Anudhinada Ahara - ಅನುದಿನದ ಆಹಾರ

Anudhinada Ahara - ಅನುದಿನದ ಆಹಾರ Through this Daily Bread in Kannada, this magazine is ordained by God our Saviour to Send the Good News of Life to the People Of Karnataka. Monthly Magazine

ಅನುದಿನದ ಆಹಾರ📅  ಆಗಸ್ಟ್ *2*, 2026 - ಭಾನುವಾರ📌 ಬೇಡಿದಂತೆಯೇ!       ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ. (1ಸಮು1:2...
02/08/2026

ಅನುದಿನದ ಆಹಾರ
📅 ಆಗಸ್ಟ್ *2*, 2026 - ಭಾನುವಾರ

📌 ಬೇಡಿದಂತೆಯೇ!

ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ. (1ಸಮು1:27)

ಸತ್ಯವೇದದಲ್ಲಿ ಮಕ್ಕಳಿಲ್ಲದ ಸಮಸ್ಯೆ ಮೊದಲು ಅಬ್ರಹಾಮ ಮತ್ತು ಸಾರಾಳಿಗೆ ಬಂದಿತು. ಆ ಕಾಲದಲ್ಲಿ ಬಂಜೆತನ ಶಾಪವೆಂದು ಜನರು ಪರಿಗಣಿಸಿದ್ದರು. ಕುಟುಂಬದ ಮಧ್ಯದಲ್ಲಿ ಅದು ನಿಂದೆ, ಅವಮಾನಗಳಿಗೆ ಕಾರಣವಾಗಿತ್ತು. ಕರ್ತನಾದರೋ ನೀವು ಹಬ್ಬಿ, ಹೆಚ್ಚಿ, ಭೂಮಿಯನ್ನು ತುಂಬಿರಿ ಎಂದು ವಾಗ್ದಾನ ಮಾಡಿರುವನು.

ನ್ಯಾಯಾಧಿಪತಿಗಳ ಕಾಲದಲ್ಲಿ ಮಾನೋಹನಿಗೂ ಅವನ ಹೆಂಡತಿಗೂ ಮಕ್ಕಳಿರಲಿಲ್ಲ. (ನ್ಯಾಯ.13:2). ಆಗ ದೇವದೂತನು ಮಾನೋಹನ ಹೆಂಡತಿಯ ಬಳಿ “ಇಗೋ ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನ್ನು ಹೆರುವಿ” ಎಂದು ಹೇಳಿದನು. (ನ್ಯಾಯ.13:3). ಎಲ್ಕಾನನಿಗೂ ಹನ್ನಳಿಗೂ ಮಕ್ಕಳಿರಲಿಲ್ಲ, ಹನ್ನಳು ಕರ್ತನಲ್ಲಿ ಹೋರಾಡಿ, ಪ್ರಾರ್ಥಿಸಿ ಮಗುವನ್ನು ಪಡೆಯಲು ದೇವಾಲಯಕ್ಕೆ ಬಂದಳು. ಬಹಳವಾಗಿ ಮನನೊಂದು ಅತ್ತು ಪ್ರಾರ್ಥಿಸಿ ಸಮುವೇಲನನ್ನು ಪಡೆದಳು. ಅವನನ್ನು ದೇವರಿಗಾಗಿ ಪ್ರತಿಷ್ಠೆಪಡಿಸಿದಳು. ಕರ್ತನು ಅವಳ ಕಾರ್ಯವನ್ನು ಕಂಡು ಇನ್ನೂ ಐದು ಮಕ್ಕಳನ್ನು ಅನುಗ್ರಹಿಸಿದನು. ದಾವೀದನನ್ನು ನಿಂದಿಸಿದ್ದರ ನಿಮಿತ್ತ ಅವನ ಹೆಂಡತಿಯಾದ ಮೀಕಳಿಗೆ ದಾವೀದನ ಮೂಲಕ ಮಕ್ಕಳಾಗಲೇ ಇಲ್ಲ. ಶೂನೇಮ್ಯಳು ಪ್ರವಾದಿಯಾದ ಎಲೀಷನನ್ನು ಸತ್ಕರಿಸಿದ ನಿಮಿತ್ತ ಕರ್ತನು ಅವಳಿಗೆ ಒಂದು ಮಗುವನ್ನು ದಯಪಾಲಿಸಿದನು. ಹೊಸ ಒಡಂಬಡಿಕೆಗೆ ಬರುವಾಗ ಜಕರಿಯ ಮತ್ತು ಎಲಿಜಬೇತಳಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಮುಪ್ಪಡರಿತು, ಆಗ ಕರ್ತನ ದೂತನು ಪ್ರತ್ಯಕ್ಷನಾಗಿ, ಸ್ನಾನಿಕನಾದ ಯೋಹಾನನ ಜನನವನ್ನು ಅವರಿಗೆ ತಿಳಿಸಿದನು. ಬಂಜೆಯಾದ ತನ್ನ ಹೆಂಡತಿಗಾಗಿ ಇಸಾಕನು ಕರ್ತನಲ್ಲಿ ಬೇಡಿದನೆಂದು ಆದಿ.25:21ರಲ್ಲಿ ಓದುತ್ತೇವೆ. ಕೆಲವು ಭಾಷಾಂತರಗಳಲ್ಲಿ ತನ್ನ ಹೆಂಡತಿಯೊಡನೆ ಇಸಾಕನು ಕರ್ತನನ್ನು ಬೇಡಿದನು ಎಂದು ಬರೆಯಲ್ಪಟ್ಟಿದೆ. ಇಸಾಕನು ಹೆಂಡತಿಯೊಂದಿಗೆ ಸೇರಿ ಪ್ರಾರ್ಥಿಸಿದನು. ಇದೇ ಒಂದು ಮನಸ್ಸಿನ ಪ್ರಾರ್ಥನೆ.

ದೇವಮಕ್ಕಳೇ, ನಿಮ್ಮ ಅಗತ್ಯತೆಗಳನ್ನು ಕರ್ತನಿಗೆ ತಿಳಿಯಪಡಿಸಿ, ಅದಕ್ಕಾಗಿ ಭಾರದಿಂದ ಪ್ರಾರ್ಥಿಸುವಾಗ, ನಿಶ್ಚಯವಾಗಿ ಕರ್ತನು ನಿಮಗೆ ಸದುತ್ತರವನ್ನು ದಯಪಾಲಿಸುವನು. ಅಷ್ಟು ಮಾತ್ರವಲ್ಲ ಕುಟುಂಬವಾಗಿ ಪ್ರಾರ್ಥಿಸುವಾಗ ಪ್ರಾರ್ಥನೆಯ ಬಲ ಅಧಿಕವಾಗಿರುವದು.

- - - - - - - -

Subscribe to our YouTube Channel

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

ಅನುದಿನದ ಆಹಾರ📅  ಆಗಸ್ಟ್ *1*, 2026 - ಶನಿವಾರ📌 ಗರ್ಭದಲ್ಲಿ ನೂಕಾಟ!       ಆಕೆ ಬಂಜೆಯಾಗಿರಲಾಗಿ ಅವನು ಆಕೆಗೋಸ್ಕರ ಕರ್ತನನ್ನು ಬೇಡಿಕೊಂಡನು ಕ...
01/08/2026

ಅನುದಿನದ ಆಹಾರ
📅 ಆಗಸ್ಟ್ *1*, 2026 - ಶನಿವಾರ

📌 ಗರ್ಭದಲ್ಲಿ ನೂಕಾಟ!

ಆಕೆ ಬಂಜೆಯಾಗಿರಲಾಗಿ ಅವನು ಆಕೆಗೋಸ್ಕರ ಕರ್ತನನ್ನು ಬೇಡಿಕೊಂಡನು ಕರ್ತನು ಅವನ ವಿಜ್ಞಾಪನೆಯನ್ನು ಲಾಲಿಸಿದ್ದರಿಂದ ರೆಬೆಕ್ಕಳು ಬಸುರಾದಳು. ಆಕೆಯ ಗರ್ಭದಲ್ಲಿ ಶಿಶುಗಳು ಒಂದಕ್ಕೊಂದು ನೂಕಿಕೊಂಡಾಗ... (ಆದಿ.25:21,22).

ಕರ್ತನ ಚಿತ್ತವಾದರೆ ಈ ತಿಂಗಳು “ಗರ್ಭದಲ್ಲಿ ನೂಕಾಟ” ಎಂಬ ಶಿರೋನಾಮದಲ್ಲಿ ಸತ್ಯವೇದ ವಾಕ್ಯಗಳನ್ನು ಆಳವಾಗಿ ಧ್ಯಾನಿಸಲಿರುವ ಇದು ನಿಮ್ಮ ಜೀವಿತದಲ್ಲಿ ಬರುವ ಎಲ್ಲಾ ಹೋರಾಟಗಳಲ್ಲಿ ಜಯ ಪಡೆಯಲು ಸಹಾಯವಾಗಿರುವದು. ಸತ್ಯವೇದದಲ್ಲಿರುವ ಆಳವಾದ ಸತ್ಯಗಳನ್ನು ಅರಿತುಕೊಳ್ಳುವಿರಿ.

ಬಂಜೆಯಾದ ತನ್ನ ಹೆಂಡತಿಗಾಗಿ ಇಸಾಕನು ಕರ್ತನನ್ನು ಬೇಡಿಕೊಂಡನು. ಇಸಾಕನಿಗೆ ನಾಲ್ವತ್ತು ವರ್ಷವಾದಾಗ ವಿವಾಹವಾಯಿತು. ಸುಮಾರು ಇಪ್ಪತ್ತು ವರ್ಷಗಳು ಕಳೆದು ಹೋದವು, ಇಸಾಕನಿಗೆ ಅರವತ್ತು ವರ್ಷಗಳು, ಅಬ್ರಹಾಮನಿಗೆ ನೂರ ಅರವತ್ತು ವರ್ಷಗಳು. (ಅಬ್ರಹಾಮ ನೂರ ಎಪ್ಪತ್ತೈದು ವರ್ಷಗಳು ಬದುಕಿದ್ದನು). ಇಸಾಕನಲ್ಲಿ ನಿನ್ನ ಸಂತತಿ ಉಂಟಾಗುವದು ಎಂದು ಅಬ್ರಹಾಮನಿಗೆ ಕರ್ತನು ಅನೇಕ ಬಾರಿ ವಾಗ್ದಾನ ಮಾಡಿದ್ದನು. ಆದಾಗ್ಯೂ ಇಸಾಕನಿಗೆ ಮಗುವಿಲ್ಲ. ರೆಬೆಕ್ಕಳು ಇಪ್ಪತ್ತು ವರ್ಷಗಳು ಏಕೆ ಬಂಜೆಯಾಗಿದ್ದಳು? ಕರ್ತನ ವಾಗ್ದಾನ ಏಕೆ ನೆರವೇರಲಿಲ್ಲ? ಕಾರಣವೇನೆಂದರೆ ಇಸಾಕನು ಅಲ್ಲಿಯವರೆಗೆ ಸಂತಾನ ಭಾಗ್ಯಕ್ಕಾಗಿ ಕರ್ತನನ್ನು ಬೇಡಿಕೊಳ್ಳಲಿಲ್ಲ. ಕರ್ತನು ನಿಮಗೆ ವಾಗ್ದಾನ ಮಾಡಿರಬಹುದು. ಆಶೀರ್ವದಿಸುತ್ತೇನೆ ಎಂದು ಹೇಳಿರಬಹುದು. ಆದರೂ ವಾಗ್ದಾನ ನೆರವೇರಲು ಅದಕ್ಕಾಗಿ ನೀವು ಭಾರದಿಂದ ಪ್ರಾರ್ಥಿಸಬೇಕು. ಕರ್ತನ ವಾಗ್ದಾನಗಳು ಎಂದೂ ಬದಲಾಗದು. ಆದರೆ ನಿಮ್ಮ ಕರ್ತವ್ಯವಾಗಿ ಪ್ರಾರ್ಥಿಸುವದು ಬಹಳ ಅವಶ್ಯವಾದದ್ದು. ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ. ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು (ಯೋಹಾ.16:24) ಎಂದು ಯೇಸುಕ್ರಿಸ್ತನು ಹೇಳಿರುವನಲ್ಲವೇ! ಒಂದು ವೇಳೆ ಇಸಾಕನು ಕರ್ತನು ವಾಗ್ದಾನ ಮಾಡಿರುವನಲ್ಲಾ ತಕ್ಕ ವೇಳೆಯಲ್ಲಿ ನೆರವೇರಿಸುವನು ಎಂದು ಸುಮ್ಮನಿರಬಹುದಿತ್ತು. ಆದರೆ ಕರ್ತನಾದರೋ ಇಸಾಕನ ಪ್ರಾರ್ಥನೆಗಾಗಿ ನಿರೀಕ್ಷಿಸುತ್ತಿದ್ದನು. ಇಸಾಕನು ತನ್ನ ಹೆಂಡತಿಗಾಗಿ ಪ್ರಾರ್ಥಿಸಿದಾಗ ಸದುತ್ತರ ನೀಡಿದನು.

ದೇವಮಕ್ಕಳೇ, ನಿಮ್ಮ ವಿಜ್ಞಾಪನೆಗಳನ್ನು ಪ್ರಾರ್ಥನೆಯಿಂದಲೂ ಸ್ತೋತ್ರಗಳಿಂದಲೂ ಕರ್ತನಿಗೆ ಭಿನ್ನವಿಸಿರಿ. ಎಲ್ಲವೂ ತಾನಾಗಿ ನೆರವೇರುವದೆಂದು ಸುಮ್ಮನಿರಬೇಡಿರಿ, ಯಾಕೆಂದರೆ ಸೈತಾನನು ಯಾವಾಗಲೂ ವಾಗ್ದಾನದ ಸಂತತಿಯನ್ನೂ, ವಾಗ್ದಾನ ನೆರವೇರುವದನ್ನೂ ತಡೆ ಮಾಡುತ್ತಿರುವನು. ನಿಮ್ಮ ಪ್ರಾರ್ಥನೆಯೇ ಆ ತಡೆಗಳನ್ನು ನೀಗಿಸುವಂಥದ್ದಾಗಿದೆ. ಕರ್ತನಲ್ಲಿ ನಿಮ್ಮ ವಿಜ್ಞಾಪನೆಗಳನ್ನು ಸಲ್ಲಿಸುತ್ತಾ ಸ್ತೋತ್ರಾದಿಗಳನ್ನು ಅರ್ಪಿಸುತ್ತಾ ಕರ್ತನ ಆಶೀರ್ವಾದಗಳನ್ನು ಹೊಂದಿಕೊಳ್ಳಿರಿ.

- - - - - - - -

Subscribe to our YouTube Channel

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜುಲೈ *30*, 2026, 🗓 ಗುರುವಾರ👉🏼 *ಧೈರ್ಯಗೆಡುವದಿಲ್ಲ!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಕೀರ್ತನೆ 51,52,53*ಸಂಜೆ: *...
30/07/2026

📖 *ಅನುದಿನದ ಆಹಾರ*
⏰ ಜುಲೈ *30*, 2026,
🗓 ಗುರುವಾರ

👉🏼 *ಧೈರ್ಯಗೆಡುವದಿಲ್ಲ!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಕೀರ್ತನೆ 51,52,53*
ಸಂಜೆ: *ರೋಮಾ 2*

_*ಆದುದರಿಂದ ನಾವು ಧೈರ್ಯಗೆಡುವದಿಲ್ಲ (2ಕೊರಿಂ.4:16)*_

ಲೌಕೀಕವಾದ ಜನರು ಸುಲಭವಾಗಿ ಮನಗುಂದಿ ಹೋಗುವರು. ಧೈರ್ಯಗೆಡುವರು. ಕಾರಣವೇನೆಂದರೆ ಅಧೈರ್ಯ ಪಡಿಸುವಂತಹ ಸನ್ನಿವೇಶಗಳು ಬರುವಾಗ ಎಲ್ಲಿ ಆಶ್ರಯ ಹುಡುಕಬೇಕೆಂಬುವದನ್ನು ಅವರು ಅರಿಯರು. ಆದರಣೆಯನ್ನು ಪಡೆದು ಕರ್ತನ ಸಮ್ಮುಖವನ್ನು ಅವರು ತಿಳಿಯದೇ ಇರುವರು.

