15/09/2026
ಓಂ ಕಾಮೇಶ್ವರ ಮುಖಾಲೋಕ-ಕಲ್ಪಿತ ಶ್ರೀಗಣೇಶ್ವರಾಯೈ ನಮಃ §
ಕಾಮೇಶ್ವರ ಮುಖಾಲೋಕ-ಕಲ್ಪಿತ ಶ್ರೀಗಣೇಶ್ವರಾ ~ ಕಾಮೇಶ್ವರನ ಮುಖಾವಲೋಕನದಿಂದ ಶ್ರೀಗಣೇಶ್ವರನನ್ನು ಕಲ್ಪಿಸಿರುವವಳು.
ಅಸುರರಿಂದ ನಿರ್ಮಿತವಾದ ನಾನಾ ವಿಧವಾದ ವಿಘ್ನಗಳಿಂದ ದೇವತೆಗಳು ಯಂತ್ರಿತರಾಗಿರುವುದನ್ನು ನೋಡಿ, ಶ್ರೀಮಾತೆಯು, ತನ್ನ ಪತಿಯ ಮುಖಾವಲೋಕನದಿಂದಲೇ ಇಪ್ಪತ್ತೆಂಟು ವರ್ಣಗಳುಳ್ಳ ಮಹಾಗಣಪತಿಯನ್ನು ಸೃಷ್ಟಿಸಿದಳು. ಆ ಮಹಾಗಣಪತಿಯ ಸಹಾಯದಿಂದ ಅಸುರರ ವಿಘ್ನಯಂತ್ರವನ್ನು ಭೇದಿಸಿ ದೇವತೆಗಳು ವಿಮೋಚನೆ ಹೊಂದಿದರು.
ಭಂಡಾಸುರನು 'ಜಯ ವಿಘ್ನ'ವೆಂಬ ಯಂತ್ರವನ್ನು ಲಲಿತಾಂಬೆಯ ಸೈನ್ಯದ ಮಧ್ಯೆ ಸ್ಥಾಪಿಸುತ್ತಾನೆ. ಆ ಯಂತ್ರದಿಂದ ಬಿಡುಗಡೆ ಪಡೆಯಲು, ಗಣೇಶನನ್ನು ಸೃಷ್ಟಿಸಿದಳು. ಆಗ ಗಣೇಶನು 'ಜಯ ವಿಘ್ನ'ವೆಂಬ ಯಂತ್ರವನ್ನು ತೆಗೆದು ಹಾಕುತ್ತಾನೆ ಎನ್ನಲಾಗಿದೆ.
( ಶ್ರೀ ಲಲಿತಾ ಸಹಸ್ರನಾಮ ~ ೭೭)
| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |
ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru