ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ.

  • Home
  • India
  • Shikarpur
  • ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ.

ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ. ಲೋಕಾಃ ಸಮಸ್ತಾಃ ಸುಖಿನೋ ಭವಂತು Recognised by Govt. of Karnataka
Charity organisation · Non-governmental organisation (NGO)

ಸಾಧನೆಯ ಸುವರ್ಣ ಪಥದಲ್ಲಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಗಳವರ ಮಹಾಯಾನಕ್ಕೆ ೧೨ ವರುಷದ ಸಂಭ್ರಮ. ಶ್ರೀಮದ್ರಂಭಾಪುರಿ ಜಗದ್ಗುರುಗಳ ದಿವ್ಯ ...
28/04/2026

ಸಾಧನೆಯ ಸುವರ್ಣ ಪಥದಲ್ಲಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಗಳವರ ಮಹಾಯಾನಕ್ಕೆ ೧೨ ವರುಷದ ಸಂಭ್ರಮ.
ಶ್ರೀಮದ್ರಂಭಾಪುರಿ ಜಗದ್ಗುರುಗಳ ದಿವ್ಯ ಪಾವನ ಸಾನಿಧ್ಯದಲ್ಲಿ ದಿನಾಂಕ 8-5-2026 ಮತ್ತು 09-05-2026 ರಂದು ಜರುಗುವುದು.
ಆಸ್ತಿಕ ಬಂಧುಗಳೆ ತಮಗೆಲ್ಲರಿಗೂ ಸ್ವಾಗತ

27/04/2026

#ಸಾಧನೆಯ_ಸುವರ್ಣ_ಪಥದಲ್ಲಿ_ಶ್ರೀಗಳವರ_ಮಹಾಯಾನಕ್ಕೆ_12_ವರುಷದ_ಸಂಭ್ರಮ ದಿನಾಂಕ 8 ಮತ್ತು 9, ಮೇ 2026

#ಶ್ರೀಗಳು_ನಡೆದು_ಬಂದ_ಸಾಧನೆಯ_ಹಾದಿ
ಬಾಳ ಪಯಣದಲ್ಲಿ ಹಲವು ಏಳು-ಬೀಳುಗಳ ಮಧ್ಯೆ ಸಾಧನೆಯ ಶಿಖರವೇರಿದವರು ಈ ನಾಡಿನಲ್ಲಿ ಅನೇಕರು. ಸಾತ್ವಿಕ ಕ್ರಿಯಾಶೀಲತೆಯಲ್ಲಿ ಸತತ ಪ್ರಯತ್ನದ ಮೂಲಕ ಬಾಲ್ಯದಿಂದಲೇ ವಿಶೇಷ ಅಂತಹತ್ವದ ಬಲವನ್ನು ಪಡೆದು ಮಾತಾ-ಪಿತರ ಆಶಯಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಗುರುವಿನ ಅನುಗ್ರಹದೊಂದಿಗೆ ಚೈತನ್ಯಶೀಲತೆಯಿಂದ ನಡೆದು ನುಡಿ-ನಡೆಗಳಲ್ಲಿ ಸಹಜತೆಯ ಸ್ವಾನುಭಾವವನ್ನು ಸ್ವಾಮಿತ್ವದ ಸರದಿಯಲ್ಲಿ ತುಂಬಿಕೊಂಡು ಬಹುಬೇಗ ಬೆಳೆಯುವ ಸಂಕಲ್ಪ ತೊಟ್ಟು ಯಶೋಗಾಮಿಗಳಾದವರು ದುಗ್ಲಿ ಮತ್ತು ಕಡೇನಂದಿಹಳ್ಳಿ ಕ್ಷೇತ್ರದ ಪಟ್ಟಾಧ್ಯಕ್ಷರಾದ #ಶ್ರೀ_ಷ_ಬ್ರ_ರೇವಣಸಿದ್ದೇಶ್ವರ_ಶಿವಾಚಾರ್ಯ_ಸ್ವಾಮಿಗಳವರು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಡೇನಂದಿಹಳ್ಳಿ ಪುಟ್ಟ ಗ್ರಾಮದಲ್ಲಿ ಆಚಾರ ನಿಷ್ಠರು, ಧರ್ಮ ಸಂಘಟನಾಶೀಲರು, ಹಿರಿಯರಾದ ಶ್ರೀಮತಿ ಲಿಂ. ನಾಗಮ್ಮ ಶ್ರೀ ವೇ।। ಲಿಂ. ಕೊಟ್ರಪ್ಪಯ್ಯ ಸೋಗಿಹಿರೇಮಠ ಇವರ ಮೊಮ್ಮಗನಾಗಿ, ಶ್ರೀಮತಿ ಲಿಂ. ಪಾರ್ವತಮ್ಮ ಶ್ರೀ ವೇ।। ಮರಿಸ್ವಾಮಿ ಸೋಗಿಹಿರೇಮಠ ಇವರ ಹಿರಿಯ ಸುಪುತ್ರರಾಗಿ ದಿನಾಂಕ: 30-03-1991 ಶನಿವಾರದಂದು ಜನಿಸಿದ ಶ್ರೀಗಳವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ಪ್ರೌಢ ಶಿಕ್ಷಣದ ಜೊತೆಗೆ ವೇದ, ಸಂಸ್ಕೃತ, ಜ್ಯೋತಿಷ್ಯ ವಿದ್ಯಾಭ್ಯಾಸ ಮಾಡಿದರು.

ಸಾಧನಾ ಜೀವನದಲ್ಲಿ ಶುದ್ಧ ಭಾವವನ್ನು ಹೊಂದಿದ್ದ ಇವರು ವಿದ್ಯಾ ಪ್ರೌಢಿಮೆಯಿಂದ ದಾವಣಗೆರೆ ಜಿಲ್ಲೆ ಅವರಗೊಳ್ಳ ಪುರವರ್ಗ ಹಿರೇಮಠದಲ್ಲಿ ನಂತರ ಬೇರೆ ಬೇರೆ ಕ್ಷೇತ್ರಗಳ ಮಠಗಳ ಪೂಜ್ಯರ ಸೇವಾ ಕಾರ್ಯದಲ್ಲಿ ಸಹಾಯಕರಾಗಿ ಕಾರ್ಯ ದಕ್ಷತೆ ಮೆರೆದವರು. ಆನಂತರ ವಿವಿಧ ದೇವಸ್ಥಾನಗಳಲ್ಲಿ ಪ್ರಧಾನ ಅರ್ಚಕರಾಗಿ, ಪುರೋಹಿತರಾಗಿ ಸೇವೆ ಸಲ್ಲಿಸುತ್ತಲೇ ಧಾರ್ಮಿಕತ್ವದ ವಿಶೇಷ ಜ್ಞಾನ ಸಂಪಾದಿಸಿಕೊಂಡವರು. ವೇದ, ಆಗಮ, ಸಂಸ್ಕೃತ, ಶಕ್ತಿವಿಶಿಷ್ಟಾತ ಸಿದ್ಧಾಂತ, ಜ್ಯೋತಿಷ್ಯ ಶಾಸ್ತ್ರಗಳನ್ನು ಅಧ್ಯಯನ ಗೈದು ಯೋಗಾಯೋಗವೆಂಬಂತೆ ಸ್ವಕ್ಷೇತ್ರವಾದ ಕಡೇನಂದಿಹಳ್ಳಿಯ ಕ್ಷೇತ್ರಪಾಲಕ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ 2012 ಮತ್ತು 2013 ರ ಯುಗಾದಿ ಪರ್ವಕಾಲದಲ್ಲಿ ಅನುಷ್ಠಾನಗೈದರು.

