Dr, B.R Ambedkar Youths Savasihalli

Dr, B.R Ambedkar Youths Savasihalli "Life should be great rather than long"

ಸ್ವತಂತ್ರ ಭಾರತಕ್ಕೆ ಸಂವಿಧಾನದ ಸಾರ್ವಭೌಮತ್ವ ಕೊಟ್ಟ ಧೀಮಂತ, ಭಾರತೀಯರ ಪಾಲಿನ ಸಮಾನತೆಯ ಬೆಳಕುಭಾರತ ರತ್ನ, ಸಂವಿಧಾನ ಶಿಲ್ಪಿ, ಸಮಾಜ ಪರಿವರ್ತನೆ...
14/04/2026

ಸ್ವತಂತ್ರ ಭಾರತಕ್ಕೆ ಸಂವಿಧಾನದ ಸಾರ್ವಭೌಮತ್ವ ಕೊಟ್ಟ ಧೀಮಂತ, ಭಾರತೀಯರ ಪಾಲಿನ ಸಮಾನತೆಯ ಬೆಳಕು

ಭಾರತ ರತ್ನ, ಸಂವಿಧಾನ ಶಿಲ್ಪಿ, ಸಮಾಜ ಪರಿವರ್ತನೆಯ ಮಹಾಯೋಗಿ, ಭಾರತ ದೇಶ ಕಂಡ ಮಹಾನ್ ಚಿಂತಕರು, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯಂದು ಸರ್ವರಿಗೂ ಹಾರ್ದಿಕ ಶುಭಾಶಯಗಳು ಮತ್ತು ನನ್ನ ಗೌರವಪೂರ್ವಕ ನಮನಗಳು. 💐🇮🇳💐

ಅವರು ಕನಸುಗೊಂಡ ಪ್ರಬುದ್ಧ ಭಾರತವೆಂದರೆ ಜ್ಞಾನ, ಸಮಾನತೆ ಹಾಗೂ ಮಾನವೀಯತೆಯಿಂದ ಕೂಡಿದ ರಾಷ್ಟ್ರ. ಇಂದು ನಾವು ಶಿಕ್ಷಣ ಮತ್ತು ಜಾಗೃತಿಯ ಮೂಲಕ ಅವರ ಆಲೋಚನೆಗಳನ್ನು ಅಳವಡಿಸಿಕೊಂಡು, ಅವರ “ಪ್ರಬುದ್ಧ ಭಾರತ”ದ ಕನಸನ್ನು ಸಾಕಾರಗೊಳಿಸುವ ಸಂಕಲ್ಪ ಮಾಡೋಣ.

#ಜೈಭೀಮ್ #ಜೈಭಾರತ




Dr, B.R Ambedkar jayanthi Celebration
15/04/2019

Dr, B.R Ambedkar jayanthi Celebration

05/03/2018

ನಮ್ಮೂರಿನ ಹಳೆಯ ವಿಧ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭ

Celebrate "ಹಳೆಯ ವಿಧ್ಯಾರ್ಥಿಗಳ ಸವಿ ಸವಿ ನೆನಪು"😍😍
05/03/2018

Celebrate "ಹಳೆಯ ವಿಧ್ಯಾರ್ಥಿಗಳ ಸವಿ ಸವಿ ನೆನಪು"😍😍

ವಿಶ್ವ ಜ್ನಾನಿ,  ಮಹಾನ್ ಮಾನವತಾವಾದಿ ಕೋಟ್ಯಾನುಕೋಟಿ ಶೋಷಿತ ರ ಆರಾಧ್ಯ ದೈವ ಪುಸ್ತಕಗಳ ಮಧ್ಯೆ ನಮ್ಮನ್ನ ಅಗಲಿದ ಮಹಾನ್ ಚೇತನ ಅವರ ೬೧ನೇ ಮಹಾ ಪರಿ...
07/12/2017

ವಿಶ್ವ ಜ್ನಾನಿ, ಮಹಾನ್ ಮಾನವತಾವಾದಿ ಕೋಟ್ಯಾನುಕೋಟಿ ಶೋಷಿತ ರ ಆರಾಧ್ಯ ದೈವ ಪುಸ್ತಕಗಳ ಮಧ್ಯೆ ನಮ್ಮನ್ನ ಅಗಲಿದ ಮಹಾನ್ ಚೇತನ ಅವರ ೬೧ನೇ ಮಹಾ ಪರಿನಿಬ್ಬಾಣ ದಿನ ಇಂದು ಜೈ ಭೀಮ್.....

15/04/2017
12/11/2016

*Very interesting & meaningful msg 2 share:*

*If:*
*A B C D E F G H I J K LM N O P Q R S T U V W X Y Z*
*is equal to:*

*1 2 3 4 5 6 7 8 9 10 11 12 13 14 15 16 17 18 19 20 21 22 23 24 25 26*

*Then,*

*H+A+R+D+W+O+R+K*
=8+1+18+4+23+15+18+11
*= 98%*

*K+N+O+W+L+E+D+G+E*
=11+14+15+23+12+5+4+7+5
*=96%*

*L+O+V+E*
= 12+15+22+5
*= 54%*

*L+U+C+K ;*
=12+21+3+11
*= 47%*

*None of them makes 100%.*
*Then what makes 100%?*

*Is it Money?*
*NO!*

*M+O+N+E+Y*
= 13+15+14+5+25
*=72%*

*Leadership?*
*NO!*

*L+E+A+D+E+R+S+H+I+P*
=12+5+1+4+5+18+19+8+9+16
*=97%*

*Every problem has a solution, only if we perhaps change our*

*"ATTITUDE"...*

*A+T+T+I+T+U+D+E ;*
1+20+20+9+20+21+4+5
*= 100%*

*It is therefore OUR ATTITUDE towards Life* *and Work that makes*
*OUR Life 100% Successful.*

*Amazing mathematics*

*Beautiful msg to share:*
*Do you agree that we have 26 alphabets in English, as given below*

