Uniwef karnataka

Uniwef karnataka UNIWEF aims at Social, religious, economical, political and educational reformation of the entire community

AIMS:
1> IMPROVING THE MUSLIM COMMUNITY
2> REMOVING MISCONCEPTIONS ABOUT ISLAM
3> EDUCATING THE COMMUNITY
4> SOCIAL SERVICE
5> REFRESHING THE HISTORY OF OUR MUSLIM LEADERS

ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಉಳ್ಳಾಲ, ಕುಂಪಲ, ತೊಕ್ಕೊಟ್ಟು, ಕಲ್ಲಾಪು ಹಾಗೂ ಆಸುಪಾಸಿನ ಅರ್ಹ ಜನರ...
23/01/2026

ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಉಳ್ಳಾಲ, ಕುಂಪಲ, ತೊಕ್ಕೊಟ್ಟು, ಕಲ್ಲಾಪು ಹಾಗೂ ಆಸುಪಾಸಿನ ಅರ್ಹ ಜನರ ರಮದಾನ್‌ ಕಿಟ್ ವಿತರಿಸಲು ತೀರ್ಮಾನಿಸಿದೆ.

ಸಹೃದಯಿ ದಾನಿಗಳು ನಮ್ಮ ಈ ಪುನ್ಯ ಕಾರ್ಯದಲ್ಲಿ ಭಾಗವಹಿಸಿ ನಮಗೆ ಸಹಕರಿಸಿರಿ

ಹೆಚ್ಚಿನ ಮಾಹಿತಿಗಾಗಿ ಉಳ್ಳಾಲ ಶಾಖಾಧ್ಯಕ್ಷರಾದ ಅಸಿಫ್ ಕುದ್ರೋಳಿ ಅವರನ್ನು ಸಂಪರ್ಕಿಸಬಹುದು
9902326591

ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಕುದ್ರೋಳಿ, ಬಂದರ್, ಶುಭಾಷ್ ನಗರ, ಜೆಪ್ಪು ಹಾಗೂ ಆಸುಪಾಸಿನ ಅರ್ಹ ...
22/01/2026

ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ಪ್ರತೀ‌ ವರ್ಷದಂತೆ ಈ ವರ್ಷವು ಕುದ್ರೋಳಿ, ಬಂದರ್, ಶುಭಾಷ್ ನಗರ, ಜೆಪ್ಪು ಹಾಗೂ ಆಸುಪಾಸಿನ ಅರ್ಹ ಜನರ ರಮದಾನ್‌ ಕಿಟ್ ವಿತರಿಸಲು ತೀರ್ಮಾನಿಸಿದೆ.

ಸಹೃದಯಿ ದಾನಿಗಳು ನಮ್ಮ ಈ ಪುನ್ಯ ಕಾರ್ಯದಲ್ಲಿ ಭಾಗವಹಿಸಿ ನಮಗೆ ಸಹಕರಿಸಿರಿ

ಹೆಚ್ಚಿನ ಮಾಹಿತಿಗಾಗಿ ಕುದ್ರೋಳಿ ಶಾಖಾಧ್ಯಕ್ಷರಾದ Saifuddeen Kudroli ಅವರನ್ನು ಸಂಪರ್ಕಿಸಬಹುದು
9945913824

08/12/2025
ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ನಡೆದ ಟ್ಯಾಲೆಂಟ್ ಹಂಟ್ 2025 ತಾರೀಕು 07 ಡಿಸೆಂಬರ್ 2025 ರಂದು ಕುದ್ರೋಳಿ ಯಲ್ಲಿ‌ ಜರುಗಿತು.ಉದ...
08/12/2025

