ಚಾರದ ಶ್ರೀ ಮಹಿಷಮರ್ದಿನಿ ಅಮ್ಮ

  • Home
  • India
  • Hebri
  • ಚಾರದ ಶ್ರೀ ಮಹಿಷಮರ್ದಿನಿ ಅಮ್ಮ

ಚಾರದ ಶ್ರೀ ಮಹಿಷಮರ್ದಿನಿ ಅಮ್ಮ ಸರ್ವ ಮಂಗಲ ಮಾಂಗಲ್ಯೇ ಶಿವೇ! ಸರ್ವಾತ್ ಸಾದಕೆ!
ಶರಣ್ಯೇರ್ತರಿ ಎಂಬ ಕೆ ದೇವಿ ನಾರಾಯಣಿ ನಮೋಸ್ತುತೆ!

ಮಮತೆಯ ತೋರೆಯಾ ತಾಯೇ!ಕರುಣೆ ಬೀರೆಯಾ ಮಾಯೆ!ಹುಟ್ಟಿಸಿದ ತಾಯಿಯ ಮಮತೆಯನು ನೀ ಕೊಟ್ಟೆ!ಗತಿಸಿದ ಹಗೆತನವ ಎಸೆದು ಪೋಗಲಿ ಮತ್ತೇ!ನೀನೆ ತಾಯಿ ತಂದೆಯಾಗಿ...
14/06/2015

ಮಮತೆಯ ತೋರೆಯಾ ತಾಯೇ!
ಕರುಣೆ ಬೀರೆಯಾ ಮಾಯೆ!
ಹುಟ್ಟಿಸಿದ ತಾಯಿಯ ಮಮತೆಯನು ನೀ ಕೊಟ್ಟೆ!
ಗತಿಸಿದ ಹಗೆತನವ ಎಸೆದು ಪೋಗಲಿ ಮತ್ತೇ!
ನೀನೆ ತಾಯಿ ತಂದೆಯಾಗಿ ಪೊರೆಯೋ ದೇವಿ!
ಜಗದಾದಿ ಅಂತ್ಯಗಳು ನಿನ್ನಿಂದಲ್ಲವೆ ತಾಯೇ!
ಬಡ ಬಿಕ್ಷುಕರಿಗೆ ಒಂದುದಿನ ಉಣಬಡಿಸಲಿಲ್ಲ!
ಧಾನ-ಧರ್ಮಗಳ ಹೆಸರೇ ನಾ ತಿಳಿಯಲಿಲ್ಲ!
ಉಪಕಾರವೆನೆಂದು ತನಗೆ ಅರಿಯಲಿಲ್ಲ!
ಎಷ್ಟು ಪಾಪಗಳನ್ನು ಮಾಡಿದೆನು ಅರಿಯಲಿಲ್ಲ!
ಗತಿಸಿದ ಕಾಲಕೆ ನನ್ನ ಕ್ಷಮಿಸಿ ಮನ್ನಿಸು ತಾಯೇ!
ನಿನ್ನ ನಂಬಿ ಬಂದೆ ಉದ್ದರಿಸೋ ಮಾಯೇ!
ನೀನೆ ಎಲ್ಲಾ ನನಗೆ ಬಂದು ಬಳಗವು ಎಲ್ಲಾ!
ನೀನೆ ಧನ್ಯ ತಾಯೇ ನೀನೆ ಮಾನ್ಯ ಮಾಯೇ!
ಬೇರೇನೂ ಬೇಡವು ಮಾಡಿದ ಪಾಪಗಳ ಮನ್ನಿಸಿ ಪೊರೆಯೋ!
ನೀನು ನಡೆಸಿದಂತೆ ನಡೆಯುವೆ ನನ್ನ ಮುದ್ದಿನ ತಾಯೇ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಕಂಡೆ ಮನದಲಿ ಅಮ್ಮನ!ಜನ್ಮವನು ಕೊಟ್ಟವಳ ನನ್ನ ತಾಯಿಯ!ಕಂಡೆ ಮನದಲಿ ಅಮ್ಮನ!ಜಗವನು ಉದ್ದರಿಸುವ ಜಗದಿಶ್ವರಿಯ!ಎಸು ಜನುಮದ ಸುಕೃತ ಫಲವು!ಸಾಸಿರ ನಾಮದ ...
08/06/2015

