15/01/2026
ಭೋಗಿ ಹಬ್ಬ / ಸಂಕ್ರಾಂತಿ ಹಬ್ಬ
🙏 ಸಂಕ್ರಾಂತಿ ದಿನ ಸಂಜೆ ಮಕ್ಕಳನ್ನು ಕೂಡಿಸಿ ಆರತಿ ಮಾಡಿ ಬೋರೇ ಹಣ್ಣು (ಎಳಚಿ ಹಣ್ಣು), ಕಬ್ಬಿನ ಚೂರು, ನಾಣ್ಯಗಳನ್ನು ಹಾಕುತ್ತಾರೆ. ಏಕೆಂದರೆ –
🙏 ಮೊರದ ಬಾಗಿನದಲ್ಲಿ ಇಡತಕ್ಕಂತಹ ವಸ್ತುಗಳು
🙏 ಮರದ ಬಾಗಿನ ಕೊಡುವವರು ಹೇಳತಕ್ಕದ್ದು
🙏 ಮರದ ಬಾಗಿನ ಪಡೆಯುವವರು ಹೇಳತಕ್ಕದ್ದು
🙏 ಉತ್ತರಾಯಣ ಪುಣ್ಯಕಾಲ ತರ್ಪಣ ಸಂಕಲ್ಪ
🙏 ಸಂಕ್ರಾಂತಿ ಎಂದರೆ ಏನು ... ಮಾಹಿತಿ - 2
🙏 ಸಂಕ್ರಾಂತಿ ದಿನ ಸೂರ್ಯ ನಮಸ್ಕಾರ ಮಾಡಿ
🙏 ಧಾರ್ಮಿಕ ನಂಬಿಕೆ ಸೂರ್ಯ ನಮಸ್ಕಾರ
🙏 ಸಂಕ್ರಾಂತಿ ಹಬ್ಬದ ದಿನ ಪಾಠನೇ ಮಾಡಿ
🎙️ಸಂಕ್ರಾಂತಿ ಹಬ್ಬದ ವಿಶೇಷಗಳನ್ನು ಓದುಗರಿಗಾಗಿ ಸಂಗ್ರಹಿಸಿ ತಿಳಿಸಿದೇವೆ ... ವೇದಾಂತ ಜ್ಞಾನ ಯವರಿಂದ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏
🎙️ ಭೋಗಿ ಹಬ್ಬ –
ಭೋಗಿ ಹಬ್ಬವು ಸಂಕ್ರಾಂತಿ ಆಚರಣೆಯ ಮೊದಲ ಹಬ್ಬವಾಗಿದೆ. ಈದಿನ ದೇವೇಂದ್ರನನ್ನು ಪೂಜಿಸುವುದು ವಾಡಿಕೆ ಏಕೆಂದರೆ ದೇವೇಂದ್ರನು ಮಳೆಯ ದೇವತೆ. ಭೂಮಿಗೆ ಸುಭಿಕ್ಷ ಬರಲಿ ಎಂದು ಕೇಳುತ್ತಾ ಈ ಹಬ್ಬವನ್ನು ಆಚರಿಸುತ್ತಾರೆ. ಈದಿನ ನಮ್ಮ ಮನೆಯನ್ನು ಸ್ವಚ್ಛಗೊಳಿಸಿ, ತಳಿರುತೋರಣದಿಂದ ಅಲಂಕಾರ ಮಾಡುತ್ತಾರೆ. ಮನೆಯ ಮುಂದೆ ಸೆಗಣಿಯಿಂದ ಸಾರಿಸುತ್ತಾರೆ. ಈದಿನ ಸಿಹಿಗುಂಬಳ ಕಾಯಿಯ ಪಲ್ಯ, ರೊಟ್ಟಿ ಮಾಡುತ್ತಾರೆ.
🎙️ ಸಂಕ್ರಾಂತಿ ದಿನ ಸಂಜೆ ಮಕ್ಕಳನ್ನು ಕೂಡಿಸಿ ಆರತಿ ಮಾಡಿ ಬೋರೇ ಹಣ್ಣು (ಎಳಚಿ ಹಣ್ಣು), ಕಬ್ಬಿನ ಚೂರು, ನಾಣ್ಯಗಳನ್ನು ಹಾಕುತ್ತಾರೆ. ಏಕೆಂದರೆ –
ಮಕರ ಸಂಕ್ರಾಂತಿಯ ಸಂಜೆ ಐದು ವರ್ಷದ ಒಳಗಿನ ಮಕ್ಕಳನ್ನು ಕೂಡಿಸಿ, ಆರತಿ ಮಾಡಿ ಅವರಿಗೆ ಬೋರೇ ಹಣ್ಣು (ಎಲಚು ಹಣ್ಣು) ಕಬ್ಬಿನ ಜಲ್ಲೆಯ ಚೂರು ಮತ್ತು ನಾಣ್ಯಗಳನ್ನು ಕೂಡಿಸಿ ಅವರ ತಲೆಯ ಮೇಲೆ ಎರೆಯುವುದು ಮಾಡುತ್ತೇವೆ. ಏಕೆ ? ಇದಕ್ಕೂ ವೈಜ್ಞಾನಿಕ ಕಾರಣವಿದೆ. ಆಯುರ್ವೇದ ರೀತ್ಯ ನೆಗಡಿ, ಕೆಮ್ಮು, ಮೂಲವ್ಯಾಧಿ, ಸುಟ್ಟಗಾಯ, ಬೆವರುವುದು, ಬಿಕ್ಕಳಿಕೆ ಮೊದಲಾದ್ದಕ್ಕೆ ಎಲಚಿಹಣ್ಣಿ ನಿಂದ ಮಾಡಿದ ಔಷಧಿಗಳು ಬಹಳ ಪರಿಣಾಮಕಾರಿ. ಇಷ್ಟೇ ಅಲ್ಲ, ಅವು ಮಕ್ಕಳಲ್ಲಿನ ತುಂಟತನ, ಹಠಮಾರಿತನ ಹೋಗಲಾಡಿಸಲೂ ಸಹಕಾರಿ. ಎಲಹೆ ಹಣ್ಣಿನ ಕಷಾಯವನ್ನು ಇಂತಹ ಮಕ್ಕಳಿಗೆ ಕೊಡುವ ವಾಡಿಕೆ ಯಿದೆ. ಆದ್ದರಿಂದ ಅದರ ಸ್ಪರ್ಷದಿಂದ ಕೂಡ ಅದರ ಗುಣ ಬರುತ್ತದೆ.
