03/02/2024
ಗ್ರಾಮದೇವತೆ, ಆದಿಶಕ್ತಿ ಜಗನ್ಮಾತೆ ಶ್ರೀ ಪಿಳೇಕಮ್ಮ ದೇವಿ ದೇವಾಲಯದ ವಿಶೇಷತೆ :
ತ್ರಿಶೂಲ- ಕತ್ತಿ ಹಸ್ತಳಾಗಿ, ಡಮರುಗವನ್ನು ಧಾರಣೆಮಾಡಿಕೊಂಡು ರಾಜ ವೈಭವದಿಂದ ವಿರಾಜಮಾನಳಾಗಿ ದುಷ್ಟ ಸಂಹಾರ, ಶಿಷ್ಟ ರಕ್ಷಕಿ, ತುಂಬು ಮುತ್ತೈದೆ ಶ್ರೀ ಪಿಳೇಕಾಂಬಿಕೆ ದೇವಿಯು ಶಕ್ತಿ ಸ್ವರೂಪಿಣಿ ದುರ್ಗಾ ಪರಮೇಶ್ವರೀ. ಈ ಶಕ್ತಿ ದೇವತೆಗೆ ಭಕ್ತಿಯಿಂದ ಬೇಡಿಕೊಂಡಿರುವ ವರಗಳನ್ನು ಕರುಣಿಸುವ ದೇವಿಯಾಗಿದ್ದು. ಈ ಪವಿತ್ರ ಸ್ಥಳದಲ್ಲಿ ಮೂರು ಮುಖ್ಯ ದೇವರಾದ ಪಿಳೇಕಮ್ಮ, ಮುನೀಶ್ವರನನ್ನು ಮತ್ತು ಬಿಸಿಲು ಮಾರಮ್ಮ ದೇವಿಯನ್ನು ಪೂಜಿಸಿದರೆ ಕಂಕಣ ಭಾಗ್ಯ ಸಂತಾನ ಭಾಗ್ಯ ಗೃಹ ನಿರ್ಮಾಣಭಾಗ್ಯ ಮತ್ತು ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಈ ಊರಿನಲ್ಲಿ ನೂರು ವರ್ಷಗಳಿಂಧ ನೆಲೆ ನಿಂತ ಪಿಳೇಕಮ್ಮ ದೇವಿ ಅಧಿದೇವತೆ, ಎಲ್ಲವೂ ಇವಳಿಗೆ ಸಲ್ಲಬೇಕು. ಪ್ರತಿ ಶುಕ್ರವಾರ ಮೊದಲ ಪೂಜೆ ಅವಳ ಹಿರಿಯ ಸಹೋದರ ಮುನೀಶ್ವರನಿಗೆ ಸಲ್ಲಿಸುವುದು ಈ ಗ್ರಾಮದಲ್ಲಿ ವಾಡಿಕೆ. ಪ್ರತಿ ಶುಕ್ರವಾರ ಬೆಳಗ್ಗೆ 10:30 AM ಕ್ಕೆ ವಿಶೇಷ ಪೂಜೆ ಇರುತ್ತದೆ. ಈ ಮೂರು ದೇವರುಗಳನ್ನು ,ನಮ್ಮ ಗ್ರಾಮದ ಅಧಿದೇವತೆ, ಊರಿನ ಕಾವಲು ದೇವತೆ ಎಂದು ಕರೆಯುವುದುಂಟು. ಗುಂಡುತೋಪು ಜಡಮುನೀಶ್ವರನಿಂದ ಬೃಹತ್ ಗಾತ್ರದ ಆಲದ ಮರ ,ನೇರಳೆಹಣ್ಣಿನ ಮರ,ಮಾವಿನ ಮರಗಳನ್ನು ಬೆಳೆಸಲಾಯಿತು .ಮುನೀಶ್ವರ ಎಂಬ 2 ಪದಗಳಿಂದ ಬಂದದ್ದು ಒಂದು ಮುನಿ ಅಂದರೆ ಋಷಿ ಮತ್ತು ಈಶ್ವರ ಎಂದರೆ ಶಿವ (ವಿನಾಶದ ಹಿಂದೂ ದೇವರು). ಮುನೀಶ್ವರನ ಪ್ರಾರ್ಥನೆಯು ತನ್ನ ಭಕ್ತರ ಆನಂದವನ್ನು ಸಾಧಿಸಲು ಮತ್ತು