ಕಂಡೆ ಮನದಲಿ ಅಮ್ಮನ!
ಜನ್ಮವನು ಕೊಟ್ಟವಳ ನನ್ನ ತಾಯಿಯ!
ಕಂಡೆ ಮನದಲಿ ಅಮ್ಮನ!
ಜಗವನು ಉದ್ದರಿಸುವ ಜಗದಿಶ್ವರಿಯ!
ಎಸು ಜನುಮದ ಸುಕೃತ ಫಲವು!
ಸಾಸಿರ ನಾಮದ ಫಲದ ಪುಣ್ಯವು!
ಕಂಡೆನು ಮನದಲಿ ಜಗದ ಜನನಿಯ!
ಕೋಟಿ ಸೂರ್ಯನ ಪ್ರಭೆಯ ಮೂರುತಿಯ!
ಆದಿ ಅಂತ್ಯದ ಅದಿಮಾಯೆಯ!
ಜಗದ ಜನನಿಯ ಪುಣ್ಯ ಮೂರುತಿಯ!
ಶ್ರೀ ಚಾರ ಕ್ಷೇತ್ರದಿ ನೆಲೆಯಾಗಿ ಕಂಗೊಳಿಪ!
ಮನದ ತಾಯಿಯ ಶ್ರೀ ಮಹಿಷಾಸುರಮರ್ದಿನಿಯ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಕರೆದರೆ ಬರಬಾರದೇ! ಭಕ್ತರು!ನಿನ್ನ ಕರೆದರೆ ಬರಬಾರದೇ!ಕರುಣೆಯ ತೋರಿಸಬಾರದೆ!ಅವರ ಕಷ್ಟಗಳನು ದೂರ!ಮಾಡಬಾರದೆ !ಮನದಲಿ ನೆನೆದ ಭಕ್ತರ ಕಷ್ಟ!ದೂರ ಮಾಡಬ...
07/06/2015

ಕರೆದರೆ ಬರಬಾರದೇ! ಭಕ್ತರು!
ನಿನ್ನ ಕರೆದರೆ ಬರಬಾರದೇ!
ಕರುಣೆಯ ತೋರಿಸಬಾರದೆ!
ಅವರ ಕಷ್ಟಗಳನು ದೂರ!
ಮಾಡಬಾರದೆ !
ಮನದಲಿ ನೆನೆದ ಭಕ್ತರ ಕಷ್ಟ!
ದೂರ ಮಾಡಬಾರದೆ!
ಧುಷ್ಟರ ಶಿಕ್ಷಕಿ ಶಿಷ್ಟರ ರಕ್ಷಕಿ!
ಬಿರುದು ಬೇಡವೇ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಕೋಪವೇಕೆ ಅಮ್ಮ ನಿನಗೆ!ತಾಪ ಕೊಡುವೆ ಏಕೆ ತಾಯೇ!ನಿನ್ನ ಮಡಿಲೋಳು ಆಡುವ ನನಗೆ!ನನ್ನ  ಮುದ್ದಿಸಿ  ಪೊರೆಯೋ ತಾಯೇ!ಮೋರೆಯ ಪೇಳಿ ಆಲಿಸು ಮಾಯೇ!ನಗಿಸಿ ಅ...
03/06/2015

