಭಕ್ತರ ರಕ್ಷಣೆಗಾಗಿ ದುಷ್ಟರ ಸಂಹಾರಕ್ಕಾಗಿ ಅವತರಿಸಿದ ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯರು ಮತ್ತು ಅವರ ಆರಾಧ್ಯ ದೈವರಾದ ಶ್ರೀ ಬ್ರಹ್ಮ ಬೈದರನ್ನು ನಂಬಿ ಪೂಜಿಸುತ್ತಿದ್ದು, ಊರ ಪರವೂರ ಜನರ ಇಷ್ಟಾರ್ಥವನ್ನು ಪೂರೈಸುತ್ತಾ, ಪ್ರಕೃತಿ ಮಾತೆಯ ಸುಂದರ ಮಡಿಲಲ್ಲಿ ಹಸಿರು ಬಯಲಿನ ಮಧ್ಯದಲ್ಲಿ, ಸುವರ್ಣ ನದಿಯ ತೀರದಲ್ಲಿ ನೆಲೆಸಿರುವ ಆಸ್ತಿಕ ಶ್ರದ್ದಾ ಕೇಂದ್ರ ತೋನ್ಸೆ ಗರಡಿ. ಇದೀಗ ಹಲವು ಕಾಲದಿಂದ ಭೌತಿಕ ಸವೆತ, ಪ್ರಕೃತಿಯ ವಿಕೋಪಕ್ಕೆ ಒಳಗೊಂಡು ಶಿಥಿಲಗೊಂಡಿರುವ ಈ ಗರಡಿಯ ಪುನರ್ ನಿರ್ಮಾಣ ಅನಿವಾರ್ಯವಾಗಿದೆ. ಪುನರ್ ನಿರ್ಮಾಣಕ್ಕೆ ಅಂದಾಜು ವೆಚ್ಚ ರೂ. 7.5 ಕೋಟಿ ಎಂದು ಅಂದಾಜಿಸಲಾಗಿದೆ.

ಜನ್ಮಭೂಮಿಯನ್ನು ತೊರೆದು ಮರಾಠಿ ಮಣ್ಣಿನ ಕರ್ಮಭೂಮಿಯಲ್ಲಿ ಮಾತ್ರವಲ್ಲದೆ ಜಗತ್ತಿನ ವಿವಿದೆಡೆ ನೆಲೆಸಿ, ತಾನ್ನಾಡಿನ ಪ್ರತಿಯೊಂದು ಶುಭ ಕಾರ್ಯದಲ್ಲಿ ಸ್ಪಂದಿಸಿ, ಕೈಜೋಡಿಸಿ ಸಹಕರಿಸುತ್ತಿರುವ ದಾನಿಗಳ ಸಹಕಾರ ತುಂಬಾ ಪ್ರಾಮುಖ್ಯ. ಶ್ರೀ ಬ್ರಹ್ಮ ದೈವರ್ಕಳ ಪಂಚಧೂಮಾವತಿ ಗರೋಡಿಯ ಪುನರ್ ನಿರ್ಮಾಣದ ಶುಭ ಪರ್ವಕಾಲವು ಇದೀಗ ಒದಗಿ ಬಂದಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯದ ಫಲವೇ ಸರಿ. ಇದು ನಮಗೆ ಬಂದ ಸುವರ್ಣಾವಕಾಶವೆಂದು ತಿಳಿದು ತಾವೆಲ್ಲರೂ ಈ ಪುಣ್ಯ ಸೇವಾ ಕೈಂಕರ್ಯದಲ್ಲಿ ತನು-ಮನ-ಧನ ಸಹಾಯ ನೀಡಿ ಸಹಕರಿಸಬೇಕಾಗಿ ಕೃತಜ್ಞತಾಪೂರ್ವಕವಾಗಿ ವಿನಂತಿಸುತ್ತಿದ್ದೇವೆ.

