Melmarvathur Adhiparashakthi Pooja Mandali Dwarakanagara

Melmarvathur Adhiparashakthi Pooja Mandali Dwarakanagara ಒಂದೇ ತಾಯಿ ಓಂಶಕ್ತಿ ಒಂದೇಕುಲ

ಗುರುಪಾದಕ್ಕೆ ಶರಣು ಶ್ರೀಪಾದಕ್ಕೆ ಶರಣು

ಓಂ ಶಕ್ತಿ!ಈ ಭಾವಚಿತ್ರದ ಹಿಂದಿರುವ ಕಥೆಯ ಬದಲಿಗೆ, ಈ ಭಾವಚತ್ರದಲ್ಲಿರುವ ಸ್ವಯಂಭು ಬಗ್ಗೆ ತಿಳಿದುಕೊಳ್ಳೋಣ. ಸ್ವಯಂಭು ನಾ..? ಹಾಗೆಂದರೇನು...?ಇಂ...
28/11/2023

ಓಂ ಶಕ್ತಿ!

ಈ ಭಾವಚಿತ್ರದ ಹಿಂದಿರುವ ಕಥೆಯ ಬದಲಿಗೆ, ಈ ಭಾವಚತ್ರದಲ್ಲಿರುವ ಸ್ವಯಂಭು ಬಗ್ಗೆ ತಿಳಿದುಕೊಳ್ಳೋಣ.

ಸ್ವಯಂಭು ನಾ..? ಹಾಗೆಂದರೇನು...?

ಇಂದು ಗರ್ಭಗುಡಿ ಇರುವ ಜಾಗದಲ್ಲಿ, ಬೇವಿನ ಮರವಿತ್ತು. ಆ ಬೇವಿನ ಮರದಲ್ಲಿ ಹಾಲು ಸುರಿಯುವ ಅದ್ಭುತ ನಡೆಯುತ್ತಿತ್ತು. ಅಂದಿನಿಂದ ಆ ಬೇವಿನ ಮರವನ್ನು ಪೂಜಿಸಿ ಆ ಹಾಲನ್ನು ಕುಡಿಯುತ್ತಾ ಬಂದರು ಸ್ಥಳೀಯರು. 1966,ನವಂಬರ್ 28ನೆ ತಾರೀಖಿನಂದು ಬೀಸಿದ ಬಿರುಗಾಳಿಯಲ್ಲಿ, ಆ ಬೇವಿನ ಮರ ಉರುಳಿಹೋಯಿತು. ಅದರ ಬಳಿ ಇದ್ದ ಹಾವಿನಹುತ್ತ ರಭಸದಿಂದ ಬಂದ ಮಳೆಯಲ್ಲಿ ಕರಗಿಹೋಗಿ, ಸ್ವಯಂಭುವಾಗಿ ಆ ತಾಯಿ ಉದ್ಭವಗೊಂಡಳು.
ಹೌದು, ಸ್ವಯಂಭು ಎಂದರೆ ತಾನಾಗಿ ಉದ್ಭವಿಸಿರುವುದು ಎಂದರ್ಥ. ಮೇಲ್ ಮರುವತ್ತೂರ್ ಇತಿಹಾಸದಲ್ಲಿ , ಆರಂಭದಿಂದ ಆ ತಾಯಿ ಆದಿಪರಾಶಕ್ತಿಯನ್ನು ಸ್ವಯಂಭು ರೂಪಿಣಿಯಾಗೆ ಪೂಜಿಸುತ್ತ ಬಂದರು.
ಕಾಲ ಕಳೆದ ಹಾಗೆ, ಭಕ್ತರ ಬೇಡಿಕೆಗೆ ಕೆವಿಯೊಡ್ಡಿ ಆದಿಪರಾಶಕ್ತಿ ತನ್ನ ಶಿಲಾ ಸ್ವರೊಪವನ್ನು ತಿಳಿಸಿ, ಕೆತ್ತಿಸಿ - ನಂತರ ಪ್ರತಿಷ್ಠಾಪಿಸಲಾಯಿತು .

ಇಂದು ಸಹ, ಶಿಲಾರೂಪಿಣಿಯಾದ ತಾಯಿಗೆ ಕಲಶ ತೀರ್ಥದಿಂದ ಮಾತ್ರ ಅಭಿಷೇಕ ನಡೆಯುತ್ತದೆ.
ಸ್ವಯಂಭು ರೂಪದಲ್ಲಿರುವ ತಾಯಿಗೆ ಎಲ್ಲಾ ವಿಧವಾದ - ಅರಿಶಿನ, ಕುಂಕುಮ, ಗಂಧ, ವಿಭೂತಿ, ಪನ್ನೀರು, ಎಳನೀರು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣು, ಶೀಗೇಕಾಯಿ ಎಲ್ಲದರಿಂದ ಅಭಿಷೇಕ ನಡೆಯುತ್ತದೆ.

ಅದು ಮಾತ್ರವೇ! ನವರಾತ್ರಿಯಲ್ಲಿ ನವ ವಿಧ ಕಾಪ್ಪು (ಲೇಪನ) ದಿಂದ ಕಂಗೊಳುಸುತ್ತಾಳೆ ಸ್ವಯಂಭು ಮಾತೇ.

ಪೌರ್ಣಮಿ, ಅಮಾವಾಸ್ಯೆ, ಮರುವತ್ತೂರ್ ನಲ್ಲಿ ನಡೆಯುವ ವಿಶೇಷ ಹಬ್ಬ ದಿನಗಳಲ್ಲಿ ಬೆಳ್ಳಿ, ಚಿನ್ನದ ಕವಚವನ್ನು ಹಾಕಿ ಅಲಂಕರಿಸುತ್ತಾರೆ .

ಇವೆಲ್ಲವನ್ನು ಮರುವತ್ತೂರ್ ಹೋದರೆ, ನೋಡಿ ಆನಂದಿಸಬಹುದು.

ಅದೇನೋ ಉದ್ಭವವಾದ ಕಲ್ಲು ತಾನೇ? ಅದಕ್ಕೇಕೆ ಪ್ರಾಮುಖ್ಯತೆ ಎಂದು ನೆನೆಯಬೇಡಿ.

ಒಂದು ಭಕ್ತರಿಗೆ ನಡೆದ ಅದ್ಭುತ ಅನುಭವವನ್ನು ತಿಳಿಯಿರಿ.

ಒಂದು ದಿನ ಕರುವರೈ ಪಣಿ - (ಅಮ್ಮನ ಆಲಯ ಸೇವೆ) ಮಾಡಲು ಒಂದು ಮಂಡಳಿಯ ಶಕ್ತಿಗಳು ಹೋದರಂತೆ. ಆ ಶಕ್ತಿಗಳು ಅಭಿಷೇಕ ಸೇವೆ ಮಾಡಿ ಮುಗಿಸಿದ ನಂತರ ಆರತಿ ಬೆಳಗುವ ಸಮಯ. ಆ ಸಮಯದಲ್ಲಿ, ತನನ್ನು ಅರಿಯದೆ ದೀಪರಾಧನೆ ತಟ್ಟೆಯನ್ನು ಸ್ವಯಂಭುವಿನ ಮೇಲು ಭಾಗಕ್ಕೆ ತಾಕಿಸಿಬಿಟ್ಟರಂತೆ. ಗೊತ್ತಿಲ್ಲದೆ ತಟ್ಟಿಬಿಟ್ಟೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಆರತಿ ಮುಗಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ಆಲಯದ ಬೇರೆ ಸೇವೆಗಳಲ್ಲಿ ತೊಡಗಿಸಿಕೊಂಡರಂತೆ. ಈ ಸೇವೆಗೆ ಬರುವ ಭಕ್ತರು - ನಮ್ಮ ಗುರುದೈವಕ್ಕೆ ಪಾದಪೂಜೆ ಮಾಡುತ್ತಾರೆ. ಪಾದಪೂಜೆಯಲ್ಲಿ ಆ ಭಕ್ತ ಹೋದಾಗ, ನೋಡಿದರೆ ಗುರು ಅಮ್ಮನ ತಲೆಯಲ್ಲಿ ರಕ್ತ ಬಂದು ಅದಕ್ಕೆ ಮದ್ದು ಹಾಕಿದ್ದರಂತೆ. ಆ ಭಕ್ತ ಸ್ಥಗಿತಗೊಂದು, ಅಮ್ಮಾ ಏನಾಯಿತು ನಿಮಗೆ? ಎಂದು ಭಾವುಕನಾಗಿ ಕೇಳಲು ಅಮ್ಮ ಹೇಳಿದರಂತೆ - " ಬೆಳಗ್ಗೆ ನೀನು ಆರತಿ ತಟ್ಟೆ ತಾಕಿಸಿಬಿಟ್ಟೆಯಲ್ಲಾ, ನೋಡು ಹೇಗೆ ರಕ್ತ ಬಂದಿದೆ ಅಂತ" ಎಂದು ಹೇಳಿದರಂತೆ. ಆ ಭಕ್ತ, ಅಮ್ಮಾ ತಪ್ಪಾಯಿತು- ಕ್ಷಮಿಸಿಬಿಡು ಎಂದು ಅಮ್ಮನ ಪಾದಗಳಲ್ಲಿ ಶರಣಾದನಂತೆ. ಅವನರಿತ ವಿಷಯ "ಗುರುದೈವ (ಅವನು) - ಶೀಲಸ್ವರೂಪ ದೈವ ಆದಿಪರಾಶಕ್ತಿ (ಅವಳು) ,ಸ್ವಯಂಭು (ಅದು) ಎಲ್ಲವೂ ಒಂದೇ" ಎಲ್ಲಾ ಬೇರೆ ಬೇರೆ ಎಂದು ಇನ್ನೆಂದಿಗೋ ನೆನೆಯಬಾರದು.

