Someಸ್ಕೃತಿ

Someಸ್ಕೃತಿ ಹಿಂದೂ ಧರ್ಮದಲ್ಲಿ ಬಹಳಷ್ಟು ಮೌಲ್ಯಗಳಿದ್ದು,ಈ ವೇದಿಕೆಯಲ್ಲಿ ಚರ್ಚಿಸೋಣ. "ಧರ್ಮೋ ರಕ್ಷತಿ ರಕ್ಷಿತಃ"

ಹಿಂದೂ ಎಂಬುದು ಜಾತಿಯಲ್ಲ, ಬದಲಾಗಿ ಅದೊಂದು ಧರ್ಮ (ಜೀವಿಸುವ ಕ್ರಮ). ಬಹಳಷ್ಟು ವೈವಿದ್ಯತೆ ಮತ್ತು ಮೌಲ್ಯಗಳುಳ್ಳ, ಈ ಧರ್ಮವು ನಮ್ಮ ಜೀವನ ಕ್ರಮವನ್ನು ನಡೆಸುವ ದಾರಿದೀಪದಂತೆ. ಅನೇಕ ಆಚಾರ ವಿಚಾರ, ಹಬ್ಬಗಳು, ಆಚರಣೆಗಳು, ನಂಭಿಕೆಗಳು ಹಾಗೂ ವೈಚಾರಿಕತೆಯುಳ್ಳ ಈ ಧರ್ಮದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲದ ಕಾರಣ, ನಮ್ಮ ಸಂಸ್ಕೃತಿಯನ್ನು ನಾವೆಲ್ಲರೂ ಮರೆತು, ನಮ್ಮ ಮಕ್ಕಳಿಗೆ ತಿಳಿಸಲು ಸಾದ್ಯವಾಗುತ್ತಿಲ್ಲ. ಹಾಗಾಗಿ ಈ ವೇದಿಕೆಯ ಮುಖೇನ ಸಮಸ್ತ ಹಿಂದೂ ಧಾರ್ಮಿಕರಲ್ಲಿ ವಿನಂತಿಸುವುದೇನೆಂದರೆ,

ನಮ್ಮ ಸುಂದರ ಸಂಸ್ಕೃತಿಯ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಂಡು ಭವ್ಯ ಪರಂಪರೆಗಳು ಹಾಗೂ ನಮ್ಮ ಆಚಾರ ವಿಚಾರಗಳನ್ನು ತಿಳಿಯೋಣ ತನ್ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಭಾಗಿಯಾಗೋಣ.

05/04/2025

ಶ್ರೀ ರಾಮ ಮಾನಸ ಪೂಜಾ

ಮುದ್ದು ರಾಮಾಯಣದ ಸಾರವನರ್ಥ ಪದ್ಯದಿ ತೆರದಿ ಪೂಜೆಗೆ
ತಿದ್ದಿ ಬರೆಯುತ ಕ್ರಮವ ಬಿಡದೆ ಶಾಸ್ತ್ರವನನುಸರಿಸಿ
ಗದ್ಯರೂಪದಲಿದ್ದ ಕಥೆಯನು ಪದ್ಯಭಾಮಿನಿಯಲಿ
ಬರೆದಿಹನೆದ್ದುಕಾಣಲು ಹಾಡಿನಿಂದಲಿ ಸುಲಭ ಶೈಲಿಯಲಿ

Remembering Anand

ಪಂಚ  #ಕರ್ಮೇಂದ್ರಿಯಗಳು, ಪಂಚ  #ಜ್ಞಾನೇಂದ್ರಿಯಗಳನ್ನು ಗೆದ್ದು ರಥವನ್ನಾಗಿಸಿಕೊಂಡ  #ದಶರಥನೊಂದು ಕಡೆ. ಅದೇ ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನ...
10/04/2022