ಕಳೆದ ಸುಮಾರು ಸಮಯದಿಂದ ಈ ಬಗ್ಗೆ ಚಿಂತನೆ, ಬೈದೆರ್ಲು, ಪಂಚಧೂಮಾವತಿ ದೇವರುಗಳ ಆಶೀರ್ವಾದ ಅಭಯವನ್ನು ಹಿರಿಯರು, ಗುರಿಕಾರರು, ಜೀರ್ಣೋದ್ಧಾರ ಸಮಿತಿ ಮತ್ತು ಇತರ ವಿಭಾಗದ ಸರ್ವರೂ, ಒಮ್ಮತದಿಂದ ಈ ಪುಣ್ಯದ ಕಾರ್ಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಈಗಾಗಲೇ ತಾ. 15.03.2026ರಂದು ಊರ ಹಾಗೂ ಪರವೂರ ಸದ್ಭಕ್ತರು ಸೇರಿಕೊಂಡು ಕರಸೇವೆ ಪ್ರಾರಂಭಗೊಂಡಿದೆ.

ನಮ್ಮೊಂದಿಗೆ ತೋನ್ಸೆಯ ಉದ್ಯಮಿಗಳಾಗಿರುವ ತೋನ್ಸೆ ಎಂ. ಆನಂದ ಶೆಟ್ಟಿ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ತೋನ್ಸೆ ರವಿನಾಥ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಹಿರಿಯ ಸಮಾಜ ಸೇವಕರು ಎಲ್ ವಿ ಅಮೀನ್, ಎನ್. ಟಿ. ಪೂಜಾರಿ, ಧರ್ಮಪಾಲ ದೇವಾಡಿಗ, ಸಿಎ ಐ ಆರ್ ಶೆಟ್ಟಿ, ವಿಲ್ಸನ್ ಫರ್ನಾಂಡಿಸ್, ಹೆರ್ಗ ಜಾಬು ಪೂಜಾರಿ, ಧರ್ಮಪ್ರಕಾಶ್ ಜಿ. ಕೃಷ್ಣ ಶೆಟ್ಟಿ, ರಘುರಾಮ ಶೆಟ್ಟಿ, ಡಾ. ರಾಜಶೇಖರ್ ಕೋಟ್ಯಾನ್, ಪುರುಷೋತ್ತಮ ಕೋಟ್ಯಾನ್, ಸುರೇಶ್ ಕಾಂಚನ್, ಭಾಸ್ಕರ್ ಸಾಲ್ಯಾನ್, ಗಂಗಾಧರ ಪೂಜಾರಿ, ರಾಜಗೋಪಾಲ ಶೆಟ್ಟಿ, ಬಿ ರಮಾನಂದ ರಾವ್, ತೋನ್ಸೆ ನವೀನ್ ಶೆಟ್ಟಿ, ತೋನ್ಸೆ ವಿಜಯಕುಮಾರ್ ಶೆಟ್ಟಿ, ಪ್ರಶಾಂತ್ ಸಿ. ಪೂಜಾರಿ, ಸಿಎ ಅಶ್ವಿನ್ ಎಸ್ ಸುವರ್ಣ, ಸದಾನಂದ ಅಂಚನ್, ಲಕ್ಷ್ಮಣ್ ಕಾಂಚನ್, ಸದಾನಂದ ಎನ್ ಆಚಾರ್ಯ, ಕಿರಣ್ ವಿ. ಪೂಜಾರಿ, ರವಿ ಎಸ್ ಪೂಜಾರಿ, ದಿನೇಶ್ ವಿ. ಕೋಟ್ಯಾನ್, ಬಿ. ರಾಮಪ್ರಸಾದ್ ರಾವ್, ರಮೇಶ್ ಸುವರ್ಣ, ಸಚಿನ್ ಪೂಜಾರಿ, ರವಿನಾಥ್ ಅಮೀನ್, ಗಿಲ್ಬರ್ಟ್ ಡಿಸೋಜಾ, ಅಶೋಕ್ ಶೆಟ್ಟಿ, ಮನೋಹರ ತೋನ್ಸೆ, ಪಿ. ಧನಂಜಯ ಶೆಟ್ಟಿ ಇವರೆಲ್ಲರೂ ಸಹಕರಿಸಿದ್ದಾರೆ. ನಮ್ಮ ಗರೋಡಿಗೆ ದಿ. ಜಯ ಸಿ. ಸುವರ್ಣ, ದಿ. ತೋನ್ಸೆ ಶಂಕರ ಸುವರ್ಣ, ದಿ. ಗೋಪಾಲ್ ಪಾಲನ್, ದಿ. ಪಾಂಗಾಳ ಗುಡ್ಡೆ ಗರಡಿ ಭಾಸ್ಕರ್ ಆಮೀನ್, ದಿ. ಲಾಜರ್ ಟಿ. ಮುತ್ತಪ್ಪ ಕೋಟ್ಯಾನ್ ಹೀಗೆ ಅನೇಕರ ಮಾರ್ಗದರ್ಶನ ದೊರಕಿದೆ.