ಸುಮ್ಮನೆ ತಲೆಯ ಮೇಲೆ ಈ ಹಣ್ಣು ಬಿದ್ದರೆ ತುಂಟತನ ಹೇಗೆ ಹೋಗುತ್ತೆ? ಮನುಷ್ಯನ ದೇಹವೂ ಕೂಡ ಒಂದು ವಿದ್ಯುತ್ ಕೇಂದ್ರ. ಸದಾ ವಿದ್ಯುತ್ಛಕ್ತಿ ಉತ್ಪಾದನೆ ಮತ್ತು ವಿಸರ್ಜನೆಯಾಗುತ್ತಿರುತ್ತದೆ. ಈ ಉತ್ಪಾನೆಯ ಮುಖ್ಯ ಕೇಂದ್ರ ಬ್ರಹ್ಮಾಂಡವೂ (ನೆತ್ತಿ) ಒಂದು. ಎಲಚಿ ಹಣ್ಣನ್ನು ತಲೆಯ ಮೇಲೆ ಹಾಕಿದಾಗ ಇದರ ಸ್ಪರ್ಶ ಮಾತ್ರದಿಂದ ದೇಹದಲ್ಲಿರುವ ವಿದ್ಯುತ್ ಈ ಗುಣವನ್ನು ಸ್ವಲ್ಪ ಆಕರ್ಷಿಸುತ್ತದೆ. ಇದಕ್ಕೆ ಎಲೆಕ್ಟ್ರೋ ಮಾಗ್ನೆಟಿಸಂ ಎನ್ನುತ್ತಾರೆ. ಹೀಗೆ ಆಕರ್ಷಿಸಲ್ಪಟ್ಟ ಎಲಚಿ ಹಣ್ಣಿನ ಗುಣವು ನೆತ್ತಿಯಲ್ಲಿರುವ ಸಂಬಂಧಿಸಿದ ನರಗಳ ಮೇಲೆ ಪ್ರಭಾವ ಬೀರಿ ಈ ಹಠಮಾರಿತನಕ್ಕೆ ಸಂಬಂಧಿಸಿದ ನರಗಳು ಸುಧಾರಿಸುತ್ತವೆ. ತುಂಟತನ ಕಡಿಮೆಯಾಗುತ್ತದೆ. ಎಳಚಿಹಣ್ಣಿನಲ್ಲಿ ಅನುದ್ವೇಗಪಡಿಸುವ ಗುಣ ಇದೆ ಎಂದಾಯಿತು. ಇದು ಮುಂಜಾಗರೂಕತೆ ದೃಷ್ಟಿಯಿಂದ ಹಿಂದಿನವರು ಮಾಡಿದ್ದು ನಮಗೆ ಸಂಪ್ರದಾಯವಾಗಿ ಕಂಡುಬಂದರೂ ವೈಜ್ಞಾನಿಕವೂ ಹೌದು.
ಬೋರೇ ಹಣ್ಣಿನ ಜೊತೆ ಕಬ್ಬಿನ ಚೂರು ಮತ್ತು ನಾಣ್ಯಗಳನ್ನೂ ಹಾಕುತ್ತಾರೆ. ಮಕ್ಕಳಿಗೆ ಸಿಹಿ ಅಂದರೆ ಇಷ್ಟ. ಕಬ್ಬಿನ ಹಣ್ಣಿನ ಚೂರು ಗಳನ್ನು ತಿನ್ನಲು ಆಸಕ್ತರಾಗು ಹಸೆಮಣೆ ಮೇಲೆ ಕೂಡುತ್ತಾರೆ. ಅಲ್ಲದೆ ಕಬ್ಬಿನ ರಸ ಪಿತ್ತಹರ. ಉತ್ತರಾಯಣ ಕಾಲದಲ್ಲಿ ಉಷ್ಣವು ಜಾಸ್ತಿ ಯಾಗುವುದರ ಮೂಲಕ ಪಿತ್ತ ಸಂಬಂಧಿ ದೋಷಗಳು ಬಾರದಿರಲಿ ಎಂದು ಕಬ್ಬಿನ ಉಪಯೋಗ ಮಾಡಿದ್ದಾರೆ.