2014 ರಲ್ಲಿ ಕುಲಗುರು ಪರಂಪರೆಯ ಸಿರಿಯಾದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಪ್ಪಣೆ-ಆದೇಶ-ಆಶೀರ್ವಾದದಂತೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಸುಕ್ಷೇತ್ರ ದುಗ್ಗಿಯ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ದೇಶ್ವರಮಠಕ್ಕೆ ಉತ್ತರಾಧಿಕಾರಿಗಳಾಗಿ ದಿನಾಂಕ: 09-05-2014 ನೇ ಶುಕ್ರವಾರದಂದು ಶ್ರೀ ಗುರು ಪಟ್ಟಾಧಿಕಾರ ಸ್ವೀಕಾರ ಮಾಡಿದರು. ಹಿರಿಯ ಗುರುಗಳಾದ ಶ್ರೀ ಮುರುಘಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಆನೇಕ ವಿಧವಾದ ಸುಕಾರ್ಯಗಳನ್ನು ಮಾಡಿ ಸ್ವಾಮಿತ್ವಕ್ಕೆ ಬೆಲೆ ತಂದುಕೊಟ್ಟರು. ಸಾಧನೆಯ ಸರದಿಯಲ್ಲಿ ಮುಂದುವರೆದು #ಲೋಕಕಲ್ಯಾಣಕ್ಕಾಗಿ_ಮನೋವಾಂಭಿತ_ಫಲಸಿದ್ಧಿಗಾಗಿ_ಕಡೇನಂದಿಹಳ್ಳಿ_ಶ್ರೀ_ಮಳೆ_ಮಲ್ಲೇಶ್ವರಸ್ವಾಮಿ_ಜಾಗೃತ_ಸ್ಥಳದಲ್ಲಿ_2014 #ಡಿಸೆಂಬರ್_ನಿಂದ_2015_ನೇ_ನವೆಂಬರ್_ವರೆಗೆ_ಅಂದರೆ_ಸತತ_336_ದಿನಗಳ_ಒಂದು_ಕೋಟಿ_ಶಿವಪಂಚಾಕ್ಷರಿ_ಮಹಾಮಂತ್ರದ_ಮೌನ #ಶಿವಾನುಷ್ಠಾನ_ಮಾಡಿದರು. ಮೌನ ಶಿವಾನುಷ್ಠಾನ ಯಶಸ್ವಿಯಾದ ಹಿನ್ನಲೆಯಲ್ಲಿ ಮತ್ತೆ 2016 ನೇ ಜನವರಿಯಲ್ಲಿ ಶಿಕಾರಿಪುರ ತಾಲೂಕಿನ ವಿವಿಧ ಪುಣ್ಯಕ್ಷೇತ್ರಗಳಿಗೆ 5 ದಿನಗಳ ಕಾಲ ಪಾದಯಾತ್ರೆಯ ಮೂಲಕ ಸಂಚರಿಸಿ ಜಾಗೃತಿಯನ್ನುಂಟು ಮಾಡಿ ಆಧ್ಯಾತ್ಮ ಸಾಧನೆಯ ಹಂತಗಳನ್ನು ಹೆಚ್ಚಿಸಿಕೊಂಡರು.