*A = 1 ; B = 2 ; C = 3 ; D = 4 ;*
*E = 5 ; F = 6 ; G = 7 ; H = 8 ;*
*I = 9 ; J = 10 ; K = 11 ; L = 12 ;*
*M = 13 ; N = 14 ; O = 15 ; P = 16 ;*
*Q = 17 ; R = 18 ; S = 19 ; T = 20 ;*
*U = 21 ; V = 22 ; W = 23 ; X =24 ;*
*Y = 25 ; Z = 26.*

*With each alphabet getting a number, in chronological order, as above, study the* *following, and bring down the total to a single digit and see the result yourself*

*Hindu -*
*S h r e e K r i s h n a*
19+8+18+5+5+11+18+9+19+8+14+1
=135
*=1+3+5 = 9*

*Muslim*
*M o h a m m e d*
13+15+8+1+13+13+5+4
= 72
*= 7+2 = 9*

*Jain*
*M a h a v i r*
13+1+8+1+22+9+18
=72
*= 7+2= 9*

*Sikh*
*G u r u N a n a k*
7+21+18+21+14+1+14+1+11
=108
*=1+0+8 = 9*

*Parsi*
*Z a r a t h u s t r a*
26+1+18+1+20+8+21+19+20+18+1
=153
*=1+5+3 = 9*

*Buddhist*
*G a u t a m*
7+1+21+20+1+13
=63
*= 6+3 = 9*

*Christian*
*E s a M e s s i a h*
5+19+1+13+5+19+19+9+1+8
=99
9+9=18
*1+8 = 9*

*Each one ends with number 9*

*THAT IS NATURE'S CREATION TO SHOW THAT GOD IS ONE !!!*

12/11/2016

ಜ್ಯೋತಿಬಾ ಪುಲೆಯವರ ಮಹತ್ವದ ಕಾರ್ಯ

ಮೇಲ್ಜಾತಿಯವರು ೧೮೬೮ ರಲ್ಲಿ ಅಸ್ಪೃಶ್ಯರಿಗೆ ನೀರು ಬಿಡದೆ ಬಹಿಷ್ಕಾರ ಹಾಕಿದ್ದ ಸಂದರ್ಭದಲ್ಲಿ ಪುಲೆಯವರು ಒಂದು ದಿನ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದರು. ಹೆಣ್ಣುಮಗಳೊಬ್ಬಳು ಖಾಲಿ ಕೊಡದೊಂದಿಗೆ ಸಪ್ಪೆ ಮೋರೆ ಹಾಕಿಕೊಂಡು ದಾರಿಯಲ್ಲಿ ಹೋಗುತ್ತಿದ್ದಳು. ಆ ಹೆಣ್ಣುಮಗಳನ್ನು ಕುರಿತು " ಯಾಕಮ್ಮಾ ಖಾಲಿ ಕೊಡ , ನೀರು ಸಿಕ್ಕಲಿಲ್ಲವೇ?

" ಸ್ವಾಮಿ ನಾನು ಅಸ್ಪೃಶ್ಯೆ ನನಗೆ ನೀರು ಹಾಕುವವರ್ಯಾರು ? ನೀರು ಹಿಡಿಯಲೂ ಬಿಡುವುದಿಲ್ಲ. ಅವರಿಂದ ಬೈಸಿಕೊಂಡು ವಾಪಸಾಗುತ್ತಿದ್ದೇನೆ ನಮ್ಮ ಕರ್ಮ " ಎಂದಳು.

ತಕ್ಷಣ ಚಿಂತನೆಗೊಳಗಾದ ಜ್ಯೋತಿಬಾ ರವರು ತೀರ್ಮಾನ ತೆಗೆದುಕೊಂಡು, " ನೋಡಮ್ಮಾ ಆ ತೊಟ್ಟಿಯಲ್ಲಿ ನೀನು ನೀರು ತೆಗೆದು ಕೊಂಡು ಹೋಗು. ಕೇರಿಯವರಿಗೆಲ್ಲಾ ತಿಳಿಸು ಇನ್ನುಮುಂದೆ ನೀವೇ ನೀರು ತುಂಬಿಕೊಂಡು ಹೋಗಿ ನೀವು ಯಾರಿಂದಲೂ ನೀರನ್ನು ಹಾಕಿಸಿಕೊಳ್ಳಬಾರದು. ಈವತ್ತಿನಿಂದ ಈ ನನ್ನ ಚಕ್ರಬಾವಿಯ ತೊಟ್ಟಿಯ ನೀರು ನಿಮ್ಮದೇ " ಎಂದು ಪ್ರಕಟಿಸಿದ ಕೂಡಲೇ ದಿಕ್ಕೆ ತೋಚದೆ ಬಿಂದಿಗೆಯನ್ನು ಕೆಳಗಿಟ್ಟ ಹೆಂಗಸು ಜ್ಯೋತಿಬಾರ ಕಾಲುಮುಟ್ಟಿ ಸಂತೋಷಿಸಿದಳು. ಅಂದು ಅಸ್ಪೃಶ್ಯರ ಕೇರಿಯಲ್ಲಿ ಆನಂದ ಊರಹಬ್ಬದಂತೆ ಹೆಣ್ಣುಮಕ್ಕಳು ದೀಪಾವಳಿಗೆ ತವರಿಗೆ ಬಂದಂತೆ ಖುಷಿಪಟ್ಟು ಕುಣಿದಾಡಿದರು. ಪುಲೆಯವರಿಗೂ ಅಸ್ಪೃಶ್ಯರಿಗೆ ನೀರು ಕೊಟ್ಟ ನೆಮ್ಮದಿಯಾದರೆ, ಮನುವಾದಿಗಳು ಜಾತಿವಾದಿಗಳು ಮಾತ್ಸರ್ಯದಿಂದ ಕೆಂಡಾಮಂಡಲವಾದರು. ಪೂಲೆಯವರನ್ನು ಚಂಡಾಲನೆಂದರು. ಅಸ್ಪೃಶ್ಯನಿಗೆ ಹುಟ್ಟಿದವನೆಂದರು. ಇದಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಜ್ಯೋತಿಬಾ ಇನ್ನೂ ಮಾಡಬೇಕಾದ ಅನೇಕ ಕೆಲಸಗಳ ಬಗ್ಗೆ ಚಿಂತಿಸುತ್ತಿದ್ದರು. ೧೮೬೯ ನೆ ಇಸವಿಯಲ್ಲಿ ಪುಲೆಯವರು ಬ್ರಾಹ್ಮಣಾಂಚಿ ಕಸಬೆ ಎಂಬ ಪುಸ್ತಕ ಬರೆದರು. ಶೂದ್ರ ಜಾತಿಗಳನ್ನು ದೇವರ ಹೆಸರಿನಲ್ಲಿ ವಂಚಿಸುವ ಪರಿಯನ್ನು ಇದರಲ್ಲಿ ಎಳೆ ಎಳೆಯಾಗಿ ಬಿಡಿಸಿ ತೋರಿಸಿದರು. ೧೮೭೩ ಸತ್ಯ ಶೋಧಕ ಸಮಾಜ ಸಂಘಟನೆ ಕಟ್ಟಿ ಎಲ್ಲಾ ಬ್ರಾಹ್ಮಣೇತರರನ್ನು ಒಂದುಗೂಡಿಸಿ ಸಾಮಾಜಿಕ ಚಳುವಳಿ ರೂಪಿಸಿದರು.