ಮಕರ ಸಂಕ್ರಮಣವು ಪುಷ್ಯ ಮಾಸದಲ್ಲೇ ಸಾಮಾನ್ಯವಾಗಿ ಬರುತ್ತದೆ. ಶನಿಯ ನಕ್ಷತ್ರ ಪುಷ್ಯ. ಪುಷ್ಯಕ್ಕೆ ಬೃಹಸ್ಪತಿ ಅಧಿದೇವತೆ. ಶನಿಗೆ ಯಮ ಅಧಿದೇವತೆ. ಯಮ ಅಂದರೆ ಸಂಯಮ ಎಂದೂ ಅರ್ಥ. ಶನಿ ಜೀವ ನಾಡಿಗೆ ಕಾರಕ. ಉತ್ತರಾಯಣದಲ್ಲಿ ರವಿಯು ಮಕರ ರಾಶಿಗೆ ಪ್ರವೇಶಿಸುತ್ತಿದ್ದ ಹಾಗೆ ಹವಾ ಬದಲಾವಣೆಯಾಗಲು ಆರಂಭವಾಗುತ್ತದೆ. ಇದು ಎಳೆ ಮಕ್ಕಳ ಮೇಲೆ ಪ್ರಭಾವಕಾರಿ. ಮಕ್ಕಳ ಮೇಲೆ ಹೃದಯ ಬಡಿತ ಮತ್ತು ರಕ್ತ ಚಲನೆಯನ್ನು ಜೀವನಾಡಿಯು ಚುರುಕುಗೊಳಿಸುತ್ತದೆ. ಇದನ್ನು ಹತೋಟಿಯಲ್ಲಿಡಲೂ ಎಲಚಿ ಹಣ್ಣು ಸಹಾಯಕಾರಿ.
🎙️ ಮೊರದ ಬಾಗಿನದಲ್ಲಿ ಇಡತಕ್ಕಂತಹ ವಸ್ತುಗಳು
ಅಕ್ಕಿ, ಬೇಳೆಗಳು, ಎಳ್ಳು, ಉಪ್ಪು, ಹುಣಿಸೇ ಹಣ್ಣು, ದೇವರ ದೀಪಕ್ಕೆ ಉಪಯೋಗಿಸುವ ಬತ್ತಿಗಳು, ಬೆಲ್ಲ, ಧನಿಯ, ಜೀರಿಗೆ, ಲವಂಗ, ಮೆಣಸು, ಇಂಗು, ಎಣ್ಣೆ, ತುಪ್ಪ, ಕೊಬ್ಬರಿ, ಅರಿಶಿಣ, ಕುಂಕುಮ, ಅನಿಷಿದ್ಧ ಹಣ್ಣುಗಳು, ತರಕಾರಿ, ಹಾಲು, ಮೊಸರು, ಬಾಚಣಿಕೆ, ಬಿಚ್ಚೋಲೆ, ಕರಿಮಣಿ, ಕುಪ್ಪಸದ ಕಣ, ಕನ್ನಡಿ, ಬಳೆ, ಕಾಡಿಗೆ, ವಿಳ್ಳೇದೆಲೆ, ಅಡಕೆ, ದಕ್ಷಿಣೆ.
ಇದೆಲ್ಲವನ್ನೂ ಸಿದ್ಧಪಡಿಸಿ, ದೀಪವನ್ನು ಹಚ್ಚಿ, ದೇವರ ಮುಂದಿಟ್ಟು, ದೇವರಿಗೆ ಸಮರ್ಪಿಸಿ, ಆಹ್ವಾನಿತ ಮುತ್ತೈದೆಯ ಪಾದ ಪೂಜೆ ಮಾಡಿ, ಪೂರ್ವಾಭಿಮುಖವಾಗಿ ಮಣೆ ಅಥವಾ ಚಾಪೆಯ ಮೇಎ ಕೂಡಿಸಿ, (ಬರೀ ನೆಲದ ಮೇಲ ಕೂಡಿಸಬೇಡಿ), ಕುಂಕುಮ ಕೊಟ್ಟು, ಅರಿಶಿನ ಕೊಟ್ಟು, ತಲೆ ಬಾಚಿ, ಹೂವು ಮುಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ಕನ್ನಡಿಯಿಂದ ಅವರ ಮುಖವನ್ನು ತೋರಿಸಿ, ವಿಳ್ಳೇದೆಲೆ ಆದಕೆ ದಕ್ಷಿಣೆ ಕೊಟ್ಟು, ಕೊಡುವವರ ಸೆರಗು ಮತ್ತು ಪಡೆದುಕೊಳ್ಳುವವರ ಸೆರಗು ಮೊರದ ಬಾಗಿನದ ಮೇಲೆ ಹರಡಿ ಮೂರು ಬಾರಿ ತೂಗಿ, ದಾನ ಕೊಟ್ಟು, ನಂತರ ಮೊರದ ಬಾಗಿನದ ಮೇಲಿನ ಮೊರವನ್ನು ತೆಗೆದು ಮುತ್ತೈದೆಗೆ ತೋರಿಸಬೇಕು. ನಂತರ ಮುತ್ತೈಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು
🎙️ ಮರದ ಬಾಗಿನ ಕೊಡುವವರು ಹೇಳತಕ್ಕದ್ದು
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ಮಯಾದತ್ತಾನಿ ಶೂರ್ಪಾಣಿ ತ್ವಯಾ ಸ್ವೀಕೃತಾ ಜಾನಕೀ |🙏
🎙️ ಮರದ ಬಾಗಿನ ಪಡೆಯುವವರು ಹೇಳತಕ್ಕದ್ದು
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ತ್ವಯಾ ದತ್ತಾನಿ ಶೂರ್ಪಾಣಿ ಮಯಾ ಸ್ವೀಕೃತಾ ಜಾನಕೀ |🙏
🎙️ ಉತ್ತರಾಯಣ ಪುಣ್ಯಕಾಲ ತರ್ಪಣ ಸಂಕಲ್ಪ
೧. ಆಚಮನ
೨. ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩. ಪುನರಾಚಮನ
೪. ಪ್ರಾಣಾಯಾಮ
ನಂತರ ಸಂಕಲ್ಪ —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ________________ ನಾಮ ಸಂವತ್ಸರೇ, ಉತ್ತರಾಯಣೇ, _____ಋತೌ, _____ಮಾಸೇ, ____ ನಕ್ಷತ್ರೇ, ____ಯೋಗೇ ______ ಕರಣೇ, _____ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –
೧. ಪಿತ್ರು, ಪಿತಾಮಹ, ಪ್ರಪಿತಾಮಹ
೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ
೩.ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ 12 ಜನಕ್ಕೂ ಅಲ್ಲದೆ ಸರ್ವಪಿತೃಗಳಿಗೂ ತರ್ಪಣ ಕೊಡಬಹುದು. (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು).
