31/12/2025
ಶೃತೀಶ ಸೇವಾ ಸಮಿತಿ ಚಾರಿಟೇಬಲ್ ಟ್ರಸ್ಟಿನ
ವಿದ್ವಾಂಸರಿಂದ ನೂತನ ಧರ್ಮ ಕ್ರಾಂತಿ
ಲೋಕಕಲ್ಯಾಣಕ್ಕಾಗಿ ಪ್ರತಿನಿತ್ಯವು ಆಚರಿಸುವ ವಿಷಯಗಳು ಹೀಗೆ ಇವೆ
1) ದೇಶದ ಯೋಧರಿಗೋಸ್ಕರ ಪ್ರಾರ್ಥನೆ.
ದೇಶದ ಯೋಧರಿಗೆ ಯಾವುದೇ ತರಹದ ತೊಂದರೆ ಆಗಬಾರದು ಅಂತ ನರಸಿಂಹಸ್ತುತಿ ಪಾರಾಯಣ ಮಾಡುವದು ಇದನ್ನು ಪಂಡಿತ ಸೌರಭಾಚಾರ ಕಲಬುರಗಿ ಇವರು ನಡೆಸಿಕೊಡುತ್ತಿದ್ದಾರೆ.
2 ) ದೇಶದ ಶುದ್ಧ ರಾಜಕಾರಣಿಗಳಿಗೋಸ್ಕರ ಪ್ರಾರ್ಥನೆ. ಪ್ರಾಮಾಣಿಕ ರಾಜಕಾರಣಿಗಳಿಗೆ ಯಾವದೇ ತೊಂದರೆ ಆಗದಂತೆ , ಅವರು ಭ್ರಷ್ಟಾಚಾರ ಮುಕ್ತಾರಾಗಬೇಕು, ಅವರುಗಳು ತಮ್ಮ ತಮ್ಮ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಬೇಕೆಂದು ನಾರಾಯಣವರ್ಮ ಪಾರಾಯಣ ಮಾಡುವದು. ಇದನ್ನು ಪಂಡಿತ ಮಾಧವಚಾರ ಕಲಬುರಗಿ ನಡೆಸಿಕೊಡುತ್ತಿದ್ದಾರೆ.
3 ದೇಶದ ರೈತರಿಗೋಸ್ಕರ ಪ್ರಾರ್ಥನೆ.
ದೇಶದಲ್ಲಿ ಅನ್ನದ ಕೊರತೆ ಸರ್ವಥಾ ಆಗ್ಬಾರ್ದು, ದೇಶದ ರೈತರಿಗೆ ಯಾವಾಗಲು ಒಳ್ಳೇದು ಆಗಬೇಕು ಅಂತ ಅನ್ನಬ್ರಹ್ಮ ಕೃಷ್ಣ ನ, ಕೃಷ್ಣಾಯ ವಾಸುದೇವಾಯ
ಶ್ಲೋಕ ಜಪ ಇದನ್ನು ಶಶಿಕಾಂತಾಚಾರ್ ಕಲಬುರಗಿ ನಡೆಸಿಕೊಡು ತ್ತಿದ್ದಾರೆ.
4) ದೇಶದ ಗೂಢಚಾರರಿಗೋಸ್ಕರ (spy )
ಪ್ರಾರ್ಥನೆ.
ದೇಶದ ಹೊರಗಿದ್ದು ದೇಶಕ್ಕೋಸ್ಕರ ಕಾರ್ಯ ಮಾಡುವ ಆ ಜನರಿಗೆ ಯಾವದೇ ತರಹದ ತೊಂದರೆ ಆಗದೆ, ಅವರು ಅಂದುಕೊಂಡ ಎಲ್ಲ ಕೆಲಸಗಳು ಯಶಸ್ವಿಯಾಗಲಿ ಎಂದು ಸುದರ್ಶನಮಂತ್ರ ಜಪ ಇದನ್ನು ಪಂಡಿತ ವಿಷ್ಣುಆಚಾರ ಕಲಬುರಗಿ ನಡೆಸಿಕೊಡುತ್ತಿದ್ದಾರೆ.
