Muliyar Shree Subrahmanyaswamy Kshetra

Muliyar Shree  Subrahmanyaswamy Kshetra Muliyar Shree Subrahmanyaswamy Temple, Muliyar Village, P.O.Muliyar, 671542, Kasaragod Dist, Kerala State, India. P.No.. 04994251011, 09846014452.

POOJAA TIMINGS
NADE BAAGILU TEREYUVUDU : 06.00 AM
ABHISHEKA POOJA ................ : 06.30 AM
USHA POOJA .......................... : 07.30 AM
MADHYAHNA POOJA .............. : 12.00 AM
NADE BAAGILU TEREYUVUDU : 06.30 PM
RATRE POOJE ....................... : 07.00 PM

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ  ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನ               ಕಾಸರಗೋಡಿನ ಮುಳಿಯಾರು ಶ್ರೀ ಸುಬ್ರಹ್ಮಣ್ಯ...
30/05/2026

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನ
ಕಾಸರಗೋಡಿನ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನವಾಯಿತು. ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮಗಳು 29.5.2026. ಶುಕ್ರವಾರ ಸಂಪನ್ನವಾಗಿ ಜರಗಿದವು.
ಬೆಳಗೆ 7 ರಿಂದ ಕ್ರಮಾನುಗತವಾಗಿ ಉಷ ಪೂಜೆ , ಗಣಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ ಮಂತ್ರಾಕ್ಷತೆ ಇವು ಜರಗಿದವು.
ರಾತ್ರಿ ಶ್ರೀರಂಗ ಪೂಜೆ ಜರಗಿತು.
ಶ್ರೀ ಗಿರೀಶ ಅಡಿಗ ಕರಿಚೇರಿ ಅವರಿಂದ ದೇವರ ದರ್ಶನಬಲಿ ಜರಗಿದವು. ಪ್ರಧಾನ ಅರ್ಚಕ ಶ್ರೀ ಅನಂತಪದ್ಮನಾಭ ಮಯ್ಯ ವೈದಿಕ ವಿಭಾಗ ಕಾರ್ಯನಿರ್ವಹಿಸಿದರು.
ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ಸಂಯೋಜನೆ ಮಾಡಿದರು.

25/05/2025

🪷🌺🌸🌼🌻🌹🌷💐🥀☘️🌿🍀🍃
ಭಕ್ತ ಮಹನೀಯರೇ
ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ನಡೆದುಕೊಂಡುಬರುವ ಪ್ರತಿಷ್ಠಾ ದಿನ ಉತ್ಸವವು ಇದೇ ಬರುವ 28.05.2025 ಬುಧವಾರ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷೆ

ಮುಳಿಯಾರು ಸೀತಾರಾಮ ಬಳ್ಳುಳ್ಳಾಯ

ಕಾರ್ಯಕ್ರಮ
------------------
ಬೆಳಗ್ಗೆ 7 : ಗಣಹೋಮ
ಬೆಳಗ್ಗೆ 9 : 25 ಕಲಶ
11.30 : ಮಹಾಪೂಜೆ
12 : ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ದರ್ಶನ ಬಲಿ , ಬಟ್ಟಲು ಕಾಣಿಕೆ, ಪ್ರಸಾದ ಭೋಜನ
ರಾತ್ರೆ 07.30 : ಶ್ರೀರಂಗಪೂಜೆ
🪷🌺🌸🌼🌻🌹🌷💐🥀☘️🌿🍀🍃

04/12/2024
ಮುಳಿಯಾರು ಷಷ್ಠಿ ಮಹೋತ್ಸವ 29.11.2022 ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವದ ಅಂಗವಾಗಿ  ನಾಗನ ಕಟ್...
29/11/2022

ಮುಳಿಯಾರು ಷಷ್ಠಿ ಮಹೋತ್ಸವ 29.11.2022
ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವದ ಅಂಗವಾಗಿ ನಾಗನ ಕಟ್ಟೆಯಲ್ಲಿ ಪೂಜೆ, ಭಕ್ತರಿಂದ ಸೇವೆ ಮತ್ತು ತುಲಾಭಾರ ಸೇವೆ ಜರಗಿತು

ಮುಳಿಯಾರು ಷಷ್ಠಿ ಮಹೋತ್ಸವಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವವು ಇದೇ ಬರುವ ನವಂಬರ್ 29 ಮತ್ತು 30 ...
29/11/2022

ಮುಳಿಯಾರು ಷಷ್ಠಿ ಮಹೋತ್ಸವ
ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವವು ಇದೇ ಬರುವ ನವಂಬರ್ 29 ಮತ್ತು 30 ಮಂಗಳವಾರ ಮತ್ತು ಬುಧವಾರಗಳಂದು ( ವೃಶ್ಚಿಕ ಮಾಸ ೧೩ ಮತ್ತು ೧೪ )
ಕ್ಷೇತ್ರ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳು ಆ ದಿನಗಳಲ್ಲಿ ಕ್ಷೇತ್ರ ಸಂದರ್ಶಿಸಿ ಶ್ರೀ ದೇವರ ಶ್ರೀ ಮುಡಿ ಗಂಧಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಅಪೇಕ್ಷೆ
ಸೀತಾರಾಮ ಬಳ್ಳುಳ್ಳಾಯ,
ಶ್ರೀ ಕ್ಷೇತ್ರ ಮುಳಿಯಾರು.
--------------------
ಕಾರ್ಯಕ್ರಮ ವಿವರ
--------------------
28.11.2022 - ಸಂಜೆ 7 ರಿಂದ
ವಾಸ್ತು ಬಲಿ, ರಕ್ಷೋಘ್ನ, ಅತ್ತಾಳ ಪೂಜೆ
29.11.2022 - ಬೆಳಗ್ಗೆ 6 ರಿಂದ
ಅಭಿಷೇಕ ಪೂಜೆ, ಉಷಪೂಜೆ, ಗಣಹೋಮ, ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ.
29.11.2022 - ಸಂಜೆ 06.45 - ಮೂಡುಮನೆ ಬಳ್ಳುಳ್ಳಾಯ ತರವಾಡು ಮನೆಯಿಂದ ಭಂಡಾರ ಆಗಮನ.
ಸಂಜೆ 06.30 ದೀಪಾರಾಧನೆ.
ರಾತ್ರೆ 07.00 ತೊಡಂಗಲ್
ರಾತ್ರೆ 07.30 ರಾತ್ರೆ ಪೂಜೆ
ರಾತ್ರೆ 07.45 - ದೇವರ ಬಲಿ ಹೊರಡುವುದು, ಶ್ರೀ ಭೂತಬಲಿ.
ರಾತ್ರೆ 08.45 - ಕೋಟೂರು ಕಟ್ಟೆ ಸವಾರಿ.
ರಾತ್ರೆ 08.50 ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಲ್ಲ, ಮುಳಿಯಾರು - ಇವರಿಂದ ಯಕ್ಷಗಾನ ಬಯಲಾಟ.
ರಾತ್ರೆ 10.30 ಕ್ಕೆ - ಶ್ರೀ ದೇವರ ಕೋಟೂರು ಕಟ್ಟೆ ಸವಾರಿ ಹಿಂತಿರುಗುವುದು.
ಕಟ್ಟೆ ಪೂಜೆ, ರಾಜಾಂಗಣದಲ್ಲಿ ನೃತ್ಯ ಸೇವೆ,
30.11.2022 ಬುಧವಾರ - ಬೆಳಗ್ಗೆ ಅಭಿಷೇಕ ಪೂಜೆ, ಉಷಪೂಜೆ,
ಬೆಳಗ್ಗೆ 10.00 ಕ್ಕೆ - ಶಿವೇಲಿ, ರಾಜಾಂಗಣದಲ್ಲಿ ದರ್ಶನಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪೂಜೆ, ಮಂತ್ರಾಕ್ಷತೆ,
ಮಧ್ಯಾಹ್ನ 01.00 ರಿಂದ - ಶ್ರೀ ವಿಷ್ಣುಮುರ್ತಿ ದೈವದ ಕೋಲ
ಸಂಜೆ - 06.30 - ದೀಪಾರಾಧನೆ.
ರಾತ್ರೆ - 07.30 - ಶ್ರೀರಂಗಪೂಜೆ
pc - Udaya Kambar
🌾💐🌷🌹🥀🪷🌺🌸🌼🌻

04/12/2019
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ವರ್ಷಾವಧಿ ಷಷ್ಠಿ ಉತ್ಸವ02.12.2019 ಸೋಮವಾರ, ಪ್ರಥಮದಿನ~~~~~~~~~~~~~~~~~~~~~~ಮುಳಿಯಾರು ಶ...
04/12/2019

