07/08/2026
*ತಾರಾನುಕೂಲ(ತಾರಾಬಲ)*
ಪ್ರಪಂಚ ನಿಂತಿರುವುದು ನಂಬಿಕೆಯ ಮೇಲೆ ಹಾಗೆ ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ. ಪುರಾತನ ಕಾಲದಿಂದಲೂ ಭವಿಷ್ಯವನ್ನು ತಿಳಿಯಲು ಈ ಶಾಸ್ತ್ರವನ್ನು ನಂಬಿಕೊಂಡು ಬಂದಿದ್ದಾರೆ. ನಮ್ಮ ಹಿರಿಯರು ಕೆಲವು ದೈನಂದಿನ ಮತ್ತು ಧಾರ್ಮಿಕ ಚಟುವಟಿಕೆಗಳ ಸಫಲತೆಗೆ ತಾರಾಬಲ ನೋಡುತ್ತಾರೆ.
*ತಾರಾಬಲ ಏಕೆ ನೋಡಬೇಕು?*
ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು. ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ. ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತವೆ. ಅತಿ ಮುಖ್ಯವಾಗಿ ಕೆಲವು ಅಂಶಗಳು ಈ ರೀತಿ ಇವೆ. ಜಾತಕಾದಿ ಸಂಸ್ಕಾರಗಳಲ್ಲಿ, ಉಪನಯನದಲ್ಲಿ, ವಿವಾಹದಲ್ಲಿ ಶಾಂತಿ ಒಡವೆ-ವಾಹನಾದಿ ಖರೀದಿಗೆ, ವಧು ವರರಿಗೆ ತಾರಾನುಕುಲವನ್ನು ನೋಡಿ ಮುಹೂರ್ತನಿರ್ಣಯಿಸಬೇಕು...
ಜಾತಕದಲ್ಲಿ ಚಂದ್ರನಿರುವ ನಕ್ಷತ್ರವನ್ನು ಜನ್ಮ ನಕ್ಷತ್ರವೆನ್ನುವರು, ಈ ಜನ್ಮ ನಕ್ಷತ್ರಕ್ಕೆ
ಜನ್ಮವೆಂತಲೂ
10ನೇ ನಕ್ಷತ್ರಕ್ಕೆ ಅನುಜನ್ಮವೆಂದು,
19ನೇ ನಕ್ಷತ್ರಕ್ಕೆ ತ್ರಿಜನ್ಮವೆಂದು ತಿಳಿಯಬೇಕು.
ಹೀಗೆ ಈ ಮೂರು ಜನ್ಮವೆಂದು ತಿಳಿಯಬೇಕು.
ಹೀಗೆ ಈ ಮೂರು ನಕ್ಷತ್ರಗಳ ಮುಂದಿನ ನಕ್ಷತ್ರಗಳು ಕ್ರಮವಾಗಿ ಸಂಪತ್, ವಿಪತ್, ಕ್ಷೇಮ, ಪ್ರತ್ಯರ, ಸಾಧಕ, ವಧ, ಮೈತ್ರ, ಪರಮಮೈತ್ರ ನಕ್ಷತ್ರಗಳು. ಜನ್ಮ ನಕ್ಷತ್ರ ಮೊದಲ್ಗೊಂಡು ಬರುವ ಪ್ರಥಮ ಪರ್ಯಾಯದ ವಿಪತ್, ಪ್ರತ್ಯರ, ವಧತಾರೆಗಳು ಪೂರ್ಣ ನಿಷಿದ್ಧ.
