Anudhinada Ahara - ಅನುದಿನದ ಆಹಾರ

Anudhinada Ahara - ಅನುದಿನದ ಆಹಾರ Through this Daily Bread in Kannada, this magazine is ordained by God our Saviour to Send the Good News of Life to the People Of Karnataka. Monthly Magazine

📖 ಅನುದಿನದ ಆಹಾರ⏰ ಜೂನ್ 7, 2026, 🗓️ ಭಾನುವಾರ👉🏼 ಕನಸುಗಳು!🔖 ಸತ್ಯವೇದ ಓದುವ ಭಾಗಬೆಳಿಗ್ಗೆ: 2 ಪೂ.ವೃ.28,29ಸಂಜೆ: ಯೋಹಾನ 17       ನಾನು ಕನ...
07/06/2026

📖 ಅನುದಿನದ ಆಹಾರ
⏰ ಜೂನ್ 7, 2026,
🗓️ ಭಾನುವಾರ

👉🏼 ಕನಸುಗಳು!

🔖 ಸತ್ಯವೇದ ಓದುವ ಭಾಗ
ಬೆಳಿಗ್ಗೆ: 2 ಪೂ.ವೃ.28,29
ಸಂಜೆ: ಯೋಹಾನ 17

ನಾನು ಕನಸಿನಲ್ಲಿ ಕಂಡದ್ದನ್ನು ಹೇಳುತ್ತೇನೆ ಕೇಳಿರಿ ಅಂದನು. (ಆದಿ.37:6)

ಹೊಸ ಒಡಂಬಡಿಕೆಯಲ್ಲಿ ಅನ್ಯಭಾಷೆ ಹೇಗೆ ರಹಸ್ಯ ಭಾಷೆಯಾಗಿರುವದೋ, ಹಾಗೆಯೇ ಹಳೆ ಒಡಂಬಡಿಕೆಯಲ್ಲಿ ಕನಸುಗಳು ದರ್ಶನಗಳು ರಹಸ್ಯ ಭಾಷೆಯಾಗಿರುವವು. ಕೆಲವು ಕನಸುಗಳು ನೇರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಆದರೆ ಕೆಲವು ಕನಸುಗಳ ಅರ್ಥ ನಿಗೂಢವಾಗಿರುವದು. ಕರ್ತನು ತನ್ನ ಮಕ್ಕಳಿಗೆ ಕನಸುಗಳನ್ನು ಬರ ಮಾಡಿ, ಅದರ ಅರ್ಥವನ್ನು ತಿಳಿಯಪಡಿಸುವನು. ಆದರೆ ಫರೋಹನನಿಗೆ ಕರ್ತನು ಕನಸು ಬರಮಾಡಿದನು. ಆದರೆ ಅರ್ಥವನ್ನು ಮರೆಮಾಡಿ ತನ್ನ ಮಗನಾದ ಯೋಸೇಫನಿಗೆ ತಿಳಿಯಪಡಿಸಿದನು.

ಮುಂದೆ ನಡೆಯುವ ಕಾರ್ಯಗಳ ಕುರಿತು ನನ್ನ ಬಳಿ ಕೇಳಿರಿ ಎಂದು ಕರ್ತನು ಹೇಳುತ್ತಾನೆ. ನೀವು ವಿಚಾರಿಸಿ ಪ್ರಾರ್ಥಿಸುವಾಗ ಪ್ರಾರ್ಥನೆಯ ವೇಳೆಯಲ್ಲಿ ಮಾತನಾಡುವನು. ಪ್ರವಾದನೆಯ ಮೂಲಕ ಮಾತನಾಡುವನು, ಪ್ರಕೃತಿಯ ಮೂಲಕ ಮಾತನಾಡುವನು, ಸತ್ಯವೇದ ವಾಕ್ಯಗಳ ಮೂಲಕ ಮಾತನಾಡುವನು, ಕನಸುಗಳ ಮೂಲಕ ಮಾತನಾಡುವನು. ಆದರೆ ನೀವು ಕನಸುಗಳ ಬಗ್ಗೆಯೇ ಮಾತನಾಡುತ್ತಿರಬಾರದು. ಕೆಲವರು ಯಾವಾಗಲೂ ಕನಸು ಕಂಡೆನು. ಅದರ ಅರ್ಥವೇನು? ಎಂದು ಹೇಳಿ ತಿರುಗುತ್ತಿರುತ್ತಾರೆ. ಕರ್ತನು ನಿಮಗೆ ಕನಸು ಬರಮಾಡುವಾಗ, ಅದರ ಅರ್ಥವನ್ನೂ ಕೇಳಿರಿ. ಹೊಸ ಒಡಂಬಡಿಕೆಯಲ್ಲಿ ನೀವು ದರ್ಶಿಸಿ ನಡೆಯದೆ ವಿಶ್ವಾಸಿಸಿ ನಡೆಯಬೇಕು. ನಿಮ್ಮನ್ನು ಸರಿಯಾಗಿ ನಡೆಸಲು ಕನಸಿಗಿಂತಲೂ ಉತ್ತಮವಾದ ಪವಿತ್ರಾತ್ಮನನ್ನು ಕರ್ತನು ನಿಮಗೆ ಕೊಟ್ಟಿರುವನು. ಆತನು ಸಕಲ ಸತ್ಯದಲ್ಲಿ ನಿಮ್ಮನ್ನು ನಡೆಸುವನು. ಕೆಲವರು ಮಲಗುವ ಮೊದಲು ಮೊಬೈಲ್‍ಗಳಲ್ಲಿ ಬರುವ ಅಭಾಸವಾದ ಸಂಗತಿಗಳನ್ನು ನೋಡುವದರಿಂದ ರಾತ್ರಿಯಲ್ಲಿ ಕೆಟ್ಟ ಕನಸುಗಳನ್ನು ಕಾಣುವರು. ಸೈತಾನನು ಅವರ ಮನಸ್ಸಿನಲ್ಲಿ ಕಳೆಗಳನ್ನು ಬಿತ್ತುವನು.

