Sri Jatangi Rameshwara Betta

Sri Jatangi Rameshwara Betta ಶ್ರೀ ಕ್ಷೇತ್ರ ಶ್ರೀ ಜಟ್ಟಂಗಿ ರಾಮೇಶ್ವರ ಬೆಟ್ಟ, ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲ್ಲೂಕು,ದೇವಸಮುದ್ರ ಹೋಬಳಿ ರಾಮಸಾಗರ ಗ್ರಾಮ 577540

ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ 20.03.2026 ರಂದು ಜರಗಿತು. 22.03.2026 ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ...
22/03/2026

ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ 20.03.2026 ರಂದು ಜರಗಿತು. 22.03.2026 ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ಶ್ರೀ ಕ್ಷೇತ್ರ ಶ್ರೀ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನ, ಇಂದು ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ರುದ್ರಾಭಿಷೇಕ, ಪೂ...
20/03/2026

ಶ್ರೀ ಕ್ಷೇತ್ರ ಶ್ರೀ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನ, ಇಂದು ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ರುದ್ರಾಭಿಷೇಕ, ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು ದೇವಸ್ಥಾನದ ಆವರಣದಲ್ಲಿ ಜಟಂಗಿ ರಾಮೇಶ್ವರ ಸ್ವಾಮಿಯ ಬೆಟ್ಟಕ್ಕೆ ಆಗಮಿಸಿರುವ ಭಕ್ತಾದಿಗಳಿಗೆ ಅನ್ನ ದಾಸೋಹ ಸೇವೆ ಕಾರ್ಯಕ್ರಮ ಭಕ್ತಾದಿಗಳಿಂದ ನೆರವೇರಿಸಲಾಯಿತು,ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು, ಎಲ್ಲಾ ಸದ್ಭಕ್ತಾದಿಗಳಿಗೂ ಸ್ವಾಮಿಯ ಕೃಪೆ ಇರಲಿ.

|| ಓಂ ನಮಃ ಶಿವಾಯ ||

19/03/2026

ಶ್ರೀ ಕ್ಷೇತ್ರ ಶ್ರೀ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನದ ಸಮಸ್ತ ಭಕ್ತ ಕುಲಕೋಟಿಗೆ ಯುಗಾದಿ ಹಬ್ಬದ ಶುಭಾಶೀರ್ವಾದಗಳು.
ಯುಗಾದಿ ಹಬ್ಬದ ವಿಶೇಷ ಪೂಜೆ ಮತ್ತು ಅಲಂಕಾರ.

ಇದು ನಮ್ಮ ಸನಾತನ ಸಂಸ್ಕೃತಿಯ ಪ್ರಕೃತಿಯ ಹೊಸ ಆರಂಭದ ಸಂಕೇತ, ಹೊಸ ನಿರೀಕ್ಷೆಗಳ ಹೊಸ್ತಿಲು. ಹಳೆಯ ನೋವುಗಳನ್ನು ಮರೆತು, ಹೊಸ ಭರವಸೆಗಳೊಂದಿಗೆ ಪ್ರಗತಿಯ ಪಥದಲ್ಲಿ ಸಾಗುವ ಶುಭದಿನ.

15/03/2026

ಸದ್ದಕ್ತಾದಿಗಳಲ್ಲಿ ಮನವಿ....

ನೂತನ ವರ್ಷ ಶುಭಾಶಯಗಳೊಂದಿಗೆ ದಿನಾಂಕ 20.03.2026 ರಂದು ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಐತಿಹಾಸಿಕ ಇತಿಹಾಸವುಳ್ಳ ಯುಗಾದಿ ಹಬ್ಬದ ಜಾತ್ರೆ ವಿಶೇಷ ಪೂಜೆ,ಅಭಿಷೇಕ ಅನ್ನ ಸಂತರ್ಪಣ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು ಸದ್ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ...

"ವಿಶೇಷ ಸೂಚನೆ"
ಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ತಂಗುದಾಣದ ಹತ್ತಿರ ಮಜ್ಜಿಗೆ ವಿತರಣೆ ಹಾಗೂ ಮೊಸರನ್ನ ಸೇವೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ....

ಮೊಳಕಾಲ್ಮೂರು ತಾಲೂಕು ದೇವಸಮುದ್ರ ಹೋಬಳಿ ರಾಮಸಾಗರ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬರುವ ಹಾಗೂ ತಹಶೀಲ್ದಾರ್...
13/03/2026

ಮೊಳಕಾಲ್ಮೂರು ತಾಲೂಕು ದೇವಸಮುದ್ರ ಹೋಬಳಿ ರಾಮಸಾಗರ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬರುವ ಹಾಗೂ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಹಾಗೂ ದೈವಸ್ಥರ ಸಮ್ಮುಖದಲ್ಲಿ ದೇವಸ್ಥಾನದ ಆವರಣದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ವಿಡಿಯೋ ಚಿತ್ರೀಕರಣ ಜೊತೆ ಜರುಗಿತು.

