VALMIKI NAYAKA COMMUNITY

VALMIKI NAYAKA COMMUNITY This Page is official managed by SRI VALMIKI GURUPEETA, RAJANAHALLI, HARIHARA TALUK, DAVANGERE DISTRICT.

Nobody are suppose to create any group or page in this name. This page runs for the welfare of Valmiki Nayaka Community people. Anybody would like to give suggestion or like to share any kind of information related to our community with us may drop message to our inbox.

..............*ಶ್ರೀ ಮಠದ ಪ್ರಕಟಣೆ*.............*ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಜಿ ರವರ 19ನೇ ವರ್ಷದ ಪುಣ್ಯಾರಾಧನ...
29/03/2026

..............*ಶ್ರೀ ಮಠದ ಪ್ರಕಟಣೆ*.............

*ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಜಿ ರವರ 19ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ* ಹಾಗೂ
*ರಾಜ್ಯಮಟ್ಟದ ಮಹತ್ವದ ಸಭೆ*

*ದಿನಾಂಕ: 03/04/2026 ಶುಕ್ರವಾರ*
*ಸಮಯ ಬೆಳಗ್ಗೆ 11:00 ಗಂಟೆಗೆ*
*ಸ್ಥಳ: ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ*

*ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ (ST) ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಮತ್ತು ಪರಿಶಿಷ್ಟ ಜಾತಿಯ (SC) ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಹೆಚ್ಚಿಸಿದ (ಒಟ್ಟು 56%) ಕಾಯ್ದೆಯನ್ನು, ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲು ಸಂವಿಧಾನದ 9ನೇ ಪರಿಚ್ಛೇದಕ್ಕೆ (9th Schedule) ಸೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದು ಹಾಗೂ ಸಮುದಾಯದ ಪ್ರಸ್ತುತ ಜ್ವಲಂತ ಸಮಸ್ಯೆಗಳ ಕುರಿತು ರಾಜ್ಯಮಟ್ಟದ ಮಹತ್ವದ ಸಭೆ ಕರೆಯಲಾಗಿದೆ*

*ಈ ಸಭೆಗೆ ಸಮುದಾಯದ ಹಾಲಿ ಮತ್ತು ಮಾಜಿ ಸಚಿವರು ಸಂಸದರು, ಶಾಸಕರು, ಪರಿಷತ್ ಸದಸ್ಯರು, ಧರ್ಮದರ್ಶಿಗಳು, ಶ್ರೀಮಠದ ಪ್ರತಿನಿಧಿಗಳು, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಜಾತ್ರಾ ಸಮಿತಿ ಅಧ್ಯಕ್ಷರು, ನೌಕರರ ಸಂಘದ ಅಧ್ಯಕ್ಷರು, ಸದಸ್ಯರು, ಮಹಿಳಾ ಮುಖಂಡರು ಮತ್ತು ವಿ.ಎಸ್.ಎಸ್. ಪದಾಧಿಕಾರಿಗಳು, ವಿವಿಧ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಮಾಜದ ಎಲ್ಲಾ ಮುಖಂಡರು ಹಾಗೂ ಯುವಕರು. ಸಮಸ್ತ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆ ಯಶಸ್ವಿಗೊಳಿಸಬೇಕಾಗಿ ಕೋರಿದೆ*

.........*ಶ್ರೀ ಮಠದ ಪ್ರಕಟಣೆ*.........*ಆತ್ಮೀಯರೇ.....**2024_ ಬ್ಯಾಚ್ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ವತ...
09/03/2026

.........*ಶ್ರೀ ಮಠದ ಪ್ರಕಟಣೆ*.........

*ಆತ್ಮೀಯರೇ.....*

*2024_ ಬ್ಯಾಚ್ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ದಿನಾಂಕ:23.03.2026 ರಂದು ನಡೆಸುವ ಸಂದರ್ಶನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ (ರಿ) ರಾಜನಹಳ್ಳಿ ವತಿಯಿಂದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ಒಂದು ದಿನದ "ಅಣುಕು ಸಂದರ್ಶನ ತರಬೇತಿ" ಕಾರ್ಯಗಾರವನ್ನು ನುರಿತ ಅನುಭವಿ ತಜ್ಞರಿಂದ ದಿನಾಂಕ:15.03.2026 ರ ಭಾನುವಾರ ಬೆಳಿಗ್ಗೆ 10:30 ಕ್ಕೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.*