ಅವತ್ತು ಏಕಭುಕ್ತನಾಗಿರಬೇಕು.
ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,
ಉತ್ತರಾಯಣ ಪುಣ್ಯಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ ನಂತರ ಸೂರ್ಯಾಸ್ತದೊಳಗೆ ತರ್ಪಣಕೊಟ್ಟರೆ ಶ್ರೇಷ್ಠ.
🎙️ಸಂಕ್ರಾಂತಿ ದಿನ ಸೂರ್ಯ ನಮಸ್ಕಾರ ಮಾಡಿ
ಹಿಂದೂಗಳು ಸೂರ್ಯ ಭಗವಾನ್ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
🎙️ ಧಾರ್ಮಿಕ ನಂಬಿಕೆ ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ,ಗೋ ದಾನದ ಫಲವೂ ಇದೆ ಎಂದು ಹೇಳಿ ಇದಕ್ಕೆ ಧಾರ್ಮಿಕ ನಂಬಿಕೆಯನ್ನು ನೀಡಿ ಇದನ್ನು ನಿತ್ಯವೂ ಮಾಡುವಂತೆ ಪ್ರೇರೇಪಿಸುತ್ತಿದ್ದರು.ಹಾಗಾಗಿ ಸೂರ್ಯನಿಗೆ ಅರ್ಘ್ಯ ಕೊಡುವುದು ಮತ್ತು ಮಂತ್ರ ಸ್ತೋತ್ರ ಗಳೊಂದಿಗೆ ಆತನನ್ನು ಸ್ತುತಿಸುವುದು ಧಾರ್ಮಿಕ ಆಚರಣೆಯ ಅಂಗವಾಗಿ ಬೆಳೆದು ಬಂದಿದೆ.ಧಾರ್ಮಿಕ ಆಚರಣೆಗಳೆಲ್ಲವನ್ನು ಬದಿಗಿಟ್ಟು ನೋಡಿದರೂ ಸೂರ್ಯ ನಮ್ಮ ಆರೋಗ್ಯವನ್ನು ವ್ರದ್ದಿಸುವ ಜೀವಸತ್ವಗಳ ಗಣಿ.
ದೇಹಕ್ಕೆ ಅವಶ್ಯಕವಾದ "ಡಿ"ಜೀವಸತ್ವವನ್ನು ಉತ್ಪಾದಿಸುವ ಏಕೈಕ ಮೂಲ ಸೂರ್ಯ."ಡಿ"ಜೀವಸತ್ವದ ಕೊರತೆಯುಂಟಾದಾಗ ಹೃದ್ರೋಗ, ಕ್ಷಯ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಮಾಡುವ ಸೂರ್ಯ ನಮಸ್ಕಾರವು ದೇಹದ ರಕ್ತ ಸಂಚಾರವನ್ನು ಸುಲಲಿತಗೊಳಿಸಿ ರಕ್ತದೊತ್ತಡ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ.
ಇದಕ್ಕೂ ಮಿಗಿಲಾಗಿ ತನು ಮನಕ್ಕೆ ಚೈತನ್ಯ ತುಂಬುವ ಉಚಿತ ಔಷಧಿ ಎಂದರೆ ಸೂರ್ಯನ ಬೆಳಕು. ಕತ್ತಲಲ್ಲಿ ಇರುವ ಗಿಡ, ಮರ, ಬಳ್ಳಿಗಳು ಕೂಡಾ ಸೂರ್ಯನ ಬೆಳಕಿಗೆ ಕತ್ತು ಚಾಚುತ್ತವೆ. ಬೆಳಕಿನೆಡೆಗೆ ಬಾಗುತ್ತವೆ.ಸೂರ್ಯನ ಬೆಳಕಿನ ಕೊರತೆ ಮನುಷ್ಯನ ಖಿನ್ನತೆಗೆ ಕಾರಣ ವಾಗುವುದಲ್ಲದೆ ಜೀವನದಲ್ಲಿ ಬೇಸರ ಜಿಗುಪ್ಸೆ ಹುಟ್ಟಿಸಬಲ್ಲುದು, ಇದನ್ನು ತಪ್ಪಿಸಲು ಮುಂಜಾನೆಯ ಹಾಗೂ ಸಾಯಂಕಾಲದ ಬಿಸಿಲಿಗೆ ಮೈಒಡ್ಡುವುದು ಪ್ರಯೋಜನಕಾರಿ ಅಂತಾರೆ ವಿಜ್ಞಾನಿಗಳು.
