Shri Kshetra Arooru

Shri Kshetra Arooru ಶ್ರೀ ಕ್ಷೇತ್ರ ಆರೂರು |ಶ್ರೀ ಸಹಸ್ರಲಿಂಗಶ್ವರ ದೇವರು ಮತ್ತು ಆಧಿಶಕ್ತಿ ಚಾಮುಂಡೇಶ್ವರಿ ದೇವಿ | ಮಂತ್ರದೇವತೆ | ಅಗ್ನಿಗುಳಿಗ | ಅರೂರ್ ಕಿರಣ್ ರಾವ್ - ಜ್ಯೋತಿಷ್ಯ ಮತ್ತು ವಾಸ್ತು ವಿಧ್ವಾನ್ |

07/08/2026

*ತಾರಾನುಕೂಲ(ತಾರಾಬಲ)*

ಪ್ರಪಂಚ ನಿಂತಿರುವುದು ನಂಬಿಕೆಯ ಮೇಲೆ ಹಾಗೆ ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ. ಪುರಾತನ ಕಾಲದಿಂದಲೂ ಭವಿಷ್ಯವನ್ನು ತಿಳಿಯಲು ಈ ಶಾಸ್ತ್ರವನ್ನು ನಂಬಿಕೊಂಡು ಬಂದಿದ್ದಾರೆ. ನಮ್ಮ ಹಿರಿಯರು ಕೆಲವು ದೈನಂದಿನ ಮತ್ತು ಧಾರ್ಮಿಕ ಚಟುವಟಿಕೆಗಳ ಸಫಲತೆಗೆ ತಾರಾಬಲ ನೋಡುತ್ತಾರೆ.

*ತಾರಾಬಲ ಏಕೆ ನೋಡಬೇಕು?*

ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು. ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ. ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತವೆ. ಅತಿ ಮುಖ್ಯವಾಗಿ ಕೆಲವು ಅಂಶಗಳು ಈ ರೀತಿ ಇವೆ. ಜಾತಕಾದಿ ಸಂಸ್ಕಾರಗಳಲ್ಲಿ, ಉಪನಯನದಲ್ಲಿ, ವಿವಾಹದಲ್ಲಿ ಶಾಂತಿ ಒಡವೆ-ವಾಹನಾದಿ ಖರೀದಿಗೆ, ವಧು ವರರಿಗೆ ತಾರಾನುಕುಲವನ್ನು ನೋಡಿ ಮುಹೂರ್ತನಿರ್ಣಯಿಸಬೇಕು...

ಜಾತಕದಲ್ಲಿ ಚಂದ್ರನಿರುವ ನಕ್ಷತ್ರವನ್ನು ಜನ್ಮ ನಕ್ಷತ್ರವೆನ್ನುವರು, ಈ ಜನ್ಮ ನಕ್ಷತ್ರಕ್ಕೆ
ಜನ್ಮವೆಂತಲೂ
10ನೇ ನಕ್ಷತ್ರಕ್ಕೆ ಅನುಜನ್ಮವೆಂದು,
19ನೇ ನಕ್ಷತ್ರಕ್ಕೆ ತ್ರಿಜನ್ಮವೆಂದು ತಿಳಿಯಬೇಕು.
ಹೀಗೆ ಈ ಮೂರು ಜನ್ಮವೆಂದು ತಿಳಿಯಬೇಕು.
ಹೀಗೆ ಈ ಮೂರು ನಕ್ಷತ್ರಗಳ ಮುಂದಿನ ನಕ್ಷತ್ರಗಳು ಕ್ರಮವಾಗಿ ಸಂಪತ್, ವಿಪತ್, ಕ್ಷೇಮ, ಪ್ರತ್ಯರ, ಸಾಧಕ, ವಧ, ಮೈತ್ರ, ಪರಮಮೈತ್ರ ನಕ್ಷತ್ರಗಳು. ಜನ್ಮ ನಕ್ಷತ್ರ ಮೊದಲ್ಗೊಂಡು ಬರುವ ಪ್ರಥಮ ಪರ್ಯಾಯದ ವಿಪತ್, ಪ್ರತ್ಯರ, ವಧತಾರೆಗಳು ಪೂರ್ಣ ನಿಷಿದ್ಧ.

ಅನುಜನ್ಮ ಮೊದಲ್ಗೊಂಡು ದ್ವಿತೀಯ ಪರ್ಯಾಯದ ವಿಪತ್ತಾರೆಯ 1ನೇ ಪಾದವೂ, ಪ್ರತ್ಯರ ತಾರೆಯ 4ನೇ ಪಾದವೂ, ವಧತಾರೆಯ 3ನೇ ಪಾದವೂ ಅನಿವಾರ್ಯ ಸಂದರ್ಭದಲ್ಲಿ ಗ್ರಾಹ್ಯ,
ಅದಕ್ಕಾಗಿಯೇ ಅನಿವಾರ್ಯ ಪ್ರಸಂಗಗಳಲ್ಲಿ ಜನ್ಮಾನುಜನ್ಮ ತಾರೆಗಳಿಗೆ ಕಾಯಿಪಲ್ಯ ಅಂದರೆ ತರಕಾರಿ, ವಿಪತ್ತಾರೆಗೆ ಬೆಲ್ಲ, ಪ್ರತ್ಯರ ತಾರೆಗೆ ಉಪ್ಪು,
ವಧತಾರೆಗೆ ತಿಲ ಸಹಿತ ದಕ್ಷಿಣೆ ದಾನ ಮಾಡಿ ಶುಭಕರ್ಮಾಚರಣೆ ಮಾಡಬಹುದು ಎಂದು ಶಾಸ್ತ್ರವಚನಗಳಿವೆ.

ಜನ್ಮ ನಕ್ಷತ್ರದಲ್ಲಿ ನವಾನ್ನ ಭೋಜನ, ನೂತನ ವಸ್ತ್ರಾಭರಣ ಧಾರಣ ಪುಣ್ಯ ಕರ್ಮಗಳ ಹೊರತು ಇತರ ಕರ್ಮಗಳು ನಿಷಿದ್ಧ,
ತೈಲಾಭ್ಯಂಗ, ಕ್ಷೌರ, ನಿಷೇಕಗಳ ಹೊರತು ಎಲ್ಲಾ ಕಾರ್ಯಗಳಿಗೆ ಅನುಜನ್ಮ ತ್ರಿಜನ್ಮ ನಕ್ಷತ್ರಗಳು ಶುಭ. ಉಪನಯನಕ್ಕೆ ವಿಪತ್ತಾರೆ, ಪ್ರಯಾಣ ಮತ್ತು ವಿವಾಹಕ್ಕೆ ಪ್ರತ್ಯರತಾರೆ ದೋಷವಲ್ಲ, ಚಂದ್ರನು ಬಲಿಷ್ಠನಾಗಿ ಶುಭಾಂಶವನ್ನು ಪಡೆದು ಶುಭದೃಷ್ಠನಾಗಿರುವಾಗ ಹೇಳಿದ ದಾನಗಳನ್ನು ನೀಡಿ ಶುಭ ಕರ್ಮವನ್ನಾಚರಿಸಬಹುದು.

ಜಾತಕರ್ಮಾದಿ ಸಂಸ್ಕಾರಗಳಲ್ಲಿ ಹುಟ್ಟಿದ ಮಕ್ಕಳಿಗೂ, ಉಪನಯನದಲ್ಲಿ ವಟುವಿಗೂ, ವಿವಾಹದಲ್ಲಿ ವಧು-ವರರಿಗೂ, ಗೃಹಪ್ರವೇಶ ಮುಂತಾದ ಶುಭಕಾರ್ಯದಲ್ಲಿ ದಂಪತಿಗಳಿಗೆ ಮಾತ್ರ ತಾರಾನುಕೂಲವನ್ನು ನೋಡಿ ಮುಹೂರ್ತ ನಿರ್ಣಯಿಸಬೇಕು.

೧ *ಜನ್ಮ ನಕ್ಷತ್ರ*
ಜಾತಕದಲ್ಲಿ ಚಂದ್ರನಿರುವ ನಕ್ಷತ್ರವನ್ನು ಜನ್ಮ ನಕ್ಷತ್ರ ಎನ್ನುತ್ತಾರೆ ಹತ್ತನೇ ನಕ್ಷತ್ರಕ್ಕೆ ಅನುಜನ್ಮ ವೆಂದು ಹತ್ತೊಂಬತ್ತನೇ ನಕ್ಷತ್ರವನ್ನು ತ್ರಿಜನ್ಮ ವೆಂದು ತಿಳಿಯಬೇಕು
ನಿಮ್ಮ ಜನ್ಮ ನಕ್ಷತ್ರವಿರುವ ದಿನ ಅನುಕೂಲವಾಗಲಿ, ಅನನುಕೂಲವಾಗಲಿ ಇರುವುದಿಲ್ಲ. ಅಂದರೆ ಸಾಮಾನ್ಯ ಫಲ.
ಜನ್ಮ ನಕ್ಷ ತ್ರದಲ್ಲಿ ನವಾನ್ನ ಭೋಜನ, ನೂತನ ವಸ್ತ್ರಾಭರಣಧಾರಣ, ಪುಣ್ಯ ಕರ್ಮಗಳ ಹೊರತು ಇತರ ಕರ್ಮಗಳು ನಿಷಿದ್ಧ.

೨ *ಸಂಪತ್ ತಾರೆ*
ನಿಮ್ಮ ನಕ್ಷತ್ರದ ಮುಂದಿನ ನಕ್ಷತ್ರವೇ ಸಂಪತ್ ತಾರೆ. ಇದು ಹಣ, ಆಭರಣ, ವ್ಯವಹಾರಗಳಿಗೆ ಅನುಕೂಲ. ಧನಲಕ್ಷ್ಮೀ ಪೂಜೆಗೆ ಶ್ರೇಷ್ಠ ದಿನ. ಬರಬೇಕಾಗಿದ್ದ ಹಣ ಬರುವುದು. ಗೌರವ, ಕೀರ್ತಿ, ಉಡುಗೊರೆ ಪ್ರಾಪ್ತವಾಗುವ ದಿನ.ಒಡವೆ-ವಾಹನಾದಿ ಖರೀದಿಗೆ ಪ್ರಯತ್ನಪಟ್ಟಾಗ ಫಲದಾಯಕವಾಗುವ ದಿನ.

೩ *ವಿಪತ್ ತಾರೆ*
ನಿಮ್ಮ ನಕ್ಷತ್ರದಿಂದ 3ನೆಯ ನಕ್ಷತ್ರವೇ ವಿಪತ್ ತಾರೆ. ವಿಪತ್ ತಾರೆ ಇರುವ ದಿನ ಒಳ್ಳೆಯ ಕೆಲಸ ಪ್ರಾರಂಭವಾದರೆ ಕಲಹ, ನಷ್ಟ ಮೊದಲಾದ ತೊಂದರೆಗಳಾಗುವುದು. ಯಾವ ಶುಭಕಾರ್ಯ ಪ್ರಾರಂಭಕ್ಕೂ ಇದು ಸೂಕ್ತವಲ್ಲ.

೪ *ಕ್ಷೇಮ ತಾರೆ*
ನಿಮ್ಮ ನಕ್ಷತ್ರದಿಂದ 4ನೇ ತಾರೆಯೇ ಕ್ಷೇಮ ತಾರೆ. ಯಾರಿಗಾಗಲೇ ಕ್ಷೇಮ ತಾರೆಯಿದ್ದ ದಿನ ಮಾನಸಿಕ ಶಾಂತಿ, ಆರೋಗ್ಯ, ಆಪ್ತರ ಭೇಟಿ ಮೊದಲಾದ ಅನುಕೂಲಗಳಿರುತ್ತವೆ. ಅಧಿಕಾರಿ ಭೇಟಿ, ಒಪ್ಪಂದ ಕಾರ್ಯ, ಶಸ್ತ್ರಚಿಕಿತ್ಸೆ, ಹೊಸ ಕಾರ್ಯ ಪ್ರಾರಂಭ, ಆರೋಗ್ಯ ತಪಾಸಣೆ, ಪ್ರಯಾಣ, ತಂಟೆ-ತಕರಾರುಗಳನ್ನು ಬಗೆಹರಿಸಿಕೊಳ್ಳಲು, ನ್ಯಾಯಾಲಯದ ವ್ಯವಹಾರಗಳಿಗೆ ಅನುಕೂಲಕರ.

೫ *ಪ್ರತ್ಯರ ತಾರೆ*
ನಿಮ್ಮ ನಕ್ಷತ್ರದಿಂದ 5ನೇ ನಕ್ಷತ್ರವೇ ಪ್ರತ್ಯರ್ ತಾರೆ. ಇದು ಯಾವ ಕೆಲಸ, ಕಾರ್ಯಗಳಿಗೂ ಅನುಕೂಲವಲ್ಲ. ನಿರೀಕ್ಷೆಗೆ ವಿರುದ್ಧವಾದ ಫಲಗಳು ಉಂಟಾಗುತ್ತವೆ.

೬ *ಸಾಧಕ ತಾರೆ*
ನಿಮ್ಮ ನಕ್ಷತ್ರದಿಂದ 6ನೇ ನಕ್ಷತ್ರವೇ ಸಾಧಕ ತಾರೆ. ಈ ಸಾಧನ ತಾರೆಯಿರುವ ದಿನ ವಿದ್ಯಾಭ್ಯಾಸ, ಮಂತ್ರಸಿದ್ಧಿ, ಸಂಶೋಧನೆ, ಹೂಡಿಕೆ, ನೂತನ ಕಾರ್ಯ ಪ್ರಾರಂಭ, ಹೋರಾಟ, ಶುಭ ಕಾರ್ಯ, ವ್ಯವಹಾರಗಳಿಗೆ ವಿವಾಹಾದಿಕಾರ್ಯಗಳಿಗೆ ಪ್ರಗತಿದಾಯಕ.

೭ *ವಧ ತಾರೆ*
ನಿಮ್ಮ ನಕ್ಷತ್ರದಿಂದ 7ನೇ ನಕ್ಷತ್ರವೇ ವಧ ತಾರೆ. ಇದು ಅತಿ ತೊಂದರೆದಾಯಕವಾಗಿರುವುದರಿಂದ ಈ ದಿನ ಯಾವುದೇ ವೃಧ್ಧಿದಾಯಕ ಕೆಲಸ ಮಾಡದಿರುವುದು ಉತ್ತಮ.

೮ *ಮೈತ್ರತಾರೆ*
ನಿಮ್ಮ ನಕ್ಷತ್ರದಿಂದ 8ನೇ ತಾರೆಯು ಮಿತ್ರ ತಾರೆಯಾಗುವುದು. ಈ ನಕ್ಷತ್ರವಿರುವ ದಿನ ಅಧಿಕಾರಿ ಭೇಟಿ, ಆಪ್ತರನ್ನು ಸಂಪರ್ಕಿಸಲು, ವ್ಯಾಪಾರ ಅಭಿವೃದ್ದಿ ಇತರ ಎಲ್ಲ ಕಾರ್ಯಕ್ಕೆ ಉತ್ತಮ.

