Shree Satyanatheshwara Temple

Shree Satyanatheshwara Temple ಶ್ರೀ ಸತ್ಯನಾಥೇಶ್ವರ ದೇವಸ್ಥಾನ ಬಕ್ಕಳ.

22/01/2018
*ಶ್ರೀ ಸತ್ಯನಾಥೇಶ್ವರ ದೇವರ ಮಹಾರಥೋತ್ಸವ*          22-01-2018  ಸೋಮವಾರಮಾನ್ಯರೇ,             ಇದೇ ದಿನದಂದು ಶ್ರೀದೇವರಿಗೆ ನೂತನವಾಗಿ ನಿರ...
14/01/2018

*ಶ್ರೀ ಸತ್ಯನಾಥೇಶ್ವರ ದೇವರ ಮಹಾರಥೋತ್ಸವ*
22-01-2018 ಸೋಮವಾರ
ಮಾನ್ಯರೇ,
ಇದೇ ದಿನದಂದು ಶ್ರೀದೇವರಿಗೆ ನೂತನವಾಗಿ ನಿರ್ಮಿಸಲಾದ ದೇವರ ಬೆಳ್ಳಿ ಪ್ರಭಾವಳಿ, ಬೆಳ್ಳಿ ಮುಖುವಾಡ, ಬೆಳ್ಳಿ ಬೆತ್ತ ಹಾಗೂ ಅಮ್ಮನವರ ಬೆಳ್ಳಿ ಕವಚವನ್ನು ಶ್ರೀ ದೇವರಿಗೆ ಅರ್ಪಣೆ ಮಾಡಲಾಗುವುದು. (10 ರಿಂದ 12 ಗಂಟೆಯ ಒಳಗೆ)
ಈ ಕಾರ್ಯಕ್ಕೆ ಸಹಾಯಧನ ನೀಡಿದ ಭಕ್ತಾದಿಗಳು ಹಾಗೂ ಸರ್ವರೂ ಆ ಸಮಯದಲ್ಲಿ ಉಪಸ್ಥಿತರಿದ್ದು ಶ್ರೀದೇವರ ಕೃಪೆಗೆ ಪಾತ್ರರಾಗಲು ಕೋರಿದೆ.


ಬಕ್ಕಳ - ಮೋಕ್ತೇಸರ

ಭಕ್ತಾದಿಗಳಲ್ಲಿ ಈ ಮೂಲಕ ವಿನಂತಿಸಿ ಕೊಳ್ಳುವುದೇನೆಂದರೆ,---------------------------------------------------------------ನಮ್ಮ  ದೇವಸ...
10/12/2017

ಭಕ್ತಾದಿಗಳಲ್ಲಿ ಈ ಮೂಲಕ ವಿನಂತಿಸಿ ಕೊಳ್ಳುವುದೇನೆಂದರೆ,
---------------------------------------------------------------
ನಮ್ಮ ದೇವಸ್ಥಾನದಲ್ಲಿ ಹಲವು ದೇವತಾ ಕಾರ್ಯಗಳು, ಹೀಗೇ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಹೀಗೆ ನಡೆಯುವ ಕಾರ್ಯಕ್ರಮಗಳಿಗೆ ಭಕ್ತಾದಿಗಳ ಆಗಮನ ಸಹಜವಾಗಿಯೇ ಇರುತ್ತದೆ. ಆ ಸಮಯದಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯು ಸಮರ್ಪಕವಾಗಿ ಇಲ್ಲದಿರುವುದು ವಿಷಾದವೇ ಸರಿ . ಆದ ಕಾರಣ ನೀರಿನ ವ್ಯವಸ್ಥೆಯ ಸಮರ್ಪಕವಾಗಿ ಇರಿಸಲು ಹತ್ತು ಸಾವಿರ ಲೀಟರ್ ನೀರಿನ ಸಂಗ್ರಹವಿರುವ ಸಿಂಟೆಕ್ಸ್ ಟ್ಯಾಂಕ್, ಮೇಲುಸ್ಥಾವರ , ಇವೆಲ್ಲಾ ಸೇರಿ ಅಜಮಾಸು 4,35,000 ರೂಗಳು ಬೇಕಾಗುವುದೆಂದು ಅಂದಾಜು ಮಾಡಲಾಗಿದೆ. ಹಾಗಾಗಿ ಇದರ ಮನವಿಯ ಜೊತೆಗೆ ಯೋಜನಾ ವೆಚ್ಚವನ್ನೂ ಇಡಲಾಗಿದೆ. ಈ ಕೆಲಸಕ್ಕೆ ಯಾರಾದರೂ ಭಕ್ತರು ಸಹಾಯ ಮಾಡುವವರು ದೇವಸ್ಥಾನ ಅಧ್ಯಕ್ಷರ ಸಂಪರ್ಕವನ್ನು ಮಾಡಬಹುದು. (08283240132) ಅಥವಾ ದೇವಸ್ಥಾನದ ಸಿಂಡಿಕೇಟ್ ಬ್ಯಾಂಕ್ ಶಿರಸಿ ಖಾತೆಗೆ ಜಮಾ ಮಾಡಬಹುದು. ಜಮಾ ಮಾಡಿದವರು ತಮ್ಮ ವಿಳಾಸವನ್ನು ಸರಿಯಾಗಿ ನಮೂದಿಸ ಬೇಕು. ( ಜಮಾ ಮಾಡಿದ ಹಣಕ್ಕೆ ರಸೀದಿ ಹಾಕುವ ಸಲುವಾಗಿ)

