13/04/2021
ಜೀವನದಬಹುದೊಡ್ಡ, ಯಾತ್ರೆಯಲಿ ಅನೇಕ ಸುಂದರ ಸ್ವಪ್ನಗಳೊಂದಿಗೆ ಪಯಣಿಸುವ ಪಯಣಿಗನಿಗೆ, ಸಿಹಿಕಹಿಗಳ ಅನುಭವವಾಗುವುದು ಸ್ವಾಭಾವಿಕ. ನಿತ್ಯ ನೋವು ನಲುವಿನೊಂದಿಗೆ ಸಾಗುವ ಜೀವಕ್ಕೆ, ಬೇವು ಬೆಲ್ಲ ಸಂತಸದ ಸಮರ ಸಾರಿ, ನವಚೇತನದ ಚಿಲುಮ ಹೃದ್ ಭೂಮಿಯಿಂದ ಹೊರಚಿಮ್ಮಿ ಜೀವನ ಸುಖ ಸೌಖ್ಯದ ತಾಣಾಗಲಿ. ದುಃಖ ದುಮ್ಮಾನಗಳ ಬಿರುಗಾಳಿಗೆ ಸಿಲುಕಿ, ತತ್ತರಿಸಿ ಮಲಗುವ ನೌಕೆಗೇ, ಅನುಭವದ ಅಮೃತದ ಸವಿ ನೆನಪುಗನೆನಪುಗಳೇ ಮಾರ್ಗಸೂಚಿಯಾಗಿ, ಶ್ರೀ ಗುರು ಸಿದ್ಧ ಶಂಕರನ ಕರುಣೆಯಿಂದ ನೌಕೆ ಸುರಕ್ಷಿತ ದಡ ತಲುಪಿ ಸರ್ವರ ಮನೆ-ಮನ ಬೆಳಗಲಿ ಎಂದು ಆಶಿಸುತ್ತಾ ಯುಗಾದಿ ಹಬ್ಬದ ಬೇವು ಬೆಲ್ಲದ ಸವಿ ಹಂಚುತ್ತಾ ಸರ್ವರಿಗೂ ಫ್ಲವನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳೊಂದಿಗೆ
ಶ್ರೀ ಜಗನ್ನಾಥ ಸ್ವಾಮಿ,
ಶ್ರೀ ಸದ್ಗುರು ಸಿದ್ಧ ಶಂಕರಾನಂದ ಸ್ವಾಮಿ ಸಂಸ್ಥಾನ ಮಠ
ಬದಿನೇಹಾಳ್.