ಪಂಚ #ಕರ್ಮೇಂದ್ರಿಯಗಳು, ಪಂಚ #ಜ್ಞಾನೇಂದ್ರಿಯಗಳನ್ನು ಗೆದ್ದು ರಥವನ್ನಾಗಿಸಿಕೊಂಡ #ದಶರಥನೊಂದು ಕಡೆ. ಅದೇ ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಗಳನ್ನು ತಲೆಯಲ್ಲಿ ಹಾಕಿಕೊಂಡ ದಶಶಿರ #ರಾವಣನೊಂದುಕಡೆ.
ಭೂಮಿಯಲ್ಲೇ ದೊರೆತು, ಕೊನೆಗೆ ಭೂಮಿಗೇ ಸೇರಿದ #ಸೀತೆ ಬಾಳ ಸಂಗಾತಿ. ಕಪಿ ಮನಸನ್ನು ನಿಗ್ರಹಿಸಿ, ಸಮ ಚಿತ್ತತೆಯಿಂದ ಭಕ್ತಿ ಮತ್ತು ನಿಷ್ಠೆಯನ್ನು ಪಾಲಿಸಿದ ಪರಮ ಭಕ್ತ #ಹನುಮಂತ.
ದಶೇಂದ್ರಿಯಗಳನ್ನು ಜಯಿಸಿದ ದಶರಥನ ಮಗ #ರಾಮ, ಮನಸಿನ ಅಭಿಮಾನಿಯಾದ #ಶಿವನ ಧನಸ್ಸನ್ನು ಅಂದರೆ ಮನಸನ್ನು ನಿಗ್ರಹಿಸಿ ಶಿವ ಧನಸ್ಸನ್ನು ಎತ್ತಿಹಿಡಿದ ರಾಮ, ಕಲ್ಲು ಮನಸನ್ನಾಗಿಸಿ ಕುಳಿತ #ಅಹಲ್ಯೆಗೆ ಜೀವ ಚಿಲುಮೆಯನ್ನು ನೀಡಿದ ರಾಮ, ಧರ್ಮವನ್ನು ಕರ್ಮಯೋಗದ ಮುಖಾಂತರ ಪಾಲಿಸಿ, ಜೀವಿಸಿ ತೋರಿಸಿದ ರಾಮ, ಜನಿಸಿದ್ದು ನವಮಿಯಂದು. ಒಂಭತ್ತು ಬಾಗಿಲುಗಳನ್ನು ಮುಚ್ಚಿ ಹತ್ತನೇ ಬಾಗಿಲಿನಿಂದ #ಮೋಕ್ಷಹೊಂದುವ ದಾರಿ ತೋರಿದ ಭಗವಂತ ರಾಮ. ರಾಮ #ನಾಮ ಮುಕ್ತಿಗೆ ಮಾರ್ಗ, ರಾಮ ನಾಮ ಬದುಕಿಗೆ ಮಾರ್ಗ, ರಾಮ ನಾಮ ಇಹದಲ್ಲೇ ಸ್ವರ್ಗ. #ರಾಮ_ನವಮಿ ಶುಭಾಶಯಗಳು.

ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ

ಚೈತ್ರಮಾಸ ಶುಕ್ಲ ಪಕ್ಷದ ಪಾಡ್ಯ ತಿಥಿಯು ನವ ಸಂವತ್ಸರದ ಮೊದಲನೆಯ ದಿನ. ಕೃತ, ತ್ರೇತಾ, ದ್ವಾಪರ, ಕಲಿ ಮುಂತಾದ ಯುಗಗಳಲ್ಲಿ ಆರಂಭವಾದ ಈ ದಿನವನ್ನು ...
01/04/2022

ಚೈತ್ರಮಾಸ ಶುಕ್ಲ ಪಕ್ಷದ ಪಾಡ್ಯ ತಿಥಿಯು ನವ ಸಂವತ್ಸರದ ಮೊದಲನೆಯ ದಿನ. ಕೃತ, ತ್ರೇತಾ, ದ್ವಾಪರ, ಕಲಿ ಮುಂತಾದ ಯುಗಗಳಲ್ಲಿ ಆರಂಭವಾದ ಈ ದಿನವನ್ನು ಯುಗಾದಿ ಎಂದು ಕರೆಯಲಾಗಿದೆ. ಪ್ರಸ್ತುತ ಶ್ರೀ ಪ್ಲವ ನಾಮ ಸಂವತ್ಸರವು ಕಳೆದು, ಶುಭಕೃನ್ನಾಮ ಸಂವತ್ಸರವು ಬರುತ್ತಿದೆ. ಈ ಜಗತ್ತಿನಲ್ಲಿ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ, ಕೀರ್ತಿ-ಅಪಕೀರ್ತಿ, ಮಾನ-ಅಪಮಾನ, ಪಾಪ-ಪುಣ್ಯಗಳೇ ಮುಂತಾದುವುಗಳನ್ನು ಕಾಣಬಹುದು. ಹಾಗೂ ಇದರ ಪೂರಕವಾಗಿಯೇ ಯುಗಾದಿಯಂದು ಬೇವು-ಬೆಲ್ಲವೆಂಬ ಜೋಡಿಯನ್ನು ಸ್ವೀಕರಿಸಲಾಗುತ್ತದೆ. ಈ ಎಲ್ಲ ಯುಗಗಳಿಗೆ ಮೂಲವಾದ ಅಥವಾ ಆದಿಯಾದ ದಿನವೇ ಯುಗಾದಿ.
ಇಂತಹ ಉಪಯುಕ್ತ ಮಾಹಿತಿಯನ್ನು ಕಾಲಕಾಲಕ್ಕೆ ನಿಮ್ಮ ವಾಟ್ಸಪ್‌ನಲ್ಲಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ - https://chat.whatsapp.com/LcRUdG8GYb9DlhAAu0NDSE
ನಮ್ಮ ನಾಡು, ನಮ್ಮ ನುಡಿ, ನಮ್ಮ ್ಕೃತಿ

ಸೂರ್ಯ ನವಗ್ರಹಗಳಿಗೆ ಅಧಿಪತಿ ಹಾಗೂ ಸೃಷ್ಟಿಕಾರಕನೆಂದೂ ಕರೆಯಲ್ಪಡುತ್ತಾನೆ. ಮಹಾವಿಷ್ಣುವಿನ ಅಂಶರೂಪಿಯಾಗಿ ಮಿತ್ರಾ, ರವಿ, ಸೂರ್ಯ, ಭಾನು, ಖಗ, ಪೂ...
07/02/2022

ಸೂರ್ಯ ನವಗ್ರಹಗಳಿಗೆ ಅಧಿಪತಿ ಹಾಗೂ ಸೃಷ್ಟಿಕಾರಕನೆಂದೂ ಕರೆಯಲ್ಪಡುತ್ತಾನೆ. ಮಹಾವಿಷ್ಣುವಿನ ಅಂಶರೂಪಿಯಾಗಿ ಮಿತ್ರಾ, ರವಿ, ಸೂರ್ಯ, ಭಾನು, ಖಗ, ಪೂಷಾ, ಹಿರಣ್ಯಗರ್ಭ, ಮರೀಚಿ, ಆದಿತ್ಯ, ಸವಿತೃ, ಅರ್ಕ ಹಾಗೂ ಭಾಸ್ಕರನೆಂದೂ ಪ್ರಸಿದ್ಧ. ರಾಮಾಯಣ, ಮಹಾಭಾರತಗಳಲ್ಲಿ ಸೂರ್ಯನ ಪ್ರಾಮುಖ್ಯತೆ ಮುಖ್ಯವಾಹಿನಿಯಾಗಿಯೂ, ಉಪಕಥೆಗಳಲ್ಲಿಯೂ ದಾಖಲಿಸಲ್ಪಟ್ಟಿದೆ. ಅಂತಹ ಸೂರ್ಯ ನಾರಾಯಣನಿಗೆ ರಥ ಸಪ್ರಮಿಯಂದು ವಿಶೇಷ ಪೂಜೆ ಸಲ್ಲಿಸುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗಿ, ನಮ್ಮೆಲ್ಲ ಇಷ್ಟಾರ್ಥಗಳು ಸಿದ್ಧಿಸುವುವು ಎಂಬುದು ಭಕ್ತರ ನಂಬಿಕೆ.
ರಥ ಸಪ್ತಮೀ ಪೂಜಾ ವಿಧಿಯನ್ನು ತಿಳಿಯಲು ಲಿಂಕ್ ಕ್ಲಿಕ್ ಮಾಡಿ - https://bit.ly/2ZF9033
ಇಂತಹ ಉಪಯುಕ್ತ ಮಾಹಿತಿಯನ್ನು ಕಾಲಕಾಲಕ್ಕೆ ನಿಮ್ಮ ವಾಟ್ಸಪ್‌ನಲ್ಲಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ - https://chat.whatsapp.com/LcRUdG8GYb9DlhAAu0NDSE
ನಮ್ಮ ನಾಡು, ನಮ್ಮ ನುಡಿ, ನಮ್ಮ ್ಕೃತಿ

 #ಸೂರ್ಯ  #ಮಕರ ರಾಶಿಗೆ ಪ್ರವೇಶ ಮಾಡುವ ಪರ್ವ ಕಾಲವೇ  #ಮಕರ  #ಸಂಕ್ರಾಂತಿ ಹಬ್ಬ. ಈ ದಿನ ಉತ್ತರಾಯಣ ಪುಣ್ಯಕಾಲದ ಪ್ರಾರಂಭವೂ ಹೌದು.ಪ್ರಸ್ತುತ ದಿ...
14/01/2022

#ಸೂರ್ಯ #ಮಕರ ರಾಶಿಗೆ ಪ್ರವೇಶ ಮಾಡುವ ಪರ್ವ ಕಾಲವೇ #ಮಕರ #ಸಂಕ್ರಾಂತಿ ಹಬ್ಬ. ಈ ದಿನ ಉತ್ತರಾಯಣ ಪುಣ್ಯಕಾಲದ ಪ್ರಾರಂಭವೂ ಹೌದು.
ಪ್ರಸ್ತುತ ದಿನಾಂಕ 15.1.2022 ಶನಿವಾರದಂದು ಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬವನ್ನು ಸರಳವಾಗಿ ಆಚರಿಸುವ ವಿಧಿಯನ್ನು ತಿಳಿಯಲು ಲಿಂಕ್ https://bit.ly/3by2271 ಕ್ಲಿಕ್ ಮಾಡಿ.

