25/02/2018
"ಪ್ರಜ್ಞಾವಂತ ಗೋಕಾಕ್ ಮತದಾರರೇ"
ಪ್ರೀಯ ಮಿತ್ರರೇ ನಮಸ್ಕಾರ, ಮತ್ತೊಮ್ಮೆ ಅವಕಾಶ ನಮ್ಮ ಮನೆ ಬಾಗಿಲ ಬಳಿಯಲ್ಲಿ ಬಂದು ನಿಂತಿದೆ. ಇನ್ನೊಂದು ಬಾರಿ ನಾವು ಇತಿಹಾಸದ ಹೊಸ್ತಿಲಲ್ಲಿ ನಿಂತಿದ್ದೆವೆ. ನಾವು ಎಲ್ಲಿಗೆ ಹೊಗಬೇಕೆಂಬುದರ ಬಗ್ಗೆ ಯೋಚಿಸಬೇಕಾಗಿದೆ.
ನಮ್ಮ ತಾಲೂಕಿನಲ್ಲೇಕೆ ಬ್ರಷ್ಟಾಚಾರವಿದೆ?, ನಾವೇಕೆ ಗುಲಾಮಗಿರಿಯಲ್ಲಿ ಸಿಲುಕಿದ್ದೆವೇ?, ನಿರುದ್ಯೋಗ, ಬಡತನ, ರೋಗರುಜಿನ ಹಾಗೂ ನಿರಕ್ಷರತೆ ಈ ತಾಲೂಕಿನ ಜನರನ್ನು ಕಿತ್ತು ತಿನ್ನುತ್ತವೆ. ನಮ್ಮ ತಾಲೂಕು ಆಂತರಿಕ ಸಂಕಟಗಳಿಂದ ನರುಳುತ್ತಿದೆ. ಈಗಿನ ಶಾಸಕರ ಆಡಳಿತ ಪೂರ್ಣಪ್ರಮಾಣದ ಭ್ರಷ್ಟಾಚಾರದಲ್ಲಿ ಮುಳುಗಿದೆ. 20 ವರ್ಷದ ಕತೆ ಭ್ರಷ್ಟಾಚಾರ, ಗೋಲಮಾಲ್ ಹಾಗೂ ಕರ್ಮಕಾಂಡ ಕತೆಗಳೇ. ಇಂತಹ ಆಡಳಿತವನ್ನು ಬೇರುಸಹಿತ ಕಿತ್ತೊಗಿಯುವ ಸುವರ್ಣ ಅವಕಾಶ ಇಂದು ತಮ್ಮ ಬಾಗಿಲಿಗೆ ಬಂದಿದೆ. ವರ್ತಮಾನದ ಸಂಗತಿಗಳಿಗೆ ಉತ್ತರ ಕಂಡುಕೊಳ್ಳಲು ನಮ್ಮೊಂದಿಗೆ ಕೈ ಜೋಡಿಸಿ, ಇದು ಈ ಸಂದರ್ಭದ ಕರೆ. ಗೋಕಾಕವು ಪರಿವರ್ತನೆಗಾಗಿ ಕಾದು ಕುಳಿತಿದೆ. ಹಿಂದೂ ಮಹಾಸಾಗರದಲ್ಲಿ ಎದ್ದ ಅಲೆಯನ್ನು ಹಿಮಾಲಯದ ತನಕ ಕೊಂಡೊಯ್ಯಬೇಕಿದೆ. ವಿಧಾನ ಸಭೆಯಲ್ಲಿ ಬಹುಮತ ಪಡೆದು ರಾಜ್ಯದ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕಿದೆ.
" ಈ ಮಹಾನ್ ಕಾರ್ಯದಲ್ಲಿ ಕೈ ಜೋಡಿಸಲು ಭಾರತೀಯ ಜನತಾ ಪಕ್ಷಕ್ಕೆ ನಿಮ್ಮ ನಿರ್ಣಾಯಕ ಮತವನ್ನು ಮೀಸಲಿಡಿ"
ಚುನಾವಣೆಯ ಮಹಾಪರ್ವ ಆಗಮಿಸಿದೆ, ಲೋಕತಂತ್ರದ ಈ ಮಹಾಪರ್ವದಲ್ಲಿ ವೋಟಿನ ಅಸ್ತ್ರದಿಂದ ಮಾತ್ರ ಶತ್ರುವನ್ನು ಸೋಲಿಸಬಹುದು. ಮತದಾನ ಮಾತ್ರ ಶಾಂತಿಪೂರ್ಣವಾಗಿ ನಡೆಯಬೇಕು. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ -ಅವಶ್ಯವಾಗಿ ಬರುತ್ತದೆ -ಇಷ್ಟು ದಿನ ನಡೆದ ಗೋಕಾಕದ ಭ್ರಷ್ಟಾಚಾರವನ್ನು ಬೇರು ಸಮೇತ ಹೊರ ತಗೆಯುತ್ತೆವೆ.
ಇದು ಐತಿಹಾಸಿಕ ಚುನಾವಣೆ, ನಿರ್ಣಯವೂ ಐತಿಹಾಸಿಕವಾಗಿಯೇ ಇರುತ್ತದೆ. ಈ ನಿರ್ಣಯವನ್ನು ರಾಜ್ಯದ ಮತದಾರ ಕೊಡಬೇಕಾಗಾದೆ. ಈ ರಾಜ್ಯದ ಖಜಾನೆಯ ಬೀಗದ ಕೈಯನ್ನು ಯಾರ ಕೈಗೆ ಕೊಡಬೇಕೆಂಬುವದನ್ನು ನೀವೇ ನಿರ್ಧರಿಸಿಬೇಕಿದೆ. ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದವರು ಮತ್ತೆ ನಿಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಿದ್ದಾರೆ. ಇಂತಹವರಿಂದ ಎಚ್ಚರವಾಗಿರಿ.