*ಆಸಕ್ತರು ನೊಂದಾಯಿಸಿಕೊಂಡು ಭಾಗವಹಿಸಲು ಕೋರಲಾಗಿದೆ.*

*ವಿಶೇಷ ಸೂಚನೆ:- ಆಸಕ್ತರಿಗೆ ಸ್ಥಳವನ್ನು ದೂರವಾಣಿ ಮೂಲಕವೇ ತಿಳಿಸಲಾಗುವುದು*

*ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು*

*ಬೆಳಗಾವಿ ವಿಭಾಗ*
*ಶ್ರೀ ರಾಜಶೇಖರ್ ತಳವಾರ್*
9242070787

*ಕಲಬುರ್ಗಿ ವಿಭಾಗ*
*ಶ್ರೀ ಬಿಎಸ್ ಜಂಬಯ್ಯ ನಾಯಕ*
+919449667476

*ಡಾ. ಪ್ರಭು ಹುಲಿ ನಾಯಕ್*
+919448219369

*ಬೆಂಗಳೂರು ವಿಭಾಗ*
*ಶ್ರೀ ಪಂಪಾಪತಿ ನಿವೃತ್ತ ಎಸಿಪಿ.*
9448233332

*ಮೈಸೂರು ವಿಭಾಗ*
*ಡಾ. ಅನುಸೂಯ ಕೆಂಪನಹಳ್ಳಿ.*
+919481815103

............*ಶ್ರೀಮಠದ ಪ್ರಕಟಣೆ*..............*ಆತ್ಮೀಯ ಸಮುದಾಯದ ಬಂಧುಗಳೇ ಹಾಗೂ ಶ್ರೀಮಠದ ಸದ್ಭಕ್ತರೇ.....**ಜಗದ್ಗುರು ಶ್ರೀ ಡಾ. ವಾಲ್ಮೀ...
26/02/2026

............*ಶ್ರೀಮಠದ ಪ್ರಕಟಣೆ*..............

*ಆತ್ಮೀಯ ಸಮುದಾಯದ ಬಂಧುಗಳೇ ಹಾಗೂ ಶ್ರೀಮಠದ ಸದ್ಭಕ್ತರೇ.....*

*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತೃಚಿಕಿತ್ಸೆ ಪಡೆದು, ಚಿಕಿತ್ಸೆ ಯಶಸ್ವಿಯಾಗಿದ್ದು ಶ್ರೀಮಠಕ್ಕೆ ಆಗಮಿಸುತ್ತಿದ್ದಾರೆ.*

*ಶ್ರೀಗಳ ದರ್ಶನಕ್ಕೆ ಅವಕಾಶ*

*ದಿನಾಂಕ:27/02/2026 ಶುಕ್ರವಾರ ಮತ್ತು ದಿನಾಂಕ:28/02/2026 ಶನಿವಾರ ಸಮಯ: ಬೆಳಿಗ್ಗೆ:09 ರಿಂದ 12:00 ಮತ್ತು ಮಧ್ಯಾಹ್ನ 03:00 ರಿಂದ 06:00 ವರೆಗೆ ಶ್ರೀಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಮಸ್ತ ಸಮುದಾಯದ ಬಂಧುಗಳು ಹಾಗೂ ಶ್ರೀಮಠದ ಸದ್ಭಕ್ತರಿಗೆ ಈ ಮೂಲಕ ತಿಳಿಯಬಯಸುತ್ತೇವೆ*

*ಶ್ರೀಗಳ ಆರೋಗ್ಯ ಚೇತರಿಕೆಗೆ ರಾಜ್ಯದ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳ ಮೂಲಕ ದೇವರಲ್ಲಿ ಪ್ರಾರ್ಥಿಸಿದ ಸಮಸ್ತರಿಗೂ ಶ್ರೀಮಠದಿಂದ ತುಂಬು ಹೃದಯದ ಅಭಿನಂದನೆಗಳು*

*ಆಡಳಿತಾಧಿಕಾರಿಗಳು*
*ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ*

............*ಶ್ರೀ ಮಠದ ಪ್ರಕಟಣೆ*............*ದಿನಾಂಕ 16-02-2026 ಸೋಮವಾರ**ಸಮಯ: ಮಧ್ಯಾಹ್ನ 12-30**ಸ್ಥಳ: ಇಡಗೂರು ಗೌರಿಬಿದನೂರು ತಾಲ್ಲ...
17/02/2026

............*ಶ್ರೀ ಮಠದ ಪ್ರಕಟಣೆ*............

*ದಿನಾಂಕ 16-02-2026 ಸೋಮವಾರ*
*ಸಮಯ: ಮಧ್ಯಾಹ್ನ 12-30*
*ಸ್ಥಳ: ಇಡಗೂರು ಗೌರಿಬಿದನೂರು ತಾಲ್ಲೂಕು,*

*ಜಗದ್ಗುರು ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿರವರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಇಡಗೂರು ಶ್ರೀ ಕಣ್ಣೇಶ್ವರ ಸ್ವಾಮಿರವರ ಬ್ರಹ್ಮರಥೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀವ೯ಚನ ನೀಡಿದರು*

*ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀ ಅಶೋಕ್ ರವರು ತಾಲ್ಲೂಕು ಅಧ್ಯಕ್ಷರಾದ ಶ್ರೀ ಬಾಬಣ್ಣ ರವರು ಸೇರಿದಂತೆ ಶ್ರೀಮಠದ ಪ್ರತಿನಿಧಿಗಳು ತಾಲ್ಲೂಕು ಮುಖಂಡರು ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ಗೌರಿಬಿದನೂರು ತಾಲ್ಲೂಕು ಮುಖಂಡರು, ಇಡಗೂರು ಗ್ರಾಮಸ್ಥರು ಮಹಿಳೆಯರು ಯುವಕರು ಸಮಾಜದ ಬಂಧುಗಳು ಉಪಸ್ಥಿತರಿದ್ದರು*

............*ಶ್ರೀ ಮಠದ ಪ್ರಕಟಣೆ*............*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಭಾಗವಹಿಸಿದ ಕಾರ್ಯಕ್ರಮಗಳ ...
15/02/2026

............*ಶ್ರೀ ಮಠದ ಪ್ರಕಟಣೆ*............