Someಸ್ಕೃತಿ ಕುಟುಂಬದಿಂದ ಸರ್ವರಿಗೂ ್ರಾಂತಿಯ ಶುಭಾಶಯಗಳು.
ಇಂತಹ ಉಪಯುಕ್ತ ಮಾಹಿತಿಯನ್ನು ಕಾಲಕಾಲಕ್ಕೆ ನಿಮ್ಮ ವಾಟ್ಸಪ್‌ನಲ್ಲಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ - https://chat.whatsapp.com/LcRUdG8GYb9DlhAAu0NDSE
ಧರ್ಮಾಸಕ್ತರು ಲಿಂಕ್ ಕ್ಲಿಕ್ ಮಾಡಿ https://someskruti.wordpress.com/

ಪ್ರೀತಿಯ Someಸ್ಕೃತಿ ಕುಟುಂಬದ ಎಲ್ಲಾ ಸದಸ್ಯರಿಗೂ ನಮಸ್ಕಾರಗಳು.... ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮಾಹಿತಿ ಹಾಗೂ ಸುದ್ಧಿ ಸಮಾಚಾರಗಳನ್...
14/01/2022

ಪ್ರೀತಿಯ Someಸ್ಕೃತಿ ಕುಟುಂಬದ ಎಲ್ಲಾ ಸದಸ್ಯರಿಗೂ ನಮಸ್ಕಾರಗಳು....
ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮಾಹಿತಿ ಹಾಗೂ ಸುದ್ಧಿ ಸಮಾಚಾರಗಳನ್ನು ಎಲ್ಲರೊಂದಿಗೂ ವಿನಿಮಯ ಮಾಡುತ್ತಿರುವ ಸದಸ್ಯರಿಗೆ ನನ್ನ ಅನಂತಾನಂತ ಧನ್ಯವಾದಗಳು. ಏತನ್ಮಧ್ಯೆ ಅನಾರೋಗ್ಯದ ಕಾರಣದಿಂದಾಗಿ ಕಳೆದ ಕೆಲವು ತಿಂಗಳುಗಳ ಕಾಲ ಯಾವುದೇ ರೀತಿಯ ಪೋಸ್ಟ್‌ಗಳನ್ನು ಹಾಕಲು ಸಾಧ್ಯವಾಗಲಿಲ್ಲ. ದೇವರ ಕೃಪೆ ಹಾಗೂ ಸಹೃದಯಿಗಳ ಆಶೀವಾದದಿಂದಾಗಿ ಗುಣಮುಖನಾಗುತಿದ್ದೇನೆ. ಅದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಇಷ್ಟು ವರ್ಷ ನಮ್ಮ ಕುಟುಂಬದ ಸದಸ್ಯರಾಗಿ ಅತ್ಯೋತ್ಸಾಹದಿಂದ ಚರ್ಚೆಗಳಲ್ಲಿ ಭಾಗಿಯಾದ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತ, ಮುಂದಿನ ದಿನಗಳಲ್ಲಿಯೂ ಕುಟುಂಬವನ್ನು ಸಲಹುವಿರೆಂಬ ಅಭಿಲಾಷೆಯನ್ನು ಹೊಂದಿದ್ದೇವೆ.
https://chat.whatsapp.com/LcRUdG8GYb9DlhAAu0NDSE

ವೈಶಾಖ ಶುಕ್ಲ ಚತುರ್ದಶಿಯಾದ ಇಂದು ಶ್ರೀಲಕ್ಷ್ಮೀ ನೃಸಿಂಹ ಸ್ವಾಮಿ ಜಯಂತಿಯನ್ನು ಆಚರಿಸಲಾಗುತ್ತದೆ.  #ಪ್ರಹ್ಲಾದನ ಭಕ್ತಿಗೆ ಮೆಚ್ಚಿ , ಆತನ ತಂದೆಯ...
25/05/2021