೯ *ಪರಮಮೈತ್ರತಾರೆ*
ನಿಮ್ಮ ನಕ್ಷತ್ರದಿಂದ 9ನೇ ತಾರೆಯು ಪರಮಮಿತ್ರ ತಾರೆಯಾಗುವುದು. ಇದು ಕೂಡ ಶುಭ ಕಾರ್ಯಕ್ಕೆ ಸಿಂಧು.

ಉದಾಹರಣೆಗೆ
*ತಾರಾಬಲ ನೋಡುವ ಕ್ರಮ*

ಅಶ್ವಿನಿ ನಕ್ಷತ್ರವು ನಿಮ್ಮ ಜನ್ಮ ನಕ್ಷತ್ರವಾದರೆ

ಅಶ್ವಿನಿ -ಜನ್ಮ ನಕ್ಷತ್ರ
ಭರಣಿ - ಸಂಪತ್ ತಾರೆ.
ಕೃತಿಕಾ -ವಿಪತ್ ತಾರೆ
ರೋಹಿಣಿ -ಕ್ಷೇಮ ತಾರೆ.
ಮೃಗಶಿರಾ -ಪ್ರತ್ಯರ್ ತಾರೆ
ಆರ್ದ್ರಾ- ಸಾಧಕ ತಾರೆ
ಪುನರ್ವಸು -ವಧ ತಾರೆ
ಪುಷ್ಯ -ಮೈತ್ರತಾರೆ
ಆಶ್ಲೇಷಾ- ಪರಮಮೈತ್ರತಾರೆ

ಮಘಾ- ಅನುಜನ್ಮ ನಕ್ಷತ್ರ
ಹುಬ್ಬಾ-ಸಂಪತ್ ತಾರೆ.
ಉತ್ತರ- ವಿಪತ್ ತಾರೆ
ಹಸ್ತಾ -ಕ್ಷೇಮ ತಾರೆ.
ಚಿತ್ರಾ ಪ್ರತ್ಯರ್ ತಾರೆ
ಸ್ವಾತಿ- ಸಾಧಕ ತಾರೆ
ವಿಶಾಖ -ವಧ ತಾರೆ
ಅನುರಾಧ ಮೈತ್ರತಾರೆ
ಜೇಷ್ಠಾ -ಪರಮಮೈತ್ರತಾರೆ

ಮೂಲ -ತ್ರಿಜನ್ಮ ನಕ್ಷತ್ರ
ಪೂರ್ವಾಷಾಢ-ಸಂಪತ್ ತಾರೆ.
ಉತ್ತರಾಷಾಢ-ವಿಪತ್ ತಾರೆ
ಶ್ರವಣ -ಕ್ಷೇಮ ತಾರೆ.
ಧನಿಷ್ಟಾ ಪ್ರತ್ಯರ್ ತಾರೆ
ಶತಭಿಷ -ಸಾಧಕ ತಾರೆ
ಪೂರ್ವಭಾದ್ರ -ವಧ ತಾರೆ
ಉತ್ತರಭಾದ್ರ -ಮೈತ್ರತಾರೆ
ರೇವತಿ -ಪರಮಮೈತ್ರತಾರೆ

ಹೆಚ್ಚಿನ ವಿವರಣೆಗಳು ಬೇಕಾಗಿದ್ದಲ್ಲಿ
ವಾಟ್ಸಪ್ ನಲ್ಲಿ ಕೇಳಬಹುದು
9886600332

ಆಧ್ಯಾತ್ಮ ಬಂಧುಗಳೇ...
ಮನೆ, ಮಠ,ಮಂದಿರಗಳಲ್ಲಿ ದೈವಿಕ ಕಾರ್ಯಗಳಲ್ಲಿ ರಾಮಾಯಣ,ಮಹಾಭಾರತ ಭಾಗವತ ಪುರಾಣ,ಗರುಡ ಪುರಾಣ ಮೊದಲಾದ ಅಷ್ಟಾದಶ ಪುರಾಣಗಳ ಪಾರಾಯಣ ಮತ್ತು ಪ್ರವಚನ
ಜಪ ತಪ ಹೋಮ ಅನುಷ್ಠಾನ ಗಳನ್ನು
ಜಾತಕ ವಿಮರ್ಶೆ ....ಪ್ರಶ್ನೆ ಚಿಂತನೆಯನ್ನು
ಯೋಗ್ಯತಾನುಸಾರ ಸರಳ ಮತ್ತು ಶ್ರದ್ಧೆಯಿಂದ ನಡೆಸಿಕೊಡಲಾಗುತ್ತದೆ
ಆಸಕ್ತ ಭಗವದ್ಭಕ್ತರು ಸಂಪರ್ಕಿಸಬಹುದು.
ಅರೂರ್ ಕಿರಣ್ ಕೆ ರಾವ್
ಜ್ಯೋತಿಷ್ಯರು ಮತ್ತು ಪುರೋಹಿತರು
098448 12559,7019244429

ಮಾರಣ ಗುಳಿಗ
05/07/2026

ಮಾರಣ ಗುಳಿಗ

05/07/2026
23/06/2026

ಪಂಚಾಕ್ಷರಿ ಮಂತ್ರದ ನಿಜವಾದ ಅರ್ಥ ಮತ್ತು ಮಹತ್ವ

"ಓಂ ನಮಃ ಶಿವಾಯ" – ಇದು ಕೇವಲ ಐದು ಅಕ್ಷರಗಳ ಮಂತ್ರವಲ್ಲ; ಅನಾದಿಕಾಲದಿಂದ ಋಷಿಮುನಿಗಳು ಅನುಭವಿಸಿದ ಪರಮಾತ್ಮನ ಸ್ಮರಣೆಯ ದಿವ್ಯ ನಾದ.

ಈ ಪಂಚಾಕ್ಷರಿ ಮಂತ್ರವು ಯಜುರ್ವೇದದ ಶ್ರೀರುದ್ರಂ (ರುದ್ರಾಧ್ಯಾಯ) ನಲ್ಲಿ ಉಲ್ಲೇಖಗೊಂಡಿರುವ "ನಮಃ ಶಿವಾಯ" ಎಂಬ ಮಹಾಮಂತ್ರದಿಂದ ಬಂದಿದೆ. ಇದರ ಆರಂಭದಲ್ಲಿ "ಓಂ" ಎಂಬ ಪ್ರಣವವನ್ನು ಸೇರಿಸಿದಾಗ ಅದು ಷಡಕ್ಷರಿ ಮಂತ್ರವಾಗುತ್ತದೆ.

ಪಂಚಾಕ್ಷರಿ ಮಂತ್ರದ ಒಳಾರ್ಥ

ನ – ಸಮಸ್ತ ಲೋಕಗಳ ಆದಿದೇವನಿಗೆ ನಮಸ್ಕಾರ.

ಮಃ – ಪರಮಾನಂದವನ್ನು ನೀಡುವ, ಮಹಾಪಾತಕಗಳನ್ನು ನಾಶಮಾಡುವ ಕರುಣಾಮೂರ್ತಿಗೆ ನಮಸ್ಕಾರ.

ಶಿ – ಮಂಗಳಸ್ವರೂಪಿ, ಕಲ್ಯಾಣಕಾರಿ, ಶಾಂತಿ ಮತ್ತು ಅನುಗ್ರಹದ ಸಂಕೇತವಾದ ಶಿವನಿಗೆ ನಮಸ್ಕಾರ.

ವಾ – ವೃಷಭವಾಹನ, ವಾಸುಕಿ ಧಾರಕ ಹಾಗೂ ವಾಮಾಂಗದಲ್ಲಿ ಶಕ್ತಿಯನ್ನು ಧರಿಸಿದ ಪರಮೇಶ್ವರನಿಗೆ ನಮಸ್ಕಾರ.

ಯ – ಪರಮಾನಂದಸ್ವರೂಪಿಯಾದ, ಸಕಲ ಮಂಗಳಗಳ ನಿವಾಸವಾದ ಶಿವನಿಗೆ ನಮಸ್ಕಾರ.

ನಟರಾಜನ ತಾಂಡವದೊಂದಿಗೆ ಇರುವ ಸಂಬಂಧ

ಶೈವ ಆಗಮಗಳ ಪ್ರಕಾರ ಪಂಚಾಕ್ಷರಿಯ ಐದು ಅಕ್ಷರಗಳನ್ನು ನಟರಾಜನ ದಿವ್ಯ ತಾಂಡವದ ಐದು ಭಾವಗಳೊಂದಿಗೆ ಸಹ ಸಂಬಂಧಿಸಲಾಗುತ್ತದೆ.

- ನ – ಅಗ್ನಿಯನ್ನು ಧರಿಸಿದ ಹಸ್ತ
- ಮಃ – ಅಪಸ್ಮಾರ (ಮುಯಲಕ) ದೈತ್ಯನನ್ನು ಮೆಟ್ಟಿರುವ ಪಾದ
- ಶಿ – ಡಮರು ಧರಿಸಿದ ಹಸ್ತ
- ವಾ – ಲೋಕಕ್ಕೆ ಅನುಗ್ರಹ ನೀಡುವಂತೆ ಚಾಚಿರುವ ಹಸ್ತ
- ಯ – ಅಭಯಹಸ್ತ

ಈ ಐದು ಅಕ್ಷರಗಳು ಸೃಷ್ಟಿ, ಸ್ಥಿತಿ, ಸಂಹಾರ, ತಿರೋಧಾನ ಮತ್ತು ಅನುಗ್ರಹ ಎಂಬ ಪಂಚಕೃತ್ಯಗಳ ಸಂಕೇತಗಳೆಂದೂ ವಿವರಿಸಲಾಗುತ್ತದೆ.

ಪಂಚಾಕ್ಷರಿ ಮಂತ್ರದ ಆಧ್ಯಾತ್ಮಿಕ ಸಂದೇಶ

"ನಮಃ ಶಿವಾಯ" ಎಂದರೆ "ನನ್ನ ಅಹಂಕಾರವನ್ನು ತ್ಯಜಿಸಿ ಶಿವನಿಗೆ ಶರಣಾಗುತ್ತೇನೆ" ಎಂಬ ಅರ್ಥವೂ ಅಡಕವಾಗಿದೆ.

ಈ ಮಂತ್ರದ ಜಪವು ಮನಸ್ಸನ್ನು ವಿನಮ್ರಗೊಳಿಸುತ್ತದೆ, ಅಹಂಭಾವವನ್ನು ಕರಗಿಸುತ್ತದೆ ಮತ್ತು ಆತ್ಮಶುದ್ಧಿಗೆ ದಾರಿ ಮಾಡಿಕೊಡುತ್ತದೆ.

ಪಂಚಭೂತಗಳ ಮಂತ್ರ

ಪಂಚಾಕ್ಷರಿಯ ಐದು ಅಕ್ಷರಗಳು ಪಂಚಭೂತಗಳ ಪ್ರತೀಕವೆಂದು ಹೇಳಲಾಗಿದೆ.

- ನ – ಭೂಮಿ
- ಮ – ಜಲ
- ಶಿ – ಅಗ್ನಿ
- ವಾ – ವಾಯು
- ಯ – ಆಕಾಶ

ಅಂದರೆ ಈ ವಿಶ್ವವನ್ನು ನಿರ್ಮಿಸಿರುವ ಪಂಚಭೂತಗಳಲ್ಲಿಯೂ ಶಿವತತ್ವವೇ ವ್ಯಾಪಿಸಿದೆ ಎಂಬ ಸಂದೇಶವನ್ನು ಈ ಮಂತ್ರ ಸಾರುತ್ತದೆ.

ಪಂಚಾಕ್ಷರಿ ಮಂತ್ರ ಜಪದ ಫಲಗಳು

ಶೈವ ಸಂಪ್ರದಾಯದ ಪ್ರಕಾರ ಈ ಮಂತ್ರವನ್ನು ಭಕ್ತಿಯಿಂದ ಜಪಿಸುವುದರಿಂದ—

- ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆ ದೊರೆಯುತ್ತದೆ.
- ಒತ್ತಡ ಹಾಗೂ ಆತಂಕ ಕಡಿಮೆಯಾಗಲು ಸಹಾಯಕವಾಗಬಹುದು.
- ಏಕಾಗ್ರತೆ ವೃದ್ಧಿಯಾಗುತ್ತದೆ.
- ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ.
- ಭಕ್ತಿ, ವಿನಯ ಮತ್ತು ಆಂತರಿಕ ಶುದ್ಧತೆ ವೃದ್ಧಿಸುತ್ತದೆ.

ಕೆಲವು ಸಂಪ್ರದಾಯಗಳಲ್ಲಿ ಜ್ಯೋತಿಷ್ಯದ ದೃಷ್ಟಿಯಿಂದಲೂ ಈ ಮಂತ್ರವು ಗ್ರಹದೋಷಗಳ ತೀವ್ರತೆಯನ್ನು ಶಮನಗೊಳಿಸಲು ಸಹಾಯಕವೆಂದು ನಂಬಲಾಗಿದೆ.

ವೈಜ್ಞಾನಿಕ ದೃಷ್ಟಿಕೋನ

ಒಂದೇ ಮಂತ್ರವನ್ನು ಲಯಬದ್ಧವಾಗಿ, ಏಕಾಗ್ರತೆಯಿಂದ ಪುನರಾವರ್ತಿಸುವುದು ಮನಸ್ಸನ್ನು ಶಾಂತಗೊಳಿಸುವ ಧ್ಯಾನದ ಒಂದು ವಿಧಾನವಾಗಿದೆ. ನಿಯಮಿತ ಜಪವು ಉಸಿರಾಟದ ಲಯವನ್ನು ಸಮತೋಲನಗೊಳಿಸಿ, ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಲು ನೆರವಾಗಬಹುದು. ಆದ್ದರಿಂದ ಮಂತ್ರದ ಅರ್ಥ ತಿಳಿದಿದ್ದರೂ, ತಿಳಿದಿರದಿದ್ದರೂ, ಭಕ್ತಿಯಿಂದ ಹಾಗೂ ಏಕಾಗ್ರತೆಯಿಂದ ಜಪಿಸುವುದು ಮಾನಸಿಕ ನೆಮ್ಮದಿಗೆ ಸಹಾಯಕವಾಗುತ್ತದೆ.

ಕೊನೆಯ ಮಾತು

"ಓಂ ನಮಃ ಶಿವಾಯ" ಕೇವಲ ಒಂದು ಮಂತ್ರವಲ್ಲ; ಅದು ಅಹಂಕಾರದಿಂದ ಆತ್ಮಜ್ಞಾನದ ಕಡೆಗೆ ಕರೆದೊಯ್ಯುವ ದಿವ್ಯ ಮಾರ್ಗ.