ಕೋಪವೇಕೆ ಅಮ್ಮ ನಿನಗೆ!
ತಾಪ ಕೊಡುವೆ ಏಕೆ ತಾಯೇ!
ನಿನ್ನ ಮಡಿಲೋಳು ಆಡುವ ನನಗೆ!
ನನ್ನ ಮುದ್ದಿಸಿ ಪೊರೆಯೋ ತಾಯೇ!
ಮೋರೆಯ ಪೇಳಿ ಆಲಿಸು ಮಾಯೇ!
ನಗಿಸಿ ಅಳಿಸುವಳು ನೀನೆ ಅಮ್ಮ!
ಮುನಿಸು ಏತಕೆ ನಿನಗೆ ತಾಯೇ!
ಕರುಣೆ ತೋರು ಅಮ್ಮ ನೀನು!
ದರುಶನದಿ ಬಂದು ಪದತಲದಲ್ಲಿ ನಿಂದೆ!
ಮುಕ್ತಿಗಾಗಿ ಬೇಡಿ ನಿಂದೆ!
ಕರುಣಿಸು ಕರವಿಡಿದು ಎತ್ತು ಮಾಯೇ!
ನೀನು ಬರೆಸಿದಂತೆ ಬರೆಯುವೆ!
ನೀನು ನುಡಿಸಿದಂತೆ ನುಡಿಯುವೆ!
ನೀನೆ ನನ್ನ ಜೀವ ಭಾವ!
ನೀನೆ ಸಕಲ ಜಗದ ಕಾರಕ!
ಜಗವ ನಾಳುವ ಜಗದ ತಾಯೇ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಅಗೋ ನೋಡು ಮಹಿಷಮರ್ದಿನಿಯ ಅಂದವನ್ನು!ಬಣ್ಣಿಸಲು ಸಾಲದ ಚೆಂದವನ್ನು!ಅಗೋ ನೋಡು!ಶಿರದಲಿ ರತ್ನ ಕಿರೀಟ ಉದ್ದನೆಯ ಕೇಶರಾಶಿ!ಮೊಗದಲಿ ಮುಗುಳು ನಗೆಯು, ಶ...
29/05/2015

ಅಗೋ ನೋಡು ಮಹಿಷಮರ್ದಿನಿಯ ಅಂದವನ್ನು!
ಬಣ್ಣಿಸಲು ಸಾಲದ ಚೆಂದವನ್ನು!ಅಗೋ ನೋಡು!
ಶಿರದಲಿ ರತ್ನ ಕಿರೀಟ ಉದ್ದನೆಯ ಕೇಶರಾಶಿ!
ಮೊಗದಲಿ ಮುಗುಳು ನಗೆಯು, ಶೋಬೆಗೆ ಮುಗುತಿಯೂ!
ಪಣೆಯಲಿ ಸಿಂಧೂರವೂ, ನಾಸಿಕ ನಾಗ ಸಂಪಿಗೆ!
ಕಮಲ ನಯನ ಶ್ರೀ ಹರಿಯ ರಾಣಿಯು!
ಕೊರಳಲಿ ಮಾಂಗಲ್ಯ ಮುತ್ತು ರತ್ನ ಹವಳ ಗಳು!
ಶೋಬಿಸುವ ವಜ್ರ ವ್ಯೆಡೂರ್ಯ ನಾ ನಾ ಬರಣಭೂಷಿತೆ !
ಮೈಯೆಲ್ಲಾ ಜರಿ ಬಿಟ್ಟ ಸೆರಗೂ ಹಾಕಿದ ಹಸಿರು ಸೀರೆ!
ಕಾಲಲ್ಲಿ ಕಾಲುಂಗುರ ಜಣ ಜಣಕು ಕೈಬಳೆ!
ಅಷ್ಟ ಆಯುಧಗಳಿಂದ ಅಷ್ಟ ಭುಜೆ ದುರ್ಗೆಯೂ !
ಮೆಟ್ಟಿ ನಿಂತ ದುಷ್ಟ ರಾಕ್ಷಸ ಮಹಿಷಾಸುರಮರ್ದಿನಿ!
ಸೃಷ್ಠಿ ಶೋಬಿಪ ವರದ ಅಷ್ಟ ಮಂಗಳೇ ಮೂರುತಿ !
ನಮ್ಮ ಷಹರಾದ ಶ್ರೀ ಮಹಿಷಾಸುರಮರ್ದಿನೀ!
ಏಳು ಕಣ್ಣು ಸಾಲದು ಏಳು ಜನುಮ ನಾಲಿಗೆ ಬಾರದು!
ರವಿಕೋಟಿ ತೇಜ ಪ್ರಕಾಶಿನಿಯ ಪೋಗಳಲು!
ಏಳು ಜನುಮ ಹುಟ್ಟಿದರು ಮಹಾಮುನಿಯು ತಪಗೈದರು!
ಕಾಣಸಿಗದ ನನ್ನ ಅಂತರಂಗದ ಮೂರುತಿಯ ಚಲುವೆ ಶ್ರೀ ಮಹಿಷಮರ್ದಿನಿ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಕಾರುಣ್ಯ ಸಿಂದುವೆ ಅ ನನ್ನ ತಾಯಿಯೇ!ಜಗದಾದಿ ವಂದಿತ ತ್ರಿಮೂರ್ತಿ ಜನನಿಯೇ!ತ್ರಿಜಗದೀ ಮದ್ಯಂತರ ತ್ರಿಪುರವಾಸಿನಿಯೇ!ಸುರಪತಿಯು  ಜಯ ಜಯ ಹೇ ಮಹಿಶಮರ್...
28/05/2015

ಕಾರುಣ್ಯ ಸಿಂದುವೆ ಅ ನನ್ನ ತಾಯಿಯೇ!
ಜಗದಾದಿ ವಂದಿತ ತ್ರಿಮೂರ್ತಿ ಜನನಿಯೇ!
ತ್ರಿಜಗದೀ ಮದ್ಯಂತರ ತ್ರಿಪುರವಾಸಿನಿಯೇ!
ಸುರಪತಿಯು ಜಯ ಜಯ ಹೇ ಮಹಿಶಮರ್ದಿನಿಯಮ್ಮ ಎನ್ನಲು!
ಪರಶಿವನ ಅರ್ಧಾಂಗಿ ಶ್ರೀಹರಿಯ ಮೋಹನಾಂಗಿಯೇ!
ಪರಬ್ರಹ್ಮನ ನಿಜರಾಣೆ ಶ್ವೇತಾಂಬರೀ!
ಅದಿಮಾಯೇ ಎನಿಸಿ ತ್ರಿಮೂರ್ತಿಯಾರಿಗೆ ತಾಯಿಯಾಗಿ!
ಮೇದಿನಿಯನು ನಿರ್ಮಿಸಿ ಸೃಷ್ಠಿ ಸಿದ ತಾಯಿಯೇ!
ದೀನತೆಯಿಂದಲಿ ಬಂದು ಅಮ್ಮ ಎಂದು ಕರೆದರೆ!
ಕಂದನನು ಪೋರೆವಂತೆ ಅವರ ಬಾಳನು ಬೆಳಗಿಸಮ್ಮ !
ಹಸುತನ್ನ ಕರುವನ್ನು ಪೋರೆವಂತೆ ನೀನು!
ಭಕ್ತರನು ಮಕ್ಕಳಂತೆ ಪೋರೆಯುತಾ ಧರೆಯಲಿ!
ಶ್ರೀ ಮಹಿಶಮರ್ದಿನಿಯಾಗಿ ಷಹರಾ ಕ್ಷೇತ್ರದಲಿ !
ಮೆರೆಯುತ ಭಕ್ತರ ಪಾಲಿನ ಹೃದಯ ಕಮಲದ ದೀಪವಾಗಿ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಷಹರಾದ ಕ್ಷೇತ್ರದಲ್ಲಿ ನೆಲೆಸಿ ನಿಂತ ಮಹಿಷಮರ್ದಿನಿ!ನಿನ್ನ ಪಾದ ಕಮಲಗಳಿಗೆ ಕೋಟಿವಂದನೆ! ನಿನ್ನ ಪಾದ ಕಮಲಗಳಿಗೆ ಕೋಟಿವಂದನೆ!ಅಕ್ಕ ತಂಗಿಯರ ನಾಡು ಎ...
24/05/2015