ಓಂ ಶಕ್ತಿ ಈ ದಿನ ನಮ್ಮ ಮೇಲ್ ಮರುವತ್ತೂರ್ ಸಿದ್ದರ ಪೀಠದಲ್ಲಿ ಅಮ್ಮನವರ ಶ್ರೀ ಶಿಲಾ ರೂಪವನ್ನು 26ನೇ ನವೆಂಬರ್  1977 ರಂದು ಶ್ರೀ ಶ್ರೀ ಶ್ರೀ ಅಮ...
24/11/2023

ಓಂ ಶಕ್ತಿ

ಈ ದಿನ ನಮ್ಮ ಮೇಲ್ ಮರುವತ್ತೂರ್ ಸಿದ್ದರ ಪೀಠದಲ್ಲಿ ಅಮ್ಮನವರ ಶ್ರೀ ಶಿಲಾ ರೂಪವನ್ನು 26ನೇ ನವೆಂಬರ್ 1977 ರಂದು ಶ್ರೀ ಶ್ರೀ ಶ್ರೀ ಅಮ್ಮನವರು ಪ್ರತಿಷ್ಠಾಪನೆ ಮಾಡಿದರು

ನಮ್ಮ ಸಿದ್ಧರ್ ಪೀಠದ ಆರಂಭ ಕಾಲದಲ್ಲಿ ಅಮ್ಮನನ್ನು ಎಲ್ಲರೂ #ಸ್ವಯಂಭು ರೂಪದಲ್ಲಿ ಪೂಜಿಸುತ್ತಿದ್ದರು ಆಗ ಶಿಲೆಯು ಇರಲಿಲ್ಲ.

ಗುರು ಅಮ್ಮನವರು ದಿನನಿತ್ಯ ಬಂದು ಸ್ವಯಂಭುವನ್ನು ಆರಾಧಿಸಿ ಬರುವ ಭಕ್ತರಿಗೆ ಆಶೀರ್ವಚನವನ್ನು ನೀಡುತ್ತಿದ್ದರು.

