Chandravana Ashrama

Chandravana Ashrama Chandravana Ashrama lies between river and canal near Paschima Vaahini.

handravana has two deplorable condition temples named as Cheluvaraya Swamy and Chandramouleshwara was constructed by Mummudi Krishnaraja Wodeyar.

13/02/2026
GWR ಜಾಗತಿಕ ಯೋಗ ವಿಶ್ವ ದಾಖಲೆಈ ಪ್ರತಿಷ್ಠಿತ ಪ್ರಮಾಣಪತ್ರವನ್ನು ಹೆಮ್ಮೆಯಿಂದ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರ...
01/02/2026

GWR ಜಾಗತಿಕ ಯೋಗ ವಿಶ್ವ ದಾಖಲೆ
ಈ ಪ್ರತಿಷ್ಠಿತ ಪ್ರಮಾಣಪತ್ರವನ್ನು ಹೆಮ್ಮೆಯಿಂದ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರಿಗೆ ನೀಡಲಾಗುತ್ತಿದೆ.
“ಜಲಯೋಗ ಎಂದರೆ ನೀರಿನಲ್ಲಿ ನಡೆಸುವ ಯೋಗಾಭ್ಯಾಸಗಳು” ಎಂದರ್ಥ. ಅವರ ಅಸಾಧಾರಣ ಮತ್ತು ಆಧ್ಯಾತ್ಮಿಕವಾಗಿ ಮಾಡಿದ ಆಳವಾದ ಸಾಧನೆಗಾಗಿ ಗೌರವಿಸಲ್ಪಟ್ಟ, ಗೌರವಾನ್ವಿತ ಯೋಗ ಗುರು ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುತ್ತಾರೆ.
ಈ ಅಸಾಧಾರಣ ಯೋಗ ಸಾಧನೆಯಲ್ಲಿ ಪರಮಪೂಜ್ಯರು ನೀರಿನಲ್ಲಿ ಯೋಗಾಭ್ಯಾಸಗಳ ಸಮಗ್ರ ಮತ್ತು ಹೆಚ್ಚು ಶಿಸ್ತುಬದ್ದ ಅನುಕ್ರಮವನ್ನು ಜಲಾಸನಗಳ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವುಗಳೆಂದರೆ, ನೀರಿನಲ್ಲಿ ಮಾಡುವ ೨೯ ವಿಧದ ಆಸನಗಳು, ೪ ವಿಧದ ಪ್ರಾಣಾಯಾಮಗಳು, ೧೨ ಮುದ್ರೆಗಳು, ಧ್ಯಾನ ಮತ್ತು ಲಿಂಗಧ್ಯಾನ, ೫ ಯೋಗ ನಿದ್ರಾ ಮತ್ತು ದೈವೀ ಭಂಗಿಗಳು.
ಜಲಯೋಗದ ಪ್ರದರ್ಶನವನ್ನು ಮೊದಲಿಗೆ ೨೧ ಜುಲೈ ೨೦೧೯ ರಂದು ನೀಡಿದರು ಮತ್ತು ಇದನ್ನು ಪೂರ್ವ ದಾಖಲಿತ ಯೋಗ ಸಾಧನೆಯಾಗಿ ನಡೆಸಲಾಯಿತು. ಇದು ಸಂಪೂರ್ಣ ಛಾಯಾಗ್ರಹಣ ಮತ್ತು ವೀಡಿಯೊ ದಾಖಲಾತಿಯಿಂದ ಬೆಂಬಲಿತವಾಗಿದೆ. GWR ಮೌಲ್ಯಮಾಪನ ಸಮಿತಿಯಿಂದ ಸಂಪೂರ್ಣ ತಾಂತ್ರಿಕ ಪರಿಶೀಲನೆ, ಪುರಾವೆ ಪರಿಶೀಲನೆ ಮತ್ತು ದೃಢೀಕರಣದ ನಂತರ, ಈ ಸಾಧನೆಯನ್ನು ಅಧಿಕೃತವಾಗಿ ಅಂಗೀಕರಿಸಿ ಗುರುತಿಸಲಾಗಿದೆ ಮತ್ತು ಹೊಸ ವಿಶ್ವ ದಾಖಲೆಯಾಗಿ ಅನುಮೋದಿಸಿದೆ. ಔಪಚಾರಿಕವಾಗಿ ೦೧ ಫೆಬ್ರವರಿ ೨೦೨೬ ರಂದು ‘GWR ಜಾಗತಿಕ ವಿಶ್ವ ದಾಖಲೆಯ’ ಅಡಿಯಲ್ಲಿ ಬಿಡುಗಡೆ ಮಾಡುವುದಾಗಿ ದಾಖಲಿಸಲಾಗಿದೆ. ಈ ಸಾಧನೆಯು ಯೋಗ ಪಾಂಡಿತ್ಯ, ಆಧ್ಯಾತ್ಮಿಕ ಆಳ, ಶಿಸ್ತು ಮತ್ತು ಅಚಲ ಸಮರ್ಪಣೆಗೆ ಅಪರೂಪದ ಸ್ಫೂರ್ತಿದಾಯಕ ಸಾಕ್ಷಿಯಾಗಿದ್ದು, ಪ್ರಪಂಚದಾದ್ಯAತದ ಯೋಗಾಭ್ಯಾಸ ಮಾಡುವವರು ಹಾಗೂ ಆಧ್ಯಾತ್ಮಿಕ ಅನ್ವೇಷಕರಿಗೆ ಕಾಲಾತೀತ ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಐತಿಹಾಸಿಕ ಸಾಧನೆಗಾಗಿ ಮತ್ತು ಜಾಗತಿಕ ಯೋಗ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಶಾಶ್ವತ ಮಾನದಂಡವನ್ನು ಸ್ಥಾಪಿಸಿದ್ದಕ್ಕಾಗಿ ಶ್ರೀಗಳವರಿಗೆ ಅಭಿನಂದನೆಗಳು.

27/01/2026
ಪುಸ್ತಕ ಪ್ರೇಮಿ ಅಂಕೇಗೌಡರವರಿಗೆ ತ್ರಿನೇತ್ರ ಶ್ರೀಗಳಿಂದ ಅಭಿನಂದನೆಪಾAಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಪುಸ್ತಕ ಪ್ರೇಮಿ ಎಂ. ಅಂಕೇಗೌಡರವರು...
27/01/2026

ಪುಸ್ತಕ ಪ್ರೇಮಿ ಅಂಕೇಗೌಡರವರಿಗೆ ತ್ರಿನೇತ್ರ ಶ್ರೀಗಳಿಂದ ಅಭಿನಂದನೆ
ಪಾAಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಪುಸ್ತಕ ಪ್ರೇಮಿ ಎಂ. ಅಂಕೇಗೌಡರವರು ‘ಅಂಕೇಗೌಡ ಪ್ರತಿಷ್ಠಾನ’ದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದು, ಇವರ ಪುಸ್ತಕ ಪ್ರೇಮವನ್ನು ಮನಗಂಡ ಕೇಂದ್ರದಿAದ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡುತ್ತಿರುವುದು ನಮ್ಮ ಮಂಡ್ಯ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರು ಪುಸ್ತಕ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಅವರ ಪುಸ್ತಕಗಳ ಸಂಗ್ರಹದ ಕಾರ್ಯವನ್ನು ಶ್ಲಾಘಿಸಿ ಅವರನ್ನು ಅಭಿನಂದಿಸಿ ಗೌರವಿಸಿದರು.

🙏 ಶ್ರೀರಂಗಪಟ್ಟಣದ ಡಿ.ಎಂ.ಎಸ್. ಚಂದ್ರವನ ಆಶ್ರಮ 🙏ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳವರ132ನೇ ವಚನ ಜಯಂತಿ ಮಹೋತ್ಸವಕ್ಕೆಎಲ್ಲ ...
27/01/2026

🙏 ಶ್ರೀರಂಗಪಟ್ಟಣದ ಡಿ.ಎಂ.ಎಸ್. ಚಂದ್ರವನ ಆಶ್ರಮ 🙏

ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳವರ
132ನೇ ವಚನ ಜಯಂತಿ ಮಹೋತ್ಸವಕ್ಕೆ
ಎಲ್ಲ ಭಕ್ತಾದಿಗಳಿಗೆ ಹಾರ್ದಿಕ ಆಹ್ವಾನ.

