ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ.

  • Home
  • India
  • Shikarpur
  • ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ.

ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ. ಲೋಕಾಃ ಸಮಸ್ತಾಃ ಸುಖಿನೋ ಭವಂತು Recognised by Govt. of Karnataka
Charity organisation · Non-governmental organisation (NGO)

🕉️ ಶ್ರಾವಣ ಮಾಸದ ಶಿವಪೂಜಾ ತಪೋನುಷ್ಠಾನ 🕉️ಲೋಕಕಲ್ಯಾಣಕ್ಕಾಗಿ • ಧರ್ಮಜಾಗೃತಿಗಾಗಿದಿನಾಂಕ 13-08-2026, ಗುರುವಾರ, ಶ್ರಾವಣ ಮಾಸದ ಪವಿತ್ರ ಪ್ರಯು...
13/08/2026

🕉️ ಶ್ರಾವಣ ಮಾಸದ ಶಿವಪೂಜಾ ತಪೋನುಷ್ಠಾನ 🕉️

ಲೋಕಕಲ್ಯಾಣಕ್ಕಾಗಿ • ಧರ್ಮಜಾಗೃತಿಗಾಗಿ

ದಿನಾಂಕ 13-08-2026, ಗುರುವಾರ, ಶ್ರಾವಣ ಮಾಸದ ಪವಿತ್ರ ಪ್ರಯುಕ್ತ, ಪೂಜ್ಯರು ಸಂಕಲ್ಪಿಸಿರುವ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮದ ಮೊದಲ ದಿನದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಭಕ್ತಿಭಾವದಿಂದ ನೆರವೇರಿತು.

📍 ಸ್ಥಳ:
ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಆವರಣ,
ಸಾ. ಬೆಂಡೆಕಟ್ಟಿ, ತಾ. ಶಿಕಾರಿಪುರ

ಈ ಪವಿತ್ರ ಸಂದರ್ಭದಲ್ಲಿ ಶ್ರೀ ವೀರಶೈವ ಜಂಗಮ ಸಮಾಜ ಮತ್ತು ಮರಾಠ ಸಮಾಜದ ಹಿರಿಯರು ಹಾಗೂ ಗ್ರಾಮದ ಸದ್ಭಕ್ತರು ಭಕ್ತಿಯಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸಿದ್ದರು.

ಈ ಶಿವಪೂಜಾ ತಪೋನುಷ್ಠಾನವು ಲೋಕಕಲ್ಯಾಣ, ಧರ್ಮಜಾಗೃತಿ ಹಾಗೂ ಸರ್ವರಿಗೂ ಶಾಂತಿ-ಸುಖ-ಸಮೃದ್ಧಿ ದೊರೆಯಲಿ ಎಂಬ ಸದುದ್ದೇಶದಿಂದ ನಡೆಯಿತು.

🙏 ಭಕ್ತಿ ಸೇವೆ:
ಶ್ರೀ ವೀರಶೈವ ಜಂಗಮ ಸಮಾಜ
ಮರಾಠ ಸಮಾಜದ ಹಿರಿಯರು
ಹಾಗೂ ಗ್ರಾಮದ ಸದ್ಭಕ್ತರು

🕉️ ಓಂ ನಮಃ ಶಿವಾಯ 🕉️

01/08/2026

ಶ್ರೀ ಗುರುಭ್ಯೋ ನಮಃ 🙏

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ತಪೋಕ್ಷೇತ್ರ ಕಡೇನಂದಿಹಳ್ಳಿ, ಶ್ರೀ ಮದ್ ರಂಭಾಪುರಿ ಶಾಖಾ ಮಠ – ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಭಕ್ತಿಭಾವದಿಂದ ಜರುಗಿದ ಗುರು ಪೂರ್ಣಿಮೆ ಆಚರಣೆ ಹಾಗೂ ಧರ್ಮ ಸಮಾರಂಭದ ವಿಡಿಯೋ ಚಿತ್ರಣ.

ಸದ್ಗುರುಗಳ ದಿವ್ಯ ಸಾನ್ನಿಧ್ಯ, ಆಶೀರ್ವಚನ, ಪಾದಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತರ ಭಾವಪೂರ್ಣ ಭಾಗವಹಿಸುವಿಕೆಯ ಸುಂದರ ಕ್ಷಣಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಬಹುದು.

ವಿಡಿಯೋವನ್ನು ವೀಕ್ಷಿಸಿ, ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ ಹಾಗೂ ಧರ್ಮಪ್ರಚಾರದ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿರಿ.

ಓಂ ಶ್ರೀ ಗುರುಭ್ಯೋ ನಮಃ।

ವಿವಿಧ ಸುದ್ಧಿ ಪತ್ರಿಕೆಗಳಲ್ಲಿ ಗುರುಪೌರ್ಣಿಮೆ ಕಾರ್ಯಕ್ರಮ ಪ್ರಕಟವಾಗಿರುವುದು.
31/07/2026

ವಿವಿಧ ಸುದ್ಧಿ ಪತ್ರಿಕೆಗಳಲ್ಲಿ ಗುರುಪೌರ್ಣಿಮೆ ಕಾರ್ಯಕ್ರಮ ಪ್ರಕಟವಾಗಿರುವುದು.

ಲೋಕಕಲ್ಯಾಣಕ್ಕಾಗಿ ಧರ್ಮ ಜಾಗೃತಿಗಾಗಿ*ಶಿವಮೊಗ್ಗ ಜಿಲ್ಲೆ ಸುಕ್ಷೇತ್ರ ದುಗ್ಗಿ ಮತ್ತು ತಪೋಕ್ಷೇತ್ರ ಕಡೇನಂದಿಹಳ್ಳಿಶ್ರೀಮದ್ ರಂಭಾಪುರಿ ಶಾಖಾ ಶ್ರೀ...
31/07/2026

ಲೋಕಕಲ್ಯಾಣಕ್ಕಾಗಿ ಧರ್ಮ ಜಾಗೃತಿಗಾಗಿ

*ಶಿವಮೊಗ್ಗ ಜಿಲ್ಲೆ ಸುಕ್ಷೇತ್ರ ದುಗ್ಗಿ ಮತ್ತು ತಪೋಕ್ಷೇತ್ರ ಕಡೇನಂದಿಹಳ್ಳಿ

ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ದೇಶ್ವರ ಮಠದ

ಶಿವತಪಸ್ವಿ ರತ್ನ, ಸಾಧನ ಸಿರಿ, ಶಿವಪೂಜಾ ತಪೋರತ್ನ, ಶಿವತತ್ವ ಪ್ರಬೋಧಕ

ಶ್ರೀ ಷ|| ಬ್ರ|| ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ

ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮ

ಪ್ರತಿನಿತ್ಯ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಪಾದಪೂಜೆ, ಭಸ್ಮ-ರುದ್ರಾಕ್ಷಿ ಧಾರಣೆ, ಬೆತ್ತು ಶಿವದೀಕ್ಷೆ ವ, ಅಯ್ಯಾಚಾರ ಹಾಗೂ ಶಿವಭಕ್ತರಿಗೆ ಅಂಗಧಾರಣೆ ಮತ್ತು ಧಾರ್ಮಿಕ ಸಮಾರಂಭ

ಪವಿತ್ರ ಶ್ರಾವಣ ಮಾಸ ಪರ್ಯಂತರ ದಿನಾಂಕ: 13-08-2026 ಗುರುವಾರದಿಂದ ದಿನಾಂಕ: 11-09-2026 ಶುಕ್ರವಾರದವರೆಗೆ

ಸದ್ಭಕ್ತ ಬಂಧುಗಳೇ,

ಸಮಾಜ ಬಾಂಧವರು-ಸದ್ಭಕ್ತರುಗಳು ಧರ್ಮದ ಮೂಲ ಪರಂಪರೆ, ಆಚಾರ-ವಿಚಾರ, ಆಚರಣೆಗಳಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಧರ್ಮ-ಸಂಸ್ಕಾರ ನೀಡುವ ಸದುದ್ದೇಶದಿಂದ ಶ್ರೀಗಳವರು ಲೋಕಕಲ್ಯಾಣಕ್ಕಾಗಿ ಮತ್ತು ಧರ್ಮ ಜಾಗೃತಿಗಾಗಿ ನಾಡಿನ ಬೇರೆ ಬೇರೆ ಗ್ರಾಮಗಳ ದೇವಸ್ಥಾನಗಳಲ್ಲಿ ಹಾಗೂ ಸದ್ಭಕ್ತರುಗಳ ಮನೆಗಳಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಪಾದಪೂಜೆ ನೆರವೇರಿಸಿ ಉಪದೇಶ ನೀಡುವರು.