ಭಕ್ತರ ಸದಿಚ್ಛೆಯಂತೆ ತಮ್ಮ ಪೂರ್ವಾಶ್ರಮದ ತಂದೆಯವರು ದಾನವಾಗಿ ನೀಡಿದ್ದ3 ಎಕರೆ ಜಮೀನಿನಲ್ಲಿ ಋಷಿಮುನಿಗಳ ಆಚರಣೆಯಂತೆ ಪರ್ಣ ಹುಲ್ಲಿನ ಕುಟೀರಗಳನ್ನು ದಿನಾಂಕ: 15-04-2016 ನೇ ಶುಕ್ರವಾರ ಯುಗಾದಿ ಪರ್ವಕಾಲದಲ್ಲಿ ನಿರ್ಮಿಸಿ, ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ ಪ್ರಾರಂಭಿಸಿದರು. ಪುಣ್ಯ ಕಾರ್ಯಗಳಿಗೋಸ್ಕರವೇ ನಿರ್ಮಾಣಗೊಂಡ ಮಣ್ಯಾಶ್ರಮದಲ್ಲಿ ಭಕ್ತರಿಗಾಗಿ ವಿಶೇಷ ಕಾರ್ಯಗಳನ್ನು ಜರುಗಿಸಬೇಕೆಂಬ ಹಂಬಲ ಹೊತ್ತ ಶ್ರೀಗಳವರು ಪ್ರತಿದಿನ ಆಗಮಿಸಿದ ಸದಕ್ಷರರುಗಳಿಗೆ ಪ್ರಸಾದ ವ್ಯವಸ್ಥೆ ಮತ್ತು ಪ್ರತಿ ತಿಂಗಳ ಹುಣ್ಣಿಮೆಯಂದು ಕ್ಷೇತ್ರಗಳ ದೈವಗಳಿಗೆ ರುದ್ರಾಭಿಷೇಕ, ಶಿವಾಷ್ಟೋತ್ತರ, ವಿಶೇಷ ಅಲಂಕಾರಯುಕ್ತ ಪೂಜೆ, ಮಹಾಮಂಗಳಾರತಿ, ಪ್ರಸಾದ ವ್ಯವಸ್ಥೆಗೆ ಚಾಲನೆ ನೀಡಿದರು. ಏನೊಂದೂ ಇಲ್ಲದೇ ಕೇವಲ ಜೋಳಿಗೆ ಹಿಡಿದು ಊರೂರು ಸುತ್ತಿ ಭಕ್ತರ ಕಾಣಿಕೆಯನ್ನು ಭಕ್ತರಿಗಾಗಿಯೇ ಮೀಸಲಿರಿಸಿ ಕ್ಷೇತ್ರದಲ್ಲಿ ಆನೇಕ ತರನಾದ ಕಾರ್ಯಗಳೊಟ್ಟಿಗೆ ಹೋಮ, ಹವನ, ಸಭೆ, ಸಮಾರಂಭಗಳನ್ನು ಆಯೋಜಿಸಲು ಸಂಕಲ್ಪ ತೊಟ್ಟರು. ಪ್ರತಿ ವರ್ಷಕ್ಕೊಮ್ಮೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚಿಂತನಾತ್ಮಕ ಸಭೆಗಳನ್ನಾಗಿ ಪರಿವರ್ತಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಿದರು. 2016 #ಡಿಸೆಂಬರ್_ತಿಂಗಳಲ್ಲಿ_ಶ್ರೀಮದ್_ಉಜ್ಜಯಿನಿ_ಜಗದ್ಗುರುಗಳವರ_ಸಾನಿಧ್ಯದಲ್ಲಿ ಮಹಾರುದ್ರಯಜ್ಞ ಸನ್ನಿಧಿಯವರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಮಾರಂಭಆಯೋಜಿಸಿದರು. #2017ಡಿಸೆಂಬರ್_ತಿಂಗಳಲ್ಲಿ_ಶ್ರೀಮದ್_ರಂಭಾಪುರಿ_ಜಗದ್ಗುರುಗಳವರ_ಸಾನಿಧ್ಯದಲ್ಲಿ ಪ್ರತ್ಯಂಗಿರಾ ಹೋಮ, ಸರ್ಪಶಾಂತಿ ಹೋಮ, ಹಾಗೂ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಆನಂತರ #2019ನೇ_ಫೆಬ್ರವರಿ_ತಿಂಗಳಲ್ಲಿ_ಶ್ರೀಹಿಮವತ್_ಕೇದಾರ_ಜಗದ್ಗುರುಗಳವರ_ಸಾನಿಧ್ಯದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, ಶಿವದೀಕ್ಷೆ ಶ್ರೀ ಚಂಡಿಕಾ ಹೋಮ, ಧರ್ಮ ಜಾಗೃತಿ ಸಮಾರಂಭ ಮತ್ತು ದೇಶಿ ಗೋವುಗಳ ಸಂರಕ್ಷಣೆಯ ಸಂಕಲ್ಪದೊಂದಿಗೆ ಶ್ರೀ ಸುರಭಿ ಗೋಶಾಲೆ ಪ್ರಾರಂಭಗೊಳಿಸಿದರು. ಸೊರಬ ತಾಲೂಕಿನ ಸುಕ್ಷೇತ್ರ ದುಗ್ಗಿ ಶ್ರೀ ಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ದೇಶ್ವರ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮುರುಘಂದ್ರ ಸ್ವಾಮಿಗಳವರು ದಿನಾಂಕ: 22-04-2019 ರಲ್ಲಿ ಲಿಂಗೈಕ್ಯರಾದ ನಂತರ ಶ್ರೀಮದ್ ರಂಭಾಪುರಿ ಪೀಠದ ಆದೇಶದಂತೆ ಶ್ರೀಮಠದ ಜವಾಬ್ದಾರಿ ಹೊತ್ತು ಲಿಂಗೈಕ್ಯ ಶ್ರೀಗಳವರ ಆಶಯಗಳನ್ನು ಅತ್ಯಂತ ಶುದ್ಧ ಬದ್ಧವಾಗಿ ಮುನ್ನಡೆಸಿಕೊಂಡು ಸಾಗುತ್ತಿರುವ ಶ್ರೀಗಳವರು 2020 ರ ಜನವರಿ ತಿಂಗಳಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಸಾನಿಧ್ಯದಲ್ಲಿ ಹಾಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ #ಶ್ರೀ_ಡಾ_ವೀರೇಂದ್ರ_ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 10 ದಿನಗಳ ಕಾಲ ವಿವಿಧ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಗೈದು, ಶ್ರೀ ಗುಡ್ಡಾಪುರ ದಾನಮ್ಮದೇವಿ ಪುರಾಣ, ಪ್ರಶಸ್ತಿ ಪ್ರದಾನ, ಒಂದು ಲಕ್ಷ ದೀಪೋತ್ಸವ ಸಂಭ್ರಮ ಸಮಾರಂಭವನ್ನು ಅದ್ದೂರಿಯಾಗಿ ಪೂರ್ಣಗೊಳಿಸಿದರು.

ಸಂಘಟನಾ ಶಕ್ತಿ ಮತ್ತು ಆತ್ಮಶಕ್ತಿಗಳನ್ನು ಸಂಯೋಜನೆಗೊಳಿಸಿಕೊಂಡ ಶ್ರೀಗಳವರು ಯುವಶಕ್ತಿಯನ್ನು ಸಂಘಟಿಸಿದರು, ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ನಡೆಯೊಂದಿಗೆ ಕ್ಷೇತ್ರದ ಅಭಿವೃದ್ಧಿ ಪಹಕ್ಕೆ ಮುಂದಡಿ ಇಟ್ಟರು. 2021 ರಲ್ಲಿ ಎದುರಾದ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಶ್ರೀ ಕ್ಷೇತ್ರದಲ್ಲಿ ಕಂಟಕ ನಿವಾರಣೆಗಾಗಿ ವಿವಿಧ ಹೋಮ-ಹವನಗಳನ್ನು ನೆರವೇರಿಸಿದರು. ಅಲ್ಲದೇ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಮಹತ್ವದ ಆಚರಣೆಗಳಲ್ಲಿ ಒಂದಾದ ಶ್ರೀ ಪೀಠದ ಪ್ರಸ್ತುತ ಜಗದ್ಗುರುಗಳವರ 30 ನೇ ವರ್ಷದ ಶರನ್ನವರಾತ್ರಿ ದಸರಾ ದರ್ಬಾರ್ ಧರ್ಮ ಸಮಾರಂಭವನ್ನು ಭಕ್ತರ ಸೇವಾ ಸಹಯೋಗದಲ್ಲಿ ಅತ್ಯಂತ ಜಾಗೃತತೆಯಿಂದ ನೆರವೇರಿಸಿಕೊಟ್ಟರು.

