Shri Siddharudha Bharati - Siddharudha Math, Hubballi KA-63.

  • Home
  • India
  • Hubli
  • Shri Siddharudha Bharati - Siddharudha Math, Hubballi KA-63.

Shri Siddharudha Bharati - Siddharudha Math, Hubballi KA-63. Contact information, map and directions, contact form, opening hours, services, ratings, photos, videos and announcements from Shri Siddharudha Bharati - Siddharudha Math, Hubballi KA-63., Assemblies of God, Hubli.

🚩ಓಂ ನಮಃ ಶಿವಾಯ ಅಧಿಕ ಮಾಸ ಸೋಮವಾರ ಉಭಯ ಸದ್ಗುರುಗಳ ಅಲಂಕಾರ.... ಭಕ್ತಾದಿಗಳಿಗೆ ಉಭಯ ಸದ್ಗುರುಗಳ ಆಶೀರ್ವಾದ ಸಿಗಲಿ...ಹೆಚ್ಚಿನ ಮಾಹಿತಿಗಾಗಿ ಭಕ...
18/05/2026

🚩ಓಂ ನಮಃ ಶಿವಾಯ ಅಧಿಕ ಮಾಸ ಸೋಮವಾರ ಉಭಯ ಸದ್ಗುರುಗಳ ಅಲಂಕಾರ.... ಭಕ್ತಾದಿಗಳಿಗೆ ಉಭಯ ಸದ್ಗುರುಗಳ ಆಶೀರ್ವಾದ ಸಿಗಲಿ...

ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು ಕೆಳಗಿನ ಲಿಂಕ್ ಬಳಸಲು ವಿನಂತಿ...
https://www.facebook.com/SSBKA63/

🚩ಓಂ ನಮಃ ಶಿವಾಯ ಬಾದಮಿ ಅಮವಾಸ್ಯೆ ಭಕ್ತಾದಿಗಳಿಗೆ ಶುಭ ತರಲಿ...ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಳಗಿನ ಲಿಂಕ್ ಬಳಸಲು ವಿನಂತಿ...https://...
16/05/2026

🚩ಓಂ ನಮಃ ಶಿವಾಯ ಬಾದಮಿ ಅಮವಾಸ್ಯೆ ಭಕ್ತಾದಿಗಳಿಗೆ ಶುಭ ತರಲಿ...

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಳಗಿನ ಲಿಂಕ್ ಬಳಸಲು ವಿನಂತಿ...
https://www.facebook.com/SSBKA63/

🚩 ಓಂ ನಮಃ ಶಿವಾಯ 11/05/2026 ಸೋಮವಾರ ಉಭಯ ಸದ್ಗುರುಗಳ ಅಲಂಕಾರ...https://www.facebook.com/SSBKA63/
11/05/2026

🚩 ಓಂ ನಮಃ ಶಿವಾಯ 11/05/2026 ಸೋಮವಾರ ಉಭಯ ಸದ್ಗುರುಗಳ ಅಲಂಕಾರ...
https://www.facebook.com/SSBKA63/

🚩ಓಂ ನಮಃ ಶಿವಾಯ.....ಕನಕ ಮಹಾಮಣಿ ಭೂಷಿತ ಲಿಂಗಂ, ಫಣಿಪತಿ ವೇಷ್ಟಿತ ಶೋಭಿತ ಲಿಂಗಂ |ದಕ್ಷ ಸುಯಜ್ಞ ವಿನಾಶನ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ...
04/05/2026

🚩ಓಂ ನಮಃ ಶಿವಾಯ.....
ಕನಕ ಮಹಾಮಣಿ ಭೂಷಿತ ಲಿಂಗಂ,
ಫಣಿಪತಿ ವೇಷ್ಟಿತ ಶೋಭಿತ ಲಿಂಗಂ |
ದಕ್ಷ ಸುಯಜ್ಞ ವಿನಾಶನ ಲಿಂಗಂ,
ತತ್ಪ್ರಣಮಾಮಿ ಸದಾ ಶಿವಲಿಂಗಂ.....

ಸೋಮವಾರ ಉಭಯ ಸದ್ಗುರುಗಳ ಅಲಂಕಾರ.. ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ....
https://www.facebook.com/SSBKA63/

🙏ಓಂ ನಮಃ ಶಿವಾಯ 🚩🚩🚩ನಮಿಸುವ ಕೈ ಗಳಿಗಿಂತಲ ದುಡಿಯುವ ಕೈ ಗಳು ಶ್ರೇಷ್ಠ....ಶೃಮಿಕರಿಗೆ, ಕಾರ್ಮಿಕರಿಗೆ, ದುಡಿಯುವ ಸಮಸ್ತ ಎಲ್ಲಾ ವರ್ಗದ ಭಕ್ತಾದಿಗ...
01/05/2026

🙏ಓಂ ನಮಃ ಶಿವಾಯ 🚩🚩🚩
ನಮಿಸುವ ಕೈ ಗಳಿಗಿಂತಲ ದುಡಿಯುವ ಕೈ ಗಳು ಶ್ರೇಷ್ಠ....ಶೃಮಿಕರಿಗೆ, ಕಾರ್ಮಿಕರಿಗೆ, ದುಡಿಯುವ ಸಮಸ್ತ ಎಲ್ಲಾ ವರ್ಗದ ಭಕ್ತಾದಿಗಳಿಗೆ ಉಭಯ ಸದ್ಗುರುಗಳ ಆಶೀರ್ವಾದ ಸಿಗಲಿ.... ದುಡಿತಕ್ಕೆ ತಕ್ಕ ಪ್ರತಿಫಲ ಸುಖ ಶಾಂತಿ ನೆಮ್ಮದಿ ಸಿಗಲಿ...
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆಳಗಿನ ಲಿಂಕ್ ಬಳಸಿ ಮಾಹಿತಿ ಹೆಚ್ಚು ಪ್ರಚಾರ ಮಾಡಿ
https://www.facebook.com/SSBKA63/

🚩ಓಂ ನಮಃ ಶಿವಾಯ ಸದ್ಗುರು ಶ್ರೀ ಸಿದ್ಧಾರೂಢರ ಶಿಷ್ಯರಾದ ಸದ್ಗುರು ಶ್ರೀ ಗುರುನಾಥಾರೂಢರ 64 ನೇ ಪುಣ್ಯಾರಾಧನೆ ಕಾರ್ಯಕ್ರಮ ಹುಬ್ಬಳ್ಳಿ ಶ್ರೀ ಮಠದಲ...
26/04/2026

🚩ಓಂ ನಮಃ ಶಿವಾಯ ಸದ್ಗುರು ಶ್ರೀ ಸಿದ್ಧಾರೂಢರ ಶಿಷ್ಯರಾದ ಸದ್ಗುರು ಶ್ರೀ ಗುರುನಾಥಾರೂಢರ 64 ನೇ ಪುಣ್ಯಾರಾಧನೆ ಕಾರ್ಯಕ್ರಮ ಹುಬ್ಬಳ್ಳಿ ಶ್ರೀ ಮಠದಲ್ಲಿ ಸಾವಿರಾರು ಭಕ್ತಾದಿಗಳ ಮಧ್ಯ ಉಭಯ ಸದ್ಗುರುಗಳಿಗೆ ಸ್ನಾನ ಪೂಜೆ ಅಲಂಕಾರ ಶಾಸ್ತ್ರ ಪ್ರವಚನ ಮಹಾ ಪ್ರಸಾದ ದೊಂದಿಗೆ ನಗರದಲ್ಲಿ ಸುಂದರ ಅಲಂಕಾರಿಕ ಪಾಲಕಿ ಉತ್ಸವ ನಡೆಯಿತು ಉಭಯ ಸದ್ಗುರುಗಳಿಗೆ ಸಂಜೆ ಸುಂದರ ಅಲಂಕಾರ ದೊಂದಿಗೆ ಮಹಾ ಪೂಜೆ ಯೊಂದಿಗೆ ಸದ್ಗುರು ಶ್ರೀ ಗುರುನಾಥಾರೂಢರ 64ನೇ ಪುಣ್ಯಾರಾಧನೆ ಕಾರ್ಯಕ್ರಮ ತುಂಬಾ ವಿಜ್ರಂಭಣೆಯಿಂದ ಜರುಗಿತು ಸಾವಿರಾರು ಭಕ್ತಾದಿಗಳು ಶ್ರೀ ಮಠದ ಮಹಾ ಪ್ರಸಾದ ನಿಲಯಕ್ಕೆ ತಾವು ಬೆಳೆದ ಕಾಳುಕಡಿ ಗಳನ್ನು ಕೊಟ್ಟು ಪುನಿತರಾದರು ಒಟ್ಟಾರೆ ಈ ಒಂದು ಯಶಸ್ವಿ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ ಎಲ್ಲಾ ಭಕ್ತಾದಿಗಳಿಗೆ ಉಭಯ ಸದ್ಗುರುಗಳ ಆಶೀರ್ವಾದ ಸದಾಕಾಲವೂ ಇರಲಿ...

ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು ಕೆಳಗಿನ ಲಿಂಕ್ ಬಳಸಿ ಮತ್ತು ಮಾಹಿತಿಯನ್ನು ಹೆಚ್ಚು ಹೆಚ್ಚಾಗಿ ಹಂಚಿಕೊಳ್ಳಲು ವಿನಂತಿ....
https://www.facebook.com/SSBKA63/

🙏ಓಂ ನಮಃ ಶಿವಾಯ 🚩ಅದ್ವೈತ ಸಾಮ್ರಾಟ ಜಗದ್ಗುರು ಶ್ರೀ ಸಿದ್ಧಾರೂಢರ ಪರಮ ಶಿಷ್ಯ ಮಹಾ ಮೌನ ಯೋಗಿ ಸ್ಥಿತಪ್ರಜ್ಞ ಮಹಾನ್ ತಪಸ್ವಿ ಜಗದ್ಗುರು ಶ್ರೀ ಗುರ...
26/04/2026

🙏ಓಂ ನಮಃ ಶಿವಾಯ 🚩
ಅದ್ವೈತ ಸಾಮ್ರಾಟ ಜಗದ್ಗುರು ಶ್ರೀ ಸಿದ್ಧಾರೂಢರ ಪರಮ ಶಿಷ್ಯ ಮಹಾ ಮೌನ ಯೋಗಿ ಸ್ಥಿತಪ್ರಜ್ಞ ಮಹಾನ್ ತಪಸ್ವಿ ಜಗದ್ಗುರು ಶ್ರೀ ಗುರುನಾಥರೂಢರ 64 ನೇ ಪುಣ್ಯಾರಾಧನೆ ಯನ್ನು
ಇಂದು ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಉಭಯ ಸದ್ಗುರುಗಳಿಗೆ ಸ್ನಾನ, ಅಲಂಕಾರ, ಪೂಜೆ, ಶಾಸ್ತ್ರ, ಪ್ರವಚನ ದೊಂದಿಗೆ ನಗರದಲ್ಲಿ ಪಾಲಕಿ ಉತ್ಸವ ನಡೆಯುತ್ತದೆ ಸಂಜೆ ಮಹಾ‌ ಪೂಜೆ ಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಆಗಲಿದೆ ಭಕ್ತಾದಿಗಳಿಗೆ ಶ್ರೀ ಮಠದಲ್ಲಿ ಬೆಳಗಿನ ಅಲ್ಪೋಪಹಾರ ಸೇರಿದಂತೆ ಮಧ್ಯಾಹ್ನ ಮತ್ತು ರಾತ್ರಿ ಮಹಾ ಪ್ರಸಾದದ ವ್ಯವಸ್ಥೆ ಯೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ.
🙏🙏🙏🙏🙏🙏🙏🙏🙏🙏🙏🙏