ಅಸ್ಪೃಶ್ಯರಿಗೆ ಮೊಟ್ಟಮೊದಲ ಬಾರಿಗೆ ನೀರಿನ ಭಾಗ್ಯವನ್ನು ಕಲ್ಪಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ಜ್ಯೋತಿಬಾ ಪುಲೆಯವರು ಅಗ್ರಗಣ್ಯರು.

ಇವರ ಈ ಕಾರ್ಯದಿಂದ ಅಂದು ಎಷ್ಟೋ ಅಸ್ಪೃಶ್ಯರ ಬಾಳಿನಲ್ಲಿ ಅಂದಕಾರದಿಂದ ಬೆಳಕಿನ್ನೆಡೆಗೆ ಬರಲು ಸಾಧ್ಯವಾಯಿತು.

12/11/2016

🇮🇳ಭಾರತ ದೇಶದ ತ್ರಿವರ್ಣ ಧ್ವಜ ಮತ್ತು ರಾಷ್ಟ್ರ ಲಾಂಛನ 🇮🇳

ಭಾರತ ದೇಶವು ಸ್ವಾತಂತ್ರ್ಯ ಹೊಂದಿದ್ದರೆ ಸಾಲದು ಅದಕ್ಕೆ ತನ್ನದೇ ಆದ ಪ್ರತ್ಯೇಕವಾದ 'ರಾಷ್ಟ್ರಧ್ವಜ' ಮತ್ತು 'ರಾಷ್ಟ್ರಲಾಂಛನ' ಕೂಡ ಅಷ್ಟೇ ಮುಖ್ಯವೆಂದು ಮನಗಂಡು. ಡಾ.ರಾಜೇಂದ್ರಪ್ರಸಾದ ಅವರನ್ನು ಒಳಗೊಂಡು ಒಂದು ಸಮಿತಿಯನ್ನು ರಚಿಸಲಾಯಿತ್ತು. ಆ ಸಮಿತಿಯಲ್ಲಿ ಡಾ. ಅಂಬೇಡ್ಕರ್ ರವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ಅಂದು ಡಾ. ರಾಜೇಂದ್ರಪ್ರಸಾದ ರವರಿಗೆ ಕಾರ್ಯಭಾರದ ಒತ್ತಡ ಹೆಚ್ಚಾಗಿದ್ದರಿಂದ ಹಾಗೂ ಭಾರತದ ಸರ್ವವರ್ಗದವರಿಗೂ ಒಪ್ಪಿಗೆಯಾಗುವ ' ರಾಷ್ಟ್ರಧ್ವಜ' ಮತ್ತು 'ರಾಷ್ಟ್ರಲಾಂಛನ' ಗಳನ್ನು ಆಯ್ಕೆ ಮಾಡುವ ಸಾಮರ್ಥ್ಯ ಡಾ. ಅಂಬೇಡ್ಕರ್ ರವರಿಗಿದೆ ಎಂಬುದನ್ನು ಚೆನ್ನಾಗಿ ಮನಗಂಡಿದ್ದ ಡಾ.ರಾಜೇಂದ್ರಪ್ರಸಾದ ರವರು ‍ಈ ಕೆಲಸವನ್ನು ೧೯೫೭ ರಂದು ಡಾ. ಅಂಬೇಡ್ಕರ್ ಅವರಿಗೆ ವಹಿಸಿದ್ದರು.

ಡಾ. ಅಂಬೇಡ್ಕರ್ ರವರು ಸರ್ವವರ್ಗದವರಿಗೂ ಒಪ್ಪುವ ಹಾಗೆ ಗಂಭೀರವಾಗಿ ತಮ್ಮನ್ನು ತಾವು ಈ ಕೆಲಸದಲ್ಲಿ ತೊಡಗಿಸಿಕೊಂಡರು. ಕೊನೆಗೆ ಬಾಬಾ ಸಾಹೇಬರು ಈ ಸಲಹೆಯನ್ನು ಕೊಡುತ್ತಾರೆ.

ಹಸಿರು (ಸಮೃದ್ಧಿಯ ಸಂಕೇತ). ಬಿಳಿ ( ಪರಿಶುದ್ಧತೆಯ ಸಂಕೇತ) .ಹಾಗೂ ಕೇಸರಿ ( ತ್ಯಾಗದ ಸಂಕೇತ) ಬಣ್ಣಗಳುಳ್ಳ ತ್ರಿವರ್ಣ ಧ್ವಜದ ಮಧ್ಯೆ ಪ್ರಗತಿ ಸಮಾನತೆ-ನ್ಯಾಯಗಳ ಸಂಕೇತವಾದ ಭಗವಾನ್ ಬುದ್ಧನ 'ಧಮ್ಮಚಕ್ರ'ವನ್ನು ಅಳವಡಿಸಿ ( ಧಮ್ಮ ಚಕ್ರವನ್ನು ಅಶೋಕ ಚಕ್ರ ಎಂದೂ ಸಹ ಕರೆಯಲಾಗುತ್ತದೆ) ರಾಷ್ಟ್ರಧ್ವಜವನ್ನು ಆಯ್ಕೆಮಾಡಿದರು.