ಹೀಗೆ ಒಂದು ದಿನ...
ಭಕ್ತರೆಲ್ಲರೂ ಅಮ್ಮನ ಬಳಿ ಅಮ್ಮ ನಿನ್ನನ್ನು ನಾವು ಶಿಲಾ ರೂಪದಲ್ಲಿ ಪೂಜಿಸುವುದಾದರೆ "ನಿನ್ನ ಶಿಲಾ ರೂಪವೂ ಹೇಗಿರುವುದಮ್ಮ"?
ಎಂದು ಕೇಳುತ್ತಾರೆ
ಆಗ ಅಮ್ಮ ತನ್ನ #ಆಶೀರ್ವಚನದಲ್ಲಿ

"ನನಗೆ ಶಿಲಾ ರೂಪವೇ ಇಲ್ಲ! "ನಾನು ಗಾಳಿಯಲ್ಲೂ ಇರುತ್ತೇನೆ
ನಾನು ನೀರಿನಲ್ಲಿ ಇರುತ್ತೇನೆ
ನಾನು ಆಕಾಶದಲ್ಲಿಯೂ ಇರುತ್ತೇನೆ
ನಾನು ಭೂಮಿಯಲ್ಲೂ ಇರುತ್ತೇನೆ"
"ಅದಕ್ಕಿಂತ ಹೆಚ್ಚಾಗಿ #ಪಂಚಭೂತಗಳಲ್ಲಿ ನಾನು ಲೀನವಾಗಿದ್ದೇನೆ ಮಗುವೇ" ಎಂದು ತಿಳಿಸುತ್ತಾಳೆ..

ಆದರೆ ಭಕ್ತರ ಒತ್ತಾಯದ ಮೇರೆಗೆ ಅಮ್ಮ ತನ್ನ ಶಿಲಾ ಸ್ವರೂಪವು ಹೀಗಿರಬಹುದೆಂದು ತಿಳಿಸುತ್ತಾಳೆ...

ಅಮ್ಮನ ಶಿಲೆ ಹೇಗಿದೆ ಎಂದರೆ ಅಮ್ಮನ #ಜಡೆಗಳು ಮೇಲೆತ್ತಿ ಮುಡಿ ಕಟ್ಟಿರುವ ಹಾಗೆ #ಶಾಂತಸ್ವರೂಪಿಣಿಯಾಗಿ ಕಮಲದ ಕಣ್ಣುಗಳನ್ನು ಹೊಂದು ಕಮಲ ಮುಖಿಯಾಗಿ ಬಲಗೈಯಲ್ಲಿ #ತಾವರೆಮೊಗ್ಗನ್ನು ಹಿಡಿದು ಎಡಗೈಯಲ್ಲಿ #ಚಿನ್ಮುದ್ರೆಯನ್ನು ಹೊಂದು ತನ್ನ ಬಲಗಾಲನ್ನು ಊನಿ ಎಡಗಾಲನ್ನು #ತಾವರೆಪುಷ್ಪದ ಮೇಲಿರಿಸಿ #ಅಷ್ಟದಳ ಪದ್ಮದ ಮೇಲೆ #ಹಸನ್ಮುಖಿಯಾಗಿ ಇರುವುದಾಗಿ ತಿಳಿಸಿದಳು.

ಈ ಎಲ್ಲ ಅಂಶಗಳನ್ನು ಒಳಗೊಂಡ ಒಂದು ಸುಂದರ ಶಿಲೆಯನ್ನು ಕೆತ್ತಿಸಿ ನಂತರ ಶಿಲೆಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾ ಪ್ರತಿಷ್ಠಾಪಿಸುವ ಮುನ್ನ ಅದನ್ನು #ಕರಿಕೋಲಂಗೆ ತೆಗೆದುಕೊಂಡು ಹೋಗಬೇಕು ಎಂದು ಅಮ್ಮನವರು ತಮ್ಮ ಆಶೀರ್ವಚನದಲ್ಲಿ ತಿಳಿಸುತ್ತಾರೆ.

ಅರೆ! ಕರಿ.....ಕರಿ....ಕರಿಕೋ.. ಕರಿಕೋಲಂ ಎಂದರೇನು?