ಅನುಜನ್ಮ ಮೊದಲ್ಗೊಂಡು ದ್ವಿತೀಯ ಪರ್ಯಾಯದ ವಿಪತ್ತಾರೆಯ 1ನೇ ಪಾದವೂ, ಪ್ರತ್ಯರ ತಾರೆಯ 4ನೇ ಪಾದವೂ, ವಧತಾರೆಯ 3ನೇ ಪಾದವೂ ಅನಿವಾರ್ಯ ಸಂದರ್ಭದಲ್ಲಿ ಗ್ರಾಹ್ಯ,
ಅದಕ್ಕಾಗಿಯೇ ಅನಿವಾರ್ಯ ಪ್ರಸಂಗಗಳಲ್ಲಿ ಜನ್ಮಾನುಜನ್ಮ ತಾರೆಗಳಿಗೆ ಕಾಯಿಪಲ್ಯ ಅಂದರೆ ತರಕಾರಿ, ವಿಪತ್ತಾರೆಗೆ ಬೆಲ್ಲ, ಪ್ರತ್ಯರ ತಾರೆಗೆ ಉಪ್ಪು,
ವಧತಾರೆಗೆ ತಿಲ ಸಹಿತ ದಕ್ಷಿಣೆ ದಾನ ಮಾಡಿ ಶುಭಕರ್ಮಾಚರಣೆ ಮಾಡಬಹುದು ಎಂದು ಶಾಸ್ತ್ರವಚನಗಳಿವೆ.
ಜನ್ಮ ನಕ್ಷತ್ರದಲ್ಲಿ ನವಾನ್ನ ಭೋಜನ, ನೂತನ ವಸ್ತ್ರಾಭರಣ ಧಾರಣ ಪುಣ್ಯ ಕರ್ಮಗಳ ಹೊರತು ಇತರ ಕರ್ಮಗಳು ನಿಷಿದ್ಧ,
ತೈಲಾಭ್ಯಂಗ, ಕ್ಷೌರ, ನಿಷೇಕಗಳ ಹೊರತು ಎಲ್ಲಾ ಕಾರ್ಯಗಳಿಗೆ ಅನುಜನ್ಮ ತ್ರಿಜನ್ಮ ನಕ್ಷತ್ರಗಳು ಶುಭ. ಉಪನಯನಕ್ಕೆ ವಿಪತ್ತಾರೆ, ಪ್ರಯಾಣ ಮತ್ತು ವಿವಾಹಕ್ಕೆ ಪ್ರತ್ಯರತಾರೆ ದೋಷವಲ್ಲ, ಚಂದ್ರನು ಬಲಿಷ್ಠನಾಗಿ ಶುಭಾಂಶವನ್ನು ಪಡೆದು ಶುಭದೃಷ್ಠನಾಗಿರುವಾಗ ಹೇಳಿದ ದಾನಗಳನ್ನು ನೀಡಿ ಶುಭ ಕರ್ಮವನ್ನಾಚರಿಸಬಹುದು.
ಜಾತಕರ್ಮಾದಿ ಸಂಸ್ಕಾರಗಳಲ್ಲಿ ಹುಟ್ಟಿದ ಮಕ್ಕಳಿಗೂ, ಉಪನಯನದಲ್ಲಿ ವಟುವಿಗೂ, ವಿವಾಹದಲ್ಲಿ ವಧು-ವರರಿಗೂ, ಗೃಹಪ್ರವೇಶ ಮುಂತಾದ ಶುಭಕಾರ್ಯದಲ್ಲಿ ದಂಪತಿಗಳಿಗೆ ಮಾತ್ರ ತಾರಾನುಕೂಲವನ್ನು ನೋಡಿ ಮುಹೂರ್ತ ನಿರ್ಣಯಿಸಬೇಕು.
೧ *ಜನ್ಮ ನಕ್ಷತ್ರ*
ಜಾತಕದಲ್ಲಿ ಚಂದ್ರನಿರುವ ನಕ್ಷತ್ರವನ್ನು ಜನ್ಮ ನಕ್ಷತ್ರ ಎನ್ನುತ್ತಾರೆ ಹತ್ತನೇ ನಕ್ಷತ್ರಕ್ಕೆ ಅನುಜನ್ಮ ವೆಂದು ಹತ್ತೊಂಬತ್ತನೇ ನಕ್ಷತ್ರವನ್ನು ತ್ರಿಜನ್ಮ ವೆಂದು ತಿಳಿಯಬೇಕು
ನಿಮ್ಮ ಜನ್ಮ ನಕ್ಷತ್ರವಿರುವ ದಿನ ಅನುಕೂಲವಾಗಲಿ, ಅನನುಕೂಲವಾಗಲಿ ಇರುವುದಿಲ್ಲ. ಅಂದರೆ ಸಾಮಾನ್ಯ ಫಲ.