*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಭಾಗವಹಿಸಿದ ಕಾರ್ಯಕ್ರಮಗಳ ವಿವರ*

*ದಿನಾಂಕ: 14-02-2026 ಶನಿವಾರ*
*ಸಮಯ: ಸಮಯ ಸಂಜೆ: 06.00 ರಿಂದ 09.00*
*ಸ್ಥಳ: ಗುಂಜಳ್ಳಿ ಸಿಂಧನೂರು ತಾಲೂಕು*

*ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ರಾಯಚೂರು ಜಿಲ್ಲಾ ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ನಿಮಿತ್ಯ ಪ್ರತಿಷ್ಠಾಪನಾ ಮೂರ್ತಿ ಮೆರವಣಿಗೆಯೊಂದಿಗೆ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು*

*ನಾಡಿನ ವಿವಿಧ ಮಠಾಧೀಶರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ರವರು ಸೇರಿದಂತೆ ಗುಂಜಳ್ಳಿ ಗ್ರಾಮಸ್ಥರು ಸಿಂಧನೂರು ತಾಲ್ಲೂಕು ಮುಖಂಡರು ಮಸ್ಕಿ ತಾಲೂಕು ಮುಖಂಡರು ಸಮಸ್ತ ಸಮಾಜದ ಬಂಧುಗಳು ಉಪಸ್ಥಿತರಿದ್ದರು*

*ಸಮಸ್ತ ನಾಡಿನ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಷಯಗಳು*

*ದಿನಾಂಕ: 15/02/2025 ಭಾನುವಾರ*
*ಸಮಯ ಬೆಳಿಗ್ಗೆ 11:30 ಗಂಟೆ*
*ಸ್ಥಳ: ಕಲ್ಮನೆ ಶಿಕಾರಿಪುರ ತಾಲ್ಲೂಕು*

*ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಕಮಿಟಿ ಕಲ್ಮನೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ಶ್ರೀ ವಾಲ್ಮೀಕಿ ಮಹರ್ಷಿ ಮತ್ತು ಶ್ರೀ ಬೇಡರ ಕಣ್ಣಪ್ಪ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಗೃಹಪ್ರವೇಶ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀವ೯ಚನ ನೀಡಿದರು*

*ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರು, ಶಿವಮೊಗ್ಗ ಸಂಸದರಾದ ಸನ್ಮಾನ್ಯ ಶ್ರೀ ಬಿ ವೈ. ರಾಘವೇಂದ್ರ ರವರು, ಸೇರಿದಂತೆ ಶಿಕಾರಿಪುರ ತಾಲೂಕು ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಮುಖಂಡರು ಸೇರಿದಂತೆ ಕಲ್ಮನೆ ಗ್ರಾಮಸ್ಥರು ಸಮಾಜದ ಬಂಧುಗಳು ಉಪಸ್ಥಿತರಿದ್ದರು*

*ಸಮಯ ಮಧ್ಯಾಹ್ನ : 02:00 ಗಂಟೆ*
*ಸ್ಥಳ: ಕಲ್ಮನೆ ಗ್ರಾಮ ಶಿಕಾರಿಪುರ*

*ನಾಮಕರಣ ಕಾರ್ಯಕ್ರಮ*

*ಕಲ್ಮನೆ ಗ್ರಾಮದ ಸಮಾಜದ ಮುಖಂಡರಾದ ಸನ್ಮಾನ್ಯ ಶ್ರೀ ಲೋಕೇಶ್ ಇವರ ಮೊಮ್ಮಗನ ನಾಮಕಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಟುಂಬಸ್ಥರಿಗೆ ಆಶೀವ೯ದಿಸಿ ಶುಭಕೋರಿದರು*

*ಸಮಯ: ಸಂಜೆ: 03:00 ಗಂಟೆ*
*ಸ್ಥಳ: ಶಿಕಾರಿಪುರ ಟೌನ್*

*ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ನಿವೃತ್ತ ಶಿಕ್ಷಕರಾದ ಸನ್ಮಾನ್ಯ ಶ್ರೀ ಮಂಜಪ್ಪ ಇವರು ನೂತನವಾಗಿ ಶಿಕಾರಿಪುರ ಟೌನ್ ನಲ್ಲಿ ನಿರ್ಮಿಸಿರುವ ಬಿ.ಕೆ ಎಂಟರ್ಪ್ರೈಸಸ್ ಎಲೆಕ್ಟ್ರಿಕಲ್ ಬೈಕ್ ಶೋರೂಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದರು*

ನಿರಾಭರಣ, ನಿರಾಡಂಬರ ಪ್ರತೀಕವಾದ ಆದಿದೈವ ಶಿವನನ್ನು ಪೂಜಿಸುವ, ಭಕ್ತಿ ಮತ್ತು ನಂಬಿಕೆ ತುಂಬಿದ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.ಪ್ರಕೃತಿಯ ಮೂ...
15/02/2026

ನಿರಾಭರಣ, ನಿರಾಡಂಬರ ಪ್ರತೀಕವಾದ ಆದಿದೈವ ಶಿವನನ್ನು ಪೂಜಿಸುವ, ಭಕ್ತಿ ಮತ್ತು ನಂಬಿಕೆ ತುಂಬಿದ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.

