07/07/2026
ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ಶ್ರೀ_ತಲೆಬೈಲು
ಮಠಕ್ಕೆ ಅನುಗ್ರಹ ಪ್ರಾರ್ಥನೆ ನಡೆಸುವ ಉದ್ದೇಶದಿಂದ ಕರ್ನಾಟಕದ ಖ್ಯಾತ ರಂಗಕರ್ಮಿ #ಶ್ರೀಯುತ_ಅಡ್ಡಂಡ_ಕಾರ್ಯಪ್ಪ_ದಂಪತಿಗಳು ಆಗಮಿಸಿದ್ದರು. ಅವರೊಂದಿಗೆ ಹಲವಾರು ವಿಷಯಗಳ ಕುರಿತು ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದೆವು. ಬಲಪಂಥೀಯ ರಂಗಕರ್ಮಿಯೊಬ್ಬ ಕರ್ನಾಟಕದಲ್ಲಿ ಅನುಭವಿಸಿದ,ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರೆ ಹಿಂದುತ್ವದ ಹೆಸರಿನಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಪಕ್ಷವೊಂದು ತಾನು ಅಧಿಕಾರದಲ್ಲಿದ್ದಾಗ ರಾಷ್ಟ್ರೀಯವಾದಿಗಳನ್ನು ನಡೆಸಿಕೊಂಡ ರೀತಿಯ ಬಗ್ಗೆ ತಿಳಿದು ಆ ರಾಜಕಾರಣಿಗಳ ಬಗ್ಗೆ ಅದೊಂದು ರೀತಿಯ ಅಸಹ್ಯಕರ ಭಾವನೆ ಮೂಡಿದ್ದಂತೂ ಸುಳ್ಳಲ್ಲಾ...
ಇವರ ರಾಜಕಾರಣಕ್ಕೆ,ಅಧಿಕಾರದ ಹಾದಿಗೆ,ಸುಖದ ಸುಪ್ಪತ್ತಿಗೆಯಲ್ಲಿ ನಲಿದು ತೊಲೆದಾಡಲು ಹಿಂದೂ ರಾಷ್ಟ್ರೀಯವಾದಿಗಳ ಅಗತ್ಯವಿದೆ ಆದರೆ ಅಧಿಕಾರದ ಕುರ್ಚಿಯಲ್ಲಿ ಕುಳಿತ ನಂತರ ಇವರ ನೀಚ ರಾಜಕೀಯವು ಕರ್ನಾಟಕದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಹುದೊಡ್ಡ ಚಳುವಳಿಯನ್ನೇ ಮುಗಿಸಿಬಿಡಲು ಹಿಂದೆ ಮುಂದೆ ನೋಡುವುದಿಲ್ಲ ಎಂಬ ಆತಂಕದ ಭಾವವೊoದು ಆವರಿಸಿದ್ದಂತು ಸತ್ಯ ..... ಹೊಂದಾಣಿಕೆಯ ರಾಜಕೀಯದ ಕಥೆಗಳು,ತಮ್ಮ ಕುರ್ಚಿ ಉಳಿಸಿಕೊಳ್ಳುವ ಸ್ವಾರ್ಥ ಆಕಾಂಕ್ಷೆಗಳ ಕುರಿತು,ಆರ್ ಎಸ್ ಎಸ್ ಮತ್ತು ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ತನ್ನ ಕುಟುಂಬದವರಿಗೆ ಅಧಿಕಾರ ಸಿಗಬೇಕೆಂಬ ಹಪಾಹಪಿತನ, ಇವೆಲ್ಲವುಗಳಿಂದ ದೇವದುರ್ಲಭ ಕಾರ್ಯಕರ್ತರು ಮಾನಸಿಕವಾಗಿ ಅದೆಷ್ಟು ನೊoದಿರಬಹುದು ಎಂಬುದು ಕಾರ್ಯಪ್ಪನವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.ಈ ವಿಷಯದಲ್ಲಿ ಕಾರ್ಯಪ್ಪನವರಿಗೂ ಅಪಾರ ವೇದನೆ ಇದೆ. ಇನ್ನಾದರೂ ರಾಷ್ಟ್ರೀಯವಾದಿ ಪಕ್ಷವಾದ ಭಾಜಪವು ತನ್ನೊಳಗಿನ ನೀಚ,ಕೆಳಮಟ್ಟದ ರಾಜಕಾರಣವನ್ನು ಬಿಟ್ಟು ದೇವದುರ್ಲಭ ಕಾರ್ಯಕರ್ತರೊoದಿಗೆ ಪಕ್ಷದ ತತ್ವ ಸಿದ್ದಾಂತಕ್ಕನುಗುಣವಾಗಿ ರಾಜ್ಯಾದ್ಯಂತ ಸಂಘಟನೆ ಮಾಡುವುದರ ಮುಖಾಂತರ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಲಿ ಎಂಬುದೇ ನಮ್ಮ ಆಶಯ.