2021 ಡಿಸೆಂಬರ್ 24 ನೇ ತಾರೀಖಿನಿಂದ 2022 ಜನವರಿ 07 ನೇ ತಾರೀಖಿನವರೆಗೆ ಗುರುಬಲ ಪ್ರಾಪ್ತಿಗಾಗಿ, ಕ್ಷೇತ್ರದ ಅಭಿವೃದ್ಧಿ ಸಂಕಲ್ಪದೊಂದಿಗೆ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಪುಣ್ಯಾಶ್ರಮದಿಂದ, #ಶ್ರೀ_ಜಗದ್ಗುರು_ರೇಣುಕಾಚಾರ್ಯರು_ಆವಿರ್ಭವಿಸಿದ_ತೆಲಂಗಾಣ ರಾಜ್ಯದ #ಕೊಲನುಪಾಕ_ಕ್ಷೇತ್ರಕ್ಕೆ_ಸುಮಾರು_650_ಕಿಮೀ_ಪಾದಯಾತ್ರೆಯನ್ನು ಹಾರನಹಳ್ಳಿ ಶ್ರೀಗಳು ಮತ್ತು 36 ಭಕ್ತರ ಜೊತೆಗೆ ಮಾಡಿರುವರು. 2022 ನವೆಂಬರ್ ತಿಂಗಳಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ 108 ದಿನಗಳ ಕಾಲ ಒಂದು ಕೋಟಿ ಶಿವ ಪಂಚಾಕ್ಷರಿ ಮಹಾಮಂತ್ರದ ಜಪಯಜ್ಞ ಮಂಗಲ ಪ್ರಯುಕ್ತ 10 ದಿನಗಳ ಕಾಲ ಶ್ರೀಮದ್ ಉಜ್ಜಯಿನಿ ಲಿಂ. ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಪ್ರವಚನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜಿಸಿರುವರು. 2023 ಜೂನ್ ತಿಂಗಳಲ್ಲಿ ಶ್ರೀಮದ್‌ ರಂಭಾಪುರಿ ಜಗದ್ಗುರುಗಳ ಅಮೃತ ಹಸ್ತದಿಂದ ಶಿಲಾಮಂಟಪದ ಮೇಲೆ 36 ತತ್ವಗಳ ಪ್ರತೀಕವಾಗಿ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಯ ನಿರ್ಮಾಣಕ್ಕೆ ಚಾಲನೆ ನೀಡಿದರು. #2024ಫೆಬ್ರವರಿ_ತಿಂಗಳಲ್ಲಿ_13_ದಿನಗಳ_ಕಾಲ_ಶ್ರೀಮದ್_ಶ್ರೀಶೈಲ_ಮತ್ತು_ಶ್ರೀಮತ್_ಕಾಶಿ_ಜಗದ್ಗುರುಗಳವರ_ಅಡ್ಡಪಲ್ಲಕ್ಕಿ #ಮಹೋತ್ಸವದೊಂದಿಗೆ ಪ್ರಾರಂಭಿಸಿ ಶ್ರೀ ಜಗದ್ಗುರು ಪಂಚಾಚಾರ್ಯರ, #ನಿರಂಜನ_ಜಗದ್ಗುರುಗಳ_ಸಾನ್ನಿಧ್ಯದಲ್ಲಿ ನಾಡಿನ ಶಿವಾಚಾರ್ಯರ ನೇತೃತ್ವದಲ್ಲಿ ನಾಡಿನ ಸಮಸ್ತ ಸದ್ಭಕ್ತರರುಗಳ ಸಮ್ಮುಖದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಉಪಸ್ಥಿತಿಯಲ್ಲಿ 36 ಅಡಿ ಎತ್ತರದ ಮಂಗಲ ಮೂರ್ತಿಯ ಲೋಕಾರ್ಪಣೆ ಸಮಾರಂಭವನ್ನು ಅತ್ಯಂತ ವಿಧಾಯಕ ರೀತಿಯಲ್ಲಿ ಸಾಧ್ಯಗೊಳಿಸಿದರು. #36ಅಡಿ_ಎತ್ತರದ_ಶ್ರೀ_ಜಗದ್ಗುರು_ರೇಣುಕಾಚಾರ್ಯ_ಮಂಗಲ_ಮೂರ್ತಿ_ಲೋಕಾರ್ಪಣೆ ನಂತರದಲ್ಲಿ ಪ್ರತಿ ವರ್ಷ ಮಾಘ ಶುದ್ಧ ದ್ವಿತೀಯ ಶುಭದಿನದಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ, #ಶ್ರೀ_ರಂಭಾಪುರಿ_ಜಗದ್ಗುರು_ರೇವಣಸಿದ್ಧೇಶ್ವರ_ರಾಷ್ಟ್ರೀಯ_ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡು ಪರಂಪರೆಯ ಸೊಗಡನ್ನು ವಿಸ್ತತಗೊಳಿಸಿರುವರು.

ಪ್ರತಿ ತಿಂಗಳ ಅಮಾವಾಸ್ಯೆ ದಿನ ದೈವಗಳಿಗೆ ರುದ್ರಾಭಿಷೇಕ ಪೂಜೆ ದಾಸೋಹ ಕಾರ್ಯ, ಪ್ರತಿ ವರ್ಷ ಶರನ್ನವರಾತ್ರಿ ದಸರಾ ಸಮಯದಲ್ಲಿ ಶ್ರೀ ದೇವಿ ಪುರಾಣ-ಪ್ರವಚನ ಕಾರ್ಯಕ್ರಮ, ಪ್ರತಿ ವರ್ಷವೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಪ್ರಯುಕ್ತ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ರಥೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಸಾಗುತ್ತಿರುವ ಶ್ರೀ ಷ|| ಬ್ರ|| ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರು ಸುಕ್ಷೇತ್ರ ದುಗ್ಗಿ ಶ್ರೀ ಮಠದ ಪಟ್ಟಾಧಿಕಾರ ವಹಿಸಿಕೊಂಡು ಇಂದಿಗೆ 12 ಸಂವತ್ಸರಗಳು ಪೂರೈಸಿರುವ ಹಿನ್ನೆಲೆಯಲ್ಲಿ ದ್ವಾದಶ ಪಟ್ಟಾಧಿಕಾರ ವಧರ್ಂತಿ ವರ್ಷಾಚರಣೆ ವಿಶೇಷವಾಗಿ ಮಾಡುವ ಸಂಕಲ್ಪದಿಂದ 2025 ನೇ ಎಪ್ರಿಲ್ ತಿಂಗಳಲ್ಲಿ ಸುಕ್ಷೇತ್ರ ದುಗ್ನಿ ಶ್ರೀ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಆರೋಗ್ಯ ಆಯುಷ್ಯಾಭಿವೃದ್ಧಿಗಾಗಿ 8 ದಿನಗಳ ಕಾಲ ಒಂದು ಲಕ್ಷ ಮಹಾ ಮೃತ್ಯುಂಜಯ ಜಪ ಯಜ್ಞಜೊತೆಗೆ ಲಿಂಗೈಕ್ಯ ಶ್ರೀಗಳ ಗದ್ದುಗೆ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪ್ರಾರಂಭ ಮಾಡಿ, ಸುಕ್ಷೇತ್ರ ದುಗ್ಗಿ ಮಠದಲ್ಲಿ ಸೊರಬ, ಶಿರಸಿ, ಸಿದ್ದಾಪುರ ತಾಲೂಕಿನ ಮತ್ತು ತಪೋಕ್ಷೇತ್ರ ಕಡೇನಂದಿಹಳ್ಳಿ ಪುಣ್ಯಾಶ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಾವೇರಿ ಜಿಲ್ಲಾ ವಿವಿಧ ತಾಲ್ಲೂಕುಗಳ ಒಟ್ಟು 12 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 48 ಸಾಧಕರಿಗೆ "ಶ್ರೀ ಗುರು ರೇವಣಸಿದ್ದೇಶ್ವರ ಸದ್ಭಾವನಾ ಸಿರಿ" ಪಶಸ್ತಿ ಪ್ರದಾನ ಮಾಡಿರುವರು.

