22/05/2026
ತುಳುನಾಡಿನ ಕೊನೆಯ ಜಾತ್ರೆ ಎಂದೇ ಖ್ಯಾತಿ ಪಡೆದ, ಮಲ್ಲಿಗೆಯ ಹರಕೆ, ದೈವಗಳ ನೇಮೋತ್ಸವ ಹಾಗೂ ಬಂಡಿ ಉತ್ಸವಕ್ಕೆ ಹೆಸರಾದ ಕೊಂಡಾಣ ಜಾತ್ರೆ ಮೇ 23 ಮತ್ತು 24ರಂದು ನಡೆಯಲಿದೆ.
#ಕಾರ್ಣಿಕದ #ಕೊಂಡಾಣ #ಶ್ರೀ #ಪಿಲಿಚಾಮುಂಡಿ, #ಬಂಟ, #ಮುಂಡತ್ತಾಯ #ದೈವಸ್ಥಾನ #ಬಂಡಿ ಉತ್ಸವ ಮೇ #23 ಮತ್ತು #24
ಪರಶುರಾಮ ಸ್ರಷ್ಟಿಯ ಈ ಪುಣ್ಯದ ತುಳುನಾಡಿನ ಅತ್ಯಂತ ಕಾರ್ಣಿಕ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಕೊಂಡಾಣ ದೈವಸ್ಥಾನ ಕಾರ್ಣಿಕಕ್ಕೆ ಹೆಸರುವಾಸಿಯಾದ ಕ್ಷೇತ್ರವಾಗಿದೆ. ಇಲ್ಲಿ ಪಿಲಿಚಾಮುಂಡಿ,ಬಂಟ, ಮುಂಡತ್ತಾಯ (ವೈಧ್ಯನಾಥ)ದೈವಗಳು ಪ್ರದಾನ ದೈವಗಳಾಗಿದ್ದು ಅದೆಷ್ಟೋ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದೆ.
ಎಲ್ಲೋ ಇದ್ದು ತಮ್ಮ ಕಷ್ಟಗಳನ್ನು ಇಲ್ಲಿನ ದೈವಗಳನ್ನು ನೆನೆಸಿ ಹರಕೆ ಕಟ್ಟಿಕೊಂಡರೆ ಆದಷ್ಟು ಬೇಗನೆ ನೆನೆಸಿದ ಕಾರ್ಯವನ್ನು ಈಡೇರಿಸುವ ದೈವ ಇಲ್ಲಿಯದಾಗಿದೆ.ಕೊಂಡಾಣ ಕ್ಷೇತ್ರವು ಮಂಗಳೂರು ತಾಲ್ಲೂಕು,ಕೋಟೆಕಾರ್ ಗ್ರಾಮದ ಕೊಂಡಾಣ ಎಂಬಲ್ಲಿದೆ. ಶ್ರೀ ಕ್ಷೇತ್ರಕ್ಕೆ ಸೋಮೇಶ್ವರ ಸೋಮನಾಥ ದೇವರ ಹಾಗು ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವರ ಸಂಬಂಧವಿದೆ. ಹಾಗು ಉದ್ಯಾವರ ಮಾಡದ ಅರಸು ದೈವಗಳಿಗು ಈ ಕ್ಷೇತ್ರಕ್ಕೂ ಸಂಬಂದವಿದೆ ಎಂದೂ ಹೇಳಲಾಗುತ್ತದೆ.ಕ್ಷೇತ್ರವು ಎತ್ತರದ ಸ್ಥಳದಲ್ಲಿದ್ದು ಸುಂದರ ವಾತಾವಾರಣದ ಮಧ್ಯೆ ಇದೇ.ಈ ಕ್ಷೇತ್ರದ ಹೆಸರು ಕೇಳದವರು ತೀರಾ ಕಡಿಮೆ.