ಎಣಿಕೆಯ ಮೊತ್ತ "96301" ರೂ ಭಕ್ತಾದಿಗಳಿಂದ ಸಂಗ್ರಹವಾದ ಮೊತ್ತ ಇದಾಗಿತ್ತು

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರಾಮಸಾಗರ,ದೇವಸಮುದ್ರ,ಗ್ರಾಮಸ್ಥರು,ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ಜಟಂಗಿ ರಾಮೇಶ್ವರ ಸ್ವಾಮಿಯ ಕಡೆ ಸೋಮವಾರ ಕಾರ್ತಿಕೋತ್ಸವ ದಿನದಂದು ವಿಶೇಷವಾಗಿ ರುದ್ರಾಭಿಷೇಕ ಮತ್ತು ಹೂವಿನ ಅಲಂಕಾರ. 🙏ಓಂ ನಮಃ ಶಿವಾಯ 🙏
29/11/2021

ಶ್ರೀ ಜಟಂಗಿ ರಾಮೇಶ್ವರ ಸ್ವಾಮಿಯ ಕಡೆ ಸೋಮವಾರ ಕಾರ್ತಿಕೋತ್ಸವ ದಿನದಂದು ವಿಶೇಷವಾಗಿ ರುದ್ರಾಭಿಷೇಕ ಮತ್ತು ಹೂವಿನ ಅಲಂಕಾರ.
🙏ಓಂ ನಮಃ ಶಿವಾಯ 🙏

ಮಾನ್ಯ ವಿಧಾನ ಸಭಾ ಸಚಿವರಾದ ಬಿ.ಶ್ರೀರಾಮುಲು ರವರೆಗೆ ಅಭಿನಂದಿಸುತ್ತಾ, ಶ್ರೀ ಜಟಂಗಿರಾಮೇಶ್ವರ ಬೆಟ್ಟ,ದೇವಸಮುದ್ರ ಇಲ್ಲಿನ ಐತಿಹಾಸಿಕ ವೀಕ್ಷಣೆಗೆ...
17/02/2021

ಮಾನ್ಯ ವಿಧಾನ ಸಭಾ ಸಚಿವರಾದ ಬಿ.ಶ್ರೀರಾಮುಲು ರವರೆಗೆ ಅಭಿನಂದಿಸುತ್ತಾ, ಶ್ರೀ ಜಟಂಗಿರಾಮೇಶ್ವರ ಬೆಟ್ಟ,ದೇವಸಮುದ್ರ ಇಲ್ಲಿನ ಐತಿಹಾಸಿಕ ವೀಕ್ಷಣೆಗೆ ಎಲ್ಲಾ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸುಮಾರು 3 ಕೋಟಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆ ಮಾಡುವಂತೆ ಕೋರಿ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಿರುವುದು ಸಂತಸದ ವಿಷಯವಾಗಿರುತ್ತದೆ. ಇದಕ್ಕಾಗಿ ದೇವಸಮುದ್ರ ಸುತ್ತಾಮುತ್ತಲ ಹತ್ತಾರು ಹಳ್ಳಿಗಳ ಜನರು ಒಟ್ಟಾರೆ ಚಿತ್ರದುರ್ಗ ಜಿಲ್ಲೆಯ ಜನರೆಲ್ಲಾ ಮಾನ್ಯ ಶ್ರೀರಾಮುಲು,ಸಚಿವರು ಇವರಿಗೆ ಮನಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ.

ಇಂದಿನಿಂದ ಪವಿತ್ರ ಶ್ರಾವಣ ಮಾಸ ಆರಂಭ.. ಸಾಲು, ಸಾಲು ಹಬ್ಬಳಗಳನ್ನು ಹೊತ್ತು ತರುವ ಶ್ರಾವಣ ಮಾಸ ಇಂದಿನಿಂದ ಆರಂಭ. ಈ ಮಾಸವು ಹಿಂದು ಧರ್ಮದ ಪವಿತ್...
21/07/2020

ಇಂದಿನಿಂದ ಪವಿತ್ರ ಶ್ರಾವಣ ಮಾಸ ಆರಂಭ..

ಸಾಲು, ಸಾಲು ಹಬ್ಬಳಗಳನ್ನು ಹೊತ್ತು ತರುವ ಶ್ರಾವಣ ಮಾಸ ಇಂದಿನಿಂದ ಆರಂಭ. ಈ ಮಾಸವು ಹಿಂದು ಧರ್ಮದ ಪವಿತ್ರ ಮಾಸವಾಗಿದ್ದು, ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ಮಹಿಳೆಯರು ಮನೆಯಲ್ಲಿ 16 ಸೋಮವಾರ ಉಪವಾಸ ವ್ರತ ಮಾಡುವ ಮೂಲಕ ಶಿವನ ಆರಾಧನೆಯಲ್ಲಿ ತೊಡಗುತ್ತಾರೆ. ಈ ಮಾಸವು ಪರಮಾತ್ಮ ಶಿವ ಶಂಕರನಿಗೆ ಪ್ರೀತಿದಾಯಕವಾಗಿದೆ. ಎಲ್ಲರಿಗೂ ಪವಿತ್ರ ಶ್ರಾವಣ ಮಾಸದ ಶುಭಾಶಯಗಳು..

