Sri Pilekamma Devi Temple

Sri Pilekamma Devi Temple Sri Pilekamma devi temple complex is abode to Pilekamma, Muneshwara and Bisilu Maramma devi temple.

This temple is in active worship with special poojas performed on all festivals and regular Poojas on Friday's at 10:30 am.

ಓಂ ಶ್ರೀ ಮಾತ್ರೇ ನಮಃ 💐🌹🪔ૐ҉ ❂ ಇಂದು ವಸಂತ ಮಾಸದ ವಾರ್ಷಿಕೋತ್ಸವ ದಿನದಂದು ಹೂವಿನ ಅಲಂಕಾರದಲ್ಲಿ ಸರ್ವಾಲಂಕೃತಳಾದ ಅನ್ನಪೂರ್ಣೇಶ್ವರಿ ಸ್ವರೂಪಿಣಿ...
06/03/2026

ಓಂ ಶ್ರೀ ಮಾತ್ರೇ ನಮಃ 💐
🌹🪔ૐ҉ ❂ ಇಂದು ವಸಂತ ಮಾಸದ ವಾರ್ಷಿಕೋತ್ಸವ ದಿನದಂದು ಹೂವಿನ ಅಲಂಕಾರದಲ್ಲಿ ಸರ್ವಾಲಂಕೃತಳಾದ ಅನ್ನಪೂರ್ಣೇಶ್ವರಿ ಸ್ವರೂಪಿಣಿ ಶ್ರೀ ಜ್ಞಾನಾಕ್ಷಿ ಪಿಳ್ಳೇಕಮ್ಮ ದೇವಿ, ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಆದಿ ಪರಾಶಕ್ತಿ ರೇಣುಕ ಯಲ್ಲಮ್ಮ ದೇವಿ,❂࿗🪔🌹
Have a blissful Darshan of Sri Devi (6/3/2026, Friday ) 💐
Place: Thubarahalli Palya, Bangalore

ಬೆಂಗಳೂರು ಕರಗ ಕರ್ನಾಟಕದ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಸಾಂಸ್ಕೃತಿಕ-ಧಾರ್ಮಿಕ ಜಾನಪದ ಆಚರಣೆಯಾಗಿದೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಹಬ್ಬವು ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ದ್ರೌಪದಿ ದೇವಿಯ ಆರಾಧನೆಯಾಗಿದೆ. ವಹ್ನಿಕುಲ ಕ್ಷತ್ರಿಯರು (ತಿಗಳ ಸಮುದಾಯ) ಇದನ್ನು ಮುಖ್ಯವಾಗಿ ಆಚರಿಸುತ್ತಾರೆ.

ಕರಗ ಎನ್ನುವ ಪದದಲ್ಲಿನ ಒಂದೊಂದು ಶಬ್ಧವು ವಿವಿಧ ಬಗೆಯ ಅರ್ಥವನ್ನು ನೀಡುತ್ತದೆ. ಕರಗ ದಲ್ಲಿ ಕ ಎಂದರೆ ಕೈಯಿಂದ ಮುಟ್ಟದ, ರ ಎಂದರೆ ರುಂಡದ ಮೇಲೆ ಧರಿಸುವ, ಗ ಎಂದರೆ ತಿರುಗುವುದು ಎಂಬರ್ಥವನ್ನು ನೀಡುತ್ತದೆ.

*!!!ಜ್ಞಾನ ಮತ್ತು ಕಲೆಗಳ ದೇವತೆ ಸರಸ್ವತಿ ದೇವಿಯ ಆಶೀರ್ವಾದದಿಂದ, ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ವಸಂತ ಪಂಚಮಿಯ ಶುಭಾಶಯಗ...
23/01/2026

*!!!ಜ್ಞಾನ ಮತ್ತು ಕಲೆಗಳ ದೇವತೆ ಸರಸ್ವತಿ ದೇವಿಯ ಆಶೀರ್ವಾದದಿಂದ, ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ವಸಂತ ಪಂಚಮಿಯ ಶುಭಾಶಯಗಳು*!!!

ವಸಂತ ಪಂಚಮಿಯ ಹಿರಿಮೆ ಮತ್ತು ಪ್ರಾಮುಖ್ಯತೆ
ವಸಂತ ಪಂಚಮಿಯು ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುತ್ತದೆ. ಇದು ಚಳಿಗಾಲ ಮುಗಿದು, ಪ್ರಕೃತಿಯಲ್ಲಿ ಹೊಸ ಚೈತನ್ಯ ತುಂಬುವ ವಸಂತ ಋತುವಿನ ಆಗಮನವನ್ನು ಸಾರುವ ಹಬ್ಬ.

*ವಿದ್ಯಾದೇವತೆ ಸರಸ್ವತಿಯ ಅವತರಿಸಿದ ದಿನ*:

ಈ ದಿನವನ್ನು ಸರಸ್ವತಿ ದೇವಿಯ ಅವತರಿಸಿದ ದಿನ ಎಂದು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು, ಕಲಾವಿದರು ಮತ್ತು ಸಂಗೀತಗಾರರಿಗೆ ಇದು ಅತ್ಯಂತ ಪವಿತ್ರವಾದ ದಿನ. ಈ ದಿನ 'ವಿದ್ಯಾರಂಭ' ಮಾಡುವುದು ಅತ್ಯಂತ ಶುಭಪ್ರದ ಎಂದು ನಂಬಲಾಗಿದೆ.

ಪ್ರಕೃತಿಯಲ್ಲಿ *ಹಳದಿ ಸಂಭ್ರಮ*:
ವಸಂತ ಪಂಚಮಿಯಂದು ಹಳದಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಹಳದಿ ಬಣ್ಣವು ಸಮೃದ್ಧಿ, ಬೆಳಕು ಮತ್ತು ಶಕ್ತಿಯ ಸಂಕೇತ. ಭಕ್ತರು ಹಳದಿ ಬಣ್ಣದ ಬಟ್ಟೆ ಧರಿಸಿ, ದೇವಿಗೆ ಹಳದಿ ಪುಷ್ಪಗಳನ್ನು ಅರ್ಪಿಸಿ, ಕೇಸರಿ ಮಿಶ್ರಿತ ಸಿಹಿ ಅಡುಗೆಯನ್ನು ನೈವೇದ್ಯ ಮಾಡುತ್ತಾರೆ.

ಈ ವಸಂತ ಪಂಚಮಿಯು ನಿಮ್ಮ ಬಾಳಿನಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ, ಜ್ಞಾನದ ಬೆಳಕನ್ನು ನೀಡಲಿ. ತಾಯಿ ಸರಸ್ವತಿಯ ಅನುಗ್ರಹ ಎಲ್ಲರ ಮೇಲಿರಲಿ.

29/01/2025
ಇಂದಿನ ಮಧ್ಯಾಹ್ನದ ಅಲಂಕಾರದಲ್ಲಿ ಸುಶೋಭಿಸಲ್ಪಡುತ್ತಿರುವ ನಮ್ಮ ಗ್ರಾಮದ ಭೂ ಪ್ರದೇಶದ ಒಡೆಯ ಶ್ರೀ ನಾಗದೇವರು (15/2/2024, ಗುರುವಾರ). 🌺🌼🌺🌼🌺🌼🌺🌼...
15/02/2024

ಇಂದಿನ ಮಧ್ಯಾಹ್ನದ ಅಲಂಕಾರದಲ್ಲಿ ಸುಶೋಭಿಸಲ್ಪಡುತ್ತಿರುವ ನಮ್ಮ ಗ್ರಾಮದ ಭೂ ಪ್ರದೇಶದ ಒಡೆಯ ಶ್ರೀ ನಾಗದೇವರು (15/2/2024, ಗುರುವಾರ).
🌺🌼🌺🌼🌺🌼🌺🌼🌺🌼🌺🌼🌺
ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ ಅಂಟಿಕೊಳ್ಳುವುದು. ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ |
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ ||
ಏತಾನಿ ನವ ನಾಗಾನಿ ನಾಗಾನಾಂ ಚ ಮಹಾತ್ಮನಾಮ್ |
ಸಾಯಂಕಾಲೇ ಪಠೇನ್ನಿತ್ಯಂ ಪ್ರಾತ:ಕಾಲೇ ವಿಶೇಷತ:|
ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ || 💐

03/02/2024

TEMPLES OF HOPE AND HEALING :
After 136 years, the changing nature of worship at the Plagueamma temples, dedicated to insulating oneself against the disease, indicates that the plague of 1888 is a distant memory. Hopefully the lessons from it are not.

It’s 136 years, to some a portentous number in itself, since the major plague outbreak of 1888 wiped out more the 25% of Bengaluru’s population. The rail routes from Kolkata to Bangalore are believed to have brought the disease here, which changed the course of the city. The numerous temples dedicated to Plagueamma, reminders of that time, still exist in the pete areas in Bangalore.
When they were constructed, our village residents hoped that by praying at these goddess, the raging epidemic could be stopped. The mother goddess in these temples is also known as Plague Maramma, and these shrines shed light on a Bengaluru from a little over a century ago. During the Ooru Habba or the village festival which is celebrated every year Animal sacrifices are a traditional custom and now it's been reduced in our village. People can enter the garbhagudi (sanctum sanctorum) of goddess Bisilu maramma and worship on their own in our village.
Navarathri festival during Dasara in our village is celebrated in a big way.

Now a new temple of Sri Pilekamma devi and Sri Maramma years back is constructed and regular poojas are conducted twice a day now.When the plague was raging through Bangalore, people flocked at Sri Pilekamma and Bisilu Maramma, to beg for respite. Bisilu in Kannada means sunshine, and it might be interesting to note that Yersinia pestis, the plague-causing bacterium is sensitive to sunlight. To this day, the space above the set of sacred stones is left open to the sky – to ensure that sunlight falls freely over Bisilu Maramma.

The plague which changed Bengaluru over a century ago is a distant memory. Even the changing nature of worship at the shrines says that the incident has been relegated to memories. Let’s hope the lessons from it are not forgotten.

03/02/2024

ಗ್ರಾಮದೇವತೆ, ಆದಿಶಕ್ತಿ ಜಗನ್ಮಾತೆ ಶ್ರೀ ಪಿಳೇಕಮ್ಮ ದೇವಿ ದೇವಾಲಯದ ವಿಶೇಷತೆ :