ಜನ್ಮ ನಕ್ಷ ತ್ರದಲ್ಲಿ ನವಾನ್ನ ಭೋಜನ, ನೂತನ ವಸ್ತ್ರಾಭರಣಧಾರಣ, ಪುಣ್ಯ ಕರ್ಮಗಳ ಹೊರತು ಇತರ ಕರ್ಮಗಳು ನಿಷಿದ್ಧ.
೨ *ಸಂಪತ್ ತಾರೆ*
ನಿಮ್ಮ ನಕ್ಷತ್ರದ ಮುಂದಿನ ನಕ್ಷತ್ರವೇ ಸಂಪತ್ ತಾರೆ. ಇದು ಹಣ, ಆಭರಣ, ವ್ಯವಹಾರಗಳಿಗೆ ಅನುಕೂಲ. ಧನಲಕ್ಷ್ಮೀ ಪೂಜೆಗೆ ಶ್ರೇಷ್ಠ ದಿನ. ಬರಬೇಕಾಗಿದ್ದ ಹಣ ಬರುವುದು. ಗೌರವ, ಕೀರ್ತಿ, ಉಡುಗೊರೆ ಪ್ರಾಪ್ತವಾಗುವ ದಿನ.ಒಡವೆ-ವಾಹನಾದಿ ಖರೀದಿಗೆ ಪ್ರಯತ್ನಪಟ್ಟಾಗ ಫಲದಾಯಕವಾಗುವ ದಿನ.
೩ *ವಿಪತ್ ತಾರೆ*
ನಿಮ್ಮ ನಕ್ಷತ್ರದಿಂದ 3ನೆಯ ನಕ್ಷತ್ರವೇ ವಿಪತ್ ತಾರೆ. ವಿಪತ್ ತಾರೆ ಇರುವ ದಿನ ಒಳ್ಳೆಯ ಕೆಲಸ ಪ್ರಾರಂಭವಾದರೆ ಕಲಹ, ನಷ್ಟ ಮೊದಲಾದ ತೊಂದರೆಗಳಾಗುವುದು. ಯಾವ ಶುಭಕಾರ್ಯ ಪ್ರಾರಂಭಕ್ಕೂ ಇದು ಸೂಕ್ತವಲ್ಲ.
೪ *ಕ್ಷೇಮ ತಾರೆ*
ನಿಮ್ಮ ನಕ್ಷತ್ರದಿಂದ 4ನೇ ತಾರೆಯೇ ಕ್ಷೇಮ ತಾರೆ. ಯಾರಿಗಾಗಲೇ ಕ್ಷೇಮ ತಾರೆಯಿದ್ದ ದಿನ ಮಾನಸಿಕ ಶಾಂತಿ, ಆರೋಗ್ಯ, ಆಪ್ತರ ಭೇಟಿ ಮೊದಲಾದ ಅನುಕೂಲಗಳಿರುತ್ತವೆ. ಅಧಿಕಾರಿ ಭೇಟಿ, ಒಪ್ಪಂದ ಕಾರ್ಯ, ಶಸ್ತ್ರಚಿಕಿತ್ಸೆ, ಹೊಸ ಕಾರ್ಯ ಪ್ರಾರಂಭ, ಆರೋಗ್ಯ ತಪಾಸಣೆ, ಪ್ರಯಾಣ, ತಂಟೆ-ತಕರಾರುಗಳನ್ನು ಬಗೆಹರಿಸಿಕೊಳ್ಳಲು, ನ್ಯಾಯಾಲಯದ ವ್ಯವಹಾರಗಳಿಗೆ ಅನುಕೂಲಕರ.