ಸದ್ಗುರು ಶ್ರೀ ಸಿದ್ಧಾರೂಢರು ಹೇಳಿದಂತೆ ಸದ್ಗುರು ಶ್ರೀ ಗುರುನಾಥಾರೂಢರ ರೂಪದಲ್ಲಿ ಒಟ್ಟು 125 ವರ್ಷ ಜನರ ಉದ್ದಾರ ಮಾಡಿ ಅವತಾರ ಸಮಾಪ್ತಿಗೊಳಿಸಿದರು
ಸುಮಾರು ಹತ್ತೊಂಭತ್ತುನೂರಾ ಅರವತ್ತೆರಡನೆಯ ಇಸ್ವಿಯಲ್ಲಿ ಶ್ರೀಗುರುನಾಥರ ದೇಹದ ಆರೋಗ್ಯ ವಿಷಮಿಸಿತು. ಅನ್ನ ನೀರುಗಳನ್ನು ತೆಗೆದುಕೊಳ್ಳದೆ ನಿರಶನರಾದರು, ಆಶಕ್ತಿಯಿಂದಾಗಿ ಹಾಸಿಗೆಯಿಂದ ಮೇಲೇಳಲು ಬರುತ್ತಿರಲಿಲ್ಲ. ಚೇರಮನ್ನರು ಶ್ರೀಗಳವರನ್ನು ಔಷಧೋಪಚಾರಕ್ಕಾಗಿ ಹುಬ್ಬಳ್ಳಿಯ ಕೋ-ಆಪರೇಟಿವ್ ದವಾಖಾನೆಗೆ ಸೇರಿಸಿದರು. ಶ್ರೀಗಳವರಿಗೆ ದೇಹದ ಪ್ರಜ್ಞೆಯಿಲ್ಲದೆ ಮಾತು ಮನಗಳಿಗೆ ಮೀರಿದ ತಮ್ಮ ಸ್ವರೂಪವಾದ ಅರ್ಥಾತ್ ಬ್ರಹ್ಮಾನಂದದಲ್ಲಿಯೇ ಯಾವಾಗಲೂ ಇದ್ದರು. ಆಸ್ಪತ್ರೆಯಲ್ಲಿ ಡಾಕ್ಷರ ಸೋನಟಕ್ಕೆ ಹಾಗೂ ಆರ್. ಬಿ. ಪಾಟೀಲ ಇವರಿಂದ ಔಷಧೋಪಚಾರ ನಡೆಯಿತು. ಸ್ವಾಮಿಗಳು ಯಾವಾಗಲೂ ಅಂತರ್ಮುಖಿಗಳಾಗಿ ನಿರ್ವಿಕಲ್ಪ ಸಮಾಧಿಯಲ್ಲಿದ್ದರು. ಅವರ ದೇಹದ ತಾಪಮಾನ ಒಮ್ಮಿದೊಮ್ಮೆ ಅತಿ ಹೆಚ್ಚಾಗಿ ಅಪಾಯವಾಗುವುದನ್ನು ಕಂಡು, ಮೂರು ಥರ್ಮಾಮೀಟರ ಉಪಯೋಗಿಸಿ ಪರೀಕ್ಷಿಸಿದರು. ಚುಚ್ಚುಮದ್ದು ಕೊಡುತ್ತಿರುವಾಗಲೂ ತಮಗೂ ದೇಹಕ್ಕೂ ಯಾವ ಸಂಬಂಧವಿಲ್ಲದಂತೆ ಇದ್ದರು. ಇಂಥ ಸ್ಥಿತಿಯನ್ನು ಕಂಡ ಡಾಕ್ಟರರು ಆಶ್ಚರ್ಯಚಕಿತರಾದರು.