ಅಧೈರ್ಯದಿಂದ ಕೂಡಿದ ಜನರ ಗುಂಪಿನ ನಡುವೆ ನಿಂತು ಅಪೊ. ಪೌಲನು ನಾವು ಧೈರ್ಯಗೆಡುವದಿಲ್ಲವೆಂದು ಉತ್ಸಾಹದಿಂದ ಹೇಳುತ್ತಾನೆ. 2ಕೊರಿಂಥ4ನೇ ಅಧ್ಯಾಯ 1ನೇ ವಚನದಲ್ಲಿ, ಆದುದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ ಎಂದು ಹೇಳುತ್ತಾನೆ. ನಾವು ಮಹಿಮೆಯಿಂದ ಸೇವೆಯನ್ನು ಮಾಡುವೆವು, ದೇವರ ಕರುಣೆಯನ್ನು ಹೊಂದಿದ್ದೇವೆ. ಆದ್ದರಿಂದ ನಾವು ಧೈರ್ಯಗೆಡುವದಿಲ್ಲ ಎಂದು ಹೇಳುತ್ತಾನೆ. ಆ ಮಹಿಮೆಯಾದ ಸೇವೆ ಯಾವದು? ಕರ್ತನ ಮಹಿಮೆಯನ್ನು ಕನ್ನಡಿಯಲ್ಲಿ ನೋಡುವಂತೆ ನೋಡಿ, ಆತ್ಮನಾಗಿರುವ ಕರ್ತನಿಂದ ಮಹಿಮೆಯ ಮೇಲೆ ಮಹಿಮೆ ಹೊಂದುವಂತೆ ಮಾಡುವ ಸೇವೆ ದೇವರಂತೆ ಮಾರ್ಪಾಟ್ಟು ಮರುರೂಪಗೊಳಿಸುವ ಸೇವೆಯಾಗಿದೆ. ಆ ಘನವಾದ ಸೇವೆ ಮಾಡುವದರಿಂದ ಅವರಲ್ಲಿ ಅಪರಿಮಿತವಾದ ಸಂತೋಷವೂ, ಕೃಪೆಯೂ ತುಂಬಿರುವದು. ಆ ಸೇವೆಯನ್ನು ಮಾಡುವಂತೆ ದೇವರು ನಮಗೆ ಕರುಣೆ ತೋರಿಸಿರುವನು ಇದರಿಂದ ನಾವು ಸೋತು ಹೋಗುವದಿಲ್ಲ.

ಎರಡನೆಯದಾಗಿ, ಅದೇ ಅಧ್ಯಾಯದ 15,16 ವಾಕ್ಯಗಳಲ್ಲಿ ಅವುಗಳಲ್ಲಿ ಅಧಿಕವಾಗಿ ದೊರಕುವ ದೇವಕೃಪೆಯು ಬಹುಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವದರಿಂದ ದೇವರಿಗೆ ಹೆಚ್ಚಾದ ಸ್ತೋತ್ರವನ್ನುಂಟುಮಾಡುವದು. ಆದುದರಿಂದ ನಾವು ಧೈರ್ಯಗೆಡುವದಿಲ್ಲ ಎಂದು ಹೇಳುತ್ತಾನೆ. ಲೌಕೀಕರಾದವರು ಧೈರ್ಯಗೆಡಲು ಸಾವಿರ ಕಾರಣಗಳಿರುವವು. ಆದರೆ ನಾವಾದರೋ ಧೈರ್ಯಗೆಡದೆ ಕರ್ತನ ಪಕ್ಷದಲ್ಲಿ ನಿಂತಿದ್ದೇವೆ. ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆಮಾಡಿರಿ. (ಲೂಕ.18:1) ಬೇಸರಗೊಳ್ಳದೆ ಒಳ್ಳೆಯದನ್ನೇ ಮಾಡಿರಿ (ರೋಮಾ.2:7) ಧೈರ್ಯಗೆಡದೆ ಸೇವೆಯಲ್ಲಿ ತೊಡಗಿರಿ. (2ಕೊರಿಂ.4:1)

_*ನೆನಪಿಗೆ*_ : _ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. (ಇಬ್ರಿ.12:3)_

🎬 ಸಂದೇಶವನ್ನು ಕೇಳಿರಿ
https://youtu.be/XwjvLg74Uxg

To watch FULL Faith Journey Series 👇
https://www.youtube.com/playlist?list=PLYBeMYN2x3Ns

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜುಲೈ *29*, 2026, 🗓 ಬುಧವಾರ👉🏼 *ಮನಗುಂದುವಿಕೆಯಿಂದ ಒದಗುವ ಆಪತ್ತು!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಕೀರ್ತನೆ 49, ...
29/07/2026

📖 *ಅನುದಿನದ ಆಹಾರ*
⏰ ಜುಲೈ *29*, 2026,
🗓 ಬುಧವಾರ

👉🏼 *ಮನಗುಂದುವಿಕೆಯಿಂದ ಒದಗುವ ಆಪತ್ತು!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಕೀರ್ತನೆ 49, 50*
ಸಂಜೆ: *ರೋಮಾ 1*

_*ಹರ್ಷಹೃದಯವು ಒಳ್ಳೆಯ ಔಷಧ, ಕುಗ್ಗಿದ ಮನದಿಂದ ಒಣಮೈ. (ಜ್ಞಾನೋ.17:22)*_

ಮನಗುಂದುವಿಕೆ ಎಂದರೆ ಮುರಿದ ಮನಸ್ಸು, ಆತ್ಮದಲ್ಲಿ ಸೋತುಹೋಗುವಿಕೆ. ಇದರಿಂದಾಗಿ ಅನೇಕರು ವ್ಯಾಧಿಗೆ ಒಳಗಾಗುವರು. ಶಾರೀರಿಕವಾಗಿ, ಮಾನಸಿಕವಾಗಿ ವೇದನೆಗೆ ಒಳಪಡುವರು. ಮನಗುಂದುವಿಕೆ ಸೈತಾನನು ತಂದು ಹಾಕುವ ಶೋಧನೆ. ಅದರಿಂದ ಹೊರಗೆ ಬರದೆ ಹೋದರೆ ಜೀವನವೇ ಬೇಡವಾಗಿ ಹೋಗುವದು.

ದೇವಮಕ್ಕಳೇ, ನೀವು ಮನಗುಂದಿದವರಾಗಿ ಎಂದಿಗೂ ಇರಬಾರದು. ಆಪತ್ತಿನ ಕಾಲದಲ್ಲಿ ನೀವು ಬಳಲಿ ಹೋಗುವದಾದರೆ ನಿಮ್ಮ ಬಲವೂ ಕುಂದಿಹೋಗುವದು. ಅಂತಹ ಸಮಯಗಳಲ್ಲಿ ಕರ್ತನ ಪಾದಗಳ ಬಳಿಗೆ ಬನ್ನಿರಿ. ಆತನು ಮಾತ್ರ ಬೇಸರ ಬಳಲಿಕೆಗಳನ್ನು ಜಯಿಸಲು ನಿಮಗೆ ಬಲ ನೀಡಲು ಸಾಧ್ಯ. ಆದ್ದರಿಂದಲೇ ಭಕ್ತನು ಹೇಳುತ್ತಾನೆ ನನ್ನ ಆತ್ಮವು ಕುಂದಿದಾಗ ಕರ್ತನಾದ ನಿನ್ನನ್ನು ಸ್ಮರಿಸುವೆನು ಎಂದು (ಯೋನ.2:7). ನಾನು ಕರ್ತನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು (ಕೀರ್ತ.34:4) ಎಂದು ದಾವೀದನು ಹೇಳುತ್ತಾನೆ. ಯಾವದೇ ಸಮಸ್ಯೆಗಳು ಬಂದರೂ, ಏನೇ ಹೋರಾಟಗಳು ಬಂದರೂ ನಿಮ್ಮ ಸಹಾಯಕನಾದ ಕರ್ತನ ಬಳಿಗೆ ಬನ್ನಿರಿ. ಆತನನ್ನೇ ಆಶ್ರಯಿಸಿರಿ. ಆಗ ನೀವು ಬಳಲಿ ಹೋಗುವದಿಲ್ಲ. ಆತನನ್ನೇ ದೃಷ್ಟಿಸಿದವರು ಪ್ರಕಾಶ ಹೊಂದಿದರು. ಅವರು ನಾಚಿಕೆಗೆ ಒಳಗಾಗುವದಿಲ್ಲ. ಕರ್ತನು ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. (ಯೆಶಾ.40:29).

