06/02/2026
ಶ್ರೀಗಂಧದ ಸಂಕೀರ್ಣದಲ್ಲಿ ಮಹಾ ಗಣಪತಿ ದೇವಾಲಯ ಉದ್ಘಾಟನೆ.
ಸಿರ್ಸಿಯಲ್ಲಿ ಮಹಾ ಗಣಪತಿ ಶಿಲಾಮೂರ್ತಿ ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನೆ ಹಾಗೂ
ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮಳು ಫೆಭ್ರವರಿ 4,5, ರಂದು ಮತ್ತು ಇಂದು ಭಕ್ತಿಭಾವ ಹಾಗೂ ವೈದಿಕ ಸಂಪ್ರದಾಯಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ, ದೇವಸ್ಥಾನದ ಸಮಿತಿಯವರ ಆಹ್ವಾನದ ಮೇರೆಗೆ,ಬೆಂಗಳೂರಿನಿಂದ ಧಾರ್ಮಿಕ ದತ್ತಿ ಪರಿಷತ್ ಸದಸ್ಯರಾದ ಶ್ರೀ ಕೆ.ಎಂ. ನಾಗರಾಜು ಅವರು ನಿನ್ನೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
ವೇದಮಂತ್ರೋಚ್ಚಾರಣೆ, ಹೋಮ-ಹವನಗಳೊಂದಿಗೆ ಮಹಾ ಗಣಪತಿ ದೇವರ ಶಿಲಾಮೂರ್ತಿ ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನಾ ಕಾರ್ಯಗಳು ನೆರವೇರಿದವು. ನೂತನವಾಗಿ ನಿರ್ಮಿಸಲಾದ ದೇವಾಲಯವನ್ನು ಶ್ರೀ ಕೆ.ಎಂ. ನಾಗರಾಜು ಅವರು ಉದ್ಘಾಟಿಸಿ ಮಾತನಾಡಿದರು.
ಅವರು ತಮ್ಮ ಭಾಷಣದಲ್ಲಿ, ದೇವಾಲಯಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರಗಳಾಗಿದ್ದು, ಸಮಾಜದಲ್ಲಿ ಧಾರ್ಮಿಕ ಶ್ರದ್ಧೆ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಏಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ದೇವಾಲಯದ ಚಟುವಟಿಕೆಗಳ ಮೂಲಕ ಜನರಲ್ಲಿ ಸೇವಾಭಾವ ಮತ್ತು ಧರ್ಮನಿಷ್ಠೆ ಹೆಚ್ಚಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಗಣ್ಯರು, ಧಾರ್ಮಿಕ ಮುಖಂಡರು, ದೇವಾಲಯ ಸಮಿತಿಯ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶೇಷ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
ವಿವಿಧ ದೇವಾಲಯಗಳಿಗೆ ದೇವರುಗಳನ್ನು, ಬಾಗಿಲುಗಳನ್ನು, ವಿವಿಧ ಅಲಂಕಾರಿಕ ಗೋಪುರ ತೇರು ಇತ್ಯಾದಿಗಳನ್ನು ನಿರ್ಮಿಸುವ ಕಲಾ ಸಂಕಿರಣದ ಕುಶಲ ಕರ್ಮಿಗಳು ತಮ್ಮದೇ ಆದ ಮಂದಿರವನ್ನು ವೈಭವದಿಂದ ಮೋಹಕವಾಗಿ ನಿರ್ಮಿಸಿಕೊಂಡಿರುವಿದ ಕಂಡು ಕೆ ಎಂ ನಾಗರಾಜುರವರನ್ನು ಉಲ್ಲಾಸಿತಗೊಳಿಸಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲಾ ಭಕ್ತರಿಗೆ ವಿಶೇಷವಾಗಿ ಸಮಿತಿಯವರಿಗೆ ಶುಭಕೋರಿದರು.
ಈ ದೇವಾಲಯಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಐದು ಲಕ್ಷ ಹಣವನ್ನು ಬಿಡುಗಡೆಗೆ ಆದೇಶ ನೀಡಲಾಗಿದೆಯೆಂದು ಸಭೆಯಲ್ಲಿ ತಿಳಿಸಿದಾಗ ಭಕ್ತರ ಸಂತೋಷಕ್ಕೆ ಕೊನೆರಲಿಲ್ಲ.ಅಷ್ಟೇ ಅಲ್ಲದೆ ಸುಂದರ ಕುಸರಿ ಕಲೆಯ ಬಾಗಿಲು, ಮೂರ್ತಿಗಳು, ಅಲ್ಲದೆ ದೇವಾಲಯವನ್ನು ನೋಡಿ ಆನಂದಿಸಿದ ಶ್ರೀ ಕೆ ಎಂ ನಾಗರಾಜಣ್ಣನವರು ವೈಯಕ್ತಿಕವಾಗಿಯೂ ಒಂದು ಲಕ್ಷ ದೇಣಿಗೆ ನೀಡಿದ್ದು, ಭಕ್ತ ವೃಂದದಲ್ಲಿ ಸಂತಸವು ಚಿಮ್ಮಿಸಿತ್ತು.
ಮೊದಲನೆಯ ದಿನದ ಸಂಜೆ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಮಹಾ ಮನಿಯವರ ಕಾರ್ಯಕ್ರಮ ಜರುಗಿ ಸಮೂಹ ನಗೆಯಲ್ಲಿ ತೇಲಿಸಿತ್ತು.
ನಿನ್ನೆ ಸಂಜೆ ಆರ್ಕೆಸ್ಟ್ರಾ, ಹಾಗೂ ಸ್ಥಳೀಯ ಕುಶಲಕರ್ಮಿಗಳ ಮಕ್ಕಳು, ಕುಟುಂಬದವರಿಂದ ಡಾನ್ಸ್, ಹಾಡು ಇತ್ಯಾದಿಗಳು ಸಾಂಗವಾಗಿ ನೆಡೆದು, ದೇವಸ್ಥಾನದ ಕೆಲಸಕ್ಕೆ ಶ್ರಮಿಸಿದವರಿಗೆ, ಕುಟುಂಬದವರಿಗೆ ಸಂತಸದಲ್ಲಿ ಸಿಹಿ ಜೇನು ನುಂಗಿದಂತಾಗಿತ್ತು.
ಇಂದೂ ಸಹ ಧಾರ್ಮಿಕ ಕಾರ್ಯಕ್ರಮಗಳು ಸಾಗುತ್ತಾಲಿವೆ.
ಶ್ರೀ ಕೆ ಎಂ ನಾಗರಾಜು ರವರು ದೇವಸ್ಥಾನಕ್ಕೂ ಬರುವ ಮುಂಚೆ ರಾಜ್ಯದ ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಮಾರಿಕಾಂಬಾ ಗುಡಿಗೆ ದರ್ಶನವಿತ್ತು ಸಕಲರಿಗೂ ಒಳ್ಳೆಯದನ್ನು ದಯಪಾಲಿಸ