ಸಿಂಡಿಕೇಟ್ ಬ್ಯಾಂಕ್ – 03032200044017
IFSC – SYNB0000303

ವಂದನೆಗಳೊಂದಿಗೆ
ಬಕ್ಕಳ. ಅಧ್ಯಕ್ಷರು
10-12-2017. ಗಜಾನನ ಭಟ್ಟ

ಶ್ರೀ ದೇವಸ್ಥಾನದ ಇತ್ತೀಚಿನ ಚಿತ್ರಪಟಗಳು.  # ಶ್ರೀ ದೇವಸ್ಥಾನದಲ್ಲಿ ಚೌತಿ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಕೂರಿಸಲಾಗುವುದು. ಹಾಗೂ ಚೌತಿಯ...
24/08/2017

ಶ್ರೀ ದೇವಸ್ಥಾನದ ಇತ್ತೀಚಿನ ಚಿತ್ರಪಟಗಳು.

# ಶ್ರೀ ದೇವಸ್ಥಾನದಲ್ಲಿ ಚೌತಿ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಕೂರಿಸಲಾಗುವುದು. ಹಾಗೂ ಚೌತಿಯಿಂದ ಸರಿಯಾಗಿ ನಾಲ್ಕನೇ ದಿನಕ್ಕೆ, ಅಂದರೆ ಸಪ್ತಮಿಯಂದು ಮಧ್ಯಾಹ್ನ ನಂತರ ಊರವರ ಸಮ್ಮುಖದಲ್ಲಿ ಪೂಜೆಯನ್ನು ನೆರವೇರಿಸಿ ವಿಸರ್ಜಿಸಲಾಗುವುದು. 🙏

11/04/2017

Ranked #18 of 23 attractions in Sirsi. Been here too? Add it to your map!

29/03/2017
-: ಭಕ್ತಾದಿಗಳಲ್ಲಿ ಸವಿನಯ ವಿನಂತಿ :- ಕೆಳಗೆ ನೀಡಿರುವ ಪುಟವನ್ನು ತಪ್ಪದೇ ಓದಿ, ನಂತರದಲ್ಲಿ ತಮ್ಮಲ್ಲಾಗುವ ಸಹಾಯವನ್ನು/ ನಿಮ್ಮ ಪರಿಚಯಸ್ತರಿಗೆ ...
28/03/2017

-: ಭಕ್ತಾದಿಗಳಲ್ಲಿ ಸವಿನಯ ವಿನಂತಿ :-
ಕೆಳಗೆ ನೀಡಿರುವ ಪುಟವನ್ನು ತಪ್ಪದೇ ಓದಿ, ನಂತರದಲ್ಲಿ ತಮ್ಮಲ್ಲಾಗುವ ಸಹಾಯವನ್ನು/ ನಿಮ್ಮ ಪರಿಚಯಸ್ತರಿಗೆ ತಿಳಿಸಲೂ ಕೋರಿದೆ.