ಇನ್ನು ಮೇಲೆ ಬರುವ ದಿನಗಳು ಜನರಿಗೆ ಭಯವನ್ನೂ, ಕಳವಳವನ್ನೂ ಉಂಟುಮಾಡುವಂಥದ್ದಾಗಿರುವವು. ಯೇಸುಕ್ರಿಸ್ತನು ಇದನ್ನು ಮೊದಲೇ ತಿಳಿಸಿರುವನು. ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯ ಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದರುನೋಡುತ್ತಾ ಪ್ರಾಣಹೋದಂತಾಗುವರು ಎಂದು (ಲೂಕ.21:26) ಎದುರು ನೋಡುತ್ತಾ ಭಯಪಡುವದು. ಮನಗುಂದುವಿಕೆಯನ್ನು ಉಂಟುಮಾಡುವದು. ಪ್ರಿಯರೇ, ಕರ್ತನನ್ನೇ ಆಶ್ರಯಿಸಿರಿ. ಯಾವದೇ ವಿಷಯದಲ್ಲೂ ಮನಗುಂದಿಹೋಗದಿರಿ. ಕರ್ತನು ನಿಮ್ಮ ಬಲವಾಗಿದ್ದಾನೆ.

_*ನೆನಪಿಗೆ*_ : _ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ. ನಿನ್ನ ಮೇಲಾದರೋ ಕರ್ತನು ಉದಯಿಸುವನು. ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು. (ಯೆಶಾ.60:2)_

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜುಲೈ *28*, 2026, 🗓 ಮಂಗಳವಾರ👉🏼 *ಬೇಸರಿಕೆಯನ್ನು ಹೋಗಲಾಡಿಸಲು!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಕೀರ್ತನೆ 46,47,48...
28/07/2026

📖 *ಅನುದಿನದ ಆಹಾರ*
⏰ ಜುಲೈ *28*, 2026,
🗓 ಮಂಗಳವಾರ

👉🏼 *ಬೇಸರಿಕೆಯನ್ನು ಹೋಗಲಾಡಿಸಲು!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಕೀರ್ತನೆ 46,47,48*
ಸಂಜೆ: *ಅ.ಕೃ. 28*

_*ಆತನು ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು. (ಯೆಶಾ.32:2).*_

ಶರೀರದಲ್ಲಿ ಉಂಟಾಗುವ ಬೇಸರಿಕೆಯನ್ನು ಬಲಹೀನಗೊಂಡಿರುವದು, ಆಯಾಸಗೊಂಡಿರುವದು ಎಂದು ಹೇಳುತ್ತೇವೆ. ಆತ್ಮದಲ್ಲಿ ಉಂಟಾಗುವ ಬೇಸರಿಕೆಯನ್ನು ಮನಸ್ಸು ಸೋತುಹೋಗಿದೆ, ಮನಸ್ಸು ಕುಂದಿ ಹೋಗಿದೆ. ಭಯ ಉಂಟಾಗಿದೆ. ಕಳವಳಗೊಂಡಿದೆ ಎಂದು ಹೇಳುತ್ತೇವೆ.

ಇಂದು ಈ ಬೇಸರಿಕೆಯನ್ನು ನೀಗಿಸಲು ಅನೇಕರು ನಗೆಕೂಟಗಳೆಂಬ ಸಂಘಟನೆಗಳನ್ನು ಮಾಡಿಕೊಂಡು ಎಲ್ಲರೂ ಕೂಡಿ ಮನಸಾರೆ ನಕ್ಕು ನಲಿದಾಡಿ ಬೇಸರವನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿರುವರು. ಆದರೆ ದೇಹ ಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾದದ್ದು (1ತಿಮೊ.4:8) ಎಂದು ಸತ್ಯವೇದ ಹೇಳುತ್ತದೆ. ಕಾರಣ ಇದು ಕೃತಕವಾದ ನಗು, ಕೃತಕವಾದ ಸಂತೋಷ. ಆದರೆ ದೇವರನ್ನು ನಂಬಿದಂತಹ ಮಕ್ಕಳು ತಮ್ಮ ಬೇಸರಿಕೆಯನ್ನು ಹೋಗಲಾಡಿಸಲು ಇರುವ ಮಾರ್ಗವೆಂದರೆ, ಕರ್ತನ ವಾಗ್ದಾನಗಳನ್ನು ಬಲವಾಗಿ ಹಿಡಿದುಕೊಂಡು, ನಂಬಿಕೆಯಿಂದ ಅರಿಕೆಮಾಡುವದು. ಕರ್ತನು ನನ್ನ ಕುರುಬನಾಗಿರುವನು. ನಾನು ಬಳಲಿ ಹೋಗುವದಿಲ್ಲ, ಕೊರತೆ ಪಡುವದಿಲ್ಲ, ತಲೆ ತಗ್ಗಿಸುವದಿಲ್ಲ. ನನ್ನನ್ನು ಬಲಪಡಿಸುವ ಕ್ರಿಸ್ತನಲ್ಲಿ ಎಲ್ಲವನ್ನೂ ಮಾಡಲು ನನಗೆ ಬಲ ಉಂಟು ಎಂದು ಹೇಳಿರಿ. ಪ್ರತಿದಿನ ಬೆಳಗ್ಗೆ ಎದ್ದೊಡನೆ ಸಂತೋಷದಿಂದ ಕರ್ತನನ್ನು ಸ್ತುತಿಸಿ ಆರಾಧಿಸಿರಿ. ಕುಟುಂಬದವರೊಂದಿಗೆ ಮನ ಬಿಚ್ಚಿ ಮಾತಾಡಿ, ನಕ್ಕು ಆನಂದಿಸಿರಿ. ಪ್ರಕೃತಿಯ ನೋಟಗಳನ್ನು ಕಂಡು ಸಂತೋಷಿಸಿ ಹಾಡಿ ಹೊಗಳಿರಿ. ಚಿಂತೆಗಳನ್ನು ತರುವ ಸನ್ನಿವೇಶಗಳಿಂದ ನಿಮ್ಮ ಮನಸ್ಸನ್ನು ತಿರುಗಿಸಿ, ಮನಸ್ಸಿಗೆ ಸಂತೋಷವನ್ನು ನೀಡುವಂತಹ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿರಿ.

ಎರಡನೆಯದಾಗಿ ಸತ್ಯವೇದವು ನಿಮಗೆ ಸಂತೋಷ ನೀಡುವದು. ಅದರಲ್ಲಿರುವ ಪ್ರತಿಯೊಂದು ಸಂಗತಿಗಳೂ ಕರ್ತನು ನಿಮಗೆ ಪ್ರೀತಿಯಿಂದ ಬರೆದ ಪತ್ರಗಳಾಗಿವೆ. ಅದರಲ್ಲಿರುವ ವಾಗ್ದಾನಗಳನ್ನು ಬಾಧ್ಯತೆಯಾಗಿ ಪಡೆದುಕೊಂಡು ಸಂತೋಷದಿಂದ ಕರ್ತನನ್ನು ಸ್ತುತಿಸಿರಿ. ಮೂರನೆಯದಾಗಿ, ಕರ್ತನ ಆಲಯಕ್ಕೆ ಬಂದು, ಆತ್ಮದಿಂದಲೂ, ಸತ್ಯದಿಂದಲೂ ಆರಾಧಿಸಿರಿ. ಈ ಸಂತೋಷ ನಿಮ್ಮಲ್ಲಿ ಬರುವಾಗ, ಬೇಸರಿಕೆ, ಬಳಲಿಕೆ, ಚಿಂತೆ, ಭಯ ನಿಮ್ಮನ್ನು ಬಿಟ್ಟು ಓಡಿ ಹೋಗುವವು.