ಕೊಂಡಾಣ ಹೇಳಿದ ತಕ್ಷಣ ಎಲ್ಲಿನ ಜನರಿಗೂ ಕೂಡಾ ಭಯ ಭಕ್ತಿಯ ಭಾವನೆ ಬರುವುದಂತೂ ಸತ್ಯ.ಶ್ರೀ ಕ್ಷೇತ್ರದಲ್ಲಿ ಚಾಮುಂಡಿಯ ವಾಹನವಾಗಿರುವ ಹುಲಿಯ ಸಂಚಾರವಿದ್ದು, ಹುಲಿ ನೋಡಿದವರು ಈಗಲು ಇದ್ದಾರೆ.ಹಿಂದೂ ಧರ್ಮದ ಜನರು ಮಾತ್ರವಲ್ಲದೆ ಮುಸ್ಲಿಮ್ ಸಾಮುದಾಯದವರು ಕೂಡಾ ಹುಲಿಯನ್ನು ನೋಡಿದ್ದಾರೆ.ಹಾಗಾಗಿ ಎಲ್ಲಾ ಧರ್ಮದವರು ಈ ಕ್ಷೇತ್ರಕ್ಕೆ ಬರುವುದು ಸಾಮನ್ಯವಾಗಿದೆ.ಕ್ಷೇತ್ರದ ಪಕ್ಕದ ಸ್ಥಳದಲ್ಲಿ ಸಣ್ಣ ಕೆರೆಯಿದ್ದು,ಇಲ್ಲಿಯ ಹುಲಿ ನೀರು ಕುಡಿಯುವ ಕೆರೆಯಾಗಿದೆ.ಈ ಕೆರೆಗೆ ಯಾರು ಕೂಡಾ ಇಳಿಯುವ ಹಾಗೆ ಇಲ್ಲ.ಹುಲಿಯು ಸೋಮೇಶ್ವರ ಸೋಮನಾಥ ದೇವರ ಭೇಟಿಗೆ ಹೋಗುತ್ತದೆ ಎನ್ನುವ ಪ್ರತೀತಿ ಇದೆ. ಇಲ್ಲಿನ ದೈವದ ಕಾರ್ಣಿಕ ಇದೆ ಎನ್ನುವುದಕ್ಕೆ ಇಲ್ಲಿಗೇ ಬರುವ ಪವನ್ಗಟ್ಟಲೆ ಚಿನ್ನದ ಹರಕೆಯೇ ಸಾಕ್ಷಿ.ದೂರದ ಬಾಂಬೆ,ಬೆಂಗಳೂರು,ಗುಜರಾತ್ ಮುಂತಾದ ಕಡೆಯಿಂದಲೂ ಭಕ್ತರು ಬಂದಿರುವುದು,ಅಲ್ಲದೆ ವಿದೇಶಿಯರೂ ಕೂಡಾ ಇಲ್ಲಿಗೆ ಬಂದಿರುವುದು ಇಲ್ಲಿನ ಕಾರ್ಣಿಕವನ್ನು ಎತ್ತಿ ತೋರಿಸುತ್ತದೆ.
🐅 *ಕಾರಣಿಕದ ಶ್ರೀ ಕೊಂಡಾಣ ಕ್ಷೇತ್ರ ದ ಇತಿಹಾಸ*
ತುಳುನಾಡಿನ ಕೊನೇಯ ಜಾತ್ರೆ 23/05/2019 ರಿಂದ 24 /05/2019 ರ ವರೆಗೆ .
ಈ ಕ್ಷೇತ್ರದ ಜಾತ್ರೆ ನಡೆದ ಬಳಿಕ ತಳುನಾಡಿನ ಯಾವ ಊರಿನಲ್ಲಿಯೂ ಕೂಡ ಧ್ವಜಾರೋಹಣವಾಗಿ ನೇಮ ಜಾತ್ರೆ ಬಂಡಿ ಉತ್ಸವ ದೇವರ ರಥೊತ್ಸವ ನಡೆಯುವುದಿಲ್ಲ ಎಂಬುದು ವಾಡಿಕೆ .ಇಲ್ಲಿ ಪ್ರತೀ ವರ್ಷ ಮೇ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ .ಪತ್ತನಾಜೆಯ ಮುಂಚಿನ 2 ದಿನ ಇಲ್ಲಿ ಜಾತ್ರೆ ನಡೆಯುತ್ತದೆ .