೫ *ಪ್ರತ್ಯರ ತಾರೆ*
ನಿಮ್ಮ ನಕ್ಷತ್ರದಿಂದ 5ನೇ ನಕ್ಷತ್ರವೇ ಪ್ರತ್ಯರ್ ತಾರೆ. ಇದು ಯಾವ ಕೆಲಸ, ಕಾರ್ಯಗಳಿಗೂ ಅನುಕೂಲವಲ್ಲ. ನಿರೀಕ್ಷೆಗೆ ವಿರುದ್ಧವಾದ ಫಲಗಳು ಉಂಟಾಗುತ್ತವೆ.
೬ *ಸಾಧಕ ತಾರೆ*
ನಿಮ್ಮ ನಕ್ಷತ್ರದಿಂದ 6ನೇ ನಕ್ಷತ್ರವೇ ಸಾಧಕ ತಾರೆ. ಈ ಸಾಧನ ತಾರೆಯಿರುವ ದಿನ ವಿದ್ಯಾಭ್ಯಾಸ, ಮಂತ್ರಸಿದ್ಧಿ, ಸಂಶೋಧನೆ, ಹೂಡಿಕೆ, ನೂತನ ಕಾರ್ಯ ಪ್ರಾರಂಭ, ಹೋರಾಟ, ಶುಭ ಕಾರ್ಯ, ವ್ಯವಹಾರಗಳಿಗೆ ವಿವಾಹಾದಿಕಾರ್ಯಗಳಿಗೆ ಪ್ರಗತಿದಾಯಕ.
೭ *ವಧ ತಾರೆ*
ನಿಮ್ಮ ನಕ್ಷತ್ರದಿಂದ 7ನೇ ನಕ್ಷತ್ರವೇ ವಧ ತಾರೆ. ಇದು ಅತಿ ತೊಂದರೆದಾಯಕವಾಗಿರುವುದರಿಂದ ಈ ದಿನ ಯಾವುದೇ ವೃಧ್ಧಿದಾಯಕ ಕೆಲಸ ಮಾಡದಿರುವುದು ಉತ್ತಮ.
೮ *ಮೈತ್ರತಾರೆ*
ನಿಮ್ಮ ನಕ್ಷತ್ರದಿಂದ 8ನೇ ತಾರೆಯು ಮಿತ್ರ ತಾರೆಯಾಗುವುದು. ಈ ನಕ್ಷತ್ರವಿರುವ ದಿನ ಅಧಿಕಾರಿ ಭೇಟಿ, ಆಪ್ತರನ್ನು ಸಂಪರ್ಕಿಸಲು, ವ್ಯಾಪಾರ ಅಭಿವೃದ್ದಿ ಇತರ ಎಲ್ಲ ಕಾರ್ಯಕ್ಕೆ ಉತ್ತಮ.
೯ *ಪರಮಮೈತ್ರತಾರೆ*
ನಿಮ್ಮ ನಕ್ಷತ್ರದಿಂದ 9ನೇ ತಾರೆಯು ಪರಮಮಿತ್ರ ತಾರೆಯಾಗುವುದು. ಇದು ಕೂಡ ಶುಭ ಕಾರ್ಯಕ್ಕೆ ಸಿಂಧು.
ಉದಾಹರಣೆಗೆ
*ತಾರಾಬಲ ನೋಡುವ ಕ್ರಮ*
ಅಶ್ವಿನಿ ನಕ್ಷತ್ರವು ನಿಮ್ಮ ಜನ್ಮ ನಕ್ಷತ್ರವಾದರೆ
ಅಶ್ವಿನಿ -ಜನ್ಮ ನಕ್ಷತ್ರ
ಭರಣಿ - ಸಂಪತ್ ತಾರೆ.
ಕೃತಿಕಾ -ವಿಪತ್ ತಾರೆ
ರೋಹಿಣಿ -ಕ್ಷೇಮ ತಾರೆ.