_*ನೆನಪಿಗೆ*_ : _ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂತಲೂ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. (ಯೋಹಾ.15:11)_

🎬 Biblical Wisdom
https://www.youtube.com/shorts/Qy9NRF8OSVs

To watch FULL Faith Journey Series 👇
https://www.youtube.com/playlist?list=PLYBeMYN2x3Ns

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜುಲೈ *27*, 2026, 🗓 ಸೋಮವಾರ👉🏼 *ಯೋನನ ಬೇಸರ!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಕೀರ್ತನೆ 43,44,45*ಸಂಜೆ: *ಅ.ಕೃ. 2...
27/07/2026

📖 *ಅನುದಿನದ ಆಹಾರ*
⏰ ಜುಲೈ *27*, 2026,
🗓 ಸೋಮವಾರ

👉🏼 *ಯೋನನ ಬೇಸರ!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಕೀರ್ತನೆ 43,44,45*
ಸಂಜೆ: *ಅ.ಕೃ. 27:27-44*

_*ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಕರ್ತನಾದ ನಿನ್ನನ್ನು ಸ್ಮರಿಸಿದೆನು. (ಯೋನ2:7)*_

ಯೋನನು ಸಣ್ಣ ಪ್ರವಾದಿಗಳಲ್ಲಿ ಐದನೆಯವನು. ಇವನು ಅಮಿತ್ಯೆಯ ಎಂಬವನ ಮಗನು. ಎರಡನೇ ಯೊರಬ್ಬಾಮನ ಕಾಲದಲ್ಲಿ ಪ್ರವಾದಿಸಿದವನು.

_*ನೆನಪಿಗೆ*_ : _ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತುಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನವೆಗಾಗಿ ನಾನು ಕನಿಕರ ಪಡಬಾರದೋ ಅಂದನು. (ಯೋನ.4:11)_

🎬 ಸಂದೇಶವನ್ನು ಕೇಳಿರಿ
https://youtu.be/chXg5EuA0b8

To watch FULL Faith Journey Series 👇
https://www.youtube.com/playlist?list=PLYBeMYN2x3Ns

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜುಲೈ *25*, 2026, 🗓 ಶನಿವಾರ👉🏼 *ಬೇಡಿಕೊಳ್ಳುತ್ತೇನೆ!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಕೀರ್ತನೆ 37,38,39*ಸಂಜೆ: *...
25/07/2026

📖 *ಅನುದಿನದ ಆಹಾರ*
⏰ ಜುಲೈ *25*, 2026,
🗓 ಶನಿವಾರ

👉🏼 *ಬೇಡಿಕೊಳ್ಳುತ್ತೇನೆ!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಕೀರ್ತನೆ 37,38,39*
ಸಂಜೆ: *ಅ.ಕೃ. 26*

_*ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನವನ್ನು ಉಂಟುಮಾಡುತ್ತವಷ್ಟೆ. (ಎಫೆ.3:13)*_

ಈ ಲೋಕದಲ್ಲಿ ಹಗಲು ಇರುಳು ಬರುವಂತೆ ದುಃಖವು ಸಂತೋಷವು ಒಂದರ ಹಿಂದೆ ಒಂದು ಬರುವದು. ಉತ್ಸಾಹವು ಬೇಸರಿಕೆಯೂ ಬರುವದು. ಕೆಲವರು ಕಷ್ಟದ ವೇದನೆಯ ಸಮಯಗಳಲ್ಲಿ ಬೇಸತ್ತು ಮರಣವನ್ನು ಬಯಸುವರು. ಮತ್ತೆ ಕೆಲವರು ತಮ್ಮ ಬೇಸರಿಕೆಯನ್ನು ಹೊರಪಡಿಸದೆ ತಮ್ಮೊಳಗೆ ಅಡಗಿಸಿಟ್ಟುಕೊಳ್ಳಲು ಪ್ರಯತ್ನಿಸುವರು. ಆದರೆ ಕರ್ತನಾದರೋ ನಮ್ಮನ್ನು ದೃಢಪಡಿಸುವನು.

ಒಮ್ಮೆ ಕೈಗಾರಿಕೋದ್ಯೋಮಿಗೆ ನಷ್ಟದ ಮೇಲೆ ನಷ್ಟ ಉಂಟಾಗಲಾರಂಭಿಸಿತು. ಇದರಿಂದಾಗಿ ಅವನು ಭಯಂಕರವಾದ ಮನಗುಂದುವಿಕೆಗೆ ಒಳಗಾದನು. ರಕ್ತದ ಒತ್ತಡ ಹೆಚ್ಚಾಯಿತು. ವೈದ್ಯರು ಮಲಗೇ ಇರಬೇಕೆಂದು ಹೇಳಿ ಬಿಟ್ಟರು. ಅವನು ಇನ್ನೂ ಅಧಿಕವಾದ ಬೇಸರಿಕೆಗೆ ಒಳಗಾದನು. ತನ್ನ ಹೆಂಡತಿಗೆ ನಾನು ನಾಳೆ ಜೀವದಿಂದಿರುವದಿಲ್ಲ ನನ್ನ ಅಂತ್ಯಕ್ರಿಯೆಯನ್ನು ನಡೆಸಿಬಿಡು ಎಂದು ಒಂದು ಪತ್ರವನ್ನು ಬರೆದನು. ಅವನು ಮಲಗಿದ್ದ ಕೋಣೆಯ ಕೆಳಭಾಗದಲ್ಲಿ ಒಂದು ಆತ್ಮೀಕ ಆರಾಧನೆಯು ನಡೆಯುತ್ತಿತ್ತು. ಅಲ್ಲಿ ವಿಶ್ವಾಸಿಗಳು ಉತ್ಸಾಹದಿಂದಲೂ ಸಂತೋಷದಿಂದಲೂ ಕೂಡಿದವರಾಗಿ ಕರ್ತನನ್ನು ಆರಾಧಿಸುತ್ತಿದ್ದರು. ಅವನು ಮೆಲ್ಲನೆ ತನ್ನ ಕೋಣೆಯನ್ನು ಬಿಟ್ಟು ಕೆಳಗೆ ಇಳಿದು ಪ್ರಾರ್ಥನಾ ಕೊಠಡಿಗೆ ಬಂದನು. ಅಲ್ಲಿ ದೇವಸೇವಕರು ಪ್ರಸಂಗಿಸಿದ ವಾಕ್ಯವು (1ಪೇತ್ರ.5:7) ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ. ಈ ವಾಕ್ಯ ಅವನ ಅಂತರ್ಯವನ್ನು ಮುಟ್ಟಿತು. ನನ್ನನ್ನು ವಿಚಾರಿಸಲು ಒಬ್ಬನು ಇರುವಾಗ ನಾನು ಯಾಕೆ ಚಿಂತಿಸಬೇಕೆಂದು ನೆನಸಿ, ಅಂದೇ ತನ್ನ ಎಲ್ಲಾ ಚಿಂತೆಯನ್ನು ಕರ್ತನ ಮೇಲೆ ಹಾಕಿ ಇನ್ನು ನಾನು ಬೇಸರಗೊಳ್ಳುವದಿಲ್ಲ ಎಂದು ನಿರ್ಧರಿಸಿದನು.

ಯೋನನ ಅನುಭವವೂ ಇದೇ ಆಗಿತ್ತು. ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಕರ್ತನಾದ ನಿನ್ನನ್ನು ಸ್ಮರಿಸಿದೆನು (ಯೋನ.2:7) ಎಂದು ಹೇಳುತ್ತಾನೆ. ದೇವಮಕ್ಕಳೇ, ನೀವು ಮನಗುಂದಿದ ಸಮಯಗಳಲ್ಲಿ ಕರ್ತನನ್ನೇ ಆಶ್ರಯಿಸಿರಿ. ನೀವೂ ಯಾವದೇ ಸಮಸ್ಯೆಗಳಿಂದ ಬಾಧಿಸಲ್ಪಡುತ್ತಿದ್ದರೂ, ನಿಮ್ಮನ್ನು ಅದರಿಂದ ಹೊರಗೆ ತರಲು, ಕರ್ತನು ಶಕ್ತನಾಗಿರುವನು. ಆತನು ನಿಮ್ಮ ಸೃಷ್ಟಿಕರ್ತನಾಗಿರುವನು. ಶರೀರದಲ್ಲಿಯೂ, ಆತ್ಮದಲ್ಲಿಯೂ ಬಲಪಡಿಸುವಾತನಾಗಿರುವನು.

