22/03/2021
ಆತ್ಮಿಯರೇ, ನೆನ್ನೆ ಬೆಂಗಳೂರಿನ ಕೆ ಎ ಎಸ್ ಅಧಿಕಾರಿಗಳ ಭವನದಲ್ಲಿ ನಡೆದ AIBSS ರಾಜ್ಯ ಕಾರ್ಯಕಾರಣಿಯಲ್ಲಿ ಕುಮಾರ್ ನಾಯ್ಕ್ ಬಿ ಎಸ್ ಆದ ನನಗೆ ರಾಷ್ಟ್ರೀಯ ಅಧ್ಯಕ್ಷರಾದ ಅಮರ್ ಸಿಂಗ ತಿಲಾವತ್ ಮತ್ತು ಕಾರ್ಯಾಧ್ಯಕ್ಷರಾದ ಡಿ ರಾಮನಾಯ್ಕ್ ಹಾಗೂ ರಾಜ್ಯಾಧ್ಯಕ್ಷರಾದ ಪಾಂಡು ರಂಗ ಪಮ್ಮಾರ್ ಮತ್ತು ಮಹಾ ಪ್ರಧಾನ ಕಾರ್ಯದರ್ಶಿಯವರಾದ ನಾಮದೇವ್ ರಾಥೋಡ್ ರವರ ಸಮ್ಮುಖದಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಅಧಿಕೃತ ಪತ್ರವನ್ನು ಪತ್ರವನ್ನು ಪ್ರಧಾನ ಮಾಡಲಾಯಿತು ಎಂಬುದನ್ನು ತಮಗೆಲ್ಲರಿಗೂ ತಿಳಿಸಲು ಹರ್ಷಿಸುತ್ತೇನೆ.
ಈ ಸಂಧರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಗೌರವಾಧ್ಯಕ್ಷರಾದ ಹಾಲಾ ನಾಯ್ಕ್ ರವರು ಹಾಗೂ ಕಡೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರಿನಿವಾಸ್ ನಾಯ್ಕ್ ಟಿ ಎಸ್, ಪ್ರಧಾನ ಕಾರ್ಯದರ್ಶಿಯಾದ ಕೋಡಿಹಳ್ಳಿ ಶ್ರಿನಿವಾಸ್, ಕಡೂರು ನಗರ ಘಟಕದ ಅಧ್ಯಕ್ಷರಾದ ಸತೀಶ್ ಕುಮಾರ್ ಸಿ, ಟಿ, ಕಾನೂನು ಸಲಹೆಗಾರರಾದ ಅನೀಲ್ ಕುಮಾರ್ ಕೆ, ಹಾಗೂ ಯುವ ಘಟಕದ ಪದಾಧಿಕಾರಿಗಳಾದ ಕೋಡಿಹಳ್ಳಿ ಕಿರಣ್, ಆಲಗಟ್ಟ ಮಂಜು, ಮಾಡಾಳು ಜಯಂತ್ ಮತ್ತು ತಂಗಲಿ ನಾಗರಾಜ ನಾಯ್ಕ್ ರವರು ಹಾಗೂ ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಸುನೀಲ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು