Hadigallu Shri Abhayalakshminarasimha Temple

Hadigallu Shri Abhayalakshminarasimha Temple ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು

ಶ್ರೀಮದ್ಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮ ಪ್ರದತ್ತ, ಶ್ರೀಮನ್ಮಧ್ವಕರಾರ್ಚಿತ ಶ್ರೀದಾಮೋದರ ಕಾಳಿಂಗಮರ್ದನ ಶ್ರೀಕೃಷ್ಣ, ಶ್ರೀಅಭಯಲಕ್ಷ್ಮೀನೃಸಿಂಹ ಸಾಲಿಗ್ರಾಮ, ಶ್ರೀನಾರಾಯಣ ಭೂತರಾಜರ ಯಂತ್ರ, ಶ್ರೀ ವೇದವೇದ್ಯ ತೀರ್ಥ ಪ್ರದತ್ತ - ಶ್ರೀ ವಿಶ್ವೋತ್ತಮ ತೀರ್ಥ ಪ್ರತಿಷ್ಠಿತ ಶ್ರೀವಾದಿರಾಜರ ಮೃತ್ತಿಕಾ ವೃಂದಾವನವಿರುವ ಹಾದಿಗಲ್ಲು ನಡುವಿನಮನೆ ಕುಟುಂಬದ ವಿಶಿಷ್ಠ ಆಲಯ.

ಶ್ರೀ ನರಸಿಂಹ ಜಯಂತಿ ನಿಮಿತ್ತ ಸಾಧನೆಗೆ ಅವಕಾಶ...ಸರ್ವವಿಧ ಸಂಕಟ ಪರಿಹಾರಕ್ಕಾಗಿ…ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ | ನೃಸಿಂಹಂ ಭ...
24/04/2026

ಶ್ರೀ ನರಸಿಂಹ ಜಯಂತಿ ನಿಮಿತ್ತ ಸಾಧನೆಗೆ ಅವಕಾಶ...
ಸರ್ವವಿಧ ಸಂಕಟ ಪರಿಹಾರಕ್ಕಾಗಿ…

ಉಗ್ರಂ ವೀರಂ ಮಹಾವಿಷ್ಣುಂ
ಜ್ವಲಂತಂ ಸರ್ವತೋಮುಖಂ |
ನೃಸಿಂಹಂ ಭೀಷಣಂ ಭದ್ರಂ
ಮೃತ್ಯುಮೃತ್ಯುಂ ನಮಮ್ಯಾಹಂ ||

ಈ ಮಂತ್ರ ಸಾವಿರ ಜಪಮಾಡಿ ನಿಮ್ಮ ನಕ್ಷತ್ರ ಸಹಿತ
ಹೋಮಸಂಕಲ್ಪ ಕಾಣಿಕೆ ಕಳಿಸಿದರೆ ನಿಮ್ಮ ಹೆಸರಿನಲ್ಲಿ ಅಗ್ನಿಯಮೂಲಕ ಶ್ರೀ ದೇವರಿಗೆ ಸಮರ್ಪಿಸಿ ಪ್ರಸಾದ ಕಳಿಸಲಾಗುವುದು.
ಸ್ವತಃ ಭಾಗವಹಿಸಲೂ ಅವಕಾಶವಿದೆ.
ಸಂಪರ್ಕ: 9663702615

19/03/2026

ಆಲಯದ ವತಿಯಿಂದ ಪ್ರಕಾಶಿಸಲ್ಪಟ್ಟಿರುವ ಶ್ರೀ ಪರಾಭವ ಸಂವತ್ಸರ ದಿನದರ್ಶಿಕೆಯನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉಡುಪಿಯಲ್ಲಿ ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಆಲಯದ ಧರ್ಮದರ್ಶಿ ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಉಪಸ್ಥಿತರಿದ್ದರು.

24/01/2026
ಆತ್ಮೀಯ ಭಗವದ್ಭಕ್ತರೇ,ವೇದದಲ್ಲಿ ಗಣಪತಿ ಹಾಗೂ ವಿಶ್ವಂಭರನ ಕುರಿತಾಗಿ ಮಾತೊಂದಿದೆ,  ಬಲಮುರಿ ವಿಶ್ವಂಭರ ಮಹಾಗಣಪತಿ ನ ಋತೇ ತ್ವತ್‌ಕ್ರಿಯತೇ ಕಿಂಚನ...
19/11/2025

ಆತ್ಮೀಯ ಭಗವದ್ಭಕ್ತರೇ,

ವೇದದಲ್ಲಿ ಗಣಪತಿ ಹಾಗೂ ವಿಶ್ವಂಭರನ ಕುರಿತಾಗಿ ಮಾತೊಂದಿದೆ, ಬಲಮುರಿ ವಿಶ್ವಂಭರ ಮಹಾಗಣಪತಿ ನ ಋತೇ ತ್ವತ್‌ಕ್ರಿಯತೇ ಕಿಂಚನಾರೇ...... ಎಂಬುದಾಗಿ. “ಹೇ ಗಣಪತಿಯೇ , ಹೇ ವಿಶ್ವವನ್ನು ಭರಿಸಿದ ವಿಶ್ವಂಭರನೇ ನಿನ್ನ ಹೊರತಾಗಿ ಈ ಜೀವವೂ ಇಲ್ಲ, ಜೀವನವೂ ಇಲ್ಲ! ಬದುಕಿನ ಚಿಕ್ಕ ಕ್ರಿಯೆಯಿಂದಾರಂಭಿಸಿ ಮಹತ್ಸಾಧನೆಯ ವರೆಗಿನ ನನ್ನೆಲ್ಲಾ ಕ್ರಿಯಾಕಲಾಪಕ್ಕೆ ನಿನ್ನ ಬಲದ ಬೆಂಬಲ ನನಗದು ಸರ್ವದಾ ಅಪೇಕ್ಷಣೀಯ. ಆದ್ದರಿಂದ ನನ್ನೊಳಗಿದ್ದು ಸರ್ವವನ್ನೂ ನೀನೇ ನಡೆಸು.” ಎಂಬುದಾಗಿ ಋಷಿಯು ಆ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಿದ್ದಾರೆಂದರೆ... ಗಣಪತಿಯ ಆರಾಧನೆಯು ನಮಗೆಷ್ಟು ಅನಿವಾರ್ಯವೆಂಬುದು ವೇದ್ಯವಾಗುವ ಸಂಗತಿ. ನಿತ್ಯಾರಾಧನೆಯನ್ನು ನಡೆಸುವವರೂ ನೈಮಿತ್ತಿಕವಾಗಿ ಪ್ರಾಪ್ತವಾಗುವ ಸುಕಾಲದಲ್ಲಿ ಆ ಸ್ವಾಮಿಯ ಆರಾಧನೆಯನ್ನು ನಡೆಸಿ ಧನ್ಯರಾಗಬಹುದು. ಅಂತಹ ಸುಸಂದರ್ಭವು ಗಣಪತಿಯ ಆರಾಧನೆಗೆ ಪ್ರೋಕ್ತವಾದುದು ಮಹಾಚತುರ್ಥಿಯ ದಿನ. ಅಂದರೆ *24 ನವೆಂಬರ್‌ 2025 ಸೋಮವಾರ*.
ಆ ದಿನ ಶ್ರೀಕ್ಷೇತ್ರ ಹಾದಿಗಲ್ಲು ಅಭಯಲಕ್ಷ್ಮೀನರಸಿಂಹ ದೇವಾಲಯದಲ್ಲಿ ಪರಿವಾರ ರೂಪದಲ್ಲಿ ಬಿಜಯ ಮಾಡಿರುವ, *ವರದಹಳ್ಳಿಯ ಅವಧೂತ ಶ್ರೀ ಶ್ರೀಧರ ಭಗವಾನ ಪ್ರದತ್ತ ಶ್ರೀ ಬಲಮುರಿ ವಿಶ್ವಂಭರ ಮಹಾಗಣಪತಿ ದೇವರ* ಸಂಪ್ರೀತಿಪೂರ್ವಕ ಲೋಕಕಲ್ಯಾಣಾರ್ಥವಾಗಿ* ಭಕ್ತಜನರಿಗೆ ಸಕಲವನ್ನೂ ಕರುಣಿಸುವ *ವರಗಣಪತಿ ಹೋಮ,** ಮನಃಸಂಕಲ್ಪಿತ ಸರ್ವಕಾರ್ಯಗಳು ಕ್ಷಿಪ್ರವಾಗಿ ನೇರವೇರಲು *ಕ್ಷಿಪ್ರಗಣಪತಿಯಾಗ,* * ಸಾಂಸಾರಿಕ ಸಂಕಷ್ಟ ಸರಣಿಯನ್ನು ದೂರೀಕರಿಸಲು *ಸಂಕಷ್ಟಹರಗಣಪತಿಯಾಗ,* * ಚತುರ್ವಿಧ ಪುರುಷಾರ್ಥದಂತೆ ಚತುರ್ವಿಧ ಮಹಾಫಲಭಾಗಿಯಾಗಲು *ಅಥರ್ವಶೀರ್ಷಯಾಗ,* ಹಾಗೂ ಮಹೈಶ್ವರ್ಯ ಪ್ರಾಪ್ತಿಯಾಗಲು *ಮಹಾಗಣಪತಿ ಯಾಗ* ವನ್ನು ನಡೆಸುವುದೆಂದು ಸಂಕಲ್ಪಿಸಿದ್ದೇವೆ. ಶ್ರೀ ಕ್ಷೇತ್ರದ ಪರಮಭಕ್ತರಾದ ತಾವು ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನುಮನಧನಪೂರ್ವಕವಾಗಿ ಭಾಗವಹಿಸಿ ಶ್ರೀ ಮಹಾಗಣಪತಿಯ ಅನುಗ್ರಹ ಭಾಜನರಾಗಬೇಕಾಗಿ ಕೋರಿಕೆ.
- ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮೀನಾರಾಯಣ ಸಂಪರ್ಕ : 9663702615

Address

Shimoga
577422

Telephone

9663702615

Website

Alerts

Be the first to know and let us send you an email when Hadigallu Shri Abhayalakshminarasimha Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Hadigallu Shri Abhayalakshminarasimha Temple:

Share