ತ್ರಿಶೂಲ- ಕತ್ತಿ ಹಸ್ತಳಾಗಿ, ಡಮರುಗವನ್ನು ಧಾರಣೆಮಾಡಿಕೊಂಡು ರಾಜ ವೈಭವದಿಂದ ವಿರಾಜಮಾನಳಾಗಿ ದುಷ್ಟ ಸಂಹಾರ, ಶಿಷ್ಟ ರಕ್ಷಕಿ, ತುಂಬು ಮುತ್ತೈದೆ ಶ್ರೀ ಪಿಳೇಕಾಂಬಿಕೆ ದೇವಿಯು ಶಕ್ತಿ ಸ್ವರೂಪಿಣಿ ದುರ್ಗಾ ಪರಮೇಶ್ವರೀ. ಈ ಶಕ್ತಿ ದೇವತೆಗೆ ಭಕ್ತಿಯಿಂದ ಬೇಡಿಕೊಂಡಿರುವ ವರಗಳನ್ನು ಕರುಣಿಸುವ ದೇವಿಯಾಗಿದ್ದು. ಈ ಪವಿತ್ರ ಸ್ಥಳದಲ್ಲಿ ಮೂರು ಮುಖ್ಯ ದೇವರಾದ ಪಿಳೇಕಮ್ಮ, ಮುನೀಶ್ವರನನ್ನು ಮತ್ತು ಬಿಸಿಲು ಮಾರಮ್ಮ ದೇವಿಯನ್ನು ಪೂಜಿಸಿದರೆ ಕಂಕಣ ಭಾಗ್ಯ ಸಂತಾನ ಭಾಗ್ಯ ಗೃಹ ನಿರ್ಮಾಣಭಾಗ್ಯ ಮತ್ತು ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಈ ಊರಿನಲ್ಲಿ ನೂರು ವರ್ಷಗಳಿಂಧ ನೆಲೆ ನಿಂತ ಪಿಳೇಕಮ್ಮ ದೇವಿ ಅಧಿದೇವತೆ, ಎಲ್ಲವೂ ಇವಳಿಗೆ ಸಲ್ಲಬೇಕು. ಪ್ರತಿ ಶುಕ್ರವಾರ ಮೊದಲ ಪೂಜೆ ಅವಳ ಹಿರಿಯ ಸಹೋದರ ಮುನೀಶ್ವರನಿಗೆ ಸಲ್ಲಿಸುವುದು ಈ ಗ್ರಾಮದಲ್ಲಿ ವಾಡಿಕೆ. ಪ್ರತಿ ಶುಕ್ರವಾರ ಬೆಳಗ್ಗೆ 10:30 AM ಕ್ಕೆ ವಿಶೇಷ ಪೂಜೆ ಇರುತ್ತದೆ. ಈ ಮೂರು ದೇವರುಗಳನ್ನು ,ನಮ್ಮ ಗ್ರಾಮದ ಅಧಿದೇವತೆ, ಊರಿನ ಕಾವಲು ದೇವತೆ ಎಂದು ಕರೆಯುವುದುಂಟು. ಗುಂಡುತೋಪು ಜಡಮುನೀಶ್ವರನಿಂದ ಬೃಹತ್ ಗಾತ್ರದ ಆಲದ ಮರ ,ನೇರಳೆಹಣ್ಣಿನ ಮರ,ಮಾವಿನ ಮರಗಳನ್ನು ಬೆಳೆಸಲಾಯಿತು .ಮುನೀಶ್ವರ ಎಂಬ 2 ಪದಗಳಿಂದ ಬಂದದ್ದು ಒಂದು ಮುನಿ ಅಂದರೆ ಋಷಿ ಮತ್ತು ಈಶ್ವರ ಎಂದರೆ ಶಿವ (ವಿನಾಶದ ಹಿಂದೂ ದೇವರು). ಮುನೀಶ್ವರನ ಪ್ರಾರ್ಥನೆಯು ತನ್ನ ಭಕ್ತರ ಆನಂದವನ್ನು ಸಾಧಿಸಲು ಮತ್ತು ಜೀವನದುದ್ದಕ್ಕೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾರಣವಾಗುತ್ತದೆ ಎಂದು ನಂಬಲಾಗಿದೆ. ಮಾರಮ್ಮ ದೇವಿಯು ಪೂಜಿಸಲ್ಪಡುವ ಮಾತೃದೇವತೆ. ಆಕೆಯನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತಾಳೆ ಮತ್ತು ಬಿಸಿಲು ಮಾರಮ್ಮ ಎಂದೂ ಕರೆಯುತ್ತಾರೆ. ಶಾಂತಿಯುತ ಮತ್ತು ಸಂತೋಷದ ಜೀವನಕ್ಕಾಗಿ ಅವಳನ್ನು ಪೂಜಿಸಲಾಗುತ್ತದೆ - ಯಾವುದೇ ಕಾಯಿಲೆಗಳಿಲ್ಲದೆ, ಬಿಸಿಲು ಮಾರಮ್ಮ ಎಲ್ಲಾ ಸಾಂಕ್ರಾಮಿಕ ರೋಗಗಳನ್ನು ನಿಲ್ಲಿಸುತ್ತಾಳೆ. ಧರ್ಮಮಾರ್ಗದಲ್ಲಿ ನಡೆಯುವವರಿಗೆ ತಾಯಿ. ಅಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವ ಎಲ್ಲರಿಗೂ ಶತ್ರು. ಪ್ರತಿ ವರ್ಷ ಊರು ಹಬ್ಬ ರಾತ್ರಿ ಸಂದರ್ಭದಲ್ಲಿ ಈ ಮೂರು ದೇವರುಗಳನ್ನು ಪಲ್ಲಕ್ಕಿ ಉತ್ಸವದ ಮೂಲಕ ಮೆರವಣಿಗೆ ಮಾಡುತ್ತಾರೆ, ಹಾಗು ನವರಾತ್ರಿ ಸಂದರ್ಭದಲ್ಲಿ ಪಿಳೇಕಾಂಬಿಕೆ ದೇವಿಗೆ 9 ದಿನಗಳ ಕಾಲ ವಿಶೇಷ ಅಲಂಕಾರ ಪೂಜೆಗಳನ್ನು ನೆರವೇರಿಸಲಾಗುತ್ತದೆ. ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸನ್ನಿಧಾನದಲ್ಲಿ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ ‘ಕುಂಕುಮಾರ್ಚನೆ’ ಎನ್ನುತ್ತಾರೆ. ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜೆ ಮಾಡಲಾಗುತ್ತದೆ. ಕುಂಕುಮಾರ್ಚನೆ ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಶ್ರೀ ಪಿಳೇಕಮ್ಮ ದೇವಾಲಯದಲ್ಲಿ ಪ್ರತಿ ಶುಕ್ರವಾರಗಳಂದು 10:30 AM - ಪೂರ್ವಾಹ್ನ(ಬೆಳಗಿನ ಸಮಯ) ದೇವಿಗೆ ಅತ್ಯಂತ ಪ್ರಿಯವಾದ ಪಂಚಾಮೃತ ಅಭಿಷೇಕ, ಪೂಜೆ, ಅಷ್ಟೋತ್ತರ, ಕುಂಕುಮಾರ್ಚನೆ, ಮಹಾಮಂಗಳಾರತಿಗಳು ನಡೆಯುತ್ತವೆ.