ಮೃಗಶಿರಾ -ಪ್ರತ್ಯರ್ ತಾರೆ
ಆರ್ದ್ರಾ- ಸಾಧಕ ತಾರೆ
ಪುನರ್ವಸು -ವಧ ತಾರೆ
ಪುಷ್ಯ -ಮೈತ್ರತಾರೆ
ಆಶ್ಲೇಷಾ- ಪರಮಮೈತ್ರತಾರೆ
ಮಘಾ- ಅನುಜನ್ಮ ನಕ್ಷತ್ರ
ಹುಬ್ಬಾ-ಸಂಪತ್ ತಾರೆ.
ಉತ್ತರ- ವಿಪತ್ ತಾರೆ
ಹಸ್ತಾ -ಕ್ಷೇಮ ತಾರೆ.
ಚಿತ್ರಾ ಪ್ರತ್ಯರ್ ತಾರೆ
ಸ್ವಾತಿ- ಸಾಧಕ ತಾರೆ
ವಿಶಾಖ -ವಧ ತಾರೆ
ಅನುರಾಧ ಮೈತ್ರತಾರೆ
ಜೇಷ್ಠಾ -ಪರಮಮೈತ್ರತಾರೆ
ಮೂಲ -ತ್ರಿಜನ್ಮ ನಕ್ಷತ್ರ
ಪೂರ್ವಾಷಾಢ-ಸಂಪತ್ ತಾರೆ.
ಉತ್ತರಾಷಾಢ-ವಿಪತ್ ತಾರೆ
ಶ್ರವಣ -ಕ್ಷೇಮ ತಾರೆ.
ಧನಿಷ್ಟಾ ಪ್ರತ್ಯರ್ ತಾರೆ
ಶತಭಿಷ -ಸಾಧಕ ತಾರೆ
ಪೂರ್ವಭಾದ್ರ -ವಧ ತಾರೆ
ಉತ್ತರಭಾದ್ರ -ಮೈತ್ರತಾರೆ
ರೇವತಿ -ಪರಮಮೈತ್ರತಾರೆ
ಹೆಚ್ಚಿನ ವಿವರಣೆಗಳು ಬೇಕಾಗಿದ್ದಲ್ಲಿ
ವಾಟ್ಸಪ್ ನಲ್ಲಿ ಕೇಳಬಹುದು
9886600332
ಆಧ್ಯಾತ್ಮ ಬಂಧುಗಳೇ...
ಮನೆ, ಮಠ,ಮಂದಿರಗಳಲ್ಲಿ ದೈವಿಕ ಕಾರ್ಯಗಳಲ್ಲಿ ರಾಮಾಯಣ,ಮಹಾಭಾರತ ಭಾಗವತ ಪುರಾಣ,ಗರುಡ ಪುರಾಣ ಮೊದಲಾದ ಅಷ್ಟಾದಶ ಪುರಾಣಗಳ ಪಾರಾಯಣ ಮತ್ತು ಪ್ರವಚನ
ಜಪ ತಪ ಹೋಮ ಅನುಷ್ಠಾನ ಗಳನ್ನು
ಜಾತಕ ವಿಮರ್ಶೆ ....ಪ್ರಶ್ನೆ ಚಿಂತನೆಯನ್ನು
ಯೋಗ್ಯತಾನುಸಾರ ಸರಳ ಮತ್ತು ಶ್ರದ್ಧೆಯಿಂದ ನಡೆಸಿಕೊಡಲಾಗುತ್ತದೆ
ಆಸಕ್ತ ಭಗವದ್ಭಕ್ತರು ಸಂಪರ್ಕಿಸಬಹುದು.
ಅರೂರ್ ಕಿರಣ್ ಕೆ ರಾವ್
ಜ್ಯೋತಿಷ್ಯರು ಮತ್ತು ಪುರೋಹಿತರು
098448 12559,7019244429