Sonda Vadiraja Mutt

Sonda Vadiraja Mutt Sri Sode Vadiraja Mutt is one of the 8 Math's (Ashta Matha) established by Sri Madhvacharya & the matha at Sonda (Sode) was set up Sri Vadiraja Thirtharu.
(399)

He continues to be present & dwell in the Vrindavana as a source of divine grace & spiritual solace. "ಶ್ರೀ ಸೋದೆ ವಾದಿರಾಜ ಮಠ"
Sonda is small remote place surrounded with nature and enveloped with beauty. It is around 20 KMs from Sirsi Town. In Sode Mutt the first to be sighted is the lake known as Hayagriva Samudra. Towards the west of this lake stands a Dvaja sthamba in front of the Rama Thrivikram

a temple. Both the Lord's vehicles - the Hamsa and Garuda are depicted on this Dvaja sthamba. The Rama Thrivikrama temple consists of three parts - the sanctum sanctorum with the lovely idol of Lord Thrivikrama, the stone chariot used for transporting the Lord's idol and the idol of Sri Lakshmi Devi in the chariot. To the north of the temple and down some 24 steps is the Rajangana which also houses the mutt's offices. Here is the entrance to the mutt, the puja mandir (ananthaasana), stores and kitchen. Further down a flight of 24 steps, is the 'Dhavala Ganga' pushkarini along with a smaller 'Sheethala Ganga' tank nearby. The waters of these tanks are believed to be a confluence of all holy rivers of India. Around the pushkarini are located several small temples consecrated by Sri Vadiraja Teertha-Sri Chandramouleshwara on the south, Sri Veera Anjaneya on the west, Sri Venugopalaswamy on the north. Towards the east of the pushkarini is situated the pancha vrindavans with the vrindavan of Sri Vadiraja Teertharu situated in the centre. In front of the vrindavans is the temple for Sri Vedavyasa. On the right (to the south) of the vrindavans is the temple for the Kshetrapala - Bhootharaja. To the north is the naga vana.

07/09/2026

ಭಾಗ 13

✨ ವಾದಿರಾಜ ಗುಳ್ಳದ ಮಹಿಮೆ ✨

ಪ್ರತಿದಿನ ಭಾವಿಸಮೀರ ಶ್ರೀ ವಾದಿರಾಜ ತೀರ್ಥರು ಭಕ್ತಿಭಾವದಿಂದ ಸಮರ್ಪಿಸುತ್ತಿದ್ದ ಹಯಗ್ರೀವ ದೇವರ ನೈವೇದ್ಯದ ಹಿಂದೆ ಒಂದು ಅಪೂರ್ವ ಮಹಿಮೆ ಅಡಗಿದೆ.

ದುಷ್ಟರು ನೈವೇದ್ಯಕ್ಕೆ ವಿಷ ಬೆರೆಸಿದಾಗ, ಸ್ವತಃ ಶ್ರೀ ಹಯಗ್ರೀವ ದೇವರೇ ಆ ವಿಷವನ್ನು ಸ್ವೀಕರಿಸಿ ತಮ್ಮ ಭಕ್ತನನ್ನು ರಕ್ಷಿಸಿದರು. ಶ್ವೇತವರ್ಣದ ಸ್ವಾಮಿಯ ದೇಹವೇ ಹಸಿರು ಬಣ್ಣಕ್ಕೆ ತಿರುಗಿದರೂ, ಭಗವಂತನು ತನ್ನ ಭಕ್ತನಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧನೆಂಬುದನ್ನು ಸಾರಿತು.

ಗುರುಗಳು 48 ದಿನಗಳ ಕಾಲ ಮಟ್ಟುಗುಳ್ಳದಿಂದ ಮಾಡಿದ ನೈವೇದ್ಯದಿಂದ ವಿಷದ ಪ್ರಭಾವವೂ ಸಂಪೂರ್ಣವಾಗಿ ಕಡಿಮೆಯಾಯಿತು. ಅಂದಿನಿಂದ ‘ಮಟ್ಟು ಗುಳ್ಳ’ವೇ ‘ವಾದಿರಾಜ ಗುಳ್ಳ’ ಎಂದು ಪ್ರಸಿದ್ಧವಾಯಿತು.

