ಸುವರ್ಣ ಕರ್ನಾಟಕ

ಸುವರ್ಣ  ಕರ್ನಾಟಕ ಭಾರತೀಯ ಹೆಮ್ಮೆಯ ಕನ್ನಡಿಗ

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಸ್ಕಿ ತಾಲೂಕು ಭಾರತದ ಮಹತ್ವಾಕಾಂಕ್ಷಿ ತಾಲೂಕಾಗಿ ಹೊರಹೊಮ್ಮಿದೆ. ನೀತಿ ಆಯೋಗದಿಂದ ಪುರಸ್ಕಾರ ದೊರ...
09/12/2023

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಸ್ಕಿ ತಾಲೂಕು ಭಾರತದ ಮಹತ್ವಾಕಾಂಕ್ಷಿ ತಾಲೂಕಾಗಿ ಹೊರಹೊಮ್ಮಿದೆ.

ನೀತಿ ಆಯೋಗದಿಂದ ಪುರಸ್ಕಾರ ದೊರೆತಿರುವುದು ಹೆಮ್ಮೆಯ ವಿಷಯ 180 ತಾಲೂಕನ್ನು ಮಸ್ಕಿ ಹಿಂದಿಕ್ಕಿದೆ. ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಪ್ರಧಾನ ಮಂತ್ರಿ ಶ್ರೀ Narendra Modi ಅವರ ಸಂಕಲ್ಪದಂತೆ ಗ್ರಾಮೀಣ ಭಾಗ ಅಭಿವೃದ್ಧಿಯಾಗುತ್ತಿದೆ.

ಇಲ್ಲಿಯವರೆಗೆ ಎಣಿಕೆ ಮಾಡಿದ್ದು 225 ಕೋಟಿ, ಒಟ್ಟು 400 ಕೋಟಿ ಇರಬಹುದಂತೆ. ನಗದು ಹಣವೇ ಇಷ್ಟು ಇದೆ, ಆಸ್ತಿ ಎಷ್ಟಿರಬಹುದು ಊಹಿಸಿ.
09/12/2023

ಇಲ್ಲಿಯವರೆಗೆ ಎಣಿಕೆ ಮಾಡಿದ್ದು 225 ಕೋಟಿ, ಒಟ್ಟು 400 ಕೋಟಿ ಇರಬಹುದಂತೆ. ನಗದು ಹಣವೇ ಇಷ್ಟು ಇದೆ, ಆಸ್ತಿ ಎಷ್ಟಿರಬಹುದು ಊಹಿಸಿ.

ಇನ್ಸ್ಟಾಗ್ರಾಮ್ನಲ್ಲಿ ಹನ್ನೆರಡು ಲಕ್ಷ ಫಾಲೋವರ್ಸ್ ಹೊಂದಿರುವ ನಟಿ ಚಾಹತ್ ಪಾಂಡೆ ಮಧ್ಯ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿ 2292 ಓ...
05/12/2023

ಇನ್ಸ್ಟಾಗ್ರಾಮ್ನಲ್ಲಿ ಹನ್ನೆರಡು ಲಕ್ಷ ಫಾಲೋವರ್ಸ್ ಹೊಂದಿರುವ ನಟಿ ಚಾಹತ್ ಪಾಂಡೆ ಮಧ್ಯ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿ 2292 ಓಟು ಪಡೆದು ಡಿಪಾಸಿಟ್ ಹೋಯ್ತು ಪ್ರಂಡ್ಸ

05/12/2023

ಮಾವುತರ ಭಾವನಾತ್ಮಕವಾದ ಒಂದು ಸಣ್ಣ ಆಸೆಯನ್ನು ಸರ್ಕಾರಕ್ಕೆ ಈಡೇರಿಸಲಾಗಲಿಲ್ಲವೇ?

ನಿನ್ನೆ ಸಕಲೇಶಪುರ ಸಮೀಪ ನಡೆದ ಕಾರ್ಯಾಚರಣೆಯಲ್ಲಿ ಆನೆ ಅರ್ಜುನನ ಅಂತ್ಯವಾಗಿದೆ. ಅರ್ಜುನ ಮೂಲತಃ ಎಚ್.ಡಿ ಕೋಟೆ ಸಮೀಪದ ಬಳ್ಳೆ ಆನೆ ಶಿಬಿರದವನು. ಆತನ ಮೃತದೇಹವನ್ನು ಅಲ್ಲಿಗೆ ಕೊಂಡೊಯ್ಯಬೇಕು ಅನ್ನೋದು ಅರ್ಜುನನ ಮಾವುತ ಹಾಗೂ ಕಾವಾಡಿಯವರ ಬೇಡಿಕೆಯಾಗಿತ್ತು, ಆದರೆ ಅದಕ್ಕೆ ಅರಣ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸ್ಪಂದಿಸಲೇ ಇಲ್ಲ!

ಆನೆಯ ಮೃತದೇಹವನ್ನು ಬಳ್ಳೆ ಶಿಬಿರಕ್ಕೆ ಕೊಂಡೊಯ್ಯದಿದ್ದರೆ ಏನಾಗುತ್ತೆ ಅಂತ ನೀವು ಪ್ರಶ್ನಿಸಬಹುದು. ಈ ಬಳ್ಳೆ ಆನೆ ಶಿಬಿರ ಇದ್ಯಲ್ಲ ಇದು ದಸಾರ ಅಂಬಾರಿ ಹೊತ್ತ ಪ್ರಮುಖ ಆನೆಗಳನ್ನು ಪಳಗಿಸಿದ ಜಾಗ, ಇದೇ ಆನೆ ಶಿಬಿರದ ದ್ರೋಣ 18 ಬಾರಿ ಅಂಬಾರಿ ಹೊತ್ತವನು, ರಾಜೇಂದ್ರ 3 ಬಾರಿ ಅಂಬಾರಿ ಹೊತ್ತವನು, ಇನ್ನು ಅರ್ಜುನ 8 ಬಾರಿ ಅಂಬಾರಿ ಹೊತ್ತಿದ್ದಾನೆ. ಬಳ್ಳೆ ಶಿಬಿರದಲ್ಲಿ ದ್ರೋಣ ಹಾಗೂ ರಾಜೇಂದ್ರನ ಸಮಾಧಿ ಇದೆ, ಅದಕ್ಕೆ ವರ್ಷಕ್ಕೊಮ್ಮೆ ಪೂಜೆ ಕೂಡ ಸಲ್ಲಿಸಲಾಗುತ್ತೆ. ಆದರೆ ಅರ್ಜುನ ಗೊತ್ತುಗುರಿ ಇಲ್ಲದ ಜಾಗದಲ್ಲಿ ಸತ್ತು ಮಲಗಿದ್ದಾನೆ. ಆತನ ಮೃತದೇಹವಿದ್ದ ಜಾಗಕ್ಕೆ ಕನಿಷ್ಠ ಒಂದು ಶಾಮಿಯಾನ ಹಾಕೋದಕ್ಕೂ ಇವರಿಗೆ ಯೋಗ್ಯತೆ ಇರಲಿಲ್ಲ, ಇನ್ನು ಸ್ಮಾರಕ ನಿರ್ಮಿಸ್ತಾರಾ?

30/11/2023

ಕೇಳಿಸಿಕೊಳ್ಳಿ ನಿಜಕ್ಕೂ ಅದ್ಬುತ!!❤️

ಟೀಂ ಇಂಡಿಯಾದ ಕೋಚ್ ಆಗಿ ಉಳಿಯಲಿದ್ದಾರೆ ರಾಹುಲ್ ದ್ರಾವಿಡ್!!❤️ಶ್ಲಾಘನೀಯ 🙏
30/11/2023

ಟೀಂ ಇಂಡಿಯಾದ ಕೋಚ್ ಆಗಿ ಉಳಿಯಲಿದ್ದಾರೆ ರಾಹುಲ್ ದ್ರಾವಿಡ್!!❤️
ಶ್ಲಾಘನೀಯ 🙏

ಕೇಂದ್ರದ ಉಚಿತ ಅಕ್ಕಿ ಇನ್ನೂ ೫ ವರ್ಷಕ್ಕೆ ಮುಂದುವರಿಕೆ...
30/11/2023

ಕೇಂದ್ರದ ಉಚಿತ ಅಕ್ಕಿ ಇನ್ನೂ ೫ ವರ್ಷಕ್ಕೆ ಮುಂದುವರಿಕೆ...