ವೈಶಾಖ ಶುಕ್ಲ ಚತುರ್ದಶಿಯಾದ ಇಂದು ಶ್ರೀಲಕ್ಷ್ಮೀ ನೃಸಿಂಹ ಸ್ವಾಮಿ ಜಯಂತಿಯನ್ನು ಆಚರಿಸಲಾಗುತ್ತದೆ. #ಪ್ರಹ್ಲಾದನ ಭಕ್ತಿಗೆ ಮೆಚ್ಚಿ , ಆತನ ತಂದೆಯಾದ ದೈತ್ಯರಾಜ #ಹಿರಣ್ಯಕಶ್ಯಪನನ್ನು ಸಂಹರಿಸಿದ #ನೃಸಿಂಹಾವತಾರಿ #ಶ್ರೀಹರಿಗೆ ದೇವಾನು ದೇವತೆಗಳು ಹೂಮಳೆಗರೆದರು. ಬ್ರಹ್ಮಾದಿ ದೇವತೆಗಳು ಅಲ್ಲಿಗೆ ಬಂದು ಪ್ರಹ್ಲಾದನನ್ನು ದೈತ್ಯರಾಜನನ್ನಾಗಿ ಪಟ್ಟಾಭಿಷೇಕ ಮಾಡಿದರು; ಪ್ರಜೆಗಳು ಧರ್ಮಪರರಾದರು. ಅತ್ತ ಶ್ರೀಹರಿಯು ದೇವತೆಗಳನ್ನೂ ದೇವೇಂದ್ರನೊಡನೆ ದೇವಲೋಕದಲ್ಲಿ ಸ್ಥಾಪಿಸಿದನು. ಹೀಗೆ ಶ್ರೀಹರಿಯು ಶ್ರೀನೃಸಿಂಹಾವತಾರವನ್ನು ಪೂರ್ಣಗೊಳಿಸಿ ಲೋಕವನ್ನು ರಕ್ಷಿಸಿ, ಭಕ್ತರ ಹಿತಕ್ಕಾಗಿಯೂ, ದುಷ್ಟರ ನಾಶಕ್ಕಾಗಿಯೂ ಅಹೋಬಲದಲ್ಲಿ ನೆಲೆಸಿದನೆಂಬುದು ಭಕ್ತನರ ನಂಬಿಕೆ.

ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ
ಅಹೋಬಲ ಕ್ಷೇತ್ರದ ಮಹಿಮೆಯನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಪಡೆಯಲು https://chat.whatsapp.com/LcRUdG8GYb9DlhAAu0NDSE ಲಿಂಕ್ ಕ್ಲಿಕ್ ಮಾಡಿ.

ಅನಾದಿ ವೇದಕಾಲದಿಂದ ಇಂದಿನವರೆಗೂ ನಿರಂತರವಾಗಿ ಹರಿಯುತ್ತಿರುವ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಗಂಗೆಯ ಮೂರ್ತ ಸ್ವರೂಪರೇ ಆದಿ ಶಂಕರಾಚಾರ್ಯರು. ಪರಮ...
17/05/2021

ಅನಾದಿ ವೇದಕಾಲದಿಂದ ಇಂದಿನವರೆಗೂ ನಿರಂತರವಾಗಿ ಹರಿಯುತ್ತಿರುವ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಗಂಗೆಯ ಮೂರ್ತ ಸ್ವರೂಪರೇ ಆದಿ ಶಂಕರಾಚಾರ್ಯರು. ಪರಮಜ್ಞಾನದ ತವನಿಧಿಗಳಾದ #ಉಪನಿಷತ್ತುಗಳಿಗೆ, ಶಾಸ್ತ್ರಮರ್ಯಾದೆಗೆ ಮಾದರಿಯಾಗಿರುವ #ಬ್ರಹ್ಮಸೂತ್ರಕ್ಕೆ, ಕಾಲಾನಂತರದಲ್ಲಿ ಭಾಗವತ ಧರ್ಮದ ವಿನೂತನ ಯುಗವನ್ನೇ ಪ್ರವರ್ತಿಸಿದ #ಭಗವದ್ಗೀತೆಗೆ ಶಂಕರರು ಬರೆದಿರುವ “ #ಭಾಷ್ಯ”ಗಳು ಬರಿಯ ವಿವರಣೆಗಳಲ್ಲ; ಅವು ಸ್ವಂತಂತ್ರ ಪ್ರಮಾಣಗ್ರಂಥಗಳೇ ಎನ್ನುವ ಖ್ಯಾತಿಯನ್ನು ಗಳಿಸಿದೆ. ಅವರನ್ನು #ಪರಮಹಂಸ #ಪರಿವ್ರಾಜಕಾಚಾರ್ಯ, ಲೋಕೈಕ ಜಗದ್ಗುರು, #ಷಣ್ಮತಸ್ಥಾಪನಾಚಾರ್ಯ, #ಭಗವತ್ಪಾದ, #ಅಧ್ವೈತಪ್ರತಿಷ್ಠಾಪನಾಚಾರ್ಯ, #ಪರಮಗುರು, ಪರಶಿವನ ಪುರುಷಾವತಾರ ಎಂದು ಮುಂತಾಗಿ ಕರೆದು ವೇದಾಂತವಿದ್ಯಾರಸಿಕರು ಅವರ ಬಗೆಗೆ ತಮ್ಮ ಗೌರವವನ್ನು ಶತಶತಮಾನಗಳಿಂದಲೂ ಸಲ್ಲಿಸುತ್ತ ಬಂದಿದ್ದಾರೆ.

