03/04/2017
ಬಸವಣ್ಣನವರ ಐಕ್ಯ ಹಾಗೂ ವಿದ್ಯಾ ಕ್ಷೇತ್ರವಾದ ಧರ್ಮ ಕ್ಷೇತ್ರ ಕೂಡಲ ಸಂಗಮದಲ್ಲಿ
ಕೂಡಲ ಸಂಗಮೇಶ್ವರ ರಥೋತ್ಸವ ಹಾಗೂ ಬಸವ ಜಯಂತ್ಯೋತ್ಸವದ ಅಂಗವಾಗಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ ಉಪಸ್ಥಿತಿ ಯಲ್ಲಿ ಕೂಡಲ ಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರನ್ನು "ಬಸವ ಸಂಗಮೋತ್ಸವ ೨೦೧೭" ಕಾರ್ಯಕ್ರಮಗಳಿಗೆ ವಿವಿಧ ಸಮಿತಿಗಳ ಮುಖ್ಯಸ್ಥರನ್ನಾಗಿ ದಿನಾಂಕ ೦೨-೦೪-೨೦೧೭ ರಂದು ನಡೆಸಿದ ಸಭೆಯಲ್ಲಿ ನೇಮಕ ಮಾಡಲಾಯಿತು