ಇಂದಿಗೂ ಮಟ್ಟು ಗ್ರಾಮದ ಮೊದಲ ಬೆಳೆಯನ್ನು ಶ್ರೀ ಹಯಗ್ರೀವ ದೇವರ ನೈವೇದ್ಯಕ್ಕಾಗಿ ಸೋದೆ ಮಠಕ್ಕೆ ಸಮರ್ಪಿಸಲಾಗುತ್ತದೆ.

ನಿಜವಾದ ಭಕ್ತಿಗೆ ಭಗವಂತನೇ ರಕ್ಷಾಕವಚ.

ರಚನೆ: 3C's

#ಭಾವಿಸಮೀರ #ಶ್ರೀವಾದಿರಾಜತೀರ್ಥರು #ಶ್ರೀವಾದಿರಾಜರಜೀವನಪಯಣ #ಶ್ರೀಹಯಗ್ರೀವ #ಹಯಗ್ರೀವೋಪಾಸನೆ #ವಾದಿರಾಜಗುಳ್ಳ #ಮಟ್ಟುಗುಳ್ಳ #ಸೋದೆಮಠ #ಮಾಧ್ವಪರಂಪರೆ #ವಾದಿರಾಜಮಹಿಮೆ #ಗುರುಕೃಪೆ

Sri Vishwavallabhathirtha Swamiji Performing Mahamangalarati To Udupi Sri Krishna In Sode Paryaya 2012-2024Photo Courtes...
04/09/2026

Sri Vishwavallabhathirtha Swamiji Performing Mahamangalarati To Udupi Sri Krishna In Sode Paryaya 2012-2024

Photo Courtesy: Sode Sri Vadiraja Matha

❤️

04/09/2026

ತೊಟ್ಟಿಲು ತೂಗುವಾಗ ನಮ್ಮ ಚಿಂತನೆ ಹೇಗಿರಬೇಕು ? ಶ್ರೀ ವಿಶ್ವವಲ್ಲಭ ತೀರ್ಥರು.

31/08/2026

ಭಾಗ 12

✨ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಾಲಯದ ಉಗಮ ✨

ಇಂದು ಜಗತ್ಪ್ರಸಿದ್ಧವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ, ಹಿಂದೆ ‘ಕುಡುಮ ಕ್ಷೇತ್ರ’ವೆಂದು ಕರೆಯಲ್ಪಡುತ್ತಿತ್ತು. ಅಲ್ಲಿ ದೇವಾಲಯಗಳಿರಲಿಲ್ಲ; ಭೂತಾರಾಧನೆಯೇ ಪ್ರಧಾನವಾಗಿತ್ತು.

ಆ ಕ್ಷೇತ್ರಕ್ಕೆ ಆಗಮಿಸಿದ ಭಾವಿಸಮೀರ ಶ್ರೀ ವಾದಿರಾಜ ತೀರ್ಥರು, ಅರಸನ ಭಕ್ತಿಗೆ ಒಲಿದು, ತಮ್ಮ ದಿವ್ಯ ಸೇವಕ ಶ್ರೀ ಭೂತರಾಜರ ಮೂಲಕ ಶ್ರೀ ರುದ್ರದೇವರ ಅಂಶವನ್ನು ತರಿಸಿ, ನರಸಿಂಹ ಸಾಲಿಗ್ರಾಮದೊಂದಿಗೆ ಪ್ರತಿಷ್ಠಾಪಿಸಿ ಆ ನಾಡನ್ನು ಪಾವನಗೊಳಿಸಿದರು.

ಅಂದೇ ಗುರುಗಳು ಈ ಕ್ಷೇತ್ರಕ್ಕೆ ನೀಡಿದ ಹೆಸರು — ‘ಧರ್ಮಸ್ಥಳ’.
ಪ್ರತಿದಿನ ಅನ್ನಸಂತರ್ಪಣೆ ನಡೆಸುವಂತೆ ಸೂಚಿಸಿ, ಈ ಕ್ಷೇತ್ರವು ಧರ್ಮ ಮತ್ತು ಸೇವೆಯ ಪುಣ್ಯಭೂಮಿಯಾಗಲಿ ಎಂದು ಆಶೀರ್ವದಿಸಿದರು.

ಶತಶತಮಾನಗಳ ಬಳಿಕವೂ ಅನ್ವರ್ಥವಾಗಿರುವ ಆ ದಿವ್ಯನಾಮದ ಹಿಂದಿನ ಕಥೆ.

ರಚನೆ: 3C's

#ಭಾವಿಸಮೀರ #ಶ್ರೀವಾದಿರಾಜತೀರ್ಥರು #ಶ್ರೀವಾದಿರಾಜರಜೀವನಪಯಣ #ಧರ್ಮಸ್ಥಳ #ಕುಡುಮಕ್ಷೇತ್ರ #ಭೂತರಾಜರು #ಸೋದೆಮಠ #ಮಾಧ್ವಪರಂಪರೆ #ಸನಾತನಧರ್ಮ #ವಾದಿರಾಜಮಹಿಮೆ

24/08/2026

ಭಾಗ 11

✨ ಆಧ್ಯಾತ್ಮ – ಜ್ಞಾನ – ಕಾವ್ಯಗಳ ಮಹಾ ಮೇರು ಶಿಖರ ✨

ಪೆನುಗೊಂಡದ ರಾಜಸಭೆಯಲ್ಲಿ ನಾಲ್ಕು ವೇದಗಳು ಹಾಗೂ 64 ಕಲೆಗಳಿಗೆ ಸಂಬಂಧಿಸಿದ ಕ್ಲಿಷ್ಟಕರ ಪ್ರಶ್ನೆಗಳಿಗೆ ಅನಾಯಾಸವಾಗಿ ಉತ್ತರಿಸಿ, ‘ಪ್ರಸಂಗಾಭರಣ ತೀರ್ಥ’ ಎಂಬ ಬಿರುದಿಗೆ ಪಾತ್ರರಾದರು ಭಾವಿಸಮೀರ ಶ್ರೀ ವಾದಿರಾಜ ತೀರ್ಥರು.

ಮುಂದೆ, ಕೇವಲ 19 ದಿನಗಳಲ್ಲಿ 19 ಅಧ್ಯಾಯಗಳು ಮತ್ತು 1,240 ಶ್ಲೋಕಗಳನ್ನು ರಚಿಸಿ, ಶ್ರೀಕೃಷ್ಣ-ರುಕ್ಮಿಣಿಯರ ದಿವ್ಯ ಕಲ್ಯಾಣವನ್ನು ಸಾರುವ ‘ರುಗ್ಮಿಣೀಶ ವಿಜಯ’ ಎಂಬ ಮಹಾಕಾವ್ಯವನ್ನು ಲೋಕಕ್ಕೆ ನೀಡಿದರು.

ಅದರ ಕಾವ್ಯಸೌಂದರ್ಯ ಮತ್ತು ಆಧ್ಯಾತ್ಮಿಕ ವೈಭವಕ್ಕೆ ಮಾರುಹೋದ ವಿದ್ವಾಂಸರು, ಆ ಗ್ರಂಥವನ್ನು ಆನೆಯ ಮೇಲೆ ಮೆರವಣಿಗೆ ಮಾಡಿ, ಶ್ರೀ ವಾದಿರಾಜರಿಗೆ ‘ಕವಿಕುಲ ತಿಲಕ’ ಎಂಬ ಬಿರುದನ್ನಿತ್ತು ಗೌರವಿಸಿದರು.