ಶಿವನ ಸ್ಮರಣೆಯೇ ಶಾಂತಿ... ಶಿವನ ನಾಮಸ್ಮರಣೆಯೇ ಶಕ್ತಿ...

ಹರ ಹರ ಮಹಾದೇವ!
ಅರೂರ್ ಕಿರಣ್ ರಾವ್
ಗುರು ಪರಂಪರೆ ಜ್ಯೋತಿಷ್ಯ
098448 12559,7019244429

13/06/2026

ಕರ್ಣ ಪಿಶಾಚಿನಿ ಸಾಧನೆ: ಕಿವಿಯಲ್ಲಿ ರಹಸ್ಯ ಪಿಸುಗುಟ್ಟುವ ಶಕ್ತಿಯೋ ಅಥವಾ ಜೀವ ಹಿಂಡುವ ಮೃತ್ಯುಪಾಶವೋ?
ಕರ್ಣ ಪಿಶಾಚಿನಿ ಸಾಧನೆ: ಕಿವಿಯಲ್ಲಿ ರಹಸ್ಯ ಪಿಸುಗುಟ್ಟುವ ಶಕ್ತಿಯೋ ಅಥವಾ ಜೀವ ಹಿಂಡುವ ಮೃತ್ಯುಪಾಶವೋ? ಒಮ್ಮೆ ಓದಿ, ಎಚ್ಚರಗೊಳ್ಳಿ!*

ಅತಿಮಾನುಷ ಶಕ್ತಿಗಳು, ಭವಿಷ್ಯ ನುಡಿಯುವ ಚಮತ್ಕಾರಗಳು ಮತ್ತು ಕಣ್ಣಿಗೆ ಕಾಣದ ಲೋಕದ ರಹಸ್ಯಗಳು ಮನುಷ್ಯನನ್ನು ಸದಾ ಆಕರ್ಷಿಸುತ್ತವೆ. ಶ್ರಮವಿಲ್ಲದೆ ಜಗತ್ತನ್ನು ಗೆಲ್ಲಬೇಕು, ಜನರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಬೇಕು ಎಂಬ ದುರಾಶೆಗೆ ಬಿದ್ದು ಮಂತ್ರಶಾಸ್ತ್ರದ ಕತ್ತಲೆ ದಾರ ತುಳಿಯುವವರು ಇಂದಿಗೂ ಇದ್ದಾರೆ. ಇಂತಹ ಕಗ್ಗತ್ತಲೆಯ ದಾರಿಯಲ್ಲಿ ಸಿಗುವ ಒಂದು ಅತ್ಯಂತ ಅಪಾಯಕಾರಿ, ಕ್ಷುದ್ರ ಶಕ್ತಿಯೇ "ಕರ್ಣ ಪಿಶಾಚಿನಿ". ಆದರೆ, ನೆನಪಿಡಿ— *ಕ್ಷಣಿಕ ಜನಪ್ರಿಯತೆ ನೀಡುವ ಈ ಸಿದ್ಧಿಯ ಅಂತಿಮ ಪರಿಣಾಮ ಮಾತ್ರ ನರಕಸದೃಶ!*

ಮಂತ್ರ ಶಾಸ್ತ್ರದ ಗಹನ ಅಧ್ಯಯನ ನಡೆಸಿದ ಸಾಧಕರೊಬ್ಬರು ತಮಗೆ ಎದುರಾದ ನೈಜ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

*ಚಮತ್ಕಾರಗಳ ಬೆನ್ನಟ್ಟಿ ಹೋಗಿ ತನ್ನ ಜೀವವನ್ನೇ ಬಲಿಗೊಟ್ಟ ಯುವಕನೊಬ್ಬನ ಕರುಣಾಜನಕ ಕಥೆ ಇಲ್ಲಿದೆ*.

ಇದು ಕೇವಲ ಕಥೆಯಲ್ಲ, ಪ್ರತಿಯೊಬ್ಬರಿಗೂ ಒಂದು ಬಲವಾದ ಎಚ್ಚರಿಕೆ (Warning)!

*ಚಮತ್ಕಾರದ ಆರಂಭ*:

ತ್ರಿಕಾಲ ಜ್ಞಾನಿಯಂತೆ ಮಿಂಚಿದ ಯುವಕ ಸುಮಾರು ಒಂಬತ್ತು ವರ್ಷಗಳ ಹಿಂದೆ, ಮಂತ್ರ ಶಾಸ್ತ್ರದ ಪ್ರಯೋಗಗಳಲ್ಲಿ ಆಸಕ್ತಿ ಹೊಂದಿದ್ದ ಒಬ್ಬ ಯುವಕನ ಪರಿಚಯವಾಯಿತು. ಅವನು ಸಾಮಾನ್ಯ ವಿದ್ಯಾಭ್ಯಾಸ ಹೊಂದಿದ್ದರೂ, ಅವನ ಮುಖದಲ್ಲಿ ಒಂದು ವಿಚಿತ್ರ ತೇಜಸ್ಸಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಅವನು *ಜನರ ಭೂತ ಮತ್ತು ವರ್ತಮಾನ ಕಾಲದ ರಹಸ್ಯಗಳನ್ನು ನಿಖರವಾಗಿ ಹೇಳಿ ಬೆರಗುಗೊಳಿಸುತ್ತಿದ್ದ*.

"ನಿಮ್ಮ ತಂದೆಯವರು ಮುಂದಿನ ಶನಿವಾರ ಮಧ್ಯಾಹ್ನ ನಿಖರವಾಗಿ ೧೨ ಗಂಟೆಗೆ ನಿಮಗೆ ₹೧೫೦ ಮನಿ ಆರ್ಡರ್ ಕಳುಹಿಸುತ್ತಾರೆ," ಎಂದು ಆ ಯುವಕ ಒಬ್ಬರಿಗೆ ಸವಾಲು ಹಾಕಿದ್ದ. ಆಶ್ಚರ್ಯವೆಂದರೆ, ಮರು ಶನಿವಾರ ಅದೇ ಸಮಯಕ್ಕೆ ಮನಿ ಆರ್ಡರ್ ಕೈ ಸೇರಿತ್ತು!
ಹೀಗೆ ಪ್ರತಿಯೊಬ್ಬರ ಜೀವನದ ಗುಪ್ತ ವಿಷಯಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದ ಆ ಯುವಕನನ್ನು ಇಡೀ ಊರು ಒಬ್ಬ ಮಹಾನ್ ಸಿದ್ಧ ಪುರುಷ, ತ್ರಿಕಾಲ ಜ್ಞಾನಿ ಎಂದು ಪೂಜಿಸಲು ಶುರು ಮಾಡಿತು. ಆದರೆ, ಮಂತ್ರ ಶಾಸ್ತ್ರದ ಅರಿವಿದ್ದ ಗುರುವಿಗೆ ಇದರ ಹಿಂದೆ ಯಾವುದೇ ದೈವಿಕ ಶಕ್ತಿ ಇಲ್ಲ, ಬದಲಿಗೆ ಕೀಳುಮಟ್ಟದ "ಕರ್ಣ ಪಿಶಾಚಿನಿ" ಸಾಧನೆ ಇದೆ ಎಂಬ ಅನುಮಾನ ಮೂಡಿತು. ಆ ಗುರುಗಳು ನೇರವಾಗಿ ಪ್ರಶ್ನಿಸಿದಾಗ, ಆ ಯುವಕ ಕಣ್ಣೀರು ಹಾಕುತ್ತಾ ತಾನು ಸಿಲುಕಿಕೊಂಡಿರುವ ನರಕದ ರಹಸ್ಯವನ್ನು ಬಿಚ್ಚಿಟ್ಟನು.
ಕತ್ತಲೆಯ ಕೋಣೆಯಲ್ಲಿ ಅಶುಚಿತ್ವದ ಸಾಧನೆ
ಆ ಯುವಕನಿಗೆ ತಮಿಳುನಾಡಿನ ಮಾಂತ್ರಿಕನೊಬ್ಬ ಈ ಮಂತ್ರವನ್ನು ನೀಡಿದ್ದನು. ಈ ಸಾಧನೆಯ ನಿಯಮಗಳೇ ಅತ್ಯಂತ ಅಸಹ್ಯ ಮತ್ತು ತಾಮಸಿಕವಾಗಿದ್ದವು.

ನಿಯಮ: ಸ್ಮಶಾನದಲ್ಲಿ ಅಥವಾ ನಿರ್ಜನ ಕೋಣೆಯಲ್ಲಿ, ಮಲ-ಮೂತ್ರ ವಿಸರ್ಜನೆ ಮಾಡಿದ ನಂತರ ದೇಹವನ್ನು ತೊಳೆದುಕೊಳ್ಳದೆ (ಅತ್ಯಂತ ಅಶುಚಿಯಾಗಿ) ಈ ಜಪವನ್ನು ಮಾಡಬೇಕಿತ್ತು.
ಜಪ ಶುರುವಾದ ಕೆಲವು ದಿನಗಳಲ್ಲೇ ಕೋಣೆಯಲ್ಲಿ ವಿಚಿತ್ರ ಶಬ್ದಗಳು, ಯಾರೋ ಓಡಾಡುವ ಭ್ರಮೆಗಳು ಶುರುವಾದವು. ಸಾಧನೆಯ ಕೊನೆಯ ದಿನ, ಕತ್ತಲಿನಲ್ಲಿ ಅತ್ಯಂತ ವಿಕಾರವಾದ, ಕಪ್ಪಾದ, ಹೆದರಿಕೆ ಹುಟ್ಟಿಸುವ ಸ್ತ್ರೀ ಆಕೃತಿಯೊಂದು ಪ್ರತ್ಯಕ್ಷವಾಯಿತು. ಅವಳೇ ಕರ್ಣ ಪಿಶಾಚಿನಿ! "ನಿನಗೆ ಏನು ಬೇಕು?" ಎಂದು ಅವಳು ಕೇಳಿದಾಗ, ಆ ಯುವಕ "ನನ್ನ ಬಳಿ ಬರುವ ಜನರ ರಹಸ್ಯಗಳನ್ನು ನೀನು ನನ್ನ ಕಿವಿಯಲ್ಲಿ ಹೇಳಬೇಕು" ಎಂದು ಒಪ್ಪಂದ ಮಾಡಿಕೊಂಡನು.

*ಕಿವಿಯಲ್ಲಿ ಪಿಸುಮಾತು: ವರವಾಗಿದ್ದ ಶಕ್ತಿ ಶಾಪವಾಗಿದ್ದು ಹೇಗೆ*?

ಅಂದಿನಿಂದ ಯಾರೇ ಪ್ರಶ್ನೆ ಕೇಳಲು ಬಂದರೂ, ಆ ಪಿಶಾಚಿಯು ತಕ್ಷಣ ಬಂದು ಆ ವ್ಯಕ್ತಿಯ ಹೆಸರು, ಹಿನ್ನೆಲೆ ಮತ್ತು ಬಂದ ಉದ್ದೇಶವನ್ನು ಯುವಕನ ಕಿವಿಯಲ್ಲಿ ಸ್ಪಷ್ಟವಾಗಿ ಪಿಸುಗುಟ್ಟುತ್ತಿತ್ತು (Whispering). ಜನರಿಗೆ ಅವನು ದೇವರೆಂದು ಕಂಡರೆ, ಯುವಕನಿಗೆ ಮಾತ್ರ ದಿನಕಳೆದಂತೆ ಅಸಲಿ ನರಕದ ದರ್ಶನವಾಯಿತು.

೧. ದಿನದ ೨೪ ಗಂಟೆಯೂ ಕಿರುಚಾಟ – ನೆಮ್ಮದಿ ಇಲ್ಲದ ಬದುಕು!
ಆ ಪಿಶಾಚಿ ಕೇವಲ ಜನ ಬಂದಾಗ ಮಾತ್ರ ಮಾತನಾಡುತ್ತಿರಲಿಲ್ಲ. ದಿನದ ೨೪ ಗಂಟೆಯೂ, ಅವನು ಊಟ ಮಾಡುವಾಗ, ಸ್ನಾನ ಮಾಡುವಾಗ, ಮಲಗಲು ಹೋದಾಗಲೂ ಕಿವಿಯಲ್ಲಿ ವಿಕಾರವಾಗಿ ನಗುವುದು, ಕಿರುಚುವುದು, ಕೆಟ್ಟ ಮಾತುಗಳನ್ನಾಡುವುದನ್ನು ಮಾಡುತ್ತಿತ್ತು. ವರ್ಷಗಟ್ಟಲೆ ನಿದ್ದೆಯಿಲ್ಲದೆ ಆ ಯುವಕ ತಲೆ ಕೆಟ್ಟು ಹುಚ್ಚನಂತಾದನು.

೨. ದೈಹಿಕ ಶೋಷಣೆ ಮತ್ತು ಅಕಾಲಿಕ ವೃದ್ಧಾಪ್ಯ
ಆ ಕ್ಷುದ್ರ ಶಕ್ತಿಯು ಯುವಕನ ದೇಹದ ಓಜಸ್ಸು ಮತ್ತು ರಕ್ತವನ್ನು ಹೀರುತ್ತಿತ್ತು. ಮುಖದ ತೇಜಸ್ಸು ಮಾಯವಾಗಿ, ಕಣ್ಣುಗಳು ಗುಂಡಿ ಬಿದ್ದು, ಚರ್ಮ ಸುರುಟುಗಟ್ಟಿತು. ಯುವ ಪ್ರಾಯದ ಆ ಹುಡುಗ ಕೆಲವೇ ತಿಂಗಳುಗಳಲ್ಲಿ ಮುದುಕನಂತೆ ಕಾಣತೊಡಗಿದನು.

೩. ದೇವಸ್ಥಾನ, ಪೂಜೆಗೆ ನಿಷೇಧ!

ಶುದ್ಧತೆ ಎಂದರೆ ಆ ಪಿಶಾಚಿಗೆ ಆಗುತ್ತಿರಲಿಲ್ಲ. ಅವನು ದೇವಸ್ಥಾನಕ್ಕೆ ಹೋಗುವಂತಿರಲಿಲ್ಲ, ದೈವಿಕ ಪೂಜೆ ಮಾಡುವಂತಿರಲಿಲ್ಲ. ಸದಾ ಅಶುಚಿಯಾಗಿಯೇ ಇರಬೇಕು ಎಂದು ಅದು ದೈಹಿಕವಾಗಿ ಹಿಂಸಿಸುತ್ತಿತ್ತು.

೪. ಭವಿಷ್ಯದ ಜ್ಞಾನ ಅದಕ್ಕಿಲ್ಲ!
ಅತ್ಯಂತ ಮುಖ್ಯವಾದ ವಿಷಯವೆಂದರೆ, ಕರ್ಣ ಪಿಶಾಚಿನಿಗೆ ಕೇವಲ ಭೂತಕಾಲ ಮತ್ತು ವರ್ತಮಾನ ಮಾತ್ರ ತಿಳಿಯುತ್ತದೆ. ಅದಕ್ಕೆ ಭವಿಷ್ಯವನ್ನು ನೋಡುವ ದೈವಿಕ ಶಕ್ತಿ ಇಲ್ಲವೇ ಇಲ್ಲ!