ಪ್ರಕೃತಿಯ ಮೂಲ ಪುರುಷ, ಸೃಷ್ಟಿಕರ್ತನಾದ ಪರಶಿವನು ಎಲ್ಲರಿಗೂ ಸುಖ, ಸಂತೋಷ ಹಾಗೂ ಆರೋಗ್ಯವನ್ನು ನೀಡಿ ಜೀವನವನ್ನು ಉದ್ಧರಿಸಲಿ. ಎಲ್ಲರ ಬದುಕಿನಲ್ಲಿ ಶಿವನ ಕೃಪೆ ಮತ್ತು ಭಕ್ತಿಯ ಬೆಳಕು ಸದಾ ತುಂಬಿರಲಿ.

...….........*ಶ್ರೀಮಠದ ಪ್ರಕಟಣೆ*.................*ಜಗದ್ಗುರು ಡಾII ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಭಾಗವಹಿಸಿದ ಕಾರ್ಯಕ...
14/02/2026

...….........*ಶ್ರೀಮಠದ ಪ್ರಕಟಣೆ*.................

*ಜಗದ್ಗುರು ಡಾII ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಭಾಗವಹಿಸಿದ ಕಾರ್ಯಕ್ರಮಗಳ ವಿವರ*

*ದಿನಾಂಕ : 12-02-2025 ಗುರುವಾರ*
*ಸಮಯ : ಬೆಳಿಗ್ಗೆ 11:30*

*ಗೌರಿಬಿದನೂರು ತಾಲೂಕು ತೊಂಡೆಬಾವಿ ಹೋಬಳಿ ಬಳೆರಹಳ್ಳಿ ಗ್ರಾಮದಲ್ಲಿ ಶ್ರೀ ಸಪ್ತ ಮಾತೃಕಾ ದೇವಾಲಯ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು*

*ಈ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ, ಶಿಡ್ಲಾಕೋಣ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮೀಜಿ ಸಮ್ಮುಖ ಸಾನಿಧ್ಯ ವಹಿಸಿದ್ದರು*

*ಸಮಯ: ಸಂಜೆ: 08.00 ಗಂಟೆ*
*ಸ್ಥಳ : ಎಸ್ ಎನ್ ಎಸ್ ಕನ್ವೆನ್ಷನ್ ಹಾಲ್ ತಿಪಟೂರು*

*ಹಾಸನ ತಾಲೂಕು ನುಗ್ಗೆಹಳ್ಳಿ ಗ್ರಾಮದ ಶ್ರೀ ನಾಗೇಶ್ ಇವರ ಅಕ್ಕನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಆಶೀರ್ವದಿಸಿ ಶುಭ ಕೋರಿದರು*

*ದಿನಾಂಕ: 13-02-2025 ಶುಕ್ರವಾರ*
*ಸ್ಥಳ ಸಿದ್ದೇಶ್ವರ ಪ್ಯಾಲೇಸ್ ಹರಿಹರ*

*ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕು, ನಲವಾಗಿಲು ಗ್ರಾಮದ ಶ್ರೀ ಸುಮಂತ್ ಅರೆಮಲ್ಲಾಪುರ ಹಾಗೂ ಶ್ರೀಮತಿ ಮಂಜುಳಾ ಇವರ ಮಗ ಶ್ರೀ ಗಣೇಶ್ ಇವರ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಆಶೀರ್ವದಿಸಿ ಶುಭ ಕೋರಿದರು*

*ಸಮಯ- ಮದ್ಯಾಹ್ನ 01-00 ಗಂಟೆ*

*ಶಿಗ್ಗಾವಿ ತಾಲೂಕು ಬಸವನಾಳ ಗ್ರಾಮದ ತಾಲೂಕು ಮುಖಂಡರಾದ ಶ್ರೀ ಯಲ್ಲಪ್ಪ ಇವರ ಮಗಳ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಆಶೀರ್ವದಿಸಿ ಶುಭ ಕೋರಿದರು*

*ಈ ಸಂದರ್ಭದಲ್ಲಿ ಬಸವನಾಳ ಗ್ರಾಮದ ಸಮಾಜದ ಬಂಧುಗಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಆಶೀರ್ವದಿಸಿದರು*

14/02/2026
............*ಶ್ರೀ ಮಠದ ಪ್ರಕಟಣೆ*............*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಭಾಗವಹಿಸಿದ ಕಾರ್ಯಕ್ರಮಗಳ ...
13/02/2026

............*ಶ್ರೀ ಮಠದ ಪ್ರಕಟಣೆ*............