*ಕ್ಷೇತ್ರದ ಶಿವ ಲಿಂಗ (ಬಂಟ ಕಲ್ಲು )
ಯಾವುದೇ ದೈವ ಸಾನಿಧ್ಯದಲ್ಲಿ ಕಾಣಲಿಕ್ಕೆ ಸಿಗದ ಶಿವ ಲಿಂಗ ಕೊಂಡಾಣದಲ್ಲಿ ಕಾಣಬಹುದು .ಇಲ್ಲಿನ ಶಿವ ಲಿಂಗವೇ ಈ ಕ್ಷೇತ್ರಕ್ಕೆ ಕಾರಣಿಕ ಬರಲು ಒಂದು ಮುಖ್ಯ ಕಾರಣವಾಗಿದೆ . ಬಂಟ ದೈವದ ನೇಮದ ಸಂದರ್ಭ ಶಿವಲಿಂಗವನ್ನು ಮಲ್ಲಿಗೆ ಹೂವಿನಿಂದ ಮುಚ್ಚುತ್ತಾರೆ .ಎಷ್ಟೇ ಹೂ ಕಲ್ಲಿಗೆ ಹಾಕಿದರೂ ಕೂಡಾ ದೈವಕ್ಕೆ ಕಡಿಮೆಯೇ, ನೇಮದ ಸಂದರ್ಭ ದೈವವು ಶಿವಲಿಂಗದ ಪಾಣಿಪೀಠದಲ್ಲಿ ಕುಳಿತುಕೊಳ್ಳುವ ಪದ್ದತಿ ಇದೆ, ಕಲ್ಲಿನ ಮೇಲೆ ಹೂ ಕಡಿಮೆಯಾದರೆ ಕೈ ಸನ್ನೆಯ ಮಾಡಿ ಕೆಲವುದುಂಟು.ಕೊಂಡಾಣದ ಬಂಟ ನೇಮ ನೋಡಲು ದೂರದ ಊರಿನಿಂದ ಭಕ್ತ ಸಾಗರ ಹರಿದು ಬರುತ್ತದೆ .ನೇಮ ಪ್ರಾರಂಭವಾಗುದಕ್ಕೆ 4-5 ಗಂಟೆಗೆ ಮುಂಚೆಯೇ ಭಕ್ತರು ಬಂದು ಕುಳಿತುಕೊಳ್ಳುತ್ತಾರೆ. ಇದು ಇಲ್ಲಿನ ವಿಶೇಷ
*ಕೊಂಡಾಣದ ಬಂಟ ದೈವದ ಹೆಸರೆತ್ತಲೂ ತುಳುನಾಡಿನ ಜನ ಭಯ ಪಡುತ್ತಾರೆ .ಯಾಕೆಂದರೆ ಇಲ್ಲಿನ ಬಂಟ ದೈವವು ಬೇರೆ ಕ್ಷೇತ್ರದ ಬಂಟ ದೈವಕ್ಕಿಂತ ತುಂಬಾ ವಿಭಿನ್ನ .ಬೇರೆ ಕಡೆಯ ಬಂಟ ದೈವವು ಧೂಮಾವತಿ ದೈವದ ಜಾರಂದಾಯ ದೈವದ ಅಧೀನ ಇರುತ್ತದೆ ಆದರೆ ಕೊಂಡಾಣದ ಬಂಟ ದೈವವು ಸೋಮೇಶ್ವರದ ಸೋಮನಾಥ ದೇವರ ಬಂಟ ಎಂಬ ಹೆಗ್ಗಳಿಕೆಗೆ ಪಾತ್ರವಾದ ದೈವವಾಗಿದೆ ಎಂದು ಹೇಳಬಹುದು .ಆದ್ದರಿಂದಲೇ ಇಲ್ಲಿನ ಬಂಟ ದೈವವು ತುಂಬಾ ಕಾರಣಿಕದಿಂದ ಕೂಡಿದ ದೈವವಾಗಿದೆ* .
ತುಳುನಾಡಿನ ಅತ್ಯಂತ ಶ್ರೀಮಂತ ದೈವಸ್ಥಾನ ಕೊಂಡಾಣ -ಹೌದು ಇಲ್ಲಿನ ದೈವ ಸಾನಿದ್ಯ ತುಳುನಾಡಿನ ಅತ್ಯಂತ ಶ್ರೀಮಂತ ಹಾಗು ಕಾರಣಿಕ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ .ಇಲ್ಲಿ ಎಲ್ಲವೂ ಚಿನ್ನಮಯ.ದೈವದ ಮುಗ ತಲೆಪಟ್ಟೆ ಬಂಟ ದೈವದ ಪ್ರಭಾವಳಿ (ಅಣಿ )ಚಿನ್ನದ ಸರ ಎಲ್ಲವೂ ಚಿನ್ನವೇ ಆಗಿದೆ ಎಂದು ಹೇಳಬಹುದು .ತುಳುನಾಡು ಮಾತ್ರವಲ್ಲದೆ ದೂರದ ಬಾಂಬೆ ಬೆಂಗಳೂರು ಉತ್ತರ ಕನ್ನಡ ಮುಂತಾದ ಕಡೆಗಳಂದ ಚಿನ್ನದ ವಿಮಾನ ಚಿನ್ನದ ಅಡಕೆ ಚಿನ್ನದ ನಾಲಗೆ ಚಿನ್ನದ ಸರ ಚಿನ್ನದ ನಾಣ್ಯ ಬೆಳ್ಳಿಯ ದೀಪ ಬೆಳ್ಳಿಯ ನಾಲಗೆ ಬೆಳ್ಳಿಯ ಕೋಳಿ ಮುಂತಾದ ವಿಶಿಷ್ಟ ಶೈಲಿಯ ಹರಕೆ ಬಂದಿದೆ ಬರುತ್ತಿದೆ .