ದೇವಿಗೆ ತುಂಬಾ ಪ್ರಿಯವಾದ ನೈವೇದ್ಯ: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ಸಾಂಪ್ರದಾಯಿಕ ಶೈಲಿಯ ಶಾಲ್ಯಾನ್ನ ಅಥವಾ ಕ್ಷೀರಾನ್ನ, ಖಾರ ಹಾಗೂ ಸಿಹಿ ಪೊಂಗಲ್ (ಗುಡಾನ್ನ), ಸಾಂಪ್ರದಾಯಿಕ ಸಿಹಿ ತಿಂಡಿಯ ಹಯಗ್ರೀವ ಮಡ್ಡಿ, ಸಬ್ಬಕ್ಕಿ ಪಾಯಸ, ಗೋಧಿ ನುಚ್ಚಿನ ಪಾಯಸ, ತುಪ್ಪದ ಅವಲಕ್ಕಿ, ಪುಳಿಯೋಗರೆ, ಉಳುಂದೋಗರೆ(ಉದ್ದಿನಬೇಳೆ ಅನ್ನ) ,ಮೊಸರನ್ನ, ಸಾಂಪ್ರದಾಯಿಕ ಕೊವಿಲ್ ಕದಂಬ ಸಾದಮ್ ,ರಾಗಿ ಅಂಬಲಿ, ಅವಲಕ್ಕಿ ಚಿತ್ರಾನ್ನ, ಕಡ್ಲೆಕಾಳು ಉಸ್ಲಿ, ಕಯಿ-ಸಾಸಿವೆ ಅನ್ನ, ಬಾಳೆಹಣ್ಣಿನ ರಸಾಯನವನ್ನು ಈ ಮುಖ್ಯ ದೇವರುಗಳ ಪಿಳೇಕಮ್ಮ ,ಮುನೀಶ್ವರ ಮತ್ತು ಬಿಸಿಲು ಮಾರಮ್ಮಳಿಗೆ ಒಂದೇ ತರದ ನೈವೇದ್ಯ ಅರ್ಪಣೆ ಮಾಡಬಹುದು. ದೇವಿಯನ್ನು ಮೆಚ್ಚಿಸಲು ನೀವು ಶುಕ್ರವಾರ ಪಿಳೇಕಮ್ಮ ದೇವಿಗೆ ಪ್ರಿಯವಾದ ಹಳದಿ ಅಥವಾ ಹಸಿರು ಸೀರೆ, ಹಸಿರು ಮತ್ತು ಕಪ್ಪು ಗಾಜಿನ ಬಳೆಗಳು,ಅರಿಶಿನ- ಕುಂಕುಮ ವಿವಿಧ ಹೂವುಗಳು,ಅರಿಶಿನ ಕೊಂಬಿನ ಹಾರ, ತಾವರೆ-ದಾಸವಾಳ ಹೂವುಗಳು, ತೆಂಗಿನಕಾಯಿ, ಕಡ್ಡಿ-ಕರ್ಪೂರ, ವೀಳ್ಯದೆಲೆ-ಹಣ್ಣುಗಳನ್ನು ಮತ್ತು ಸಿಹಿತಿಂಡಿಗಳನ್ನು ಪಿಳೇಕಮ್ಮ ದೇವಿಗೆ ಅರ್ಪಿಸಬಹುದು. ಸಾಮಾನ್ಯವಾಗಿ ಹಾಲಿನಿಂದ ತಯಾರಿಸಲಾಗುವ ನೈವೇದ್ಯ ದೇವಿ ಪಿಳೇಕಮ್ಮಳಿಗೆ ಹೆಚ್ಚು ಇಷ್ಟ. ಮುಖ್ಯವಾಗಿ ನಿಂಬೆ ಹಣ್ಣಿನ ಹಾರ, ಬೇವಿನ ಸೊಪ್ಪನ್ನು ಮತ್ತು ರಾಗಿ ಅಂಬಲಿಯನ್ನು ಊರಿಂದ ಊರಿಗೆ ಪೂಜೆ ಸ್ವೀಕರಿಸಲು