ಕರಿ ಕೋಲಂ ಎಂದರೇ
ಹೊಸದಾದ ಒಂದು ದೈವ ವಿಗ್ರಹವನ್ನು ಮಾಡಿ ಅದನ್ನು ಗರ್ಭಗುಡಿಯಲ್ಲಿ ಸ್ಥಾಪನೆ ಮಾಡುವುದಕ್ಕೆ ಮುಂಚೆ ಕರಿ ಕೊಲಂಗೆ ಹೋಗಬೇಕು ಎನ್ನುವುದು ಒಂದು ಆಗಮ ವಿಧಾನ
ಕರಿ ಎಂದರೆ ಆನೆ ಎಂದರ್ಥ ಆ ಆನೆ ಮೇಲೆ ವಿಗ್ರಹವನ್ನಿಟ್ಟು 108 ಸ್ಥಳಗಳಿಗೆ ಕಡಿಮೆಯಾಗಿದೆ ಒಂದೊಂದು ಸ್ಥಳಕ್ಕೆ ಹೋಗಿ ಅದಕ್ಕೆ ಇದು ಶಕ್ತಿ ಕೊಟ್ಟು ಅದು ಇದಕ್ಕೆ ಶಕ್ತಿ ಕೊಟ್ಟು ಹೀಗೆ ಒಬ್ಬರಿಗೊಬ್ಬರು #ಶಕ್ತಿವಿನಿಮಯ ಮಾಡಿಕೊಂಡು 108 ಸ್ಥಳಗಳಿಗೆ ಹೋಗಿ ಬಂದ ಮೇಲೆ ಆ ವಿಗ್ರಹವನ್ನು ಪೀಠದ ಮೇಲೆ ಇಡುತ್ತಾರೆ ಇದನ್ನು ಕರಿ ಕೊಲಂ ಎನ್ನುತ್ತೇವೆ.

ವಿಪರ್ಯಾಸವೇನೆಂದರೆ....
ಈ ಕರಿ ಕೋಲಂಗೆ ಹೋಗುವ ಮುನ್ನ ಗುರು ಅಮ್ಮನವರಿಗೆ #ಭಾರೀಜ್ವರ ವಿರುತ್ತದೆ..

ಈ ಸಮಯದಲ್ಲಿ ಕಂದನನ್ನು ಕರಿ ಕೊಲಂಗೆ ಕಳಿಸುವುದಾದರೂ ಹೇಗೆ ಎಂದು ಅಮ್ಮನ ತಾಯಿ #ಮೀನಾಕ್ಷಿ ಅಮ್ಮಯಾರ್ ಯೋಚಿಸುವಾಗ

ನಮ್ಮ ಆರಾಧ್ಯ ದೈವ #ಆಧಿಪರಾಶಕ್ತಿ ಅಮ್ಮನವರು ಬಂದು ಇವನು ನನ್ನ #ಬಾಲಕ ನಾನು ಇವನನ್ನು ನೋಡಿಕೊಳ್ಳುತ್ತೇನೆ ನೀನು ಚಿಂತಿಸಬೇಡ ಎಂದು ತಿಳಿಸಿ ಹೋದಳಂತೆ.

ಅಂದು ಆ ಭಾರೀ ಜ್ವರದಲ್ಲಿ ಅಮ್ಮ ಕರಿಕೋಲಂಗೆ ಹೋದ ಸಂದರ್ಭದಲ್ಲಿ ಸೆರೆಹಿಡಿದ ಭಾವಚಿತ್ರವಿದು

Wishing A Happy Festival of Lights We Pray Amma bless all the People with Peace and ProsperityOMSHAKTHI BANGARU AMMAMELM...
12/11/2023

Wishing A Happy Festival of Lights
We Pray Amma bless all the People with Peace and Prosperity

OMSHAKTHI BANGARU AMMA

MELMARUVATHUR ADHIPARASHAKTHI WORSHIP CENTER DWARAKANAGARA

The temples in the world are built to God by peopleBut our Melmaruvathur Adhiprashakthi Siddar peedam is built by God (B...
21/10/2023

The temples in the world are built to God by people

But our Melmaruvathur Adhiprashakthi Siddar peedam is built by God (Bangaru Amma) for the people.....