ರಾಶಿ ರಾಶಿ ಮಲ್ಲಿಗೆ ಹೂ
ಇಲ್ಲಿ ಮಲ್ಲಿಗೆ ಹೂವಿಗೆ ವಿಶೇಷ ಆದ್ಯತೆ .ಯಾಕೆಂದರೆ ಬಂಟ ದೈವಕ್ಕೆ ಪ್ರೀಯವಾದ ವಸ್ತು ಇದಾಗಿದೆ .ಬಂಟ ಕಲ್ಲಿಗೆ ನೇಮೋತ್ಸವದ ಸಮಯ ಈ ಮಲ್ಲಿಗೆ ಹೂವನ್ನು ಹಾಕುತ್ತಾರೆ .ಎಷ್ಟು ಹೂ ಹಾಕಿದರೂ ಕೂಡಾ ದೈವಕ್ಕೆ ಕಡಿಮೆಯೇ ಆಗುತ್ತದೆ ಎಂಬುದು ಭಕ್ತರ ಮಾತು .
ಕೊಂಡಾಣದ ವಾರ್ಷಿಕ ಜಾತ್ರೆ (ಕೊಂಡಾಣ ಬಂಡಿ )ಕೊಂಡಾಣದ ಜಾತ್ರೆ ಕೊಂಡಾಣ ಬಂಡಿ ಎಂದೇ ಪ್ರಸಿದ್ಧವಾಗಿದ್ದು ತುಳುನಾಡಿನಲ್ಲಿ ಜನಪ್ರೀಯತೆಯನ್ನು ಪಡೆದ ಜಾತ್ರೆಯಾಗಿದೆ .ಕುಂಬಳೆಯ ಬೆಡಿ ಪೊಳಲಿಯ ಚೆಂಡು ಹಾಗು ಕೊಂಡಾಣದ ಬಂಡಿ ಇತಿಹಾಸ ಪ್ರಸಿದ್ಧ ಜಾತ್ರೆಯೂ ಹೌದು .ಇಲ್ಲಿ ಪ್ರಥಮ ದಿನದಂದು ಬೆಳಿಗ್ಗೆ 5 ಗಂಟೆಗೆ ಧ್ವಜಾರೋಹಣ ಮತ್ತು ಕಂಚಿಲ ಬಲಿ ಉತ್ಸವ ನಡೆಯುತ್ತದೆ ಮತ್ತು ಪ್ರಥಮ ದಿನದ ಎಲ್ಲಾ ಉತ್ಸವಗಳು ಗರಡಿಯ ಒಳಗೆ ನಡಯುತ್ತದೆ ಹಾಗು ರಾತ್ರಿ ಪ್ರಥಮ ಬಂಡಿ ಉತ್ಸವ ರಾತ್ರಿ 7 ಗಂಟೆಗೆ ನಡೆಯುತ್ತದೆ .
ಎರಡನೆಯ ದಿನಂದಂದು ರಾಜಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ವೈದ್ಯನಾಥ ನೇಮ, ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ವಿಜೃಂಭಣೆಯ ಬಂಟ ನೇಮ ನಡೆಯುತ್ತದೆ .(ಮಧ್ಯಾನ್ನದ ಪಿಲಿಚಂಡಿ ನೇಮ ಗರಡಿಯ ಒಳಗೆ ) ಕಡೆಯ ಬಂಡಿ ಮಹೋತ್ಸವ ಬಹಳ ವಿಜೃಂಭಣೆಯಿಂದ ರಾತ್ರಿ ನಡೆಯುತ್ತದೆ .
(*ಫೋಟೋ ಚಿತ್ರ ವೀಡಿಯೊ ಚಿತ್ರೀಕರಣ ಕ್ಷೇತ್ರದ ಒಳಗೆ ಕಡ್ಡಾಯವಾಗಿ ನಿಷೇದ* )
ಈ ದೈವ ಸಾನಿಧ್ಯವು ತುಂಬಾ ಕಾರಣಿಕದಿಂದ ಕೂಡಿದ್ದು ಕ್ಷೇತ್ರದ ಒಳಗೆ ವಿಡಿಯೋ ಚಿತ್ರೀಕರಣ ಫೋಟೋ ಚಿತ್ರೀಕರಣ ಕಡ್ಡಾಯವಾಗಿ ಅನಾದಿ ಕಾಲದಿಂದಲೂ ನಿಷೇದಿಸಿದ್ದಾರೆ .ಇದು ಈ ಕ್ಷೇತ್ರದ ಇನ್ನೊಂದು ವೈಶಿಷ್ಟ .