ಮುಂಬಯಿಯ ಗರೋಡಿ ಟ್ರಷ್ಟ್ ಗೆ ಅನೇಕರು ಸದಾ ತುಂಬು ಹೃದಯದಿಂದ ಸಹಕರಿಸಿದ್ದೀರಿ. ಮುಂಬಯಿಯ ಗರೋಡಿ ಟ್ರಷ್ಟ್ ದಶಮಾನೋತ್ಸವ, ಹದಿನಾಲ್ಕನೇ ವಾರ್ಷಿಕೋತ್ಸವ ಸಂದರ್ಭದಲ್ಲಿ “ತೋನ್ಸೆ ಸ್ಪೂರ್ಥಿ” “ತೋನ್ಸೆ ಪ್ರಯ್ಡ್” “ತೋನ್ಸೆ ಅಚೀವರ್” ಮತ್ತು “ಯಂಗ್ ಟ್ಯಾಲೆಂಟ್” ಗೌರವದೊಂದಿಗೆ ಖ್ಯಾತ ಅತಿಥಿಗಳ ಉಪಸ್ಥಿತಿಯಲ್ಲಿ ಯಶಸ್ವೀ ಕಾರ್ಯಕ್ರಮ ನಡೆಯಲು ಎಲ್ಲರೂ ಸಹಕರಿಸಿದ್ದು ತುಳು ನಾಡಿನ ಪ್ರಖ್ಯಾತ ರಾಜ್ಯೋತ್ಸವ ಪುರಸ್ಕೃತ ಪಾತ್ರಿ ಕೋಟಿ ಪೂಜಾರಿ ಮತ್ತು ಹಿರಿಯ ಪಾತ್ರಿ ಶ್ಯಾಮರಾಯ ಪೂಜಾರಿಯವರನ್ನು ಎಲ್ಲರ ಉಪಸ್ಥಿತಿಯಲ್ಲಿ ಗೌರವಿಸಲಾಗಿದೆ. ಇದೀಗ ತುಳು ನಾಡಿನ ವೀರ ಪುರುಷರಾದ “ನಂಬುನಕ್ಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ” ಎಂಬ ನುಡಿಯಿಂದ ಸದಾ ಹರಸಲಿ ಎಂದು ತಾ. 01.04.2026ರಂದು ಬುಧವಾರ ಸಮಯ 9.50ಕ್ಕೆ ಸರಿಯಾಗಿ ಗರೋಡಿಯ ಸಂಪೂರ್ಣ ಪುನ‌ರ್ ನಿರ್ಮಾಣದ ಪ್ರಯುಕ್ತ ಶಿಲಾನ್ಯಾಸ ಮತ್ತು ಮುಷ್ಟಿ ಕಾಣಿಕೆಯನ್ನು ನಿರ್ಧರಿಸಲಾಗಿದೆ. ಈ ಪ್ರಯುಕ್ತ ಮುಂಬಯಿ ಟ್ರಸ್ಟ್‌ನ ನಿರ್ಧಾರದಂತೆ ತಾ. 05.04.2026ರಂದು ಆದಿತ್ಯವಾರ ಸಂಜೆ 4.30ಕ್ಕೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆಯನ್ನು ಮಾಡಲಿದ್ದೇವೆ. ತೋನ್ಸೆ ಪರಿಸರದ ಉದ್ಯಮಿಗಳು, ಮುಂಬಯಿಯ ನಮ್ಮ ಅಭಿಮಾನಿಗಳು, ಸದಸ್ಯರುಗಳು ನಮ್ಮೊಂದಿಗೆ ಸಹಕರಿಸಬೇಕಾಗಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿ ಸೇವಾ ಟ್ರಷ್ಟ್, ಮುಂಬಯಿಯ ಪರವಾಗಿ ಅದ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷರುಗಳಾದ , ಡಿ. ಬಿ. ಅಮೀನ್, ಸಿ. ಕೆ. ಪೂಜಾರಿ, ವಿಶ್ವನಾತ್ ತೋನ್ಸೆ, ಗೌರವ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌರವ ಕೋಶಾಧಿಕಾರಿ ರವಿರಾಜ್ ಕಲ್ಯಾಣ್ ಪುರ, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ. ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್ ಸಮಿತಿಯ ಸದಸ್ಯರುಗಳು, ಸಲಹೆಗಾರರು ಮತ್ತು ಮಹಿಳಾ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.

30/03/2026

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ
ಮೂಡುತೋನ್ಸೆ, ಅಂಚೆ-ಕಲ್ಯಾಣಪುರ -ಉಡುಪಿ ಜಿಲ್ಲೆ

ತೋನ್ಸೆ ಗರೋಡಿಯ ಸಂಪೂರ್ಣ ಪುನರ್ ನವೀಕರಣದ ಪ್ರಯುಕ್ತ..

ಶಿಲ್ತಾನ್ಯಾಸ ಮತ್ತು ಮುಷ್ಟಿಕಾಣಿಕೆ..

ಅಮಂತ್ರಣ ಪತ್ರಿಕೆ
ದಿನಾಂಕ: 01-04-2026 ಬುಧವಾರ..

ಸಮಯ: ಬೆಳಗ್ಗೆ ಘಂಟೆ 9-50

ಸ್ಥಳ: ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ,ತೋನ್ಸೆ

ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿಮೂಡು ತೋನ್ಸೆ, ಕಲ್ಯಾಣಪುರ..ಜೀರ್ಣೋದ್ದಾರ ಸಮಿತಿ..ತೋನ್ಸೆ ಗರೋಡಿಯ ಸಮಗ್ರ ಜೀರ್ಣೋದ್ದಾರ ಕಾರ್ಯವು ...
18/03/2026

ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ
ಮೂಡು ತೋನ್ಸೆ, ಕಲ್ಯಾಣಪುರ..

ಜೀರ್ಣೋದ್ದಾರ ಸಮಿತಿ..

ತೋನ್ಸೆ ಗರೋಡಿಯ ಸಮಗ್ರ ಜೀರ್ಣೋದ್ದಾರ ಕಾರ್ಯವು ನೆರವೇರಲಿದ್ದು, ಆ ಪ್ರಯುಕ್ತ ನೂತನ ಗರೋಡಿಯ ಶೀಲಾನ್ಯಾಸ ಹಾಗು ಮುಷ್ಟಿ ಕಾಣಿಕೆ ಕಾರ್ಯಕ್ರಮವು ದಿನಾಂಕ 01.04.2026 ರ ಬುಧವಾರ ಬೆಳಿಗ್ಗೆ 9.50ಕ್ಕೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತಿ ಗರೋಡಿಯಲ್ಲಿ ನೆರವೇರಲಿರುವುದು

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಬಾಗಿಗಳಾಗಬೇಕಾಗಿ ವಿನಂತಿ.

ಅಧ್ಯಕ್ಷರು ಹಾಗು ಪ್ರಧಾನ ಕಾರ್ಯದರ್ಶಿ
ಜೀರ್ಣೋದ್ದಾರ ಸಮಿತಿ..

ಶ್ರೀ ಬ್ರಹ್ಮ ಬೈದರ್ಕಳ ಪ೦ಚಧೂಮಾವತೀ ಗರೋಡಿ, ತೋನ್ಸೆ..ಆತ್ಮೀಯ ಭಕ್ತಾಭಿಮಾನಿಗಳೇ,ಸ್ವಸ್ತಿ। ಶ್ರೀ (ಸೌರ )ವಿಶ್ವಾವಸು ನಾಮ ಸಂ |ರದ ಮೀನ ಮಾಸ ದಿನ...
18/03/2026

ಶ್ರೀ ಬ್ರಹ್ಮ ಬೈದರ್ಕಳ ಪ೦ಚಧೂಮಾವತೀ ಗರೋಡಿ, ತೋನ್ಸೆ..

ಆತ್ಮೀಯ ಭಕ್ತಾಭಿಮಾನಿಗಳೇ,

ಸ್ವಸ್ತಿ। ಶ್ರೀ (ಸೌರ )ವಿಶ್ವಾವಸು ನಾಮ ಸಂ |ರದ ಮೀನ ಮಾಸ ದಿನ ೧೮ ಸಲುವ ಚೈತ್ರ..

ಶುದ್ಧ ೧೪ ಯು ತಾ. 01-04-2026 ಬುಧವಾರ..

ಬೆಳಿಗ್ಗೆ ಘಂಟೆ 9-50ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ..

ತೋನ್ಸೆ ಗರೋಡಿಯ ಸಂಪೂರ್ಣ ಪುನರ್ ನವೀಕರಣದ ಪ್ರಯುಕ್ತ..

ಶಿಲಾನ್ಯಾಸ ಮತ್ತು ಮುಷ್ಠಿಕಾಣಿಕೆ..

ಪುತ್ತೂರು ಶ್ರೀ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಹಾಗೂ ವಾಸ್ತು ತಜ್ಞ ಶ್ರೀ ಗುಂಡಿಬೈಲ್ ಸುಬ್ರಮಣ್ಯ ಭಟ್ ಇವರ ಮಾರ್ಗದರ್ಶನದಲ್ಲಿ ಊರ ಪರಊರ ಭಕ್ತಾದಿಗಳ ಹಾಗೂ ಗಣ್ಯರ ಉಪಸ್ಥಿತಿಯೊಂದಿಗೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಜರಗಲಿರುವುದು. ತಾವೆಲ್ಲರೂ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಈ ದೇವತಾ ಕಾರ್ಯಕ್ರಮಕ್ಕೆ ಜತೆಗೂಡಬೇಕೆಂದು ಪ್ರಾರ್ಥಿಸುವ..

ಸರ್ವರಿಗೂ ಆದರದ ಸ್ವಾಗತ ಬಯಸುವ, ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು

ಜೀರ್ಣೋದ್ದಾರ ಸಮಿತಿ..

ನಾಲ್ಕು ಕರೆ ಗುರಿಕಾರರು ಮತ್ತು ಗುರಿಕಾರರು..