ಷಹರಾದ ಕ್ಷೇತ್ರದಲ್ಲಿ ನೆಲೆಸಿ ನಿಂತ ಮಹಿಷಮರ್ದಿನಿ!
ನಿನ್ನ ಪಾದ ಕಮಲಗಳಿಗೆ ಕೋಟಿವಂದನೆ! ನಿನ್ನ ಪಾದ ಕಮಲಗಳಿಗೆ ಕೋಟಿವಂದನೆ!
ಅಕ್ಕ ತಂಗಿಯರ ನಾಡು ಎಂದು ಸಹೋದರತೆಯ ಬೀಡು ಎಂದು!
ಅಮ್ಮ ದುರ್ಗಮ್ಮ ನಿರುವ ಪುಣ್ಯದ ತಾಣ!
ಮದುಮಕ್ಕಳಿಗೆ ಹರಸಲೆಂದು ಬಂದ ತಾಯಿ ಮಹಿಷಮರ್ದಿನಿ!
ಸರ್ವ ಪಾಪಗಳನ್ನು ಪೊರೆಯೋ ಅಮ್ಮ ದುರ್ಗಮ್ಮ ! ತಾಯಿ ಮಹಿಷಮರ್ದಿನಿ!
ಶ್ರಾವಣ ಮಾಸದಲ್ಲಿ ಸೋಣೆಯಾರತಿ ಪಡೆಯುವ ದೇವಿ!
ನಂಬಿ ಬಂದ ಭಕ್ತರ ಕಷ್ಟಗಳನ್ನು ಪೋರೆಯೋದೇವಿ !
ನವರಾತ್ರಿ ವೈಭವವು ನವದಿನಗಳ ಕಾಲ ಪಡೆಯುತಿರುವೆ !
ನವ ದುರ್ಗೆ ಅವತಾರದ ಮೆರೆದ ತಾಯಿ ಮಹಿಷಾಸುರಮರ್ದಿನಿ!
ಕಾರ್ತಿಕ ಮಾಸದಲ್ಲಿ ಶುದ್ದ ತ್ರಯೋದಶಿ ಯಂದು!
ದೀಪೋತ್ಸವದಿ ಮೆರೆವ ತಾಯಿ ನಮ್ಮ ದುರ್ಗಮ್ಮ! ಅಮ್ಮ ದುರ್ಗಮ್ಮ!
ಭಕ್ತರ ದುರಿತಗಳನ್ನು ದುರಮಾಡು ತಾಯಿ ಮಹಿಷಮರ್ದಿನಿ!
ಮಕರ ಸಂಕ್ರಮಣದಂದು ಪರ್ವ ಕಾಲದೀ ! ಪಂಚಾಮೃತ ಅಬಿಷೇಕದೀ ಮೊದಲ್ಗೊಂಡು!
ಚಂಡಿಕ ಹೋಮದಿ ಹವನ ಉಂಡು !
ಮದ್ಯರಾತ್ರಿಯಲ್ಲಿ ಕೆಂಡೋತ್ಸವದ ದರ್ಶನದಲ್ಲಿ!
ಭಕ್ತರ ಪೊರೆಯುವ ದೇವಿ ತಾಯಿ ಮಹಿಷಮರ್ದಿನೀ ! ನಮ್ಮ ಷಹರಾದ ಶ್ರೀ ಮಹಿಷಮರ್ದಿನಿ !