ಹೋಗುವ ಉಗ್ರ ಸ್ವರೂಪಿಣಿ ಬಿಸಿಲು ಮಾರಮ್ಮಳಿಗೆ ಅರ್ಪಿಸಬಹುದು. ಪೂಜೆಯಲ್ಲಿ ನೈವೇದ್ಯ ಸಮರ್ಪಿಸೋದು ಅತೀ ಮುಖ್ಯ. ಸ್ಟೀಲ್ ಪಾತ್ರೆಗಳ ಉಪಯೋಗ ಮಾಡದಿರಿ ಹಿತ್ತಾಳೆ ತ್ರಾಮದ ಪಾತ್ರೆಗಳೇ ಸೂಕ್ತ... ಮಹಿಳಾ ಸದಸ್ಯರಿಂದ ಶುಕ್ರವಾರಗಳಂದು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯಲಹರಿ ಪಾರಾಯಣಗಳು ನಡೆಯುತ್ತವೆ. ಪ್ರತೀ ಅಮಾವಾಸ್ಯೆ ಪ್ರಯುಕ್ತ ಅಮಾವಾಸ್ಯೆ ಹೋಮಗಳ ಸಂಜೆ 6:00 PM - ಅಪರಾಹ್ನ(ಸಂಜೆ ಹೊತ್ತು) ನಡೆಯುತ್ತವೆ. ಈ ಸ್ಥಳದ ವಿಶೇಷವೆಂದರೆ, ದೇವಾಲಯದಲ್ಲಿ ಶ್ರೀ ಪಿಳೇಕಮ್ಮ ದೇವಿ, ಜಡೆ ಮುನೀಶ್ವರನನ್ನು (ಶಿವನ ರೂಪ) ಮತ್ತು ಬಿಸಿಲು ಮಾರಮ್ಮನನ್ನು ಈ ಮೂರು ಮುಖ್ಯ ದೇವರುಗಳನ್ನು ಭಕ್ತರು ಶ್ರದ್ಧಾ - ಭಕ್ತಿಯಿಂದ ಪೂಜೆ ಮಾಡಿದಾಗ ಮಾತ್ರ ಅದರ ಪೂರ್ಣ ಫಲ ನಮಗೆ ಪ್ರಾಪ್ತವಾಗುತ್ತದೆ. ಈ ಪವಿತ್ರ ಸ್ಥಳದಲ್ಲಿ ಚಿತ್ತ ಶುಧ್ಧಿ ಇಲ್ಲದೇ, ಬರೀ ಸ್ವಾರ್ಥಕ್ಕಾಗಿ ಯಾವುದೇ ಪೂಜೆ ,ಪುನಸ್ಕಾರ ಯಾವುದೇ ಮಂತ್ರ ,ತಂತ್ರವೂ ಉಪಯೋಗಕ್ಕೆ ಬರುವುದಿಲ್ಲ. ಹಾಗೊಮ್ಮೆ ಒಲಿದರೂ ಹೆಚ್ಚು ದಿನ ಅದು ಉಳಿಯುವುದಿಲ್ಲ. ನಮ್ಮ ಅಭಿಲಾಷೆ , ಮನಸ್ಸು ಒಳ್ಳಯದಿದ್ದು ನಾಲ್ಕು ಜನರಿಗೆ ಉಪಯೋಗವಾಗುವಂತಿದ್ದರೆ‌ ಮಾತ್ರ , ಮಂತ್ರಶಕ್ತಿ,ಪೂಜೆ ಪುನಸ್ಕಾರಗಳು ಕೆಲಸಮಾಡುತ್ತವೆ. ಇಲ್ಲದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲರೂ ಬಂದು ದೇವಿಯ ಪೂಜೆಗೆ ಹಾಜರಾಗಬೇಕಾಗಿ ವಿನಂತಿ.