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ವರ್ಷಾವಧಿ ಷಷ್ಠಿ ಉತ್ಸವ
02.12.2019 ಸೋಮವಾರ, ಪ್ರಥಮದಿನ
~~~~~~~~~~~~~~~~~~~~~~
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಉತ್ಸವವು ಪ್ರಥಮದಿನ ಅಭಿಷೇಖ ಗಣಹೋಮ ನವಕಾಭಿಷೇಕದೊಂದಿಗೆ ಪ್ರಾರಂಭವಾಯಿತು. ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾಯಿತು. ಅರವತ್ ಶ್ರೀ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರಗಿದವು. ಬಳಿಕ ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಸಾಂಗವಾಗಿ ನೆರವೇರಿದವು.
ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಉಪಾಸನೆಯು ಉತ್ಸವಕ್ಕೆ ಮೆರುಗನ್ನುಂಟುಮಾಡಿತು. ರಾತ್ರಿ ಶ್ರೀ ಭೂತಬಲಿ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯಸೇವೆ ಇವು ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆಯು ಜರಗಿತು.
ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರರಾಗಿರುವ ಶ್ರೀ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು.

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವ13.12.2018, 14.12.2018ಪ್ರಥಮ ದಿನ ವಿಶೇಷ ~~~~~~~~~~~~~ಮುಳಿಯಾರು ಶ್ರ...
19/12/2018

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವ
13.12.2018, 14.12.2018

ಪ್ರಥಮ ದಿನ ವಿಶೇಷ
~~~~~~~~~~~~~
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವವು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಪ್ರಾರಂಭವಾಯಿತು. ಪೂರ್ವಾಹ್ನದಿಂದ ಅಭಿಷೇಕ ಪೂಜೆ, ಗಣಹೋಮ, ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ ಇವು ನಿರಂತರವಾಗಿ ಜರಗಿದವು. ಸಂಗೀತ ಉಪಾಸನಾ ಸೇವೆಯ ಅಂಗವಾಗಿ ವಿದ್ವಾನ್ ನಟರಾಜ ಶರ್ಮಾ ಇವರ ಶಿಷ್ಯೆ ಶ್ರೀಮತಿ ಸ್ಮಿತಾ ಉದಯಪ್ರಕಾಶ್ ಮತ್ತು ಬಳಗವದರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮವು ಜರಗಿತು. ಸಹಗಾಯನದಲ್ಲಿ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು ಮತ್ತು ಪ್ರಸನ್ನಕುಮಾರ್ ಬೆಳ್ಳಾರೆ ಸಾನಿಧ್ಯವಹಿಸಿದರು . ಕೀಬೋರ್ಡಿನಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು ಮತ್ತು ತಬಲಾ ವಾದನದಲ್ಲಿ ಅಶೋಕ್ ಕಾಸರಗೋಡು ಇವರು ಸಹಕರಿಸಿದರು. ಗೋವಿಂದಬಳ್ಳ ಮೂಲೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ಮಧ್ಯಾಹ್ನ ಮಾಹಾಪೂಜೆ, ಪ್ರಸಾದ , ಅನ್ನದಾನ ನಡೆಯಿತು. ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರರಾಗಿರುವ ಶ್ರೀ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು.

ದ್ವಿತೀಯ ದಿನ
~~~~~~~~
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಸಂಪನ್ನವಾಯಿತು.
~~~~~~~~~~~~~~~~~~~~~~
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಸಂಪನ್ನವಾಯಿತು. ಅರವತ್ ಶ್ರೀ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಗಳು ಸಾಂಗವಾಗಿ ಜರಗಿದವು. ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಉಪಾಸನೆಯು ಉತ್ಸವಕ್ಕೆ ಮೆರುಗನ್ನುಂಟುಮಾಡಿತು. ರಾತ್ರಿ ಶ್ರೀ ಭೂತಬಲಿ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯಸೇವೆ ಇವು ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆಯು ಜರಗಿತು.
ದ್ವಿತೀಯ ದಿನ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾ ಪೂಜೆ, ಮಂತ್ರಾಕ್ಷತೆ ಮತ್ತು ಪ್ರಸಾದ ಭೋಜನ ಜರಗಿದವು. ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಕೋಲವು ಜರಗಿ ದೈವಾರಾಧನೆ ಸಂಪನ್ನವಾಯಿತು. ಶ್ರೀ ಗಿರೀಶ ಅಡಿಗ ಕರ್ಚೇರಿ ಅವರಿಂದ ದೇವರ ನೃತ್ಯಸೇವೆ ಮತ್ತು ಶ್ರೀ ಕೃಷ್ಣ ಹೊಳ್ಳ ಬಾರೆ ಇವರಿಂದ ದರ್ಶನಬಲಿ ಜರಗಿದವು. ರಾತ್ರಿ ರಂಗಪೂಜೆ ನೆರವೇರಿತು. ಬಳಿಕ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ವೇಣುಗೋಪಾಲ ತತ್ವಮಸಿ ಪ್ರಾಯೋಜಕತ್ವದಲ್ಲಿ ' ಕುಮಾರ ವಿಜಯ ' ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟವು ಯಶಸ್ವಿಯಾಯಿತು. ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರರಾಗಿರುವ ಶ್ರೀ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು. ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಮಯ್ಯ ಅವರು ವೈದಿಕ ವಿಭಾಗ ಕಾರ್ಯ ನಿರ್ವಹಣೆಯಲ್ಲಿ ಸಹಕಾರವನ್ನಿತ್ತರು.

Address

P. O. MULIYAR,, Kasaragod Dist State
Kasaragod
671542

Telephone

04994 251011

Website

Alerts

Be the first to know and let us send you an email when Muliyar Shree Subrahmanyaswamy Kshetra posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Muliyar Shree Subrahmanyaswamy Kshetra:

Share