ಶ್ರೀಮದ್ ರಂಭಾಪುರಿ ಮಹಾಸಂಸ್ಥಾನ ಪೀಠದಲ್ಲಿ 2025 ನೇ ಡಿಸೆಂಬರ್‌ನಲ್ಲಿ ಜರುಗಿದ ಲಿಂ. ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವ ಸಂಭ್ರಮ ಪ್ರಯುಕ್ತ ತಪೋಕ್ಷೇತ್ರ ಕಡೇನಂದಿಹಳ್ಳಿ ಪುಣ್ಯಾಶ್ರಮದಿಂದ ಶ್ರೀ ರಂಭಾಪುರಿ ಪೀಠಕ್ಕೆ ಸುಮಾರು 171 ಕಿ.ಮೀ. ಪಾದಯಾತ್ರೆಯನ್ನು ಆತ್ಮೀಯ ಪೂಜ್ಯರುಗಳ ಮತ್ತು ನೂರಾರು ಭಕ್ತರ ಜೊತೆಗೆ ಯಶಸ್ವಿಯಾಗಿ ನೆರವೇರಿಸಿರುವರು. ತಮ್ಮ 12 ನೇ ವರ್ಷದ ಪಟ್ಟಾಧಿಕಾರ ಸವಿನೆನಪಿಗಾಗಿ ಭಕ್ತರ ಸೇವೆಯನ್ನು ಪಡೆದು ಭಕ್ತರ ಇಷ್ಟಾರ್ಥ ಸಿದ್ದಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹರಕೆ ರಥವನ್ನು ನಿರ್ಮಾಣ ಮಾಡಿ ಪ್ರತಿ ತಿಂಗಳ ಹುಣ್ಣಿಮೆಯಂದು ವಿಶೇಷವಾಗಿ ರಥೋತ್ಸವವನ್ನು ಜರುಗಿಸುವರು. ಸಾಮಾಜಿಕ ಕಳಕಳಿ ಹೊಂದಿರುವ ಶ್ರೀಗಳವರ 36 ನೇ ಜನ್ಮ ವಧರ್ಂತಿ ಆಚರಣೆ ಪ್ರಯುಕ್ತ ಶಿಕಾರಿಪುರ ಪಟ್ಟಣದ 111 ಜನ ಪೌರ ಕಾರ್ಮಿಕರಿಗೆ ಗೃಹ ಬಳಕೆ ವಸ್ತುಗಳನ್ನು ನೀಡಿದ್ದಲ್ಲದೇ, ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಮಹಾ ಮೃತ್ಯುಂಜಯ ಹೋಮ ನೆರವೇರಿಸಿ ವಿಶೇಷ ಪ್ರಸಾದ ವಿತರಿಸಿ ಸಂಭ್ರಮಿಸಿರುವರು.

ಕಡೇನಂದಿಹಳ್ಳಿ ಪುಣ್ಯಾಶ್ರಮದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ (ರಿ)., ಸಲಹಾ ಮತ್ತು ಸೇವಾ ಸಮಿತಿ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಯುವಕ ಮಂಡಳಿಗಳನ್ನು ಸಂಯುಕ್ತಗೊಳಿಸಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಭವಿಷ್ಯತ್ತಿನ ಹಿತದೃಷ್ಟಿಯಲ್ಲಿ ಸಂಘಟಿಸಿ ಭಕ್ಕೋದ್ಧಾರ ಮತ್ತು ಮಠದ್ದಾರ ಕಾರ್ಯಗಳನ್ನು ಹಮ್ಮಿಕೊಂಡು ಸಾಗುತ್ತಿರುವ ಶ್ರೀಗಳವರು ಶ್ರೀ ಪುಣ್ಯಾಶ್ರಮದಿಂದ ಪುರೋಹಿತರ ಅನುಕೂಲಕ್ಕಾಗಿ ಕೆಲವು ಉಪಯುಕ್ತ ಗ್ರಂಥಗಳಿಂದ ಆಯ್ದುಕೊಂಡು ಸಸ್ವರ ಸಹಿತ ಯಜ್ಞ ಸಂಪುಟ ಕೃತಿ ಮತ್ತು ಶಿವ ಪಂಚಾಕ್ಷರಿ ಮಹಾಮಂತ್ರದ ಬರಹ ಕೃತಿ, ಶ್ರೀ ಮಹಾಮೃತ್ಯುಂಜಯ ಮಂತ್ರ ಬರಹ ಪ್ರತಿಗಳನ್ನು ಪ್ರಕಟಗೊಳಿಸಿರುವರು. ಹತ್ತು-ಹಲವು ಕಾರ್ಯಗಳನ್ನು ಎಲೆಮರೆಯ ಕಾಯಿಯಂತೆ ಯುಕ್ತ ರೀತಿಯಲ್ಲಿ ಗೈದ ಶ್ರೀಗಳವರ ಸೇವಾಭಾವ ಮತ್ತು ಕ್ರಿಯಾಸರಣಿಯನ್ನು ಮನಗಂಡ ಶ್ರೀಮದ್ ರಂಭಾಪುರಿ ಮಹಾಸನ್ನಿಧಿಯವರು 2021 ರ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭದಲ್ಲಿ 'ಸಾಧನ ಸಿರಿ ಪ್ರಶಸ್ತಿ' , 2024 ರ ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮಂಗಲ ಮೂರ್ತಿಯ ಲೋಕಾರ್ಪಣೆ ಸಮಾರಂಭದಲ್ಲಿ 'ಶಿವಪೂಜಾ ತಪೋರತ್ನ' ಪ್ರಶಸ್ತಿ, 2025 ರ ದ್ವಾದಶ ಪಟ್ಟಾಧಿಕಾರ ವಧರ್ಂತಿ ವರ್ಷಾಚರಣೆ ಪ್ರಾರಂಭ ಸಮಾರಂಭದಲ್ಲಿ 'ಶಿವತತ್ವ ಪ್ರಭೋದಕ' ಪ್ರಶಸ್ತಿಗಳನ್ನು ಅನುಗ್ರಹಿಸಿರುವರು. 2016 ರ ಮಹಾರುದ್ರಯಜ್ಞ ಧರ್ಮಸಮಾರಂಭದ ಶುಭ ಸಂದರ್ಭದಲ್ಲಿ ಶ್ರೀಮಠದ ಪುರೋಹಿತ ಬಳಗ ಮತ್ತು ಸದ್ಭಕ್ತರುಗಳು ಭಕ್ತಿಯಿಂದ ಅರ್ಪಿಸಿರುವ 'ಶಿವತಪಸ್ವಿ ರತ್ನ' ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಸಮರ್ಪಿಸಿರುವರು.