ಅದೇ ರೀತಿ ಸಾರನಾಥದಲ್ಲಿರುವ ಅಶೋಕ ಸ್ಥಂಭವನ್ನು 'ರಾಷ್ಟ್ರಲಾಂಛನ' ವನ್ನಾಗಿ ಆಯ್ಕೆ ಮಾಡಿದರು. ಅಂತಿಮವಾಗಿ ಡಾ. ಅಂಬೇಡ್ಕರ್ ರವರ ಸಲಹೆ ಮೇರೆಗೆ ೧೯೪೭ ಜುಲೈ ೨೨ ರಂದು ಡಾ.ರಾಜೇಂದ್ರಪ್ರಸಾದ ರವರು ಮಧ್ಯದಲ್ಲಿ ಧಮ್ಮಚಕ್ರ ವಿರುವ ತ್ರಿವರ್ಣ ಧ್ವಜವನ್ನು 'ರಾಷ್ಟ್ರಧ್ವಜ'ವನ್ನಾಗಿ ಹಾಗೂ'ಅಶೋಕ ಸ್ಥಂಭ'ವನ್ನು ರಾಷ್ಟ್ರ ಲಾಂಛನವಾಗಿ ಅಂಗೀಕರಿಸಿದರು.ಅಂಬೇಡ್ಕರ್ ರವರ ಈ ಆಯ್ಕೆಗಳಿಗೆ ದೇಶದಲ್ಲಿ ಒಂದೇ ಒಂದು ವಿರೋಧವೂ ಸಹ ಬರಲಿಲ್ಲ. ಹೆಮ್ಮೆಯ ವಿಷಯವೆಂದರೆ ನಮ್ಮ'ರಾಷ್ಟ್ರಧ್ವಜ' ಹಾಗೂ ' ರಾಷ್ಟ್ರ ಲಾಂಛನ'ಗಳು ಇಂದು ಪ್ರಪಂಚದ ಸ್ವತಂತ್ರ ರಾಷ್ಟ್ರಗಳ ' ರಾಷ್ಟ್ರಧ್ವಜ' ಹಾಗೂ 'ರಾಷ್ಟ್ರ ಲಾಂಛನ'ಗಳಲ್ಲೇ ಅತ್ಯಂತ ಸುಂದರವೂ, ಆಕರ್ಷಣೀಯವಾದವುಗಳೂ ಆಗಿವೆ. ಇದಕ್ಕಾಗಿ ನಾವು ಡಾ. ಅಂಬೇಡ್ಕರ್ ರವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ. ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಲಾಂಛನದ ಬಗ್ಗೆ ಬಾಬಾ ಸಾಹೇಬರು ಈ ರೀತಿ ಹೇಳಿದ್ದಾರೆ.

" ಭಾರದಲ್ಲಿ ಬುದ್ಧಧಮ್ಮ ಬಹುತೇಕ ಮರೆಯಾಗಿದ್ದರೂ ಅದು ಒಂದು ಸಂಸ್ಕೃತಿಗೆ ಜನ್ಮ ಕೊಟ್ಟಿದೆ. ಈ ಸಂಸ್ಕೃತಿಯು ಬ್ರಾಹ್ಮಣೀಯ ಸಂಸ್ಕೃತಿಗಿಂತ ಹೆಚ್ಚು ಉತ್ತಮವೂ , ಶ್ರಿಮಂತವೂ ಆಗಿದೆ. ಸಂವಿಧಾನ ಸಭೆಯ ಮುಂದೆ' ರಾಷ್ಟ್ರಧ್ವಜ ಮತ್ತು ರಾಷ್ಟ್ರ ಲಾಂಛನ ಗಳ ಆಯ್ಕೆಯ ಪ್ರಶ್ನೆ ಬಂದಾಗ ಬ್ರಾಹ್ಮಣೀಯ ಸಂಸ್ಕೃತಿಯಿಂದ ಯಾವುದೇ ಸೂಕ್ತ ಚಿನ್ಹೆ ನಮಗೆ ಸಿಗಲಿಲ್ಲ. ಅಂತಿಮವಾಗಿ ಬುದ್ಧ ಸಂಸ್ಕೃತಿಯು ನಮ್ಮ ನೆರವಿಗೆ ಬಂತು. ನಾವು ಧಮ್ಮ ಚಕ್ರವನ್ನು (ನ್ಯಾಯದ ಚಕ್ರ ) ರಾಷ್ಟ್ರೀಯ ಚಿನ್ಹೆಯಾಗಿ ಒಪ್ಪಿಕೊಂಡೆವು.

ಈ ವಿಷಯವನ್ನು ಭಾರತದ ಎಷ್ಟೋ ಜನರು ಒಪ್ಪುವುದಿಲ್ಲ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದು ಎಷ್ಟು ನಿಜವೂ ಅಷ್ಟೇ ನಿಜವಾದ್ದು ಇದು ಕೂಡಾ. ಬಾಬಾ ಸಾಹೇಬರು ಅಷ್ಟೇ ಅಪ್ರತಿಮ ದೇಶಭಕ್ತರು ಹೌದು.

