25/10/2020
*ಶ್ರೀ ಚಾಮುಂಡೇಶ್ವರಿ ದೇವಾಲಯ, ಮಳಲಿ ಗ್ರಾಮ,ಸಕಲೇಶಪುರ,ಹಾಸನ.*
ನವರಾತ್ರಿ ಆಚರಣೆಯ 9ನೆಯ ದಿನವಾದ ಇಂದು ಅಮ್ಮನವರಿಗೆ
*ಶ್ರೀದೇವಿ ಸಿದ್ದಿದಾತ್ರಿ* ಆಹ್ವಾನ ಪೂರ್ವಾಕ ಷೋಡೋಪಚಾರ ಪೂಜೆಗಳೊಂದಿಗೆ ಪೂಜಿಸಿ ಆರಾಧಿಸಲಾಯಿತು.
www.malalisakaleshapura.org
ನವರಾತ್ರಿಯ #ಒಂಬತ್ತನೇ ದಿನ #ಮಹಾನವಮಿಯ #ನವದುರ್ಗೆಯರ ಆರಾಧನೆಯಲ್ಲಿ #ತಾಯಿಸಿದ್ದಿದಾತ್ರಿ
#ಸಿದ್ದಿದಾತ್ರಿ
ಸಿದ್ಧಿಧಾತ್ರಿ ದೇವಿಯ ಸ್ತುತಿ ಯಾ ದೇವಿ ಸರ್ವಭೂತೇಶು ಸಿದ್ಧಿಧಾತ್ರಿ ರೂಪೇಣ ಸಂತಿತಃ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ನವ ದುರ್ಗೆಯರಲ್ಲಿ ಕೊನೆಯವಳು #ಸಿದ್ದಿದಾತ್ರಿ.
ಮಾರ್ಕಂಡೇಯ ಪುರಾಣಗಳ ಪ್ರಕಾರ ಇವಳು ಎಲ್ಲಾ ರೀತಿಯ ಸಿದ್ದಿಯನ್ನು ಕರುಣಿಸುವಳು, ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತದೆ. ಸಿದ್ಧಿದಾತ್ರಿ ಸ್ವರೂಪ ಅತ್ಯಂತ ವಿಶಿಷ್ಟವಾಗಿದೆ. ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಕ ಹಿಡಿದಿದ್ದಾಳೆ , ಮತ್ತು ಕಮಲ ಪುಷ್ಪವನ್ನು ಹಿಡಿದುಕೊಂಡಿದ್ದಾಳೆ. ಸಿದ್ಧಿದಾತ್ರಿ ಮಹಾಲಕ್ಷ್ಮಿಯ ಸ್ವರೂಪ , ಭಕ್ತರ ಭಕ್ತಿಗೆ ಪ್ರಸನ್ನಳಾಗಿ ದೇವಿ ವರವನ್ನು ಕೊಡುತ್ತಾಳೆ.
ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.
ಹೆಸರೇ ಸೂಚಿಸುವಂತೆ #ಸಿದ್ಧಿಧಾತ್ರಿಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು.
ಅಷ್ಟಸಿದ್ಧಿಗಳಾದ "ಅಣಿಮ, ಮಹಿಮ, ಗರಿಮ, ಲಘಿಮ,ಪ್ರಾಪ್ತಿ,ಪ್ರಾಖ್ಯಮ್ಯ, ಈಷಿತ್ವ,ವಷಿತ್ವ"ಇವುಗಳನ್ನು ನೀಡುತ್ತಾಳೆ ಎಂದೂ ಉಲ್ಲೇಖಿಸಿದೆ....
ಶಿವನು ಈಕೆಯನ್ನು ಪೂಜಿಸಿ ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ.... ಶಕ್ತಿಯನ್ನು ಒಲಿಸಿದ ಶಿವ ಅರ್ಧನಾರೀಶ್ವರನಾದ ಗಂಡು ಹೆಣ್ಣು ಒಂದೇ ಎಂದು ಸಾರಿದ್ದು ಅರ್ಧನಾರೀಶ್ವರ ತತ್ವ...
ಈಕೆ ಕಮಲದ ಮೇಲೆ ಕುಳಿತಿದ್ದು ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ...
ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ.....
ತಂತ್ರ ಮಾಡುವವರು, ಸಾಧಕರು, ಯೋಗಿಗಳು ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ...
ಎಲ್ಲಾ ಚಕ್ರ ಜಾಗ್ರತವಾದ ಮೇಲೆ ಮನುಷ್ಯ ಮಹಾಗೌರಿಯಂತೆ ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ ಸಿದ್ಧಿಯನು ಹೊಂದಬಹುದು..ತಥಾ ಸಿದ್ಧಿದಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ....
ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ
ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಆರಾಧನೆ ಮಾಡಿದರೆ ಶ್ರೇಯಸ್ಕರ, ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆ ಪಡೆಯುವುದಕ್ಕೆ, ನಿರಂತರ ಪ್ರಯತ್ನ ಮಾಡಬೇಕು. ಈ ದೇವಿಯ ಉಪಾಸನೆಯಿಂದ ಭಕ್ತರ ಮತ್ತು ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.ಈ ದೇವಿಯ ಆರಾಧನೆಯ ಪಲಗಳು ಹೀಗಿವೆ… ಸರ್ವ ಸಿದ್ಧಿಗಳನ್ನು ಕೊಡುವ ದೇವಿ #ಸಿದ್ಧಿದಾತ್ರಿ.
ಈ ದೇವಿಯ ಉಪಾಸನೆಯಿಂದ ಅಷ್ಟ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ.ಈ ದೇವಿಯನ್ನು ಪೂಜಿಸಿದರೆ ರಕ್ಷಣೆ ಸಿಗುತ್ತದೆ, ಸರ್ವ ಕಾರ್ಯದಲ್ಲಿ ವಿಜಯ ದೊರಕಿಸುವ ಸಾಮರ್ಥ್ಯ ಕರುಣಿಸುತ