Sri Hari ಶ್ರೀ ಹರಿ

Sri Hari ಶ್ರೀ ಹರಿ ಮದ್ವ ಸಿದ್ಧಾಂತವೇ ಜಗತ್ ಸಿದ್ದಾಂತ
Madhwa philosophy is Universal philosophy Phanindra K

!!ಆವನಾವನ ಕಾಯ್ವ ಅವನಿ ಯೊಳಗೆ ದೇವ ದೇವೇಶ ಶ್ರೀ ಹರಿಯು ಅಲ್ಲದಲೇ !!
ಪ್ರತಿಯೊಬ್ಬ ಮಾನವನಿಗೆ ತಾನು ಮಾಡುವ ಕೆಲಸ ಕಾರ್ಯಗಳೆಲ್ಲವೂ ತಾನೇ ಮಾಡಿದ್ದೂ ಎನ್ನುವ ಒಂದು ಅಹಂಕಾರವಿರುತ್ತದೆ. ಇದೆಲ್ಲಕ್ಕೂ ಶ್ರೀ ಹರಿಯ ಪ್ರೇರಣೆ ಇದೆ ಎನ್ನುವ ಅರಿವು ಯಾವಾಗಲು ಇರುವುದಿಲ್ಲ. ಇನ್ನೊಬ್ಬರಿಗೆ ಬಂದ ದುಗುಡ ದುಮ್ಮಾನಗಳನ್ನೂ ನಾವು ಪರಿಹರಿಸಿದೆವು ಎಂದು ಬಾವಿಸುವ ನಮಗೆ ಶ್ರೀ ಹರಿಯನ್ನು ಕರುಣೆಯನ್ನು ತಿಳಿಯಲು ಆಗುವುದಿಲ್ಲ. ಪುರಂದರದಾಸರು ಒಂದು ಕೃತಿಯೊಳಗೆ ಹೀಗೆ ಹೇಳಿದ್ದಾರೆ ನಮ್ಮ ಪ್ರಯತ್ನದಿಂದ ಇನ್ನೊಬ್ಬರಿಗೆ ನಾವು ರಕ್ಷಿಸಿವಿದೆವು ಎಂದು ಬೀಗುವ ನಮಗೆ ಗರ್ಭದಲ್ಲಿರು ಮಗುವನ್ನು ರಕ್ಷಿಸಲು ಸಾದ್ಯವೇ ಎಂದು ಕೇಳುತ್ತಾರೆ ಹಾಗೆ ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಶ್ರೀ ಹರಿಯ ಕರುಣೆಯಿದೆ ಎಂದು ತಿಳಿದಾಗ ಜೀವನ ಸಾರ್ಥಕ ವಾಗುತ್ತದೆ. "ಶ್ರೀ ಹರಿ" ಯ ಉದ್ದೇಶ ಎಲ್ಲ ಆಸಕ್ತರಿಗೂ ಮದ್ವಸಿದ್ದಾಂತ ಕೆಲ ಅಂಶ ಗಳ್ಳನ್ನು ತಿಳಿಸುವ ಪುಟ್ಟ ಪ್ರಯತ್ನ. ಶ್ರೀ ಹರಿ, ರಮಾದೇವಿ, ವಾಯುದೇವರು, ಮತ್ತು ಗುರು ಪರಂಪರೆಗಳ ಬಗ್ಗೆ ಫೋಟೋ ಹಾಗು ಮಾಹಿತಿಗಳನ್ನೂ ಕೊಡುವ ಸಣ್ಣ ಪ್ರಯತ್ನ. ವಿಷ್ಣುಸಹಸ್ರನಾಮ, ವಾಯುಸ್ತುತಿ, ಹರಿಕಥಾಮೃತಾಸಾರ ಮತ್ತು ಎಲ್ಲ್ಲಾಗುರುಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡುವ ಪ್ರಯತ್ನ. ಪ್ರೇರಣೆ: ಶ್ರೀ ೧೦೦೮ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರು ಮತ್ತು ಶ್ರೀ ವಿದ್ಯಾದೀಶ ತೀರ್ಥ ಶ್ರೀ ಪಾದಂಗಳವರು ಪ್ರವಚನಗಳು.