ದೂರದೃಷ್ಟಿಯ ಸಂಕಲ್ಪ ಹೊತ್ತಿರುವ ಶ್ರೀಗಳವರು ಯೋಜನಾ ವಲ್ಲರಿಯಲ್ಲಿ ಸುಕ್ಷೇತ್ರ ದುಗ್ಗಿ ಶ್ರೀಮಠದಲ್ಲಿ ನೂತನ ಮಠದ ಜೀರ್ಣೋದ್ದಾರ ಕಾರ್ಯ, ಶ್ರೀಮಠದ ಅಭಿವೃದ್ಧಿಗೆ ದುಗ್ಗಿ ಗ್ರಾಮದ ಭಕ್ತರು ನೀಡಿದ 5 ಎಕರೆ ಜಮೀನಿನಲ್ಲಿ ಅಡಿಕೆ ತೋಟ ಅಭಿವೃದ್ಧಿ ಕಡೇನಂದಿಹಳ್ಳಿ ಪುಣ್ಯಾಶ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂಕಲ್ಪ ಪೂರ್ಣಗೊಳಿಸುವ ಪ್ರಯತ್ನ ಮಾಡುವುದು ವಿಶೇಷತೆಗಳಿಗೆ ವಿಶೇಷಣವೆಂಬಂತಾಗಿದೆ. ಪ್ರಸ್ತುತ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದ ದಶಮಾನೋತ್ಸವ ಶುಭ ಸಂದರ್ಭದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಮಠವನ್ನಾಗಿಸಿ ಮರುನಾಮಕರಣ ಮಾಡಿ, ಶ್ರೀ ಗುರು ಪಟ್ಟಾಧಿಕಾರ ಸ್ವೀಕಾರ ಮಾಡುವ ಮೂಲಕ ಪರಂಪರೆ ಮುಂದುವರಿಸುವ ಸಂಕಲ್ಪ ಮಾಡಿರುವ ಶ್ರೀಗಳವರು ಈ ಭಾಗದಲ್ಲಿ ಧರ್ಮ, ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಸಂವರ್ಧಿಸುವ ಸೇವಾ ಯೋಜನೆಯನ್ನು ಮುನ್ನಡಿಯಾಗಿಸಿಕೊಂಡು ಪರಮಾಚಾರ್ಯರ ಆದೇಶ-ಆಶೀರ್ವಾದಗಳನ್ನು ದೀವಟಿಗೆಯಾಗಿರಿಸಿಕೊಂಡು ಸಾಗುವವರಾಗಿದ್ದಾರೆ. ಅನುದಿನವೂ ಆಚಾರ-ವಿಚಾರಗಳನ್ನು ಭಕ್ತಜನರಿಗೆ ಆಚರಣೆಯ ಮೂಲಕ ಪರಿಚಯಗೊಳಿಸುತ್ತಿದ್ದಾರೆ. ಬಡವ-ಶ್ರೀಮಂತ ಬೇಧವೆಣಿಸದೇ ಯಾವುದೇ ಭಾಗದ ಭಕ್ತರು ಅರಿಕೆ ಮಾಡಿಕೊಳ್ಳಲಿ ತತ್ಕ್ಷಣವೇ ಸ್ಪಂದಿಸುವ ಮನಸ್ಥಿತಿ ಶ್ರೀಗಳವರದ್ದಾಗಿದೆ. ಜಪ-ತಪ-ಪೂಜೆ-ಅನುಷ್ಠಾನಗಳ ಮೂಲಕ ಜಾಗೃತತೆಯನ್ನುಂಟು ಮಾಡುತ್ತಿರುವ ಅಪರೂಪದ ಶ್ರೀಗಳಾಗಿರುವ ಶ್ರೀ ಷ|| ಬ್ರ|| ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸರ್ವ ವಿಧದ ಸುಕಾರ್ಯಗಳು ಶ್ರೇಷ್ಠತನದಿಂದ ಯಶವಾಗಿ, ಯಶೋಗಾಥೆಯಾಗಿ ನಿಲ್ಲಲೆಂಬುದೇ ಸರ್ವ ಭಕ್ತಾಭಿಮಾನಿಗಳ ಸದಾಶಯವಾಗಿದೆ.

ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ ಹಿರೇಕೆರೂರ(ಹೊಸಹಳ್ಳಿ)

ಸಾಮಾನ್ಯವಾಗಿ ಹಸು ತನ್ನ ದೇಹದ ಮೇಲೆ ಬರುವ ಕೀಟಗಳನ್ನು ಓಡಿಸಲು ತನ್ನ ಬಾಲವನ್ನು ಬಳಸುತ್ತದೆ. ಆದರೆ ಅದರ ಬಾಲವು ತಲೆ, ಮುಖ ಮತ್ತು ವಿಶೇಷವಾಗಿ ಅದ...
24/04/2026

