14/05/2021
ಅನೇಕ #ಮತ ಸಿದ್ಧಾಂತಗಳು ಯುಗ ಯುಗಾಂತರಗಳಿಂದ #ಧರ್ಮದ ಹೆಸರಿನಲ್ಲಿ ಭಿನ್ನತೆಯನ್ನೊಡ್ಡಿ ಮಾನವ ಸಮಾಜವನ್ನೇ ಅಧೋಗತಿಗೆ ತಂದಿದ್ದವು. #ವರ್ಣಾಶ್ರಮಗಳು ಸಮಾಜದಲ್ಲಿ ಬೇರೂರಿ ಮೇಲು-ಕೀಳುಗಳೇ ಮೊದಲಾದ ಭಾವನೆಗಳು ಮಾನವನ ಪ್ರಗತಿಯನ್ನೇ ತಡೆದಿದ್ದವು. ಇಂತಹ ವಾತಾವರಣದ ಹನ್ನೆರಡನೇ ಶತಮಾನದಲ್ಲಿ ಮಹಾನುಭಾವ #ಬಸವಣ್ಣನವರು
ಭುವಿಗವತರಿಸಿದರು. ಅವರು ತೋರಿದ ಮಾರ್ಗದರ್ಶನದಲ್ಲಿ #ಕರ್ನಾಟಕವು ಪಾವನವಾಯಿತು ಹಾಗೂ ನೆಲಸಿದ #ಕಲ್ಯಾಣ ಆತ್ಮಕಲ್ಯಾಣವಾಯಿತು. ಕಾಲ ಕ್ರಮಕ್ಕೆ ತಮ್ಮ ಮಹೋನ್ನತ ಜೀವನದಿಂದ ಮಹಾಪುರುಷರ ಮಾಲಿಕೆಯಲ್ಲಿ ವಿಶ್ವಗುರುಗಳಾಗಿ ಬೆಳೆದರು.
ಬಸವಣ್ಣನವರ ಮಾರ್ಗದರ್ಶನದಲ್ಲಿ #ಸಮಾಜಿಕ, #ಧಾರ್ಮಿಕ, #ಆರ್ಥಿಕ ಹಾಗೂ #ರಾಜಕೀಯ ರಂಗಗಳಲ್ಲಿ ಕ್ರಾಂತಿಕಾರಕ ಸುಧಾರಣೆಗಳಾಗಿ ಮಾನವ ಧರ್ಮವು ಅತ್ಯಂತ ಉನ್ನತ ಸ್ಥಿತಿಗೆ ಮುಟ್ಟಿತ್ತು. ನುಡಿದಂತೆ ನಡೆದು ತೋರಿದ, ಮಾನವ ಜನಾಂಗಕ್ಕೆ ಪ್ರಿಯರಾದ ಬಸವೇಶ್ವರರನ್ನು ಕುರಿತು #ಜನಪದರು ಹೀಗೆ ಬಣ್ಣಿಸಿದ್ದಾರೆ;
ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ
ಬಸವ ಕಾಯಕದ ಗುರುಬೀಜ | ಶಿವಮತಕೆ |
ಬಸವ ಓಂಕಾರ ಶಿವನಾಮ |
ಬಸವಣ್ಣನವರನ್ನು ನಿತ್ಯ ನೆನೆವುದೇ ಒಂದು ಆನಂದ. ಅವರು ಮಹಾಮೇಧಾವಿಗಳು, ಮಾನವತಾವಾದಿಗಳು, ತ್ರಿಕಾಲಜ್ಞಾನಿ, ಜಗಜ್ಯೋತಿ ಸ್ವರೂಪರಾಗಿದ್ದು, ಆಚಾರ-ವಿಚಾರಗಳಲ್ಲಿ ಸಂಪನ್ನರಾಗಿದ್ದರು. ಭವಿಷ್ಯದ ಭಾರತದ ಪರಿಸ್ಥಿತಿಯನ್ನು ಬಲ್ಲವರಾಗಿದ್ದರೆಂಬುದಕ್ಕೆ ಅವರ ವಚನಗಳೇ ಸಾಕ್ಷಿ. ದೀನದಲಿತರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಸಂತೋಷ.
ತುಂಬಿದುದು ತುಳುಕದು ನೋಡಾ,
ನಂಬಿದುದು ಸಂದೇಹಿಸದು ನೋಡಾ,
ಒಲಿದುದು ಓಸರಿಸದು ನೋಡಾ,
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ, ನೀನೊಲಿದ ಶರಣಂಗೆ ನಿಸ್ಸೀಮ ಸುಖವಯ್ಯ ಎಂದು #ಅಕ್ಕಮಹಾದೇವಿ ಹೇಳಿದಂತೆ ಅಧಿಕಾರ, ಸಂಪತ್ತು ಎಲ್ಲವನ್ನೂ ಹೊಂದಿದ್ದ ಬಸವಣ್ಣನವರಲ್ಲಿ ಎಳ್ಳಷ್ಟೂ ಅವುಗಳ ಗತ್ತುಗಳಿರಲಿಲ್ಲ. ಸದಾ ಸಮಾಜಸೇವೆಯ ಒಳಿತಿಗಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ಬಸವಣ್ಣನವರಿಗೊಂದು ಸಪ್ರೇಮ ನಮನ.
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