29/11/2023

ನಮ್ಮ ಪದ ಜಾನಪದ‌...

ಫಲಾಪೇಕ್ಷೆ ಇರದೆ ಮಾಡಿದ ಪ್ರಾರ್ಥನೆಗೆ ಫಲ ಬಂದೆ ಬರುತ್ತದೆ!ಅಂದಾಜು ಒಂದುವರೆ ಲಕ್ಷ ಜನ ಕಣ್ಣನ್ನು ಮಿಟುಕಿಸದೆ ನೋಡುತ್ತಿದ್ದಾರೆ, ಅಲ್ಲಿ ಹೆಚ್ಚಿ...
29/11/2023

ಫಲಾಪೇಕ್ಷೆ ಇರದೆ ಮಾಡಿದ ಪ್ರಾರ್ಥನೆಗೆ ಫಲ ಬಂದೆ ಬರುತ್ತದೆ!

ಅಂದಾಜು ಒಂದುವರೆ ಲಕ್ಷ ಜನ ಕಣ್ಣನ್ನು ಮಿಟುಕಿಸದೆ ನೋಡುತ್ತಿದ್ದಾರೆ, ಅಲ್ಲಿ ಹೆಚ್ಚಿನವರ ಪ್ರಾರ್ಥನೆ ಭಾರತ ಗೆಲ್ಲಬೇಕು, ವಿಶ್ವಕಪ್ ಭಾರತ ಪಾಲಾಗಬೇಕು, ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದರೆ, ಅನೇಕರು ಭಾರತ ಸೋಲಬೇಕು ಎಂದು ಪ್ರಾರ್ಥನೆ ಮಾಡಿದ್ದಾರೆ, ಹೌದು ಇದೊಂದು ಆಟ ಮಾತ್ರ, ಸೋಲು ಮತ್ತು ಗೆಲುವು ಆಟದಲ್ಲಿ ಸಾಮಾನ್ಯ, ಇಲ್ಲಿ ಭಗವಂತ ಇಂತಹ ಆಟದ ಗೆಲುವಿಗೆ ಪ್ರಾರ್ಥನೆ ಮಾಡಿದರೆ ಒಪ್ಪುವನೆ? ಖಂಡಿತ ಇಲ್ಲ, ಆದರೆ ಕೆಲವು ಪ್ರಾರ್ಥನೆಗಳನ್ನು ಭಗವಂತ ಕೇಳುತ್ತಾನೆ, ಅಲ್ಲಿ ಸ್ಪಂಧಿಸುತ್ತಾನೆ, ರಕ್ಷಿಸುವ ಎಲ್ಲ ಜವಾಬ್ದಾರಿಯನ್ನು ಅವನೇ ಹೊರುತ್ತಾನೆ, ಇದಕ್ಕೆ ಸಾಕ್ಷಿಯನ್ನು ಕೊಡುತ್ತಾನೆ.