ಜ್ಞಾನ, ಆಧ್ಯಾತ್ಮ ಮತ್ತು ಕಾವ್ಯ — ಈ ಮೂರರ ಸಂಗಮವಾಗಿದ್ದ ಭಾವಿಸಮೀರ ಶ್ರೀ ವಾದಿರಾಜ ತೀರ್ಥರ ದಿವ್ಯ ಜೀವನದ ಮತ್ತೊಂದು ಅದ್ಭುತ ಅಧ್ಯಾಯ.

ರಚನೆ: 3C's

#ಭಾವಿಸಮೀರ #ಶ್ರೀವಾದಿರಾಜತೀರ್ಥರು #ಶ್ರೀವಾದಿರಾಜರಜೀವನಪಯಣ #ರುಗ್ಮಿಣೀಶವಿಜಯ #ಪ್ರಸಂಗಾಭರಣತೀರ್ಥ #ಕವಿಕುಲತಿಲಕ #ಸೋದೆಮಠ #ಮಾಧ್ವಪರಂಪರೆ #ಸನಾತನಧರ್ಮ #ವಾದಿರಾಜಮಹಿಮೆ

ಸೋದೆಯಲ್ಲಿ ತ್ರಿವಿಕ್ರಮ ದೇವಸ್ಥಾನದ ಮುಂಭಾಗ ರಮಾ ದೇವಿಗೆ ನೂತನ ದೇವಾಲಯ ನಿರ್ಮಿಸಲು ಶ್ರೀ ವಿಶ್ವವಲ್ಲಭ ತೀರ್ಥರು ಪಾದುಕಾನ್ಯಾಸ ನೆರವೇರಿಸಿದರು....
19/08/2026

ಸೋದೆಯಲ್ಲಿ ತ್ರಿವಿಕ್ರಮ ದೇವಸ್ಥಾನದ ಮುಂಭಾಗ ರಮಾ ದೇವಿಗೆ ನೂತನ ದೇವಾಲಯ ನಿರ್ಮಿಸಲು ಶ್ರೀ ವಿಶ್ವವಲ್ಲಭ ತೀರ್ಥರು ಪಾದುಕಾನ್ಯಾಸ ನೆರವೇರಿಸಿದರು. ವಾಸ್ತು ತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್ಟರ ಮಾರ್ಗದರ್ಶನದಲ್ಲಿ ಇಂಜಿನಿಯರ್ ಎಲ್ಲೂರು ವಿಷ್ಣುಮೂರ್ತಿ ಭಟ್ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ.

ಶ್ರೀವಿಶ್ವೋತ್ತಮ ತೀರ್ಥರ ಆರಾಧನಾ ಪ್ರಯುಕ್ತ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು ಹಸ್ತೋದಕ ನೀಡಿ ವಿಶೇಷ ಪೂಜೆ ನಡೆಸಿದರು. ...
18/08/2026

ಶ್ರೀವಿಶ್ವೋತ್ತಮ ತೀರ್ಥರ ಆರಾಧನಾ ಪ್ರಯುಕ್ತ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು ಹಸ್ತೋದಕ ನೀಡಿ ವಿಶೇಷ ಪೂಜೆ ನಡೆಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿಪ್ಪಾಣಿ ಗುರುರಾಜ ಆಚಾರ್ಯರಿಂದ ಗುರುಸ್ಮರಣೆ ನಡೆಯಿತು. ಇದೇ ಸಂದರ್ಭದಲ್ಲಿ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳು ಶಾಸ್ತ್ರಾನುವಾದ ಮಾಡಿದರು.