ಕೆಲವರಿಗೆ ಸೈತಾನನು ಭಯಂಕರವಾದ ಕೊಲೆ, ವಿಪ್ಪತ್ತು ಮುಂತಾದ ಕನಸುಗಳನ್ನು ತಂದು ಹೃದಯದ ಸಮಾಧಾನವನ್ನು ಕೆಡಿಸುವನು. ಆದರೆ ದೇವರು ಕೊಡುವ ಕನಸಾದರೋ, ಸ್ಪಷ್ಟವಾದದ್ದಾಗಿಯೂ, ಸಮಾಧಾನವನ್ನು ಧೈರ್ಯವನ್ನು ಕೊಡುವಂಥದ್ದಾಗಿಯೂ ಇರುವದು. ಕಾರಣವಿಲ್ಲದ ಭಯ ಅಧೈರ್ಯವನ್ನು ಉಂಟುಮಾಡುವ ಕನಸುಗಳು ದೇವರಿಂದ ಉಂಟಾದದ್ದಲ್ಲ, ದೇವರು ಸಮಾಧಾನಕ್ಕೆ ಹೊರತು ಗಲಿಬಿಲಿಗೆ ಕಾರಣನಲ್ಲ (1ಕೊರಿಂ.14:33). ಆದ್ದರಿಂದ, ಕನಸುಗಳನ್ನು ಸರಿಯಾದ ರೀತಿಯಲ್ಲಿ ವಿಮರ್ಷಿಸುವದು ಅಗತ್ಯವಾದದ್ದು.

ನೆನಪಿಗೆ : ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ.... ಹಿರಿಯರಿಗೆ ಕನಸುಗಳು ಬೀಳುವವು. ನಿಮ್ಮ ಯೌವನಸ್ಥರಿಗೆ ದಿವ್ಯ ದರ್ಶನಗಳಾಗುವವು. (ಯೋವೇ.2:28)

👁️‍🗨️ Watch and be Blessed.
https://youtu.be/MEzl2sivWn8

To watch FULL Joseph Series 👇
https://www.youtube.com/playlist?list=PL7he8lEWSbPdz9LasfCCiO9eV5kNS2vEE

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜೂನ್ *6*, 2026, 🗓 ಶನಿವಾರ👉🏼 *ನಿಲುವಂಗಿ!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *2 ಪೂ.ವೃ. 26,27*ಸಂಜೆ: *ಯೋಹಾನ 16*  ...
06/06/2026

📖 *ಅನುದಿನದ ಆಹಾರ*
⏰ ಜೂನ್ *6*, 2026,
🗓 ಶನಿವಾರ

👉🏼 *ನಿಲುವಂಗಿ!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *2 ಪೂ.ವೃ. 26,27*
ಸಂಜೆ: *ಯೋಹಾನ 16*

_*ಇಸ್ರಾಯೇಲನು ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿ ಅವನಿಗೆ ನಿಲುವಂಗಿಯನ್ನು ಮಾಡಿಸಿಕೊಟ್ಟನು. (ಆದಿ.37:3)*_

ಕರ್ತನು ನಿಮ್ಮಮೇಲೆ ಇಟ್ಟ ಪ್ರೀತಿಯಿಂದ, ನಿಲುವಂಗಿಯಂತಹ ತಲಾಂತುಗಳನ್ನೂ, ಕೃಪೆಯನ್ನೂ ಕೊಟ್ಟಿರುವನು. ತಲಾಂತುಗಳು ಒಬ್ಬ ಮನುಷ್ಯನಿಗೆ ಹುಟ್ಟಿದಾಗಲೇ ಕೊಡಲ್ಪಡುವವು. ತಲಾಂತುಗಳನ್ನು ಹೊಂದಿದವರು ಇನ್ನೂ ಅನೇಕ ತಲಾತುಗಳನ್ನು ಸಂಪಾದಿಸಬೇಕು. ಆದರೆ ಆತ್ಮನ ವರಗಳು ಸ್ವಾಭಾವಿಕವಾಗಿಯೋ ಅಥವಾ ಹುಟ್ಟಿನಿಂದಲೋ ಕೊಡಲ್ಪಡುವದಿಲ್ಲ. ರಕ್ಷಣೆ ಹೊಂದಿ, ಆತ್ಮನ ಅಭಿಷೇಕವನ್ನು ಹೊಂದಿದ ನಂತರವೇ, ಅವರವರ ಯೋಗ್ಯತೆಗೆ ತಕ್ಕಂತೆ ಕರ್ತನು ಆತ್ಮನ ವರಗಳನ್ನು ನೀಡುವನು. ಅದು ದೇವರಿಂದ ಸಿಗುವ ಬಹುಮಾನ.