📅 ದಿನಾಂಕ: 01-02-2026 (ಭಾನುವಾರ)
⏰ ಸಮಯ: ಬೆಳಿಗ್ಗೆ 10.30
📍 ಸ್ಥಳ: ಡಿ.ಎಂ.ಎಸ್. ಚಂದ್ರವನ ಆಶ್ರಮ, ಶ್ರೀರಂಗಪಟ್ಟಣ

ನಿಮ್ಮ ಸಾನಿಧ್ಯದಿಂದ ಕಾರ್ಯಕ್ರಮದ ಯಶಸ್ಸಿಗೆ
ಸಹಕಾರ ನೀಡಲು ವಿನಂತಿ.

📞 ಮಾಹಿತಿ:
86949 71173 / 98804 50674

03/01/2026

👨‍⚕️ಶ್ರೀರಂಗಪಟ್ಟಣ ಚಂದ್ರವನ ಆಶ್ರಮದಲ್ಲಿರುವ, ' *ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆ'ಯಲ್ಲಿ* , ದಿ. 03-01-2026 ರ ಶನಿವಾರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ, ಖ್ಯಾತ ಆಯುರ್ವೇದ ತಜ್ಞರಾದ ಡಾII ಎನ್. ನಾಗೇಶ್ ರವರು ರೋಗಿಗಳ ಭೇಟಿಗೆ ಲಭ್ಯವಿರುತ್ತಾರೆ. ಉತ್ತಮ ಆರೋಗ್ಯದ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಂಪರ್ಕಿಸಿ : 9035120686/ 08236-296276🩺

ದಿನಾಂಕ : 29.12.2025ಚಂದ್ರವನ ಆಶ್ರಮದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ರೋಟರಿ ಕಾವೇರಿಸಿರಿ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರಾದ ರೊ. ಎಲಿಜಬೆ...
02/01/2026

ದಿನಾಂಕ : 29.12.2025
ಚಂದ್ರವನ ಆಶ್ರಮದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ರೋಟರಿ ಕಾವೇರಿಸಿರಿ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರಾದ ರೊ. ಎಲಿಜಬೆತ್ ಚೆರಿಯನ್, ಜಿಲ್ಲೆ 3192 ರವರು ದಿನಾಂಕ 28.12.2025ರಂದು ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು, ರೋಟರಿ ಸಂಸ್ಥೆಯ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಕೂಡಿ ರೊ. ಎಲಿಜಬೆತ್ ಚೆರಿಯನ್‌ರವರಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ಮಾತನಾಡಿ, ರೋಟರಿ ಸಂಸ್ಥೆ ಕಾವೇರಿ ನದಿ ಪಶ್ಚಿಮವಾಹಿನಿ, ಬಂಗಾರದೊಡ್ಡಿ, ಶ್ರೀರಂಗನಾಥಸ್ವಾಮಿ ದೇವಸ್ಥಾನ, ನಿಮಿಷಾಂಭ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳುವ ಮೂಲಕ ಕಾವೇರಿನದಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಇದಕ್ಕೆ ಸ್ಪಂದಿಸಿದ ರೋಟರಿ ರಾಜ್ಯಪಾಲರು ರೋಟರಿ ಕಾವೇರಿಸಿರಿ ವತಿಯಿಂದ ಪ್ರಸ್ತಾವನೆ ಪಡೆದು ಯೋಜನೆಗೆ ರೋಟರಿ ಜಿಲ್ಲೆ 3192 ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎನ್.ಎಸ್. ಮಹದೇವಪ್ರಸಾದ್, ಪಿಡಿಜೆ ರೇಣುಕೇಶ್ವರ, ಜಿಲ್ಲಾ ಕಾರ್ಯದರ್ಶಿ ಜಗದೀಶ್, ಕಾರಿಯಪ್ಪ, ರೋಟರಿ ಕಾವೇರಿಸಿರಿ ಸಂಸ್ಥೆಯ ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳು ಹಾಜರಿದ್ದರು.

Address

Purvavahini, Srirangapatna
Mandya
571438

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm
Sunday 10am - 6pm

Telephone

+918694971173

Alerts

Be the first to know and let us send you an email when Chandravana Ashrama posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Chandravana Ashrama:

Share