ಉತ್ತರ ಕರ್ನಾಟಕದಲ್ಲಿ ಈ ಮಾಸವನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಮಠ ಮಂದಿರಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳಕಾಲ ಪುರಾಣ, ಪ್ರವಚನ, ಕೀರ್ತನೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಈ ಮಾಸದಲ್ಲಿ ಪವಿತ್ರ ಹಬ್ಬಗಳಾದ ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ, ಗೋಕುಲಾಷ್ಟಮಿ, ಮಂಗಳಗೌರಿ, ಸಂಪತ್ ಶುಕ್ರವಾರದ ಲಕ್ಷ್ಮೀಪೂಜೆ ಸೇರಿದಂತೆ ಹಲವಾರು ಪೂಜೆ, ವ್ರತಗಳನ್ನು ಮಾಡುತ್ತಾರೆ. ಅಲ್ಲದೆ ಭಕ್ತರು ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳುತ್ತಾರೆ. ಶ್ರಾವಣ ಮಾಸವು ನಮ್ಮ ಹಿಂದು ಧರ್ಮೀಯರಿಗೆ ಪವಿತ್ರವಾದ ಮಾಸವಾಗಿದೆ. ಹಿಂದು ಧರ್ಮದಲ್ಲಿ "ಶ್ರಾವಣ" ಎಂದರೆ ಆಲಿಸು ಎಂದಾಗಿದೆ. ಈ ಮಾಸದಲ್ಲಿ ಭಕ್ತರು ಆಧ್ಯಾತ್ಮಿಕ ಅಂಶಗಳು ಹಾಗೂ ಪ್ರವಚನಗಳು, ಧರ್ಮೋಪದೇಶಗಳನ್ನು ಆಲಿಸುತ್ತಾರೆ.

ಇಂತಹ ಪವಿತ್ರ ಶ್ರಾವಣ ಮಾಸದ ಮೇಲೆ ಈ ಬಾರಿ ಕೊರೋನಾ ರೋಗದ ಕರಿನೆರಳಿದೆ, ಆದ್ದರಿಂದ ಸಮಸ್ತ ನಾಡಿನ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸುತ್ತಾ, ಎಲ್ಲರಿಗೂ ಪವಿತ್ರ ಶ್ರಾವಣ ಮಾಸದ ತುಂಬು ಹೃದಯದ ಶುಭಾಶಯಗಳನ್ನು ಕೋರುತ್ತೇನೆ..

The holy month of Shravana begins…

The month of Shravana is a treasure trove of many festivals. Lord Shiva is specially worshipped in this month. Women worship lord Shiva by fasting for 16 Mondays.

I convey my wishes at the beginning of the sacred month of Shravana.

The month is celebrated with great fervor in the northern part of Karnataka. In mutts and temples of villages and towns, programs like Purana Pravachane, Keertane, and bhajans are held continuously.

The sacred festivals of this month are Nagara Panchami, Mahalakshmi Puja, Gokulashtami, Mangalagouri, and Sampath Shukravara Lakshmi Pooja and Vrata. Apart from this, people visit holy places and receive the divine blessings of God. Shravana Maasa is considered to be the purest and most important month in Hinduism. The word “Shravana” means “to listen.” In this month, people listen to Dhramopadeshas and Pravachanas.

The month of Shravana comes with coronavirus this year. Hence, I hope people ensure social distancing, wear masks, and then participate in religious events. Once again, I convey my best wishes to all on the beginning of Shravana Masa.

21/03/2020

In the backdrop of the COVID-19(CORONA) disease and following footsteps by chitradurga administration has taken decisions.
Instructions release here on 18/03/2020, said that there was possibility of spreading COVID-19 due to temple fairs, public functions and other programs which attracted large number of people. Hence the interest of public health and guidance by district administration we advise you to not attend the festival of Sri Jatangi Rameshwara which will held on Thursday 26/03/2020.
Please be safe at home and avoid spreading of COVID-19(CORONA virus).
Thank You.

Address

DEVASAMUDRA
Chitradurg
577540

Telephone

+91 96636 35556

Website

Alerts

Be the first to know and let us send you an email when Sri Jatangi Rameshwara Betta posts news and promotions. Your email address will not be used for any other purpose, and you can unsubscribe at any time.

Share