ಯುನಿವೆಫ್ ಕರ್ನಾಟಕ ಕುದ್ರೋಳಿ ಶಾಖೆಯ ವತಿಯಿಂದ ನಡೆದ ಟ್ಯಾಲೆಂಟ್ ಹಂಟ್ 2025 ತಾರೀಕು 07 ಡಿಸೆಂಬರ್ 2025 ರಂದು ಕುದ್ರೋಳಿ ಯಲ್ಲಿ‌ ಜರುಗಿತು.
ಉದ್ಘಾಟನಾ ಸಮಾರಂಭಕ್ಕೆ ಯುನಿವೆಫ್ ಕರ್ನಾಟಕ ಮಂಗಳೂರು ಶಾಖೆಯ ಸದಸ್ಯರಾದ ಜನಾಬ್ ಹನೀಫ್, ಉಳ್ಳಾಲ ಶಾಖೆಯ ಸದಸ್ಯರಾದ ಜನಾಬ್ ಫಝಲ್ ಸಾಬ್ , ಹಾಗೂ ಕುದ್ರೋಳಿ ಶಾಖೆಯ ಹಿರಿಯ ಸದಸ್ಯರಾದ ಜನಾಬ್ ಅಬ್ದುರಶೀದ್ ಸಾಬ್ ಉಪಸ್ಥಿತರಿದ್ದರು.
ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು Saifuddeen Kudroli ನರೆವೇರಿಸಿದರು.
ಕಿರಾಅತ್‌ ಹಾಗೂ ಕಾರ್ಯಕ್ರಮವನ್ನು ಯುನಿವೆಫ್ ಕ್ಯಾಂಪಸ್ ಫೋರಂ ಸದಸ್ಯರಾದ ಮಾಹೀನ್ ನರೆವೇರಿಸಿದರು.

Uniwef Karnataka
22/11/2025

Uniwef Karnataka

💢💢💢💢💢💢💢💢💢💢💢💢               *ಕುದ್ರೋಳಿಯಲ್ಲಿ**ಇಂದು ಬಿತ್ತಿ ಪತ್ರ ಬಿಡುಗಡೆ ಸಮಾರಂಭ*➖➖➖➖➖➖➖➖➖➖➖*'ಅರಿಯಿರಿ ಮನುಕುಲದ ಪ್ರವಾದಿಯನ್ನು'* ಎ...
19/11/2025

💢💢💢💢💢💢💢💢💢💢💢💢
*ಕುದ್ರೋಳಿಯಲ್ಲಿ*
*ಇಂದು ಬಿತ್ತಿ ಪತ್ರ ಬಿಡುಗಡೆ ಸಮಾರಂಭ*
➖➖➖➖➖➖➖➖➖➖➖

*'ಅರಿಯಿರಿ ಮನುಕುಲದ ಪ್ರವಾದಿಯನ್ನು'* ಎಂಬ ಘೋಷ ವಾಕ್ಯ ದೊಂದಿಗೆ ಈ ಬಾರಿ ಯುನಿವೆಫ್ ಕರ್ನಾಟಕ ನೂರು ದಿನಗಳ ಅಭಿಯಾನ ನಡೆಸುತ್ತಿದ್ದು , ಆ ಪ್ರಯುಕ್ತ ಯುನಿವೆಫ್ ಕುದ್ರೋಳಿ ಶಾಖೆ ಅಭಿಯಾನದ ಮಾಸಾಚರಣೆ ಇಂದಿನಿಂದ ನವಂಬರ್ 19 ಆರಂಭಗೊಳ್ಳಲಿದ್ದು ಡಿಸೆಂಬರ್ 19ರ ತನಕ ನಡೆಯಲಿದೆ. ಈ ಅವಧಿಯಲ್ಲಿ ಕುದ್ರೋಳಿ ಪರಿಸರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
*ಇದರ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಮಾಸಾಚರಣೆಯ ಬಿತ್ತಿಪತ್ರ ಬಿಡುಗಡೆ ಕಾರ್ಯಕ್ರಮ ಇಂದು ಇಶಾ ನಮಾಝ್ ಬಳಿಕ ಜಾಮಿಯಾ ಮಸೀದಿಯ ಹೊರಗಿನ ವರಾಂಡದಲ್ಲಿ ಜರುಗಲಿದೆ.*
*ಕುದ್ರೋಳಿ ಪರಿಸರದ ಮಹನೀಯರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.*

*ಮುಹಮ್ಮದ್ ಸೈಫುದ್ದೀನ್*
ಅಧ್ಯಕ್ಷರು
*ಯುನಿವೆಫ್ ಕರ್ನಾಟಕ ಕುದ್ರೋಳಿ*

💢💢💢💢💢💢💢💢💢💢💢💢

*ಯುನಿವೆಫ್ - ಬೋಳಾರ ಶಾದಿಮಹಲ್ ನಲ್ಲಿ ಸೀರತ್ ಸಮಾವೇಶ*ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ *“ಶೋಷಿತ ಸಮಾಜ...
08/11/2025