*_ಕ್ಷೇತ್ರದ ಹಿನ್ನೆಲೆ_*
*ಹಿಂದಿನ ಕಾಲದಲ್ಲಿ ಈ ಸ್ಥಳದಲ್ಲಿ ಮಲ್ಲ ಯುದ್ಧವನ್ನು ಕಲಿಸುವ ಪೈಲ್ವಾನ್ ಮಾಸ್ಟರ್ ಇದ್ದನೆಂದು ಹೇಳಲಾಗುತ್ತಿದೆ .ದೈವಸ್ಥಾನ ಇರುವ ಮೊದಲೇ ಇಲ್ಲಿ ಮಲ್ಲ ಯುದ್ಧವನ್ನು ಕಲಿಸುವ ಗರಡಿ ಶಾಲೆ ಇತ್ತು .ತದನಂತರ ಈ ಸ್ಥಳಕ್ಕೆ ಪಿಲಿಚಂಡಿ ದೈವದ ಆಗಮನವಾಗುತ್ತದೆ .ಪೈಲ್ವಾನ್ ಮಾಸ್ಟರ್ ಬಳಿ ಪಿಲಿಚಂಡಿದೈವ ಬಂದು ನನಗೆ ಇಲ್ಲಿ ನೆಲೆಯಾಗಲು ಸ್ಥಳ ಕೇಳಿದಾಗ ಪೈಲ್ವಾನ್ ಅದಕ್ಕೆ ನಿರಾಕರಿ ದೈವದ ಎದುರೇ ಜಗಳಕ್ಕೆ ಬರುತ್ತಾನೆ .ಆಗ ಕೋಪಗೊಂಡ ಪಿಲಿಚಂಡಿ ದೈವ ಅವನನ್ನು ಸಂಹಾರ ಮಾಡಲು ಮುಂದಾಗುತ್ತಾರೆ .ಎಷ್ಟೇ ಪ್ರಯತ್ನ ಪಟ್ಟರೂ ಕೂಡಾ ಅವನನ್ನು ಸೋಲಿಸಲು ಸಾಧ್ಯವಾಗುದಿಲ್ಲ .ಕಾರಣ ಅವನ ದೇಹದಲ್ಲಿ 1001 ಮಂತ್ರದ ತಾಯಿತ ಇತ್ತು .ನಂತರ ಪಿಲಿಚಂಡಿ ದೈವ ಸೋಮನಾಥ ದೇವರಿಗೆ ದೂರನ್ನು ಕೊಡುತ್ತಾರೆ .ಆಗ ಸೋಮನಾಥ ದೇವರು ತನ್ನ ಬಳಿ ಇರುವ ಬಂಟ ದೈವವನ್ನು ಕಳುಹಿಸಿ ಕೊಡುತ್ತಾರೆ .ನಂತರ ಬಂಟ ದೈವದ ಸಹಾಯವನ್ನು ಪಡೆದು ಪಿಲಿಚಂಡಿ ದೈವ ಪೈಲ್ವಾನ್ ಮಾಸ್ಟರ್ ಅನ್ನು ಸೋಲಿಸುತ್ತಾರೆ .ನಂತರ ಪಿಲಿಚಂಡಿ ಮತ್ತು ಬಂಟ ದೈವಕ್ಕೆ ತಾನು ದೊಡ್ಡವ ತಾನು ದೊಡ್ಡವ ಎಂಬ ವಾದ ಪ್ರತಿ ವಾದ ಆರಂಭವಾಗುತ್ತದೆ .ವಾದ ಮಿತಿ ಮೀರುತ್ತಿದ್ದಂತೆಯೇ ಕೋಟೆಕಾರಿನಲ್ಲಿದ್ದ ವೈದ್ಯನಾಥ ದೈವ ಕೊಂಡಾಣಕ್ಕೆ ಉದ್ಯಾವರ ಅರಸು ದೈವವನ್ನು ಕರೆದುಕೊಂಡು ಬಂದು ಅವರ ಎದುರುರಲಿ ರಾಜಿ ಪಂಚಾತಿಕೆ ಮಾಡಿ ಪಿಲಿಚಂಡಿ ಮತ್ತು ಬಂಟ ದೈವವನ್ನು ಸಮಾದಾನಪಡಿಸಿ ನಾವು ತ್ರಿಮೂರ್ತಿಗಳು ಯಾರು ಕೂಡಾ ದೊಡ್ಡವರಲ್ಲ ನಾವು ಸಮಾನರು ಎಂಬ ಮಾತನ್ನು ಹೇಳುತ್ತಾರೆ ನಾವು ಒಂದು ತೆಂಗಿನ ಕಾಯಿಯ ಮೂರು ಕಣ್ಣುಗಳು ಇದ್ದ ಹಾಗೆ ಎಂಬ ಮಾತನ್ನು ಹೇಳಿ ಅಲ್ಲಿ ಪಿಲಿಚಂಡಿ ದೈವಕ್ಕೆ ವೈದ್ಯನಾಥ ದೈವವು ಅಧಿಕಾರ ಕೊಡುತ್ತಾರೆ .