ಅದು ಕೇವಲ ಊಹೆಗಳನ್ನು ಹೇಳಿ ದಾರಿ ತಪ್ಪಿಸುತ್ತದೆ.

*ಭಯಾನಕ ಅಂತ್ಯ*: ಒಮ್ಮೆ ಸಿಕ್ಕಿಬಿದ್ದರೆ ಮುಕ್ತಿ ಇಲ್ಲ!
ಆ ಯುವಕನಿಗೆ ಆ ನರಕದಿಂದ ಮುಕ್ತಿ ಬೇಕಿತ್ತು. ಆದರೆ ಈ ತಾಮಸಿಕ ಒಪ್ಪಂದದಿಂದ ಹೊರಬರಲು ಸಾಧ್ಯವೇ ಇರಲಿಲ್ಲ. ಕೊನೆಗೆ ಆ ಪಿಶಾಚಿಯ ಕಾಟವನ್ನು ತಾಳಲಾರದೆ, ಮಾನಸಿಕ ಸೌಮ್ಯತೆಯನ್ನು ಸಂಪೂರ್ಣವಾಗಿ ಕಳೆದುಕೊಂಡು, ಅತ್ಯಂತ ದಾರುಣ ಹಾಗೂ ರಹಸ್ಯ ಪರಿಸ್ಥಿತಿಯಲ್ಲಿ ಆ ಯುವಕ ಅಲ್ಪ ವಯಸ್ಸಿನಲ್ಲೇ ಪ್ರಾಣ ಬಿಟ್ಟನು.

*ಇದು ಕಲ್ಪನೆಯಲ್ಲ*, ನಮ್ಮ ಕಣ್ಣಮುಂದಿರುವ ನೈಜ ಸತ್ಯ!

*ಗಮನಿಸಿ*: ಇದು ಕೇವಲ ಯಾವುದೋ ಒಂದು ಹಳೆಯ ಪುಸ್ತಕದಲ್ಲಿ ಓದಿದ ಕಥೆಯಲ್ಲ. ಇಂತಹ ಕ್ಷುದ್ರ ಶಕ್ತಿಗಳ ಬೆನ್ನಟ್ಟಿ, ತಪ್ಪು ಗುರುಗಳ ಪ್ರೇರಣೆಗೆ ಒಳಗಾಗಿ ಇಡೀ ಬದುಕನ್ನು, ತಮ್ಮ ಕುಟುಂಬವನ್ನು ಬೀದಿಗೆ ತಂದ ಎಷ್ಟೋ ಜೀವಂತ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಜ್ಯೋತಿಷ್ಯದ ಹೆಸರಿನಲ್ಲಿ, ಮಂತ್ರ-ತಂತ್ರದ ಹೆಸರಿನಲ್ಲಿ ಇಂತಹ ಶಕ್ತಿಗಳನ್ನು ಸಿದ್ಧಿಸಿಕೊಂಡು, ಆರಂಭದಲ್ಲಿ ಜನರ ಗಮನ ಸೆಳೆದು, ಕೊನೆಗೆ ಕಣ್ಣೀರ ಕಡಲಿನಲ್ಲಿ ಮುಳುಗಿ ಹೋದ ನೂರಾರು ನೈಜ ಘಟನೆಗಳಿಗೆ ನಮ್ಮ ಸಮಾಜವೇ ಸಾಕ್ಷಿಯಾಗಿದೆ. ಆ ಯುವಕನ ದಾರುಣ ಅಂತ್ಯವೇ ಇದಕ್ಕೆ ಸಾಕು!
ಆ ಯುವಕನಿಗೆ ಆ ನರಕದಿಂದ ಮುಕ್ತಿ ಬೇಕಿತ್ತು. ಆದರೆ ಈ ತಾಮಸಿಕ ಒಪ್ಪಂದದಿಂದ ಹೊರಬರಲು ಸಾಧ್ಯವೇ ಇರಲಿಲ್ಲ. ಕೊನೆಗೆ ಆ ಪಿಶಾಚಿಯ ಕಾಟವನ್ನು ತಾಳಲಾರದೆ, ಮಾನಸಿಕ ಸೌಮ್ಯತೆಯನ್ನು ಸಂಪೂರ್ಣವಾಗಿ ಕಳೆದುಕೊಂಡು, ಅತ್ಯಂತ ದಾರುಣ ಹಾಗೂ ರಹಸ್ಯ ಪರಿಸ್ಥಿತಿಯಲ್ಲಿ ಆ ಯುವಕ ಅಲ್ಪ ವಯಸ್ಸಿನಲ್ಲೇ ಪ್ರಾಣ ಬಿಟ್ಟನು.

*ಅಂತಿಮ ಎಚ್ಚರಿಕೆ*

​ಮಂತ್ರ ಶಾಸ್ತ್ರದಲ್ಲಿ ಇಂತಹ ಕ್ಷುದ್ರ ಶಕ್ತಿಗಳ (ಕರ್ಣ ಪಿಶಾಚಿನಿ, ಚಾಮುಂಡಿ, ಯಕ್ಷಿಣಿ) ಸಾಧನೆಗಳು ತಕ್ಷಣಕ್ಕೆ ಸಣ್ಣಪುಟ್ಟ ಲಾಭಗಳು, ಹಣ ಅಥವಾ ಜನಪ್ರಿಯತೆಯನ್ನು ತಂದುಕೊಡಬಹುದು. ಯಾರಾದರೂ ಗುರುಗಳು ಇಂತಹ ಶಾರ್ಟ್‌ಕಟ್ ದಾರಿಗಳನ್ನು ತೋರಿಸಿದರೆ ಖಂಡಿತ ನಂಬಬೇಡಿ. ಸನ್ಮಾರ್ಗವನ್ನು ತೋರಿಸುವವನೇ ನಿಜವಾದ ಗುರು, ವಿನಾಶದ ಹಾದಿಗೆ ತಳ್ಳುವವನಲ್ಲ!

​ನಿಜವಾದ ಆಧ್ಯಾತ್ಮಿಕ ಸಾಧನೆ ಎಂದರೆ ಚಮತ್ಕಾರ ಪ್ರದರ್ಶಿಸುವುದಲ್ಲ. ನಿಜವಾದ ಸಾಧಕರು ಇಂತಹ ಸಿದ್ದಿಗಳ ಬೆನ್ನಟ್ಟದೆ, ಸಾತ್ತ್ವಿಕ ಮಾರ್ಗದಲ್ಲಿ ಗಾಯತ್ರಿ ಮಂತ್ರ ಅಥವಾ ಇಷ್ಟದೇವತೆಯ ಆರಾಧನೆ ಮಾಡಬೇಕು. ದೈವಿಕ ಶಕ್ತಿಯು ತಡವಾಗಿ ಫಲ ನೀಡಿದರೂ ಅದು ಶಾಶ್ವತವಾದ ಶಾಂತಿ, ನೆಮ್ಮದಿ ಮತ್ತು ರಕ್ಷಣೆಯನ್ನು ನೀಡುತ್ತದೆ. ಚಮತ್ಕಾರಗಳ ಬೆನ್ನಟ್ಟಿ ನಿಮ್ಮ ಜೀವನವನ್ನು ದುರಂತದ ಕಂದಕಕ್ಕೆ ತಳ್ಳಿಕೊಳ್ಳಬೇಡಿ!

ಆರೂರ್ ಕಿರಣ್ ರಾವ್
ಗುರುಪರಂಪರೆ ಜ್ಯೋತಿಷಿ ಚಿಂತನ
ಉಡುಪಿ
098448 12559 7019244429

11/06/2026

*ಪಂಚೋಪಚರ ಪೂಜೆ* ಅಂದ್ರೆ ದೇವರನ್ನ ಪೂಜಿಸುವ 5 ಪ್ರಮುಖ ವಿಧಾನಗಳು. "ಪಂಚ" = 5, "ಉಪಚರ" = ಸೇವೆ/ಆರಾಧನೆ.

*ಪಂಚೋಪಚರದ 5 ಅಂಗಗಳು*
ಕ್ರಮ ಉಪಚಾರ ಸಂಸ್ಕೃತ ಅರ್ಥ & ಮಹತ್ವ
**1** **ಗಂಧ** ಗಂಧಂ ಸಮರ್ಪಯಾಮಿ **ಚಂದನ, ಅಗರಬತ್ತಿ ಪೇಸ್ಟ್**: ದೇವರಿಗೆ ತಂಪು ಕೊಡೋದು. ನಮ್ಮ ಮನಸ್ಸಿನ ಕೋಪ, ಸಿಟ್ಟು ತಣಿದು ಶಾಂತಿ ಬರಲಿ ಅನ್ನೋ ಸಂಕೇತ
**2** **ಪುಷ್ಪ** ಪುಷ್ಪಂ ಸಮರ್ಪಯಾಮಿ **ಹೂ**: ನಮ್ಮ ಹೃದಯದ ಭಕ್ತಿಯನ್ನ ಹೂ ತರಹ ಅರ್ಪಿಸುವುದು. ಹೂ ಬಾಡೋ ಹಾಗೆ ಅಹಂಕಾರ ಬಾಡಲಿ ಅಂತ ಪ್ರಾರ್ಥನೆ
**3** **ಧೂಪ** ಧೂಪಂ ಸಮರ್ಪಯಾಮಿ **ಅಗರಬತ್ತಿ/ಸಾಂಬ್ರಾಣಿ**: ಹೊಗೆಯಿಂದ ದುಷ್ಟ ಶಕ್ತಿ ಓಡಿ ಹೋಗಲಿ. ನಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳು ಹೊಗೆಯಂತೆ ಹೋಗಲಿ ಅಂತ
**4** **ದೀಪ** ದೀಪಂ ದರ್ಶಯಾಮಿ **ದೀಪ/ಜ್ಯೋತಿ**: ಅಜ್ಞಾನ ಕತ್ತಲನ್ನ ಹೋಗಲಾಡಿಸಿ ಜ್ಞಾನದ ಬೆಳಕು ಕೊಡು ಅಂತ ಪ್ರಾರ್ಥನೆ. ಕರ್ಪೂರ ದೀಪ ಆರತಿ
**5** **ನೈವೇದ್ಯ** ನೈವೇದ್ಯಂ ಸಮರ್ಪಯಾಮಿ **ನೈವೇದ್ಯ/ಪ್ರಸಾದ**: ತಿಂಡಿ, ಹಣ್ಣು, ಸಿಹಿ ಅರ್ಪಣೆ. "ನಾನು ತಿನ್ನೋ ಮೊದಲು ನಿನಗೆ ಕೊಡ್ತೀನಿ ದೇವ" ಅನ್ನೋ ಸಮರ್ಪಣಾ ಭಾವ
*ಬಸವಣ್ಣನ ದೃಷ್ಟಿಯಲ್ಲಿ ಪಂಚೋಪಚರ*
ಬಸವಣ್ಣ ಪಂಚೋಪಚರನ ತಿರಸ್ಕರಿಸಲಿಲ್ಲ, ಅದಕ್ಕೆ ಹೊಸ ಅರ್ಥ ಕೊಟ್ಟರು:

*ಬಸವಣ್ಣ ವಚನ:*
"ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸ ಕೂಡಲಸಂಗಮದೇವ"

*ಅರ್ಥ*: ದೊಡ್ಡ ಪೂಜೆ, ದುಬಾರಿ ವಸ್ತು ಬೇಡ.
1. *ಗಂಧ* = ಒಳ್ಳೆ ಮಾತು
2. *ಪುಷ್ಪ* = ಪ್ರೀತಿಯ ಮನಸ್ಸು
3. *ಧೂಪ* = ದುರಾಸೆ ಸುಟ್ಟು ಹಾಕುವುದು
4. *ದೀಪ* = ಜ್ಞಾನದ ಬೆಳಕು
5. *ನೈವೇದ್ಯ* = ಕಾಯಕದ ಫಲ, ಪ್ರಸಾದ ಬುದ್ಧಿ

*ಮನೆಯಲ್ಲಿ ಸರಳವಾಗಿ ಮಾಡೋದು ಹೇಗೆ?*
1. *ಗಂಧ*: ಚಂದನ ಇಲ್ಲಾಂದ್ರೆ ಭಸ್ಮವನ್ನೇ ಹಚ್ಚಿ "ಶಾಂತಿ ಕೊಡು" ಅಂತ ಕೇಳಿಕೊಳ್ಳಿ
2. *ಪುಷ್ಪ*: ತೋಟದ 1 ಹೂ ಸಾಕು, ಅಥ್ವಾ ಮನಸ್ಸಿನ ಭಕ್ತಿ ಹೂವೇ ಸಾಕು
3. *ಧೂಪ*: ಅಗರಬತ್ತಿ ಇಲ್ಲಾಂದ್ರೆ "ನನ್ನ ಕೆಟ್ಟ ಗುಣಗಳನ್ನ ಸುಡು" ಅಂತ ಪ್ರಾರ್ಥಿಸಿ
4. *ದೀಪ*: ಒಂದು ಎಣ್ಣೆ ದೀಪ ಸಾಕು. ಕರ್ಪೂರ ಇಲ್ಲಾಂದ್ರೆ "ಜ್ಞಾನ ಕೊಡು" ಅಂತ ಮನಸ್ಸಿನಲ್ಲಿ ಬೆಳಗಿಸಿ
5. *ನೈವೇದ್ಯ*: ನೀರು, ಬೆಲ್ಲದ ತುಂಡು, ಹಣ್ಣು - ಏನಿದ್ದರೂ ದೇವರಿಗೆ ಮೊದಲು ತೋರಿಸಿ

*ಪಂಚೋಪಚರದ ಗುಪ್ತ ಅರ್ಥ*
ಬಾಹ್ಯ ಪೂಜೆ ಮಾತ್ರ ಅಲ್ಲ. ನಮ್ಮೊಳಗೆ ದೇವರಿದ್ದಾನೆ ಅಂತ ಬಸವಣ್ಣ ಹೇಳಿದ ಹಾಗೆ:
1. *ಗಂಧ* - ಗುಣ ಸಂಸ್ಕಾರದಿಂದ ನಡೆ
2. *ಪುಷ್ಪ* - ಮನಸ್ಸು ಮೃದುವಾಗಿರಲಿ
3. *ಧೂಪ* - ಅಹಂಕಾರ ಸುಡು
4. *ದೀಪ* - ವಿವೇಕ ಬೆಳಗಿಸು
5. *ನೈವೇದ್ಯ* - ಕಾಯಕದ ಫಲವನ್ನ ದೇವರಿಗೆ ಅರ್ಪಿಸು
ಆರೂರ್ ಕಿರಣ್ ರಾವ್
ಗುರು ಪರಂಪರೆ ಜ್ಯೋತಿಷ್ಯ ಚಿಂತನ
098448 12559,7019244429