_*ನೆನಪಿಗೆ*_ : _ಎಲೈ ಕಷ್ಟ ಪಡುವವರೇ, ಹೊರೆ ಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ಯಾಕೆಂದರೆ ನನ್ನ ನೊಗವು ಮೃದುವಾದದ್ದು: ನನ್ನ ಹೊರೆಯು ಹಗುರವಾದದ್ದು ಅಂದನು. (ಮತ್ತಾ.11:28,30)_

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

📖 *ಅನುದಿನದ ಆಹಾರ*⏰ ಜುಲೈ *24*, 2026, 🗓 ಶುಕ್ರವಾರ👉🏼 *ಬೇಸರದ ಸಮಯದಲ್ಲಿ!*🔖 _ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಕೀರ್ತನೆ 35,36*ಸಂಜೆ: *ಅ.ಕ...
24/07/2026

📖 *ಅನುದಿನದ ಆಹಾರ*
⏰ ಜುಲೈ *24*, 2026,
🗓 ಶುಕ್ರವಾರ

👉🏼 *ಬೇಸರದ ಸಮಯದಲ್ಲಿ!*

🔖 _ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಕೀರ್ತನೆ 35,36*
ಸಂಜೆ: *ಅ.ಕೃ. 25*

_*ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿ ವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು (ಯೆಶಾ.32:2)*_

ಬೇಸರಗೊಳ್ಳುವದು ಸಹಜ. ಕೆಲವರಿಗೆ ಶರೀರದಲ್ಲಿ ಬಲಹೀನತೆ, ಬೇಸರಿಕೆ ಬರುವದು. ಮತ್ತೆ ಕೆಲವರಿಗೆ ಆತ್ಮದಲ್ಲಿ ಸೋತುಹೋಗುವಿಕೆ, ಬೇಸರ ಉಂಟಾಗುವದು. ಕರ್ತನು ತನ್ನ ಮಕ್ಕಳನ್ನು ಈ ರೀತಿಯ ಬಳಲಿಕೆಯಿಂದ ಹೇಗಾದರೂ ಹೊರಕ್ಕೆ ತರುವನು. ತನ್ನ ಉನ್ನತ ಬಲದಿಂದ ತುಂಬಿಸುವನು.

ಕ್ರಿಸ್ತನು ಬಳಲಿ ಹೋಗದವನು ಮನಗುಂದಿ ಹೋಗದವನು. ಮಾತ್ರವಲ್ಲ ನಿಮ್ಮಂತೆ ಆತನು ಶರೀರಧಾರಿಯಾಗಿದ್ದರೂ, ಮನುಷ್ಯನಾಗಿದ್ದರೂ, ಶೋಧನೆಗಳ ಮಧ್ಯದಲ್ಲಿ ನಡೆದಾತನು. ಬೇಸರ ಬಳಲಿಕೆಗಳಿಂದ ತುಂಬಿದಾಗ, ಏಕಾಂತ ಸ್ಥಳಕ್ಕೆ ಹೋಗಿ ದೇವರ ಬಳಿ ಗೋಳಾಡಿದನು. ವಿಜ್ಞಾಪನೆಗಳನ್ನು ಸಲ್ಲಿಸಿದನು ತನಗೆ ಮುಂದೆ ಬರುವಂಥ ಶಿಲುಬೆಯ ಮರಣವನ್ನು ಆತನ ಆಂತರಿಕ ಕಣ್ಣುಗಳು ಕಂಡವು. ಆದ್ದರಿಂದಲೇ ಗಟ್ಟಿಯಾದ ಶಬ್ದದಿಂದ ಹಲುಬುತ್ತಾ ಕಣ್ಣೀರು ಸುರಿಸಿದನು. ಆತನು ವ್ಯಾಕುಲಗೊಂಡವನಾಗಿ ಅಪ್ಪಾ ತಂದೆಯೇ, ನಿನಗೆ ಎಲ್ಲವೂ ಸಾಧ್ಯ; ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ ಅಂದನು. (ಮಾರ್ಕ.14:36) ಯಾವ ಮನುಷ್ಯನೂ ಬಳಲಿ ಹೋಗುವ ಮನಗುಂದುವಿಕೆಯ ಪರಿಸ್ಥಿತಿಯಲ್ಲಿದ್ದರೂ, ಅವುಗಳ ಮಧ್ಯದಲ್ಲಿಯೂ ಶಿಲುಬೆಯನ್ನು ಹೊರಲು, ಶಿಲುಬೆಯ ವೇದನೆಗೆ ತನ್ನನ್ನೇ ಒಪ್ಪಿಸಿಕೊಟ್ಟನು. ತನಗೆ ಎಷ್ಟೇ ಬಳಲಿಕೆ ಉಂಟಾದರೂ ಪರವಾಗಿಲ್ಲ ನಾನು ಈ ಶಿಲುಬೆಯ ಮಾರ್ಗದಲ್ಲಿ ನಡೆದಾಗ ಮಾತ್ರವೇ ತನ್ನ ಮಕ್ಕಳಿಗೆ ಬಲ ನೀಡಲು ಸಾಧ್ಯ. ಆತ್ಮದಲ್ಲಿ ಬಲ ನೀಡಿ ಧೈರ್ಯ ಪಡಿಸಲು ಸಾಧ್ಯ ಎಂದು ಆತನು ತನ್ನನ್ನೇ ಒಪ್ಪಿಸಿಕೊಟ್ಟನು.

ದೇವಮಕ್ಕಳೇ, ಕರ್ತನ ಮಹಿಮೆಯೊಂದಿಗೆ ನೀವು ಹೋಗಬೇಕಾದ ದೂರ ಬಹಳವಾಗಿದೆ. ಆದಾಯ ಮಾಡಬೇಕಾದ ಆತ್ಮಗಳು ಅಧಿಕವಾಗಿವೆ. ಕೊಯ್ದು ಮಾಡಬೇಕಾದ ಹೊಲಗಳು ಹೇರಳವಾಗಿವೆ. ಆದ್ದರಿಂದ ಮನಗುಂದುವಿಕೆಯನ್ನು ಬಿಟ್ಟು ಕರ್ತನಿಗಾಗಿ ವೈರಾಗ್ಯದಿಂದ ಎದ್ದು ನಿಲ್ಲಿರಿ. ಮನಗುಂದಿದ ವೇಳೆಗಳಲ್ಲಿ ನಿಮ್ಮ ಕಣ್ಣುಗಳನ್ನು ಕರ್ತನ ಕಡೆಗೆ ಎತ್ತಿರಿ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ನೀವು ಮನಗುಂದಿದವರಾಗಿ ಬೇಸರಗೊಳ್ಳದೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. (ಇಬ್ರಿ.12:2,3)

_*ನೆನಪಿಗೆ*_ : _ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ. (2ಕೊರಿ.12:9)_

👁‍🗨 Watch and be Blessed.
https://youtu.be/gTQLUPI9nmU

To watch FULL Faith Journey Series 👇
https://www.youtube.com/playlist?list=PLYBeMYN2x3Ns

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

ಅನುದಿನದ ಆಹಾರ📅  ಜುಲೈ *23*, 2026 - ಗುರುವಾರ📌 ಸೇವೆಯಲ್ಲಿ!ಇಂದಿನ ಸತ್ಯವೇದ ಓದುವ ಭಾಗಬೆಳಿಗ್ಗೆ: ಕೀರ್ತನೆ 33,34ಸಂಜೆ: ಅ.ಕೃ. 24       ಆದ...
23/07/2026

ಅನುದಿನದ ಆಹಾರ
📅 ಜುಲೈ *23*, 2026 - ಗುರುವಾರ

📌 ಸೇವೆಯಲ್ಲಿ!