12/11/2016

ಅಂಬೇಡ್ಕರ್ ಮತ್ತು ಜಗಜೀವನರಾಮ್

ಕಾಂಗ್ರೇಸ್ ಪಕ್ಷವು ಜಗಜೀವನರಾಮ್ ಅವರನ್ನು ರಾಜಕೀಯವಾಗಿ ಸಾಕಷ್ಟು ಬಳಸಿಕೊಂಡಿದೆ. ಅಂಬೇಡ್ಕರ್ ಹೆಸರು ಸಾಮಾಜಿಕ ರಾಜಕೀಯ ವಲಯದಲ್ಲಿ ರಾರಾಜಿಸಿತ್ತಿತ್ತು. ಕಾಂಗ್ರೇಸಗೆ ಅವರು ದೊಡ್ಡ ತಲೆನೋವಾಗಿದ್ದರು. ಕಾಂಗ್ರೇಸ್ ಮಾಡುವ ದ್ವಂದ್ವ ನೀತಿಯನ್ನು , ಕಪಟತನವನ್ನು ಸಾರಸಗಟಾಗಿ ಖಂಡಿಸಿತ್ತಿದ್ದ ಏಕೈಕ ವ್ಯಕ್ತಿ ಬಾಬಾ ಸಾಹೇಬರು . ತಪ್ಪು ಮಾಡಿದವರನ್ನು ದಲಿತರ ಬಗ್ಗೆ ನಿರ್ಲಕ್ಷ್ಯ ತೋರಿದ ಯಾವುದೇ ವ್ಯಕ್ತಿಯನ್ನು ಅವರು ಎಷ್ಟೇ ದೊಡ್ಡವರಿರಲೀ ಯಾರನ್ನು ಬಿಟ್ಟಿಲ್ಲ. ಗಾಂಧೀಜಿಯ ಸೈದ್ಧಾಂತಿಕ ಅಭಿಪ್ರಾಯವನ್ನೇ ಸಾರ್ವಜನಿಕವಾಗಿ ಖಂಡಿಸಿದವರು. ಅವರ ಬಾಯಿ ಮುಚ್ಚಿಸಲು ವ್ಯವಸ್ಥಿತವಾಗಿ ಜಗಜೀವನರಾಮರನ್ನು ಬಳಸಿಕೊಳ್ಳಲಾಗಿದೆ.ಎಂಬ ಅಪವಾದ ಇದೆ. ಆದರೆ ಎಂದೂ ಎಲ್ಲೂ ಅಂಬೇಡ್ಕರ್ ರನ್ನು ಜಗಜೀವನರಾಮ್ ವೈಯಕ್ತಿಕವಾಗಲೀ , ಸಾರ್ವಜನಿಕದಲ್ಲಾಗಲೀ ಟೀಕಿಸಿಲ್ಲ. ಅಂಬೇಡ್ಕರ್ ಬಗ್ಗೆ ಅವರಿಗೆ ಅಪಾರ ಗೌರವವಿತ್ತು. ಜಗಜೀವನರಾಮ್ ಬಗ್ಗೆಯೂ ಬಾಬಾ ಸಾಹೇಬರಿಗೆ ಅಪಾರ ಗೌರವವಿತ್ತು . ಇವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ವಿತ್ತೇವಿನ: ದ್ವೇಷಗಳಲ್ಲ ಎಂಬ ಸತ್ಯ ಇಂದಿನ ದಲಿತರಿಗೆ ಅರಿವಾಗಬೇಕಾದ ಅನಿವಾರ್ಯತೆ ಇದೆ. ಇವರಿಬ್ಬರ ನಡುವೆ ಕಂದಕ ಸೃಷ್ಟಿಸುವುದು ಘೋರ ಅಪರಾಧ ಈ ಇಬ್ಬರೂ ನಾಯಕರನ್ನು ನಾವುಗಳು ಬೇರೆ ಬೇರೆ ಮಾಡದೆ. ಜನಾಂಗದ ಅಭಿವೃದ್ಧಿಗೆ ಶ್ರಮಿಸೋಣ.

12/11/2016

*ಅಸ್ಪೃಶ್ಯತೆ ಉಳಿವಿಗೆ ಶೋಷಿತ ಸಮುದಾಯಗಳ ಉದ್ಯೋಗವೂ ಕಾರಣ?*

ಎರಡು ಕೈ ಸೇರಿದರೆ ಚಪ್ಪಾಳೆ. ಹಾಗೆಯೇ ಎರಡೂ ಸಮುದಾಯಗಳು ಸೇರಿದರೆ ಅಸ್ಪೃಶ್ಯತಾಚರಣೆ! ಹೌದು, ಅಸ್ಪೃಶ್ಯತಾಚರಣೆ ಅದು ಒಂದು ಮಗ್ಗುಲ ಸಮಸ್ಯೆ ಯಲ್ಲ. ಎರಡೂ ಆಯಾಮದಲ್ಲೂ ಅದು ಉಂಟಾಗಿದೆ. ಒಂದು ಆಯಾಮ ಸವರ್ಣೀಯರಾದರೆ ಮತ್ತೊಂದು ಆಯಾಮ ಸ್ವತಃ ಅಸ್ಪೃಶ್ಯ ಸಮುದಾಯಗಳೇ ಆಗಿವೆ. ಉದಾಹರಣೆಗೆ ಮೇಲಾಧಿಕರಿಯೊಬ್ಬ ತನ್ನ ಕೆಳ ಹಂತದ ನೌಕರರನ್ನು ಸಹಜವಾಗಿ ಕೀಳಾಗಿ ಕಾಣುತ್ತಾನೆ. ಆತ ಕಸ ಗುಡಿಸುತ್ತಿದ್ದರೆ ಮೇಲಾಧಿಕಾರಿ ತನ್ನ ಸಹಜ ದರ್ಪ ತೋರುತ್ತಾನೆ. ಅಸ್ಪೃಶ್ಯತೆಯೂ ಹಾಗೆಯೇ. ಒಂದು ಸಮುದಾಯ ಸದಾ ಕೀಳು ಕೆಲಸಗಳನ್ನು ಮಾಡುತ್ತಿದ್ದರೆ ಈಗಾಗಲೇ ಅದಕ್ಕಿಂತ ಉನ್ನತ ಎಂದು ಗುರುತಿಸಿಕೊಂಡಿರುವ ಸಮುದಾಯ ಆ ಸಮುದಾಯವನ್ನು ಮೇಲಾಗಿ ಕಾಣಲು ಸಾಧ್ಯವೆ? ಇಲ್ಲ. ಸಮಾಜದಲ್ಲಿ ಕೀಳು ಕೆಲಸಗಳೂ ಇವೆ ಮೇಲು ಕೆಲಸಗಳೂ ಇವೆ. ಅಮೆರಿಕಾದಲ್ಲಾದರೋ ಚರ್ಮದ ಬಣ್ಣದ ಆಧಾರದ ಮೇಲೆ ಮೇಲು-ಕೀಳು ಎನ್ನಲಾಯಿತು. ಆದರೆ ಭಾರತದಲ್ಲಿ ವ್ಯಕ್ತಿ ಅಥವಾ ಆತನ ಸಮುದಾಯ ಮಾಡುವ ಕೆಲಸದ ಮೇಲೆ ಮೇಲು ಕೀಳು ಎನ್ನಲಾಯಿತು. ಅಂಬೇಡ್ಕರ್ ಮನುಸ್ಮೃತಿ ಸುಟ್ಟದ್ದು ಈ ಮೂಲ ಕಾರಣಕ್ಕೆ ಉದ್ಯೋಗದಲ್ಲಿ , ಉದ್ಯೋಗ ಮಾಡುವವರ ಆಧಾರದಲ್ಲಿ ಮೇಲು-ಕೀಳು ಎಂದ ಅದರ ತಾತ್ವಿಕತೆಯ ಕಾರಣಕ್ಕೆ.