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಅಷ್ಟ ಭುಜ ಸುಮನ ನೇತ್ರೆ !ಸೃಷ್ಟಿಯೋಳ್ ವಿಮಲಾ ಗಾತ್ರೆ!ಸೃಷ್ಟಿಸಿದ ಆ ಬ್ರಹ್ಮನು! ನೀನೊಮ್ಮೆ!ದೃಷ್ಟಿ ತೆರೆದು ನೋಡಮ್ಮ ಸುಮ್ಮನೆ!ಕಷ್ಟಗಳನು ದೂರ ಮ...
23/05/2015

ಅಷ್ಟ ಭುಜ ಸುಮನ ನೇತ್ರೆ !
ಸೃಷ್ಟಿಯೋಳ್ ವಿಮಲಾ ಗಾತ್ರೆ!
ಸೃಷ್ಟಿಸಿದ ಆ ಬ್ರಹ್ಮನು! ನೀನೊಮ್ಮೆ!
ದೃಷ್ಟಿ ತೆರೆದು ನೋಡಮ್ಮ ಸುಮ್ಮನೆ!
ಕಷ್ಟಗಳನು ದೂರ ಮಾಡು ದೀನ! ನಾ!
ಬಂದು ನಿಂತೆ ನಿನ್ನ ಪದತಳದಲಿ!
ಪಾಲಿಸಿದ ಆ ವಿಷ್ಣುವು ಬ್ರಹ್ಮನು ಬರೆದನು ಆತನು!
ಗತಿನೀನೆ ಎಂದು ಬಂದೆ ನನ್ನ ನೀ!
ಮತಿತೋರಿ ಉದ್ದರಿಸೋ ಎಂದೆ!
ಕೊನೆಗೆ ನನ್ನ ಪಾಪ ಪುಣ್ಯವ ಅಳೆಯುತ ಹರನೆಂದನು!
ಕಾಲ ನಿನ್ನ ಗತಿಸಿತು ಬಾ ಎಂದನು!
ನಿನ್ನ ನಂಬಿದೆ ಈ ಜಗದಲಿ! ಆದರೂ!
ಕೈ ಬಿಡದೆ ಮುನ್ನೆಡೆಸು ತಾಯೇ ನೀನು!
ಭಕ್ತಿಮಾರ್ಗದಿ ನಿನ್ನ ಭಜಿಸುತಾ ನಾನು!
ಮುಕ್ತಿಯನು ಕರುನಿಸೆನ್ನ ನೀನು!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ನನ್ನ ಎದೆಯಲಿ ನಿನ್ನದೆ ಬಿಂಬ!ಹಾಡುತಿರುವೇನು ಭಕ್ತಿಯ ತುಂಬಾ!ಮನಸ ಹಾಡಿತು ಪ್ರೇಮದ ರಾಗ!ಹೃದಯ ಅರಳಿತು ನಿನ್ನ ನಾಮದ ಮಂತ್ರ!ಮನದ ಭಾವದಿ ಭಕುತಿ ತು...
21/05/2015

ನನ್ನ ಎದೆಯಲಿ ನಿನ್ನದೆ ಬಿಂಬ!
ಹಾಡುತಿರುವೇನು ಭಕ್ತಿಯ ತುಂಬಾ!
ಮನಸ ಹಾಡಿತು ಪ್ರೇಮದ ರಾಗ!
ಹೃದಯ ಅರಳಿತು ನಿನ್ನ ನಾಮದ ಮಂತ್ರ!
ಮನದ ಭಾವದಿ ಭಕುತಿ ತುಂಬಿತು ಜಾಗ!
ಹೃದಯ ಶುದ್ಧದಿ ನಿನಗೆ ವಂದಿತು ವೇಗ!
ಕವಿಯ ಪುಟದಲಿ ನಾ ಬರೆದನು ಈ ರಾಗ!
ನನಗೆ ನಾನು ಏನನ್ನು ಕೇಳಲಾರೆನು!
ನಿನ್ನ ಕರುಣೆ ಒಂದೆ ಸಾಕು ಎಂದು ಕೇಳುವೆನು!
ಧನ ಕನಕ ಐಶ್ವರ್ಯ ನನಗೆ ಬೇಡವು!
ಈ ಜಗದಲಿ ನಿನ್ನ ಕಾಣುವಾಸೆ ಒಂದೆ ಎಂದು ಬೇಡುವೆ!
ಹೃದಯ ಪುಟದ ಮದ್ಯದಲ್ಲಿ ಆರಾಧಿಸುವೆ!
ನಿನ್ನ ನಾಮ ಅನುದಿನವು ನಾ ಪಟಿಸುವೆ!
ನೀನು ನಡೆಸಿದಂತೆ ನಾನು ನಡೆಯುವೆ!
ಮುಕ್ತಿ ಮಾರ್ಗ ತೋರು ನನಗೆ ಎಂದು ಬೇಡುವೆ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಅಮ್ಮ ಅಮ್ಮ ಎಂದು ಕರೆದಾಗ!ನಿನ್ನ ಮುಂದೆ ನಿಂತಾಗ!ಬಿಸಿ ಅಪ್ಪುಗೆ ತಂದಾಗ!ನಿನ್ನ ಕೈತುತ್ತು ಉಂಡಾಗ!ನನ್ನ ಅಂಧಕಾರ ಅಳಿದಾಗ!ನಿನ್ನ ಮಮಕಾರ ತುಂಬಿದಾಗ...
20/05/2015

ಅಮ್ಮ ಅಮ್ಮ ಎಂದು ಕರೆದಾಗ!
ನಿನ್ನ ಮುಂದೆ ನಿಂತಾಗ!
ಬಿಸಿ ಅಪ್ಪುಗೆ ತಂದಾಗ!
ನಿನ್ನ ಕೈತುತ್ತು ಉಂಡಾಗ!
ನನ್ನ ಅಂಧಕಾರ ಅಳಿದಾಗ!
ನಿನ್ನ ಮಮಕಾರ ತುಂಬಿದಾಗ!
ಅದುವೇ ಪ್ರೀತಿ ಬೆಸೆದಾಗ!
ಕರುಣೆ ಉಕ್ಕಿ ಹರಿದಾಗ!
ನೀನೆ ದೈವ ಎಂದಾಗ!
ಮೈಗೆ ನೋವು ತಾಗಿದಾಗ!
ಅಮ್ಮ ಎಂದು ಕೂಗಿದಾಗ!
ನಾ ತಪ್ಪಿ ನಡೆದಾಗ!
ನೀ ತಿದ್ದಿ ತಿಡಿದಾಗ!
ಎಲ್ಲೂ ನನ್ನ ಎಡವಿಲ್ಲದೆ!
ನೀ ಮುನ್ನೆಡಿಸಿದಾಗ!
ನಿನ್ನ ಋಣ ನಾ ಹೇಗೆ ಇರಿಸಲಿ ತಾಯೇ!
ನೀನೆ ಸ್ವರ್ಗ ನೀನೆ ದೇವಾ!
ಜಗದಲ್ಲಿ ನಿನಗೆ ಎಣೆಯಾರುಂಟೆ!
ಪ್ರತಿದೇವರುಂಟೇ ಅಮ್ಮ ನಿನಗೆ!

ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್

ಇಂದು ಶುಕ್ರವಾರ ತಾಯಿಗೆ ನಮೋ ನಮಃ
06/03/2015

ಇಂದು ಶುಕ್ರವಾರ ತಾಯಿಗೆ ನಮೋ ನಮಃ

Address

Chara
Hebri
576112

Alerts

Be the first to know and let us send you an email when ಚಾರದ ಶ್ರೀ ಮಹಿಷಮರ್ದಿನಿ ಅಮ್ಮ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಚಾರದ ಶ್ರೀ ಮಹಿಷಮರ್ದಿನಿ ಅಮ್ಮ:

Share

Category