ವೈಶಾಖ ಶುಕ್ಲ ಪಂಚಮಿಯಾದ ಇಂದು ಪ್ರಪಂಚದಾದ್ಯಂತ #ಜಗದ್ಗುರು #ಶಂಕರಾಚಾರ್ಯರ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಚಾರ್ಯರಿಗೊಂದು ಸಪ್ರೇಮ ನಮನ.
ಕಾಲಕಾಲಕ್ಕೆ ನಿಮ್ಮ ವಾಟ್ಸಪ್‌ನಲ್ಲಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ - https://chat.whatsapp.com/LcRUdG8GYb9DlhAAu0NDSE
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ

ಅನೇಕ  #ಮತ ಸಿದ್ಧಾಂತಗಳು ಯುಗ ಯುಗಾಂತರಗಳಿಂದ  #ಧರ್ಮದ ಹೆಸರಿನಲ್ಲಿ ಭಿನ್ನತೆಯನ್ನೊಡ್ಡಿ ಮಾನವ ಸಮಾಜವನ್ನೇ ಅಧೋಗತಿಗೆ ತಂದಿದ್ದವು.  #ವರ್ಣಾಶ್ರ...
14/05/2021

ಅನೇಕ #ಮತ ಸಿದ್ಧಾಂತಗಳು ಯುಗ ಯುಗಾಂತರಗಳಿಂದ #ಧರ್ಮದ ಹೆಸರಿನಲ್ಲಿ ಭಿನ್ನತೆಯನ್ನೊಡ್ಡಿ ಮಾನವ ಸಮಾಜವನ್ನೇ ಅಧೋಗತಿಗೆ ತಂದಿದ್ದವು. #ವರ್ಣಾಶ್ರಮಗಳು ಸಮಾಜದಲ್ಲಿ ಬೇರೂರಿ ಮೇಲು-ಕೀಳುಗಳೇ ಮೊದಲಾದ ಭಾವನೆಗಳು ಮಾನವನ ಪ್ರಗತಿಯನ್ನೇ ತಡೆದಿದ್ದವು. ಇಂತಹ ವಾತಾವರಣದ ಹನ್ನೆರಡನೇ ಶತಮಾನದಲ್ಲಿ ಮಹಾನುಭಾವ #ಬಸವಣ್ಣನವರು
ಭುವಿಗವತರಿಸಿದರು. ಅವರು ತೋರಿದ ಮಾರ್ಗದರ್ಶನದಲ್ಲಿ #ಕರ್ನಾಟಕವು ಪಾವನವಾಯಿತು ಹಾಗೂ ನೆಲಸಿದ #ಕಲ್ಯಾಣ ಆತ್ಮಕಲ್ಯಾಣವಾಯಿತು. ಕಾಲ ಕ್ರಮಕ್ಕೆ ತಮ್ಮ ಮಹೋನ್ನತ ಜೀವನದಿಂದ ಮಹಾಪುರುಷರ ಮಾಲಿಕೆಯಲ್ಲಿ ವಿಶ್ವಗುರುಗಳಾಗಿ ಬೆಳೆದರು.

ಬಸವಣ್ಣನವರ ಮಾರ್ಗದರ್ಶನದಲ್ಲಿ #ಸಮಾಜಿಕ, #ಧಾರ್ಮಿಕ, #ಆರ್ಥಿಕ ಹಾಗೂ #ರಾಜಕೀಯ ರಂಗಗಳಲ್ಲಿ ಕ್ರಾಂತಿಕಾರಕ ಸುಧಾರಣೆಗಳಾಗಿ ಮಾನವ ಧರ್ಮವು ಅತ್ಯಂತ ಉನ್ನತ ಸ್ಥಿತಿಗೆ ಮುಟ್ಟಿತ್ತು. ನುಡಿದಂತೆ ನಡೆದು ತೋರಿದ, ಮಾನವ ಜನಾಂಗಕ್ಕೆ ಪ್ರಿಯರಾದ ಬಸವೇಶ್ವರರನ್ನು ಕುರಿತು #ಜನಪದರು ಹೀಗೆ ಬಣ್ಣಿಸಿದ್ದಾರೆ;
ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ
ಬಸವ ಕಾಯಕದ ಗುರುಬೀಜ | ಶಿವಮತಕೆ |
ಬಸವ ಓಂಕಾರ ಶಿವನಾಮ |
ಬಸವಣ್ಣನವರನ್ನು ನಿತ್ಯ ನೆನೆವುದೇ ಒಂದು ಆನಂದ. ಅವರು ಮಹಾಮೇಧಾವಿಗಳು, ಮಾನವತಾವಾದಿಗಳು, ತ್ರಿಕಾಲಜ್ಞಾನಿ, ಜಗಜ್ಯೋತಿ ಸ್ವರೂಪರಾಗಿದ್ದು, ಆಚಾರ-ವಿಚಾರಗಳಲ್ಲಿ ಸಂಪನ್ನರಾಗಿದ್ದರು. ಭವಿಷ್ಯದ ಭಾರತದ ಪರಿಸ್ಥಿತಿಯನ್ನು ಬಲ್ಲವರಾಗಿದ್ದರೆಂಬುದಕ್ಕೆ ಅವರ ವಚನಗಳೇ ಸಾಕ್ಷಿ. ದೀನದಲಿತರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಸಂತೋಷ.

ತುಂಬಿದುದು ತುಳುಕದು ನೋಡಾ,
ನಂಬಿದುದು ಸಂದೇಹಿಸದು ನೋಡಾ,
ಒಲಿದುದು ಓಸರಿಸದು ನೋಡಾ,
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ, ನೀನೊಲಿದ ಶರಣಂಗೆ ನಿಸ್ಸೀಮ ಸುಖವಯ್ಯ ಎಂದು #ಅಕ್ಕಮಹಾದೇವಿ ಹೇಳಿದಂತೆ ಅಧಿಕಾರ, ಸಂಪತ್ತು ಎಲ್ಲವನ್ನೂ ಹೊಂದಿದ್ದ ಬಸವಣ್ಣನವರಲ್ಲಿ ಎಳ್ಳಷ್ಟೂ ಅವುಗಳ ಗತ್ತುಗಳಿರಲಿಲ್ಲ. ಸದಾ ಸಮಾಜಸೇವೆಯ ಒಳಿತಿಗಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ಬಸವಣ್ಣನವರಿಗೊಂದು ಸಪ್ರೇಮ ನಮನ.

ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ

ಚಿನ್ನ ಕೊಳ್ಳುವ ಮೊದಲು ಒಮ್ಮೆ ಲಿಂಕ್ https://bit.ly/3w4Q3ER ಕ್ಲಿಕ್ ಮಾಡಿ. ಸರ್ವರಿಗೂ ಅಕ್ಷಯ ತದಿಗೆಯ ಶುಭಾಶಯಗಳು. ಇಂತಹ ಉಪಯುಕ್ತ ಮಾಹಿತಿ...
14/05/2021

ಚಿನ್ನ ಕೊಳ್ಳುವ ಮೊದಲು ಒಮ್ಮೆ ಲಿಂಕ್ https://bit.ly/3w4Q3ER ಕ್ಲಿಕ್ ಮಾಡಿ. ಸರ್ವರಿಗೂ ಅಕ್ಷಯ ತದಿಗೆಯ ಶುಭಾಶಯಗಳು. ಇಂತಹ ಉಪಯುಕ್ತ ಮಾಹಿತಿಯನ್ನು ಕಾಲಕಾಲಕ್ಕೆ ನಿಮ್ಮ ವಾಟ್ಸಪ್‌ನಲ್ಲಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ - https://chat.whatsapp.com/LcRUdG8GYb9DlhAAu0NDSE
ನಮ್ಮ ನಾಡು, ನಮ್ಮ ನುಡಿ, ನಮ್ಮ ್ಕೃತಿ

ವೈಶಾಖ ಮಾಸದ ಶುಕ್ಲಪಕ್ಷದ ತೃತೀಯ ಅಂದರೆ ನಾಳೆ ಶುಕ್ರವಾರ 14.5.2021ರಂದು  #ಅಕ್ಷಯತದಿಗೆಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯ – ಚಂದ್ರರು ತಮ...
13/05/2021

ವೈಶಾಖ ಮಾಸದ ಶುಕ್ಲಪಕ್ಷದ ತೃತೀಯ ಅಂದರೆ ನಾಳೆ ಶುಕ್ರವಾರ 14.5.2021ರಂದು #ಅಕ್ಷಯತದಿಗೆಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯ – ಚಂದ್ರರು ತಮ್ಮ ಗರಿಷ್ಠತಮ ಕಾಂತಿ ಹೊಂದುವುದರಿಂದ ದಿನವಿಡೀ ಮಂಗಳಕರವೇ! #ಅಕ್ಷರಾಭ್ಯಾಸ, #ಮದುವೆ, #ಮುಂಜಿ, #ಗೃಹಪ್ರವೇಶ, ಹೊಸ #ವ್ಯವಹಾರ ಆರಂಭ, #ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ಭಕ್ತರಲ್ಲಿ ನಂಬಿಕೆ. ಈ ದಿನ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ.
🌸 ಅಕ್ಷಯತದಿಗೆ ದಿನದಂದೇ ಮಹರ್ಷಿ #ವೇದವ್ಯಾಸರು #ಗಣಪತಿಯ ಅಮೃತಹಸ್ತದಿಂದ #ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರಂತೆ.
🌸ಶ್ರೀ #ಮಹಾವಿಷ್ಣುವಿನ ಅವತಾರವೆನಿಸಿದ #ಪರಶುರಾಮನ ಜನನ ಇದೇ ದಿನವೆಂದು ಪ್ರತೀತಿ.
🌸 #ಶ್ರೀಕೃಷ್ಣನ ಅಣ್ಣನಾದ #ಬಲರಾಮ ಜನನ.
🌸 ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯ ತದಿಗೆ.
🌸 ಜನ್ಮಾಂತರಗಳ ಪಾಪ, ದೋಷಗಳನ್ನು ತೊಳೆಯಿುವ #ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.
🌸 ಸಂಪತ್ತಿನ ಒಡೆಯ, ದೇವತೆಗಳಲ್ಲೆಲ್ಲಾ ಅತಿ ಸಿರಿವಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜ #ಕುಬೇರ, #ಮಹಾಲಕ್ಷ್ಮಿಯ ಪೂಜೆ ಮಾಡುವ ಶುಭದಿನ ಈ ಅಕ್ಷಯತದಿಗೆ.
🌸ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ.
🌸 ೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ #ಬಸವಣ್ಣನವರು ಜನಿಸಿದ್ದು ಇದೇ ದಿನದಂದು.
🌸 ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ #ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಪಡಿಸಿದ್ದು.