*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರು ಭಾಗವಹಿಸಿದ ಕಾರ್ಯಕ್ರಮಗಳ ವಿವರ*

*ದಿನಾಂಕ:10/02/2026 ಮಂಗಳವಾರ*
*ಸಮಯ ಮಧ್ಯಾಹ್ನ 12:30*
*ಸ್ಥಳ: ಬ್ರಹ್ಮ ವಿದ್ಯಾನಗರ ಹೊಸದುರ್ಗ*

*ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಬ್ರಹ್ಮವಿದ್ಯಾನಗರ ಶಿಲಾಪುರಿ ಮಹಾ ಸಂಸ್ಥಾನ ಮಠ ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರ 27 ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ, ಭಗೀರಥ ಜಯಂತಿ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಪೂಜ್ಯಶ್ರೀಗಳನ್ನು ಸತ್ಕರಿಸಿದರು*

*ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸಮ್ಮುಖ ಸಾನಿಧ್ಯ ವಹಿಸಿದ್ದರು ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿಯವರು ಶಾಸಕರಾದ ಸನ್ಮಾನ್ಯ ಶ್ರೀ ಪುಟ್ಟರಂಗಶೆಟ್ಟಿರವರು, ಹೊಸದುರ್ಗ ಶಾಸಕರಾದ ಸನ್ಮಾನ ಶ್ರೀ ಬಿ ಜಿ ಗೋವಿಂದಪ್ಪ ರವರು, ಮಾಜಿ ಸಚಿವರಾದ ಎಚ್ ಆಂಜನೇಯರವರು, ಚಳ್ಳಕೆರೆ ಶಾಸಕರಾದ ಸನ್ಮಾನ್ಯ ಶ್ರೀ ಟಿ ರಘುಮೂರ್ತಿ ರವರು ಸೇರಿದಂತೆ ಶಾಸಕರು ಮಾಜಿ ಶಾಸಕರು, ಭಗಿರಥಪೀಠದ ಭಕ್ತ ಸಮೂಹ ಸೇರಿದಂತೆ ಹಲವರು ಭಾಗವಹಿಸಿದ್ದರು*

*ದಿನಾಂಕ:11/02/2026 ಬುಧವಾರ*
*ಸ್ಥಳ: ತರೀಕೆರೆ*
*ಸಮಯ - ಬೆಳಿಗ್ಗೆ:10.00*

*ಚಿಕ್ಕಮಂಗಳೂರು ಜಿಲ್ಲೆ ತರೀಕೆರೆ ತಾಲೂಕು ಸಮಾಜದ ಮುಖಂಡರಾದ ಶ್ರೀ ಟಿ ಸಿ ಪ್ರಭಾಕರ್ ಇವರ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಆಶೀರ್ವದಿಸಿದರು*

*ಸಮಯ: ಮದ್ಯಾಹ್ನ 1.30*
*ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಮತ್ತಿಗಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ದಪಾಳ್ಯ ಗ್ರಾಮದ ಶ್ರೀ ಗುರು ಹಿರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು*

*ಕಾರ್ಯಕ್ರಮದಲ್ಲಿ ಹಾಸನ್ ತಾಲೂಕ ಶ್ರೀಮಠದ ಪ್ರತಿನಿಧಿ ಶ್ರೀ ಬಿ ಎಸ್ ರವಿಕುಮಾರ್ ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಶ್ರೀ ಚೇತನ್ ಸೇರಿದಂತೆ ದೊಡ್ಡ ಪಾಳ್ಯ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ತಾಲೂಕು ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು*

12/02/2026
........*ಶ್ರೀಮಠದ ಪ್ರಕಟಣೆ*..........*ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2026**ದಿನಾಂಕ 08/02/2026 ಭಾನುವಾರ ಮತ್ತು ದಿನಾಂಕ: 09/02/2026...
12/02/2026

........*ಶ್ರೀಮಠದ ಪ್ರಕಟಣೆ*..........

*ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2026*

*ದಿನಾಂಕ 08/02/2026 ಭಾನುವಾರ ಮತ್ತು ದಿನಾಂಕ: 09/02/2026*
*ಸ್ಥಳ: ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ,*

*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿವರ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಶಾಸಕರಾದ ಸನ್ಮಾನ್ಯ ಶ್ರೀ ಬಸವನಗೌಡ ದದ್ದಲ್ ರವರ ಅಧ್ಯಕ್ಷತೆಯಲ್ಲಿ ನಿವೃತ್ತ ಎಸಿಪಿ ಹಾಗೂ ಜಾತ್ರಾ ಸಮಿತಿ ಸಂಚಾಲಕರಾದ ಸನ್ಮಾನ್ಯ ಶ್ರೀ ಪಂಪಾಪತಿ ರವರ ಹಾಗೂ ಸಮಸ್ತ ಸಮುದಾಯದ ಬಂಧುಗಳ ಸಮಕ್ಷಮದಲ್ಲಿ 8ನೇ ವರ್ಷದ ಐತಿಹಾಸಿಕ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು*