ಇಂದಿನ ಸತ್ಯವೇದ ಓದುವ ಭಾಗ
ಬೆಳಿಗ್ಗೆ: ಕೀರ್ತನೆ 33,34
ಸಂಜೆ: ಅ.ಕೃ. 24

ಆದುದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗಟ್ಟು ಹಿಂದೆಗೆಯುವದಿಲ್ಲ.(2ಕೊರಿ.4:1)

ಎಂಟನೆಯದಾಗಿ, ಸೇವೆಯಲ್ಲಿ ಬೇಸರಗೊಳ್ಳಬಾರದು. ದೇವರ ಸೇವೆ ಮಾಡುವ ಮಕ್ಕಳಿಗೆ ಭಯಂಕರವಾದ ಮನಗುಂದುವಿಕೆ ಬೇಸರ ಉಂಟಾಗುವದು. ಸೈತಾನನ ಹೋರಾಟ ಒಂದು ಕಡೆ, ಸೇವೆಯಲ್ಲಿ ಜಯವಿಲ್ಲ. ಸೇವೆ ಮಾಡಿಯೂ ಪ್ರಯೋಜನವಿಲ್ಲ ಎಂದು ಭಯಂಕರವಾದ ಬೇಸರಕ್ಕೆ ಒಳಗಾಗುವರು.

ದಕ್ಷಿಣ ಆಫ್ರಿಕಾದಲ್ಲಿ ಬೋಧಕರಾದ ರೋಲ್ಸಾಂಡ್‍ರವರು ಪ್ರಸಿದ್ಧವಾದ ಸೇವಕರಾಗಿದ್ದರು. ಕರ್ತನ ಕರೆಯಂತೆ ಒಂದು ಕಟ್ಟಡವನ್ನು ತೆಗೆದುಕೊಂಡು ಸೇವೆಯನ್ನು ಪ್ರಾರಂಭಿಸಿದರು. ಆದರೆ ಒಬ್ಬ ವಿಶ್ವಾಸಿಯೂ ಬರಲಿಲ್ಲ. ಒಂದೊಂದು ವಾರವೂ ಆ ಆಲಯದಲ್ಲಿದ್ದ ಬೆಂಚುಗಳಿಗೆ ಪ್ರಸಂಗ ಮಾಡುತ್ತಿದ್ದರು. ಒಂದು ಎರಡು ವರ್ಷಗಳಲ್ಲ ಏಳು ವರ್ಷಗಳು ಕಳೆದುಹೋಯಿತು. ಆದರೂ ಅವರು ಮನಗುಂದಲಿಲ್ಲ, ಬೇಸರಗೊಳ್ಳಲಿಲ್ಲ. ಏಳನೆಯ ವರ್ಷ ಪೆÇಲೀಸರಿಗೆ ಹೆದರಿ ಒಬ್ಬ ಕಳ್ಳನು ಇವರ ಅಲಯಕ್ಕೆ ಬಂದು ಬೆಂಚಿನ ಕೆಳಗೆ ಅವಿತುಕೊಂಡಿದ್ದನು. ಎಂದಿನಂತೆ ಆ ವಾರ ಅವರು ಪ್ರಸಂಗಮಾಡಿದರು. ಅವಿತುಕೊಂಡಿದ್ದ ಕಳ್ಳನು ಇವರ ಪ್ರಸಂಗವನ್ನು ಕೇಳಿ ಮಾನಸಾಂತರ ಹೊಂದಿ ಕರ್ತನಿಗೆ ತನ್ನನ್ನು ಒಪ್ಪಿಸಿಕೊಟ್ಟನು. ಆನಂತರ ಬೀದಿ ಬೀದಿಗಳಲ್ಲಿ ತನ್ನ ರಕ್ಷಣೆಯ ಅನುಭವವನ್ನು ಸಾರಲಾರಂಭಿಸಿದನು. ಇದರಿಂದ ಹೇರಳವಾದ ಜನರು ರಕ್ಷಿಸಲ್ಪಟ್ಟರು. ರೋಲ್ಸಾಂಡ್‍ರವರು ಸಾಯುವ ಮೊದಲು ನೂರಕ್ಕೂ ಹೆಚ್ಚಾದ ಸಭೆಗಳನ್ನು ಸ್ಥಾಪಿಸಿದರು. ಹಲವು ವರ್ಷಗಳ ಹಿಂದೆ ಒಬ್ಬ ಸೇವಕರು ತ್ಯಾಗ ಪೂರ್ವಕವಾದ ಸೇವೆಯನ್ನು ಆಫ್ರಿಕಾದಲ್ಲಿ ಮಾಡಿ ಅಮೆರಿಕಾಗೆ ಹಿಂದಿರುಗುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಎರಡು ದಿನಗಳ ಕಾಲ ಆಫ್ರಿಕಾವನ್ನು ಸಂದರ್ಶಿಸಿದ ಅಮೆರಿಕಾ ರಾಷ್ಟ್ರಪತಿ ತಮ್ಮ ದೇಶಕ್ಕೆ ಪ್ರಯಾಣ ಮಾಡುತ್ತಿದ್ದರು. ಹಡಗು ಅಮೆರಿಕಾ ತಲುಪಿದಾಗ ರಾಷ್ಟ್ರಪತಿಯನ್ನು ಬಹಳ ಗೌರವದಿಂದ ಸ್ವಾಗತಿಸಲಾಯಿತು. ಆದರೆ ಸೇವೆ ಮಾಡಿ ಹಿಂದಿರುಗಿದ ಮಿಷನರಿಯನ್ನು ಯಾರೂ ಬರಮಾಡಿಕೊಳ್ಳಲಿಲ್ಲ. ಇದರಿಂದ ಮಿಷನರಿಗೆ ಸ್ವಲ್ಪ ಬೇಸರವಾಯಿತು. ಆಗ ಕರ್ತನು ಅವರ ಕಿವಿಯಲ್ಲಿ ನೀನು ಇನ್ನು ನಿತ್ಯತ್ವಕ್ಕೆ ಬಂದು ಸೇರಲಿಲ್ಲ. ಅಲ್ಲಿಗೆ ನೀನು ಬಂದಾಗ ನಿನ್ನ ಸ್ವಾಗತ ಇನ್ನೂ ಅದ್ಧೂರಿಯಾಗಿರುವದು. ಬೇಸರಪಡಬೇಡ ಎಂದು ಮೆಲ್ಲಗೆ ಉಸುರಿದನು.

ದೇವಮಕ್ಕಳೇ, ಕರ್ತನು ನಿಮ್ಮನ್ನು ಸೇವೆಗೆ ಕರೆದಿದ್ದರೆ ಸತ್ಯದಿಂದಲೂ, ಉತ್ತಮವಾಗಿಯೂ ಮಾಡಿರಿ ದೇವರನಾಮದ ಮಹಿಮೆಗಾಗಿ ಮಾಡಿ ಕ್ರ್ರೈಸ್ತಮಾರ್ಗವನ್ನು ವಿರೋಧಿಸುವವರು. ನಿಮಗೆ ಎದುರಾಗಿ ಏಳಬಹುದು. ನಿಮ್ಮ ಬಗ್ಗೆ ದೂಷಣೆಯ ಮಾತುಗಳು ಬರಬಹುದು. ಬೇಸರಗೊಳ್ಳಬೇಡಿರಿ. ಕರ್ತನನ್ನೇ ಆಶ್ರಯಿಸಿರಿ. ಕರ್ತನು ನಿಶ್ಚಯವಾಗಿ ಮಾರ್ಗ ತೋರಿಸುವನು. ನಿಮಗಾಗಿ ಯುದ್ಧ ಮಾಡುವನು. ನಿಮಗಾಗಿ ಎಲ್ಲವನ್ನೂ ಮಾಡಿಮುಗಿಸುವನು.

ನೆನಪಿಗೆ : ಎಲ್ಲಿ ನಾನು ಇರುತ್ತೇನೋ, ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು. (ಯೋಹಾ.12:26)

👁‍🗨 Watch and be Blessed.
https://youtu.be/SS-7Aza_bHc

Like | Share | Subscribe
Share with your friends!

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

ಅನುದಿನದ ಆಹಾರ📅  ಜುಲೈ *22*, 2026 - ಬುಧವಾರ📌 ಇಕ್ಕಟ್ಟಿನ ದಿನದಲ್ಲಿ!ಇಂದಿನ ಸತ್ಯವೇದ ಓದುವ ಭಾಗಬೆಳಿಗ್ಗೆ: ಕೀರ್ತನೆ 31,32ಸಂಜೆ: ಅ.ಕೃ. 23:...
22/07/2026

ಅನುದಿನದ ಆಹಾರ
📅 ಜುಲೈ *22*, 2026 - ಬುಧವಾರ

📌 ಇಕ್ಕಟ್ಟಿನ ದಿನದಲ್ಲಿ!

