15/09/2026
ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ಶ್ರಾವಣ ಮಹಾಮಂಗಲ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಹಾರಕೂಡ ಶ್ರೀಗಳ ಪಾವನ ಸಾನಿಧ್ಯದಲ್ಲಿ ಶ್ರೀ ಮಹದೇವಲಿಂಗ ದೇವಸ್ಥಾನದ 29ನೇ ವರ್ಷದ ಭಜನಾ ಮಹಾಮಂಗಲ ಕಾರ್ಯಕ್ರಮ ಜರಗಿತು.
ಬೀದರ ಸಂಸದ ಸನ್ಮಾನ್ಯ ಸಾಗರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಶ್ರೀ ಎಂ.ಜಿ. ಮೂಳೆ ಮುಂತಾದವರು ಉಪಸ್ಥಿತರಿದ್ದರು.