ಇರಬಹುದು, ಮನು ನಾಲ್ಕೈದು ಅಂದರೆ ಪೂಜೆ ಮಾಡುವುದು, ವ್ಯಾಪಾರ ಮಾಡುವುದು, ಯುದ್ಧ ಮಾಡುವುದು, ಸೇವೆ ಮಾಡುವುದು ಹೀಗೆ ಕೆಲಸಗಳಿಗೆ ಜಾತಿಗಳನ್ನು ಸೃಷ್ಟಿಸಿದ. ಆದರೆ ಸ್ಪರ್ಧಾ ಪ್ರಪಂಚದಲ್ಲಿ ಅಂತಹ ಕೆಲಸದ ಆಧಾರದ ತಾರತಮ್ಯ ಎಲ್ಲ ಕೆಲಸಗಳಿಗೂ ವಿಸ್ತರಿಸಿತು. ಯಾವ ಮಟ್ಟಕ್ಕೆ ಅಂದರೆ ಒಂದೊಂದು ಕೆಲಸಕ್ಕೂ ಒಂದೊಂದು ಜಾತಿ ಅನ್ನುವಂತೆ! ಒಟ್ಟಾರೆ ವಿವಿಧ ಕೆಲಸಗಳಿಂದ ವಿವಿಧ ಜಾತಿ ಸೃಷ್ಟಿಯಾಯಿತು ಹಾಗೆಯೇ ಅದರ vice versa ಅಂದರೆ ವಿವಿಧ ಜಾತಿಗಳಿಂದ ವಿವಿಧ ಕೆಲಸಗಳೂ ಸೃಷ್ಟಿಯಾಯಿತು. ಕೆಲಸ ಜಾತಿ, ಜಾತಿ ಕೆಲಸ ಹೀಗೆ ಮಾಡುವ ಕೆಲಸದ ಆಧಾರದ ಮೇಲೆ ಜಾತಿ ಗಟ್ಟಿಯಾಗುತ್ತಾ ಹೋಯಿತು. ಆಶ್ಚರ್ಯವೆಂದರೆ ಹಾಗೆ ಕಾಲಾಂತರ ಸೃಷ್ಟಿ ಯಾದ ಹೊಸ ಕೆಲಸಗಳೂ ನಿರ್ದಿಷ್ಟ ಜಾತಿಗೆ ಎನ್ನುವಂತೆ ಮಾಡಲಾಯಿತೆಂದರೆ...! ಉದಾಹರಣೆಗೆ ಹಿಂದೆ ಬಹಿರ್ದೆಶೆಗೆ ಮನುಷ್ಯ ಹೊಲಗಳಿಗೆ, ಬಯಲು ಪ್ರದೇಶಗಳಿಗೆ ಹೋಗುತ್ತಿದ್ದ. ಆಗ ಶೌಚಾಲಯ ಶುಚಿಗೊಳಿಸುವ ಕೆಲಸ ದಲಿತರಿಗೆ ಎಂಬಂತೆ ಇರಲಿಲ್ಲ. ಆದರೆ ಶೌಚಾಲಯ ವ್ಯವಸ್ಥೆ ಬಂದಂತೆ ಅದನ್ನು ಶುಚಿಗೊಳಿಸುವ ಕೆಲಸವನ್ನು ದಲಿತರಿಗೆ ವಹಿಸಲಾಯಿತು ಅಥವಾ ಅವರ ತಲೆಗೆ ಕಟ್ಟಲಾಯಿತು. ಅಂದರೆ ಶೌಚಾಲಯ ಶುಚಿಗೊಳಿಸುವ ಉದ್ಯೋಗ ಇದು ಲೇಟೆಸ್ಟ್ ಎಂಬುದು ಅರಿವಾಗುತ್ತದೆ. ಹಾಗೆಯೇ ಚಮ್ಮಾರಿಕೆ ಕೂಡ ಅದಕ್ಕಿಂತಲೂ ಸ್ವಲ್ಪ ಹಿಂದಿನದ್ದೆಂದು ಅದರ ಇತಿಹಾಸ ಅಧ್ಯಯನ ಮಾಡಿದರೆ ತಿಳಿಯುತ್ತದೆ.