🎙️ ಸೂರ್ಯ ನಮಸ್ಕಾರ
ಉದಯೇ ಬ್ರಹ್ಮರೂಪಾಯ, ಮಧ್ಯಾಹ್ನೇತು ಮಹೆಶ್ವರಃ
ಅಸ್ತಮಾನೇ ಸ್ವಯಂವಿಷ್ಣು ತ್ರಯೀಮೂರ್ತಿ ದಿವಾಕರ |
🎙️ ಸಂಕ್ರಾಂತಿ ಎಂದರೆ ಏನು
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು
ಉತ್ತರಾಯಣದ ದಿನ ಹಸ್ತೋದಕವಿಲ್ಲ.
ಏಕೆಂದರೆ ಈದಿನ ಯತಿಗಳು ಉಪವಾಸವಿರುತ್ತಾರೆ.
ಉತ್ತರಾಯಣ – ಸೂರ್ಯನು ಭೂಮಧ್ಯೆಯ ರೇಖೆಗೆ ಉತ್ತರಾಭಿಮುಖ ವಾಗಿ ಸಂಚರಿಸುವ ಕಾಲ. ಸಾಮಾನ್ಯವಾಗಿ ಜನವರಿ 14, 15ಕ್ಕೆ ಪ್ರಾರಂಭ ವಾಗುತ್ತದೆ. ಮಕರಕ್ಕೆ ಸೂರ್ಯನು ಪ್ರವೇಶಿಸಿದ ನಂತರ ಮುಂದಿನ ಮೂವತ್ತು ಘಳಿಗೆ ಬಹಳ ಪುಣ್ಯಕಾಲ. ಅದಕ್ಕೇ ಪಂಚಾಂಗ ದಲ್ಲಿ ಉತ್ತರಾಯಣ ಪುಣ್ಯಕಾಲದ ಸಮಯವನ್ನು ತಿಳಿಸಿರುತ್ತಾರೆ. ಉತ್ತರಾ ಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಮೈಲಿಗೆ ಹಚ್ಚಿ- ಕೊಂಡು ಎಲ್ಲರೂ ಸ್ನಾನ ಮಾಡಬೇಕು. ಇದರಿಂದ ರೋಗದಿಂದ ದೂರ. ಉತ್ತರಾಯಣ ಪರ್ವಕಾಲದಲ್ಲಿ ಹೆಂಗಸರು ತಲೆಯ ಮೇಲೆ ಸ್ನಾನ ಮಾಡಬಾರದು. ಆದರೆ ಎಳ್ಳು ಮೈಗೆ ತಿಕ್ಕಿ ಸ್ನಾನ ಮಾಡಬೇಕು.
🎙️ ಮಕರ ಸಂಕ್ರಾಂತಿ ದಿನ
ಎಳ್ಳು ಹಚ್ಚಿ ಸ್ನಾನ, ಎಳ್ಳುದಾನ, ಎಳ್ಳು ಹೋಮ
ಎಳ್ಳು ಭಕ್ಷಣ, ಎಳ್ಳಿನಿಂದ ತರ್ಪಣ, ಎಳ್ಳೆಣ್ಣೆಯ ದೀಪ ಇವು ಬಹಳ ವಿಶೇಷ.
ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ. ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು.
🎙️ ಸಂಕ್ರಾಂತಿ ಎಂದರೇನು ?
ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವುದನ್ನು ಸಂಕ್ರಮಣ ಎನ್ನುತ್ತಾರೆ.
🎙️ ಒಟ್ಟು ಎಷ್ಟು ಸಂಕ್ರಮಣಗಳಿವೆ?
ಒಟ್ಟು ಹನ್ನೆರಡು ಸಂಕ್ರಮಣಗಳಿವೆ.
🎙️ ಮಕರ ಸಂಕ್ರಮಣ ಎಂದರೇನು ?
ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಮಣ ಅಥವ ಉತ್ತರಾಯಣ ಪರ್ವಕಾಲವೆನ್ನುತ್ತಾರೆ.
🎙️ ಸಂಕ್ರಮಣದ ಪರ್ವಕಾಲವೆಂದರೇನು ?
ಸೂರ್ಯನು ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಮಯವನ್ನು ಸಂಕ್ರಮಣ ಪರ್ವಕಾಲವೆನ್ನುತ್ತಾರೆ.
ದಕ್ಷಿಣಾಯಣ ಪುಣ್ಯಕಾಲದಲ್ಲಿ ಉತ್ತರಾಯಣ ಮುಗಿಯುವ ಮುನ್ನದ ಕೆಲವು ಘಳಿಗೆಗ ಪ್ರಶಸ್ತ. ಉತ್ತರಾಯಣ ಪುಣ್ಯಕಾಲದಲ್ಲಿ ಮಕರ ರಾಶಿಯ ಪ್ರವೇಶಿಸಿದ ನಂತರದ ಘಳಿಗೆ ಪ್ರಶಸ್ತ.
🎙️ ಮಕರ ಸಂಕ್ರಮಣದ ಪರ್ವಕಾಲ ಎಷ್ಟು ಸಮಯವಿರುತ್ತದೆ ?
ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20
ಘಳಿಗೆ ಕೆಲವರ ಸಂಪ್ರದಾಯ). ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ
🎙️ ಈ ಸಲದ ಮಕರ ಸಂಕ್ರಮಣದ ಪರ್ವಕಾಲ ಸಮಯ ಯಾವುದು ?
ಪುಣ್ಯ ಕಾಲ - 2023 ರ ಜನವರಿ 15 ರಂದು ಬೆಳಿಗ್ಗೆ 7.17 ರಿಂದ ಸಂಜೆ 5.55 ರವರೆಗೆ
ಮಹಾ ಪುಣ್ಯ ಕಾಲ - 2023 ರ ಜನವರಿ 15 ರಂದು ಬೆಳಿಗ್ಗೆ 7.17 ರಿಂದ 9.04 ರವರೆಗೆ
ಸುಕರ್ಮ ಯೋಗ - 2023 ರ ಜನವರಿ 14 ರಂದು ಮಧ್ಯಾಹ್ನ 12.33 ರಿಂದ ರಾತ್ರಿ 11.51 ರವರೆಗೆ
ಧೃತಿ ಯೋಗ - 2023 ರ ಜನವರಿ 16 ರಂದು ಬೆಳಿಗ್ಗೆ 11:51 ರಿಂದ 4:31 ರವರೆಗೆ.
ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಶ್ರೇಷ್ಟ ಎನ್ನುತ್ತಾರೆ. ಆದರೆ ಅಲ್ಲಿಗೆ ಹೋಗಲು
🎙️ ಅನಾನುಕೂಲವಿರುವವರು ಏನು ಮಾಡಬೇಕು?
ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.
🎙️ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?
ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ನೈವೇದ್ಯವನ್ನೂ ಮಾಡಬಹುದು.
🎙️ಮಕರ ಸಂಕ್ರಮಣ ದಿನವೇ ಶ್ರಾದ್ಧ ಇದ್ದರೆ ಏನು ಮಾಡಬೇಕು ?
ಶ್ರಾದ್ಧವನ್ನು ಸಂಕ್ರಮಣ ಮುನ್ನವೂ ಮಾಡಬಹುದು. ಆ ಸಂದರ್ಭದಲ್ಲಿ ಮಾದಿದರೆ ಶ್ರೇಷ್ಟ.
🎙️ ದಾನವನ್ನು ಯಾವಾಗ ಕೊಡಬೇಕು ?
ದಾನವನ್ನು ಸಂಕ್ರಮಣ ಸಮಯದಲ್ಲಿ ಅಥವಾ ನಂತರ ಕೊಡಬಹುದು. ಅನುಕೂಲವಿದ್ದರೆ ದಾನ ಆ ಸಮಯದಲ್ಲೇ ಕೊಡಿ. ಎಲ್ಲದಿದ್ದರೆ ಮೀಸಲಿಟ್ಟು ನಂತರ ದಾನವನ್ನು ಕೊಡಬಹುದು.
🎙️ ತಂದೆಯಿರುವವರು, ಸ್ತ್ರೀಯರು, ಮಕ್ಕಳು ಬೆಳಿಗ್ಯೆ ಫಲಹಾರ ಮಾಡಬಹುದಾ?
ಅವರುಗಳು ಉಪವಾಸವಿರಬೇಕೆಂದಿಲ್ಲ. ಬೆಳಿಗ್ಯೆ ಪೂಜೆ ಮುಗಿಸಿ, ಹಣ್ಣು, ಫಲಹಾರ ಮಾಡಿ, ಸಂಕ್ರಮಣದ ನಂತರ ಭೋಜನ ಮಾಡತಕ್ಕದ್ದು.
🎙️ ಸ್ತ್ರೀಯರು, ಸಂಕ್ರಮಣ ಸಮಯದಲ್ಲಿ ತಲೆಗೆ ಸ್ನಾನ ಮಾಡಬಹುದಾ?
ಸ್ತ್ರೀಯರು ಯಾವ ಕಾಲದಲ್ಲೂ ಬರೀ ಸ್ನಾನವನ್ನು ಮಾಡುವಂತಿಲ್ಲ. ಎಣ್ಣೆ ನೀರು ಹಾಕಿಕೊಳ್ಳುವವರು ಮಾತ್ರ ತಲೆಗೆ ಸ್ನಾನ ಮಾಡಬಹುದು.
🎙️ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ?
ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು. ಅ) ತಿಲ ಸ್ನಾನ, ಆ) ತಿಲ ದೀಪ, ಇ) ತಿಲ ತರ್ಪಣ, ಈ) ತಿಲ ಹೋಮ, ಉ) ತಿಲ ದಾನ, ಊ) ತಿಲ ಭಕ್ಷಣ. ಸ್ನಾನ ಸಮಯದಲ್ಲಿ ತಿಲವನ್ನು ಹಚ್ಚಿಕೊಂಡು ಮಾಡಬೇಕು.
ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.
ಇಂದು ಗೋವು಼ಗಳನ್ನು ವಿಶೇಷವಾಗಿ ಪೂ಼ಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.