ಇಂದಿನ ಸತ್ಯವೇದ ಓದುವ ಭಾಗ
ಬೆಳಿಗ್ಗೆ: ಕೀರ್ತನೆ 31,32
ಸಂಜೆ: ಅ.ಕೃ. 23:16-35

ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿ ಹೋದರೆ ನಿನ್ನ ಬಲವೂ ಇಕ್ಕಟ್ಟೇ. (ಜ್ಞಾನೋ.24:10)

ಏಳನೆಯದಾಗಿ, ಇಕ್ಕಟ್ಟಿನ ದಿನಗಳಲ್ಲಿ ಬೇಸರಗೊಳ್ಳಬಾರದು. ಇಕ್ಕಟ್ಟಿನ ಸಮಯಗಳಲ್ಲಿ ಕೆಲವರು ಕಳವಳದಿಂದ ತತ್ತರಿಸಿ ಹೋಗುವರು. ಕೆಲವರು ಮನುಷ್ಯರ ಆಲೋಚನೆಗಳನ್ನು ಹುಡುಕಿಕೊಂಡು ಹೋಗುವರು. ಉತ್ಸಾಹವನ್ನು ಕಳೆದುಕೊಂಡ ಕೆಲವರು ನಡೆದಾಡುವ ಶವಗಳಾಗಿ ಕಾಣುವರು. ಆದರೆ ಸತ್ಯವೇದ ಹೀಗೆ ಹೇಳುತ್ತದೆ. ಕಷ್ಟ ಕಾಲದಲ್ಲಿ ನನಗೆ ಮೊರೆಯಿಡಿರಿ. ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ ಎಂದು (ಕೀರ್ತ.50:15).

ಸ್ಕಾಟ್ಲೆಂಡ್ ದೇಶವನ್ನು ಆಳುತ್ತಿದ್ದ ರಾಬರ್ಟ್ ಪೂರೊಸ್ ಎಂಬ ಅರಸನಿಗೆ ವಿರೋಧವಾಗಿ ಆಂಗ್ಲರು ದಂಡೆತ್ತಿ ಬಂದು ಅವನನ್ನು ಓಡಿಸಿಬಿಟ್ಟರು. ಹದಿನಾರು ಬಾರಿ ಯುದ್ಧಮಾಡಿ ಸೋತು ಆತನು ಬಹಳವಾಗಿ ಬೇಸರಗೊಂಡು ಒಂದು ಗುಹೆಯೊಳಗೆ ಅಡಗಿದ್ದನು. ಅಲ್ಲಿ ಅವನು ಒಂದು ಹುಳು ಗೂಡು ಕಟ್ಟಲು ಪ್ರಯತ್ನಿಸುತ್ತಿರುವದನ್ನು ಕಂಡನು. ಅದು ಹಲವು ಬಾರಿ ಗೂಡು ಕಟ್ಟುವ ಪ್ರಯತ್ನದಲ್ಲಿ ಕೆಳಗೆ ಬಿದ್ದರೂ ಪುನಃ ಎದ್ದು ತನ್ನ ಪ್ರಯತ್ನವನ್ನು ಮುಂದುವರಿಸುತ್ತಿತ್ತು. ಅಂತೂ ಅದು ತನ್ನ ಪ್ರಯತ್ನದಲ್ಲಿ ಜಯಗಳಿಸಿತು. ಇದನ್ನು ಕಂಡ ಆ ಅರಸನು ತನ್ನ ಬೇಸರವನ್ನೆಲ್ಲಾ ಕೊಡವಿ ಕೊಂಡು ಮೇಲೆದ್ದು ಮುಂದಿನ ಯುದ್ಧದಲ್ಲಿ ಜಯಗಳಿಸಿ ತನ್ನ ದೇಶವನ್ನು ಸ್ವತಂತ್ರಿಸಿಕೊಂಡನು. ದಾವೀದನಿಗೆ ಎಷ್ಟೆಷ್ಟೋ ಇಕ್ಕಟ್ಟುಗಳು ಮರಣಕ್ಕೂ ಅವನಿಗೂ ಒಂದು ಅಡಿ ದೂರ ಮಾತ್ರವೇ ಇರುವ ಸನ್ನಿವೇಶವನ್ನು ಎದುರಿಸಬೇಕಾಯಿತು. ಆದಾಗ್ಯೂ ದಾವೀದನು ಬೇಸರಗೊಳ್ಳಲಿಲ್ಲ. ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು; ಬೇಸರವಿಲ್ಲದೆ ಇರುಳೆಲ್ಲಾ ಕೈಯೊಡ್ಡಿಕೊಂಡೇ ಇದ್ದೆನು ಎಂಬದೇ ಅವನ ಸಾಕ್ಷಿ. (ಕೀರ್ತ.77:2) ಐಗುಪ್ತ್ಯದಿಂದ ಹೊರಟ ಇಸ್ರಾಯೇಲ್ಯರ ಆಗಮನವನ್ನು ನೆನಸಿ ಕಾನಾನ್ಯರು ಬೇಸರಕ್ಕೆ ಒಳಗಾದರು. ಕರ್ತನು ನಿಮಗೆ ದೇಶವನ್ನು ಒಪ್ಪಿಸಿಕೊಟ್ಟನು ಎಂದು ನಿಮ್ಮ ಬಗ್ಗೆ ನಮಗೆ ದಿಗಿಲು ಉಂಟಾಗಿದೆ ಎಂದು ನಿಮ್ಮನ್ನು ಕುರಿತು ದೇಶದ ನಿವಾಸಿಗಳೆಲ್ಲರೂ ಬೇಸರಗೊಂಡಿದ್ದಾರೆ ಎಂದು ತಿಳಿದಿದ್ದೇನೆ ಎಂದು ಯೆರಿಕೋ ಕೋಟೆಯಲ್ಲಿ ವಾಸವಾಗಿದ್ದ ವೇಶ್ಯೆಯಾದ ಸ್ತ್ರೀ ಹೇಳಿದಳು.

ದೇವಮಕ್ಕಳೇ, ಇಕ್ಕಟ್ಟಿನ ಸಮಯಗಳಲ್ಲಿ ಕರ್ತನನ್ನೇ ದೃಷ್ಟಿಸಿರಿ. ದೇವರು ವಾಗ್ದಾನ ಮಾಡಿದ್ದಾನೆ, ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು ಎಂದು (ಕೀರ್ತ.91:15) ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ. ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. (ಕೀರ್ತ.46:1) ನಿಮ್ಮನ್ನು ನೋಡಿ ಶತ್ರುಗಳು, ಮನಗುಂದಬೇಕೇ ಹೊರತು, ನೀವು ಅವರನ್ನು ನೋಡಿ ಎಂದಿಗೂ ಮನಗುಂದಬಾರದು. ಆದ್ದರಿಂದ ನಂಬಿಕೆಯಿಂದ ಜಯದ ಹೆಜ್ಜೆ ಹಾಕಿರಿ. ನಿಮಗೆ ವಿರೋಧವಾಗಿ ಕಲ್ಪಿಸಿದ ಯಾವ ಆಯುಧವೂ ಫಲಿಸುವದಿಲ್ಲ.

ನೆನಪಿಗೆ : ನಾನು ಬಳಲಿದವರನ್ನು ತಂಪುಗೊಳಿಸಿ ಕುಂದಿದವರೆಲ್ಲರನ್ನೂ ತೃಪ್ತಿಪಡಿಸುವೆನಷ್ಟೆ. (ಯೆರೆ.31:25)

👁‍🗨 Watch and be Blessed.
https://youtu.be/2qh_10zNJEE

Like | Share | Subscribe
Share with your friends!

GOLDEN BIBLE TEXT GOSPEL
Bible Verses • Gospel Messages • Daily Inspiration
https://www.youtube.com/

Address

1, 24th Cross Dead End, Ejipura
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 3pm - 5pm

Telephone

+91 80 25712448

Alerts

Be the first to know and let us send you an email when Anudhinada Ahara - ಅನುದಿನದ ಆಹಾರ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Anudhinada Ahara - ಅನುದಿನದ ಆಹಾರ:

Shortcuts

Share