ಜೀವನದುದ್ದಕ್ಕೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾರಣವಾಗುತ್ತದೆ ಎಂದು ನಂಬಲಾಗಿದೆ. ಮಾರಮ್ಮ ದೇವಿಯು ಪೂಜಿಸಲ್ಪಡುವ ಮಾತೃದೇವತೆ. ಆಕೆಯನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತಾಳೆ ಮತ್ತು ಬಿಸಿಲು ಮಾರಮ್ಮ ಎಂದೂ ಕರೆಯುತ್ತಾರೆ. ಶಾಂತಿಯುತ ಮತ್ತು ಸಂತೋಷದ ಜೀವನಕ್ಕಾಗಿ ಅವಳನ್ನು ಪೂಜಿಸಲಾಗುತ್ತದೆ - ಯಾವುದೇ ಕಾಯಿಲೆಗಳಿಲ್ಲದೆ, ಬಿಸಿಲು ಮಾರಮ್ಮ ಎಲ್ಲಾ ಸಾಂಕ್ರಾಮಿಕ ರೋಗಗಳನ್ನು ನಿಲ್ಲಿಸುತ್ತಾಳೆ. ಧರ್ಮಮಾರ್ಗದಲ್ಲಿ ನಡೆಯುವವರಿಗೆ ತಾಯಿ. ಅಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವ ಎಲ್ಲರಿಗೂ ಶತ್ರು. ಪ್ರತಿ ವರ್ಷ ಊರು ಹಬ್ಬ ರಾತ್ರಿ ಸಂದರ್ಭದಲ್ಲಿ ಈ ಮೂರು ದೇವರುಗಳನ್ನು ಪಲ್ಲಕ್ಕಿ ಉತ್ಸವದ ಮೂಲಕ ಮೆರವಣಿಗೆ ಮಾಡುತ್ತಾರೆ, ಹಾಗು ನವರಾತ್ರಿ ಸಂದರ್ಭದಲ್ಲಿ ಪಿಳೇಕಾಂಬಿಕೆ ದೇವಿಗೆ 9 ದಿನಗಳ ಕಾಲ ವಿಶೇಷ ಅಲಂಕಾರ ಪೂಜೆಗಳನ್ನು ನೆರವೇರಿಸಲಾಗುತ್ತದೆ. ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸನ್ನಿಧಾನದಲ್ಲಿ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ ‘ಕುಂಕುಮಾರ್ಚನೆ’ ಎನ್ನುತ್ತಾರೆ. ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜೆ ಮಾಡಲಾಗುತ್ತದೆ. ಕುಂಕುಮಾರ್ಚನೆ ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಶ್ರೀ ಪಿಳೇಕಮ್ಮ ದೇವಾಲಯದಲ್ಲಿ ಪ್ರತಿ ಶುಕ್ರವಾರಗಳಂದು 10:30 AM - ಪೂರ್ವಾಹ್ನ(ಬೆಳಗಿನ ಸಮಯ) ದೇವಿಗೆ ಅತ್ಯಂತ ಪ್ರಿಯವಾದ ಪಂಚಾಮೃತ ಅಭಿಷೇಕ, ಪೂಜೆ, ಅಷ್ಟೋತ್ತರ, ಕುಂಕುಮಾರ್ಚನೆ, ಮಹಾಮಂಗಳಾರತಿಗಳು ನಡೆಯುತ್ತವೆ.
