ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ

  • Home
  • India
  • Mandya
  • ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ Contact information, map and directions, contact form, opening hours, services, ratings, photos, videos and announcements from ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ, Hindu temple, Adichunchanagiri, Mandya.

ಶ್ರೀ ಆದಿಚುಂಚನಗಿರಿಯು ಅತ್ಯಂತ ಪ್ರಾಚೀನವೂ, ಪವಿತ್ರವೂ ಆದ ಮಹಾ ಧರ್ಮಕ್ಷೇತ್ರ ಹಾಗೂ ತಪೋಭೂಮಿಯಾಗಿದ್ದು, ಸುಮಾರು 2000 ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಈ ಗಿರಿಯು ಮಯೂರಗಳ ತಾಣವಾಗಿದ್ದು, ’ಮಯೂರವನ’ ಎಂದು ಕರೆಯಲ್ಪಟ್ಟು, ಪ್ರಶಾಂತ ವಾತಾವರಣದಿಂದ ಕೂಡಿದೆ. ಪ್ರಾಚೀನ ಕಾಲದಿಂದಲೂ ಸಿದ್ಧರು, ಸಂತರು,

||ಜೈ ಶ್ರೀ ಗುರುದೇವ್ ||ದಿನಾಂಕ 05.09.2026ನೇ ಶನಿವಾರ ಅಮೇರಿಕದ ಫಿಲಡೆಲ್ಪಿಯಾದಪೆನ್ಸಿಲ್ವೇನಿಯಾ  ಕನ್ವೆನ್ಷನ್  ಸೆಂಟರ್‌ನಲ್ಲಿ ಕನ್ನಡ ಭಾಷೆ,...
06/09/2026

||ಜೈ ಶ್ರೀ ಗುರುದೇವ್ ||
ದಿನಾಂಕ 05.09.2026ನೇ ಶನಿವಾರ ಅಮೇರಿಕದ ಫಿಲಡೆಲ್ಪಿಯಾದ
ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಸಂಭ್ರಮವನ್ನು ಸಾರುವ *ಅಕ್ಕ ರಜತ ಮಹೋತ್ಸವದ ವಿಶ್ವ ಕನ್ನಡ ಸಮ್ಮೇಳನದ* ಉದ್ಘಾಟನಾ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು, (ವಿಡಿಯೋ ಕಾನ್ಫರೆನ್ಸ್ ಮೂಲಕ) ಸಚಿವರಾದ ಶ್ರೀ ಶಿವರಾಜ ತಂಗಡಗಿ ಅವರು, ಸಂಸದರು, ಶಾಸಕರು, ಅಮೆರಿಕದ ವಿವಿಧ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಅಕ್ಕ ಅಧ್ಯಕ್ಷರಾದ ಶ್ರೀ ಮಧು ರಂಗಯ್ಯ ಅವರು, ಅಕ್ಕ ಟ್ರಸ್ಟಿ ಮಂಡಳಿ ಅಧ್ಯಕ್ಷರಾದ ಡಾ. ಅಮರನಾಥ ಗೌಡ ಅವರು ಸೇರಿದಂತೆ ಕೂಟದ ಎಲ್ಲಾ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ವಿಶ್ವ ಒಕ್ಕಲಿಗರ ಜಾಗೃತಿ ವೇದಿಕೆ

Sri Sri Sri Dr. Nirmalanandanatha Mahaswamiji

|| ಜೈ ಶ್ರೀ ಗುರುದೇವ್ ||ದಿನಾಂಕ 04.09.2026ನೇ ಶುಕ್ರವಾರ ಅಮೆರಿಕದ ನ್ಯೂಜೆರ್ಸಿಯ ಸೋಮರ್ಸೆಟ್‌ನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶ...
04/09/2026

|| ಜೈ ಶ್ರೀ ಗುರುದೇವ್ ||
ದಿನಾಂಕ 04.09.2026ನೇ ಶುಕ್ರವಾರ ಅಮೆರಿಕದ ನ್ಯೂಜೆರ್ಸಿಯ ಸೋಮರ್ಸೆಟ್‌ನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಭೇಟಿ ನೀಡಿ ಪರಮಪೂಜ್ಯ ಮಹಾಸ್ವಾಮೀಜಿಗಳವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಶ್ರೀ ಮಠದ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

04/09/2026
02/09/2026

ಆದಿಚುಂಚನಗಿರಿ ಯೂನಿವರ್ಸಿಟಿ ಬಿಜಿ ನಗರ

01/09/2026

ಶ್ರೀ ಮಹಾಗಣಪತಿ ಸನ್ನಿಧಿ

|| ಜೈ ಶ್ರೀ ಗುರುದೇವ್ ||ದಿನಾಂಕ 30.08.2026ನೇ ಭಾನುವಾರ, ಅಮೆರಿಕದ ನ್ಯೂಜೆರ್ಸಿ ಯ ಸೋಮರ್ಸೆಟ್ ನಲ್ಲಿ ADICHUNCHANAGIRI CULTURAL AND SP...
31/08/2026

|| ಜೈ ಶ್ರೀ ಗುರುದೇವ್ ||
ದಿನಾಂಕ 30.08.2026ನೇ ಭಾನುವಾರ, ಅಮೆರಿಕದ ನ್ಯೂಜೆರ್ಸಿ ಯ ಸೋಮರ್ಸೆಟ್ ನಲ್ಲಿ ADICHUNCHANAGIRI CULTURAL AND SPIRITUAL FOUNDATION OF USA (ACSF-USA) ವತಿಯಿಂದ ಆಯೋಜಿಸಲಾಗಿದ್ದ *ರುದ್ರಾಭಿಷೇಕ ಹಾಗೂ ಸತ್ಸಂಗ* ಕಾರ್ಯಕ್ರಮದಲ್ಲಿ ಪರಮಪೂಜ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಆರ್ಷ ಆಶ್ರಮದ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿಯವರು ಹಾಗೂ ಅಮೆರಿಕದಲ್ಲಿ ನೆಲೆಸಿರುವ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದು, ಪರಮಪೂಜ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.