ನವೆಂಬರ್ 12 ಒಂದು ಕರಾಳದಿನವಾಗಿತ್ತು, ಉತ್ತರಕಾಶಿಯ ಸುರಂಗ ಕೊರೆಯುವಾಗ ಅದು ಕುಸಿದು 41 ಜನ ಕಾರ್ಮಿಕರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಅಲ್ಲಿಂದ ಹೊರಬರುವ ಎಲ್ಲ ದಾರಿ ಮುಚ್ಚಿಹೋಗಿದ್ದವು, ಗಾಳಿ, ನೀರು, ಬೆಳಕು ಎಲ್ಲವೂ ಸ್ಥಗಿತ, 41 ಜನರು ಸುರಂಗದ ಒಳಗೆ, ಅವರ ಕುಟುಂಬಗಳ ಗೋಳು, ಬದುಕಿಬರುವ ಸಾಧ್ಯತೆ ಬಹಳ ಕಡಿಮೆ, ಸರ್ಕಾರಗಳು ಕೂಡಲೆ ಕಾರ್ಯಪ್ರವೃತ್ತವಾದವು, ಕೇಂದ್ರ ಮತ್ತು ರಾಜ್ಜ ಸರ್ಕಾರಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಲು ಸಿದ್ಧವಾದವು, NDRF ಪಡೆ ಹಗಲು ರಾತ್ರೆ ಎಲ್ಲವನ್ನೂ ಮರೆತು ಕಾರ್ಯಕ್ಷೇತ್ರಕ್ಕೆ ಧುಮುಕಿತು, ಶತಾಯ ಗತಾಯ 41 ಜನರನ್ನು ರಕ್ಷಿಸಲೇ ಬೇಕು ಎಂದು ಎಲ್ಲ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಗಳು ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದವು, ದಿನಗಳು ಉರುಳುತ್ತಿದ್ದವು, ಸತತ ಪ್ರಯತ್ನದಿಂದ ಸಿಲುಕಿರುವ ಎಲ್ಲರಿಗೂ ಊಟ, ನೀರು ತಲುಪಿಸುವಷ್ಟು ಸಣ್ಣ 'ಇಲಿಮಾಟೆ' ಕೊರೆದು ಅಲ್ಲಿ ಸಿಲುಕಿಹಾಕಿಕೊಂಡವರೊಂದಿಗೆ ಸಂಪರ್ಕ ಸಾಧಿಸಿದವು, ರಕ್ಷಣಾ ಇಲಾಖೆಗಳಿಗೆ ಹುರುಪು ಹೆಚ್ಚಾಯಿತು, ಹೌದು ಸುರಂಗದಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿಗಿಂತ, ಅವರನ್ನು ಉಳಿಸಲು ಹೊರಟ ಪಡೆಗಳಿಗೆ ಹೆಚ್ಚು ಭಯವಿರುತ್ತದೆ, ಸುರಂಗ ಇನ್ನೂ ಹೆಚ್ಚು ಕುಸಿಯದಂತೆ ಜಾಗ್ರತೆ ವಹಿಸಬೇಕು, ಒಳಗಿದ್ದವರಿಗೆ ಯಾವುದೇ ತೊಂದರೆ ಆಗಬಾರದು, ಪ್ರಧಾನ ಮಂತ್ರಿ ಪ್ರತಿಕ್ಷಣ ಮಾಹಿತಿ ಪಡೆಯುವುದಲ್ಲದೆ, ಭಾರತದ ಸೇನೆಯನ್ನು ನೆರವಿಗೆ ಕಳಿಸುವ ವ್ಯವಸ್ಥೆ ಮಾಡಿದ್ದರು.

ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ, ಮನೆ ಮನೆಯಲ್ಲಿ ಪ್ರಾರ್ಥನೆ ಪ್ರಾರಂಭವಾಯಿತು, ಪ್ರತಿಯೊಬ್ಬ ಹಿಂದು ಮನೆಯಲ್ಲಿ ದೀಪವನ್ನು ಹಚ್ಚಿ ಭಗವಂತನ ಮೋರೆಹೋಗಿದ್ದರು, ಭಗವಂತ ಅದಾಗಾಗಲೆ 41 ಜನರಿಗೆ ಅಗತ್ಯದ ಎಲ್ಲವನ್ನೂ ಕೊಟ್ಟಿರಬೇಕು, ಅಲ್ಲಿ ಸಿಲುಕ್ಕಿದ್ದವರು ಕಿಂಚಿತ್ತು ವಿಚಲಿತರಾಗಲಿಲ್ಲ, ಅವರಿಗೆ ಗೊತ್ತಿತ್ತು, ಅಲ್ಲಿರುವುದು NDRF, ಭಾರತೀಯ ಸೇನೆ ನಮ್ಮನ್ನು ಖಂಡಿತವಾಗಿ ಕಾಪಾಡುತ್ತಾರೆ, ನಾವು ಧೈರ್ಯದಿಂದ ಇರಬೇಕು. ಒಗ್ಗಟ್ಟಿನ ಫಲ16 ದಿನಗಳ ಶ್ರಮ, ಇಂದು 41 ಜನರೂ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ, ಎಲ್ಲರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಫಲಾಪೇಕ್ಷೆ ಇಲ್ಲದೆ ಮಾಡಿದ ಪ್ರಾರ್ಥನೆಗೆ ಪೂರ್ತಿ ಫಲ ಲಭಿಸಿದೆ.