ADHIPRASHAKTHI BANGARU AMMA

ಅವತಾರ ಆರಂಭINCARNATION STARTEDAlways in our hearts Bangaru Amma❤️❤️❤️❤️❤️❤️❤️❤️❤️❤️
19/10/2023

ಅವತಾರ ಆರಂಭ
INCARNATION STARTED

Always in our hearts Bangaru Amma

❤️❤️❤️❤️❤️❤️❤️❤️❤️❤️

ಕೆಲವಂ ಬಲ್ಲವರಿಂದ  ಕಲ್ತು,  ಕೆಲವಂ  ಶಾಸ್ತ್ರಂಗಳಂ  ಕೇಳುತುಂ,  ಕೆಲವಂ  ಮಾಳ್ಪವರಿಂದ  ಕಂಡು, ಕೆಲವಂ ಸುಜ್ಞಾನದಿಂ ನೋಡುತುಂ,  ಕೆಲವಂ ಸಜ್ಜನ ಸ...
05/09/2023

ಕೆಲವಂ ಬಲ್ಲವರಿಂದ  ಕಲ್ತು,  ಕೆಲವಂ  ಶಾಸ್ತ್ರಂಗಳಂ ಕೇಳುತುಂ,  ಕೆಲವಂ  ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತುಂ,  ಕೆಲವಂ ಸಜ್ಜನ ಸಂಗದಿಂದಲರಿಯಲ್,
ಎಲ್ಲವಂ ಒಂದೆಡೆ ಪಡೆವ ಏಕೈಕ ಸ್ಥಳವೇ "ಗುರು"!!!

ಗುರುವಿಂದ ಬಂಧುಗಳು; ಗುರುವಿಂದ ದೈವಗಳು; ಗುರುವಿಂದಲಾದುದು ಪುಣ್ಯ ಲೋಕಕ್ಕೆ, ಗುರುವಿಂದಲೇ ಮುಕ್ತಿ!!

ನಮಗೆ ಗುರುವಾಗಿ ನಿದರ್ಶಿಸುತ್ತಿರುವ, ಪ್ರೀತಿಯ ಪೂಜ್ಯನೀಯ ಅಮ್ಮನವರಿಗೆ ಶಿಕ್ಷಕರ ದಿನದ ಶುಭಾಶಯದೊಂದಿಗೆ, ನಮ್ಮ ಸಾಷ್ಟಾಂಗ ಪ್ರಣಾಮಗಳು 🙏🙏

Happy Teachers day to our Beloved Guru 🤩

Photo credit Amma kannada

#ಗುರುದೈವ #ಶಿಕ್ಷಕ

ಆಧ್ಯಾತ್ಮಿಕದಲ್ಲಿ ಕ್ರಾಂತಿಯ ಮೂಡಿಸುತ್ತಲೇ, ತನ್ನ 55 ದಶಕ ದಾಂಪತ್ಯ ಜೀವನವನ್ನು ಅತ್ಯದ್ಭುತವಾಗಿ ನಡೆಸಿ, ನಿದರ್ಶಿತವಾಗಿ ಬೆಳಗುತ್ತಿರುವ ಪೂಜ್ಯ...
04/09/2023

ಆಧ್ಯಾತ್ಮಿಕದಲ್ಲಿ ಕ್ರಾಂತಿಯ ಮೂಡಿಸುತ್ತಲೇ,
ತನ್ನ 55 ದಶಕ ದಾಂಪತ್ಯ ಜೀವನವನ್ನು ಅತ್ಯದ್ಭುತವಾಗಿ ನಡೆಸಿ, ನಿದರ್ಶಿತವಾಗಿ ಬೆಳಗುತ್ತಿರುವ
ಪೂಜ್ಯನೀಯ ಅಮ್ಮ ಮತ್ತು ಶ್ರೀಮತಿ ಲಕ್ಷ್ಮಿ ಬಂಗಾರು ಅಡಿಗಳಾರ್ ಅಮ್ಮನವರಿಗೆ

*"55ನೇ ವಿವಾಹ ವಾರ್ಷಿಕೋತ್ಸವ" ದಿನದ ಹಾರ್ದಿಕ ಶುಭಾಶಯಗಳು*

Wishing Arulthiru Amma and Thirumathi Amma Happy *55th Wedding Anniversary!!!*

ಓಂಶಕ್ತಿ ಅಮ್ಮವೇ ಶರಣಂ ಅಮ್ಮ ಚಂದ್ರಯಾನ 3ರ ಯಶಸ್ವಿನ ನಂತರ ಇಸ್ರೋ ವಿಜ್ಞಾನಿಗಳು ಅಮ್ಮನವರ ಆಶೀರ್ವಾದ ಪಡೆದರು
27/08/2023