ಅಕ್ಷಯತದಿಗೆಯಂದು ಚಿನ್ನವನ್ನು ಖರೀದಿಸುವ ಹಿಂದಿನ ಕಾರಣವನ್ನು ತಿಳಿಯಲು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ. ನಮ್ಮ #ನಾಡು, ನಮ್ಮ #ನುಡಿ, ನಮ್ಮ Someಸ್ಕೃತಿ

ಇನ್ನೇನು  #ಶ್ರೀರಾಮನವಮೀ ಬಂದೇಬಿಡ್ತು,  # #ಕೋಸಂಬರಿ ಪಾನಕಗಳ ಸಮಾರಾಧನೆ ಪ್ರಾರಂಭವಾಗ್ಬೇಕು. ಆದರೆ ಏನ್ ಮಾಡೋದು, ಮತ್ತೆ ಈ  #ಕರೋನಾಸುರ ವಕ್ಕರ...
20/04/2021

ಇನ್ನೇನು #ಶ್ರೀರಾಮನವಮೀ ಬಂದೇಬಿಡ್ತು, # #ಕೋಸಂಬರಿ ಪಾನಕಗಳ ಸಮಾರಾಧನೆ ಪ್ರಾರಂಭವಾಗ್ಬೇಕು. ಆದರೆ ಏನ್ ಮಾಡೋದು, ಮತ್ತೆ ಈ #ಕರೋನಾಸುರ ವಕ್ಕರಿಸಿದ್ದಾನೆ. ಅಸುರನಿಂದ ವಿಮುಕ್ತಿಹೊಂದಲು ದೇಶ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಉತ್ಸವಾದಿಗಳನ್ನು ನಿಷೇಧಿಸಲಾಗಿದೆ ಎಂಬ ಬೇಸರ ಬೇಡ. #ರಾಮಾಯಣದಲ್ಲಿ #ಲಕ್ಷ್ಮಣ_ರೇಖೆಯನ್ನು ದಾಟಿದ #ಸೀತೆಯ ಪರಿಸ್ಥಿಯನ್ನು ಒಮ್ಮೆ ಯೋಚಿಸಿ. ಆಗೇನೋ ಒಬ್ಬ #ರಾವಣಾಸುರ, ಈಗ ಸಹಸ್ರಾರು ಕರೋನಾಸುರರ ಉಪಟಳ. ಅದೇನೇ ಇರ್ಲಿ ಅಸುರನ ಸಂಹಾರಕ್ಕೆ ಪ್ರಜ್ಞಾವಂತ ಸೈನಿಕರಾದ ನಾವೆಲ್ಲರೂ ಲಕ್ಷ್ಮಣ ( #ಸರ್ಕಾರ) ಹಾಕಿರುವ ರೇಖೆಯನ್ನು ದಾಟದಿರುವುದೇ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು.
ಶ್ರೀರಾಮನವಮಿಯನ್ನು ಸರಳವಾಗಿ #ಮನೆಯಲ್ಲೇ ಆಚರಿಸಿ, #ಸಾಮಾಜಿಕ #ಅಂತರವನ್ನು ಕಾಯ್ದುಕೊಳ್ಳೋಣ. ದೇಶವನ್ನು #ರೋಗ ಮುಕ್ತವಾಗಿಸೋಣ.

Someಸ್ಕೃತಿ ಕುಟುಂಬದಿಂದ ಸರ್ವರಿಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು.

Address

Bangalore

Alerts

Be the first to know and let us send you an email when Someಸ್ಕೃತಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Someಸ್ಕೃತಿ:

Share