14/06/2015
ಮಮತೆಯ ತೋರೆಯಾ ತಾಯೇ!
ಕರುಣೆ ಬೀರೆಯಾ ಮಾಯೆ!
ಹುಟ್ಟಿಸಿದ ತಾಯಿಯ ಮಮತೆಯನು ನೀ ಕೊಟ್ಟೆ!
ಗತಿಸಿದ ಹಗೆತನವ ಎಸೆದು ಪೋಗಲಿ ಮತ್ತೇ!
ನೀನೆ ತಾಯಿ ತಂದೆಯಾಗಿ ಪೊರೆಯೋ ದೇವಿ!
ಜಗದಾದಿ ಅಂತ್ಯಗಳು ನಿನ್ನಿಂದಲ್ಲವೆ ತಾಯೇ!
ಬಡ ಬಿಕ್ಷುಕರಿಗೆ ಒಂದುದಿನ ಉಣಬಡಿಸಲಿಲ್ಲ!
ಧಾನ-ಧರ್ಮಗಳ ಹೆಸರೇ ನಾ ತಿಳಿಯಲಿಲ್ಲ!
ಉಪಕಾರವೆನೆಂದು ತನಗೆ ಅರಿಯಲಿಲ್ಲ!
ಎಷ್ಟು ಪಾಪಗಳನ್ನು ಮಾಡಿದೆನು ಅರಿಯಲಿಲ್ಲ!
ಗತಿಸಿದ ಕಾಲಕೆ ನನ್ನ ಕ್ಷಮಿಸಿ ಮನ್ನಿಸು ತಾಯೇ!
ನಿನ್ನ ನಂಬಿ ಬಂದೆ ಉದ್ದರಿಸೋ ಮಾಯೇ!
ನೀನೆ ಎಲ್ಲಾ ನನಗೆ ಬಂದು ಬಳಗವು ಎಲ್ಲಾ!
ನೀನೆ ಧನ್ಯ ತಾಯೇ ನೀನೆ ಮಾನ್ಯ ಮಾಯೇ!
ಬೇರೇನೂ ಬೇಡವು ಮಾಡಿದ ಪಾಪಗಳ ಮನ್ನಿಸಿ ಪೊರೆಯೋ!
ನೀನು ನಡೆಸಿದಂತೆ ನಡೆಯುವೆ ನನ್ನ ಮುದ್ದಿನ ತಾಯೇ!
ಇತಿ ನಿಮ್ಮ ಕವಿ ಹೃದಯ ದೀಪ
ಸ್ವರ್ಣ ಗೌರಿ, ಅಮರ ದೀಪ ಖ್ಯಾತಿಯ ಪ್ರದೀಪ ಹೆಬ್ಬಾರ್