*ಯುನಿವೆಫ್ - ಬೋಳಾರ ಶಾದಿಮಹಲ್ ನಲ್ಲಿ ಸೀರತ್ ಸಮಾವೇಶ*

ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ *“ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)”* ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ *“ಅರಿಯಿರಿ ಮನುಕುಲದ ಪ್ರವಾದಿಯನ್ನು”* ಅಭಿಯಾನದ ಸೀರತ್ ಸಮಾವೇಶವು *ಬೋಳಾರ ಶಾದಿಮಹಲ್* ನಲ್ಲಿ ಜರಗಿತು.
ಯುನಿವೆಫ್ ಅಧ್ಯಕ್ಷ *ರಫೀಉದ್ದೀನ್ ಕುದ್ರೋಳಿ* ಅವರು *“ಶೋಷಣೆಯ ವಿರುದ್ಧ ಪ್ರವಾದಿ (ಸ) ಯ ನಡೆ”* ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ ಪ್ರಮುಖ ಭಾಷಣ ಮಾಡಿ *"ಪ್ರವಾದಿ(ಸ) ರವರ ಅನುಯಾಯಿಗಳೆಂದು ಹೇಳಿಕೊಳ್ಳುವ ಇಂದಿನ ಸಮುದಾಯ ಮದುವೆಯ ವಿಷಯದಲ್ಲಿ ಮಾಡುವ ಆಡಂಬರ ಮತ್ತು ಅನಾಚಾರ ಮುಸ್ಲಿಮೇತರರೂ ನಾಚುವಂತಿದೆ. ಧನಿಕನಿಗೆ ಒಂದು ನ್ಯಾಯ ಹಾಗೂ ಬಡವನಿಗೆ ಒಂದು ನ್ಯಾಯ ಪಾಲಿಸುವವರು ಅಲ್ಲಾಹನ ದೃಷ್ಟಿಯಲ್ಲಿ ನರಕದ ಇಂಧನಗಳಾಗಿದ್ದಾರೆ. ಸಾಮಾಜಿಕ ನ್ಯಾಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಹೊಣೆಗಾರಿಕೆಯೊಂದಿಗೆ ಯುನಿವೆಫ್ ಈ ಅಭಿಯಾನವನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ"* ಎಂದರು.
ಅಭಿಯಾನ ಸಂಚಾಲಕ *ಯು.ಕೆ. ಖಾಲಿದ್* ಪ್ರಾಸ್ತಾವಿಕವಾಗಿ ಮಾತನಾಡಿದರು.
*ಹಾಶಿಮ್ ಅಬ್ದುಲ್ ಹಮೀದ್* ಕಿರಅತ್ ಪಠಿಸಿದರು. ಮಂಗಳೂರು ಶಾಖಾಧ್ಯಕ್ಷ *ಉಬೈದುಲ್ಲಾ ಬಂಟ್ವಾಳ್* ಮತ್ತು ಹಿರಿಯ ಸದಸ್ಯ *ಅಬ್ದುಲ್ ಹಮೀದ್ ಅರ್ಕುಳ* ವೇದಿಕೆಯಲ್ಲಿ ಉಪಸ್ಥಿತರಿದ್ದರು. *ಹಫೀಝ್ ಶೇಖ್* ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

*ಯು. ಕೆ. ಖಾಲಿದ್*
ಅಭಿಯಾನ ಸಂಚಾಲಕ
ಯುನಿವೆಫ್ ಕರ್ನಾಟಕ

*ಬಜ್ಪೆ : ಯುನಿವೆಫ್ ನಿಂದ ಸೀರತ್ ಸಮಾವೇಶ*ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ *ಶೋಷಿತ ಸಮಾಜ ಹಾಗೂ ಮಾನವ ...
24/10/2025