28/06/2023

ಕಳೆದ ಹತ್ತು ದಿನಗಳಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ:

💰ರಾಜ್ಯದ ಜಿಎಸ್‌ಟಿ ಮೊತ್ತ: ₹4,314 ಕೋಟಿ

💵 ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ: ₹3,647 ಕೋಟಿ

🚝 ನಮ್ಮ ಮೆಟ್ರೋ ವಿಸ್ತರಣೆಗೆ ಹಾಗೂ 2ನೇ ಹಂತದ ಕಾಮಗಾರಿಗೆ 3045 ಕೋಟಿ ಅನುದಾನ.

🌾 ತಿಂಗಳ ಉಚಿತ ಅಕ್ಕಿ: 18,083.33 ಮೆಟ್ರಿಕ್‌ ಟನ್ (ಪ್ರತೀ BPL ಕಾರ್ಡುದಾರರಿಗೆ 5kg)

🚝 ರಾಜ್ಯಕ್ಕೆ ಎರಡನೇ ವಂದೇ ಭಾರತ್‌ ರೈಲು (ಹುಬ್ಬಳ್ಳಿ- ಬೆಂಗಳೂರು)

🇺🇸 ಅಮೆರಿಕಾದ ಸಂಸ್ಥೆಗಳೊಂದಿಗೆ ರಾಜ್ಯದಲ್ಲಿ ಹೂಡಿಕೆ ಮಾಡಲು ಮಾಡಿಕೊಂಡ ಒಡಂಬಡಿಕೆಗಳು.

🛒 ಇಷ್ಟೇ ಅಲ್ಲದೆ, ಜನಸಾಮಾನ್ಯರನ್ನು ತಲುಪಿದೆ ಕೇಂದ್ರದ ವಿವಿಧ ಯೋಜನೆಗಳ ಫಲ.

ಯಾವುದೇ ಪಕ್ಷದ ಸರ್ಕಾರಗಳು ಆಗಲಿ , ಉಚಿತ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಜನರನ್ನು ಮಂಗ ಮಾಡಿ ಪಕ್ಷದ ಭವಿಷ್ಯ ಗಟ್ಟಿ ಮಾಡಿಕೊಳ್ಳುದನ್ನು ಬಿಟ್ಟು,...
12/06/2023

ಯಾವುದೇ ಪಕ್ಷದ ಸರ್ಕಾರಗಳು ಆಗಲಿ , ಉಚಿತ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಜನರನ್ನು ಮಂಗ ಮಾಡಿ ಪಕ್ಷದ ಭವಿಷ್ಯ ಗಟ್ಟಿ ಮಾಡಿಕೊಳ್ಳುದನ್ನು ಬಿಟ್ಟು,ದೇಶದ ಭವಿಷ್ಯದ ಬಗ್ಗೆ ಕೂಡ ಸ್ವಲ್ಪ ಗಂಭೀರವಾಗಿ ಚಿಂತನೆ ಮಾಡುವುದು ಒಳ್ಳೆಯದು.... ಈ ರೀತಿ ಕೊಡ್ತಾ ಹೋದ್ರೆ ನಾವು ಅಮೇರಿಕಾ, ಚೀನಾ, ಜರ್ಮನಿ, ಲೆವೆಲ್ ಗೆ ಬೆಳೆಯೋದು ಹೇಗೆ?

ಕಲ್ಲು ಹೊಡೆಯುವುದು ಅಲ್ಲ,ಕೈ ಮುಗಿಯುವುದು ನಮ್ಮ ಸಂಸ್ಕೃತಿ........
11/06/2023

ಕಲ್ಲು ಹೊಡೆಯುವುದು ಅಲ್ಲ,
ಕೈ ಮುಗಿಯುವುದು ನಮ್ಮ ಸಂಸ್ಕೃತಿ........

Address

Mysore

Website

Alerts

Be the first to know and let us send you an email when ಸುವರ್ಣ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share

Category