08/02/2022
* #ಜೈನ_ಸಮಾಜದ_ಮಕ್ಕಳಿಗೆ_ವಿನಂತಿ*
ರಾಜ್ಯಾದ್ಯಂತ ಮಕ್ಕಳ ವಸ್ತ್ರ ಹಿಜಬ್ × ಕೇಸರಿ ವಿವಾದ ತಾರಕಕ್ಕೇರಿದೆ. ಗಲಭೆಗಳು ನಡೆದು ಪರಿಸ್ಥಿತಿ ಪ್ರಕೋಪಕ್ಕೆ ಹೋಗುತ್ತಿದೆ.
ಇಂದು ಕೆಲವು ಕಡೆ ಸಂದೇಶಗಳನ್ನು ನೋಡಿದೆ. ಜೈನರೂ ಪಂಚವರ್ಣದ ಶಾಲು ಹಾಕಿಕೊಂಡು ಹೋಗಬೇಕೆಂದು ಕೆಲವರು ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ, ಅಲ್ಲದೇ ಕೆಲವು ಜೈನ ಧರ್ಮೀಯ ಮಕ್ಕಳು ಕೇಸರಿ ಶಾಲು ಹಾಕಿಕೊಂಡ ಹೋದ ವರದಿ ಇದೆ. ಇದು ಅವಿವೇಕದ ಪರಮಾವಧಿ ಅಷ್ಟೇ.
* #ಶಾಲೆ_ಕೇವಲ_ವಿದ್ಯಾಭ್ಯಾಸಕ್ಕಿರಲಿ_ಅದು_ಧರ್ಮ_ಪ್ರತಿನಿಧಿಸುವ_ಕೇಂದ್ರವಲ್ಲ*
ಶಾಲೆ ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗಿರಲಿ. ಅಲ್ಲಿ ಧರ್ಮವನ್ನು ಪ್ರದರ್ಶನಕ್ಕಿಡಬೇಡಿ. ಅದು ವಿದ್ಯಾ ದೇಗುಲ ಅಷ್ಟೇ. ಶಾಲೆಗೆ ಶಾಲೆಯ ನಿಯಮಾವಳಿಯಂತೆ ಸಮವಸ್ತ್ರ ಧರಿಸಿ ಹೋಗುವುದು ಉಚಿತ. ಶಾಲೆಯಲ್ಲಿ ಧರ್ಮವನ್ನು ಪಾಲಿಸೋಣ, ಹೇಗೆಂದರೆ ಮೊಟ್ಟೆ ತಿನ್ನದೇ ಇರುವುದು ಇತ್ಯಾದಿ. ಅದು ಬಿಟ್ಟು ಧರ್ಮವನ್ನು ಬಟ್ಟೆಯಲ್ಲಿ ಪ್ರದರ್ಶನ ಬೇಡ. ಬಸದಿಗೆ ಹೋಗುವಾಗ ಪಂಚವರ್ಣದ ಶಾಲು ಇರಲಿ ಅಲ್ಲದೇ ಸಾಂಪ್ರಾದಾಯಿಕ ಉಡುಗೆ ತೊಡುಗೆ ಇರಲಿ. ಜೈನರು ರಾಜಕೀಯಕ್ಕೆ ಬಲಿಯಾಗುವುದು ಬೇಡ. ಶಾಲೆಯಲ್ಲಿ ವಿದ್ಯೆಗೆ ಮಹತ್ವ ಕೊಡೋಣ. ಶಾಲೆಯ ನಿಯಮಾಳಿಗಳನ್ನು ಪಾಲಿಸಿ ಆದರ್ಶ ವಿದ್ಯಾರ್ಥಿಗಳಾಗಿ. ಪೋಷಕರು ಸಮಚಿತ್ತದಿಂದ ವ್ಯವಹರಿಸಿ. ಪಂಚವರ್ಣಕ್ಕೆ ಅದರದ್ದೇ ಆದ ಮಹತ್ವ ಇದೆ. ಧರ್ಮದಲ್ಲಿ ರಾಜಕೀಯ ನಮಗೆ ಬೇಡ. ರಾಜಕೀಯದಲ್ಲಿ ಧರ್ಮವಿರಲಿ. ಸಾಮಾಜಿಕ ಸಾಮರಸ್ಯಕ್ಕೆ ಜೈನರ ಕೊಡುಗೆ ಅಪಾರ. ಅದನ್ನು ಉಳಿಸಿ ಧರ್ಮದ , ದೇಶದ ಘನತೆಯನ್ನು ಕಾಪಾಡೋಣ. ಏನಂತೀರಾ ...?
* #ನಿರಂಜನ್_ಜೈನ್_ಕುದ್ಯಾಡಿ*