https://youtu.be/_LSJdAX4C0c?si=peb9j7a5-4LacFXlವಿಷ್ಣು ಸಹಸ್ರನಾಮ ಚಿಂತನೆ -೦2Vishnu sahasranaama chintane Episode -02ಶ್ರೀ ವ...
11/08/2026

https://youtu.be/_LSJdAX4C0c?si=peb9j7a5-4LacFXl

ವಿಷ್ಣು ಸಹಸ್ರನಾಮ ಚಿಂತನೆ -೦2
Vishnu sahasranaama chintane
Episode -02

ಶ್ರೀ ವಿಷ್ಣು ನಾಮದ ವಿಶ್ಲೇಷಣೆ ಮತ್ತು ಅರ್ಥಾನುಸಂಧಾನ

ಪ್ರತಿದಿನ ವಿಷ್ಣು ಸಹಸ್ರನಾಮದ ಪ್ರತಿಯೊಂದು ನಾಮದ ಅರ್ಥವನ್ನು ತಿಳಿಯಲು ಈ ಚಾನೆಲ್ subscribe ಮಾಡಿ ಮತ್ತು ನಿಮ್ಮವರಿಗೆ share maadi

ಪ್ರೀತೊಸ್ತು ಕೃಷ್ಣ ಪ್ರಭುಃ
ಫಣೀಂದ್ರ ಕೆ

Enjoy the videos and music you love, upload original content, and share it all with friends, family, and the world on YouTube.

ಶ್ರೀ ವಿಷ್ಣು ಸಹಸ್ರನಾಮದ ಮಹತ್ವಪವಿತ್ರ ಚಾತುರ್ಮಾಸ ಸಂದರ್ಭದಲ್ಲಿ ವೇದವ್ಯಾಸರು ನಮಗಾಗಿ ನೀಡಿದ ಅತ್ಯದ್ಭುತವಾದ ಕಾಣಿಕೆ ಎಂದರೆ ಶ್ರೀ ವಿಷ್ಣು ಸಹ...
24/07/2026

ಶ್ರೀ ವಿಷ್ಣು ಸಹಸ್ರನಾಮದ ಮಹತ್ವ
ಪವಿತ್ರ ಚಾತುರ್ಮಾಸ ಸಂದರ್ಭದಲ್ಲಿ ವೇದವ್ಯಾಸರು ನಮಗಾಗಿ ನೀಡಿದ ಅತ್ಯದ್ಭುತವಾದ ಕಾಣಿಕೆ ಎಂದರೆ ಶ್ರೀ ವಿಷ್ಣು ಸಹಸ್ರನಾಮ.
ಇದು ಮೋಕ್ಷಪ್ರದವಾದ ಸ್ತೋತ್ರ, ಸಹಸ್ರನಾಮಗಳ ರಾಜ, ಇದರ ಪ್ರಾಮುಖ್ಯತೆ ತಿಳಿಸುವ ವಿಶೇಷಗಳು ಕೂಡಿದ ವಿಷಯಗಳು ಇದರಲ್ಲಿ ಇವೆ. ಅನುಸಂಧಾನ ಪೂರ್ವಕವಾಗಿ ಮಾಡುವ ಪಾರಾಯಣಕ್ಕೆ ವಿಶೇಷ ಫಲ ಇದೆ. ಬೃಹತಿ ಸಹಸ್ರಕ್ಕೂ ಮೂಲ ಆಕಾರ ಶ್ರೀ ವಿಷ್ಣು ಸಹಸ್ರನಾಮ.
ಪ್ರತಿದಿನ ವಿಷ್ಣು ಸಹಸ್ರನಾಮದ ಪ್ರತಿಯೊಂದು ನಾಮದ ಅರ್ಥಾನುಸಂಧಾನ ಮಾಡುವ ಪ್ರಯತ್ನ ಮಾಡೋಣ.
ದಯವಿಟ್ಟು ಚಾನೆಲ್ subscribe ಮಾಡಿ ಮತ್ತು share ಮಾಡಿ.
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ

ಪ್ರೀತೊಸ್ತು ಕೃಷ್ಣ ಪ್ರಭುಃ
ಫಣೀಂದ್ರ ಕೆ

Enjoy the videos and music you love, upload original content, and share it all with friends, family, and the world on YouTube.

23/07/2026

Coming soon

22/07/2026

Sri Vishnu sahasranaama chintana
ಪ್ರತಿ ನಾಮದ ಅರ್ಥಾನುಸಂಧಾನ
Coming soon

ವಿಜಯೀ ಭವ - ಶ್ರೀ ಶ್ರೀ ಸತ್ಯ ವಿಜಯ ತೀರ್ಥರು ||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ:...
13/04/2026

ವಿಜಯೀ ಭವ - ಶ್ರೀ ಶ್ರೀ ಸತ್ಯ ವಿಜಯ ತೀರ್ಥರು

||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |
ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ: ||

