ಸುರತ್ಕಲ್ ಮೂರ್ನಾಡು ಮಾಗಣೆಯ ಬಂಟ ಸಮುದಾಯದ ಪ್ರತಿಷ್ಟಿತ, ಪ್ರಧಾನ ಮನೆತನ "ಕೊಡಿಪಾಡಿ ಬಾಳಿಕೆ ಸುರತ್ಕಲ್" :
"ಅತ್ತಾರ್" ಎಂಬ ಗಡಿಬೂಳ್ಯದ ಬಂಟರ ವಿಶೇಷ ಪಟ್ಟದ ಪುರಾಪು ಇರುವ ಕೊಡಿಪಾಡಿಬಾಳಿಕೆ ಮನೆತನಕ್ಕೆ ಐತಿಹಾಸಿಕ ಐತಿಹ್ಯಗಳು ಇವೆ. ಶ್ರೀ ಧರ್ಮದೈವ "ಕಾಂತೇರಿ ಜುಮಾದಿ,ಬಂಟ" ,ಪಟ್ಟದ ದೈವವಾಗಿ, "ಶ್ರೀಮೈಸಂದಾಯ, ಶ್ರೀಸಾರಾಳ ಜುಮಾದಿ,ಬಂಟ, ಶ್ರೀ ಮರ್ಲ್ ಜುಮಾದಿ,ಬಂಟ,, ದೈವಗಳು", ಕೊಡಿಪಾಡಿಬಾಳಿಕೆ ಮನೆತನದ ಮೂಲದೈವಗಳು. ಈ ಮನೆತನದ ಇನ್ನೊಂದು ವಿಶೇಷತೆಯೆಂದರೆ ಧರ್ಮಚಾವಡಿಯಲ್ಲಿ "ಶ್ರೀ ಉ
ಳ್ಳಾಯ, ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ, ಮಾಯಂದಾಲೆ ಸಾನಿಧ್ಯ," ಹಾಗೂ ಒಂದೇ ಮಣೆಮಂಚದಲ್ಲಿ ಶ್ರೀಕೊಡಮಣಿತ್ತಾಯ ,ಶ್ರೀ ಬ್ರಹ್ಮಬೈದರ್ಕಳ ದೈವಗಳ ಆರಾಧನೆ ಇ ಮನೆತನದ ವೈಶಿಷ್ಟ್ಯ.
ಕೊಡಿಪಾಡಿಬಾಳಿಕೆಯ ಬಂಟ ಗಡಿಪ್ರಧಾನರಾದ ಅತ್ತಾರರು ಎಲ್ಲಾ ದೈವಗಳಿಗೆ, ಪೂನೀರು ಇಡುವ ಸಂಪ್ರದಾಯ ಇಲ್ಲಿ ಇದೆ. ದೈವಗಳ ಜಗತ್ತಿನಲ್ಲಿ ಮಹಾಶಕ್ತಿದೇವತೆಗಳ ಮಹಾಸಂಗಮದಂತೆ ಇದೆ,, ಈ ಮಹಾಮನೆ,, ಕೊಡಿಪಾಡಿಬಾಳಿಕೆ ಸುರತ್ಕಲ್. ಕೊಡಿಪಾಡಿಬಾಳಿಕೆ ಮನೆತನಕ್ಕೆ ಸ್ವಂತ ಗರೋಡಿಯು ಇದೆ, ಕಾಲಾವಧಿ ಮಾಯಿ ತಿಂಗಳಿನಲ್ಲಿ ಶ್ರೀ ಉಳ್ಳಾಯ,, ಶ್ರೀಕೊಡಮಣಿತ್ತಾಯ,, ಶ್ರೀ ಬ್ರಹ್ಮಬೈದರ್ಕಳ ದೈವಗಳಿಗೆ ಧ್ವಜರೋಹಣ ಪೂರ್ವಕ ಬಲಿಮೂರ್ತಿ ಉತ್ಸವ ನಡೆದು ಮೂರುದಿನಗಳ ವಿಜ್ರಂಭಣೆಯ ಜಾತ್ರಮಹೋತ್ಸವ ಕೊಡಿಪಾಡಿಬಾಳಿಕೆಯ ಗರೋಡಿಯಲ್ಲಿನಡೆಯುತ್ತದೆ. ಹಾಗೂ ಶ್ರೀಕೊಡಮಣಿತ್ತಾಯ,,ಶ್ರೀಬ್ರಹ್ಮಬೈದರ್ಕಳ ಪರಿವಾರ ದೈವಗಳಿಗೆ ಕುಕ್ಕಿಕಟ್ಟೆ ಗಡುಪಾಡು ಸ್ಥಳದಲ್ಲಿ ಎರಡು ವರ್ಷಕ್ಕೊಮ್ಮೆ ದೊಂಪದಬಲಿ ನೇಮೋತ್ಸವ ನಡೆಯುತ್ತದೆ.ಇವಿಷ್ಟೆ ಅಲ್ಲದೆ, ಕೊಡಿಪಾಡಿಬಾಳಿಕೆ ಮನೆತನದ ಆಲಡೆಯಲ್ಲಿ ಶ್ರೀಬ್ರಹ್ಮಲಿಂಗೇಶ್ವರ, ನಾಗದೇವರು, ರಕ್ತೇಶ್ವರೀ, ನಂದಿಗೋಣ, ಕ್ಷೇತ್ರಪಾಲ,ಹಾಗೂ ತುಳುನಾಡ ಸಿರಿದೇವತೆಗಳಾದ ಅಬ್ಬಗ-ದಾರಗ, ಕುಮಾರ, ಶಕ್ತಿಗಳೂ ಇವೆ. ಇದು ಕೊಡಿಪಾಡಿಬಾಳಿಕೆ ಮನೆತನದ ಆಲಡೆ ಕ್ಷೇತ್ರವಾಗಿದೆ. ಕೊಡಿಪಾಡಿಬಾಳಿಕೆಗೆ ಸಂಬಂಧಪಟ್ಟ ಶ್ರೀಕೋರ್ದಬ್ಬು, ಸಪರಿವಾರ ದೈವಗಳ ಸಾನಿಧ್ಯವು ಇದೆ.
ಮನೆತನದ ಕುಟುಂಬದ ಅಧಿಕಾರದ ದೈವವಾಗಿ "ಶ್ರೀ ಬೀಯದ ಪಂಜುರ್ಲಿ" ದೈವದ ಸಾನಿಧ್ಯವು ಇದೆ. ಹಾಗೂ ವರ್ತೆ ದೈವಕ್ಕೆ ಆರಾಧನೆ ಸಲ್ಲುತ್ತದೆ, ಮನೆಯ ಹತ್ತಿರದಲ್ಲಿ ಇರುವ ಪವಿತ್ರ ಕೆರೆ ಇನ್ನೊಂದು ವೈಶಿಷ್ಯ,, ಶಿವಲಿಂಗದ ಪಾಣಿಪೀಠದ ಸ್ವರೂಪದಲ್ಲಿ ಕೆರೆಯ ಪ್ರಕ್ರತಿದತ್ತ ರಚನೆಯಿದೆ. ನೆಲ್ಲಿಯ ಮರದ ಹಲಗೆಯನ್ನು ಹಾಸಿ ಮಾಡಿದ ತೀರ್ಥಬಾವಿ ಇನ್ನೊಂದು ವಿಶೇಷ. ಕೊಡಿಪಾಡಿಬಾಳಿಕೆಯ ಗಡಿಪ್ರಧಾನರಲ್ಲಿ, ದಿ| ಶಾಂಭ ಅತ್ತಾರ್, ದಿ| ಚಂದು ಅತ್ತಾರ್, ತುಳುನಾಡಿನ ದೈವಾರಾಧನೆಯ ಕೊಡಿಯಡಿಯಲ್ಲಿ ಭಾರೀ ಪ್ರಸಿಧ್ಧರು, ಪ್ರಸ್ತುತ ಶ್ರೀ ಜಗನ್ನಾಥ ಅತ್ತಾರ್,, ಇವರು ದೈವದ ಗಡಿಪ್ರಧಾನರಾಗಿ ಮನೆತನದ ದೈವಗಳ ಕಟ್ಟುಕಟ್ಟಳೆಯನ್ನು ಮುನ್ನಡೆಸುತ್ತಿದ್ದಾರೆ. ಪಡ್ರೆ ಜುಮಾದಿ ಬಂಟ ದೈವಸ್ಥಾನದಲ್ಲಿ ಬಂಟದೈವಕ್ಕೆ ಮದಿಪು ಹೇಳುವ ಅಧಿಕಾರ ಕೊಡಿಪಾಡಿಬಾಳಿಕೆ ಅತ್ತಾರರಿಗೆ, ಹಾಗಾಗಿ "ಕೊಡಿಪಾಡಿ-ಬಂಟಚಾವಡಿ" ಎಂಬ ಅನ್ವರ್ಥಕ ಹೆಸರೂ ಈ ಮನೆತನಕ್ಕೆ ಇದೆ.
ಸಹಸ್ರಾರು ವರ್ಷಗಳ ಪರಂಪರೆ ಐತಿಹಾಸಿಕ ದಾಖಲೆಗಳ, ದೈವಾರಾಧನ ಜಗತ್ತಿನಲ್ಲಿ ವಿಶಿಷ್ಟ ಐತಿಹ್ಯಗಳ, ಕಣಜವಾಗಿರುವ ಕೊಡಿಪಾಡಿಬಾಳಿಕೆ ಮನೆತನ ಜೀರ್ಣೋದ್ಧಾರದ ಹೊಸ್ತಿಲಲ್ಲಿ ಇದೆ. ಅಂತಹ ಪಾರಂಪಾರಿಕ ಮನೆತನದಲ್ಲಿ ಜನ್ಮತಾಳಿದ್ದು ನನ್ನ ಪೂರ್ವಜನ್ಮದ ಪುಣ್ಯ, ಧರ್ಮದೈವಗಳ ಅನುಗ್ರಹ, ಕೊಡಿಪಾಡಿಬಾಳಿಕೆ ಸುರತ್ಕಲ್ ಮನೆತನದ ಸತ್ಯ, ಧರ್ಮ, ನ್ಯಾಯ, ನೀತಿಯ ತತ್ಪರತೆಗೆ, ಈ ಕೊಡಿಪಾಡಿಬಾಳಿಕೆಯ ಮಣ್ಣಿನಲ್ಲಿ ನೆಲೆ ಆಗಿರುವ ಧರ್ಮದೈವಗಳ ಪ್ರಜ್ವಲತೆಯೆ ಕಾರಣ. ಆದಷ್ಟು ಬೇಗ ನವೀಕರಣಗೊಂಡು ತನ್ನ ಗತಪರಂಪರೆಯನ್ನು ಕಾಪಾಡಿಕೊಂಡು ಭವಿಷ್ಯದಲ್ಲಿಯೂ ಪೂರ್ವ ಸಂಪ್ರದಾಯದಂತೆ ದೈವಕಟ್ಟುಪಾಡುಗಳೂ ,ನಿರ್ವಿಘ್ನವಾಗಿ ನಡೆಯಲಿ, ಕುಟುಂಬ ಸೌಹಾರ್ದತೆಯೂ ಉಳಿಯಲಿ, ಕೊಡಿಪಾಡಿಬಾಳಿಕೆ ಮನೆತನದ ಘನಸ್ತಿಕೆಯು ಮೆರೆಯಲಿ ಎಂಬುದೇ ನನ್ನ ಅಭಿಲಾಷೆ.