ಜೊತೆಗೆ ಸಮಸ್ತ ಸದ್ಭಕ್ತರಿಗೆ ಭಸ್ಮ-ರುದ್ರಾಕ್ಷಿ ಧಾರಣೆ ಹಾಗೂ ಅಪೇಕ್ಷಿತ ಭಕ್ತರಿಗೆ ಲಿಂಗಧಾರಣೆ ಮತ್ತು ಮಂತ್ರೋಪದೇಶ ಮಾಡುವರು.

ಇಷ್ಟಲಿಂಗ ಪೂಜಾ ಸಮಯ
ಬೆಳಿಗ್ಗೆ 09.00 ರಿಂದ ಮಧ್ಯಾಹ್ನ 01.00 ಗಂಟೆಯವರೆಗೆ

ಲೋಕಕಲ್ಯಾಣಕ್ಕಾಗಿ ಧರ್ಮ ಜಾಗೃತಿಗಾಗಿ ಪೂಜ್ಯರು ಸಂಕಲ್ಪಿಸಿರುವ ಈ ಧರ್ಮಪರ ಕಾರ್ಯಕ್ರಮದಲ್ಲಿ ಸಮಸ್ಥ ಸದ್ಭಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ-ಧನ ಶುದ್ಧ ಭಕ್ತಿ ಸೇವೆಯನ್ನು ಸಮರ್ಪಿಸಿ ಗುರು ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

॥ ವ್ಯವಸ್ಥಾಪಕರು ॥

ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ (ರಿ.)

ಸಲಹಾ ಮತ್ತು ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಶ್ರೀ ಮಠದ ಸಮಸ್ತ ಸದ್ಭಕ್ತರುಗಳು, ತಪೋಕ್ಷೇತ್ರ ಕಡೇನಂದಿಹಳ್ಳಿ, ಶಿಕಾರಿಪುರ ತಾಲೂಕು ಮತ್ತು ಸುಕ್ಷೇತ್ರ ದುಗ್ಲಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ

#ಇಷ್ಟಲಿಂಗಪೂಜೆ
ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಶ್ರೀಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ ತಪೋ ಕ್ಷೇತ್ರ ಕಡೆನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ.

ದಿ,29,07,2026 ನೇ ಬುಧವಾರ ಗುರು ಪೂರ್ಣಿಮೆ ಪ್ರಯುಕ್ತ ಜರುಗಿದ ಕಾರ್ಯಕ್ರಮಗಳು೧)ಕ್ಷೇತ್ರದ ದೈವಗಳಿಗೆ ರುದ್ರಾಭಿಷೇಕ ಶಿವಾಷ್ಟೋತ್ತರ ವಿಶೇಷ ಫಲಾ...
30/07/2026

ದಿ,29,07,2026 ನೇ ಬುಧವಾರ ಗುರು ಪೂರ್ಣಿಮೆ ಪ್ರಯುಕ್ತ ಜರುಗಿದ ಕಾರ್ಯಕ್ರಮಗಳು

೧)ಕ್ಷೇತ್ರದ ದೈವಗಳಿಗೆ ರುದ್ರಾಭಿಷೇಕ ಶಿವಾಷ್ಟೋತ್ತರ ವಿಶೇಷ ಫಲಾಲಂಕಾರ ಪೂಜೆ ಮಹಾಮಂಗಳಾರತಿ
೨) ಶಿಕಾರಿಪುರ ತಾಲ್ಲೂಕಿನ ಶಾಸಕರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ, ವೈ ವಿಜಯೇಂದ್ರ ರವರು
ಶ್ರೀ ಮಠದ ಸುತ್ತ ಕೋಟೆ ನಿರ್ಮಾಣ ಕಾರ್ಯಕ್ಕೆ ಚಾಲನೆ,ರಥದ ಮನೆ ಉದ್ಘಾಟನೆ, ಹಾಗೂ ಶ್ರಾವಣ ಮಾಸ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ ಪತ್ರಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು
೩) ಸಾವಿರಾರು ಭಕ್ತರು ಗುರುಗಳ ಪಾದಪೂಜೆ ನೆರವೇರಿಸಿ ನಂತರ ಪ್ರತಿ ತಿಂಗಳ ಹುಣ್ಣಿಮೆಯಂತೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಹರಕೆ ರಥೋತ್ಸವ ನೆರವೇರಿಸಿ ಪ್ರಸಾದ ಸ್ವೀಕರಿಸಿದರು