ಟ್ರಸ್ಟಕಮೀಟಿಯವರ ಕಟ್ಟಪ್ಪಣೆಯ ಮೇರೆಗೆ ಶ್ರೀಗಳ ಸ್ಥಿತಿಯನ್ನು ಕಂಡು, ಅವರನ್ನು ನೋಡುವುದಕ್ಕೆ ಯಾರಿಗೂ ಅವಕಾಶ ವಿರಲಿಲ್ಲವಾದ್ದರಿಂದ ವರ್ತಮಾನ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಭಕ್ತರು ನಂಬಬೇಕಾಯಿತು. (ಶ್ರೀಗುರುಸಿದ್ದಪ್ಪ ಧಾರವಾಡ ಇವರು ಬರೆದ ಶ್ರೀಗುರುನಾಥಾರೂಢರ ಚರಿತ್ರಾಧಾರಿತ ಮೌನ ವ್ಯಾಖ್ಯಾನದಂತೆ) ಟ್ರಸ್ಟ್ ಕಮೀಟಿಯ ಉಪಾಧ್ಯಕ್ಷರಾದ ಕಲ್ಲಪ್ಪ ತಲವಾಯಿಯವರು ಪ್ರತ್ಯಕ್ಷ ಕಂಡದ್ದನ್ನು ವಿವರಿಸುತ್ತ ಹೇಳಿದ್ದೇನೆಂದರೆ, ಶ್ರೀಗಳ ದೇಹಾಂತ ಸಮಯ ಸಮೀಪಿಸಿದಂತೆ ಅವರು ಮಲಗಿರುವಾಗ, ಅವರ ಶಿರದಿಂದ ಅಂಗುಷ್ಠದವರೆಗೆ, ಅಂಗುಷ್ಟದಿಂದ ಶಿರದವರೆಗೆ ಒಂದು ಪ್ರಕಾಶ ಪುಂಜವು ಚಲಿಸುತ್ತಿದ್ದಂತೆ ಶ್ರೀಗುರುನಾಥ ಸ್ವಾಮಿಯವರು ದಿನಾಂಕ ಹದಿಮೂರು ಐದನೆಯ ತಿಂಗಳು ಹತ್ತೊಂಭತ್ತುನೂರಾ ಅರವತ್ತೆರಡರಂದು ಮಧ್ಯಾಹ್ನ ಹನ್ನೊಂದು ಐವತ್ತು ನಿಮಿಷಕ್ಕೆ ಅಂತಿಮ ಉಸಿರೆಳೆಯುವ ಸಮಯದಲ್ಲಿ, ಅವರ ಹತ್ತಿರವಿದ್ದ ಹನುಮಂತಪ್ಪ ಸಾಧು, ಮಲ್ಲಮ್ಮ ಉಜ್ಜಣ್ಣವರ, ಕಲ್ಲಪ್ಪ ತಲವಾಯಿ ಸಿಸ್ಟರ್ ತಡಪಟ್ಟಿ ಎನ್ನುವ ನರ್ಸ ಇವರಿದ್ದರು. ಶ್ರೀಮತಿ ಮಲ್ಲಮ್ಮನವರು ತಿಳಿಸಿದ ಪ್ರಕಾರ, ಶ್ರೀಗಳು ಅಂತಿಮ ಸಮಯದಲ್ಲಿ ಓಂಕಾರನಾದ ಒಮ್ಮಿಂದೊಮ್ಮೆ ಕೇಳಿ ಬಂದಿತು. ಕೂಡಲೆ ಅವರೆಲ್ಲರೂ ಧಾವಿಸಿ ನೋಡಿದಾಗ ಮೈಯೆಲ್ಲ ತಣ್ಣಗಾಗಿತ್ತು. ನೆತ್ತಿಯ ಮೇಲೆ ಮಾತ್ರ ಬಿಸಿಯಾಗಿತ್ತು. ಹೀಗೆ ತಮ್ಮ ಐವತ್ತೂರನೇ ವಯಸ್ಸಿನಲ್ಲಿ ತಮ್ಮ ಅವತಾರ ಸಮಾಪ್ತಿಗೊಳಿಸಿದರು.
ಈ ಸುದ್ದಿಯನ್ನು ಆಕಾಶವಾಣಿ, ವರ್ತಮಾನ ಪತ್ರಿಕೆಗಳಲ್ಲಿ ಮತ್ತು ತಂತಿ ಮೂಲಕ ತಿಳಿದ ನಾಡಿನ ಮತ್ತು ಹೊರನಾಡಿನ ಅಪಾರ ಭಕ್ತರು, ಅನಿರೀಕ್ಷಿತ ಆಘಾತದಿಂದ ದುಃಖಿತರಾಗಿ, ಶ್ರೀಗಳ ಅಂತಿಮ ದರ್ಶನಕ್ಕಾಗಿ ಅಷ್ಟದಿಕ್ಕುಗಳಿಂದ ಬರತೊಡಗಿದರು ಶ್ರೀಗಳವರ ಪಾರ್ಥಿವ ಶರೀರವನ್ನು ಕೈಲಾಸ ಮಂಟಪದಲ್ಲಿಟ್ಟು, ಅಂತಿಮ ದರ್ಶನದ ವ್ಯವಸ್ಥೆ ಮಾಡಿದರು. ಶ್ರೀಗುರುಗಳ ಶರೀರವನ್ನು ಕಂಡು ಭಕ್ತರ ದುಃಖ ಉಮ್ಮಳಿಸಿ ಬಿಕ್ಕಿ ಬಿಕ್ಕಿ ಆಳುವ ತಾಯಂದಿರ ಮತ್ತು ಭಕ್ತರ ರೋಧನ ಮುಗಿಲು ಮುಟ್ಟಿತು. ಇಡೀ ಜನ ಸಮುದಾಯವ ದುಃಖಸಾಗರದಲ್ಲಿ ಮುಳುಗಿತು. ಹುಬ್ಬಳ್ಳಿ ನಗರಕ್ಕೆ ಕತ್ತಲೆ ಆವರಿಸಿದಂತಾಯಿತು. ಇಂದಿಗೂ ಉಭಯ ಶ್ರಿಗಳ ಸಮಾಧಿ ಮಂದಿರದ ಗದ್ದುಗೆಗಳು ಬಂದ ಭಕ್ತರ ಉದ್ದಾರ ಮಾಡುತ್ತಲಿದ್ದಾರೆ.
Source - ಶ್ರೀ ಗುರುನಾಥಾರೂಢರ ಚರಿತ್ರೆ ಪುಸ್ತಕ

ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು ಕೆಳಗಿನ ಲಿಂಕ್ ಬಳಸಿ.🙏🙏
https://www.facebook.com/SSBKA63/

🚩ಓಂ ನಮಃ ಶಿವಾಯ🙏 ಗುರುನಾಥ ರೂಢರ ಪುಣ್ಯ ತಿಥಿಯ ಎರಡನೇ ದಿನ 25/04 ಒಂದು ವಿಷೇಶ ಮಾಹಿತಿ ಯೊಂದಿಗೆ......   🇮🇳ಭಾರತ ದೇಶ ಜಗತ್ತಿನಲ್ಲಿಯೇ... ಶಾ...
25/04/2026

🚩ಓಂ ನಮಃ ಶಿವಾಯ🙏
ಗುರುನಾಥ ರೂಢರ ಪುಣ್ಯ ತಿಥಿಯ ಎರಡನೇ ದಿನ 25/04 ಒಂದು ವಿಷೇಶ ಮಾಹಿತಿ ಯೊಂದಿಗೆ......
🇮🇳ಭಾರತ ದೇಶ ಜಗತ್ತಿನಲ್ಲಿಯೇ... ಶಾಂತಿ, ಪ್ರೀತಿ, ಸ್ನೇಹ, ಸಹ ಬಾಳ್ವೆ ಜೊತೆಗೆ ಧೈರ್ಯ, ಸಾಹಸ, ಸಾಧನೆ ಯೊಂದಿಗೆ ಬಲಿಷ್ಠತೆಯನ್ನು ಹೊಂದಿದ ಅತ್ಯಂತ ವಿಶಿಷ್ಟವಾದ ಸಮೃದ್ಧಿ ದೇಶ ವಾಗಿದೆ ಅದಕ್ಕೆ ಕಾರಣ ಇಲ್ಲಿನ ಆಧ್ಯಾತ್ಮ , ಇತಿಹಾಸ, ಸಂಸ್ಕೃತಿ, ಮತ್ತು ಪರಂಪರೆ... ಅದರಲ್ಲೂ ಮುಖ್ಯವಾಗಿ ಗುರು ಶಿಷ್ಯ ಸಂಪ್ರದಾಯ.... ಗುರು ಜ್ಞಾನವನ್ನು ಸಂಪಾದಿಸಿ ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಅಷ್ಟೇ ಶೃದ್ಧೆಯಿಂದ ತನ್ನ ಶಿಷ್ಯ ಬಳಗಕ್ಕೆ ಧಾರೆಯೆರೆದು ಗುರುವನ್ನು ಮೀರಿಸುವ ಶಿಷ್ಯರನ್ನಾಗಿ ಮಾಡಿದ ಹಲವಾರು ಉದಾಹರಣೆ ಗಳು ನಮ್ಮ ಮುಂದೆ ಇವೆ.. ಗುರು ದ್ರೋಣಾಚಾರ್ಯರ ಆದರ್ಶ ಶಿಷ್ಯ ಅರ್ಜುನ, ರಾಮಕೃಷ್ಣ ಪರಮಹಂಸರ ಶಿಷ್ಯ ಶ್ರೀ ವಿವೇಕಾನಂದರು, ಗುರು ಗೋವಿಂದ ಭಟ್ಟರ ಶಿಷ್ಯ ಸಂತ ಶಿಶುನಾಳ ಶರೀಫರು, ಹೀಗೆ ಹಲವಾರು ಗುರು ಶಿಷ್ಯ ಸಂಪ್ರದಾಯ ಗಳಲ್ಲಿ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಶಿಷ್ಯರು ಮೌನ ಯೋಗಿ ಶ್ರೀ ಗುರುನಾಥ ರೂಢರು ಒಬ್ಬರು ಬಹುತೇಕ ಕಡೆ ಗುರುವಿನ ಎಡಭಾಗದಲ್ಲಿ ಶಿಷ್ಯರ ಸಮಾಧಿ ಕಾಣುವ ನಾವು ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಗುರುಗಳ ವಚನದಂತೆ ಶಿಷ್ಯ ನ ಸಮಾಧಿ ಯನ್ನು ತಮ್ಮ ಬಲಗಡೆ ಮಾಡುವ ಮುಕಾಂತರ ಸದ್ಗುರು ಶ್ರೀ ಸಿದ್ಧಾರೂಢರು ಗುರು ಶಿಷ್ಯ ಸಂಬಂಧಕ್ಕೆ ಇನ್ನಷ್ಟೂ ಮಹತ್ವವನ್ನು ಹೆಚ್ಚಿಸಿದರು ನಾವು ಈಗಲೂ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಗುರುವಿನ ಬಲಭಾಗದಲ್ಲಿ ಶಿಷ್ಯರ ಸಮಾಧಿ ಯನ್ನು ನೋಡಬಹುದು..🙏
ನಾಳೆ ರವಿವಾರ 26/04/2026 ಸದ್ಗುರು ಶ್ರೀ ಸಿದ್ಧಾರೂಢರ ಶಿಷ್ಯ ಶ್ರೀ ಗುರುನಾಥಾರೂಢರ 64ನೇ ಪುಣ್ಯ ತಿಥಿ ಅದರ ಅಂಗವಾಗಿ ಈ ಒಂದು ಚಿಕ್ಕ ಮಾಹಿತಿ ತಮ್ಮೆಲ್ಲರ ಮುಂದೆ....
ದಯವಿಟ್ಟು ಇದನ್ನು ಭಕ್ತ ಬಳಗದಲ್ಲಿ ಹೆಚ್ಚು ಹೆಚ್ಚಾಗಿ ಹಂಚಿಕೊಳ್ಳಲು ವಿನಂತಿ🙏🙏

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ
https://www.facebook.com/SSBKA63/

🚩ಇಂದಿನಿಂದ ಹುಬ್ಬಳ್ಳಿ  ಶ್ರೀ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ಶಿಷ್ಯರಾದ ಸದ್ಗುರು ಶ್ರೀ ಗುರುನಾಥಾರೂಢರ 64 ಪುಣ್ಯಾರಾಧನೆ ಉಭಯ ಸದ್ಗುರುಗ...
24/04/2026