ರಾಜ್ಯಕ್ಕೆ ಎಂಥಹ ಸರಕಾರದ ಅವಶ್ಯಕತೆಯಿದೆಯೆಂದರೇ ಪ್ರಭಾವಿ, ಪಾರದರ್ಶಕ, ಜನರ ದುಃಖವನ್ನೂ ದೂರು ಮಾಡುವ ಹಾಗೂ ರಾಜ್ಯದ ಹಿತವನ್ನು ಕಾಪಾಡುವ ಸರಕಾರದ ಅವಶ್ಯಕತೆ ಇದೆ. ಯಾವ ರಾಜ್ಯವೂ ನಮ್ಮನ್ನು ನಿಕ್ರಷ್ರಟವಾಗಿ ಕಾಣದಂತಹ ಶಕ್ತಿಶಾಲಿ ರಾಜ್ಯವನ್ನು ಪ್ರಸ್ತುತಪಡಿಸುವ ಆಡಳಿತದ ಸರಕಾರವನ್ನು ಕೊಡುತ್ತವೆ. ಕಳೆದು ಹೋದ ಗೌರವ ಮತ್ತು ಪ್ರತಿಷ್ಠೆಯನ್ನು ಮರಳಿ ಸ್ಥಾಪಿಸುತ್ತೆವೆ. ಆರ್ಥಿಕವಾಗಿ ರಾಜ್ಯವನ್ನು ಬಲಿಷ್ಠಗೊಳಿಸುವದು ಈ ಕ್ಷಣದ ಜರೂರತ್ತಾಗಿರುವದರಿಂದ ಆ ದಿಸೆಯಲ್ಲಿ ನಾವು ಶೀಘ್ರ ಕಾರ್ಯಪ್ರವೃತ್ತವಾಗುತ್ತೆವೆ.
ಇಂದು ಇಡೀ ದೇಶದ ಗಮನ ನಮ್ಮತ್ತ ನೆಟ್ಟಿದೆ. ನಮ್ಮ ಹೋರಾಟದ ಅಂತಿಮ ಗುರಿ ಅಧಿಕಾರ ಪಡೆಯುವುದೊಂದೆ ಅಲ್ಲ, ರಾಜ್ಯ ಆರ್ಥಿಕವಾಗಿ ಸಂಕಷ್ಟಮಯ ಸ್ಥಿತಿಯಲ್ಲಿದೆ. ಈ ಸ್ಥಿತಿಯಲ್ಲಿ ರಾಜ್ಯದ ಜನತೆಗೆ ನಂಬಿಕೆ ಬರುವದೆಂದರೇ ಅದು ಬಿಜೆಪಿಯ ಮೇಲೆ ಮಾತ್ರ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸ್ವಚ್ಛ, ಪ್ರಾಮಾಣಿಕ, ಸಂವೇದನಾ ಶೀಲ ಹಾಗೂ ಪಾರದರ್ಶಕ ಸರಕಾರ ನೀಡಲು ಬದ್ದರಾಗಿದ್ದೆವೆ. ಇದರಲ್ಲಿ ಸಂದೇಹವೇ ಬೇಡ.
ಈಗ ಹೊಸ್ತಿಲಲ್ಲಿರುವ ಚುನಾವಣೆ ಪಕ್ಷ -ಪಕ್ಷಗಳ ನಡುವಿನ. ವ್ಯಕ್ತಿ -ಪಕ್ಷಗಳ ನಡುವಿನ ಚುನಾವಣೆಯಲ್ಲ, ಬದಲಿಗೆ ಅದು ಕೋಟ್ಯಾಂತರ ಕರ್ನಾಟಕದ ಜನತೆಯ ಕನಸಿನ ಚುನಾವಣೆ. ರಾಜ್ಯದ ಆರು ಕೋಟಿ ಜನತೆ ಏನು ಕನಸಿಟ್ಟುಕೊಂಡಿರುವವರೋ ಅವರ ಕನಸು ನನಸಾಗುವ ಚುನಾವಣೆ. ಆದ್ದರಿಂದ ಬಂಧುಗಳೇ ಕಪಟ ವಿರೋಧಿಗಳ ಮಾತಿಗೆ ಮರುಳಾಗಬೇಡಿ, ಕರ್ನಾಟಕದ ಸಂಸ್ಕೃತಿ, ಆಚಾರ, ಧರ್ಮ, ಆಧ್ಯಾತ್ಮ, ವಿಶೇಷತೆ, ಭೌಧ್ದಿಕ ಸಂಪತ್ತು ಬದುಕುಳಿಯಬೇಕಾದರೆ ನಿಮ್ಮದೊಂದು ಮತ ಬಿಜೆಪಿಗೆ ಮೀಸಲಿರಲಿ.
"ನಮ್ಮ ಕಣ್ಣಲ್ಲಿ ಒಂದು ಮಹಾನ್ ಕರ್ನಾಟಕದ ಕನಸಿದೆ, ಭಯಮುಕ್ತ ಹಾಗೂ ಬಡತನ ಮುಕ್ತ ಸಮಾಜ ನಿರ್ಮಿಸುವ ಹಂಬಲವಿದೆ"
ನೀವು ನೀಡುವ ಒಂದು ಮತ ರಾಜ್ಯದ ದಿಕ್ಕನ್ನೇ ಬದಲಾಯಿಸಬಹುದು ಎಚ್ಚರ ಏನಂತೀರಿ..........!