*ಮೊದಲನೇ ದಿನ*
ಬೆಳಿಗ್ಗೆ 08 ಗಂಟೆಗೆ
*ರಾಜನಹಳ್ಳಿ ಗ್ರಾಮದ ಸಮಸ್ತ ಸರ್ವ ಸಮುದಾಯದ ಮಹಿಳೆಯರು ಕುಂಭ ಆರತಿಯೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆಯೊಂದಿಗೆ ಸಾಗಿ, ಹಿರಿಯ ಮುಖಂಡರು ಚಳ್ಳಕೆರೆ ತಾಲೂಕು ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಪ್ಪ ನಾಯಕರು ಇವರ ಅಮೃತ ಹಸ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ದ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು*

*ನಂತರ ಹರಿಹರ ಶಾಸಕರಾದ ಸನ್ಮಾನ್ಯ ಶ್ರೀ ಬಿ. ಪಿ ಹರೀಶ್ ರವರಿಂದ ಬುಡಕಟ್ಟು ವಸ್ತು ಪ್ರದರ್ಶನ ಮೇಳ ಹಾಗೂ ವಿವಿಧ ಘಟಕಗಳ ಉದ್ಘಾಟನೆ, ಹರಿಹರ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಚ್ಎಸ್ ಶಿವಶಂಕರ್ ರವರಿಂದ ಕೃಷಿ ವಸ್ತು ಪ್ರದರ್ಶನ ಮೇಳ ಹಾಗೂ ವಿವಿಧ ಘಟಕಗಳ ಉದ್ಘಾಟನೆ, ಹಾಗೂ ಹರಿಹರ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ರಾಮಪ್ಪ ರವರಿಂದ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಉದ್ಯೋಗ ಮೇಳ ಉದ್ಘಾಟನೆ ನೆರವೇರಿತು*

*ನಂತರ "ಮಹಿಳಾ ಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀಮಠದ ಧರ್ಮದರ್ಶಿಗಳಾದ ಶ್ರೀಮತಿ ಶಾಂತಲಾ ರಾಜಣ್ಣರವರು ಅಧ್ಯಕ್ಷತೆ ವಹಿಸಿದ್ದರು ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌದರಿ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮಹಿಳಾ ಗೋಷ್ಠಿ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರು ಉಪಸ್ಥಿತರಿದ್ದು ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಆದೇಶವನ್ನು 9ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದರು, ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕರವರು ಉಪಸ್ಥಿತರಿದ್ದರು,*

*ನೌಕರರ ಗೋಷ್ಠಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡ ನೌಕರ ಸಂಘದ ರಾಜ್ಯದ್ಯಕ್ಷರಾದ ಸನ್ಮಾನ್ಯ ಶ್ರೀ ಜಗದೀಶ್ವರ ಮೂರ್ತಿರವರು ಅಧ್ಯಕ್ಷತೆ ವಹಿಸಿದ್ದರು, ಸನ್ಮಾನ್ಯ ಶ್ರೀ ರಾಜಶೇಖರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಸಿಟಿ ರವಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಕಾರ್ಯಕ್ರಮದಲ್ಲಿ ನೌಕರ ಸಂಘದ ಪದಾಧಿಕಾರಿಗಳು ನೌಕರರು ಉಪಸ್ಥಿತರಿದ್ದರು*

*ವೈದ್ಯರ ಗೋಷ್ಠಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಶಾಸಕರಾದ ಸನ್ಮಾನ್ಯ ಶ್ರೀ ಡಾ. ಎನ್ ಟಿ ಶ್ರೀನಿವಾಸ್ ರವರು ಉದ್ಘಾಟಿಸಿದರು. ಶ್ರೀಮತಿ ಡಾಕ್ಟರ್ ಶೋಭಾ ಎಚ್‌ಪಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶಿವಮೊಗ್ಗ ಸಂಸದರಾದ ಸನ್ಮಾನ್ಯ ಶ್ರೀ ಬಿವೈ ರಾಘವೇಂದ್ರ ಅವರು ಮಾತನಾಡಿ ಮೀಸಲಾತಿ 9ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂಬ ಭರವಸೆ ನೀಡಿದರು, ಸನ್ಮಾನ್ಯ ಶ್ರೀ ಸುರೇಶ್ ಕನಕಣ್ಣನವರ್, ಸನ್ಮಾನ್ಯ ಶ್ರೀ ಡಾ. ಶ್ರೀಧರ್ ಪ್ರಸಾದ್, ಸನ್ಮಾನ್ಯ ಶ್ರೀ ಡಾ. ಸುನಿಲ್ ಕುಮಾರ್, ಸನ್ಮಾನ್ಯ ಶ್ರೀ ಡಾ. ಲಕ್ಷ್ಮಯ್ಯ, ರವರು ಸೇರಿದಂತೆ ಖ್ಯಾತ ವೈದ್ಯಾಧಿಕಾರಿಗಳು ವೈದ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.*