🚩ಇಂದಿನಿಂದ ಹುಬ್ಬಳ್ಳಿ ಶ್ರೀ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ಶಿಷ್ಯರಾದ ಸದ್ಗುರು ಶ್ರೀ ಗುರುನಾಥಾರೂಢರ 64 ಪುಣ್ಯಾರಾಧನೆ ಉಭಯ ಸದ್ಗುರುಗಳ ಬೆಳಗಿನ ಸ್ನಾನ ಅಲಂಕಾರ ಪೂಜೆ ಯೊಂದಿಗೆ ಆರಂಭವಾಗಿದ್ದು ಮೂರು ದಿನಗಳ ಕಾಲ ಶ್ರೀ ಮಠದಲ್ಲಿ ಶಾಸ್ತ್ರ ಪ್ರವಚನ ಭಜನೆ ಪೂಜೆ ಪ್ರಸಾದ ಪಾಲಕಿ ಉತ್ಸವ ಮಹಾ ಪೂಜೆ ಸೇರಿದಂತೆ ರವಿವಾರ 26/4 ರಂದು ಉಭಯ ಸದ್ಗುರುಗಳಿಗೆ ವಿಶೇಷ ಸ್ನಾನ ಅಲಂಕಾರ ದೊಂದಿಗೆ ಪೂಜೆ ನಡೆಯಲಿವೆ ಅಂದು ನಗರದಲ್ಲಿ ಪಾಲಕಿ ಉತ್ಸವ ಕೂಡಾ ನಡೆಯಲಿದ್ದು ಭಕ್ತಾದಿಗಳು ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿ..,
🚩 ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ ಹಾಗೂ ಹೆಚ್ಚು ಹೆಚ್ಚಾಗಿ ಮಾಹಿತಿ ಪ್ರಚಾರ ಸೇವೆ ಮಾಡಲು ವಿನಂತಿ🙏
https://www.facebook.com/SSBKA63/

🚩ಅದ್ವೈತ ಸಾಮ್ರಾಟ... ಪರಶಿವನ ಅವತಾರಿ... ಪುಣ್ಯ ಭೂಮಿ... ಪಾವನ ನಗರ.. ಹೂವಿನ ಬಳ್ಳಿ.. ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಪರಮ ಶಿಷ್ಯರಾ...
22/04/2026

🚩ಅದ್ವೈತ ಸಾಮ್ರಾಟ...
ಪರಶಿವನ ಅವತಾರಿ...
ಪುಣ್ಯ ಭೂಮಿ...
ಪಾವನ ನಗರ..
ಹೂವಿನ ಬಳ್ಳಿ..
ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಪರಮ ಶಿಷ್ಯರಾದ ಮಹಾ ಮೌನ ಯೋಗಿ ಸ್ಥಿತಪ್ರಜ್ಞ ಮಹಾನ್ ತಪಸ್ವಿ ಸದ್ಗುರು ಶ್ರೀ ಗುರುನಾಥ ರೂಢರ 64ನೇ ಪುಣ್ಯ ರಾಧನೆ ಯನ್ನು ಬರುವ
ದಿನಾಂಕ 24/04/26 ಶುಕ್ರವಾರ ದಿಂದ 26/04/26 ರವಿವಾರ ದ ವರೆಗೆ ಶ್ರೀ ಸಿದ್ಧಾರೂಢ ಮಠ ಹುಬ್ಬಳ್ಳಿ ಯಲ್ಲಿ ಆಚರಿಸಲಾಗುತ್ತಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಒತ್ತಿ
https://www.facebook.com/SSBKA63/

Address

Hubli
580024

Website

Alerts

Be the first to know and let us send you an email when Shri Siddharudha Bharati - Siddharudha Math, Hubballi KA-63. posts news and promotions. Your email address will not be used for any other purpose, and you can unsubscribe at any time.

Share