11/06/2026

#ಸಂಕಲ್ಪ

ನೀವು ದೇವಸ್ಥಾನಗಳಿಗೆ ಹೋಗಿ,ದೇವರಿಗೆ ಅರ್ಚನೆ,ಅಷ್ಟೋತ್ತರಪೂಜೆ ಮಾಡಿಸುವ ಸಂದರ್ಭದಲ್ಲಿ,ಅರ್ಚಕರು ನಿಮ್ಮ ಹೆಸರು,ಗೋತ್ರ,ನಕ್ಷತ್ರ ಕೇಳುತ್ತಾರೆ.ನಂತರ,ನಿಮ್ಮ ಹಾಗೂ ನಿಮ್ಮ ಕುಟುಂಬವರ್ಗದವರ ಆಯುರಾರೋಗ್ಯ,ಐಶ್ವರ್ಯಾದಿ ಅಭಿವೃದ್ಧಿಗಾಗಿ ಮತ್ತು ನಿಮ್ಮಬೇಡಿಕೆ ಏನಿದೆಯೋ ಅದರಂತೆ ‘ಸಂಕಲ್ಪ’ಮಾಡಿ ಅರ್ಚನೆಮಾಡುತ್ತಾರೆ. ಅಲ್ಲವೆ? ಹಾಗೆಯೇ, ನಮ್ಮ ಮನೆಗಳಲ್ಲಿ ನಡೆಯುವ ಶುಭಕಾರ್ಯಗಳ ಪ್ರಾರಂಭದಲ್ಲಿ ಪುರೋಹಿತರು ಯಜಮಾನನನ್ನು ಪೂರ್ವ ಅಥವಾ ಉತ್ತರದಿಕ್ಕಿನಲ್ಲಿ ಹಸೆಮಣೆಮೇಲೆ ಕುಳ್ಳಿರಿಸಿ,ಎಡ ಅಂಗೈ ಮೇಲೆ ಬಲಅಂಗೈ ಇಟ್ಟು ಎರಡನ್ನೂ ಬಲತೊಡೆಯಮೇಲಿಟ್ಟು ಕೊಳ್ಳುವಂತೆ ಹೇಳಿ,’ಸಂಕಲ್ಪ’ಮಾಡಿಸುತ್ತಾರೆ. ಅಲ್ಲವೆ?
ಹಾಗಾದರೆ,”ಸಂಕಲ್ಪ” ಅಂದರೇನು ? ಬನ್ನಿ ವಿವರವಾಗಿ ತಿಳಿಯೋಣ.
ತುಂಬಾ ಸರಳವಾಗಿ ಹೇಳಬೇಕೆಂದರೆ, ಶುಭಕಾರ್ಯ ನಡೆಯುವ ಆವತ್ತಿನ ಸಂವತ್ಸರ ಋತು, ಮಾಸ,ಪಕ್ಷ,ತಿಥಿ,ವಾರ,ನಕ್ಷತ್ರಗಳನ್ನು ಹೇಳಿ,ತಾನು ಅನುಷ್ಠಿಸುವ ಕರ್ಮಫಲ, ಯಾರಿಗೆ ನೇರವಾಗಿ ಸೇರಬೇಕೋ,ಅವರ ಹೆಸರು,ಗೋತ್ರ,ರಾಶಿ,ನಕ್ಷತ್ರಗಳನ್ನುಹೇಳಿ, ಅವರಿಗೋಸ್ಕರ ‘ಈ’ ಕರ್ಮ ಮಾಡುತ್ತೇನೆಂದು ಎಜಮಾನನು ಮನ:ಪೂರ್ವಕವಾಗಿ ಪರಮಾತ್ಮನನ್ನು ಸ್ಮರಿಸುತ್ತಾ ವಿನಂತಿಸಿಕೊಳ್ಳುವ ಕ್ರಿಯೆಯೇ “ಸಂಕಲ್ಪ”
ನಮ್ಮಲ್ಲಿ ಅಂತರ್ಯಾಮಿಯಾಗಿರುವ ಭಗವಂತನ ಪ್ರೇರಣೆಯಿಂದ,ನಾವು ಮಾಡುವ ಕ್ರಿಯೆಯ ಉದ್ದೇಶ,ವಿಧಿ ವಿಧಾನಗಳೆಲ್ಲದರ ಸಂಪೂರ್ಣ ಕಲ್ಪನೆ ಇದ್ಧಾಗ, ಅದು ‘ಸಂಕಲ್ಪ’ವಾಗುತ್ತದೆ.ಮತ್ತು ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವುದಕ್ಕೆ ಮುಂಚೆ, ಅದರ ಬಗ್ಗೆ ಸ್ಪಷ್ಟತೆಇದ್ದು, ಅದರ ಫಲಾಫಲಗಳನ್ನು ಯಾರ ಪ್ರೇರಣೆಯಿಂದ ಆ ಕ್ರಿಯೆ ಉಂಟಾಯಿತೋ ಆ ಶಕ್ತಿಯ ಪ್ರೀತಿಗಾಗಿಪವಿತ್ರವಾದ ಇಚ್ಛೆಯಿಂದ ಮಾಡುವ ವಿವೇಕಪೂರ್ಣ ನಿರ್ಧಾರವೇ ‘ಸಂಕಲ್ಪ’.
ಅಂತಹ ಸಂಕಲ್ಪದ ಒಂದು ಮಾದರಿಯನ್ನು ನೋಡೋಣ. ಆಚಾರ್ಯ ವಂದನೆಯ ನಂತರ, “ ಹರಿ:ಓಂ, ಶುಕ್ಲಾಂಬರಧರಂ ವಿಷ್ಣುಂ, ಶಶಿವರ್ಣಂ ಚತುರ್ಭುಜಂ।
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ।।
ಯಸ್ಯದ್ವಿರದ ವಕ್ತ್ರಾದ್ಯಾ: ಪಾರಿಷದ್ಯಾ: ಪರಶ್ಯತಂ ।
ವಿಘ್ನಂನಿಘ್ನಂತಿ ಸತತಂ ವಿಶ್ವಕ್ಸೇನಂ ತಮಾಶ್ರಯೇ ।।
ಹರಿರೋಂತತ್,ಶ್ರೀ ಗೋವಿಂದ ಗೋವಿಂದ ಗೋವಿಂದ,ಅಸ್ಯ ಶ್ರೀ ಭಗವತೋ ಮಹಾ ಪುರುಷಸ್ಯ,ಶ್ರೀವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಅದ್ಯ ಬ್ರಹ್ಮಣ: ದ್ವಿತೀಯ ಪರಾರ್ಧೇ,ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ,ಕಲಿಯುಗೇ,ಪ್ರಥಮ ಪಾದೇ, ಜಂಬೂದ್ವೀಪೇ, ಭರತವರ್ಷೇ,ಭರತಖಂಡೇ, ಶಕಾಬ್ದೇ, ಮೇರೋ: ದಕ್ಷಿಣೇ ಪಾರ್ಶ್ವೇ,ಅಸ್ಮಿನ್ ವರ್ತಮಾನೇ ವ್ವವಹಾರಿಕೇ,ಪ್ರಭವಾದಿ ಷಷ್ಠಿಸಂವತ್ಸರಾಣಾಂ ಮಧ್ಯೇ, ಶ್ರೀಮತ್.........ನಾಮ ಸಂವತ್ಸರೇ, .......ಅಯನೇ,......ಋತೌ.....ಮಾಸೇ......ಪಕ್ಷೇ,....ಶುಭತಿಥೌ,ವಾಸರ:....ವಾಸರಯುಕ್ತಾಯಾಂ, ....ನಕ್ಷತ್ರಯುಕ್ತಾಯಾಂ
ಶುಭನಕ್ಷತ್ರ ಶುಭಯೋಗ, ಶುಭಕರಣ,ಏವಂಗುಣ,ವಿಶೇಷಣ,ವಿಶಿಷ್ಟಾಯಾಂ ಅಸ್ಯಾಂ.......ಶುಭತಿಥೌ,ಶ್ರೀಭಗವದಾಜ್ಞಯಾ, ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ(ಶ್ರೀ ಭಗವತ್ ಕೈಂಕರ್ಯರೂಪಂ)
ಇಷ್ಟು ಹೇಳಿ,ಮುಂದೆ ಯಾರಿಗಾಗಿ ಕರ್ಮನಡೆಯುತ್ತಿದೆಯೋ ಅವರ ಗೋತ್ರಾದಿ ವಿವರಗಳು,ಮತ್ತು ಯಾವ ಫಲಪ್ರಾಪ್ತಿಗಾಗಿ ಈ ಕರ್ಮನಡೆಸಲಾಗುತ್ತಿದೆಯೋ ಆ ವಿವರಗಳನ್ನು ಹೇಳಲಾಗುತ್ತದೆ.
ಈಗ ಈ ಸಂಕಲ್ಪದಲ್ಲಿರುವ ವಿವರಗಳನ್ನು ನೋಡೋಣ.
ಅದ್ಯ ಬ್ರಹ್ಮಣ: ದ್ವಿತೀಯಪರಾರ್ಧೇ,ಶ್ವೇತವರಾಹಕಲ್ಪೇ.= ಬ್ರಹ್ಮನ ನೂರು ವರ್ಷದ ಆಯುಷ್ಯಕ್ಕೆ,”ಪರಾ” ಎಂದು ಹೆಸರು.ಇದರಲ್ಲಿ ಮೊದಲನೆಯ ಐವತ್ತು ವರ್ಷಗಳಿಗೆ ‘ಪ್ರಥಮ ಪರಾರ್ಧ’ ಅಂದರೆ, ‘ಪರಾ’ದ ಮೊದಲನೇ ಅರ್ಧವೆಂದೂ, ಮುಂದಿನ ಐವತ್ತು ವರ್ಷಗಳಿಗೆ ‘ದ್ವಿತೀಯ ಪರಾರ್ಧ’ಎಂದೂ ಹೆಸರು.ಈಗ, ಈಗಿರುವ ಬ್ರಹ್ಮನ ಮೊದಲ, ಪ್ರಥಮ ಪರಾರ್ಧಕಳೆದು,ದ್ವಿತೀಯ ಪರಾರ್ಧ ನಡೆಯುತ್ತಿದೆ.
ಬ್ರಹ್ಮನ ಒಂದೊಂದು ತಿಂಗಳಿನ ಒಂದೊಂದು ದಿನಕ್ಕೆ ‘ಕಲ್ಪ’ ಎಂದು ಹೆಸರು.ಬ್ರಾಹ್ಮ, ಪಾರ್ಧ,ಶ್ವೇತ,ನೀಲಲೋಹಿತ,ವಾಮದೇವ,ರಥಂತರ,ಗೌರವ,ದೇವ,ಬೃಹತ್,ಸದ್ಯ:, ಕಂದರ್ಪ,ಈಶಾನ,ತಮಸ್,ಸಾರಸ್ವತ,ಉದಾನ,ಗರುಡ,ಕೌರ್ಮ,ನಾರಸಿಂಹ, ಸಮಾನ,ಆಗ್ನೇಯ,ತತ್ಪುರುಷ,ವೈಕುಂಠ,ಲಕ್ಷ್ಮಿ, ಸಾವಿತ್ರಿ,ಅಘೋರ,ಶ್ವೇತವರಾಹ, ವೈರಾಜ,ಗೌರಿ,ಮಾಹೇಶ್ವರಿ,ಮತ್ತು ಪಿತೃಕಲ್ಪ ಅನ್ನುವ ಈ ಮೂವತ್ತು ಹೆಸರುಗಳು, ಬ್ರಹ್ಮನ ಒಂದು ತಿಂಗಳಿನ ಮೂವತ್ತು ದಿನಗಳ ಹೆಸರುಗಳು.ಕೌರ್ಮಕಲ್ಪ ಅನ್ನುವುದು ಬ್ರಹ್ಮನ ಹುಣ್ಣಿಮೆ. ಪಿತೃಕಲ್ಪ ಅನ್ನುವುದು ಬ್ರಹ್ಮನ ಅಮಾವಾಸ್ಯೆ. ಸಧ್ಯದಲ್ಲಿ,ಬ್ರಹ್ಮನ ಪ್ರಥಮ ಪರಾರ್ಧ ಕಳೆದು,ದ್ವಿತೀಯ ಪರಾರ್ಧ ನಡೆಯುತ್ತಿದೆ.ಈಗ ನಡೆಯುತ್ತಿರುವ ಬ್ರಹ್ಮನ ಐವತ್ತೊಂದನೇ ವರ್ಷದ ಮೊದಲನೇ ತಿಂಗಳಲ್ಲಿ ಇಪ್ಪತ್ತೈದು ದಿನಗಳುಕಳೆದು 26ನೇ ದಿನ(ಶ್ವೇತವರಾಹ ಕಲ್ಪ) ದ ಮೊದಲನೇ ಝಾವದ ಎರಡನೇ ಮುಹೂರ್ತವು ನಡೆಯುತ್ತಿದೆ.ಹಾಗಾಗಿ,ಸಂಕಲ್ಪಹೇಳುವಾದ ಇದನ್ನೇ, ನಾವು “ಅದ್ಯಬ್ರಹ್ಮಣ: ದ್ವಿತೀಯ ಪರಾರ್ಧೇ,ಶ್ವೇತವರಾಹಕಲ್ಪೇ “ ಎಂದು ಹೇಳುತ್ತೇವೆ.
_____________________________________________________________________
“ವೈವಸ್ವತ ಮನ್ವಂತರೇ” = ಮನು, ಇಂದ್ರ ಅನ್ನುವುದು ಒಂದು ಪದವಿಯ ಹೆಸರೇ ಹೊರತು ಯಾವುದೇ ವ್ಯಕ್ತಿಯ ಹೆಸರಲ್ಲ.ಬ್ರಹ್ಮನ ಒಂದು ಹಗಲಲ್ಲಿ ಸ್ವರ್ಗಲೋಕದಲ್ಲಿ 14 ಮಂದಿ ಇಂದ್ರರೂ,ಭೂಲೋಕದಲ್ಲಿ 14 ಮಂದಿ ಮನುಗಳೂ ರಾಜ್ಯಭಾರ ಮಾಡುತ್ತಾರೆ.ಒಬ್ಬೊಬ್ಬ ಮನುವಿನ ರಾಜ್ಯಭಾರದ ಕಾಲಕ್ಕೆ “ಮನ್ವಂತರ” ಎಂದು ಹೆಸರು.ಸ್ವಯಂಭೂ, ಸ್ವಾರೋಚಿಷ,ಉತ್ತಮ,ತಾಮಸ,ರೈವತ,ಚಾಕ್ಷಷ,ಅನ್ನುವ ಆರು ಮನುಗಳ ರಾಜ್ಯಭಾರದ ನಂತರ, ಈಗ ಏಳನೆಯವನಾದ ‘ವೈವಸ್ವತ’ಮನುವು ರಾಜ್ಯಭಾರ ಮಾಡುತ್ತಿದ್ದಾನೆ.ಆದ್ದರಿಂದ ಈಗ ನಡೆಯುತ್ತಿರುವ ಮನ್ವಂತರಕ್ಕೆ ‘ವೈವಸ್ವತ ಮನ್ವಂತರ’ ಎಂದು ಹೆಸರು.
__________________________________________________________________
ಕಲಿಯುಗೇ ಪ್ರಥಮಪಾದೇ= ಇದು ಎಲ್ಲರಿಗೂ ಗೊತ್ತೇ ಇದೆ.ವಿವರಣೆ ಬೇಕಿಲ್ಲ. ಚತುರ್ ಯುಗಗಳಲ್ಲಿ ನಾಲ್ಕನೆಯದೇ ಕಲಿಯುಗ.ಒಂದೊಂದು ಯುಗಗಳನ್ನೂ ನಾಲ್ಕು ಪಾದ, (ಭಾಗ)ಗಳನ್ನಾಗಿ ಮಾಡಲಾಗಿದೆ. ಈಗ ನಡೆಯುತ್ತಿರುವುದು ಕಲಿಯುಗದ ಮೊದಲನೇ ಭಾಗ,(ಪ್ರಥಮ ಪಾದ.
____________________________________________________________________
“ಜಂಬೂದ್ವೀಪೇ,ಭರತವರ್ಷೇ,ಭರತಖಂಡೇ,ಶಕಾಬ್ದೇ,ಮೇರೋ: ದಕ್ಷಿಣೇಪಾರ್ಶ್ವೇ” =
ಭೂಮಂಡಲದಲ್ಲಿ ಜಂಬೂ, ಪ್ಲಕ್ಷ, ಕುಶ ,ಕ್ರೌಂಚ,ಶಕ,ಶಾಲ್ಮಲಿ,ಮತ್ತು ಪುಷ್ಕರ ಅನ್ನುವ ಏಳು ಮಹಾದ್ವೀಪಗಳಿವೆ. ಇವುಗಳಲ್ಲಿ ಜಂಬೂದ್ವೀಪ ಅನ್ನುವುದೇ ಈಗಿನ ಏಷ್ಯಾಖಂಡ.ಈ ಜಂಬೂದ್ವೀಪದ ಮಧ್ಯದಲ್ಲಿ,’ಮೇರುಪರ್ವತ’ ಅನ್ನುವ ಸ್ವರ್ಣಪರ್ವತ ಇದೆ.ಈ ದ್ವೀಪದಲ್ಲಿ ದೊಡ್ಡದಾದ ಒಂದು ಜಂಬೂವೃಕ್ಷ(ನೇರಳೆಮರ) ಇದೆ. ಅದಕ್ಕೇ ಈ ದ್ವೀಪಕ್ಕೆ ಜಂಬೂದ್ವೀಪ ಎಂದು ಹೆಸರು.ಈ ದ್ವೀಪವನ್ನು ಒಂಭತ್ತು ಖಂಡಗಳನ್ನಾಗಿ ಮಾಡಿ, ಒಂದೊಂದು ಭಾಗವನ್ನು ಒಬ್ಬೊಬ್ಬ ರಾಜ ಆಳಿದ.ಇದರಲ್ಲಿ ಒಂದುಭಾಗವಾದ “ಅಜನಾಭವರ್ಷ”ವನ್ನು ಋಷಭದೇವ ಅನ್ನುವನಿಂದ ಜಯಂತಿ ಅನ್ನುವಳಲ್ಲಿ ಜನಿಸಿದ “ಭರತ”ಅನ್ನುವನು ಆಳಿದ್ದರಿಂದ ಆ ಪ್ರದೇಶಕ್ಕೆ ‘ಭರತವರ್ಷ ಅಥವಾ ಭರತಖಂಡ ಅನ್ನುವ ಹೆಸರು ಬಂತು.