🌺 ಆತ್ಮೀಯ ಸ್ವಾಗತ 🌺ಗುರು ಪೂರ್ಣಿಮೆಯ ಪವಿತ್ರ ಶುಭ ಸಂದರ್ಭದಲ್ಲಿನೂತನ ರಥದ ಮನೆ ಪ್ರವೇಶ,ಶ್ರಾವಣ ಮಾಸದ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮ, ಹಾಗೂ...
28/07/2026

🌺 ಆತ್ಮೀಯ ಸ್ವಾಗತ 🌺

ಗುರು ಪೂರ್ಣಿಮೆಯ ಪವಿತ್ರ ಶುಭ ಸಂದರ್ಭದಲ್ಲಿ
ನೂತನ ರಥದ ಮನೆ ಪ್ರವೇಶ,
ಶ್ರಾವಣ ಮಾಸದ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮ, ಹಾಗೂ
ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಸಮಾರಂಭಕ್ಕೆ

ತಮ್ಮ ಹಾಗೂ ತಮ್ಮ ಕುಟುಂಬದವರೊಂದಿಗೆ ಆಗಮಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿ, ಗುರು ಕೃಪೆಗೆ ಪಾತ್ರರಾಗಬೇಕೆಂದು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

ತಮಗೆಲ್ಲರಿಗೂ ಆತ್ಮೀಯ ಸ್ವಾಗತ.

ಓಂ ನಮಃ ಶಿವಾಯ ॥
ಗುರುಭ್ಯೋ ನಮಃ ॥

ಗುರು ಪೂರ್ಣಿಮೆ ಪ್ರಯುಕ್ತಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಪ್ರತಿ ವರ್ಷದಂತೆ ವಿದ್ಯಾ ಗುರುಗಳು, ಗುರುತ್ವಾಧಿಕಾರವನ್ನು ಅನುಗ್ರಹಿಸಿದ ಗ...
28/07/2026

ಗುರು ಪೂರ್ಣಿಮೆ ಪ್ರಯುಕ್ತ

ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಪ್ರತಿ ವರ್ಷದಂತೆ ವಿದ್ಯಾ ಗುರುಗಳು, ಗುರುತ್ವಾಧಿಕಾರವನ್ನು ಅನುಗ್ರಹಿಸಿದ ಗುರುಗಳು, ಮಾರ್ಗದರ್ಶಕ ಗುರುಗಳು, ಹಾಗೂ ಪೂರ್ವಾಶ್ರಮದಲ್ಲಿ ವೇದ-ಜ್ಯೋತಿಷ್ಯ ವಿದ್ಯೆಯನ್ನು ಬೋಧಿಸಿದ ಪೂಜ್ಯ ಗುರುಗಳ ದಿವ್ಯ ದರ್ಶನವನ್ನು ಪಡೆದು, ಭಕ್ತಿಪೂರ್ವಕವಾಗಿ ಗುರುಕಾಣಿಕೆಯನ್ನು ಸಮರ್ಪಿಸಿ, ಅವರ ಅಮೂಲ್ಯ ಆಶೀರ್ವಾದವನ್ನು ಪಡೆದ ಸೌಭಾಗ್ಯ ಲಭಿಸಿತು.

"ಗುರುಕೃಪೆಯೇ ಸಕಲ ಸಿದ್ಧಿಗಳ ಮೂಲ."

ಶ್ರೀ ಗುರುಭ್ಯೋ ನಮಃ ।

Address

Shikarpur

Alerts

Be the first to know and let us send you an email when ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ. posts news and promotions. Your email address will not be used for any other purpose, and you can unsubscribe at any time.

Shortcuts

Share