ಕರ್ತನು ನಿಮಗೆ ತಲಾಂತುಗಳನ್ನೂ, ವರಗಳನ್ನೂ ಕೊಟ್ಟಿದ್ದರೂ, ನಿಮಗಾಗಿ ನಿಲುವಂಗಿಯನ್ನು ಇಟ್ಟಿರುವನು. ನಿಲುವಂಗಿ ಎಂದು ಹೇಳುವಾಗ, ಅದು ಆತ್ಮೀಕ ವಸ್ತ್ರಗಳನ್ನು ಸೂಚಿಸುವಂಥದ್ದಾಗಿದೆ. ಒಂದು ಅಂಗಿಯಲ್ಲಿ ಹಲವು ಬಣ್ಣಗಳು ಇರುವಂತೆ, ಆತ್ಮೀಕ ವಸ್ತ್ರದಲ್ಲಿಯೂ ವ್ಯತ್ಯಾಸವಾದ ಅನುಭವಗಳಿವೆ. ಪಾಪಕ್ಷಮೆಯನ್ನು ಹೊಂದಿ ರಕ್ಷಣೆಯ ಸಂತೋಷವನ್ನು ಅನುಭವಿಸುವಾಗ, ಕರ್ತನು ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವನು. (ಯೆಶಾ.61:10). ಎರಡನೆಯದಾಗಿ ನಿಲುವಂಗಿಯಲ್ಲಿ ಧರ್ಮವೆಂಬ ಅಥವಾ ನೀತಿಯೆಂಬ ವಸ್ತ್ರವೂ ಉಂಟು. (ಯೆಶಾ.61:10). ದೇವರ ನೀತಿಯನ್ನು ನೆರವೇರಿಸುವಾಗ, ಆ ವಸ್ತ್ರವನ್ನು ಪಡೆದುಕೊಳ್ಳುವಿರಿ. ಉದಾಹರಣೆಯಾಗಿ ದೀಕ್ಷಾಸ್ನಾನವು ಒಂದು ನೀತಿ, ಧರ್ಮ. ಅದನ್ನು ತಡೆಯಲು ಬಂದ ಸ್ನಾನಿಕನಾದ ಯೋಹಾನನನ್ನು ಕುರಿತು ಯೇಸು ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ ಎಂದು ಹೇಳಿದನು. (ಮತ್ತಾ.3:15). ಕ್ರಿಸ್ತನಲ್ಲಿ ದೀಕ್ಷಾಸ್ನಾನ ಹೊಂದಿದವರು ಕ್ರಿಸ್ತನನ್ನೇ ಧರಿಸಿಕೊಳ್ಳುವರು. (ಗಲಾ.3:27). ನಿಲುವಂಗಿಯಲ್ಲಿ ಮಹಿಮೆಯ ವಸ್ತ್ರವೂ ಒಂದು. ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! (ಯೆಶಾ.52:1) ಎಂದು ಪ್ರವಾದಿಯ ಮುಖಾಂತರ ಕರ್ತನು ಹೇಳುತ್ತಾನೆ. ಮಾತ್ರವಲ್ಲ ಆತ್ಮನಿಂದ ತುಂಬಿದವರಾಗಿ ಕರ್ತನನ್ನು ಸ್ತುತಿಸುವಾಗ ಸ್ತುತಿಯ ವಸ್ತ್ರವನ್ನು ಕರ್ತನು ಕೊಡುವನು. (ಯೆಶಾ.61:3).

ದೇವಮಕ್ಕಳೇ, ವರಗಳನ್ನೂ, ಮಹಿಮೆಯನ್ನೂ ಕೊಡುವ ಕರ್ತನ ಕಡೆಗೆ ನಿಮ್ಮ ಕಣ್ಣುಗಳನ್ನೆತ್ತಿ ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲ ವಿಧವಾದ ಬೆಳಕಿಗೂ ಮೂಲ ಕಾರಣನಾದವನಿಂದ ಇಳಿದು ಬರುತ್ತದೆ. (ಯಾಕೊ.1:17).

_*ನೆನಪಿಗೆ*_ : _ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹವಿತ್ತು. ಆ ನಾರು ಮಡಿ ಅಂದರೆ ದೇವಜನರ ಸತ್ಕಾರ್ಯಗಳೇ. (ಪ್ರಕ.19:8)_

👁‍🗨 Watch and be Blessed.
https://youtu.be/2qh_10zNJEE

To watch FULL Joseph Series 👇
https://www.youtube.com/playlist?list=PL7he8lEWSbPdz9LasfCCiO9eV5kNS2vEE

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜೂನ್ *5*, 2026, 🗓 ಶುಕ್ರವಾರ👉🏼 *ಮಂದೆಯನ್ನು ಮೇಯಿಸು!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *2 ಪೂ.ವೃ.23,24,25*ಸಂಜೆ: ...
05/06/2026

📖 *ಅನುದಿನದ ಆಹಾರ*
⏰ ಜೂನ್ *5*, 2026,
🗓 ಶುಕ್ರವಾರ

👉🏼 *ಮಂದೆಯನ್ನು ಮೇಯಿಸು!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *2 ಪೂ.ವೃ.23,24,25*
ಸಂಜೆ: *ಯೋಹಾನ 15*

_*ಯೋಸೇಫನು ಹದಿನೇಳು ವರ್ಷದವನಾಗಿ ತನ್ನ ಅಣ್ಣಂದಿರ ಜೊತೆಯಲ್ಲಿ ಆಡು ಕುರಿಗಳನ್ನು ಮೇಯಿಸುತ್ತಿದ್ದನು. (ಆದಿ.37:2)*_

ಯೋಸೇಫನು ತನ್ನ ಹದಿನೇಳನೇ ವಯಸ್ಸಿನಲ್ಲಿ ತನ್ನ ತಂದೆಯ ಆಡುಕುರಿಗಳನ್ನು ಮೇಯಿಸುವ ಕೆಲಸವನ್ನು ನಿರ್ವಹಿಸುತ್ತಿದ್ದನು. ತನ್ನ ತಂದೆಯ ಕೆಲಸದಲ್ಲಿ ಸಹಾಯಕನಾಗಿ ನಿಂತನು. ತನ್ನ ತಂದೆಯ ಕೆಲಸ ತನ್ನ ಕೆಲಸವೆಂದು ಮನಃಪೂರ್ವಕವಾಗಿ ಉತ್ಸಾಹದಿಂದ ಮಾಡಿದನು.

ಯೇಸುಕ್ರಿಸ್ತನಿಗೆ ಹನ್ನೆರಡು ವರುಷವಾದಾಗ ದೇವಾಲಯದಲ್ಲಿ ಬೋಧಕರೊಂದಿಗೆ ಕುಳಿತು ಚರ್ಚಿಸುತ್ತಿದ್ದನು. ಜನರ ಗುಂಪಿನ ಮಧ್ಯೆ ತಪ್ಪಿಸಿಕೊಂಡಿದ್ದ ಯೇಸುವನ್ನು ಅವನ ತಂದೆತಾಯಿ ಅಲ್ಲಿ ಕಂಡುಕೊಂಡು ಕಂದಾ ಹೀಗೆ ಏಕೆ ಮಾಡಿದಿ? ಎಂದು ಕೇಳಿದಾಗ ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ? ಎಂದು ಕೇಳಿದನು. (ಲೂಕ.2:49). ಕ್ರಿಸ್ತನ ಬಗ್ಗೆ ನಿಮಗೆ ತಿಳುವಳಿಕೆ ಬಂದ ಮೇಲೆ, ಆತನ ಕೆಲಸವನ್ನು ನೀವು ಸತ್ಯದಿಂದಲೂ, ಬಾಧ್ಯತೆಯಿಂದಲೂ, ಮನಃಪೂರ್ವಕವಾಗಿಯೂ ಮಾಡಬೇಕು. ಅದರಿಂದ ಕರ್ತನು ಸಂತೋಷಿಸುವನು. ಕರ್ತನು ನನ್ನನ್ನು ಸೇವೆಗೆ ಕರೆಯಲಿಲ್ಲವೇ? ಎಂದು ಒಂದು ವೇಳೆ ಭಾವಿಸಬಹುದು. ಕೆಲಸಗಾರರನ್ನು ಕೆಲಸಕ್ಕೆ ಕರೆಯುವರು. ಆದರೆ ನೀವು ಆತನ ಮಕ್ಕಳಾಗಿರುವಿರಿ ಕೆಲಸಗಾರರಂತೆ ಕೂಲಿಗೆ ಕೆಲಸ ಮಾಡದೆ ಮಗನು ಮಗಳು ಎಂಬ ಬಾಧ್ಯತೆಯಿಂದ ನನ್ನ ತಂದೆಯ ಕೆಲಸ, ನನ್ನ ಕೆಲಸವಾಗಿದೆ ಎಂದು ಮುಂದೆ ಬಂದು ಕೆಲಸ ಮಾಡಬೇಕು. ಅದೇ ಪ್ರೀತಿಯ ಮಕ್ಕಳೆಂಬುದಕ್ಕೆ ಗುರುತಾಗಿದೆ. ಉದಾಹರಣೆಯಾಗಿ ನಿಮ್ಮ ತಂದೆ ಸುಡುಬಿಸಿಲಿನಲ್ಲಿ ಒಂಟಿಯಾಗಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನೀವು ನೆರಳಿನಲ್ಲಿ ನಿಂತು ತಂದೆ ಕೆಲಸಕ್ಕೆ ಕರೆದರೆ ಹೋಗೋಣ ಎಂದು ಹೇಳುವಿರಾದರೆ ನೀವು ತಪ್ಪಿತಸ್ಥರಾಗಿ ಕಾಣಲ್ಪಡುವಿರಿ. ಮಕ್ಕಳು ಕರೆಯದೆಯೇ ತಂದೆಯ ಕೆಲಸದಲ್ಲಿ ಭಾಗಿಗಳಾಗಬೇಕು. ಕರ್ತನು ಯಾರನ್ನೂ ಸೇವೆಗೆ ಕರೆಯುವ ಅವಶ್ಯಕತೆ ಇಲ್ಲ. ನೀವು ಮಕ್ಕಳಾಗಿದ್ದರೆ, ಸ್ವತಂತ್ರರು, ತಂದೆಯ ಕೆಲಸವನ್ನು ಬಾಧ್ಯತೆಯಿಂದ ಮಾಡಬೇಕು. ತಂದೆಯ ಮೇಲಿನ ಪ್ರೀತಿ ನಿಮ್ಮನ್ನು ಉತ್ಸಾಹ ಪಡಿಸುವದು. ನೀನು ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ? ಎಂದು ಯೇಸು ಪೇತ್ರನನ್ನು ಮೂರು ಸಾರಿ ಕೇಳಿದ ಮೇಲೆ ನನ್ನ ಕುರಿಗಳನ್ನು ಮೇಯಿಸು ಎಂದು ಹೇಳಿದನು. (ಯೋಹಾ.21:15-17).

ದೇವಮಕ್ಕಳೇ, ನಿಮ್ಮ ಸಣ್ಣಪ್ರಾಯದಲ್ಲೇ ನಿಮ್ಮನ್ನು ಕರ್ತನಿಗೆಂದು ಒಪ್ಪಿಸಿಕೊಡಿರಿ. ಯೋಸೇಫನು ತನ್ನ ಹದಿನೇಳನೆಯ ವಯಸ್ಸಿನಲ್ಲಿ ತನ್ನ ಕರ್ತವ್ಯವನ್ನೂ ಬಾಧ್ಯತೆಯನ್ನು ಅರಿತಂತೆ ತಂದೆ ದೇವರ ಬಗ್ಗೆ ನಿಮ್ಮ ಕರ್ತವ್ಯವನ್ನೂ ಬಾಧ್ಯತೆಯನ್ನೂ ಅರಿತುಕೊಳ್ಳಿರಿ.

_*ನೆನಪಿಗೆ*_ : _ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವಕ ಸೈನಿಕರು ಉದಯ ಕಾಲದ ಇಬ್ಬನಿಯಂತಿರುವರು. (ಕೀರ್ತ:110:3)_

👁‍🗨 Watch and be Blessed.
https://youtu.be/SS-7Aza_bHc

To watch FULL Joseph Series 👇
https://www.youtube.com/playlist?list=PL7he8lEWSbPdz9LasfCCiO9eV5kNS2vEE

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜೂನ್ *4*, 2026, 🗓 ಗುರುವಾರ👉🏼 *ಕುಟುಂಬ ಸನ್ನಿವೇಶಗಳು!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *2 ಪೂ.ವೃ.21,22*ಸಂಜೆ: *ಯ...
04/06/2026

📖 *ಅನುದಿನದ ಆಹಾರ*
⏰ ಜೂನ್ *4*, 2026,
🗓 ಗುರುವಾರ

👉🏼 *ಕುಟುಂಬ ಸನ್ನಿವೇಶಗಳು!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *2 ಪೂ.ವೃ.21,22*
ಸಂಜೆ: *ಯೋಹಾನ 14*

_*ಯೋಸೇಫನು ಹದಿನೇಳು ವರ್ಷದವನಾಗಿ ತನ್ನ ಅಣ್ಣಂದಿರ ಜೊತೆಯಲ್ಲಿ ಆಡು ಕುರಿಗಳನ್ನು ಮೇಯಿಸುತ್ತಿದ್ದನು. ಅವರು ಏನಾದರೂ ಕೆಟ್ಟ ಕೆಲಸಮಾಡುವಾಗಲೆಲ್ಲಾ ಅವನು ತಂದೆಗೆ ತಿಳಿಸುತ್ತಿದ್ದನು. (ಆದಿ.37:2)*_