ಹಿಂದೆ,ಅಂದರೆ ಸುಮಾರು ಕ್ರಿ,ಶ.78ರಲ್ಲಿ,ಸಿಧಿಯಾ ದೇಶದಿಂದ ಬಂದು,ಭಾರತದಲ್ಲಿ ನೆಲಸಿದ್ದ ಕುಶಾನ ವಂಶದ ರಾಜನಾದ ಒಂದನೇ ಕಾನಿಷ್ಕನು ಬಹುದೊಡ್ಡ,ಸಮೃದ್ಧ ರಾಜ್ಯಕ್ಕೆ ಒಡೆಯನಾಗಿದ್ದು,ಪ್ರಜೆಗಳಿಗೆ ಯಾವುದೇ ಕೊರತೆ ಇಲ್ಲದಂತೆ ಅತ್ಯುತ್ತಮ ರಾಜ್ಯಭಾರನಡೆಸಿದ್ದರಿಂದ,ಸಂತುಷ್ಟರಾದ ಪ್ರಜೆಗಳು,ಅವನು ಪಟ್ಟಾಭಿಷಿಕ್ತನಾದ ದಿನದಿಂದಲೇ ಒಂದು ಕಾಲಮಾನವನ್ನು ಪ್ರಾರಂಭಿಸಿದರು.ಅದನ್ನು ಶಕವರ್ಷ,ಶಕಾಬ್ದ, ಶಕವತ್ಸರಎಂದೂ ಕರೆದರು.ಹಾಗಾಗಿ,ದೈವಸ್ವರೂಪಿಯಾಗಿದ್ದುಕೊಂಡು, ಪ್ರಜೆಗಳ ಧಾರ್ಮಿಕ ಕ್ರಿಯೆಗಳಿಗೆ ಆತ ಕೊಟ್ಟ ಪ್ರೋತ್ಸಾಹದಿಂದ ಸಂತುಷ್ಟರಾಗಿ,ಕೃತಜ್ಞತಾರೂಪ ವಾಗಿ,ತಾವು ಮಾಡುತ್ತಿದ್ದ ಧಾರ್ಮಿಕಕ್ರಿಯೆಗಳ ಪ್ರಾರಂಭದಲ್ಲಿ ಸಂಕಲ್ಪಮಾಡುವಾಗ, ‘ಶಕಾಬ್ದೇ’ ಎಂದು ಹೇಳಲು ಪ್ರಾರಂಭಿಸಿದರು.ಆ ಪದ್ಧತಿ ಈವರೆಗೂ ಆಚರಣೆಯಲ್ಲಿದೆ.
ಈ ಮೊದಲೇ ತಿಳಿಸಿರುವಂತೆ,ಇಲಾವರ್ಷದಲ್ಲಿ ಜಂಬೂದ್ವೀಪವೂ, ಅದರ ಮಧ್ಯದಲ್ಲಿ ಮೇರುಪರ್ವತವೂ ಇದೆ.ನಮ್ಮ ಭಾರತಭೂಮಿ ಮೇರುಪರ್ವತದ ದಕ್ಷಿಣ ಪಾರ್ಶ್ವದಲ್ಲಿದೆ,
____________________________________________________________________
“ಸಂವತ್ಸರ”= ಕಾಲಮಾನದಲ್ಲಿ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳಿಂದ,ಮತ್ತೆ ಮತ್ತೆ ಬರುವ ಸಸ್ಯಗಳ,(ಗಿಡಮರಗಳ) ಚಿಗುರುವಿಕೆಯಿಂದ,ಆರಂಭವಾಗಿ,ನಂತರ ಅದರ ಎಲೆಗಳೆಲ್ಲಾ ಉದುರಿಹೋಗಿ,ಜೀರ್ಣವಾಗುವವರೆಗೂ ಇರುವ ‘ವಸಂತ’ವೇ ಮುಂತಾದ ಆರು ಋತುಗಳಿಂದ ಕೂಡಿದ ಒಂದು ವರ್ಷದ ಕಾಲಮಾನವನ್ನು “ಸಂವತ್ಸರ” ಎಂದು ಕರೆಯಲಾಗುತ್ತದೆ.ಮೊದಲನೆಯದಾದ ‘ಪ್ರಭವ’ ಸಂವತ್ಸರದಿಂದ ‘ಅಕ್ಷಯ’ನಾಮ ಸಂವತ್ಸರದ ವರೆಗೆ ಅರವತ್ತು ಸಂವತ್ಸರಗಳಿವೆ.
______________________________________________________________________“ಅಯನ”= ಅಯನ ಅಂದರೆ ಮಾರ್ಗ ಅಥವಾ ಸಂಚಾರ ಎಂದು ಅರ್ಥ.ಉತ್ತರಾಯಣ,ಉತ್ತರದಿಕ್ಕಿನ ಮಾರ್ಗ.ಈ ಮಾರ್ಗದಲ್ಲಿ ಸೂರ್ಯನು ಸಂಚರಿಸುವಂತೆ ಕಾಣುವ ಕಾಲವಿಶೇಷವನ್ನು ‘ಉತ್ತರಾಯಣ’ಎಂದು ಕರೆಯುತ್ತಾರೆ.ಸೂರ್ಯನು ಮಕರ ರಾಶಿಯನ್ನ್ನು ಪ್ರವೇಶಿಸಿದಾಗ,ಪ್ರಾರಂಭವಾಗಿ,ಕರ್ಕಾಟಕ ರಾಶಿಯಲ್ಲಿ ಪ್ರವೇಶಿಸುವ ವರೆಗೂ,ಈ ಕಾಲವಿರುತ್ತದೆ. ಹಾಗೆಯೇ,ಸೂರ್ಯ ಕರ್ಕಾಟಕರಾಶಿಯಲ್ಲಿ ಕಾಲಿಟ್ಟು, ಮಕರ ರಾಶಿಯನ್ನು ಪ್ರವೇಶಿಸುವವರೆಗೂ ಇರುವ ಕಾಲಕ್ಕೆ ದಕ್ಷಿಣಾಯನ ಅನ್ನುತ್ತಾರೆ. ಹೆಸರೇ ಸೂಚಿಸುವಂತೆ,ಉತ್ತರಾಯಣ ಶ್ರೇಷ್ಠವಾದ ಕಾಲ.ದೇವತೆಗಳ ಹಗಲು ಎಂದು ಕರೆಯಲ್ಪಡುವ ಈ ಉತ್ತರಾಯಣದಲ್ಲಿ ವಿವಾಹ, ಚೂಡಾಕರ್ಮ,ಉಪನಯನವೇ ಮುಂತಾದ ಶುಭಕಾರ್ಯಗಳನ್ನು ನಡೆಸಲು ಪ್ರಶಸ್ತವಾದ ಕಾಲವಾಗಿದೆ. ಅದಕ್ಕಾಗಿಯೇ ದಕ್ಷಿಣಾಯನದಲ್ಲಿ ಶರಶಯ್ಯೆಯಲ್ಲಿದ್ದ ಇಚ್ಛಾಮರಣಿಯಾದ ಭೀಷ್ಮರು, ಉತ್ತರಾಯಣ ಬರುವವರೆಗೂ ಕಾದಿದ್ದು ಆನಂತರವೇ ಪ್ರಾಣ ವಿಸರ್ಜಿಸಿದರು.
_________________________________________________________________
ಋತು= ಚಾಂದ್ರಮಾನ ವರ್ಷದ ಪ್ರತಿ ಎರಡು ತಿಂಗಳಿಗೆ ಒಂದೊಂದು ಋತು ಎಂದು ಹೆಸರು.ಅವುಗಳ ವಿವರ ಹೀಗಿದೆ.
ಚೈತ್ರ-ವೈಶಾಖ=ವಸಂತಋತು, ಜೇಷ್ಠ-ಆಷಾಢ=ಗ್ರೀಷ್ಮಋತು, ಶ್ರಾವಣ-ಭಾದ್ರಪದ =ವರ್ಷಋತು,ಆಶ್ವಯುಜ-ಕಾರ್ತೀಕ=ಶರದ್ರುತು,ಮಾರ್ಗಶಿರ-ಪುಷ್ಯ=ಹೇಮಂತಋತು ಮಾಘ-ಫಾಲ್ಗುಣ=ಶಿಶಿರಋತು.
___________________________________________________________________
ಮಾಸ= ಮೂವತ್ತು ದಿನಗಳ ಒಂದು ತಿಂಗಳನ್ನು ಮಾಸ ಅನ್ನುತ್ತಾರೆ.ಇದಕ್ಕೆ ವಿವರಣೆ ಬೇಕಿಲ್ಲ.ಚೈತ್ರ,ವೈಶಾಖ ಮುಂತಾದ ಹನ್ನೆರಡು ಮಾಸಗಳು ಎಲ್ಲರಿಗೂ ತಿಳಿದೇ ಇದೆ.
ಪಕ್ಷ= (ಶುಕ್ಲಪಕ್ಷ ಮತ್ತು ಕೃಷ್ಣಪಕ್ಷ.) ಚಂದ್ರನಲ್ಲಿ 16 ಕಲೆಗಳಿವೆ.ಹದಿನೈದು ಕಲೆಗಳನ್ನು ದೇವತೆಗಳು ಪಾನಮಾಡುವ , ಹದಿನೈದು ತಿಥಿಗಳಿಂದ ಕೂಡಿದ ಕಾಲದಲ್ಲಿ ಚಂದ್ರನ ಒಂದೊಂದು ಕಲೆಯೂ ಕ್ಷೀಣಿಸುತ್ತಾ ಹೋಗಿ,ಹದಿನೈದನೇದಿನ ಅಂದರೆ,ಅಮಾವಾಸ್ಯೆ ದಿನ ಚಂದ್ರನು ಸಂಪೂರ್ಣ ಕಲಾಹೀನನಾಗಿ,ಕಣ್ಣಿಗೆ ಕಾಣಿಸದಂತಾಗಿ ರಾತ್ರಿವೇಳೆ ಕತ್ತಲು ಕವಿದುಕೊಳ್ಳುವ 15 ದಿನಗಳನ್ನು ಕೃಷ್ಣಪಕ್ಷ ಅನ್ನುತ್ತಾರೆ. ಹಾಗೆಯೇ,ಚಂದ್ರನ 15 ಕಲೆಗಳನ್ನು ದೇವತೆಗಳು ಒಂದೊಂದಾಗಿ ಬಿಟ್ಟುಕೊಡುವ ಕಾಲದಲ್ಲಿ,ಚಂದ್ರ ಪ್ರತಿದಿನ ವೃದ್ಧಿಸುತ್ತಾ ಬೆಳ್ಳಗೆ ಪ್ರಕಾಶಿಸುತ್ತಾ,15 ನೇದಿನ ಪೂರ್ತಿಯಾಗಿ 16 ಕಲೆಗಳಿಂದ ಕೂಡಿ,ಪ್ರಕಾಶಿಸುತ್ತಾ ಲೋಕಕ್ಕೆ ಬೆಳಕನ್ನು ನೀಡುವ ಈ ಹದಿನೈದು ತಿಥಿಗಳಿಂದ ಕೂಡಿದ ಕಾಲಕ್ಕೆ’ಶುಕ್ಲಪಕ್ಷ’ ಅನ್ನುತ್ತಾರೆ.
______________________________________________________________________
ತಿಥಿ= ಮೇಲೆ ತಿಳಿಸಿದಂತೆ,ಚಂದ್ರನ ಒಂದೊಂದು ಕಲೆಯನ್ನೂ ದೇವತೆಗಳು ಪಾನಮಾಡುವ, ಬಿಟ್ಟುಕೊಡುವ ಒಂದೊಂದು ದಿನದ ಕಾಲಕ್ಕೆ ತಿಥಿ ಎಂದು ಹೆಸರು.ಈ ತಿಥಿಗಳೇ,ಪ್ರಥಮೆ(ಪಾಡ್ಯ),ದ್ವಿತೀಯೆ(ಬಿದಿಗೆ),ತೃತೀಯೆ(ತದಿಗೆ),ಚತುರ್ಥಿ(ಚೌತಿ), ಪಂಚಮಿ,ಷಷ್ಠಿ,ಸಪ್ತಮಿ,ಅಷ್ಟಮಿ,ನವಮಿ,ದಶಮಿ.ಏಕಾದಶಿ,ದ್ವಾದಶಿ,ತ್ರಯೋದಶಿ, ಚತುರ್ದಶಿ,ಪೌರ್ಣಮಿ ಮತ್ತು ಅಮಾವಾಸ್ಯೆ.
_____________________________________________________________________
ವಾಸರ(ವಾರ)= ಸೂರ್ಯೋದಯದಿಂದ ಪ್ರಾರಂಭವಾಗುವ 24 ಘಂಟೆಗಳ ಕಾಲಕ್ಕೆ ವಾರ ಎಂದು ಹೆಸರು,ವಾರ ಅಂದರೆ,ಪುನ: ಪುನ: (ಮತ್ತೆಮತ್ತೆ)ಅನ್ನುವ ಅರ್ಥವೂ ಉಂಟು.ಈ ವಾರಗಳು ಏಳುದಿನಗಳಿಗೊಮ್ಮೆ ಮತ್ತೆಮತ್ತೆ ಬರುವುದರಿಂದಲೂ,ಮತ್ತು ಭಾನು,ಸೋಮ,ಮಂಗಳ,ಬುಧ,ಗುರು,ಶುಕ್ರ,ಮತ್ತು ಶನಿ ಮುಂತಾದ ಏಳು ಗ್ರಹಗಳ ಆಧಿಪತ್ಯಕ್ಕೆ ಸಂಬಂಧಪಟ್ಟಹಾಗೆ ಬರುವುದರಿಂದಲೂ,ಯಾವ ಒಂದು ಗ್ರಹದ ಹೆಸರನ್ನೂ ಸೇರಿಸದೆ,ಕೇವಲ’ವಾರ’ಅಂದರೆ ಏಳು ದಿನಗಳೆಂದು ವ್ಯವಹಾರದಲ್ಲಿ ಬಂದುಬಿಟ್ಟಿದೆ.
____________________________________________________________________
ನಕ್ಷತ್ರ= ಸಂಕಲ್ಪ ಹೇಳುವಾಗ ಅಶ್ವಿನಿ,ಭರಣಿ ಮುಂತಾದ 27 ನಕ್ಷತ್ರಗಳಲ್ಲಿ ಆವತ್ತಿನ ನಕ್ಷತ್ರವನ್ನೂ ಹೇಳಬೇಕು.ನಕ್ಷತ್ರಗಳೆಲ್ಲಾ ಚಂದ್ರನ ಪತ್ನಿಯರು.ಅವನ್ನು ಸಂಕಲ್ಪದಲ್ಲಿ ಹೇಳುವುದರಿಂದ ಚಂದ್ರನ ಗತಿಯನ್ನೇ ಸ್ತುತಿಸಿದಂತೆ ಆಗುತ್ತದೆ ಅನ್ನುವುದು ನಂಬಿಕೆ.
_______________________________________________________________________
ಈ ಪ್ರಕಾರ ಯಾವುದೇ ಕರ್ಮವನ್ನು ಸಂಕಲ್ಪವನ್ನು ಹೇಳಿಯೇ ಮಾಡಬೇಕು ಇಲ್ಲದಿದ್ದರೆ,ಪುಣ್ಯಕರ್ಮಗಳು ನಿಷ್ಫಲವಾಗುತ್ತವೆ ಎಂದು ಆಪಸ್ತಂಬರ ಶಿಷ್ಯರಾದ ಕಪರ್ದಿಸ್ವಾಮಿಗಳು ಹೇಳಿದ್ದಾರೆ.ಹಾಗಾಗಿ ಎಲ್ಲಾ ಕಾರ್ಯಗಳಿಗೂ ಸಂಕಲ್ಪವೇ ಮೂಲ ಅನ್ನುವುದರಲ್ಲಿ ಸಂಶಯವಿಲ್ಲ.
ಸಂಕಲ್ಪಿತಾನಾಂ ಮನಸಾತುಪೂರ್ವಂ ಸಿದ್ಧಿಪ್ರದಿಷ್ಣಾ ವ್ಯವಸಾಯಯುಕ್ತಾ ।
ಕಾರ್ಯಾಣಿ ಸರ್ವಾಣಿ ತತಸ್ತು ಲೋಕೇ ಸಂಕಲ್ಪ ಮೂಲಾನಿ ವದಂತಿ ಸಂತ: ।।