ಈ ನಿಟ್ಟಿನಲ್ಲಿ ಇಲ್ಲಿ ದಲಿತರ ಮೇಲೆ ಕೆಲವು ಉದ್ಯೋಗಗಳನ್ನು ಹೇಳಲಾಗಿದೆ ಎಂಬುದು ಅರಿವಾಗುತ್ತದೆ. ಹಾಗೆಯೇ ಆ ಉದ್ಯೋಗ ಗಳು ಕೀಳು, ಗಲೀಜು ಆಗಿದ್ದರಿಂದ ಅಸ್ಪೃಶ್ಯತೆ ಯ ಡಿಗ್ರಿ ಕೂಡ ಏರುತ್ತ ಬಂದಿದೆ. ಹೀಗಿರುವಾಗ ಅಸ್ಪೃಶ್ಯತೆ ಯ ಈ ಡಿಗ್ರಿ ಇಳಿಸುವುದು? ಇಳಿಸಿದರೆ ಅಸ್ಪೃಶ್ಯತೆ ಇಳಿಯುತ್ತದೆ ಎಂಬುದಂತು ಸತ್ಯ. ಅಂದಹಾಗೆ ಮತ್ತೆ ಕೇಳುವುದೆಂದರೆ ಆ ಡಿಗ್ರಿ ಇಳಿಸುವವರು? ಸವರ್ಣೀಯರತ್ತ ಒಂದು ಬೆರಳು ತೋರಿಸಬಹುದು ಆದರೆ ಇನ್ನುಳಿದ ನಾಲ್ಕು ಬೆರಳುಗಳು ಅಸ್ಪೃಶ್ಯ ಸಮುದಾಯಗಳತ್ತಲೇ ತೋರಿಸುತ್ತವೆ! ಹೌದು, ಹೊರೆಯನ್ನು ಹೇರುವವರು ಇರಬಹುದು ಆದರೆ ಬೇಡ ಇಂದು ನಿರಾಕರಿಸುವ ಹೊರೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಸಂಬಂಧಿತ ಸಮುದಾಯಗಳಿಗೆ ಇತ್ತು. ಈಗಲೂ ಇದೆ. ಈ ಕಾರಣಕ್ಕೆ ಯಾವ ಉದ್ಯೋಗಗಳನ್ನು ಕೀಳು ಎಂದು ಸಮಾಜ ದೂರವಿಟ್ಟಿದೆಯೋ ಗುರುತಿಸಿದೆಯೋ ಅಂತಹ ಉದ್ಯೋಗಗಳಿಂದ ಅಸ್ಪೃಶ್ಯ ಸಮುದಾಯ ದೂರ ಉಳಿಯುವ ಅಗತ್ಯವಿದೆ. ಬದಲಿಗೆ ಉದ್ಯೋಗ ಬದಲಿಸುವ ಅಗತ್ಯ ವಿದೆ. ಅಂದಹಾಗೆ ಹೀಗೆ ಬದಲಿಸಬಾರದು ಎಂಬ ಆಸೆ ಶೋಷಿತ ಸಮುದಾಯದ ಜನರಲ್ಲಿ ಇದೆ ಎಂದೇ? ಖಂಡಿತ ಇಲ್ಲ.

ಈ ಸಂಬಂಧ ಕುದ್ದು ಪಾಲ್ಗೊಂಡ ವಯಕ್ತಿಕ ಘಟನೆ ಯೊಂದನ್ನು ದಾಖಲಿಸುವುದಾದರೆ ಕೆಲದಿನಗಳ ಹಿಂದೆ ಒಂದು ಬೆಳಿಗ್ಗೆ ಡ್ಯೂಟಿಗೆ ಹೊರಡುವಾಗ ಇದ್ದ ನಾಲ್ಕು ನಿಮಿಷಗಳ ಅವಧಿಯಲ್ಲಿ ರಸ್ತೆ ಯಲ್ಲಿ ಕಸ ತುಂಬುತ್ತಿದ್ದ ತಳ್ಳುವ ಗಾಡಿಯ ಬಾಯಲ್ಲಿ ವಿಷಲ್ ಇಟ್ಟು ಕೊಂಡಿದ್ದ ನನ್ನ ಸಹೋದರಿ ಪೌರಕಾರ್ಮಿಕರೊಬ್ಬರನ್ನು ಮಾತನಾಡಿಸಿದೆ. "ಅಮ್ಮ ,ಯಾಕೆ ನೀವೇ ಈ ಕೆಲಸ ಮಾಡಬೇಕು? ಇಂಥ ಗಲೀಜನ್ನು ನೀವೊಬ್ಬರೆ ಯಾಕೆ ತುಂಬಬೇಕು? ನಾನೂ ನಿಮ್ಮ ವನೇ. ಬೇರೆ ಜಾತಿಯವರು ಮಾಡಲಿ ಬಿಡಿ‌. ದಯವಿಟ್ಟು ಈ ಕೆಲಸ ಬಿಟ್ಟು ಬಿಡಿ" ಎಂದೆ. ಅದಕ್ಕೆ ಅವರು" ಏನ್ ಮಾಡೋದು ಸ್ವಾಮಿ, ನಮಗೆ ಬರೋದು ಇದೊಂದೇ ಕೆಲಸ ಅಂಥ ಎಲ್ಲಾ ಹೇಳ್ತವರೆ. ಎಲ್ಲರೂ ನಾವು ಇದನ್ನೆ ಮಾಡಬೇಕು ಅಂತ ಎಲ್ಲರೂ ಅಂತಾರೆ" ಅಂದರು. ನಾನು "ಯಾರು ಹಾಗೆ ಅನ್ನೋರು? ಮೊದಲು ಈ ಕೆಲಸ ಬಿಡಿ. ಬೇರೆ ಉದ್ಯೋಗ ಮಾಡಿ. ಮನೆ ಕೆಲಸ ಮಾಡಿ. ಕೂಲಿ ಕೆಲಸ ಮಾಡಿ.ಈ ಗಲೀಜು ಕೆಲಸ ಮಾಡಬೇಡಿ. ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಹಚ್ಚಬೇಡಿ" ಅಂದೆ. ಅದಕ್ಕೆ ಅವರು "ಇಲ್ಲ, ಸ್ವಾಮಿ , ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ. ಈ ಕೆಲಸಕ್ಕೆ ಹಾಕುವುದಿಲ್ಲ" ಎಂದರು‌. ಈ ಸಂದರ್ಭದಲ್ಲಿ ನನಗೆ ಅರಿವಾದದ್ದೆಂದರೆ ನಾವು ಸಂಬಂಧಿತ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದೇವೆ ಎಂದು. ಯಾಕೆಂದರೆ ಅವರಿಗೆ ಇನ್ನೊಬ್ಬರು ಅಥವಾ ಸಮಾಜ ಹೇಳುವುದರಿಂದ ಹಾಗೆ ಅಂದುಕೊಳ್ಳುವುದರಿಂದ ನಾವು ಇದೇ ಕೆಲಸ ಮಾಡಬೇಕೆಂಬ ನಂಬಿಕೆ ಇದೆ ಮತ್ತು ಅವರನ್ನು ಅದು ಆ ಉದ್ಯೋಗಕ್ಕೆ ಕಟ್ಟಿಹಾಕಿದೆ. ಬದಲಿಗೆ ಅವರಿಗೆ ಅದು ಸುಳ್ಳು, ಯಾರೂ ಇಂತಹದ್ದೆ ಉದ್ಯೋಗ ಮಾಡಬೇಕು ಎಂಬ ರೂಲ್ಸ್ ಇಲ್ಲ ಎಂದು ಅರಿವು ಮೂಡಿಸಿದರೆ? ಖಂಡಿತ ಮುಂದಿನ ತಲೆಮಾರಿಗಾದರೂ ಇಂತಹ ಹೀನ ಕೆಲಸ ಆಧಾರಿತ ಉದ್ಯೋಗ ಆಧಾರಿತ ಜಾತಿ ವ್ಯವಸ್ಥೆ ತೊಲಗುತ್ತದೆ. ಈ ನಿಟ್ಟಿನಲ್ಲಿ ಒಮ್ಮೆ ಹೀಗೆ ಇಂತಹ ಜಾತಿಗೆ ಇಂತಹ ಉದ್ಯೋಗ ಇಂತಹ ಉದ್ಯೋಗಕ್ಕೆ ಇಂತಹ ಜಾತಿ ಎಂಬುದು ತೊಲಗಿದರೆ ಅಸ್ಪೃಶ್ಯತೆ ಅದು ಆಚರಿಸುವ ಸಂದರ್ಭಗಳೇ ಕಡಿಮೆಯಾಗುತ್ತದೆ. ವಿಶೇಷವಾಗಿ ಅದರ ಭೀಕರತೆ.