ಯೋಸೇಫನು ಬೆಳೆದ ಸನ್ನಿವೇಶಗಳನ್ನು ಅವನ ಕುಟುಂಬದ ಹಿನ್ನೆಲೆಯನ್ನೂ ಸ್ವಲ್ಪ ಆಲೋಚಿಸಿರಿ ಹನ್ನೆರಡು ಮಕ್ಕಳ ಮಧ್ಯದಲ್ಲಿ ಯೋಸೇಫನು ಬೆಳೆಯುವಾಗ ಎಷ್ಟೋ ತೊಂದರೆಗಳು ಎಷ್ಟೊಂದು ಹೊಟ್ಟೆ ಕಿಚ್ಚು ಹಗೆ ಅವುಗಳ ಮಧ್ಯದಲ್ಲಿಯೂ ಯೋಸೇಫನು ತನ್ನನ್ನೂ, ತನ್ನ ಪರಿಶುದ್ಧತೆಯನ್ನು ಕಾಯ್ದುಕೊಂಡು ಉತ್ತಮನಾಗಿ ಜೀವಿಸಿದ್ದು ದೇವರ ಕೃಪೆಯಲ್ಲವೇ?

ಯೋಸೇಫನ ತಂದೆ ಮೋಸಗಾರನು ಎಂದು ಕರೆಯಲ್ಪಟ್ಟವನು. ಆಶೀರ್ವಾದಕ್ಕಾಗಿ ತನ್ನ ತಂದೆಯನ್ನು ಮೋಸ ಪಡಿಸಿದವನು, ಜ್ಯೇಷ್ಠಪುತ್ರನ ಭಾಗಕ್ಕಾಗಿ ತನ್ನ ಸ್ವಂತ ಸಹೋದರನನ್ನು ತಂತ್ರವಾಗಿ ನಡೆಸಿಕೊಂಡವನು, ತನ್ನ ಮಾವನಾದ ಲಾಬಾನನನ್ನೂ ವಂಚಿಸಿ ತನ್ನ ಮಂದೆಯನ್ನು ವೃದ್ಧಿಪಡಿಸಿಕೊಂಡವನು. ಅಂತಹ ತಂದೆಗೆ ಮಗನಾಗಿ ಹುಟ್ಟಿದ್ದರೂ ಯೋಸೇಫನಲ್ಲಿ ಯಾವದೇ ರೀತಿಯ ವಂಚನೆಯೋ, ತಂತ್ರವೋ ಇಲ್ಲ. ಯೋಸೇಫನ ತಾಯಿಯಾದ ರಾಹೇಲಳು ಎಂಥವಳು? ವಿಗ್ರಹಾರಾಧನೆ ಅವಳ ಹೃದಯದಲ್ಲಿ ಅವಿತುಕೊಂಡಿತ್ತು. ತನ್ನ ತಂದೆಯಾದ ಲಾಬಾನನ ಮನೆಯಲ್ಲಿದ್ದ ವಿಗ್ರಹಗಳನ್ನು ರಹಸ್ಯವಾಗಿ ಕದ್ದುಕೊಂಡು ಬಂದಳು. ಅವುಗಳನ್ನು ಒಂಟೆಯ ಸಬರದೊಳಗಿಟ್ಟು ಅವುಗಳ ಮೇಲೆ ಕೂತು ತಾನು ಮುಟ್ಟಿನಿಂದ ಅಶುದ್ಧಳಾಗಿದ್ದೇನೆ ಎಂದು ತಂದೆಯ ಮುಂದೆ ಸುಳ್ಳು ಹೇಳಿದವಳು. ಆದರೆ ಯೋಸೇಫನಾದರೋ ವಿಗ್ರಹ ಆರಾಧನೆಗೂ ಸುಳ್ಳಿನ ನಾಲಗೆಗೂ ತನ್ನನ್ನು ತಪ್ಪಿಸಿ ಕಾಪಾಡಿಕೊಂಡನು. ಜ್ಯೇಷ್ಠ ಸಹೋದರನಾದ ರೂಬೇನನು ತಂದೆ ಹಾಸಿಗೆಯನ್ನು ಹತ್ತಿ ಹೊಲೆಮಾಡಿದವನು (ಆದಿ.49:4). ಸಿಮೆಯೋನನ್ನೂ ಲೇವಿಯನೂ ಕಠೋರ ಹೃದಯವಳ್ಳವರು (ಆದಿ.49:5). ಅವನ ಮಲತಾಯಿಯರಾದ ಬಿಲ್ಹಾ, ಜಿಲ್ಫಾರ ಮಕ್ಕಳು ದುರ್ಮಾರ್ಗಿಗಳಾಗಿದ್ದರು. (ಆದಿ.37:2). ಆದರೆ ಯೋಸೇಫನು ಪರಿಶುದ್ಧನಾಗಿ ಉತ್ತಮನಾಗಿ ನಡೆದುಕೊಳ್ಳಲು ಅವನು ಬೆಳೆದ ವಾತಾವರಣವಾಗಲಿ, ಕುಟುಂಬದ ಹಿನ್ನೆಲೆಯಾಗಲಿ ತಡೆಯಾಗಲಿಲ್ಲ ಅವನ ಮೇಲೆ ದೇವರ ಕೃಪೆ ಇದ್ದಿತು. ದೇವರು ಅವನ ಸಂಗಡ ಇದ್ದುದರಿಂದ ಬೇಗನೆ ಉನ್ನತಿಗೆ ಬಂದನು.

ದೇವಮಕ್ಕಳೇ, ದೇವಕೃಪೆ, ನೀವು ಒಳ್ಳೆಯ ಸನ್ನಿವೇಶದಲ್ಲಿ ವಾತಾವರಣದಲ್ಲಿರುವಿರಾ? ಎಂದು ನೋಡಿ ನಿಮ್ಮನ್ನು ಹುಡುಕಿ ಬರುವದಿಲ್ಲ. ಕರ್ತನೇ ಪರಿಶುದ್ಧವಾಗಿ ಜೀವಿಸಲು ನನಗೆ ಕಲಿಸಿಕೊಡು ಎಂದು ಯಥಾರ್ಥವಾಗಿ ಪ್ರಾರ್ಥಿಸುವಿರಾದರೆ, ದೇವರ ಕೃಪೆ ದೈವೀಕ ಗುಣಗಳು ನಿಮ್ಮಲ್ಲಿ ಉಂಟಾಗುವವು.