,”ಲೋಕಾ:ಸಮಸ್ತಾ: ಸಖಿನೋ ಭವಂತು”.
ಆರೂರ್ ಕಿರಣ್ ರಾವ್
ಗುರು ಪರಂಪರೆ ಜ್ಯೋತಿಷ್ಯ ಚಿಂತನ
098448 12559,7019244429

05/06/2026

#ಗಾಯತ್ರಿ_ಮಂತ್ರಗಳ_ಮಹತ್ವ_ಮತ್ತು_ಜಪ_ವಿಧಾನ

ಗಾಯತ್ರಿ ಮಂತ್ರಗಳು ದೇವತಾ ತತ್ತ್ವವನ್ನು ಧ್ಯಾನಿಸಿ, ಮನಸ್ಸು–ಬುದ್ಧಿ–ಆತ್ಮವನ್ನು ಶುದ್ಧಿಗೊಳಿಸುವ ವೇದಮೂಲ ಮಂತ್ರಗಳಾಗಿವೆ.
ಪ್ರತಿ ಗಾಯತ್ರಿಯಲ್ಲೂ ಮೂರು ಭಾಗಗಳಿರುತ್ತವೆ:

ವಿದ್ಮಹೇ → ದೇವತೆಯನ್ನು ತಿಳಿದುಕೊಳ್ಳುವುದು

ಧೀಮಹೀ → ಆ ದೇವತೆಯನ್ನು ಧ್ಯಾನಿಸುವುದು

ಪ್ರಚೋದಯಾತ್ → ನಮ್ಮ ಬುದ್ಧಿಯನ್ನು ಪ್ರೇರೇಪಿಸಲಿ ಎಂದು ಪ್ರಾರ್ಥಿಸುವುದು

ಈ ಮಂತ್ರಗಳನ್ನು ಭಕ್ತಿ, ಶ್ರದ್ಧೆ ಮತ್ತು ಶುದ್ಧ ಮನಸ್ಸಿನಿಂದ ಜಪಿಸಿದಾಗ ಮನಃಶಾಂತಿ, ಧೈರ್ಯ, ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಚೈತನ್ಯ ವೃದ್ಧಿಯಾಗುತ್ತದೆ ಎಂದು ಪರಂಪರೆಯಲ್ಲಿ ನಂಬಲಾಗಿದೆ.

ಜಪ ಮಾಡುವ ಸಾಮಾನ್ಯ ವಿಧಾನ

ಬೆಳಿಗ್ಗೆ ಬ್ರಹ್ಮ ಮುಹೂರ್ತ ಅಥವಾ ಸಂಜೆ ಸಮಯ ಉತ್ತಮ.

ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವುದು ಶ್ರೇಷ್ಟ.

ದೀಪ ಹಚ್ಚಿ, ಮನಸ್ಸನ್ನು ಏಕಾಗ್ರಗೊಳಿಸಿ ಜಪಿಸಬೇಕು.

9, 11, 21 ಅಥವಾ 108 ಬಾರಿ ಜಪಿಸಬಹುದು.

“ಓಂ” ಉಚ್ಚಾರಣೆಯನ್ನು ನಿಧಾನವಾಗಿ, ಸ್ಪಷ್ಟವಾಗಿ ಹೇಳುವುದು ಉತ್ತಮ.

ಜಪಕ್ಕಿಂತ ಭಕ್ತಿ ಮತ್ತು ಮನಶ್ಶುದ್ಧಿ ಮುಖ್ಯ.

ಕೆಲವು ಪ್ರಮುಖ ಗಾಯತ್ರಿ ಮಂತ್ರಗಳ ಸಂಕ್ಷಿಪ್ತ ವಿವರಣೆ

೧. ಶ್ರೀ ವಿನಾಯಕ ಗಾಯತ್ರಿ

ವಿಘ್ನಗಳ ನಿವಾರಣೆ, ವಿದ್ಯೆ ಮತ್ತು ಶುಭಾರಂಭಕ್ಕಾಗಿ ಜಪಿಸಲಾಗುತ್ತದೆ.

> ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹೀ ।
ತನ್ನೋ ದಂತಿಃ ಪ್ರಚೋದಯಾತ್ ॥

೫. ರುದ್ರ ಗಾಯತ್ರಿ

ಆತ್ಮಜ್ಞಾನ, ಭಯ ನಿವಾರಣೆ ಮತ್ತು ಒಳಗಿನ ಶಕ್ತಿಯ ಜಾಗೃತಿಗೆ ಪ್ರಸಿದ್ಧ.

> ಓಂ ತತ್ಪುರುಷಾಯ ವಿದ್ಮಹೇ ।
ಮಹಾದೇವಾಯ ಧೀಮಹೀ ।
ತನ್ನೋ ರುದ್ರಃ ಪ್ರಚೋದಯಾತ್ ॥

೬. ಮೃತ್ಯುಂಜಯ ಗಾಯತ್ರಿ

ಆರೋಗ್ಯ, ಧೈರ್ಯ ಮತ್ತು ಅಪಾಯಗಳಿಂದ ರಕ್ಷಣೆಯ ಭಾವನೆಗಾಗಿ ಜಪಿಸಲಾಗುತ್ತದೆ.

> ಓಂ ಮೃತ್ಯುಂಜಯಾಯ ವಿದ್ಮಹೇ ।
ಮಹಾರುದ್ರಾಯ ಧೀಮಹೀ ।
ತನ್ನೋ ರುದ್ರಃ ಪ್ರಚೋದಯಾತ್

೧೦. ದುರ್ಗಾ ಗಾಯತ್ರಿ

ಶಕ್ತಿ, ಧೈರ್ಯ ಮತ್ತು ದುಷ್ಟ ಶಕ್ತಿಗಳ ವಿರುದ್ಧದ ಸಂಕೇತ.

> ಓಂ ಕಾತ್ಯಾಯನಾಯ ವಿದ್ಮಹೇ ।
ಕನ್ಯಾಕುಮಾರೀ ಧೀಮಹೀ ।
ತನ್ನೋ ದುರ್ಗಿಃ ಪ್ರಚೋದಯಾತ್ ॥

೨೩. ಅನ್ನಪೂರ್ಣೇಶ್ವರಿ ಗಾಯತ್ರಿ

ಅನ್ನಸಮೃದ್ಧಿ, ಕುಟುಂಬದ ಕ್ಷೇಮ ಮತ್ತು ದೈವಕೃಪೆಗೆ ಜಪಿಸಲಾಗುತ್ತದೆ.

> ಓಂ ಭಗವತ್ಯೈ ವಿದ್ಮಹೇ ।
ಮಾಹೇಶ್ವರ್ಯೈ ಧೀಮಹೀ ।
ತನ್ನೋ ಅನ್ನಪೂರ್ಣಾ ಪ್ರಚೋದಯಾತ್ ॥

೨೬. ವಿಷ್ಣು ಗಾಯತ್ರಿ

ಶಾಂತಿ, ಧರ್ಮ ಮತ್ತು ಶುಭಕಾರ್ಯಗಳ ಯಶಸ್ಸಿಗಾಗಿ.

> ಓಂ ಶ್ರೀವಿಷ್ಣವೇ ವಿದ್ಮಹೇ ।
ವಾಸುದೇವಾಯ ಧೀಮಹೀ ।
ತನ್ನೋ ವಿಷ್ಣುಃ ಪ್ರಚೋದಯಾತ್ ॥

೨೯. ನೃಸಿಂಹ ಗಾಯತ್ರಿ

ಭಯ ನಿವಾರಣೆ, ಧೈರ್ಯ ಮತ್ತು ರಕ್ಷಣೆಯ ಸಂಕೇತ.

> ಓಂ ವಜ್ರನಖಾಯ ವಿದ್ಮಹೇ ।
ತೀಕ್ಷ್ಣದಂಷ್ಟ್ರಾಯ ಧೀಮಹೀ ।
ತನ್ನೋ ನಾರಸಿಂಹಃ ಪ್ರಚೋದಯಾತ್ ॥

೩೦. ಶ್ರೀ ರಾಮ ಗಾಯತ್ರಿ

ಧರ್ಮ, ಸದ್ಗುಣ ಮತ್ತು ಮನೋಭೀಷ್ಟ ಸಿದ್ಧಿಗಾಗಿ.

> ಓಂ ದಾಶರಥಾಯ ವಿದ್ಮಹೇ ।
ಸೀತಾವಲ್ಲಭಾಯ ಧೀಮಹೀ ।
ತನ್ನೋ ರಾಮಃ ಪ್ರಚೋದಯಾತ್ ॥

೩೩. ಹನುಮಾನ್ ಗಾಯತ್ರಿ

ಧೈರ್ಯ, ಶಕ್ತಿ, ಏಕಾಗ್ರತೆ ಮತ್ತು ಅಸಾಧ್ಯ ಕಾರ್ಯಗಳಲ್ಲಿ ಮನೋಬಲಕ್ಕಾಗಿ.

> ಓಂ ಆಂಜನೇಯಾಯ ವಿದ್ಮಹೇ ।
ವಾಯುಪುತ್ರಾಯ ಧೀಮಹೀ ।
ತನ್ನೋ ಹನುಮಾನ್ ಪ್ರಚೋದಯಾತ್ ॥

೩೭. ಸರಸ್ವತಿ ಗಾಯತ್ರಿ

ವಿದ್ಯೆ, ವಾಗ್ವೈಖರಿ ಮತ್ತು ಜ್ಞಾನ ವೃದ್ಧಿಗೆ ಪ್ರಸಿದ್ಧ.