🎙️ ಎಳ್ಳು ಸ್ವೀಕಾರಕ್ಕೆ ವೈಜ್ಞಾನಿಕ ಕಾರಣ –
ಧನುರ್ಮಾಸದಲ್ಲಿ ದೇಹಕ್ಕೆ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಹುಗ್ಗಿಯನ್ನು ಸೇವಿಸುತ್ತೇವೆ. ಏಕೆಂದರೆ ಛಳಿಗಾಲವು ಧನುರ್ಮಾಸದಲ್ಲಿ ಉಲ್ಭಣವಾಗಿರುತ್ತೆ. ಈ ಕಾಲದಲ್ಲಿ ಮಲಬದ್ಧತೆಯಾಗಿ ತೊಂದರೆಯಾಗಿರುತ್ತೆ. ಏಕೆಂದರೆ ಛಳಿಗಾಲದಲ್ಲಿ ಶರೀರದಲ್ಲಿರುವ ಉಷ್ಣಾಂಶವು ಹೆಚ್ಚು ವ್ಯಯವಾಗಿ, ಅದನ್ನು ಸರಿ- ದೂಗಿಸಲು ವಾತಾವರಣವು ಸರಿಯಾಗಿರದೆ ಚರ್ಮ ಸುಕ್ಕು ಕಟ್ಟುತ್ತದೆ಼. ಎರಡನೆಯದಾಗಿ ಯಾವಾಗ ಚರ್ಮದ ಉಷ್ಣಾಂಶವು ಕಮ್ಮಿಯಾಗತ್ತೋ ಆಗ ಚರ್ಮ ಬಿರಿಯತ್ತೆ. ಶಾಸ್ತ್ರದ ಪ್ರಕಾರ ಹುಗ್ಗಿಯನ್ನು ಪ್ರಾತ: ಕಾಲ ಸೇವಿಸಿದರೆ ಮೇಲೆ ಹೇಳಿದ ಶರೀರದ ಕೊರತೆಯೆಲ್ಲ ಸರಿದೂಗುತ್ತೆ. ಧನುರ್ಮಾಸ ಕಳೆದು ಮಕರ ಮಾಸ ಆರಂಭವಾಗುವವರೆಗೆ ಮನುಷ್ಯನ ದೇಹದಲ್ಲಿನ ಕೊಬ್ಬಿನ ಅಂಶ ಅವಶ್ಯಕತೆಯಷ್ಟು ಇರುವುದಿಲ್ಲ. ಕಮ್ಮಿ ಇರತ್ತೆ. ಉತ್ತರಾಯಣಕಾಲದಿಂದ ಶೆಖೆ ಪ್ರಾರಂಭವಾಗುವುದರಿಂದ ಈ ದೇಹಕ್ಕೆ ಅತ್ಯವಶ್ಯಕವಾದ ಕೊಬ್ಬಿನ ಅಂಶ ಸರಿದೂಗದಿದ್ದರೆ ಮುಂದೆ ಬಿಸಿಲಿನ ತಾಪದಿಂದ ಅನೇಕ ತೊಂದರೆಯಾಗುತ್ತೆ. ಇದನ್ನು ತಪ್ಪಿಸಲು ಮುಂಜಾಗರೂಕತೆಗಾಗಿ ಎಳ್ಳನ್ನು ಉಪಯೋಗ ಮಾಡಬೇಕು. ವೈದ್ಯ ಶಾಸ್ತ್ರ ಮತ್ತು ಆಹಾರಶಾಸ್ತ್ರ ಪ್ರಕಾರ ಶರೀರದ ಚರ್ಮ, ನೇತ್ರ, ಮತ್ತು ಅಸ್ತಿ ಇವು಼ಗಳ ಬೆಳವಣಿಗೆಗೆ ಬೇಕಾದ ’ಎ’ ಮತ್ತು ’ಬಿ’ ವಿಟಮಿನ್ಸ್ ಕೊಬ್ಬಿನಲ್ಲಿವೆ. ತೈಲಧಾನ್ಯವಾದ ಎಳ್ಳಿನಲ್ಲಿ ಈ ವಿಟಮಿನ್ಸ್ ಹೇರಳವಾಗಿರುವುದ ರಿಂದ ಎಳ್ಳು ಒಳ್ಳೆಯದು.
ವಿಟಮಿನ್ ಡಿ ಸೂರ್ಯನ ಬೆಳಕಿನಿಂದ ದೇಹದಿಂದ ಉತ್ಪತ್ತಿಯಾಗುತ್ತದೆ.
ಎಳ್ಳು ಬೀಜಗಳು ಅತ್ಯಧಿಕ ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ (100g ಗೆ 975mg). ಹಾಲಿನಲ್ಲಿ 125 ಮಿಗ್ರಾಂ ಮಾತ್ರ ಇರುತ್ತದೆ.
ದೇಹವು ವಿಟಮಿನ್ ಡಿ ಅನ್ನು ಒಂದು ವರ್ಷದವರೆಗೆ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮೀಸಲುಗಳನ್ನು ಬಳಸುತ್ತದೆ.