5) ದೇಶದ ಸಜ್ಜನರಿಗೋಸ್ಕರ ಪ್ರಾರ್ಥನೆ.
ದೇಶದ ಪ್ರತಿಯೊಬ್ಬ ಸಜ್ಜನನಿಗೆ ಯಾವುದೇ ತರಹದ ತೊಂದ್ರೆ ಆಗಬಾರದು ಎಂದು ಮನ್ಯುಸೂಕ್ತ ಪಾರಾಯಣ ಇದನ್ನು ಪಂಡಿತ ಕಿರಣಾಚಾರ ಕಲಬುರಗಿ ನಡೆಸಿಕೊಡುತ್ತಿದ್ದಾರೆ.
6 ) ದೇಶಕ್ಕೆ, ದೇಶದ ಸಜ್ಜನರಿಗೆ ಆರ್ಥಿಕ ಅಭಿವೃದ್ಧಿಗೆ ಪ್ರಾರ್ಥನೆ.
ದೇಶದ ಎಲ್ಲ ಸಜ್ಜನರಿಗೆ
ಸಮೃದ್ಧವಾಗಿ ಧನಪ್ರಾಪ್ತಿಗೊಸ್ಕರ ಶ್ರೀಸೂಕ್ತ ಪಾರಾಯಣ ಇದನ್ನು ಪಂಡಿತ ಭಾರತೀಶಾಚಾರ ಕಲಬುರಗಿ ನಡೆಸಿಕೊಡುತ್ತಿದ್ದಾರೆ.
7) ದೇಶದ ಮತ್ತು ದೇಶದಲ್ಲಿಹ ಜನರ ಭೂ ಸಂಪತ್ತಿಗೋಸ್ಕರ ಪ್ರಾರ್ಥನೆ.
ಶತ್ರುದೇಶಗಳಿಂದ ನಮ್ಮ ದೇಶದ ಭೂಮಿಗೆ ತೊಂದ್ರೆ ಆಗ್ಬಾರ್ದು. ಸಜ್ಜನರಿಗೆ ಭೂ ಸಂಬಂಧೀತ ಯಾವ ವ್ಯಾಜ ಆಗದಂತೆ ವರಾಹ ಮಂತ್ರ ಜಪ ಆಚರಣೆ ಇದನ್ನು ಭಾರ್ಗವಾಚಾರ ಕಲಬುರಗಿ ನಡೆಸಿಕೊಡುತ್ತಿದ್ದಾರೆ.
8 ದೇಶದ ಯುವಕ ಯುವತಿಯರಿಗೆ ವಿವಾಹ, ಯೋಗ್ಯ ಸಂತಾನವಾಗುವದಕ್ಕೆ ಜನಾರ್ಧನಶ್ಚ ರುಕ್ಮಿಣೀ ಕರಂ ಶುಭೇ ದಿನೇs ಗ್ರಹೀತ್ ಈ ಶ್ಲೋಕ ಜಪ. ಇದನ್ನು ಪಂಡಿತ ಸಮೀರಾಚಾರ ಕಲಬುರಗಿ ನಡೆಸಿಕೊಡುತ್ತಿದ್ದಾರೆ..
9 ) ದೇಶದ ಯೋಧರ,ರಾಜರ, ಸಜ್ಜನರ ಅರೋಗ್ಯ ಪ್ರಾರ್ಥನೆ.
ದೇಶದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸಲುವಾಗಿ ಧನ್ವಂತರಿ ಮಂತ್ರ ಜಪ ಇದನ್ನು ಪಂಡಿತ ನಚಿಕೇತಾಚಾರ ಕಲಬುರ್ಗಿ ನಡೆಸಿಕೊಡುತ್ತಿದ್ದಾರೆ.