ಅಧ್ಯಕ್ಷರು ಮತ್ತು ಸದಸ್ಯರು ಆಡಳಿತ ಮಂಡಳಿ

ಅಧ್ಯಕ್ಷರು ಮತ್ತು ಸದಸ್ಯರು ಕ್ಷೇತ್ರಾಡಳಿತ ಸಮಿತಿ

ಅಧ್ಯಕ್ಷರು ಮತ್ತು ಸದಸ್ಯರು ಗರೋಡಿ ಸೇವಾ ಟ್ರಸ್ಟ್ ಮುಂಬಯಿ

ಅರ್ಚಕ ವರ್ಗ ಹಾಗೂ ಊರ ಹತ್ತು ಸಮಸ್ತರು

ಅಧ್ಯಕ್ಷರು ಮತ್ತು ಸದಸ್ಯರು ಮಹಿಳಾ ಘಟಕ

ವಿಶೇಷ ಸೂಚನೆ: ಇತಿಹಾಸ ಪ್ರಸಿದ್ಧ ತೋನ್ಸೆ ಗರಡಿಯ ಈ ಪುಣ್ಯಕಾರ್ಯಕ್ಕೆ ಗ್ರಾಮದ ಪ್ರತಿ ಮನೆಯವರಿಂದ 'ಮುಷ್ಠಿಕಾಣಿಕೆ ಸಮರ್ಪಣೆ' ಮಾಡುವ ಪವಿತ್ರ ಸಂಕಲ್ಪ ಕೈಗೊಳ್ಳಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :98452 67281, 94481 29970

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ, ತೋನ್ಸೆ..ಮೂಡುತೋನ್ಸೆ, ಅಂಚೆ-ಕಲ್ಯಾಣಪುರ ,ಉಡುಪಿ ಜಿಲ್ಲೆ..ಜೀರ್ಣೋದ್ದಾರ ಸಮಿತಿ..ಐದು ಗ್ರಾಮಗಳನ್...
14/03/2026

ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ, ತೋನ್ಸೆ..

ಮೂಡುತೋನ್ಸೆ, ಅಂಚೆ-ಕಲ್ಯಾಣಪುರ ,ಉಡುಪಿ ಜಿಲ್ಲೆ..

ಜೀರ್ಣೋದ್ದಾರ ಸಮಿತಿ..

ಐದು ಗ್ರಾಮಗಳನ್ನೊಳಗೊಂಡ ತೋನ್ಸೆಯ ಮಣ್ಣಿನಲ್ಲಿ ಅಭೂತಪೂರ್ವ ದೇವತಾ ಕಾರ್ಯ..

ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ, ತೋನ್ಸೆ ಇದರ ಪುನರ್ ನವೀಕರಣ ಪ್ರಯುಕ್ತ
ದಿನಾಂಕ 15-03-2026ನೇ ಆದಿತ್ಯವಾರ..

ಭಕ್ತಾದಿಗಳಿಂದ ಬೃಹತ್ ಕರ ಸೇವೆ ..

ಸಮಯ : ಬೆಳಿಗ್ಗೆ ಗಂಟೆ 9:00 ರಿಂದ ಸಂಜೆ ಗಂಟೆ 5:00 ರವರೆಗೆ

ಬನ್ನಿ ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ...

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಜೀರ್ಣೋದ್ದಾರ ಸಮಿತಿ,ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ..

12/03/2026

ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ.

ತೋನ್ಸೆದ ನೇಮ - 2026

ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತಿ ಗರೋಡಿ ತೋನ್ಸೆ..ಮೂಡುತೋನ್ಸೆ ಕಲ್ಯಾಣಪುರ ಉಡುಪಿ ಜಿಲ್ಲೆ..ಕೊಡಿ ತಿಂಗಳ ಕೋಲ..ತಾ 26-11-2025 ರಿಂದ 28-11-...
13/11/2025

ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತಿ ಗರೋಡಿ ತೋನ್ಸೆ..

ಮೂಡುತೋನ್ಸೆ ಕಲ್ಯಾಣಪುರ ಉಡುಪಿ ಜಿಲ್ಲೆ..

ಕೊಡಿ ತಿಂಗಳ ಕೋಲ..

ತಾ 26-11-2025 ರಿಂದ 28-11-2025 ರವರೆಗೆ

ಕಾರ್ಯಕ್ರಮಗಳ ವಿವರ..

ತಾ 26-11-2025..

ಸುಬ್ರಹ್ಮಣ್ಯ ಷಷ್ಠಿಯಂದು ಬೆಳಿಗ್ಗೆ ಹರಿಕಾಯಿ ಸಮರ್ಪಣೆ, ನಾಗ ತನು, ರಾತ್ರಿ ಗಂಟೆ 9:30 ಕ್ಕೆ ಅಗೆಲು ಸೇವೆ (ಅನ್ನ ನೈವೇದ್ಯ). ದರ್ಶನ ಸೇವೆ ನಂತರ ಪ್ರಸಾದ ವಿತರಣೆ.