ಕೊನೆಯದಾಗಿ, ದೇಹವು ತನ್ನ ವಿಟಮಿನ್ ಡಿ ಮೀಸಲುಗಳನ್ನು 3 ಪೂರ್ಣ ದಿನಗಳ ಸೂರ್ಯನ ಬೆಳಕಿನಿಂದ ಪೂರ್ಣವಾಗಿ ಪಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಸೂರ್ಯನ ಬೆಳಕಿನ ಉತ್ತಮ ಗುಣಮಟ್ಟವೆಂದರೆ ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭ.
ಈಗ ಚುಕ್ಕೆಗಳನ್ನು ಸೇರಿಕೊಳ್ಳಿ ಮತ್ತು ಪ್ರಾಚೀನ ಭಾರತದಲ್ಲಿ ನಮ್ಮ ಋಷಿಗಳು ಎಷ್ಟು ಬುದ್ಧಿವಂತರಾಗಿದ್ದರು ಎಂಬುದನ್ನು ನೋಡಿ.
ಅವರು ಗಾಳಿಪಟಗಳನ್ನು ಹಾರಿಸುವ ಹಬ್ಬವನ್ನು ರಚಿಸಿದರು, ಅಲ್ಲಿ ನಮ್ಮ ಮಕ್ಕಳು ಮುಂಜಾನೆಯಿಂದ ಪ್ರಾರಂಭವಾಗುವ ದಿನವಿಡೀ ತೆರೆದ ಸೂರ್ಯನ ಬೆಳಕಿನಲ್ಲಿ ಹೋಗಲು ಉತ್ಸುಕರಾಗುತ್ತಾರೆ. ಮತ್ತು ಅವರ ತಾಯಂದಿರು ಅವರಿಗೆ ಮನೆಯಲ್ಲಿ ತಯಾರಿಸಿದ ಟಿಐಎಲ್ ಲಾಡೂಗಳನ್ನು ತಿನ್ನಿಸುತ್ತಾರೆ.
*ನಮ್ಮದು ಅದ್ಭುತ ಸಂಸ್ಕೃತಿಯಲ್ಲವೇ?*
*ಮಕರ ಸಂಕ್ರಾಂತಿ - ಭಾರತದಲ್ಲಿ ಗಾಳಿಪಟ ಹಾರಿಸುವ ಹಬ್ಬ ಜನವರಿ 14 ರಂದು*
🎙️ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು”.
ನವಗ್ರಹಗಳಿಗೆ ನವಧಾನ್ಯ ಹೇಳುತ್ತಾರೆ. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲಧಾನ್ಯ. ಉಳಿದವು಼ ಯಾವು಼ದೂ ತೈಲಧಾನ್ಯವಲ್ಲ. ಆದ್ದರಿಂದ ಎಳ್ಳನ್ನು ತಿನ್ನಬೇಕೆಂದಿದ್ದಾರೆ, ಬರೀ ಎಳ್ಳು ತಿಂದರೆ ಪಿತ್ತ ಜಾಸ್ತಿಯಾಗತ್ತೆ. ಅದಕ್ಕೇ ಪಿತ್ತಹರವಾದ ಬೆಲ್ಲವನ್ನೂ ಸೇರಿಸಿ ತೆಗೆದುಕೊಂಡರೆ ಕೊಬ್ಬಿನ ಅಂಶ ಸರಿದೂಗುತ್ತೆ.
ಸ್ವಭಾವತ: ಬೆಲ್ಲವೂ ಪಿತ್ತದ ಗುಣವುಳ್ಳದಾದ್ದರಿಂದ ಎಳ್ಳಿನ ಜೊತೆ ತೆಗೆದುಕೊಂಡರೆ ಪಿತ್ತವನ್ನು ಸ್ಥಿಮಿತದಲ್ಲಿಡುತ್ತೆ. “ಉಷ್ಣೇನ ಉಷ್ಣಂ ಶೀತಲಂ” ಎನ್ನುವ ಹಾಗೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳುಬೆಲ್ಲ. ಹಸಿ ಎಳ್ಳಿನ ದೋಷ ನಿವಾರಣೆಗಾಗಿ ಹುರಿದು ಉಪಯೋಗಿಸಬೇಕು. ಇದರ ಜೊತೆಗೆ ರುಚಿಗೋಸ್ಕರ, ಕೊಬ್ಬಿನ ಅಂಶ ವಿರುವ ಕಡ್ಲೇಕಾಯಿಬೀಜವನ್ನು ಬೆರೆಸಿ ತಿನ್ನಬೇಕೆಂದಿದ್ದಾರೆ. ಎಳ್ಳಿಗೆ ವಾತ, ವ್ರಣ, ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ರಕ್ತವೃದ್ಧಿ ಮಾಡುತ್ತೆ.
🎙️ ಸಂಕ್ರಾಂತಿ ಹಬ್ಬದ ದಿನ ಪಾಠನೇ :
ಸೂರ್ಯ ಸ್ತೋತ್ರ
ಆದಿತ್ಯ ಹೃದಯಂ
ಸೂರ್ಯ ಅಷ್ಟಕಂ
ಸೂರ್ಯ ಮಂಡಲ ಸ್ತೋತ್ರ
ಸೂರ್ಯ ಅಷ್ಟೋತ್ತರ .…
ಶ್ರೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್
ಸೂರ್ಯ ದ್ವಾದಶ ಸ್ತೋತ್ರ
ಆದಿತ್ಯ ಸ್ತೋತ್ರ
ಹರಿಯೇ ಪರದೈವ 🙏
ಜಗತ್ತು ಸತ್ಯ