09/12/2024
ನಿನ್ನೆ ಎಡನೀರು ಮಠ ದ ಯತಿವರ್ಯರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ನೇತೃತ್ವದಲ್ಲಿ ವಾಣೀನಗರ ಸೇವಾ ಬಸ್ತಿ (ಕೋಲನಿ) ಗಳ ಮನೆ ಸಂಪರ್ಕ ಅಭಿಯಾನ ನಡೆಯಿತು. ಸೇವಾ ಬಸ್ತಿಯಲ್ಲಿರುವ ಎಲ್ಲಾ ಮನೆಗಳಲ್ಲಿ ಯೂ ಶ್ರೀಗಳು ದೀಪ ಬೆಳಗಿ ಆಶೀರ್ವದಿಸಿದರು. ಕಾರ್ಯಕ್ರಮ ದಲ್ಲಿ ಶ್ರೀ ಕೃಷ್ಣ ಭಜನಾ ಸಂಘ ಹಾಗೂ ಶ್ರೀ ಕೃಷ್ಣ ಮಹಿಳಾ ಭಜನಾ ಸಂಘದ ಭಜಕರು ಕಾರ್ಯಕ್ರಮದುದ್ದಕ್ಕೂ ಭಜನೆಯನ್ನ ಹಾಡಿಕೊಂಡು ಅಭಿಯಾನವನ್ನ ಯಶಸ್ವಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಜ್ಜನ ಬಂಧುಗಳಿಗೆ ಧನ್ಯವಾದಗಳು