ಹಾಗು ಬಂಟ ದೈವಕ್ಕೆ ಸರ್ವಾಧಿಕಾರಕೊಡುತಾರೆ.ಈ ಕಟ್ಟೆ ಯಲ್ಲಿ ವರ್ಷಾಂಪ್ರತಿ ಜನವರಿ ತಿಂಗಳ 13 ತಾರೀಕು ಕಟ್ಟೆ ಜಾತ್ರೆ ಜರಗುತದೆ.
ಪಿಲಿಚಂಡಿ ದೈವ ಮತ್ತು ಬಂಟ ದೈವದ ನಡುವೆ ಇದ್ದ ವೈಮನಸ್ಸನ್ನು ಸರಿಪಡಿಸಿದ ಭಾಂಧವ್ಯಕ್ಕೆ ವೈದ್ಯನಾಥ ದೈವಕ್ಕೆ ಮೊದಲ ನೇಮ ಕೊಂಡಾಣದಲ್ಲಿ, ಹಾಗು ಕೋಟೆಕಾರು ವೈದ್ಯನಾಥ ಕ್ಷೇತ್ರದಲಿ ವಲಸಾರಿ ( ಮೇ 6 ರಂದು) ನೇಮದಲಿ 3 ದೈವಗಳ ಭೇಟಿ ನಡೆಯುತದೆ.
**ಗರ್ಭ ಗುಡಿಯ ಒಳಗೆ ಇರುವ ಶಂಕರ ಮೂಲ್ಯೆದಿಯ ಮರದ ಪ್ರತಿಮೆ**
ಹೌದು ಇಲ್ಲಿ ಗರ್ಭ ಗುಡಿಯ ಒಳಗೆ ಶಂಕರ ಮೂಲ್ಯೆದಿಯ(ತಂಕರ ಮೂಲ್ಯೆದಿ ) ಪ್ರತಿಮೆಯಿದೆ .ಇದಕ್ಕೆ ಬೇರೆಯೇ ಹಿನ್ನೆಲೆಯಿದೆ .ಮಡಕೆ ಮಾರುವ ಈ ಹೆಣ್ಣು ಈ ಪ್ರದೇಶದ ವ್ಯಾಪಾರ ಮಾಡುತ್ತಿದ್ದರು .ಪಿಲಿಚಂಡಿ ದೈವಕ್ಕೆ ತನ್ನ ಮೈಗೆ ಹಾಕುವ ಆಭರಣವನ್ನು ಅವಳ ಕೈಯಿಂದ ಹಾಕಿಸಿಕೊಳ್ಳಬೇಕೆಂಬ ಆಸೆ ಇತ್ತು .ಒಂದು ದಿನ ದೈವ ಮನುಷ್ಯನ ರೂಪದಲ್ಲಿ ಬಂದು ಈ ಹೆಣ್ಣಿನ ಬಳಿ ಮಾತನಾಡುವಾಗ ಆ ಹೆಣ್ಣು ದೈವಕ್ಕೆ ಬೇಡದ ಶಬ್ದಗಳಿಂದ ಬೈಯುತ್ತಾರೆ .ಆಗ ದೈವ ಅವಳನ್ನು ಅಲ್ಲಿಯೇ ನಾಶ ಮಾಡುತ್ತಾರೆ .ಅದರ ನೆನಪಿಗೆ ದೈವವು ಅವಳ ಬಲಗೈ ಮುಂದೆ ಚಾಚಿದ ಒಂದು ಪ್ರತಿಮೆಯನ್ನು ಮಾಡಬೇಕೆಂದು ಹೇಳುತ್ತಾರೆ .ತನಗೆ ಹಾಕುವ ಹೂ ಆಭರಣವನ್ನು ಮೊದಲು ಅವಳ ಕೈಗೆ ಹಾಕಿ ನಂತರ ನನಗೆ ಹಾಕಬೇಕು ಎಂಬ ಮಾತನ್ನು ದೈವದ ಅಪ್ಪಣೆಯಾಗುತ್ತದೆ .ಇದರ ಅರ್ಥ ಶಂಕರ ಮೂಲ್ಯೆದಿಯ ಕೈಯಿಂದ ತನಗೆ ಆಭರಣ ಹಾಕುವುದು ಎಂಬ ಅರ್ಥವನ್ನು ಇದು ಕೊಡುತ್ತದೆ .ಹಾಗೆಯೇ ಗರಡಿ ಶಾಲೆಯ ಒಳಗೆ ಪೈಲ್ವಾನ್ ಮಾಸ್ಟರ್ ನ ಮರದ ಪತಿಮೆ ಕೂಡಾ ಇದೆ .
(ಕಾರ್ಣಿಕದ ಕೊಂಡಾಣ )
ಈ ಕ್ಷೇತ್ರ ಕಾರಣಿಕದ ಕೊಂಡಾಣ ಎಂಬ ಹೆಸರನ್ನೇ ಪಡೆದಿದೆ .ಇಲ್ಲಿಗೆ ಹರಕೆ ಕಟ್ಟಿಕೊಂಡರೆ ನೆನೆಸಿಕೊಂಡ ಕಾರ್ಯ ಆದಷ್ಟು ಬೇಗ ಆಗುತ್ತದೆ ಎಂಬ ಮಾತು ಇದೆ .ಇದಕ್ಕೆ ಇಲ್ಲಿ ಬರುವ ಪವನ್ಗಟ್ಟಲೆ ಚಿನ್ನವೇ ಸಾಕ್ಷಿ .ಮಾತು ಬರದ ಅದೇಷ್ಟೂ ಮಕ್ಕಳಿಗೆ ಹರಕೆ ಹೇಳಿದ ನಂತರ ಮಾತು ಬಂದ ಘಟನೆಯೂ ನಡೆದಿದೆ .ಇಂದಿಗೂ ನಡೆಯುತ್ತಿದೆ .ಕಳೆದು ಹೋದ ಚಿನ್ನ ಅಥವಾ ಬೇರೆ ವಸ್ತು ಕೂಡ ಸಿಗುತ್ತದೆ .ಕಳವು ಮಾಡಿದ ಜನರು ವಿಚಿತ್ರ ರೀತಿಯಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ .ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ .ಇದು ಇಲ್ಲಿ ನಡೆದ ಸತ್ಯ ವಿಚಾರವೂ ಹೌದು .
ದಿಂದೊಮ್ಮೆ ಇಲ್ಲಿ ಅರ್ಚಕರು ಪೂಜೆ ಮುಗಿಸಿ ಮನೆಗೆ ಹೋಗುವ ಸಂದರ್ಭ ತುಂಬಾ ತಡವಾಗಿತ್ತು .ಆಗ ಇಲ್ಲಿನ ದೈವ ಹುಲಿಯ ರೂಪದಲ್ಲಿ ಬಂದು ಇವರನ್ನು ಮನೆಯವರೆಗೂ ಕೂಡಾ ಬಿಟ್ಟಿತ್ತೆಂದು ಹೇಳುವಾಗ ಮೈ ಜುಂ ಎನ್ನುತ್ತದೆ .
*ಕೊಂಡಾಣದಲ್ಲಿ ಹುಲಿಯ ಬಂಡಿ ಇರುವುದರಿಂದ ಈ ಊರಿಗೆ ಹುಲಿ ವೇಷದಾರಿಗಳು ಬರುವ ಹಾಗೆ ಇಲ್ಲ .ಹಿಂದೊಮ್ಮೆ ಹುಲಿವೇಷದಾರಿ ಬೇರೆ ಕಡೆ ಹುಲಿ ವೇಷ ಮುಗಿಸಿ ಹುಲಿಯ ವೇಷವನ್ನು ಮನೆಯವರಿಗೆ ತೋರಿಸಲು ನೆನಪಿಲ್ಲದೆ ಈ ಊರಿಗೆ ಬರುವಾಗ ಈ ಕ್ಷೇತ್ರಕ್ಕೆ ಹತ್ತಿರವಿರುವ ಮಾಡೂರು ಸೇತುವೆಯ ಬಳಿ (ಕಾಚಾರ್ ಸಂಕ )ಕೊಂಡಾಣದ ದೈವವೇ ಹುಲಿಯ ರೂಪದಲ್ಲಿ ಬಂದು ಹುಲಿ ವೇಷಧಾರಿಯ ವಾಹನಕ್ಕೆ ಅಡ್ಡ ನಿಂತ ಘಟನೆಯೂ ಕೂಡಾ ನಡೆದಿದೆ .