*ಕಾನೂನು ಗೋಷ್ಠಿ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎನ್ ಎಸ್ ಪಾಟೀಲ್ ರವರು ಅಧ್ಯಕ್ಷತೆ ವಹಿಸಿದ್ದರು, ಹೈಕೋರ್ಟ್ ವಕೀಲರಾದ ಸನ್ಮಾನ್ಯ ಶ್ರೀ ಸಣ್ಣ ನಾಯಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಹೈಕೋರ್ಟ್ ಹೆಚ್ಚುವರಿ ಅಡ್ವಕೇಟ್ ಜನರಲ್ ಸನ್ಮಾನ್ಯ ಶ್ರೀ ಎನ್ ವೈ ವಿಜಯ್ ಕುಮಾರ್ ರವರು, ಸಾಮರಸ್ಯ ವೇದಿಕೆ ಸನ್ಮಾನ್ಯ ಶ್ರೀ ವಾದಿರಾಜ ರವರು ಉಪನ್ಯಾಸ ನೀಡಿದರು, ಅ.ಕ.ವಾ.ನಾ. ಮಹಾಸಭಾ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ ಟಿ ಚಂದ್ರಶೇಖರಪ್ಪ, ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಾರೆಪ್ಪ ನಾಯಕ ವಿಷಯ ಮಂಡನೆ ಮಾಡಿದರು, ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸೇರಿದಂತೆ ವಕೀಲರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು*

*ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸಮುದಾಯದ ಗಣ್ಯಮಾನ್ಯರು ಉಪಸ್ಥಿತರಿದ್ದರು*

*ರಾತ್ರಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಾಸನ ಜಿಲ್ಲಾ ಕಲಾತಂಡವರಿಂದ ಸಂಪೂರ್ಣ ರಾಮಾಯಣ ನಾಟಕ ನೆರವೇರಿತು*

*ಎರಡನೇ ದಿನ*

*ಪೂಜ್ಯಶ್ರೀಗಳು ಹಾಗೂ ಸಮುದಾಯದವರಿಂದ ಶ್ರೀಮಠದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮದಿಂದ ಪ್ರಾರಂಭವಾಯಿತು.*

*ಮಹರ್ಷಿ ವಾಲ್ಮೀಕಿ ರಥೋತ್ಸವಕ್ಕೆ ಚಾಲನೆ*

*ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮೀಜಿಯವರ ಅಮೃತ ಹಸ್ತ ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಜಲ್ಲಿ ವೆಂಕಟೇಶ್ ಮತ್ತು ಕುಟುಂಬದವರಿಂದ ಹೆಲಿಕ್ಯಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚನೆ ಸೇವೆ ಸಲ್ಲಿಸಿದರು*

*ಧರ್ಮಸಭೆ*
*ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮೀಜಿಗಳವರು, ಹರಿಹರ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಜಿಗಳವರು, ನಂದಿಗುಡಿ ವೃಷಭಪುರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ಪೂಜ್ಯ ಶ್ರೀ ವರದಾನೇಶ್ವರ ಸ್ವಾಮಿಜಿಗಳವರು, ಶಿಡ್ಲಕೋಣ ವಾಲ್ಮೀಕಿ ಆಶ್ರಮದ ಪೂಜ್ಯ ಶ್ರೀ ಸಂಜಯಕುಮಾರ ಸ್ವಾಮೀಜಿರವರು ಹರಿಹರ ಪುಣ್ಯಕೋಟಿ ಮಠದ ಪೂಜ್ಯಶ್ರೀ ಬಾಲ ಯೋಗಿ ಜಗದೀಶ್ವರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಿತು*

*ಜನಜಾಗೃತಿ ಜಾತ್ರಾ ಮಹೋತ್ಸವ*

*ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಸಮಸ್ತ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಆದೇಶ ಜಾರಿ ಮಾಡುವಂತೆ 9ನೇ ಪರಿಚ್ಛೇದ ಸೇರಿಸುವಂತೆ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಭರವಸೆ ನೀಡಿದರು, ಬಂಡೊಳ್ಳಿಯ ಶ್ರೀಮಠದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದಿಂದ ಐದು ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸೇರಿದಂತೆ ಸಮುದಾಯಕ್ಕೆ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ ಶೀಘ್ರವೇ ಇತ್ಯರ್ಥ ಪಡಿಸುವ ಭರವಸೆ ನೀಡಿದರು*

*ವಾಲ್ಮೀಕಿ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಮದಕರಿ ನಾಯಕ ಪ್ರಶಸ್ತಿ ಪ್ರಧಾನ*
*ಶ್ರೀಮಠದಿಂದ ಕೊಡ ಮಾಡಲ್ಪಡುವ ಪ್ರತಿಷ್ಠಿತ ವಾಲ್ಮೀಕಿ ರತ್ನ ಪ್ರಶಸ್ತಿಯನ್ನು ವಿಶ್ರಾಂತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಎನ್ ವೈ ಹನುಮಂತಪ್ಪ ರವರಿಗೆ ಹಾಗೂ ಮದಕರಿ ನಾಯಕ ಪ್ರಶಸ್ತಿಯನ್ನು ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳಾದ,ಹಾಗೂ ಐಪಿಎಸ್ ಅಧಿಕಾರಿಗಳಾದ ಸನ್ಮಾನ್ಯ ಶ್ರೀ ರವಿ ಡಿ ಚನ್ನಣ್ಣನವರ್ ಅವರಿಗೆ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರಧಾನ ಮಾಡಿದರು*