17/08/2026

ಭಾಗ 10

✨ ಆಧ್ಯಾತ್ಮಿಕ ಕ್ರಾಂತಿಯ ಹರಿಕಾರ ✨

ಉಡುಪಿಯ ಪರ್ಯಾಯ ಸಂಪ್ರದಾಯವು ಎರಡು ತಿಂಗಳಿಗೊಮ್ಮೆ ಬದಲಾಗುತ್ತಿದ್ದ ಕಾಲದಲ್ಲಿ, ಧರ್ಮಪ್ರಚಾರ ಮತ್ತು ಸಂಚಾರಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯವನ್ನು ಅರಿತವರು ಭಾವಿ ಸಮೀರ ಶ್ರೀ ವಾದಿರಾಜ ತೀರ್ಥರು.

ಶ್ರೀ ವೇದವ್ಯಾಸರು ಹಾಗೂ ಶ್ರೀಮನ್ ಮಧ್ವಾಚಾರ್ಯರ ಅನುಗ್ರಹ ಪಡೆದು, ಪರ್ಯಾಯ ಸಂಪ್ರದಾಯದ ವಿಸ್ತರಣೆಯಿಂದ, ಸನಾತನ ಧರ್ಮದ ಸಂದೇಶವು ಎಲ್ಲೆಲ್ಲೂ ವಿಸ್ತರಿಸುವಂತೆ ಮಾಡಿ, ಯತಿಗಳಿಗಿರಬೇಕಾದ ದೂರದೃಷ್ಟಿ, ಕಾಲಾನುಕ್ರಮದಲ್ಲಿ ಬೇಕಾದ ಬದಲಾವಣೆಗಳೂ ಸಹ ಎಷ್ಟು ಮುಖ್ಯ ಎಂಬುದಕ್ಕೆ ಈ ಪರಮ ದೃಷ್ಟಾಂತವೇ ಉದಾಹರಣೆ.

ಅದೇ ಯಾತ್ರೆಯಲ್ಲಿ ಭೀಮಸೇನನು ಪೂಜಿಸಿದ್ದ ಶ್ರೀ ಲಕ್ಷ್ಮೀ ನರಸಿಂಹ ದೇವರ ದಿವ್ಯ ಮೂರ್ತಿಯನ್ನು ಭೀಮಕುಂಡದಿಂದ ಹೊರ ತೆಗೆದು, ಸೋದೆ ಮಠದಲ್ಲಿ ನಿತ್ಯಪೂಜೆಗೆ ಅಣಿಯಾಗಿಸಿದರು.

ಪರಂಪರೆಯನ್ನು ಗೌರವಿಸುತ್ತಲೇ, ಕಾಲದ ಅಗತ್ಯಕ್ಕೆ ತಕ್ಕಂತೆ ಧರ್ಮಪ್ರಚಾರಕ್ಕೆ ಹೊಸ ದಾರಿಯನ್ನು ತೋರಿದ ಭಾವಿ ಸಮೀರ ಶ್ರೀ ವಾದಿರಾಜ ತೀರ್ಥರ ದೂರದೃಷ್ಟಿಯ ಮತ್ತೊಂದು ಮಹೋನ್ನತ ಅಧ್ಯಾಯ.

ರಚನೆ: 3C's

#ಭಾವಿಸಮೀರ #ಶ್ರೀವಾದಿರಾಜತೀರ್ಥರು #ಶ್ರೀವಾದಿರಾಜರಜೀವನಪಯಣ #ಸೋದೆಮಠ #ಪರ್ಯಾಯ #ಶ್ರೀಲಕ್ಷ್ಮೀನರಸಿಂಹ #ಮಾಧ್ವಪರಂಪರೆ #ಮಧ್ವಾಚಾರ್ಯರು #ಸನಾತನಧರ್ಮ #ವಾದಿರಾಜಮಹಿಮೆ

16/08/2026

Address

Sode Vadiraja Mutt, Sonda, Sirsi Taluk, Uttar Kannda
Sirsi
581336

Alerts

Be the first to know and let us send you an email when Sonda Vadiraja Mutt posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sonda Vadiraja Mutt:

Shortcuts

Share

Category