ತಾ : 27-11-2025 ಗುರುವಾರ ಮಧ್ಯಾಹ್ನ ಗಂಟೆ 3:30ರಿಂದ ಶ್ರೀ ಬೈದರ್ಕಳರ ಕೋಲ, ದರ್ಶನ ಸೇವೆ.
ತಾ: 28-11-2025 ಶುಕ್ರವಾರ ಮಧ್ಯಾಹ್ನ ಗಂಟೆ 4:00 ರಿಂದ ಮಾಯಂದಾಲ ಕೋಲ ನಡೆಯಲಿರುವುದು.

ಎಲ್ಲಾ ಭಕ್ತಾಭಿಮಾನಿಗಳು ಈ ಎಲ್ಲಾ ಶುಭ ಕಾರ್ಯಕ್ರಮಗಳಿಗೆ ಆಗಮಿಸಿ,ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸುತ್ತೇವೆ.

ನಾಲ್ಕುಕರೆ ಗುರಿಕಾರರು ಮತ್ತು ಗುರಿಕಾರರು..

ಅಧ್ಯಕ್ಷರು ಮತ್ತು ಸರ್ವಸದಸ್ಯರು ಬಿಲ್ಲವ ಒಕ್ಕೂಟ (ರಿ.) ತೋನ್ಸೆ..

ಅಧ್ಯಕ್ಷರು ಮತ್ತು ಸರ್ವಸದಸ್ಯರು ಕ್ಷೇತ್ರಾಡಳಿತ ಸಮಿತಿ..

ಅರ್ಚಕ ವರ್ಗ..

ಬೈದೇರುಗಳ ಪ್ರಸಿದ್ಧ  ನರ್ತನ ಸೇವಾ ನಿರತರು ಆಗಿರುವ ಹಾಗೂ ತೋನ್ಸೆ ಗರಡಿಯ ನೇಮೋತ್ಸವದಲ್ಲೂ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ  ಶ್ರೀ ಬ...
02/11/2025

ಬೈದೇರುಗಳ ಪ್ರಸಿದ್ಧ ನರ್ತನ ಸೇವಾ ನಿರತರು ಆಗಿರುವ ಹಾಗೂ ತೋನ್ಸೆ ಗರಡಿಯ ನೇಮೋತ್ಸವದಲ್ಲೂ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಬೂಬ ಪರವರಿಗೆ ಜಿಲ್ಲಾ ರಾಜ್ಯೋತ್ಸವದ ಗೌರವ. ಇವರಿಗೆ ಜೀರ್ಣೋದ್ದಾರ ಸಮಿತಿಯ ಪರವಾಗಿ ಅಭಿನಂದನೆಗಳು.

ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು,
ಜೀರ್ಣೋದ್ದಾರ ಸಮಿತಿ,
ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ.

 #ಹೃತ್ಪೂರ್ವಕ_ಅಭಿನಂದನೆಗಳು.💐🌹ಶ್ರೀ ವಿಠಲ ಪೂಜಾರಿ..ರಾಜ್ಯೋತ್ಸವ ಪ್ರಶಸ್ತಿ ಶ್ರೀ ವಿಠಲ ಪೂಜಾರಿ ಅಧ್ಯಕ್ಷರು ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್...
02/11/2025

#ಹೃತ್ಪೂರ್ವಕ_ಅಭಿನಂದನೆಗಳು.💐🌹
ಶ್ರೀ ವಿಠಲ ಪೂಜಾರಿ..

ರಾಜ್ಯೋತ್ಸವ ಪ್ರಶಸ್ತಿ ಶ್ರೀ ವಿಠಲ ಪೂಜಾರಿ ಅಧ್ಯಕ್ಷರು ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿ.

ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮೂಲ ಪರಂಪರೆಯಂತೆ ವಿನೂತನ ಶೈಲಿಯಲ್ಲಿ ನವಚೈತನ್ಯಗೊಂಡ ಗರೋಡಿಯ ಪುನರ್ ಪ್ರತಿಷ್ಠಾ ಪುಣ್ಯ ಉತ್ಸವದಲ್ಲಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸಮರ್ಪಣಾ ಮನೋಭಾವದ ನೇತಾರರಾದ ಶ್ರೀ ವಿಠಲ ಪೂಜಾರಿ ಇವರಿಗೆ ಅರ್ಹವಾಗಿಯೇ ಈ ಸಲದ ಕರ್ನಾಟಕ ರಾಜ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲರಿಗೂ ಹರ್ಷವನ್ನು ತಂದಿದೆ.💖
ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಅವರಿಗೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ. ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು.💐🌹ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇವೆ.🙏💐ಶುಭವಾಗಲಿ ನಿಮ್ಮ ಮುಂದಿನ ಭವಿಷ್ಯ.ಇವರ ಸಾಧನೆಯ ಹಾದಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಇನ್ನಷ್ಟು ಗೌರವ ಪುರಸ್ಕಾರ ಇವರ ಮುಡಿಗೇರಲಿ ನಾರಾಯಣ ಗುರುಗಳ ಅನುಗ್ರಹ ಸದಾ ಇರಲಿ.🙏💐

ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು,
ಜೀರ್ಣೋದ್ದಾರ ಸಮಿತಿ,
ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ.

31/10/2025

ಯಕ್ಷಗಾನ ಹಾಗೂ ಸಮಾಜ ಸೇವೆಗೆ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಬೃಹ್ಮ ಬೈದರ್ಕಳ ಧೂಮಾವತಿ ಯಕ್ಷಗಾನ ಕಲಾಮಂಡಳಿ ಕಡೆಕಾರು ಕಿದಿಯೂರು.ಇದರ ಅಧ್ಯಕ್ಷರು ಹಾಗೂ ಸರ್ವಸದಸ್ಯರಿಗೆ ನಮ್ಮ ಬಿರ್ವೆರ್ ಉಡುಪಿ ಕಡೆಯಿಂದ ಹೃದಯಸ್ಪರ್ಶಿ ಅಭಿನಂದನೆಗಳು.💐🌹

31/10/2025

#ಹೃದಯಸ್ಪರ್ಶಿ_ಅಭಿನಂದನೆಗಳು.💐🌹
ಶ್ರೀಯುತ ವಿಠಲ ಪೂಜಾರಿ.💛✨

ಪಕ್ಕಿಬೆಟ್ಟು ಗರೋಡಿಯ ಜೀರ್ಣೊದ್ದಾರ ಸಮಿತಿ ಅಧ್ಯಕ್ಷರಾದ ಶ್ರೀಯುತ ವಿಠಲ ಪೂಜಾರಿ ಇವರಿಗೆ 2025 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಾರಾಗಿರುತ್ತಾರೆ. ಯವರಿಗೆ ನಮ್ಮ ಬಿರ್ವೆರ್ ಉಡುಪಿ ಕಡೆಯಿಂದ ತುಂಬು ಹೃದಯದ ಅಭಿನಂದನೆಗಳು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇವೆ.🙏💐ಶುಭವಾಗಲಿ ನಿಮ್ಮ ಮುಂದಿನ ಭವಿಷ್ಯ.ಇವರ ಸಾಧನೆಯ ಹಾದಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಇನ್ನಷ್ಟು ಗೌರವ ಪುರಸ್ಕಾರ ಇವರ ಮುಡಿಗೇರಲಿ ನಾರಾಯಣ ಗುರುಗಳ ಅನುಗ್ರಹ ಸದಾ ಇರಲಿ.🙏💐

Address

Udupi
576114

Opening Hours

7am - 11:30pm

Telephone

+919449548146

Website

Alerts

Be the first to know and let us send you an email when ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ, ತೋನ್ಸೆ. posts news and promotions. Your email address will not be used for any other purpose, and you can unsubscribe at any time.

Share