ಧನ್ಯವಾದಗಳು

24/02/2017

ಶ್ರೀ ಸತ್ಯನಾಥೇಶ್ವರ ಪ್ರಸನ್ನಃ

ಸಮಸ್ತ ಭಕ್ತವೃಂದದವರಿಗೆ "ಮಹಾ ಶಿವರಾತ್ರಿಯ" ಶುಭಾಶಯಗಳು.

ಇಂದು ಶ್ರೀದೇವರಿಗೆ ರುದ್ರಾಭಿಷೇಕ ಜರುಗಿತು. ಹಾಗೂ ಅನೇಕ ಸಂಖ್ಯೆಯಲ್ಲಿ ಭಕ್ತರು ದೇವರ ಸನ್ನಿಧಿಗೆ ಭೇಟಿ ನೀಡಿ ದೇವರ ಪ್ರೀತಿಗೆ ಪಾತ್ರರಾದರು.

*ಕೆಲವು ಚಿತ್ರ ಪಟಗಳನ್ನು ಕೆಳಗೆ ನೀಡಲಾಗಿದೆ.

06/02/2017
ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ದೇವರ ವಿಗ್ರಹ ಮತ್ತು ಉತ್ಸವ ಮೂರ್ತಿ
06/02/2017

ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ದೇವರ ವಿಗ್ರಹ ಮತ್ತು ಉತ್ಸವ ಮೂರ್ತಿ

ಶ್ರೀ ಸತ್ಯನಾಥೇಶ್ವರ ದೇವರ ರಥೋತ್ಸವ       -:ಸರ್ವರಿಗೂ ಆದರದ ಸ್ವಾಗತ:-ದಿನಾಕ:- 01.02.2017 ರ ಸಂಜೆ 5ಗಂಟೆಗೆ ಸೋಂದಾ ಶ್ರೀ ಗಂಗಾಧರೇಂದ್ರ ಸರ...
31/01/2017

ಶ್ರೀ ಸತ್ಯನಾಥೇಶ್ವರ ದೇವರ ರಥೋತ್ಸವ
-:ಸರ್ವರಿಗೂ ಆದರದ ಸ್ವಾಗತ:-

ದಿನಾಕ:- 01.02.2017 ರ ಸಂಜೆ 5ಗಂಟೆಗೆ ಸೋಂದಾ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೇವಸ್ಥಾನದ ರಥೋತ್ಸವಕ್ಕೆ ಭೇಟಿ ನೀದಲಿದ್ದಾರೆ.

ಭಕ್ತಾದಿಗಳು ದೇವರ ರಥೋತ್ಸವ ಕಾರ್ಯಕ್ರಮಗಳಿಗೆ ಬಂದು ದೇವರ ಪ್ರೀತಿಪಾತ್ರರಾಗಲು ತಿಳಿಸಿದೆ.