> ಓಂ ಐಂ ವಾಗ್ದೇವ್ಯೈ ವಿದ್ಮಹೇ ।
ಬ್ರಹ್ಮಪತ್ನ್ಯೈ ಧೀಮಹೀ ।
ತನ್ನೋ ದೇವೀ ಪ್ರಚೋದಯಾತ್ ॥

ಗಮನಿಸಬೇಕಾದ ವಿಷಯ

ಈ ಮಂತ್ರಗಳ ಹಲವು ಪಾಠಾಂತರಗಳು ಮತ್ತು ಸಂಪ್ರದಾಯಭೇದಗಳು ಇವೆ. ಬೇರೆ ಬೇರೆ ಆಗಮ, ತಂತ್ರ ಮತ್ತು ಪುರಾಣಗಳಲ್ಲಿ ಪದಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಆದ್ದರಿಂದ ಗುರುಪರಂಪರೆ ಅಥವಾ ಪಂಡಿತರ ಮಾರ್ಗದರ್ಶನದಲ್ಲಿ ಜಪಿಸುವುದು ಉತ್ತಮ.

🙏 ಶ್ರೀ ಗಣೇಶಾಯ ನಮಃ ॥
ಆರೂರು ಕಿರಣ್ ರಾವ್
ಗುರು ಪರಂಪರೆ ಉಡುಪಿ
098448 12559 7019244429

05/06/2026

ಎಲ್ಲಿ ಜ್ಞಾನವಿದೆಯೋ, ಸಂಸ್ಕೃತಿ, ಸಂಸ್ಕಾರಗಳಿರುವುದೋ
ಅಲ್ಲಿ ದುಃಖವಿಲ್ಲ...

ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತಿ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ 'ಜೀವ'.
ಒಂದು ದಿನ ದೇಹ ತೊರೆಯುವ ಜೀವಕ್ಕೆ ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?
ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ?

ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ ಇಂದಿನ ವ್ಯಾವಹಾರಿಕತೆಗೆ ಹೊಂದುವಂತೆ ಬರೆಯ ಬಹುದಷ್ಟೆ. ಮನುಷ್ಯನು ತನ್ನ ಕೊನೆಯುಸಿರಿನ ಕಾಲದಲ್ಲಿ ಏನು ಯೋಚಿಸಿರುವನು? ಇದನ್ನು ಹೇಳಲಿಕ್ಕೆ ಆ ಮನುಷ್ಯನು ಇರುವುದಿಲ್ಲ. ಮರಣಕ್ಕೆ ಕೆಲ ಗಳಿಗೆಗೆ ಮುಂಚೆ ಕೆಲವರು ಅವರ ಮನದ ಇಂಗಿತಗಳನ್ನು ಹೇಳಿದ್ದಿದೆ.
ಆದರೆ ಕೊನೆಯ ಉಸಿರಿನಲ್ಲಿ ಇರುವಾಗ ಮನದ ಯೋಚನೆಗಳು ಏನಿರ ಬಹುದು ಎಂದು ಯೋಚಿಸಿದವರಿಲ್ಲ. ಇಲ್ಲಿ ನಾಲ್ಕು ವಿಧಗಳ ಚಿಂತನೆಗಳಿವೆ. ಆರ್ತ, ರೌದ್ರ, ಧನ್ಯ ಮತ್ತು ಶುಕ್ಲ. ಇವುಗಳಲ್ಲಿ ಯಾವುದಾದರೂ ಒಂದು ಚಿಂತನೆ ಬರಲೇ ಬೇಕು ಎಂಬುದು ಮರಣ ಕಾಲದ ಸಿದ್ಧಾಂತ.

ಆರ್ತ-
ಹೆಸರೇ ಹೇಳುತ್ತದೆ ಆರ್ತ ನಾದ ಎಂದು. ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಆಸ್ತಿ ಎಲ್ಲಾ ಬಿಟ್ಟು ಹೋಗ ಬೇಕಲ್ಲಾ ಎಂಬ ದುಃಖ ಬರುತ್ತದೆ. ನೀವು ನೋಡಿರ ಬಹುದು ಕೆಲ ಮನುಷ್ಯರು ಮರಣ ಕಾಲಕ್ಕೆ ಸದಾ ಅಳುವವರನ್ನು. ಅಂದರೆ ಇವರಿಗೆ ಈ ಲೋಕದ ವ್ಯಾಮೋಹವನ್ನು ತುಂಡು ಮಾಡಿ ಹೋಗಲು ಆಗುತ್ತಿಲ್ಲ. ಆ ಕಡೆಯಿಂದ ಯಮ ಪಾಶ ಎಳೆಯುತ್ತದೆ. ಹಾಗಾಗಿ ದುಃಖಿಸುತ್ತಾರೆ. ಆಗ ಅವರ ಮಕ್ಕಳು ‘ಅಪ್ಪಾ, ಅಜ್ಜಾ, ಅಮ್ಮಾ. ನಿನಗೆ ಏನು ಆಸೆ ಇದೆ ಹೇಳು ‘ ಎಂದು ಸಾಂತ್ವನ ಹೇಳುತ್ತಾರೆ. ಅಂತೂ ಕೊನೆಗೆ ಕ್ಷೀಣವಾಗಿ ಆತ ಇಹಲೋಕವನ್ನು ಒತ್ತಾಯ ಪೂರ್ವಕ ತ್ಯಜಿಸ ಬೇಕಾಗುತ್ತದೆ. ಇದನ್ನು ಆರ್ತ ಮರಣ ಎಂದಿದ್ದಾರೆ. ‘ಯಥಾ ಮರಣ ಸ್ವರೂಪಂ ತಥಾ ಪುನರ್ಜಃನ್ಮಃ’ ಅಂದರೆ ಯಾವ ಚಿಂತೆಯಲ್ಲಿ ಸಾಯುತ್ತಾನೋ ಅದೇ ಸ್ವರೂಪದ ಪುನರ್ಜನ್ಮ ಲಭಿಸುತ್ತದೆ. ಈ ರೀತಿಯಲ್ಲಿ ಹುಟ್ಟಿದವರು ಮುಂದಿನ ಜನ್ಮದಲ್ಲಿ ಹೇಗಿರುತ್ತಾನೆ ಎಂಬುದು ನವಜಾತ ಶಿಶುವಿನ ಅಳುವು ಸೂಚಿಸುತ್ತದೆ. ನವಜಾತ ಶಿಶುವು ವಿಪರೀತ ಅಳುವುದು ಈ ಸಂಬಂಧದಿಂದ. ಇದೊಂದು ರೀತಿಯ ಮಾನವನ ಮನಶಾಸ್ತ್ರದ. ಕಲಿಕೆಯಂತೆ. ಈ ವ್ಯಕ್ತಿ ಜೀವನದಲ್ಲಿ ಜಿಪುಣ, ದುಃಖಿತನಾಗಿ ಬಾಳುತ್ತಾನೆ. ಅದರೆ ಉತ್ತಮ ಸಂಯೋಜಕರಿದ್ದರೆ ಇದನ್ನು ಸರಿ ಮಾಡಲು ಸಾಧ್ಯವಿದೆ. ಅದಕ್ಕಾಗಿ ವಿದ್ವಜ್ಜನರ ಸಂಪರ್ಕ ಬೇಕು ಎನ್ನುವುದು.

ರೌದ್ರ:
ನೀವು ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರ ಬಹುದು. 'ನಾನು ಸತ್ತರೂ ನನ್ನ ಹೆಣ ಮುಟ್ಟ ಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿತೆಗೆ ಹಿರಿ ಮಗ ಕೊಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡ ಬೇಡ', ಇತ್ಯಾದಿ ಮಾತಾಡುವವರಿಗೆ ರೌದ್ರ ಚಿಂತನೆ ಮರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹ ಸ್ವರೂಪದಲ್ಲಿ ಇರುತ್ತದೆ. ಇಂತವರ ಪುನರ್ಜನ್ಮದಲ್ಲಿ ಶಿಶುವಿನಿಂದಲೇ ಈ ಗುಣ ತಿಳಿಯ ಬಹುದು.

ಧನ್ಯ:
ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳವನೆ. ಇವನು ತನ್ನ ಕೊನೆಯ ಕಾಲದಲ್ಲಿ, 'ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಸಂಘ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. ಇದು ಧನ್ಯ ಚಿಂತನಾ ಮರಣ. ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂಸೆ ನೀಡುವುದಿಲ್ಲ. ನೀವು ಕೆಲ ತಾಯಂದಿರ ಮಾತು ಕೇಳಿರ ಬಹುದು. ನನ್ನ ದೊಡ್ಡ ಮಗ ಶಿಶುವಾಗಿದ್ದಾಗ ರಗಳೆಯೇ ಇಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿ ಕೊಂಡು ಇರುತ್ತಾನೆ. ಅಳುವುದು ಬಾರೀ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲಪ್ಪ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.

ಶುಕ್ಲ : ಈ ಮರಣ ಬರುವುದು ಅಪರೂಪ. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬ ಮಾತ್ರ ಎನ್ನ ಬಹುದು. ಇದು ಹೇಗೆಂದರೆ ಇವರ ಮರಣ ಕಾಲದಲ್ಲಿ ಅವರ ಕ್ರಿಯಾ ಉದ್ದೇಶ ಚಿಂತನೆ, ತಾನು ಏನು ಮಾಡಿದ್ದೇನೆ ಎಂಬುದರ ಮೆಲುಕು ಇವರಲ್ಲಿ ಇಲ್ಲ. ಅವರಿಗೆ ಗತ ಕಾಲದ ಚಿಂತನೆಗಳಿಲ್ಲ. ಆ ಕಾಲದ ವಿಚಾರ ಮಾತ್ರವೇ ಇರುತ್ತದೆ.ಇನ್ನು ಕೆಲ ಜ್ಞಾನಿಗಳೂ ಶುಕ್ಲ ಚಿಂತನೆಯಲ್ಲಿ ಕೊನೆಗೊಳ್ಳುತ್ತಾರೆ. ಇವರು, ನಾನು ಏನೂ ಮಾಡಲಿಲ್ಲವಪ್ಪಾ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ನಡೆದಿರ ಬಹುದು ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು. ಇವರು ತಪ್ಪಿಯೂ ನನಗೆ ಮೋಕ್ಷ ಸಿಗಲಿ ಎಂದು ಬಯಸುವವರಲ್ಲ.
ಇಂತವರಿಗೆ ಮೋಕ್ಷ ಯೋಗವಿರುತ್ತದೆ. ಆತ್ಮಕಾರಕ ಶುಭಗ್ರಹ ಮೀನಾಂಶದಲ್ಲಿ ಬಂದವರಿಗೆ ನಿಶ್ಚಿತವಾಗಿಯೂ ಮೋಕ್ಷ ಯೋಗವಿದೆ. ಇಂತವರಿಗೆ ಮರು ಹುಟ್ಟಿಲ್ಲ. ಆದರೆ ಇವರು ಆರ್ತ, ರೌದ್ರ, ಧನ್ಯ ಮರಣಗಳನ್ನು ದಾಟಿಯೇ ಬರ ಬೇಕು. ಇದು ಒಂದು ರೀತಿಯ ವಿಕಾಸ.

'ಅಯೋಗ್ಯ ಪುರುಷಂ ನಾಸ್ತಿ’ ಎಂದು ವೇದಗಳು ಹೇಳಿವೆ. ಅಂದರೆ ಮಾರ್ಗದರ್ಶನ, ಸಂಯೋಜಕರು ಸರಿಇರಬೇಕು. ಅದು ಸರಿ ಇಲ್ಲದಿದ್ದಾಗ ಅಯೋಗ್ಯರಾಗಬಹುದು. ಅದಕ್ಕಾಗಿಯೇ ಸಂಸ್ಕೃತಿ ಸಂಸ್ಕಾರಗಳಿರುವುದು.ಸೌಂದರ್ಯ; ಹಣ; ಅಂತಸ್ತು..ಬಹಳ ಹೊತ್ತು ..ಇರಲಾರದು..
ಉತ್ತಮ ಸಂಸ್ಕೃತಿ ಸಂಸ್ಕಾರ ಇಲ್ಲದೇ ಹೋದರೇ..ಏನಿದ್ದರೂ ವ್ಯರ್ಥ. ಜೀವನದಲ್ಲಿ ಮನೆ, ಸಂಸಾರ, ಇತ್ಯಾದಿಯಲ್ಲಿ ಕಾಲ ಕಳೆದು ಹೋಗುತ್ತದೆ. ಎಲ್ಲ ಐಹಿಕ ಸಾಧನೆಗಳು ಮಸಣದ ಮೊದಲೇ ಕೊನೆಗೊಳ್ಳುತ್ತವೆ...ಲೌಕಿಕದಿಂದಾಚೆಗೆ ಅಧ್ಯಾತ್ಮವೆಂಬ ಒಂದು ಅಪೂರ್ವ ಮೌಲ್ಯ ಇದೆ ಎನ್ನುವ ಎಚ್ಚರವೇ ಇಲ್ಲವಾಗಿದೆ.
ಸಂಸಾರದ ಬಂಧನ,ಬಿಡುಗಡೆ ಎಲ್ಲವೂ ಮನಸ್ಸಿನ ಭಾವನಾಸ್ತರಗಳು. ಬಂಧನ -ಬಿಡುಗಡೆ ಹೊರಗಿನಿಂದ ಬರುವಂಥದಲ್ಲ.ಒಳಗೆ ಇದೆ.ನಮ್ಮ ಮನಸ್ಸಿನಲ್ಲಿ.
ಈ ಮನಸ್ಸಿನಲ್ಲಿ ಸ್ಮರಣೆಯೆಂಬುದು ಅಂತರಂಗದ ಬಾಗಿಲಿದ್ದಂತೆ.
ಸ್ಮರಣೆಯ ಮೂಲಕ ಯಾರನ್ನು ಬೇಕಾದರೂ ನಮ್ಮೊಳಗೆ ಕರೆತರಬಹುದು.
ಒಂದು ವೇಳೆ ರಾವಣನನ್ನು ಕರೆತಂದರೆ...!? ನಮ್ಮ ಮನಸ್ಸೇ ಲಂಕೆಯಾದೀತು. ಹೊತ್ತಿ ಉರಿದೀತು.
ಅದೇ ನಾವು ರಾಮನನ್ನೇ ಕರೆತಂದರೆ...?
ನಮ್ಮ ಅಂತರಂಗವೇ ರಾಮರಾಜ್ಯವಾದೀತು.
ಅರುರು ಕಿರಣ್ ರಾವ್
ಗುರು ಪರಂಪರೆ ಉಡುಪಿ
098448 12559,7019244429

Address

Aroor Kiran Rao, Aroor Post & Village Dasabettu, Alunje, Bramavara Taluk
Udupi
576213

Alerts

Be the first to know and let us send you an email when Shri Kshetra Arooru posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Kshetra Arooru:

Shortcuts

Share

Category