ರಾಶಿ ಕೋಳಿ ಹರಕೆ
ಇಲ್ಲಿ ಬರುವ ಕೋಳಿ ಹರಕೆಗೆ ಲೆಕ್ಕವೇ ಇಲ್ಲ .ಬಂಟ ನೇಮದ ಸಂದರ್ಭ ಸುಮಾರು 100 ಕಿಂತ ಹೆಚ್ಚು ಕೋಳಿಯನ್ನು ದೈವಕ್ಕೆ ಇಲ್ಲಿ ಬಲಿ ಕೊಡುತ್ತಾರೆ .ಉಳಿದ ಅದೆಷ್ಟೋ ಕೋಳಿಯನ್ನು ಜನರಿಗೆ ಏಲಂ ಮಾಡುತ್ತಾರೆ .ಹರಕೆಯ ಕೋಳಿಯನ್ನು ಸಂಗ್ರಹ ಮಾಡಲು ಪ್ರತ್ಯೇಕ ಕಟ್ಟಡವನ್ನೇ ಇಲ್ಲಿ ಕಟ್ಟಿದ್ದಾರೆ .ಇದು ಇಲ್ಲಿನ ಇನ್ನೊಂದು ವಿಚಾರ .
ಕೊಂಡಾಣದ ವಾರ್ಷಿಕ ಜಾತ್ರೆ (ಕೊಂಡಾಣ ಬಂಡಿ )ಎಂದೇ ಪ್ರಸಿದ್ದವಾಗಿದ್ದು,ತುಳುನಾಡಿನ ಕೊನೇಯ ಜಾತ್ರೆಯಾಗಿದೆ,ಇಲ್ಲಿನ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಅಪಾರ. ಕುಂಬಳೆಯ ಬೆಡಿ,ಪೊಳಲಿಯ ಚೆಂಡು,ಹಾಗು ಕೊಂಡಾಣದ ಬಂಡಿ ಇತಿಹಾಸ ಪ್ರಸಿದ್ದವಾದ ಜಾತ್ರೆಯಾಗಿದೆ.ಶ್ರೀ ಕ್ಷೇತ್ರ ದ ಜಾತ್ರೆಯನ್ನು ಅಷ್ಟೋಂದು ದೊಡ್ಡ ರೀತಿಯಲ್ಲೀ ಮಾಡುವ ಪದ್ದತಿ ಇಲ್ಲ ಎಂಬುದು ಹಿರಿಯರ ನಂಬಿಕೆ.ಜನರ ಮಾತಿನ ಮೂಲಕ ಪ್ರಚಾರವಾಗಿ ಇಲ್ಲಿನ ಜಾತ್ರೆಗೆ ಬರಬೇಕು ಎಂಬುದು ನಂಬಿಕೆ.
ಈ ಕ್ಷೇತ್ರ ಮಂಗಳೂರು ತಾಲೂಕಿನ ಕೋಟೆಕಾರ್ ಗ್ರಾಮದ ಕೊಂಡಾಣ ಎಂಬಲ್ಲಿದೆ .ನಗರದ ಪಂಪ್ವೆಲ್ ವೃತ್ತದಿಂದ ತಲಪಾಡಿಗೆ ಹೋಗುವ ದಾರಿಯಲ್ಲಿ ಸುಮಾರು 10 kmದೂರದಲ್ಲಿನ ಬೀರಿ ಜಂಕ್ಷನ್ ನಿಂದ ಎಡಕ್ಕೆ 3km ದೂರದಲ್ಲಿಯೇ ಈ ಪವಿತ್ರ ಕಾರಣಿಕ ಕ್ಷೇತ್ರವಿದೆ .
ಈ ವರ್ಷದ ಕೊಂಡಾಣ ಬಂಡಿಯು ಮೇ ತಿಂಗಳ 22,23,ಮತ್ತು 24 ರಂದು ನಡೆಯುತ್ತದೆ .
ತುಳುನಾಡಿನ ಸರ್ವ ಜನರೂ ಕೂಡಾ ಕುಟುಂಭ ಸಮೇತ ಬಂದು ದೈವದ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ .🙏🙏🙏🙏🙏🙏