30/08/2026

ಎಲ್ಲರನ್ನೂ ಕಾಪಾಡು ಶ್ರೀ ಕಾಲಭೈರವ

ನ್ಯೂಯಾರ್ಕ್‌ನಲ್ಲಿ “ಒಂದು ಜಗತ್ತು – ಒಂದು ಮಾನವಕುಲ” ಅಂತಾರಾಷ್ಟ್ರೀಯ ಸಮ್ಮೇಳನಅಮೆರಿಕದ ನ್ಯೂಯಾರ್ಕ್‌ನಲ್ಲಿ “One World – One Humanity” (...
30/08/2026

ನ್ಯೂಯಾರ್ಕ್‌ನಲ್ಲಿ “ಒಂದು ಜಗತ್ತು – ಒಂದು ಮಾನವಕುಲ” ಅಂತಾರಾಷ್ಟ್ರೀಯ ಸಮ್ಮೇಳನ

ಅಮೆರಿಕದ ನ್ಯೂಯಾರ್ಕ್‌ನಲ್ಲಿ “One World – One Humanity” (ಒಂದು ಜಗತ್ತು – ಒಂದು ಮಾನವಕುಲ) ಎಂಬ ಆಶಯದ ಕುರಿತು ಮಹತ್ವದ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು.

ಸಮ್ಮೇಳನದಲ್ಲಿ ಸುಮಾರು 14 ವಿವಿಧ ಧರ್ಮಗಳನ್ನು ಪ್ರತಿನಿಧಿಸಿದ ಧಾರ್ಮಿಕ ನಾಯಕರು ಭಾಗವಹಿಸಿ, ವಿಶ್ವಶಾಂತಿ, ಮಾನವೀಯತೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಕುರಿತು ತಮ್ಮ ಸಂದೇಶಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಜೀ ಭಾಗವತ್ ಹಾಗೂ ಪೂಜ್ಯ ಸ್ವಾಮಿ ಪರಮಾತ್ಮಾನಂದಜೀ ಅವರು ಸಹ ಸಮ್ಮೇಳನದಲ್ಲಿ ಭಾಗವಹಿಸಿದರು.

ಪೂಜ್ಯ ಸ್ವಾಮೀಜಿಯವರು ಸಮ್ಮೇಳನವನ್ನುದ್ದೇಶಿಸಿ ಮಾತನಾಡಿ, ಧರ್ಮ, ದೇಶ, ಭಾಷೆ, ಸಂಸ್ಕೃತಿ ಹಾಗೂ ವಿವಿಧ ನಂಬಿಕೆಗಳ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ, ಇಡೀ ಮಾನವಕುಲ ಒಂದೇ ಎಂಬ ಅರಿವು ಮತ್ತು ಭಾವನೆಯನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು.

ವಿಭಿನ್ನ ಧರ್ಮಗಳ ನಾಯಕರು ಒಂದೇ ವೇದಿಕೆಯಲ್ಲಿ ಒಂದಾಗಿ ಸೇರಿ “ಒಂದು ಜಗತ್ತು – ಒಂದು ಮಾನವಕುಲ” ಎಂಬ ಸಾರ್ವತ್ರಿಕ ಸಂದೇಶವನ್ನು ಸಾರಿರುವುದು ವಿಶ್ವಸಾಮರಸ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.

ಮಾನವ ಸಮಾಜವು ವಿಭಜನೆಗಳನ್ನು ಮೀರಿ ಪ್ರೀತಿ, ಕರುಣೆ, ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ಮುನ್ನಡೆಯಬೇಕು. ಧರ್ಮಗಳು ಮಾನವೀಯತೆಯನ್ನು ಬೆಸೆಯುವ ಸೇತುವೆಗಳಾಗಬೇಕು ಎಂಬ ಆಶಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.

ವೈವಿಧ್ಯತೆಯಲ್ಲಿ ಏಕತೆ • ಧರ್ಮಗಳಲ್ಲಿ ಸೌಹಾರ್ದತೆ • ಮಾನವೀಯತೆಯಲ್ಲಿ ವಿಶ್ವದ ಏಕತೆ

ಒಂದು ಜಗತ್ತು – ಒಂದು ಮಾನವಕುಲ
ಕರ್ನಾಟಕ ಮಂಡ್ಯ ಜಿಲ್ಲೆ
Sri Sri Sri Dr. Nirmalanandanatha Mahaswamiji
Voice of Vokkaligas

Address

Adichunchanagiri
Mandya

Telephone

+919845565696

Website

Alerts

Be the first to know and let us send you an email when ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಅಫಿಶಿಯಲ್ ರಿ:

Shortcuts

Share

Category