_*ನೆನಪಿಗೆ*_ : _ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನೆಂದು ತೋರಿ ಬಂದೀತು. ನೀನು ಶುದ್ಧನಾಗಿರುವ ಹಾಗೆ ನೋಡಿಕೋ. (1ತಿಮೊ.5:22)._

👁️‍🗨️ Watch and be Blessed.
https://youtu.be/UdAMs3nBvLI?si=Ti5jkc2h6LP28E-9

👍 Like | 🔄 Share
🔔 Subscribe
💬 Share with your friends! 😇

ಕನ್ನಡದಲ್ಲಿ ನಿಮ್ಮ ಆತ್ಮಕ್ಕೆ ಪ್ರತಿದಿನ ನೀಡುವ ಆಧ್ಯಾತ್ಮಿಕ ಆಹಾರಕ್ಕಾಗಿ
👉🏼 ನಮ್ಮ GBTgospel ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

👁️‍🗨️ Subscribe to our YouTube channel
https://www.youtube.com/

03/06/2026

📌 ಯೋಸೇಫನ ಚರಿತ್ರೆ - ಭಾಗ 2
ಪ್ರಿಯನಾದ ಮಗನು!

ಯೋಸೇಫನ ಜೀವನದಲ್ಲಿ ನಾವು ಯೇಸು ಕ್ರಿಸ್ತನ ಜೀವನದ ಅನೇಕ ಸಾಮ್ಯತೆಗಳನ್ನು ಕಾಣುತ್ತೇವೆ. ಮನುಷ್ಯರಿಂದ ತಿರಸ್ಕರಿಸಲ್ಪಟ್ಟರೂ, ದೇವರಿಂದ ಪ್ರಿಯನಾದವನಾಗಿ ಯೋಸೇಫನು ಎತ್ತಲ್ಪಟ್ಟನು.

ಈ ಚಿಕ್ಕ ಸಂದೇಶವನ್ನು ನೋಡಿ ಆಶೀರ್ವಾದ ಪಡೆಯಿರಿ 👇
https://youtu.be/Pgjd2IpQUCY

To watch FULL Joseph Series 👇
https://www.youtube.com/playlist?list=PL7he8lEWSbPdz9LasfCCiO9eV5kNS2vEE

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

ಅನುದಿನದ ಆಹಾರ📅  ಜೂನ್ *3*, 2026 - ಬುಧವಾರ📌 ಇನ್ನೊಂದು ಮಗನು!ಇಂದಿನ ಸತ್ಯವೇದ ಓದುವ ಭಾಗಬೆಳಿಗ್ಗೆ: 2 ಪೂ.ವೃ. 19,20ಸಂಜೆ: ಯೋಹಾನ 13:21-38...
03/06/2026

ಅನುದಿನದ ಆಹಾರ
📅 ಜೂನ್ *3*, 2026 - ಬುಧವಾರ

📌 ಇನ್ನೊಂದು ಮಗನು!

ಇಂದಿನ ಸತ್ಯವೇದ ಓದುವ ಭಾಗ
ಬೆಳಿಗ್ಗೆ: 2 ಪೂ.ವೃ. 19,20
ಸಂಜೆ: ಯೋಹಾನ 13:21-38

ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನೆ, ಯೆಹೋವನು ನನಗೆ ಇನ್ನೊಂದು ಗಂಡು ಮಗನನ್ನು ದಯಪಾಲಿಸಬೇಕೆಂದು ಅದಕ್ಕೆ ಯೋಸೇಫನೆಂದು ಹೆಸರಿಟ್ಟಳು. (ಆದಿ.30:23-24)

ಯೋಸೇಫನ ತಾಯಿ ರಾಹೇಲಳಿಗೆ ನಂಬಿಕೆ ಕಡಿಮೆಯಾಗಿತ್ತು ಅವಳ ಜೀವಿತ ಕಾಲದಲ್ಲೆಲ್ಲಾ ದೇವರ ಕುರಿತು ಮಾತನಾಡಿದ್ದು ಇಲ್ಲಿ ಮಾತ್ರವೇ. ಕರ್ತನು ನನಗೆ ಅನೇಕ ಮಕ್ಕಳನ್ನು ಕೊಡುವನು ಎಂಬ ನಂಬಿಕೆ ಅವಳಿಗಿರಲಿಲ್ಲ. ಇನ್ನು ಒಂದೇ ಮಗನನ್ನು ನಿರೀಕ್ಷಿಸಿದಳು. ಅದರಂತೆಯೇ ಇನ್ನೊಬ್ಬ ಮಗನನ್ನು ಹೆತ್ತು ತೀರಿಕೊಂಡಳು. ಕರ್ತನು ಅನೇಕ ಮಕ್ಕಳನ್ನು ಕೊಡುತ್ತಾನೆ ಎಂಬ ನಂಬಿಕೆಯ ಮಾತುಗಳನ್ನಾಡಿ ಹರಕೆ ಹೊತ್ತಿದ್ದಿದ್ದರೆ ನಿಶ್ಚಯವಾಗಿ ಕರ್ತನು ಅದನ್ನು ಘನಪಡಿಸುತ್ತಿದ್ದನು.