ಉತ್ತರಾಧಿ ಮಠದ ಯತಿ ಪರಂಪರೆಯಲ್ಲಿ ಬರುವ "ವಿಜಯೀಭವ" ಎಂದು ಎಲ್ಲರಿಗು ಹರಿಸಿ ಕೇವಲ ಮಂತ್ರಾಕ್ಷತೆಯ ಅನುಗ್ರಹ ಮತ್ತು ಮಹಿಮೆಯನ್ನು ತೋರಿಸಿದ ಗುರುಗಳು, ಮತ್ತು ಅವರ ಹೆಸರಿನಿಂದಲೇ ಇಂದಿಗೂ ಆ ಊರನ್ನು ಗುರುತಿಸುವ ಯತಿ ಶ್ರೇಷ್ಠರಾದ ಶ್ರೀ ಶ್ರೀ ಸತ್ಯವಿಜಯ ತೀರ್ಥರ ಆರಾಧನಾ ಮಹೋತ್ಸವ.

ಗುರುಗಳ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಓದಿ

Sri SatyaVijaya Thirtharu ©️ Phanindra k ವಿಜಯೀ ಭವ – ಶ್ರೀ ಶ್ರೀ ಸತ್ಯ ವಿಜಯ ತೀರ್ಥರು(ಆರಾಧನಾ ಮಹೋತ್ಸವ ವಿಶೇಷ) ||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವ....

ಶ್ರೀರಾಮ ನವಮಿಯ ದಿನ ಶ್ರೀರಾಮನ ಅನುಗ್ರಹ ಪಡೆಯಲು ಕೆಳಗಿನ ಕಥೆ ಕೇಳಿ....
27/03/2026

ಶ್ರೀರಾಮ ನವಮಿಯ ದಿನ ಶ್ರೀರಾಮನ ಅನುಗ್ರಹ ಪಡೆಯಲು ಕೆಳಗಿನ ಕಥೆ ಕೇಳಿ....

ಶ್ರೀರಾಮಕಥಾ ಭಗವಂತ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಏಳನೇ ಅವತಾರ ಪರಿಪೂರ್ಣ ಅವತಾರ ಶ್ರೀರಾಮವತಾರ. ಅತ್ಯಂತ ಪವಿತ್ರವಾದ ನಾಮ ರಾ....

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕನಿಷ್ಠ 900 ರಿಂದ 2000 ವರ್ಷಗಳಷ್ಟು ಹಳೆಯದು ಎನ್ನಲಾಗುವ ಗಂಗ _ ನೋಳಂಬರ ಕಾಲದ ವಾಸ್ತು ಶಿಲ್ಪ ಶೈಲಿ ಹೊಂದಿ...
16/03/2026

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕನಿಷ್ಠ 900 ರಿಂದ 2000 ವರ್ಷಗಳಷ್ಟು ಹಳೆಯದು ಎನ್ನಲಾಗುವ ಗಂಗ _ ನೋಳಂಬರ ಕಾಲದ ವಾಸ್ತು ಶಿಲ್ಪ ಶೈಲಿ ಹೊಂದಿರುವ ಸ್ವಯಂಭುವಾಗಿ ನೆಲೆಸಿ ಭಕ್ತರ ಕೋರಿಕೆಗಳನ್ನು ನೆರವರಿಸುತ್ತಿರುವ #ಶ್ರೀ_ವೈದ್ಯನಾಥೇಶ್ವರ.

ವೈದ್ಯನಾಥ ಪುರದ ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿ ದಡದಲ್ಲಿ ರೋಗನಿವಾರಕ ದೇವರೆಂದು ಪ್ರಸಿದ್ಧಿ ಪಡೆದು ಶಿವನು ವೈದ್ಯನಾಗಿ ಇಲ್ಲಿ ನೆಲೆಸಿದ್ದಾನೆ. ಶಿಂಷಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಶಿವನನ್ನು ಪ್ರಾರ್ಥಿಸಿ ಇಲ್ಲಿನ ಹುತ್ತದ ಮಣ್ಣನ್ನು ಪ್ರಸಾದವಾಗಿ ಸ್ವೀಕರಿಸಿದರೆ ಚರ್ಮರೋಗ ಸೇರಿದಂತೆ ಅನೇಕ ಕಾಯಿಲೆಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.
ಇಂತಹ ಪರಮಪವಿತ್ರ ಶಿವನನ್ನು ಒಮ್ಮೆ ದರ್ಶನ ಮಾಡಿ ಪುನೀತರಾಗೋಣ.

Address

Bangalore

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+919972813141

Website

Alerts

Be the first to know and let us send you an email when Sri Hari ಶ್ರೀ ಹರಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Hari ಶ್ರೀ ಹರಿ:

Shortcuts

Share