*ಬಜ್ಪೆ : ಯುನಿವೆಫ್ ನಿಂದ ಸೀರತ್ ಸಮಾವೇಶ*

ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ *ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)* ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ *ಅರಿಯಿರಿ ಮನುಕುಲದ ಪ್ರವಾದಿಯನ್ನು* ಅಭಿಯಾನದ ಸೀರತ್ ಸಮಾವೇಶವು ಬಜ್ಪೆ ಲೈಕೋರಿಸ್ ಫ್ಲ್ಯಾಟ್ ಬಳಿ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ. ಕ. ಮುಸ್ಲಿಮ್ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಜನಾಬ್ *ಸಿರಾಜ್ ಬಜ್ಪೆ* ಯವರು ಮಾತನಾಡಿ *ಪ್ರವಾದಿ(ಸ) ರವರು ಮಾನವ ಸಂಬಂಧ ಸುಧಾರಣೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ನಮಗೆ ಅವರ ಜೀವನ ಚರಿತ್ರೆಯಲ್ಲಿ ಕಂಡು ಬರುತ್ತದೆ. ಆದರೆ ಇಂದು ಲೌಕಿಕ ಲಾಭಗಳಿಗೋಸ್ಕರ ಪರಸ್ಪರ ಸಂಬಂಧಗಳನ್ನೇ ಕಲುಷಿತಗೊಳಿಸಲಾಗಿದೆ. ಸಂಶಯ, ಅಪಕಲ್ಪನೆಗಳು ಮಾನವ ಮಾನವನ ನಡುವೆ ಗೋಡೆಗಳಾಗಿ ನಿಂತಿವೆ. ಈ ಗೋಡೆಗಳನ್ನು ಕೆಡವಿ ನೈಜ ಮಾನವೀಯತೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಯುನಿವೆಫ್ ಕರ್ನಾಟಕ ಈ ಅಭಿಯಾನದ ಮೂಲಕ ಮಾಡುತ್ತಿರುವುದು ಅಭಿನಂದನಾರ್ಹ* ಎಂದು ಹೇಳಿದರು.

ಯುನಿವೆಫ್ ಅಧ್ಯಕ್ಷ *ರಫೀಉದ್ದೀನ್ ಕುದ್ರೋಳಿ* ಮುಖ್ಯ ಭಾಷಣ ಮಾಡಿ *ಸಮಾಜ ಸುಧಾರಣೆಗೆ ಈ ಭೂಮಿಗೆ ಬಂದ ಎಲ್ಲಾ ಪ್ರವಾದಿಗಳೂ, ಸಮಾಜ ಸುಧಾರಕರೂ ಶ್ರಮಿಸಿದ್ದಾರೆ. ಪ್ರವಾದಿಗಳ ಆದೇಶಗಳನ್ನು ಧಿಕ್ಕರಿಸಿದ ಜನಾಂಗಗಳನ್ನು ಅಲ್ಲಾಹನು ನಾಶಗೊಳಿಸಿದ ಚರಿತ್ರೆ ನಮ್ಮ ಮುಂದಿದೆ. ಆದರೆ ಪ್ರವಾದಿ ಮುಹಮ್ಮದ್ (ಸ) ರ ಅನುಯಾಯಿಗಳಾದ ನಾವು ಅವರ ಆದೇಶಗಳನ್ನು ಧಿಕ್ಕರಿಸದೆ ನೈಜ ಮುಸ್ಲಿಮರಾಗಿ ಜೀವಿಸುವುದೇ ಇಂದಿನ ಸಮಸ್ಯೆಗಳಿಗೆ ಪರಿಹಾರ. ಇಸ್ಲಾಮನ್ನು ಅರ್ಥಮಾಡಿಕೊಂಡ ಯಾವ ವ್ಯಕ್ತಿಯೂ ಕೋಮುವಾದಿಯಾಗಲು ಅಥವಾ ಅದನ್ನು ಬೆಂಬಲಿಸಲು ಸಾಧ್ಯವಿಲ್ಲ* ಎಂದು ಹೇಳಿದರು.

ಅಭಿಯಾನ ಸಂಚಾಲಕ *ಯು. ಕೆ. ಖಾಲಿದ್* ಪ್ರಾಸ್ತಾವಿಕವಾಗಿ ಮಾತನಾಡಿದರು. *ಅತೀಖುರ್‍ರಹ್ಮಾನ್* ಕಿರಅತ್ ಪಠಿಸಿದರು. ಸಹ ಸಂಚಾಲಕ *ಉಬೈದುಲ್ಲಾ* ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬಜ್ಪೆ ಅಧ್ಯಕ್ಷ *ಅಬ್ದುರ್‍ರಹ್ಮಾನ್* ವೇದಿಕೆಯಲ್ಲಿ ಉಪಸ್ಥಿತರಿದ್ದರು.

Uniwef karnataka seerath campaign 2025 titled "ARIYIRI MANUKULADA PRAVAADIYANNU" Public Program in Puttur on 31st octobe...
20/10/2025

Uniwef karnataka seerath campaign 2025 titled "ARIYIRI MANUKULADA PRAVAADIYANNU" Public Program in Puttur on 31st october 2025

coming soon

#2025

Address

Mangalore

Website

Alerts

Be the first to know and let us send you an email when Uniwef karnataka posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Uniwef karnataka:

Share