ಓಂಶಕ್ತಿ ಅಮ್ಮವೇ ಶರಣಂ ಅಮ್ಮ
ಚಂದ್ರಯಾನ 3ರ ಯಶಸ್ವಿನ ನಂತರ ಇಸ್ರೋ ವಿಜ್ಞಾನಿಗಳು ಅಮ್ಮನವರ ಆಶೀರ್ವಾದ ಪಡೆದರು

ಸ್ವಯಂಭು ನೀನೇ ಬಂಗಾರು ಕಾಮಾಕ್ಷಿಯು ನೀನೇ ಜಗವೆಲ್ಲಾ ನೀನೇ ತಾಯಿ ಮೇಲ್ ಮರುವತ್ತೂರು ಆದಿಪಾರಶಕ್ತಿ
31/07/2023

ಸ್ವಯಂಭು ನೀನೇ ಬಂಗಾರು ಕಾಮಾಕ್ಷಿಯು ನೀನೇ ಜಗವೆಲ್ಲಾ ನೀನೇ ತಾಯಿ ಮೇಲ್ ಮರುವತ್ತೂರು ಆದಿಪಾರಶಕ್ತಿ

ಗತವೈಭವ 52ನೇ ಆಡಿಪೂರಂ ಮಹೋತ್ಸವದ,   *"ಮರುವೂರಿನ ಮಹಾದ್ವಾರ"*   The Grand Entrance of *Aadipooram Peruvizha 2023 at Melmaruvathu...
21/07/2023

ಗತವೈಭವ 52ನೇ ಆಡಿಪೂರಂ ಮಹೋತ್ಸವದ, *"ಮರುವೂರಿನ ಮಹಾದ್ವಾರ"* The Grand Entrance of *Aadipooram Peruvizha 2023 at Melmaruvathur Siddhar peedam*

"ಆಡಿ ಪೂರಂ ಎನ್ನುವುದು ಆಧ್ಯಾತ್ಮಿಕ ಪೂರಂ( ಆಧ್ಯಾತ್ಮಿಕ ಹಬ್ಬ).  ಪೂರಂ ಎಂದರೆ ( ತಮಿಳು ಭಾಷೆಯಲ್ಲಿ ) ಉಲ್ಲಾಸ , ಸಂತೋಷ ಎಂದು ಅರ್ಥ. ಆಡಿ ಪೂರ...
20/07/2023

"ಆಡಿ ಪೂರಂ ಎನ್ನುವುದು ಆಧ್ಯಾತ್ಮಿಕ ಪೂರಂ( ಆಧ್ಯಾತ್ಮಿಕ ಹಬ್ಬ). ಪೂರಂ ಎಂದರೆ ( ತಮಿಳು ಭಾಷೆಯಲ್ಲಿ ) ಉಲ್ಲಾಸ , ಸಂತೋಷ ಎಂದು ಅರ್ಥ. ಆಡಿ ಪೂರಂ ನಂದು ಭೂಮಂಡಲ ಎಂಬ ಗ್ರಹಕ್ಕೆ ಒಳಿತು ಉಂಟು. ಅಮ್ಮನ ಅನುಗ್ರಹಕ್ಕೂ, ತಾಯಿಯ ಪ್ರೀತಿಗೂ , ಆಡಿಪೂರಂಗೂ ಸಂಬಂಧ ಉಂಟು"

ஆடிப்பூரம் என்பது ஆன்மிகப்பூரம். பூரம் என்றால் பூரிப்பு. , மகிழ்ச்சி என்று பொருள். ஆடிப்பூரத்தில் பூமி என்ற கோளுக்கு நன்மை உண்டு. அன்னையின் அருளுக்கும், தாயின் பாசத்திற்கும் ஆடிப்பூரத்திற்கும் தொடர்பு உண்டு.

“Aadi Pooram is spiritual joy. The word ‘Pooram’ in Tamil means joy or happiness. During Aadi Pooram, there is benefit for the planet Earth. The universal Mother’s Grace, motherly affection and Aadi Pooram are linked.

Address

Bangalore

Alerts

Be the first to know and let us send you an email when Melmarvathur Adhiparashakthi Pooja Mandali Dwarakanagara posts news and promotions. Your email address will not be used for any other purpose, and you can unsubscribe at any time.

Share

Category