ಯಾಕೆಂದರೆ ಸತ್ತ ದನದ ಚರ್ಮ ತೆಗೆಯುವವರ ಮೇಲಿನ ದೌರ್ಜನ್ಯ, 'ಹೇ! ಟಾಯ್ಲೆಟ್ ಸರಿಯಾಗಿ ತೊಳೆ' ಎಂಬ ದೌರ್ಜನ್ಯ, ಚಪ್ಪಲಿ ಹೊಲಿಯುವವನ ಮುಂದೆ ಚಪ್ಪಲಿ ಬೀಸಾಡುವ ದೌರ್ಜನ್ಯ, ಕಾಸು ಕೊಡಲು ಸತಾಯಿಸುವ ದೌರ್ಜನ್ಯ ಅದು ಸರ್ಕಾರಿ ಉದ್ಯೋಗಗಳಲ್ಲಿರುವ ದಲಿತರ ಮೇಲೆ ನಡೆಯುವ ದೌರ್ಜನ್ಯದ ನೂರು ಪಟ್ಟು ಇರುತ್ತದೆ. ಅಪಮಾನದ ಪರಿಮಾಣವೂ ಅಷ್ಟೇ. ದೌರ್ಜನ್ಯ ತಡೆ ಕಾಯಿದೆ ಇರಬಹುದು. ಆದರೆ ಹೀಗೆ ಕೀಳು ಉದ್ಯೋಗಗಳಿಂದ ತಪ್ಪಿಸಿಕೊಂಡು ದೌರ್ಜನ್ಯದ ಸಂದರ್ಭಗಳಿಂದ ತಪ್ಪಿಸಿಕೊಳ್ಳದಿದ್ದರೆ ಖಂಡಿತ ಕಾಯಿದೆ ಕಾನೂನು ಗಳು ಕೂಡ ಏನೇನು ಮಾಡಲಾರವು. ಯಾಕೆಂದರೆ ರೋಗಾಣುಗಳಿರುವ ವಾತಾವರಣದಲ್ಲಿ ಬದುಕುತ್ತ ರೋಗ ಬರಿಸಿಕೊಂಡು ಪದೇ ಪದೇ ಡಾಕ್ಟರ್ ಬಳಿ ಹೋದರೆ ಏನು ಪ್ರಯೋಜನ? ಬದಲಿಗೆ ರೋಗದ ವಾತಾವರಣದಿಂದ ದೂರ ಉಳಿದರೆ? ಖಾಯಿಲೆಯೂ ನಿಧಾನಕ್ಕೆ ವಾಸಿಯಾಗಿತ್ತದೆ ಅದು ಪದೇ ಪದೇ ತಗುಲುವ ಸಾಧ್ಯತೆ ಕೂಡ ಕಮ್ಮಿಯಾಗುತ್ತದೆ. ಈ ನಿಟ್ಟಿನಲ್ಲಿ ಅಸ್ಪೃಶ್ಯತೆ ಎಂಬ ರೋಗ ಕಮ್ಮಿಯಾಗಲಿ, ಕೀಳು ಉದ್ಯೋಗಗಳಿಂದ ಶೋಷಿತ ಸಮುದಾಯಗಳು ದೂರ ಉಳಿದು ಅಂತಹ ಸಾಮಾಜಿಕ ರೋಗ ಪದೇ ಪದೇ ತಗಲುವುದರಿಂದ ತಪ್ಪಿಸಿಕೊಳ್ಳಲಿ, ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ತನ್ನ ಬಹುಮುಖ್ಯ ಜವಾಬ್ದಾರಿಯನ್ನು ಅರಿಯಲಿ

Address

Hassan
573216

Telephone

+917022550123

Website

Alerts

Be the first to know and let us send you an email when Dr, B.R Ambedkar Youths Savasihalli posts news and promotions. Your email address will not be used for any other purpose, and you can unsubscribe at any time.

Share