ಸಾಮಾನ್ಯವಾಗಿ ಹಸು ತನ್ನ ದೇಹದ ಮೇಲೆ ಬರುವ ಕೀಟಗಳನ್ನು ಓಡಿಸಲು ತನ್ನ ಬಾಲವನ್ನು ಬಳಸುತ್ತದೆ. ಆದರೆ ಅದರ ಬಾಲವು ತಲೆ, ಮುಖ ಮತ್ತು ವಿಶೇಷವಾಗಿ ಅದರ ಕುತ್ತಿಗೆಯ ಕೆಳಭಾಗವಾದ ಗಂಗಾದೊಗಲು ಭಾಗವನ್ನು ತಲುಪಲು ಸಾಧ್ಯವಾಗುವುದಿಲ್ಲ. ಈ ಭಾಗಗಳಲ್ಲಿ ಚರ್ಮಕ್ಕೆ ತುರಿಕೆ ಬಂದಂತಹ ಸಮಯದಲ್ಲಿ ಹಸುಗಳು ತಮ್ಮ ಚರ್ಮವನ್ನು ಉಜ್ಜಿಕೊಳ್ಳಲು ಒರಟಾದ ಮೇಲ್ಮೈ ಅಗತ್ಯವಿರುತ್ತದೆ. ಹಾಗಾಗಿ “ಗೋಶಾಲೆ”ಯಲ್ಲಿ ಉಜ್ಜಿಕೊಳ್ಳುವ ಸ್ತಂಭವನ್ನು ಸ್ಥಾಪಿಸುವ ಅಗತ್ಯ ಬರುತ್ತದೆ. ಹಸುಗಳು ಇಂತಹ ಕಂಬಗಳಿಗೆ ತಮ್ಮ ದೇಹವನ್ನು ಉಜ್ಜಿಕೊಳ್ಳುವಾಗ, ಸ್ವಾಭಾವಿಕವಾಗಿ ಕೆಲವು ರೋಮಗಳು ನೆಲಕ್ಕೆ ಬೀಳುತ್ತವೆ. ಈ ರೀತಿಯಾಗಿ ಹಸುಗಳ ಕೂದಲು ನೆಲಕ್ಕೆ ಬೀಳುವುದು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವೇದಗಳ ಪ್ರಕಾರ, “ಗೋಶಾಲೆ”ಯಲ್ಲಿ “ತುರಿಕೆ ಸ್ತಂಭ”ವನ್ನು ನಿರ್ಮಿಸಿ ಹಸುಗಳಿಗೆ ಸೇವೆ ಮಾಡಿದ ವ್ಯಕ್ತಿಗೆ ಮತ್ತು ಅವನ ಪೂರ್ವಜರ ಏಳು ಪೀಳಿಗೆಗಳಿಗೆ ಪಾಪ ನಿವಾರಣೆ ಆಗುತ್ತದೆ ಎಂದು ನಂಬಲಾಗಿದೆ.
ಹಸುಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುವುದರ ಜೊತೆಗೆ, “ಗೋಸೇವೆ”ಯ ಭಾಗವಾಗಿ ಹೀಗೂ ಮಾಡಬಹುದು.!
ಅಹೋರಾತ್ರ

ತರಕಟ ಸ್ತಂಭ ತರಕಟ ಸ್ತಂಭ
ತರಕಟ ತರಕಟ ತರಕಟ ಸ್ತಂಭ..

ಗೋವಿನ ಕಂಠದ ಕೆಳಗಿನ ತೊಗಲು
ಗಂಗೆಯು ನೆಲೆಸಿಹ ಗಂಗಾದೊಗಲು..

ಲಿಂಗಲಕ್ಷಣದ ತರಕಟ ಸ್ತಂಭಕೆ
ಗಂಗೆದೊಗಲನು ಉಜ್ಜುವಳಂಭಾ..

ಉಜ್ಜಲು ಉದುರುವ ಗೋರೋಮಗಳು
ಆರಿಸಬರುವರು ಸುರತಂಡಗಳು..

ಮುಕ್ಕೋಟಿ ದೇವಾವಾಸದ ನಿನ್ನ
ತರಕಟ ಕಂಭಕೆ ಸಾಟಿಯೇ ಇಲ್ಲ..

ಪುರಾಣದಲ್ಲಿ ಹೇಳಿರುವಂತೆ
ಅಂಭಾವಂಶದ ಸೇವೆಗೆ ನಿಂತ
ತರಕಟ ಸ್ತಂಭವ ಕೊಟ್ಟ ದಾನಿಗೆ
ಮುಂದಿನ ಏಳು ಹಿಂದಿನ ಏಳು
ಜನುಮದ ಪಾಪವು ಇಲ್ಲವಾಗುವುದು.

ಬಾಳೆಹೊನ್ನೂರು ಶ್ರೀ ಮದ್ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತಪೋಕ್ಷೇತ್ರ ಕಡೇನಂದಿಹಳ್...
22/04/2026

ಬಾಳೆಹೊನ್ನೂರು ಶ್ರೀ ಮದ್ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಷ|| ಬ್ರ|| ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ದ್ವಾದಶ ಪಟ್ಟಾಧಿಕಾರ ವರ್ಧಂತಿ ವರ್ಷಾಚರಣೆ ಮಹಾಮಂಗಲ ಹಾಗೂ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದ ದಶಮಾನೋತ್ಸವದ ಶುಭ ಸಂದರ್ಭದಲ್ಲಿ ಮರುನಾಮಕರಣ,

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠವನ್ನಾಗಿಸಿ, ಶ್ರೀಮಠದ ಸ್ಥಾಪಕ ಶ್ರೀಗಳ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಸಮಾರಂಭ

ಈ ಪವಿತ್ರ ಸಂಭ್ರಮದ ಸವಿನೆನಹಿಗಾಗಿ ಶ್ರೀಗಳವರ ಸಂಕಲ್ಪದಂತೆ ಮತ್ತು ಸದ್ಭಕ್ತರ ಅಭಿಲಾಷೆಯಂತೆ ಶ್ರೀಮಠದ ಹೊರಾವಣದಲ್ಲಿ ಕೋಟೆ ಆಕೃತಿಯ ಗೋಡೆ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ

ತಮ್ಮೆಲ್ಲರಿಗೂ ಸ್ವಾಗತ
ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು

21/04/2026

ಇಂದು, ವೈಶಾಖ ಶುದ್ಧ ಪಂಚಮಿ, ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀಮದ್ ಜಗದ್ಗುರು ದಾರುಕಾಚಾರ್ಯರ ಜಯಂತ್ಯುತ್ಸವದ ಶುಭಾಶಯಗಳು🙏💐

20/04/2026
19/04/2026
ಅಕ್ಷಯ ತೃತಿಯಇಂದಿನ‌ ದಾನದಿಂದ ಭಗವಂತನ ಎಂದೂ ಮುಗಿಯದ ದಿವ್ಯ ಅನ್ಯಗ್ರಹ ಪ್ರಾಪ್ತವಾಗಲಿ... ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್‌ಕಡ...
19/04/2026

ಅಕ್ಷಯ ತೃತಿಯ
ಇಂದಿನ‌ ದಾನದಿಂದ ಭಗವಂತನ ಎಂದೂ ಮುಗಿಯದ ದಿವ್ಯ ಅನ್ಯಗ್ರಹ ಪ್ರಾಪ್ತವಾಗಲಿ...

ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್‌
ಕಡೇನಂದಿಹಳ್ಳಿ-577428, ಶಿಕಾರಿಪುರ ತಾ॥

ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಪಾವತಿಸಿ

Account Information

SHREE GURU REVANASIDDESHWARA JANAKALYANA TRUST(R.)

Axis Bank A/c No: 925020031104960

IFSC: UTIB0001447
Br. Nagarabavi, Bangalore-560072

ಅಕ್ಷಯ ತೃತಿಯದಂದು ನೀವು ಈ ರೀತಿ ಮಾಡಿರಿ. ಅನ್ನ ದಾನ ಮಾಡುವುದರಿಂದ ನೀವು ಮಾಡಿದ ದಾನ ಜನ್ಮ ಜನ್ಮಾಂತರದವರೆಗೆ ಪುಣ್ಯ ಪ್ರಾಪ್ತವಾಗುವುದು. ನಮ್ಮ ...
19/04/2026

ಅಕ್ಷಯ ತೃತಿಯದಂದು ನೀವು ಈ ರೀತಿ ಮಾಡಿರಿ.
ಅನ್ನ ದಾನ ಮಾಡುವುದರಿಂದ ನೀವು ಮಾಡಿದ ದಾನ ಜನ್ಮ ಜನ್ಮಾಂತರದವರೆಗೆ ಪುಣ್ಯ ಪ್ರಾಪ್ತವಾಗುವುದು.

ನಮ್ಮ ಶ್ರೀ ಮಠದಲ್ಲಿ ನಿತ್ಯ ದಾಸೋಹ ಪದ್ಧತಿ ನಡೆದುಕೊಂಡು ಬಂದಿದೆ.

ಅನ್ನದಾನ ಎಂದರೆ ಹಸಿವಿನಿಂದಿರುವವರಿಗೆ ಅನ್ನ (ಆಹಾರ) ದಾನ ಮಾಡುವುದು, ಇದನ್ನು ಎಲ್ಲಾ ದಾನಗಳಿಗಿಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಇದು ದೈವಿಕ ಆಶೀರ್ವಾದ ತರುವುದು, ಪಾಪಗಳನ್ನು ತೊಲಗಿಸುವುದು, ಸಂತೃಪ್ತಿ ನೀಡುವುದು ಮತ್ತು ಜೀವನದಲ್ಲಿ ಸಕಾರಾತ್ಮಕತೆ ತರುವುದು ಮುಂತಾದ ಮಹತ್ವಗಳನ್ನು ಹೊಂದಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಅನ್ನದಾನ ಮಾಡುವುದರಿಂದ ಅಕ್ಷಯ ಪುಣ್ಯ ಮತ್ತು ಮೋಕ್ಷ ಲಭಿಸುತ್ತದೆ.

ಅನ್ನದಾನದ ಮಹತ್ವ ಮತ್ತು ಪ್ರಯೋಜನಗಳು
ಪುಣ್ಯ ಮತ್ತು ಮೋಕ್ಷ: ಇದು ಜನ್ಮ ಜನ್ಮಗಳ ಪುಣ್ಯವನ್ನು ನೀಡುತ್ತದೆ ಮತ್ತು ಪೂರ್ವಜರಿಗೆ ಮೋಕ್ಷದ ಮಾರ್ಗ ಸುಗಮಗೊಳಿಸುತ್ತದೆ.

ಋಣ ವಿಮೋಚನೆ: ಅನ್ನದಾನ ಮಾಡುವವರು ಮೂರು ವಿಧದ ಋಣಭಾರದಿಂದ ಮುಕ್ತರಾಗುತ್ತಾರೆ ಎಂದು ಗರ್ಗ ಸಂಹಿತ ಹೇಳುತ್ತದೆ.

ಸಕಾರಾತ್ಮಕತೆ: ಅನ್ನದಾನ ಸ್ವೀಕರಿಸುವವರ ಆಶೀರ್ವಾದ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಆರೋಗ್ಯ ಮತ್ತು ಸಂತೃಪ್ತಿ: ಹಸಿವಿನಿಂದಿರುವ ವ್ಯಕ್ತಿಗೆ ಆಹಾರ ನೀಡುವುದರಿಂದ ಆತನ ಹಸಿವು ನೀಗುತ್ತದೆ ಮತ್ತು ಸಂತೃಪ್ತಿ ಸಿಗುತ್ತದೆ.

ಶ್ರೇಷ್ಠ ದಾನ: ಎಲ್ಲ ದಾನಗಳಲ್ಲಿ ಅನ್ನದಾನವೇ ಸರ್ವಶ್ರೇಷ್ಠ ಎಂದು ಪುರಾಣಗಳು ಹೇಳುತ್ತವೆ.

👉👉 ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಪಾವತಿಸಬಹುದು. ಇದರಿಂದ ನಿಮಗೆ 👉80G ಹಾಗೂ 👉12a ತರಿಗೆ ವಿನಾಯಿತಿ ಸಿಗುವುದು.

SHREE GURU REVANASIDDESHWARA JANAKALYANA TRUST

Axis Bank A/c No: 925020031104960

IFSC: UTIB0001447 Br. Nagarabavi, Bangalore-560072

Big shout out to my newest top fans! 💎 ರೇಣುಕಾಚಾರ್ಯ ದೇವಸ್ಥಾನ ಚಿಕ್ಕಮಾರ್ಪನಹಳಿ ತಿಪಟೂರು, ವೀರೇಶ್ ಶಾಸ್ತ್ರಿಗಳ ಹಿರೇಮಠ, Jagadeesha...
19/04/2026

Big shout out to my newest top fans! 💎 ರೇಣುಕಾಚಾರ್ಯ ದೇವಸ್ಥಾನ ಚಿಕ್ಕಮಾರ್ಪನಹಳಿ ತಿಪಟೂರು, ವೀರೇಶ್ ಶಾಸ್ತ್ರಿಗಳ ಹಿರೇಮಠ, Jagadeeshayy Km Jagadeesha, Puneeth G R Lokikeremath, Prabhudev Sannalingannanavar, Niraj Shanthakumar, Lingraj Kaller, Shivakumar MP, Kumarswamy Swamy, Basavaraj M Sambhoji, Iranna Iranna, Dayananda Hiremath, Kpmswamy Kpmswamy, ಶಿವಯೋಗಿ ಹಿರೇಮಠ, Vijayasaikumar KM

Drop a comment to welcome them to our community,

Address

Shikarpur

Alerts

Be the first to know and let us send you an email when ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ. posts news and promotions. Your email address will not be used for any other purpose, and you can unsubscribe at any time.

Share