ದೇವಿಗೆ ತುಂಬಾ ಪ್ರಿಯವಾದ ನೈವೇದ್ಯ: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ಸಾಂಪ್ರದಾಯಿಕ ಶೈಲಿಯ ಶಾಲ್ಯಾನ್ನ ಅಥವಾ ಕ್ಷೀರಾನ್ನ, ಖಾರ ಹಾಗೂ ಸಿಹಿ ಪೊಂಗಲ್ (ಗುಡಾನ್ನ), ಸಾಂಪ್ರದಾಯಿಕ ಸಿಹಿ ತಿಂಡಿಯ ಹಯಗ್ರೀವ ಮಡ್ಡಿ, ಸಬ್ಬಕ್ಕಿ ಪಾಯಸ, ಗೋಧಿ ನುಚ್ಚಿನ ಪಾಯಸ, ತುಪ್ಪದ ಅವಲಕ್ಕಿ, ಪುಳಿಯೋಗರೆ, ಉಳುಂದೋಗರೆ(ಉದ್ದಿನಬೇಳೆ ಅನ್ನ) ,ಮೊಸರನ್ನ, ಸಾಂಪ್ರದಾಯಿಕ ಕೊವಿಲ್ ಕದಂಬ ಸಾದಮ್ ,ರಾಗಿ ಅಂಬಲಿ, ಅವಲಕ್ಕಿ ಚಿತ್ರಾನ್ನ, ಕಡ್ಲೆಕಾಳು ಉಸ್ಲಿ, ಕಯಿ-ಸಾಸಿವೆ ಅನ್ನ, ಬಾಳೆಹಣ್ಣಿನ ರಸಾಯನವನ್ನು ಈ ಮುಖ್ಯ ದೇವರುಗಳ ಪಿಳೇಕಮ್ಮ ,ಮುನೀಶ್ವರ ಮತ್ತು ಬಿಸಿಲು ಮಾರಮ್ಮಳಿಗೆ ಒಂದೇ ತರದ ನೈವೇದ್ಯ ಅರ್ಪಣೆ ಮಾಡಬಹುದು. ದೇವಿಯನ್ನು ಮೆಚ್ಚಿಸಲು ನೀವು ಶುಕ್ರವಾರ ಪಿಳೇಕಮ್ಮ ದೇವಿಗೆ ಪ್ರಿಯವಾದ ಹಳದಿ ಅಥವಾ ಹಸಿರು ಸೀರೆ, ಹಸಿರು ಮತ್ತು ಕಪ್ಪು ಗಾಜಿನ ಬಳೆಗಳು,ಅರಿಶಿನ- ಕುಂಕುಮ ವಿವಿಧ ಹೂವುಗಳು,ಅರಿಶಿನ ಕೊಂಬಿನ ಹಾರ, ತಾವರೆ-ದಾಸವಾಳ ಹೂವುಗಳು, ತೆಂಗಿನಕಾಯಿ, ಕಡ್ಡಿ-ಕರ್ಪೂರ, ವೀಳ್ಯದೆಲೆ-ಹಣ್ಣುಗಳನ್ನು ಮತ್ತು ಸಿಹಿತಿಂಡಿಗಳನ್ನು ಪಿಳೇಕಮ್ಮ ದೇವಿಗೆ ಅರ್ಪಿಸಬಹುದು. ಸಾಮಾನ್ಯವಾಗಿ ಹಾಲಿನಿಂದ ತಯಾರಿಸಲಾಗುವ ನೈವೇದ್ಯ ದೇವಿ ಪಿಳೇಕಮ್ಮಳಿಗೆ ಹೆಚ್ಚು ಇಷ್ಟ. ಮುಖ್ಯವಾಗಿ ನಿಂಬೆ ಹಣ್ಣಿನ ಹಾರ, ಬೇವಿನ ಸೊಪ್ಪನ್ನು ಮತ್ತು ರಾಗಿ ಅಂಬಲಿಯನ್ನು ಊರಿಂದ ಊರಿಗೆ ಪೂಜೆ ಸ್ವೀಕರಿಸಲು ಹೋಗುವ ಉಗ್ರ ಸ್ವರೂಪಿಣಿ ಬಿಸಿಲು ಮಾರಮ್ಮಳಿಗೆ ಅರ್ಪಿಸಬಹುದು. ಪೂಜೆಯಲ್ಲಿ ನೈವೇದ್ಯ ಸಮರ್ಪಿಸೋದು ಅತೀ ಮುಖ್ಯ. ಸ್ಟೀಲ್ ಪಾತ್ರೆಗಳ ಉಪಯೋಗ ಮಾಡದಿರಿ ಹಿತ್ತಾಳೆ ತ್ರಾಮದ ಪಾತ್ರೆಗಳೇ ಸೂಕ್ತ... ಮಹಿಳಾ ಸದಸ್ಯರಿಂದ ಶುಕ್ರವಾರಗಳಂದು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯಲಹರಿ ಪಾರಾಯಣಗಳು ನಡೆಯುತ್ತವೆ. ಪ್ರತೀ ಅಮಾವಾಸ್ಯೆ ಪ್ರಯುಕ್ತ ಅಮಾವಾಸ್ಯೆ ಹೋಮಗಳ ಸಂಜೆ 6:00 PM - ಅಪರಾಹ್ನ(ಸಂಜೆ ಹೊತ್ತು) ನಡೆಯುತ್ತವೆ. ಈ ಸ್ಥಳದ ವಿಶೇಷವೆಂದರೆ, ದೇವಾಲಯದಲ್ಲಿ ಶ್ರೀ ಪಿಳೇಕಮ್ಮ ದೇವಿ, ಜಡೆ ಮುನೀಶ್ವರನನ್ನು (ಶಿವನ ರೂಪ) ಮತ್ತು ಬಿಸಿಲು ಮಾರಮ್ಮನನ್ನು ಈ ಮೂರು ಮುಖ್ಯ ದೇವರುಗಳನ್ನು ಭಕ್ತರು ಶ್ರದ್ಧಾ - ಭಕ್ತಿಯಿಂದ ಪೂಜೆ ಮಾಡಿದಾಗ ಮಾತ್ರ ಅದರ ಪೂರ್ಣ ಫಲ ನಮಗೆ ಪ್ರಾಪ್ತವಾಗುತ್ತದೆ. ಈ ಪವಿತ್ರ ಸ್ಥಳದಲ್ಲಿ ಚಿತ್ತ ಶುಧ್ಧಿ ಇಲ್ಲದೇ, ಬರೀ ಸ್ವಾರ್ಥಕ್ಕಾಗಿ ಯಾವುದೇ ಪೂಜೆ ,ಪುನಸ್ಕಾರ ಯಾವುದೇ ಮಂತ್ರ ,ತಂತ್ರವೂ ಉಪಯೋಗಕ್ಕೆ ಬರುವುದಿಲ್ಲ. ಹಾಗೊಮ್ಮೆ ಒಲಿದರೂ ಹೆಚ್ಚು ದಿನ ಅದು ಉಳಿಯುವುದಿಲ್ಲ. ನಮ್ಮ ಅಭಿಲಾಷೆ , ಮನಸ್ಸು ಒಳ್ಳಯದಿದ್ದು ನಾಲ್ಕು ಜನರಿಗೆ ಉಪಯೋಗವಾಗುವಂತಿದ್ದರೆ ಮಾತ್ರ , ಮಂತ್ರಶಕ್ತಿ,ಪೂಜೆ ಪುನಸ್ಕಾರಗಳು ಕೆಲಸಮಾಡುತ್ತವೆ. ಇಲ್ಲದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲರೂ ಬಂದು ದೇವಿಯ ಪೂಜೆಗೆ ಹಾಜರಾಗಬೇಕಾಗಿ ವಿನಂತಿ.
✨ಓಂ ಶ್ರೀಂ ಹ್ರೀಂ ಶ್ರೀಂ ಪಿಳೇಕಮ್ಮ ದೇವಿಯೇ ನಮಃ||.✨
✨"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||''✨
✨''ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ|
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ||''✨
✨''ಓಂ ಏಂ ಹ್ರೀಂ ಕ್ಲೀಂ ಪಿಳೇಕಾಂಬಿಕಾಯೈ ವಿಚ್ಚೈ''✨
ಈ ಮೇಲಿನ 4 ಪಿಳೇಕಾಂಬಿಕಾ ಮಂತ್ರಗಳನ್ನು ಪ್ರತಿನಿತ್ಯ ಪಠಿಸುವುದರಿಂದ ಜೀವನದಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಈ ಮಂತ್ರಗಳ ಪಠಣೆಯಿಂದ ನಮ್ಮಲ್ಲಿನ ಕಾಯಿಲೆಗಳು, ಭಯವು, ದೆವ್ವ, ಪೀಡೆ- ಪಿಶಾಚಿ, ಮಾಟ, ಮೋಡಿಗಳು ದೂರಾಗುವುದು.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತಾ ಸನ್ಮಂಗಲಾನಿ ಭವಂತು ॥ 🌷🌼✨🌷🌼
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ
ದೇವಸ್ಥಾನದ ವಿಳಾಸ - ಜಗನ್ಮಾತೆ ಶ್ರೀ ಆದಿಶಕ್ತಿ ಪಿಳೇಕಾಂಬಿಕೆ ದೇವಿ ಸನ್ನಿಧಾನ, ತೂಬರಹಳ್ಳಿ ಪಾಳ್ಯ,ರಾಮಗೊಂಡನಹಳ್ಳಿ (ಅಂಚೆ), ಬೆಂಗಳೂರು ಉತ್ತರ, ಕರ್ನಾಟಕ- 560066.