ಇಂದು ನೀವು ದೇವರ ಆಶೀರ್ವಾದಗಳನ್ನು ಹೇಗೆ ನೋಡುವಿರಿ? ದೇವರ ಆಶೀರ್ವಾದವು, ಪ್ರವಾದಿಯು ವಿಧವೆಯ ಮನೆಯಲ್ಲಿದ್ದ ಎಣ್ಣೆ ತುಂಬಿದ ಪಾತ್ರೆಗೆ ಸಮನಾಗಿರುವನು. ಆ ಪಾತ್ರೆಯಲ್ಲಿದ್ದ ಎಣ್ಣೆಯನ್ನು ಇತರ ಪಾತ್ರೆಗಳಲ್ಲಿ ತುಂಬಿಸಿದಂತೆಲ್ಲಾ ಹೆಚ್ಚಾಗುತ್ತಲೇ ಇತ್ತು. ನೀವು ಕರ್ತನ ಆಶೀರ್ವಾದಗಳನ್ನು ಸೀಮಿತಗೊಳಿಸಬೇಡಿರಿ, ಕರ್ತನು ನಿಮ್ಮನ್ನು ಆಶೀರ್ವದಿಸಿ ವೃದ್ಧಿಮಾಡುವನು. ಆಕಾಶದ ನಕ್ಷತ್ರಗಳಂತೆಯೇ ಸಮುದ್ರ ದಂಡೆಯ ಮರಳಿನಂತೆಯೂ ವೃದ್ಧಿಪಡಿಸಲು ಶಕ್ತನಾಗಿರುವಾಗ, ನೀವು ಯಾಕೆ ಕೊರತೆಯುಳ್ಳವರಾಗಿರಬೇಕು? ಕರ್ತನು ಐದು ರೊಟ್ಟಿ ಎರಡು ಮೀನನ್ನು ಐದು ಸಾವಿರ ಜನರಿಗೆ ಉಣಬಡಿಸಿದನಲ್ಲವೇ? ಕಾನಾ ಊರಿನ ಮದುವೆಮನೆಯಲ್ಲಿ ದ್ರಾಕ್ಷಾರಸದ ಕೊರತೆಯನ್ನು ನೀಗಿಸಿದನಲ್ಲವೇ? ಕರ್ತನು ನಿಮ್ಮನ್ನು ಹೆಚ್ಚಿಸುವನು. ಯೋಸೇಫನು ಬಾಲ್ಯದಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡನು. ಆದರೂ ಕರ್ತನ ಪ್ರೀತಿಯನ್ನು ಗಳಿಸಿದನು. ಕರ್ತನನ್ನು ಮೆಚ್ಚಿಸಲು ತೀರ್ಮಾನಿಸಿದನು. ಆದ್ದರಿಂದಲೇ ಕರ್ತನು ಅವನ ಭವಿಷ್ಯ ಕಾಲದ ಬಗ್ಗೆ ದರ್ಶನಗಳನ್ನು ಕೊಟ್ಟನು. ಕನಸುಗಳ ಮೂಲಕ ತಿಳಿಸಿದನು. ಕರ್ತನು ತಾಯಿಯಾಗಿಯೂ ತಂದೆಯಾಗಿಯೂ ಇದ್ದನು. ಆತನ ಹೆಸರು ಎಲ್‍ಷಡಾಯ್ ಎಂಬುದೇ.

ದೇವಮಕ್ಕಳೇ, ನಿಮಗೆ ತಂದೆ ತಾಯಿಯರ ಪ್ರೀತಿ ಸಿಗಲಿಲ್ಲವಾ? ಕರ್ತನನ್ನೇ ಆಶ್ರಯಿಸಿರಿ, ಆತನೇ ನಿಮಗೆ ತಂದೆಯೂ ತಾಯಿಯೂ ಆಗಿರುವನು. ತಾಯಿ ಹೆತ್ತಮಗುವಿನ ಮೇಲೆ ಕರುಣೆ ಇಡದೆ ತನ್ನ ಮೊಲೆ ಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ (ಯೆಶಾ.49:15) ಎಂದು ಕರ್ತನು ಹೇಳುತ್ತಾನೆ. ಪ್ರಿಯರೇ, ಕರ್ತನ ಬಳಿಗೆ ಬನ್ನಿರಿ. ನಿಮ್ಮನ್ನು ಆಶೀರ್ವದಿಸಲು ಬಯಸುವನು ನಿಮ್ಮನ್ನು ದ್ರಾಕ್ಷೆ ಬಳ್ಳಿಗಳನ್ನಾಗಿ ನಿಲ್ಲಿಸಲು ತೀರ್ಮಾನಿಸಿರುವನು.

ನೆನಪಿಗೆ : ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು. (ಯೆಶಾ.66:13)

👁️‍🗨️ Watch and be Blessed.
https://youtu.be/kg6-NzC0H-8?si=kI5kdScElvfspEER

👍 Like | 🔄 Share
🔔 Subscribe
💬 Share with your friends! 😇

ಕನ್ನಡದಲ್ಲಿ ನಿಮ್ಮ ಆತ್ಮಕ್ಕೆ ಪ್ರತಿದಿನ ನೀಡುವ ಆಧ್ಯಾತ್ಮಿಕ ಆಹಾರಕ್ಕಾಗಿ
👉🏼 ನಮ್ಮ GBTgospel ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

👁️‍🗨️ Subscribe to our YouTube channel
https://www.youtube.com/

📖 *ಅನುದಿನದ ಆಹಾರ*⏰ ಜೂನ್ *2*, 2026, 🗓 ಮಂಗಳವಾರ👉🏼 *ಪ್ರಿಯನಾದ ಮಗನು!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *2 ಪೂ.ವೃ.17,18*ಸಂಜೆ: *ಯೋಹಾನ ...
02/06/2026

📖 *ಅನುದಿನದ ಆಹಾರ*
⏰ ಜೂನ್ *2*, 2026,
🗓 ಮಂಗಳವಾರ

👉🏼 *ಪ್ರಿಯನಾದ ಮಗನು!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *2 ಪೂ.ವೃ.17,18*
ಸಂಜೆ: *ಯೋಹಾನ 13:1-20*

_*ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾದ್ದರಿಂದ ಇಸ್ರಾಯೇಲನು ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು. (ಆದಿ.37:3)*_

ಯೋಸೇಫನು ತನ್ನ ತಂದೆಗೆ ಪ್ರಿಯನಾದ ಮಗನಾಗಿದ್ದನು. ತಂದೆಯಾದ ಯಾಕೋಬನು ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಹಾಗೆಯೇ, ಯೇಸುಕ್ರಿಸ್ತನನ್ನು ತಂದೆಯಾದ ದೇವರು ಬಹಳವಾಗಿ ಪ್ರೀತಿಸುತ್ತಿದ್ದನು. ಯೇಸು ಯೊರ್ದನ್ ಹೊಳೆಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡು ದಡಕ್ಕೆ ಏರಿ ಬಂದಾಗ ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ದೈವವಾಣಿಯಾಯಿತು. (ಮತ್ತಾ.3:17). ರೂಪಾಂತರ ಬೆಟ್ಟದಲ್ಲಿಯೂ ಸಹ ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ ಎಂದು ದೈವವಾಣಿಯಾಯಿತು. (ಮತ್ತಾ.17:5).