ಹೆಚ್ಚಿನ ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ- 08283240132

06/01/2017

ಇಂದ್ರದ್ಯುಮ್ನ ಹೇಳಿದ ಸತ್ಯನಾಥೇಶ್ವರನ ಕಥೆ

ಮುಂದುವರಿದ ಭಾಗ- 6

ಸತ್ಯತಪನಾದ ಸಾಧಕನ ಶಿವಾದ್ವೈತದಪರಿಯನ್ನು ಎಷ್ಟು ಹೊಗಳಿದರೂ ಸ್ಕಂದನಿಗೆ ತೃಪ್ತಿಯಿಲ್ಲ. ಸತ್ಯತಪನಾಗಿ ತಪಸ್ಸಿನ ಸಾಧನೆಯನ್ನು ವರ್ಣಿಸುತ್ತಾ, ಸತ್ಯತಪನನ್ನು ಲಿಂಗಾಭೇಧ ಸುಂದರಂ ಎನ್ನುತ್ತಾನೆ. ಸ್ಥಾಣುರೂಪಿಯಾದ ಶಿವನಲ್ಲಿ ತನ್ನ ಮನವನ್ನು ಅರ್ಪಿಸದ ಸತ್ಯತಪನು ಮರದಕೊರಡಿನಂತಾದನು, ನಿಶ್ಚಲನಾದನು. ಬಕುಲಕ್ಷೇತ್ರದ ಪಶುಪಕ್ಷಿಗಳಲ್ಲಿ ಅಷ್ಟೇಕೆ? ಹಿಂಸಮೃಗಗಳಲ್ಲಿ ಸ್ವಭಾವಸಿದ್ಧವಾದ ವೈರವಳಿಯಿತು, ಶಾಂತಿ ನೆಲೆಸಿತು. ಈ ವೈರವು ಅನರ್ಥಕ್ಕೆ ಮೂಲ ಎಂಬುದನ್ನು ಅರ್ಥೈಸಿಕೊಂಡಂತೆ ಪಶು-ಪಕ್ಷಿಗಳಿಗೂ ಕೂಡ ಸ್ವಭಾವಸಿದ್ಧವಾದ ವೈರವನ್ನು ಮರೆತವು. ಮದ್ದಾನೆಯು ತನ್ನ ಸೊಂಡಿಲಿನಿಂದ ಸಿಂಹವನ್ನು ತುರಿಸುವುದೆಂದರೇನು.? ಶರಭದೊಡನೆ ಸಿಂಹವು ಆಟವಾಡುವುದೇನು, ನವಿಲಿನ ಕುತ್ತಿಗೆಗೆ ಜೋತುಬಿದ್ದ ಸರ್ಪಗಳೇನು. ಬಕುಲಕ್ಷೇತ್ರದಲ್ಲಿ ಪಶು-ಪಕ್ಷಿಗಳಿಗೂ ಜ್ಞಾನ ನಿಷ್ಠರಾದಂತೆ ಇದ್ದೆ. ಶರೀರದ ಅಂಗಾಂಗಗಳಲ್ಲಿ ಕಾಮವು ಹೇಗೆ ತಾನೆ ತಲೆಯೆತ್ತೀತು, ಮೋಕ್ಷಕ್ಕೆ ಮಾಲೆ ಹಾಕಿದ ಮೇಲೆ. ಪರಿಸರವನ್ನೇ ಪ್ರಭಾವಿಸುವ ಇಂತಹ ಶ್ರೇಷ್ಠವಾದ ತಪಸ್ಸಿಗೆ ಶಿವ ಮೆಚ್ಚಿದ, ಸಿದ್ಧಿಲಿಂಗದ ಮಧ್ಯದಲ್ಲಿ ಬೆಳಕು ಚಿಮ್ಮಿತು. ಪರಮೇಶ್ವರನ ಪದತಲಕ್ಕೆರಗಿದ ಸತ್ಯತಪನ ಸಂತೋಷಕ್ಕೆ ಪಾರವೇ ಇಲ್ಲ. ಕಣ್ದಣಿಯೆ ನೋಡಿದ, ಮನದುಂಬಿ ಹಾಡಿದ, ಯೋಗಿಹೃತ್ಪದ್ಮ ನಿಲಯಂ ಜಗದ್ಬೀಜಂ ಸನಾತನಂ ಎಂದು ವೇದಾಂತದಲ್ಲಿ ವರ್ಣಿತವಾದಂತೆ, ಪರಮಪದವಾದ ಅಕ್ಷರಸ್ಥಿತಿಯನ್ನು ಅರ್ಥೈಸಿಕೊಂಡು ತಪಸ್ಸಿಗೆ ಒಲಿದೆನೆಂದರೂ ಬಿಡದೇ ಭಕ್ತಿಯಿಂದ ದಂಡ ವತ್ಪ್ರಣಾಮ ಮಾಡಿ, ಆ ಪರಮಾನಂದದಲ್ಲಿ ಕೊಚ್ಚಿ ಹೋಗುತ್ತಾ ಭಗವಂತನನ್ನು ಮನದಣಿಯೆ ಕೊಂಡಾಡ ತೊಡಗಿದನು. ಭಕ್ತಿಯ ಆವೇಶದಲ್ಲಿರುವ ಸತ್ಯತಪ ಮುನಿಗೆ, ಪರಮೇಶ್ವರನು ಬಾಚಿತಬ್ಬಿಕೊಂಡಿದ್ದೂ ಅರಿಯಲಿಲ್ಲ. ಭಕ್ತಿಭಾವ ಸಮನ್ವಿತನಾಗಿ ಸ್ತುತಿಸಿದ.

ಮುಂದುವರಿಯುತ್ತದೆ.........................

Address

Bakkala
Sirsi
581336

Telephone

08283240132

Website

Alerts

Be the first to know and let us send you an email when Shree Satyanatheshwara Temple posts news and promotions. Your email address will not be used for any other purpose, and you can unsubscribe at any time.

Share

Category