✨ಓಂ ಶ್ರೀಂ ಹ್ರೀಂ ಶ್ರೀಂ ಪಿಳೇಕಮ್ಮ ದೇವಿಯೇ ನಮಃ||.✨

✨"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||''✨

✨''ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ|
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ||''✨

✨''ಓಂ ಏಂ ಹ್ರೀಂ ಕ್ಲೀಂ ಪಿಳೇಕಾಂಬಿಕಾಯೈ ವಿಚ್ಚೈ''✨

ಈ ಮೇಲಿನ 4 ಪಿಳೇಕಾಂಬಿಕಾ ಮಂತ್ರಗಳನ್ನು ಪ್ರತಿನಿತ್ಯ ಪಠಿಸುವುದರಿಂದ ಜೀವನದಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಈ ಮಂತ್ರಗಳ ಪಠಣೆಯಿಂದ ನಮ್ಮಲ್ಲಿನ ಕಾಯಿಲೆಗಳು, ಭಯವು, ದೆವ್ವ, ಪೀಡೆ- ಪಿಶಾಚಿ, ಮಾಟ, ಮೋಡಿಗಳು ದೂರಾಗುವುದು.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತಾ ಸನ್ಮಂಗಲಾನಿ ಭವಂತು ॥ 🌷🌼✨🌷🌼

ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ

ದೇವಸ್ಥಾನದ ವಿಳಾಸ - ಜಗನ್ಮಾತೆ ಶ್ರೀ ಆದಿಶಕ್ತಿ ಪಿಳೇಕಾಂಬಿಕೆ ದೇವಿ ಸನ್ನಿಧಾನ, ತೂಬರಹಳ್ಳಿ ಪಾಳ್ಯ,ರಾಮಗೊಂಡನಹಳ್ಳಿ (ಅಂಚೆ), ಬೆಂಗಳೂರು ಉತ್ತರ, ಕರ್ನಾಟಕ- 560066.

Address

Mahamandaleshwari Shree Pillekamma Devi Temple 18th Cross, 4th Main BEML Layout, Kundalhalli
Bangalore
560066

Telephone

+916361803146

Website

Alerts

Be the first to know and let us send you an email when Sri Pilekamma Devi Temple posts news and promotions. Your email address will not be used for any other purpose, and you can unsubscribe at any time.

Share

Category