ಯೋಸೇಫನ ಚರಿತ್ರೆಯನ್ನು ಓದುವಾಗೆಲ್ಲಾ ಯೋಸೇಫನ ಗುಣಾತಿಶಯಗಳೂ, ಯೇಸುವಿನ ಗುಣಾತಿಶಯಗಳೂ, ಎಲ್ಲಾ ರೀತಿಯಲ್ಲೂ ಒಂದೇ ರೀತಿಯಾಗಿರುವದನ್ನು ಕಾಣುತ್ತೇವೆ. ಯೋಸೇಫನು ಯೇಸುಕ್ರಿಸ್ತನಿಗೆ ಮುನ್ಸೂಚನೆಯಾಗಿದ್ದನೆಂಬುದನ್ನು ತಿಳಿಯುತ್ತೇವೆ. ನಿಮ್ಮ ಜೀವಿತವೂ ಕ್ರಿಸ್ತನ ಜೀವಿತದಂತೆ ಮಾರ್ಪಡಬೇಕು. ನಿಮ್ಮನ್ನು ನೋಡುವವರು ನಿಮ್ಮಲ್ಲಿ ಕ್ರಿಸ್ತನನ್ನು ಕಾಣಬೇಕು. ಯೋಸೇಫನ ಸಹೋದರರು ಅವನನ್ನು ದ್ವೇಷಿಸುತ್ತಿದ್ದರು. ಅದರಂತೆಯೇ ಯೇಸುಕ್ರಿಸ್ತನನ್ನು ಸ್ವಂತದವರೇ ಅಂಗೀಕರಿಸಲಿಲ್ಲ. ಫರಿಸಾಯರು, ಸದ್ದುಕಾಯರು ಎಡೆಬಿಡದೆ ಆತನ ಮೇಲೆ ತಪ್ಪು ಹೊರಿಸುತ್ತಲೇ ಇದ್ದರು. ಯೋಸೇಫನನ್ನು ಹಾಳು ಬಾವಿಯಲ್ಲಿ ತಳ್ಳುವಾಗ ಅವನ ವಸ್ತ್ರಗಳನ್ನೆಲ್ಲಾ ಬಿಚ್ಚಿದರು. ಅದರಂತೆಯೇ ಯೇಸುಕ್ರಿಸ್ತನನ್ನು ಶಿಲುಬೆಗೆ ಹಾಕುವಾಗ ಮೊದಲು ಆತನ ವಸ್ತ್ರಗಳನ್ನು ಬಿಚ್ಚಿ ಚೀಟು ಹಾಕಿ ಹಂಚಿಕೊಂಡರು. ಯೋಸೇಫನ ಸಹೋದರರು ಅವನನ್ನು ಮಿದ್ಯಾನ್ಯರಿಗೆ ಇಪ್ಪತ್ತು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟನು. ಯೇಸುವನ್ನು ಆತನ ಶಿಷ್ಯನಾದ ಇಸ್ಕರಿಯೋತ ಯೂದನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಮಾರಿದನು.

ಯೋಸೇಫನು ತನ್ನ ಮೂವತ್ತನೇ ವಯಸ್ಸಿನಲ್ಲಿ ಸೆರೆಮನೆಯಿಂದ ಫರೋಹನ ಅರಮನೆಗೆ ಎತ್ತಲ್ಪಟ್ಟನು. ಯೇಸುಕ್ರಿಸ್ತನು ತನ್ನ ಮೂವತ್ತನೇ ವಯಸ್ಸಿನಲ್ಲಿ ಸೇವೆಯಲ್ಲಿ ಎತ್ತಲ್ಪಟ್ಟನು. ಕೊನೆಯಲ್ಲಿ ಯೋಸೇಫನು ತನ್ನನ್ನು ತನ್ನ ಸಹೋದರರಿಗೆ ಪ್ರಕಟಿಸಿಕೊಂಡು, ಅವರನ್ನು ತಾನಿದ್ದಲ್ಲಿಗೆ ಕರೆಸಿಕೊಂಡನು. ಯೇಸುವೂ ಕೂಡ ಪರಲೋಕಕ್ಕೆ ಏರಿ ಹೋಗಿ, ನಮಗಾಗಿ ಬಿಡಾರಗಳನ್ನು ಸಿದ್ಧಪಡಿಸುವನು. ಆತನು ಪುನಃ ಬಂದು ನಮ್ಮನ್ನು ಆಶೀರ್ವಾದಕರವಾದ ಪರಮ ಕಾನಾನಿಗೆ ಕರೆದೊಯ್ಯುವನು.

_*ನೆನಪಿಗೆ*_ : _ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮನಾಗಿದ್ದಾನೆ. ಒರತೆಯ ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿರುವನು. (ಆದಿ.49:22)._

👁‍🗨 Watch and be Blessed.
https://youtu.be/Pgjd2IpQUCY

👍 *Like* | 🔄 *Share*
🔔 *Subscribe*
💬 *Share with your friends!* 😇

ಕನ್ನಡ ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
👉🏼 ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

👁‍🗨 Subscribe to our YouTube channel
https://www.youtube.com/

01/06/2026

Joseph Series 01 - Joseph Intro | ಅನುದಿನದ ಆಹಾರ | Daily Devotion | Short Bible Message part 7

01/06/2026

Joseph Series 01 - Joseph Intro | ಅನುದಿನದ ಆಹಾರ | Daily Devotion | Short Bible Message part 5

01/06/2026

Joseph Series 01 - Joseph Intro | ಅನುದಿನದ ಆಹಾರ | Daily Devotion | Short Bible Message part 4

Address

1, 24th Cross Dead End, Ejipura
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 3pm - 5pm

Telephone

+91 80 25712448

Alerts

Be the first to know and let us send you an email when Anudhinada Ahara - ಅನುದಿನದ ಆಹಾರ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Anudhinada Ahara - ಅನುದಿನದ ಆಹಾರ:

Share