15/06/2026
ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ, 2004ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ಬಸವರಾಜ ದೊಡ್ಡಮನಿ ಎಂಬ ರೈತನ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಇದಕ್ಕೆ ಪ್ರತಿಯಾಗಿ ದೊರಕಬೇಕಿದ್ದ ಪರಿಹಾರ ಮಾತ್ರ ಇದುವರೆಗೂ ಆ ರೈತನ ಕೈಸೇರಿಲ್ಲ. ಪರಿಹಾರಕ್ಕಾಗಿ ಆಗ್ರಹಿಸಿ ರೈತ ಬಸವರಾಜ ದೊಡ್ಡಮನಿ ವರ್ಷಗಳಿಂದ ಸರ್ಕಾರಿ ಕಚೇರಿಗೆ ಅಲೆಯುತ್ತಲೇ ಇದ್ದಾರೆ.
ಪರಿಹಾರಕ್ಕಾಗಿ ಪದೇ ಪದೇ ಮನವಿ ಮಾಡಿ ರೋಸಿಹೋದ ರೈತ ಬಸವರಾಜ ದೊಡ್ಡಮನಿ, ಬಿಟಿಡಿಎ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
#ರೈತ #ಸರ್ಕಾರ #ಭ್ರಷ್ಟಾಚಾರ #ಲಂಚ