17/05/2026
*ವಿಜಯನಗರ ಸಾಮ್ರಾಜ್ಯದ ಪಾಳೆಗಾರ, ಕೆಳದಿ ಸಂಸ್ಥಾನದ ಮಹಾ ಮಂತ್ರಿ ಉಗ್ರಾಣಿಮನೆ ಕಾಸರಗೋಡು ತಿಮ್ಮಣ್ಣ ನಾಯ್ಕರ ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ೧೧೬ ದೈವ ದೇವರುಗಳೊಂದಿಗೆ ನೆಲೆನಿಂತ ಕೋಟೆ ಭೂತಪ್ಪನು*
ದಿನಾಂಕ: ೧೬-೦೫-೨೦೨೬ರ ಶನಿವಾರದ ವಿಶೇಷ ಪೂಜೆಯಲ್ಲಿ ಸದ್ಭಕ್ತನ ಮೇಲೆ ಆಹ್ವಾನಿಸಿದ *ಶ್ರೀ ಕ್ಷೇತ್ರ ಹೊಗೆವಡ್ಡಿ ಕೋಟೆ ಭೂತಪ್ಪನು* ನುಡಿದಂತೆ ತನ್ನ ಸಾಂಕೇತಿಕ ಕಲ್ಲು/ಬಿಂಬವನ್ನು ತಾನೇ ಹುಡುಕಿಕೊಟ್ಟದ್ದು ನಿಜಕ್ಕೂ ವಿಸ್ಮಯವೇ ಸರಿ.
ನಂತರ ಅದೇ ಸಾಂಕೇತಿಕ ಕಲ್ಲು/ಬಿಂಬವನ್ನು ಕೋಟೆ ಭೂತಪ್ಪನ ನೂತನ ಗುತ್ತು (ಸ್ಥಳದಲ್ಲಿ) ಇಟ್ಟು ಭೂತಪ್ಪನ ಆದೇಶದ ನುಡಿಯಂತೆ ಸಾಂಕೇತಿಕವಾಗಿ ಪೂಜೆ ನಡೆಯಿತು.
ವಿ. ಸೂ: ಭೂತಪ್ಪನ ಆದೇಶದಂತೆ ಮುಂದಿನ ದಿನಗಳಲ್ಲಿ ಪ್ರತಿ ಅಮವಾಸ್ಯೆಯ ದಿನದಂದು ಭೂತಪ್ಪನ ಸಾನಿಧ್ಯದಲ್ಲಿ ವಿಶೇಷ ಪೂಜೆ ನಡೆಯಲಿದೆ.
*ಭೂತಪ್ಪನ ದರ್ಶನ ನುಡಿಗಳಿಂದ ಸದ್ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಅವಕಾಶ ಇರುತ್ತದೆ.*
*ಧರ್ಮದರ್ಶಿಗಳೊಂದಿಗೆ.*
ಆಡಳಿತ ಮಂಡಳಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ*