28/08/2026
ಶ್ರೀ ರವಿ ಕೆ. ಬಿ, ಪೊಲೀಸ್ ಇನ್ಸ್ ಪೆಕ್ಟರ್ ಸೈಬರ್ ಪೊಲೀಸ್ ಠಾಣೆ,ಈಶಾನ್ಯ ವಿಭಾಗ, ಬೆಂಗಳೂರು ನಗರ ರವರನ್ನು ನಾವಷ್ಟೇ ಅಲ್ಲ ಪೊಲೀಸ್ ಇಲಾಖೆ ಮತ್ತು ವೀರಶೈವ ಲಿಂಗಾಯತ ಸಮಾಜ ಕಳೆದುಕೊಂಡಿದೆ. ಜನಸಾಮಾನ್ಯರ ಬಗ್ಗೆ, ನೊಂದವರ ಬಗ್ಗೆ ಅತೀವ ಕಾಳಜಿ ಹೊಂದಿದ್ದ, ಸದಾ ಕಾರ್ಯತತ್ಪರತೆ ಮತ್ತು ಸಮಾಜಮುಖಿ ಚಿಂತನೆಗಳನ್ನೊಂದಿದ್ದ ರವಿಯ ಅಕಾಲಿಕ ಮರಣ ನಮ್ಮೆಲ್ಲರ ಪಾಲಿಗೆ ತುಂಬಲಾರದ ನಷ್ಟ.
ರವಿಯವರು ತಮ್ಮ ಪ್ರೀತಿಯ ಪತ್ನಿ ಶ್ರೀಮತಿ ಅಕ್ಷಯ, ಮುದ್ದಿನ ಮಕ್ಕಳಾದ ಆದ್ವಿಕಾ ಮತ್ತು ಅದ್ವೈತ್ ಹಾಗೂ ಅಪಾರ ಬಂಧು-ಬಳಗವನ್ನು, ಸ್ನೇಹಿತರನ್ನು ಅಗಲಿದ್ದಾರೆ.
ಪಾರ್ಥಿವ ಶರೀರವು ಮಧ್ಯಪ್ರದೇಶದ ಇಂದೋರ್ ನಿಂದ ಹೊರಟಿದ್ದು ಸಂಜೆ 7:30 ಗಂಟೆಗೆ HAL ಏರ್ಪೋರ್ಟ್ ಗೆ ಆಗಮಿಸಲಿದ್ದು ರಾತ್ರಿ 8:30 ಗಂಟೆಯಿಂದ 10:30 ಗಂಟೆ ವರೆಗೆ CAR SOUTH ADUGODI ಇಲ್ಲಿ ಅಂತಿಮ ದರ್ಶನದ ವ್ಯವಸ್ಥೆಯನ್ನು ಈ ದಿನ 28-08-26ರ ಸಂಜೆ ಗಂಟೆಗೆ ಮಾಡಲಾಗಿದೆ. ಅಂತ್ಯಸಂಸ್ಕಾರ ಮೃತರ ಸ್ವಗ್ರಾಮ ಪಿರಿಯಾಪಟ್ಟಣ ತಾಲ್ಲೂಕ್ ಕೊಣಸೂರು ಗ್ರಾಮದಲ್ಲಿ ನಾಳೆ 29-08-26 ರಂದು ನೆಡೆಯಲಿದೆ.
ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ದುಃಖತಪ್ತ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.