*ವಾಲ್ಮೀಕಿ ವಿಜಯ ಸ್ಮರಣ ಸಂಪುಟ 8ರ ಬಿಡುಗಡೆ*
*ಸಂಪಾದನಾ ಸಮಿತಿ ಅಧ್ಯಕ್ಷರಾದ ಕುವೆಂಪು ವಿಶ್ವವಿದ್ಯಾನಿಲಯದ ಸನ್ಮಾನ್ಯ ಶ್ರೀ ಪ್ರೊII ಜಿ ಪ್ರಶಾಂತ್ ನಾಯಕ್ ರವರು ಹಾಗೂ ಸಂಪಾದನಾ ಮಂಡಳಿಯ ಸದಸ್ಯರು ಹೊರತಂದಿರುವ ವಾಲ್ಮೀಕಿ ವಿಜಯ ಸ್ಮರಣ ಸಂಪುಟ 8 ನ್ನು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು*

*ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ಸಿ ಮಹದೇವಪ್ಪ ರವರು, ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರು ವಿಧಾನಸಭಾ ಉಪ ಸಭಾಪತಿಗಳಾದ ಸನ್ಮಾನ್ಯ ಶ್ರೀ ರುದ್ರಪ್ಪ ಲಮಾಣಿ ರವರು, ವಿಧಾನಸಭಾ ವಿರೋಧ ಪಕ್ಷದ ಉಪನಾಯಕರಾದ ಸನ್ಮಾನ್ಯ ಶ್ರೀ ಅರವಿಂದ್ ಬೆಲ್ಲದ್ ರವರು, ಸಂಸದರಾದ ಸನ್ಮಾನ್ಯ ಶ್ರೀ ಜಿ ಕುಮಾರ್ ನಾಯಕ ರವರು, ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿರಾ ಶಾಸಕರಾದ ಸನ್ಮಾನ್ಯ ಶ್ರೀ ಟಿಬಿ ಜಯಚಂದ್ರ ಅವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಂಪಿ ರೇಣುಕಾಚಾರ್ಯರವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಶಿವನಗೌಡ ನಾಯಕ ಅವರು, ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು, ಸನ್ಮಾನ್ಯ ಶ್ರೀ ರಘುಮೂರ್ತಿ ರವರು, ಸನ್ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯರವರು, ಸುರಪುರ ಶಾಸಕರಾದ ಸನ್ಮಾನ್ಯ ಶ್ರೀ ರಾಜ ವೇಣುಗೋಪಾಲ ನಾಯಕ ರವರು, ಹೊನ್ನಾಳಿ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಜಿ ಶಾಂತನಗೌಡರವರು, ಮಾಜಿ ಸಂಸ್ಥರಾದ ಸನ್ಮಾನ್ಯ ಶ್ರೀ ಪ್ರತಾಪ್ ಸಿಂಹ ರವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ವಿ ರಾಮಚಂದ್ರಪ್ಪ ರವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ರವರು, ಬಿಜೆಪಿ ಎಸ್ ಟಿ ಮೋರ್ಚ ರಾಜ್ಯಾಧ್ಯಕ್ಷರಾದ ಶ್ರೀ ಬಂಗಾರು ಹನುಮಂತು, ಕಾಂಗ್ರೆಸ್ ಎಸ್ ಟಿ ಸೆಲ್ ರಾಜ್ಯಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಸೇರಿದಂತೆ ವಿವಿಧ ರಾಜ್ಯದ ಮುಖಂಡರುಗಳು, ಅನೇಕ ಹಾಲಿ ಮತ್ತು ಮಾಜಿ ಶಾಸಕರುಗಳು, ನಿಗಮ ಮಂಡಳಿ ಅಧ್ಯಕ್ಷರುಗಳು, ಶ್ರೀಮಠದ ಧರ್ಮದರ್ಶಿಗಳು ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರುಗಳು ತಾಲೂಕು ಶ್ರೀಮಠದ ಪ್ರತಿನಿಧಿಗಳು, ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೇರಿದಂತೆ ವಿದ್ಯಾರ್ಥಿನಿಯರು ಸಮಾಜದ ಬಂಧುಗಳು ಮುಖಂಡರು ಯುವಕರು ಉಪಸ್ಥಿತರಿದ್ದರು*

*ಜಾತ್ರಾ ಮಹೋತ್ಸವ ಯಶಸ್ವಿಗೆ ಕಾರಣರಾದ ಸಮಸ್ತ ಬಂಧುಗಳಿಗೆ ತುಂಬು ಹೃದಯದ ಅಭಿನಂದನೆಗಳು*

Address

Harihar
577601

Website

Alerts

Be the first to know and let us send you an email when VALMIKI NAYAKA COMMUNITY posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to VALMIKI NAYAKA COMMUNITY:

Share